Blog number 1839. ಮಲೆನಾಡು ಪ್ರಾಂತ್ಯದಲ್ಲಿ ಕಂಬಳ ಓಟದ ತಯಾರಿಯಲ್ಲಿ ವಕೀಲರಾದ ಕುಬಟಳ್ಳಿ ರಾಮಚಂದ್ರ ಮತ್ತು ಅವರ ತಂಡ.
#ಕಾಂತಾರ_ಸಿನಿಮಾದಿಂದ_ಜನಪ್ರಿಯವಾದ_ಕರಾವಳಿ_ಕಂಬಳ #ಈಗ_ಬೆಂಗಳೂರು_ಕಂಬಳದಿಂದ_ಶಿವಮೊಗ್ಗ_ಜಿಲ್ಲೆಯಲ್ಲಿ_ಕಂಬಳ #ರಿಪ್ಪನಪೇಟೆಯಲ್ಲಿ_ಕಂಬಳ_ಯಶಸ್ವಿ_ಆದೀತಾ? #ಹಿಂದಿನ_ಆಲೆಮನೆ_ಕಾಲದಲ್ಲಿ_ಘಟ್ಟ_ಹತ್ತಿ_ಬರುತ್ತಿದ್ದ_ಆಲೆ_ಕೋಣ_ಈಗಿಲ್ಲ #ಬೆಂಗಳೂರು_ಕಂಬಳಕ್ಕಾಗಿ_ಸಕಲೇಶಪುರ_ಘಟ್ಟ_ಹತ್ತಿದ_ಕಂಬಳ_ಕೋಣಗಳು . #ದೇಶದ_ರಕ್ಷಣಾಸಚಿವ_ಜಾಜ್೯ಪರ್ನಾಂಡೀಸರು_ಬಸ್ರೂರಿನ_ಐ_ಎಂ_ಜಯರಾಂಶೆಟ್ಟರ_ಮನೆಯ_ಕಂಬಳದಲ್ಲಿ_ಬಾಗಿ_ಆಗಿದ್ದರು. #ತೀರ್ಥಹಳ್ಳಿ_ಹೊಸನಗರ_ಸಾಗರದ_ಮಲೆನಾಡಿನಲ್ಲಿ_ಕಂಬಳ_ತಯಾರಿಯಲ್ಲಿ_ಕುಬಟಳ್ಳಿ_ರಾಮಚಂದ್ರ_ವಕೀಲರ_ತಂಡ #ಮೊದಲ_ದೇಣಿಗೆಯಾಗಿ_ನನ್ನ_ಹತ್ತು_ಸಾವಿರ_ಘೋಷಿಸಿದ್ದೇನೆ. #ಪ್ರೋಕಬ್ಬಡಿಯಂತೆ_ಕಂಬಳ_ಪ್ರಸಿದ್ಧಿ_ಪಡೆಯಲಿದೆ. #ಕಂಬಳದ_ಕೋಣ_ಓಡಿಸುವವರು_ಸ್ಟಾರ್_ಆಟಗಾರರಾಗಲಿದ್ದಾರೆ. ಇವತ್ತು ಬೆಳಿಗ್ಗೆ ವಾಕಿಂಗ್ ಮಾಡುವಾಗ ಶಿವಮೊಗ್ಗದಿಂದ ವಕೀಲರಾದ ಕುಬಟಳ್ಳಿ ರಾಮಚಂದ್ರ ಪೋನ್ ಮಾಡಿದ್ದರು ಇವರು ಶಿವಮೊಗ್ಗ ಜಿಲ್ಲಾ ಈಡಿಗ ಸಮಾಜದ ಉಪಾಧ್ಯಕ್ಷರು, ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರು . ಇವರು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಸ್ವಾಮಿ ರಾವ್, ಪಟಮಕ್ಕಿ ರತ್ನಾಕರ್, ಜಿ.ಮಾದಪ್ಪ, ಸಾಹಿತಿ ಕೋಣಂದೂರು ವೆಂಕಪ್ಪಗೌಡರ, ಹಿರಿಯ ಸಮಾಜವಾದಿಗಳಾದ ಪಿ.ಪುಟ್ಟಯ್ಯರ ನಿಕಟವರ್ತಿಗಳು ಮತ್ತು ಮಲೆನಾಡಿನ ಬಗರ್ ಹುಕುಂ ರೈತರ ಅರಣ್ಯ ಒತ್ತುವರಿದಾರ ಸಮಸ್ಯೆ ಪರಿಹಾರ...