Skip to main content

#Blog number 1567. ಜಂಬಿಟ್ಟಿಗೆ ಕಲ್ಲು ಅಳತೆಗೆ ಸರಿಯಾಗಿ ಡ್ರೆಸ್ ಮಾಡಿ ಕೊಡುವ ಯಂತ್ರ ಬಂದಿದೆ.

#ಜOಬಿಟ್ಟಿಗೆ_ಕಲ್ಲು_ಕೆತ್ತುವ_ಯOತ್ರ_ಬಾಡಿಗೆಗೆ_ಬಂದಿದೆ.

   ಗುಜರಾತಿನ ಕರಾವಳಿಯಿ೦ದ ಕೇರಳ ಕರಾವಳಿವರೆಗೆ ಗೋವಾ ಕನಾ೯ಟಕ ರಾಜ್ಯ ಸೇರಿ ಈ ಕೆಂಪು ಕಲ್ಲು (ಜಂಬಿಟ್ಟಿಗೆ / ಇಂಗ್ಲೀಷ್ ನಲ್ಲಿ Latreat stone) ಸ್ಥಳಿಯವಾಗಿ ಸುಲಭವಾಗಿ ಸಿಗುವ ಕಲ್ಲು, ಇದರಿಂದ ಕೋಟಿ, ದೇವಸ್ಥಾನ, ಕೊಳ, ಸೇತುವೆ, ಕೆರೆ ಕಟ್ಟಿ ಮತ್ತು ಬಾವಿಗಳನ್ನ ಒ೦ದು ಕಾಲದಲ್ಲಿ ನಿಮಿ೯ಸಿದ್ದನ್ನು ನೋಡುತ್ತೇವೆ.
   ಈಗ ದೈಹಿಕ ಶ್ರಮ ಮಾಡುವುದು ಕಡಿಮೆ ಆದ ಮೇಲೆ ಈ ಕಲ್ಲಿನ ಬಳಕೆ ಕ್ರಮೇಣ ಕಡಿಮೆ ಆಗುತ್ತಿದೆ, ಇದರ ಬಾರ 30 kg ಗೂ ಹೆಚ್ಚಾದ್ದರಿಂದ ಕಟ್ಟಡ ಕಟ್ಟುವವರೂ ಕೂಡ ಇದನ್ನ ಇಷ್ಟ ಪಡುವುದು ಕಡಿಮೆ ಆಗಿದೆ.
   ಕಚ್ಚಾ ಕಲ್ಲು ತಂದ ನಂತರ ಈ ಕಲ್ಲಿನ ನಾಲ್ಕು ಮುಖ ಸರಿಯಾಗಿ ಕೆತ್ತಿ ಸಮತಟ್ಟು ಮಾಡುವ ಕೆಲಸ ಇದೆ, ಇದನ್ನ ಸರಿಯಾದ ಅನುಭವಿ ಕೆಲಸಗಾರ ಮಾಡಿದರೆ ಮಾತ್ರ ಕಟ್ಟಡ ಭದ್ರ ಮತ್ತು ಸಿಮೆಂಟ್ ಮರಳು ಮಿತವ್ಯಯ ಇಲ್ಲದಿದ್ದರೆ ಕಟ್ಟಡ ಸರಿ ಆಗುವುದಿಲ್ಲ ಈಗ ಈ ಕಲ್ಲು ಕೆತ್ತುವ ನುರಿತ ಕೆಲಸಗಾರರ ಕೊರತೆ ಕೂಡ ಈ ಕಲ್ಲಿನ ಬಳಕೆ ಕಡಿಮೆಗೆ ಕಾರಣವಾಗಿದೆ.
   ನನ್ನ ಕಟ್ಟಡದಲ್ಲಿ ಹೊಸ ತಂತ್ರಜ್ಞಾನದ ಲೈಟ್ ವೈಟ್ ಬ್ರಿಕ್ಸ್ ಬಳಸಿದ್ಧರಿಂದ ನಮ್ಮ ಊರಲ್ಲೇ ಸಿಗುವ ಜಂಬಿಟ್ಟಿಗೆ ಖರೀದಿಸಿರಲಿಲ್ಲ ಆದರೆ ಲಿಪ್ಟ್ ರೂಂ ಅದ೯ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದರಿಂದ ಒಂದು ಲಾರಿ ಜಂಬಿಟ್ಟಿಗೆ ತರಿಸಿದ್ದೆ ಆದರೆ ಇದನ್ನ ಕೆತ್ತಿ ಸಮತಳ ಮಾಡಿ ಕೊಡುವವರು ಮಾತ್ರ ಸಿಗಲೇ ಇಲ್ಲ.
  ಅಷ್ಟರಲ್ಲಿ ಆನಂದಪುರದ ಮಾರುತಿ ಕಾರ್ ಗಳ ಗ್ಯಾರೇಜ್ ಮಾಲಿಕರು ಜಂಬಿಟ್ಟಿಗೆ ಕಲ್ಲು ಸಮತಳ ಮಾಡುವ ಯಂತ್ರ ಟ್ರಾಕ್ಟರ್ ಗೆ ಅಳವಡಿಸಿದ್ದಾರೆ, ಸ್ಥಳಕ್ಕೆ ಹೋಗಿ ಸಮತಳ ಮಾಡಿ ಕೊಡುತ್ತಾರೆ ಅಂತ ಆನಂದಪುರದ ಸಿದ್ದೇಶ್ವರ ಕಾಲೋನಿ ಮಿತ್ರ ರಾಮಣ್ಣ ತಿಳಿಸಿ ಇವತ್ತು ಬೆಳಿಗ್ಗೆ ಕೇವಲ ಒಂದು ಗಂಟೆ ಅವದಿಯಲ್ಲಿ 650 ಕಲ್ಲು ಅತ್ಯಂತ ಮಟ್ಟಸವಾಗಿ ಡ್ರೆಸ್ಸಿಂಗ್ ಈ ಯಂತ್ರದಲ್ಲಿ ಮಾಡಿಸಿ ಕೊಟ್ಟರು, ಇದನ್ನೆ ಕೈಯಲ್ಲಿ ಮಾಡಿದ್ದರೆ ಇಷ್ಟು ನಿಖರವಾಗುತ್ತಿರಲಿಲ್ಲ.
  ಆನಂದಪುರO ಜಂಬಿಟ್ಟಿಗೆ ಕಲ್ಲುಗಣಿಗಳ ಹಬ್ ಆಗಿದ್ದರೂ ಇಂತ ಯಂತ್ರ ಮಾಡಲು ಯಾರೂ ಮುಂದೆ ಬಂದಿರಲಿಲ್ಲ ಯುವ ಸಾಹಸಿ ಉದ್ಧಿಮೆದಾರರಾದ ಪ್ರದೀಪ್ ಆಚಾರ್ ಈ ಕೆಲಸ ಮಾಡಿದ್ದಾರೆ.
  ಅವರ ಸಂಪಕಿ೯ಸಲು ಮೊಬೈಲ್ ಸಂಖ್ಯೆ
                9901674936

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...