Skip to main content

Posts

Showing posts from June, 2023

Blog number 1635. ಶಿವಮೊಗ್ಗದ ಡೇರ್ ಡೆವಿಲ್ ಇಸ್ಮಾಯಿಲ್ ಖಾನ್ ಸಾಹೇಬರು .

ಶಿವಮೊಗ್ಗದ ಡೇರ್ ಡೆವಿಲ್ ಇಸ್ಮಾಯಿಲ್ ಖಾನ್ ಸಾಹೇಬರಿಗೆ 38 ನೇ ವಿವಾಹ ವಾಷಿ೯ಕೋತ್ಸವದ ಶುಭಹಾರೈಕೆ ಕಳೆದ ವರ್ಷದ ಈ ಪೋಸ್ಟಿನೊಂದಿಗೆ. #ಶಿವಮೊಗ್ಗದ_ಕಾಂಗ್ರೇಸ್_ಮುಖಂಡ_ಇಸ್ಮಾಯಿಲ್_ಖಾನ್_ಸಾಹೇಬರ_ನಾನು_ಮರೆಯುವಂತಿಲ್ಲ. #ಭ್ರಷ್ಟಾಚಾರ_ವಿರೋದಿ_ಹೋರಾಟದಲ್ಲಿ_ಜೈಲು_ಸೇರಿದ್ದ_ನನ್ನ_ಪರವಾಗಿ_ಹೋರಾಟ_ರೂಪಿಸಿದವರು #ಇವತ್ತು_ಇವರ_37ನೇ_ವಿವಾಹ_ವಾರ್ಷಿಕೋತ್ಸವ. #ಕಾನೂನು_ಬಿಬಿಎಂ_ಪದವೀರರು #ರಾಜ್ಯ_ಅರಣ್ಯಾಭಿವೃದ್ಧಿ_ಕಾಪೋ೯ರೇಷನ್ #ಶಿವಮೊಗ್ಗ_ಭದ್ರಾವತಿ_ನಗರಾಭಿವೃದ್ಧಿ_ಪ್ರಾಧಿಕಾರದ_ಅದ್ಯಕ್ಷರಾಗಿದ್ದರು. https://arunprasadhombuja.blogspot.com/2022/07/blog-number-903-37.html   ಶಿವಮೊಗ್ಗ ಜಿಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಖರೀದಿಸಿದ ಔಷದಿ ಕಳಪೆ ಅಂತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಡಿಸ್ಟ್ರಿಕ್ಟ್ ಸರ್ಜನ್ ನೀಡಿದ ಸಣ್ಣ ಸುಳಿವು ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ್ದೆ ಆ ಸಭೆಯಲ್ಲಿ ಈಶ್ವರಪ್ಪ, ಆರಗ ಜ್ಞಾನೇಂದ್ರ, ಹೊಸನಗರ ವಿದಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅಯನೂರು ಮಂಜುನಾಥರೂ ಇದ್ದರು.   ಅದೇ ದಿನ ರಾತ್ರಿ ಔಷದಿ ಗೋದಾಮು ವಿದ್ಯುತ್ ಅವಘಡದಿಂದ ಭಸ್ಮ ಆಯಿತು (ಅಧಿಕಾರಿಗಳೆ ಸುಟ್ಟು ಹಾಕಿದ್ದು) ಅಂತ ಅದರ ಮರುದಿನ ಪತ್ರಿಕೆಯಲ್ಲಿ ಬಂತು ನಾನು ಜಿಲ್ಲಾ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಟಿ ಕರೆದು ಇದು ಕಳಪೆ ಔಷದಿ ಖರೀದಿ ಮಾಡಿದ ಅಧಿಕಾರಿಗಳು ತನಿಖೆ ಆದರೆ ಸಿಕ್ಕಿಬ

Blog number 1634. ಕಾರ್ಪೋರೇಟ್ ಹಾಸ್ಪಿಟಲ್ ಲೋಕ

THIS IS PRESENT SITUATION OF DOCTORS. ಇದು ಇವತ್ತಿನ ವೈದ್ಯರ ಸೌಭಾಗ್ಯ. Wish you happy doctors day.

Blog number 1633. ನಾನು ದಿನ ಪತ್ರಿಕೆ ಓದುವುದು ನಿಲ್ಲಿಸಿ ಒಂದು ವರ್ಷ ಆಯಿತು. 2022 ರ ಕನ್ನಡ ಪತ್ರಿಕಾ ದಿನಾಚರಣೆ ದಿನದಿಂದ ನಿರ್ದಾರ ಮಾಡಿದ್ದೆ.

#ಪ್ರತಿವರ್ಷ_ಜುಲೈ_೧_ಕನ್ನಡ_ಪತ್ರಿಕಾ_ದಿನ. #ನಾನು_ಎಲ್ಲಾ_ಪತ್ರಿಕೆಗಳ_ಖರೀದಿ_ನಿಲ್ಲಿಸಿ_ಒಂದು_ವರ್ಷ #ವೃತ್ತ_ಪತ್ರಿಕೆ_ಓದುವುದು_ಬಿಡಲು_ಕಾರಣವಿದೆ. #ಮೀಡಿಯಾ_ಖಾಲಿ_ಕಪಾಟುಗಳಾಗಿದೆ #ಪತ್ರಕರ್ತರನ್ನು_ಸಂಪಾದಕರನ್ನು_ಕಡೆಗಾಣಿಸುತ್ತಿರುವ_ಪತ್ರಿಕೆಗಳ_ಮಾಲಿಕರು.    ಬಾಲ್ಯದಲ್ಲಿ  ನಾನು ಹುಟ್ಟುವಾಗಲೇ ನಮ್ಮ ಮನೆಗೆ ನಿತ್ಯ ಪ್ರಜಾವಾಣಿ ಪತ್ರಿಕೆ ನಿವೃತ್ತ ಯೋದರಾದ ಹುಚ್ಚಾಚಾರ್ ಬಾಂಗ್ಲಾ ಯುದ್ಧದಲ್ಲಿ ಊನವಾಗಿದ್ದ ಕುಂಟು ಕಾಲಲ್ಲಿ ಕುಂಟುತ್ತಾ ನಮ್ಮ ಮನೆಗೆ ಮತ್ತು ಸಮೀಪದ SRS ಅಕ್ಕಿ ಗಿರಣಿಗೆ ತಪ್ಪದೇ ವಿತರಿಸುತ್ತಿದ್ದರು.   ವಾರ ಪತ್ರಿಕೆ ಸುದಾ - ಪ್ರಜಾಮತ, ಮಾಸ ಪತ್ರಿಕೆ ಚಂದಮಾಮ - ಮಯೂರ - ತುಷಾರದಿಂದ ಪ್ರಾರಂಭವಾಗಿ ನನ್ನ ಯಜಮಾನಿಕೆಯಲ್ಲಿ ದಿನ ಪತ್ರಿಕೆ ಪ್ರಜಾವಾಣಿ ಜೊತೆ ಕನ್ನಡ ಪ್ರಭ - ಸಂಯುಕ್ತ ಕರ್ನಾಟಕ - ಉದಯವಾಣಿ - ವಿಜಯ ಕರ್ನಾಟಕ - ವಿಜಯವಾಣಿ - ವಿಶ್ವಕರ್ನಾಟಕ, ಇಂಗ್ಲೀಷ್ ಹಿಂದೂ- ಡೆಕನ್ ಹೆರಾಲ್ಡ್ - ಇಂಡಿಯನ್ ಎಕ್ಸ್ ಪ್ರೆಸ್, ಹಿಂದಿಯ ರಾಜಸ್ಥಾನ್ ಪತ್ರಿಕಾ, ವಾರಪತ್ರಿಕೆಗಳಾದ ಹಾಯ್ ಬೆಂಗಳೂರು, ಲಂಕೇಶ್, ಗೌರಿ ಲಂಕೇಶ್, ಅಗ್ನಿ. ಅನೇಕ ಮಾಸ ಪತ್ರಿಕೆಗಳ ಜೊತೆ ಸ್ಥಳೀಯ ಪತ್ರಿಕೆಗಳು ನಾನು ತರಿಸುತ್ತಿದ್ದೆ ಮತ್ತು ಪೂರ್ತಿ ಓದಿದ ನಂತರವೇ ನನ್ನ ನಿತ್ಯದ ಕೆಲಸ ಎಂದು ಅಭ್ಯಾಸ ಆಗಿತ್ತು.   ನಂತರ ರಾಜ್ಯ ಪತ್ರಿಕೆಗಳು ಸ್ಥಳೀಯ ಪತ್ರಿಕೆಗಳ ಮೇಲೆ ಸ್ಪರ್ದೆ ಮಾಡಿ ಸ್ಥಳೀಯ ಪತ್ರಿಕೆಗಳ ಅಸ್ತಿತ್ವ ಇಲ್ಲ ಮಾಡಿ

Blog number 1633. ಮಳೆ ನೀರು ಕೊಯ್ಲು ಪ್ರಾರಂಬಿಸಲು ಇದು ಸಕಾಲ 40 x 60 ಅಡಿ ನಿವೇಶನದಲ್ಲಿ ಬೀಳುವ ಮಳೆ ನೀರಿನ ಪ್ರಮಾಣ ವಾರ್ಷಿಕ 11 ಲಕ್ಷ ಲೀಟರ್

#HI FACE BOOK FRIENDS,NOW MANSOON STARTED LET US START RAIN HARVESTING,IT IS NOT A BIG JOB BUT ITS RETURN IS BIG PROFIT,ITS MY OWN EXPERIENCE.       THAT'S WHY THIS YEAR ALSO CONTINUED RAIN HARVESTING WORK.    40×60 FEET SITE AREA RAIN FALL APPROXIMATELY 11 LACS LETERS,IF YOU MADE IT HARVEST YOUR OPEN WELL NEVER DRY.      # FB ಗೆಳೆಯರೆ ಮುಂಗಾರು ಪ್ರಾರಂಭ ಆಗಿದೆ ಮಳೆ ನೀರು ಕೊಯ್ಲು ಪ್ರಾರಂಭಿಸಿ ಇದೇನು ದೊಡ್ಡ ಕೆಲಸವಲ್ಲ ಆದರೆ ಇದು ನೀಡುವ ಲಾಭ ಸಣ್ಣದಲ್ಲ, ಇದು ನನ್ನ ಸ್ವಯಂ ಅನುಭವ.        ಹಾಗಾಗಿ ಈ ವಷ೯ದ ಮಳೆ ಕೊಯ್ಲು ಕಾಮಗಾರಿ ಮುಂದುವರಿಸಿದ್ದೇನೆ.       40x60 ಅಡಿ ನಿವೇಶನದಲ್ಲಿ ಮಳೆ ನೀರು ಬೀಳುವ ಪ್ರಮಾಣ ಮಲೆನಾಡಿನಲ್ಲಿ ಹನ್ನೊಂದು ಲಕ್ಷ ಲೀಟರ್ ಇದನ್ನ ಭೂಮಿಗೆ ಇಂಗಿಸಿದರೆ ನಿಮ್ಮ ಬಾವಿ ನೀರು ಬತ್ತಿ ಹೋಗಲು ಸಾಧ್ಯವೇ ಇಲ್ಲ.

Blog number 1632. ಕ್ರೀಡಾ ಮನೋಭಾವದ ಮಾನವೀಯ ಅಂತಃಕರಣದ ಶಿವಮೊಗ್ಗದ ಡಯಾಬಿಟಿಸ್ ತಜ್ಞ ಡಾ.ಪ್ರೀತಂ ಮತ್ತು ಅವರ ಡಯಾಬಿಟೀಸ್ ತಜ್ಞ ಚಿಕಿತ್ಸೆ

ಡಾಕ್ಟರ್ ಪ್ರೀತಂ ಎಂಬ ಮಾನವೀಯತೆ ಇರುವ ವೈದ್ಯರು   ಹಲೋ.. ಡಾಕ್ಟರ್ ಒಂದು ಪೇಶoಟ್ ಕಳಿಸ್ತಾ ಇದೀನಿ ಲಿವರ್ ಸಮಸ್ಯೆ ಅಂದೆ, ಕಳಿಸಿ ಚೆಕ್ ಮಾಡುತ್ತೇನೆ ಅಂದರು, ಎಷ್ಟು ಹಣ ಬೇಕಾಗಬಹುದು ಅಂದೆ 400 ಪರೀಕ್ಷೆಗೆ ಒಂದು 600 ಔಷದಿಗೆ  ಒಟ್ಟು 1000 ಕಳಿಸಿ ಅಂದರು.   ಹೀಗೆ ನಾನು ಆಗಾಗ ನನ್ನ ಹತ್ತಿರ ಬರುವ ಅತ್ಯಂತ ಬಡವರನ್ನ ಇವರ ಹತ್ತಿರ ಇವರು ಸಿಗದಿದ್ದರೆ ಮೆಗಾನ್ ಆಸ್ಪತ್ರೆಯಲ್ಲಿ ನ ವೈದ್ಯ ದಂಪತಿ ನಾಗರಾಜ್ ಮತ್ತು ಶ್ರೀಮತಿ ರಾಜ ಲಕ್ಷ್ಮಿ ಹತ್ತಿರ ಕಳಿಸುತ್ತೇನೆ.   ಸಂಜೆ ರೋಗಿ ಮಗನೊಂದಿಗೆ ಬಂದ ತಾಯಿ ಮೊಗದಲ್ಲಿ ಬೆಳಿಗ್ಗೆ ಇದ್ದ ಆತಂಕ ಕಳೆದು ನೆಮ್ಮದೀಯ ಜೀವನೋತ್ಸವ ಇತ್ತು, ವೈದ್ಯರು ಅವರ ಚಿಕಿತ್ಸೆಯ ಹಣವೂ ಪಡೆಯದೆ ಪರೀಕ್ಷೆ ಮಾಡಿ ಒಂದು ತಿಂಗಳ ಔಷಧಿ ಕಳಿಸಿದ್ದಾರೆ.   ಶಿವಮೊಗ್ಗದ ಅನೇಕ ವೈದ್ಯರ ಪರಿಚಯ ಇದೆ ಆದರೆ ಅವರಾರು ಈ ಕೂಲಿ ಕಾಮಿ೯ಕರ, ಸಣ್ಣ ಜಾತಿಗಳ ಜನರ ಚಿಕಿತ್ಸೆಗೆ ಕಳಿಸಿದರೆ ಆಸಕ್ತಿ ತೋರಿಸುವುದಿಲ್ಲ, ಶ್ರೀಮಂತ ರೋಗಿಗಳೆ ಅವರ ಟಾಗೆ೯ಟ್ ಅದು ತಪ್ಪು ಅಲ್ಲ ಯಾಕೆಂದರೆ ಕಾಪೊ೯ರೇಟ್ ಆಸ್ಪತ್ರೆಗಳ ಅಘೋಷಿತ ನಿಯಮ ಕೂಡ.   ಡಾ.ಪ್ರೀತಂ ಜಿಲ್ಲೆಯ ಪ್ರಖ್ಯಾತ ಮದುಮೇಹ ಕಾಯಿಲೆಯ ಪರಿಣಿತ ವೈದ್ಯರು, ಹಾಲಿ ದುಗಿ೯ಗುಡಿಯ ರಾಜ್ ಕುಮಾರ್ ಡಯೋಗ್ನೀಸ್ ಸೆಂಟರ್ ಇವರೆ ವಹಿಸಿಕೊಂಡಿದ್ದಾರೆ ಇವರ ತಂದೆ ಡಾ. ಈಶ್ವರಪ್ಪನವರು ಸೊರಬ ಮೂಲದವರು, ಇವರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಯವರ ಆಪ

Blog number 1631. ಕೊರಾನಾ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್- 49.(30- ಜೂನ್-2020)

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 49.    ದಿನಾ೦ಕ: 30-ಜೂನ್ -2020. #ನಿಯ೦ತ್ರಣ_ಸಾಧ್ಯವಾಗದೆ_ಕೈಚೆಲ್ಲಿದ_ದೇಶ     ಪ್ರಾರ೦ಭದಲ್ಲಿ ಭಾರತ ದೇಶವಾಸಿಗಳಿಗೆ ಇದ್ದ ಕೊರಾನಾ ವೈರಸ್ ಆತಂಕ 100 ದಿನದಲ್ಲಿ ಇಲ್ಲವಾಗಿದೆ.     ಮಾಸ್ಕ್ ಇಲ್ಲ, ಸ್ಯಾನಿಟೈಸರ್ ಬೇಡ, ಸಾವ೯ಜನಿಕ ಅಂತರವೂ ಇಲ್ಲ ಇದರ ಜೊತೆ ಸಕಾ೯ರಗಳು ಲಾಕ್ ಡೌನ್ ಹಂತ ಹಂತವಾಗಿ ತೆರವು ಮಾಡುತ್ತಾ ಬಂದದ್ದೂ ಸೇರಿ ಭಾರತದಲ್ಲಿ ಕೊರಾನಾ ವಿಪರೀತವಾಗಿ ಹರಡಿದೆ.    ಪ್ರಾರಂಭದಲ್ಲಿ 108 ದಿನ ಬೇಕಾಗಿತ್ತು 1 ಲಕ್ಷ ಜನರಿಗೆ ಹರಡಲು ಈಗ ಕೇವಲ 7 ದಿನಕ್ಕೆ ಲಕ್ಷ ದಾಟುತ್ತಿದೆ ಮುಂದಿನ ದಿನದಲ್ಲಿ 3 - 4 ದಿನಕ್ಕೆ ಲಕ್ಷ ಜನರಿಗೆ ತಲುಪುವ ಸಾಧ್ಯತೆ ಇದೆ.     ಈಗಾಗಲೇ ಭಾರತ ಕೊರಾನಾ ನಾಗಾಲೋಟದಲ್ಲಿ ವಿಶ್ವದಲ್ಲಿ 4ನೇ ಸ್ಥಾನ ಪಡೆದಿದೆ.     ನೂರಾರು ಆದೇಶ ಸಕಾ೯ರ ಮಾಡುವುದು ಬದಲಿಸುವುದು ಮಾಡುತ್ತಲೇ ಇದೆ ಆದರೆ ಸಾವ೯ಜನಿಕರಲ್ಲಿ ಈ ಕಾಯಿಲೆ ಬಗ್ಗೆ ಜನ ಜಾಗೃತಿ ಮೂಡಿಸಲು ವಿಫಲವಾಗಿದೆ.   ಮಾಸ್ಕ್ ಕಡ್ಡಾಯ ಅಂದರೂ ಸಕಾ೯ರದ ಮಂತ್ರಿ ಮಹೋದಯರೇ ಉಲ್ಲ೦ಘಿಸಿದ ಮೇಲೆ ಸಾವ೯ಜನಿಕರು ಇನ್ನೇನು.   ಸಾವ೯ಜನಿಕವಾಗಿ ಅಂತರ ಗಿಂತರ ಪಾಲಿಸಲಿಲ್ಲ, ಗುಟ್ಕಾ ಕಂಡ ಕಂಡಲ್ಲಿ ಉಗಿದರೆ ದಂಡ ಎಂಬ ಕಾನೂನು ಮೀರಿ ಉಗಿಯುವವರೂ ಹೆಚ್ಚಾದರು.    ಇದೆಲ್ಲ ಒಂದು ತರ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರಿಗೆ ದಂಡ ಎಂಬಂತೆ.   SSLC ಪರೀಕ್ಷೆ 8.5 ಲಕ್ಷ ವಿದ್ಯಾಥಿ೯ಗಳಿಗೆ ನಡೆಸುವ ಸಕಾ೯ರದ ತ

Blog number 1630. ಆನಂದಪುರಂ ಇತಿಹಾಸ ಸಂಖ್ಯೆ 102.ನಿತ್ಯ ಕನ್ನಡ ದಿನ ಪತ್ರಿಕೆ ಪ್ರೇಮಿ ಕೇರಳಿಗ ಕೆ. ಮೊಯಿದ್ದೀನ್ ಕಾಕ

ಕೇರಳಿಗ ಕೆ.ಮೊಹಿದೀನ್ ಕಾಕ ಕನ್ನಡದ ಎಲ್ಲಾ ಪತ್ರಿಕೆ ಪ್ರತಿ ನಿತ್ಯ ಓದಿಯೇ ಮುಂದಿನ ಕೆಲಸ ಮಾಡುವವರಾಗಿದ್ದರು.   ಆನಂದಪುರಂಗೆ ಮೊದಲು ಬಂದ ಮಲೆಯಾಳದ ವಲಸಿಗರಲ್ಲಿ ಮೊಹಿದೀನ್ ಕಾಕ ಕನ್ನಡ ಕಲಿತು ಎಲ್ಲಾ ಪತ್ರಿಕೆ ಓದಿ ಮುಂದಿನ ಕೆಲಸ ಪ್ರಾರಂಬಿಸುವ ನಿತ್ಯ ಕಾಯಕ ಹೊಂದಿದ್ದರು.     ಶುಂಠಿ ವ್ಯಾಪಾರಿ ರಾಮಟ್ಟ, ಪ೦ಚಾಯಿತಿ ಸದಸ್ಯರಾದ ಕರುಣಾಕರನ್, ಮಿಲ್ಟ್ರಿ ಹೋಟೆಲ್ ನಾಯರ್, ನಾಟಾ ಕೊಯ್ಯುವ ಲೋಹಿತಾಶ್ವಾ, ಲಾರಿ ಮಾಲಿಕರಾದ ಅಚ್ಚುತಾಚಾರ್, ಗಾರೆ ಕೆಲಸದ ಗೋಪಿ ಮೇಸ್ತ್ರಿ ಇವರೆಲ್ಲ ಅವರ ಬಾಷೆ, ಆಚರಣೆ ಮತ್ತು ಅವರ ಆಹಾರ ಪದ್ಧತಿಯಿಂದ ನಾವು ಚಿಕ್ಕವರಿದ್ದಾಗ ಬಿನ್ನರಾಗಿ ಕಾಣುತ್ತಿದ್ದರು, ಇವರೆಲ್ಲರ ಮಲೆಯಾಳಿ ಎಕ್ಸೆ೦ಟ್ ನ ಕನ್ನಡ ಬೇರೆ ಅಥ೯ ನೀಡಿ ನಗು ಸುರಿಸುತ್ತಿತ್ತು.   ಮೊಯಿದಿನ್ ಕಾಕ ಆನಂದಪುರಂ ಬಸ್ ಸ್ಟ್ಯಾ೦ಡ್ ಹತ್ತಿರ ಅನೇಕ ವಷ೯ ಎಳನೀರು ಅಂಗಡಿ ನಡೆಸಿದರು ಆಗ ಎದುರಿನ ಸಕಾ೯ರಿ ಕನಕಮ್ಮಳ ಆಸ್ಪತ್ರೆಯಲ್ಲಿ ಒಳ್ಳೆಯ ಸೇವಾ ಮನೋಭಾವದ ವೈದ್ಯರು ಇರುತ್ತಿದ್ದರು ಇಡೀ ಆಸ್ಪತ್ರೆ ರೋಗಿಗಳಿಂದ ತುಂಬಿರುತ್ತಿತ್ತು, ರೋಗಿಗಳನ್ನ ನೋಡಲು ಬರುವ ಅಂದು ಬಂದುಗಳು ಕೈಯಲ್ಲಿ ಎಳನೀರು ಒಯ್ಯುವ ಪದ್ದತಿ ಇತ್ತು ಹಾಗಾಗಿ ಕಾಕನ ಎಳನೀರು ವ್ಯಾಪಾರ ಜೋರಿತ್ತು.   ಮಕ್ಕಳನ್ನ ಕನ್ನಡ ಮಾಧ್ಯಮದಲ್ಲೇ ಓದಿಸಿದರು ಅವರೂ ಅತ್ಯುತ್ತಮವಾಗಿ ಓದಿದರು, ಮಗ ಮೊಹಮದ್ ನನ್ನ ಕ್ಲಾಸ್ ಮೇಟ್ ಅವರು ಸಾಗರದ ಪ್ರಖ್ಯಾತ ಉದ್ದಿಮೆದಾರ, ರಾಜಕಾರಣಿ

Blog number 1629. ಕಪ್ಪೆ ಮಳೆಯ ಕಥೆ

#ಇದು_ಕಾಲ್ಪನಿಕ_ಕಥೆ_ಅಲ್ಲ #ಸತ್ಯ_ಕಥೆ #ಕಪ್ಪೆ_ಮಳೆ #ಎಲ್ಲಾದರೂ_ಕೇಳಿದವರು_ನೋಡಿದವರು_ಇದ್ದಾರ? #ಮಳೆಯ_ಹನಿಗಳ_ಜೊತೆ_ದರೆಗೆ_ಉರುಳಿದ_ಕಪ್ಪೆಗಳು https://youtu.be/a1NHfpV1sSA    ತುಂಬಾ ತಡವಾಗಿ ಮೊನ್ನೆ ಮಧ್ಯಾಹ್ನ ಮುಂಗಾರು ಮಳೆ ಪ್ರಾರಂಭವಾಯಿತು ಅಂತ ಸಂತಸದಲ್ಲಿದ್ದಾಗಲೆ ನಮ್ಮ ಕೆಲಸದ ಹೆಣ್ಣು ಮಗಳು ಜೋರಾಗಿ ಕೂಗುತ್ತಾ ಮಳೆಯ ಜೊತೆ ಕಪ್ಪೆಗಳು ಬೀಳುತ್ತಿದೆ ಅಂತ ಜೋರಾಗಿ ಭಯದಿಂದ ಕೂಗುತ್ತಾ ಓಡಿ ಆಫೀಸಿನ ಒಳ ಬಂದಾಗ ನನಗೂ ಆಶ್ವರ್ಯ.    ಅವಳು ದೈಯ೯ವಂತೆ ಹೆಣ್ಣು ಮಗಳು ಹಾಗೆಲ್ಲ ಸುಳ್ಳು ಹೇಳುವವಳೂ ಅಲ್ಲ, ಅವಳು ಮರುದಿನ ಭಾನುವಾರ ನಮ್ಮ ಕಲ್ಯಾಣ ಮಂಟಪದಲ್ಲಿ ನಿಗದಿ ಆಗಿದ್ದ ಮದುವೆಗಾಗಿ ಸ್ವಚ್ಚತಾ ಕೆಲಸ ನಿರ್ವಹಣೆ ಮಾಡುತ್ತಿರುವಾಗ ಬೆಳಗಿನಿಂದ ನಿಲ್ಲದ ಮಳೆ ನೋಡಿ ಮಳೆಯಲ್ಲೇ ಕಲ್ಯಾಣ ಮಂಟಪದಿಂದ ಲಾಡ್ಜ್ ಆಫೀಸಿಗೆ ಬರುವಾಗ ಅವಳ ಮೇಲೆ ಮಳೆಯ ಹನಿಯ ಜೊತೆ ಕಪ್ಪೆಗಳು ಬಿಳುವುದು ನೋಡಿ ಭಯ ಪಟ್ಟಿದ್ದಾಳೆ.    ಇವಳ ಮಾತು ಕೇಳಿದ ಬೇರೆ ಸಿಬ್ಬಂದಿಗಳು ಲಾಡ್ಜ್ ನ ಒಳಗಿನಿಂದಲೇ ಸ್ಲೈಡಿಂಗ್ ಕಿಟಕಿ ಸರಿಸಿ ಹೊರನೋಡಿ ಅವರೂ ಅಲ್ಲಿಂದಲೇ " ಹೌದು ಹೌದು ಮ೦ಜುಳಮ್ಮ ಹೇಳಿದ್ದು ಸತ್ಯ ..... ಮಳೆ ಜೊತೆ ಆಕಾಶದಿಂದ ಕಪ್ಪೆ ಬೀಳುತ್ತಿದೆ.... ನೋಡಿ ಬನ್ನಿ .... ಅಂದಾಗ ಎಲ್ಲಾ ಕೆಲಸದವರು ಪ್ರತ್ಯಕ್ಷ ಸಾಕ್ಷಿಗಳಾಗಿ ಸಾಕ್ಷಿಕರಿಸಿದರು.    ನನಗೆ ಇದು ಆಶ್ಚಯ೯ ಮತ್ತು ದಿಗಿಲಿಗೆ ಕಾರಣವಾಯಿತು ತಕ್ಷಣ ನನಗೆ ನೆನಪಾಗಿದ್ದು ಆಶ್ಲೇಷ

Blog number 1628. ಧರ್ಮಸ್ಥಳ ಸ್ವ ಸಹಾಯ ಸಂಘ ಸಾಲದ ಕಂತು ಮರು ಪಾವತಿ ಕೊರಾನಾ ಕಾಲದಲ್ಲಿ ಪ್ರಾರಂಬಿಸಿದ್ದು ಎಷ್ಟು ಸರಿ (26 ಜೂನ್ 2020)

#ಸಾಗರ_ತಾಲ್ಲೂಕಿನ_ದಮ೯ಸ್ಥಳ_ಸ್ವಸಹಾಯ_ಸಂಘ_ಸಾಲದ_ಕಂತು_ಕಟ್ಟಲು_ಒತ್ತಾಯಿಸಿ_ಮರುಪಾವತಿ_ಪ್ರಾರಂಬಿಸಿರುವುದು ಎಷ್ಟು ಸರಿ ?   ಕೇಂದ್ರ ಸಕಾ೯ರ ಎಲ್ಲಾ ರಾಷ್ಟ್ರಿಕೃತ ಬ್ಯಾಂಕ್ ಗಳ ಸಾಲ ಮಾಚ೯ ತಿಂಗಳಿಂದ ಮೇ ತಿಂಗಳ ತನಕ ಮರುಪಾವತಿಗೆ ವಿನಾಯಿತಿ ನೀಡಿತ್ತು ನಂತರ ಇದನ್ನು ಆಗಸ್ಟ್ 2020 ರ ತನಕ ಮುಂದೂಡಿದೆ ಕಾರಣ ಕೊರಾನಾ ಸಾಂಕ್ರಮಿಕ ರೋಗದಿಂದ ಇಡೀ ದೇಶ ಲಾಕ್ ಡೌನ್ ನಿಂದ ಅಥಿ೯ಕ ಸಂಕಷ್ಟದಿಂದ ಹೊರಬರಲು.    ಇದೇ ರೀತಿ ರಾಜ್ಯ ಸಕಾ೯ರ ಎಲ್ಲಾ ಸಹಕಾರಿ ಸಂಘ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ಗಳ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿದೆ.    ಸ್ವ ಸಹಾಯ ಸಂಘಗಳು ಪ್ರತಿ ವಾರ ಕಟ್ಟಿಸಿಕೊಳ್ಳುತ್ತಿದ್ದ ಸಾಲದ ಮರುಪಾವತಿ ಮುಂದೂಡಲಾಗಿದೆ ಎಂಬ ಸುದ್ದಿ ಇತ್ತು ಇವತ್ತಿನ ಪತ್ರಿಕೆಯಲ್ಲಿ ಪಕ್ಕದ ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ವ ಸಹಾಯ ಸಂಘಗಳು ಸಾಲ ಮರುಪಾವತಿಗೆ ಕಾಲವಕಾಶ ನೀಡದೆ ಮರು ಪಾವತಿಗೆ ಒತ್ತಾಯಿಸಿದರೆ ಕಾನೂನು ಕ್ರಮ ಎದುರಿಸುವುದಾಗಿ ಎಚ್ಚರಿಸಿದ್ದಾರೆ.    ಆದರೆ ಶಿವಮೊಗ್ಗ ಜಿಲ್ಲೆಯ ಆನಂದಪುರಂ ಭಾಗದ ದಮ೯ಸ್ಥಳ ಸಂಘದ ಅಭಿವೃದ್ದಿ ಅಧಿಕಾರಿ ಕಳೆದ ತಿಂಗಳಿಂದ ಸಾಲದ ಕಂತು ಕಟ್ಟಲೇಬೇಕೆಂದು ಸಾಲಗಾರರಿಂದ ಪ್ರತಿವಾರ ಸಾಲ ವಸೂಲಿ ಮಾಡುತ್ತಿದ್ದಾರೆ.   ಈ ಭಾಗದಲ್ಲಿ ಇಷ್ಟು ದಿನ ಕೂಲಿ ಕೆಲಸ ಇಲ್ಲವಾಗಿತ್ತು, ಈಗಷ್ಟೆ ಕೃಷಿ ಕೆಲಸ ಪ್ರಾರಂಭ ಆಗಿದೆ ಅಷ್ಟರಲ್ಲಿ ಸಾಲದ ಕಂತು ಮರುಪಾವತಿ ಪ್ರಾರ೦ಬಿಸಿರುವುದು ಅನೇಕರಿಗೆ ಕಷ್ಟಸಾಧ್ಯವಾಗಿದೆ.

Blog number 1627. ಪುತ್ತೂರಿನ ಮಾಸ್ಟರ್ ಪ್ಲಾನರಿ ಎಂಬ ಪ್ರತಿಷ್ಠಿತ ಉದ್ಯಮ.

* ಪುತ್ತೂರಿನ ಪ್ರತಿಷ್ಠಿತ ಉದ್ದಿಮೆ ಮಾಸ್ಟರ್ ಪ್ಲಾನೆರಿ *   2011ರಲ್ಲಿ ನಮ್ಮ ಲಾಡ್ಜ್ ಮತ್ತು ಕಾಟೇಜ್ ನಿಮಾ೯ಣ ಸಂದಭ೯ದಲ್ಲಿ ಈ ಸಂಸ್ಥೆಯಿ೦ದ ಸಿಮೆಂಟ್ ಬಾಗಿಲು, ಕಿಟಕಿ ಮತ್ತು ವಾಡ್೯ ರೋಬ್ಗಳನ್ನ ಇವರಿಂದ ಖರೀದಿಸಿದ್ದೆ, ಮೊನ್ನೆ ನಮ್ಮ ಹೊಸ ಕಟ್ಟಡಕಾಗಿ ಇಲ್ಲಿಗೆ ಹೋಗಿದ್ದೆ.    ಈ ಸಂಸ್ಥೆ ಮರದಿಂದ ನಿಮಿ೯ಸುವ ಎಲ್ಲಾ ವಸ್ತುಗಳನ್ನ ಸಿಮೆಂಟ್ ನಿಂದ ನಿಮಿ೯ಸುವ ಕೌಶಲ್ಯ ಹೊಂದಿದೆ.    ದೇಶದಾದ್ಯಂತ ರೈಲ್ವೆ, ಅರಣ್ಯ ಇಲಾಖೆಗಳಿಗೆ ಇವರ ಉತ್ಪನ್ನ ಸರಭರಾಜು ಆಗುತ್ತಿರುತ್ತದೆ.   ದಿಡೀರ್ ನಿಮಿ೯ಸುವ ಮನೆ, ಟಾಯಿಲೆಟ್, ಕೃಷಿ ಬೋರ್ ವೆಲ್ ಗಳಿಗೆ ಕಾಂಕ್ರಿಟ್ ಸ್ವಿಚ್ ಬೋಡ್೯ಗಳು ಹೀಗೆ ಇಲ್ಲಿ ಏನುOಟು ಏನಿಲ್ಲ !,ಮರದಲ್ಲಿ ವಾಡ್೯ ರೋಬ್ ಮಾಡಲು ಕನಿಷ್ಟ 700 ರೂಪಾಯಿ ಚದರ ಅಡಿಗೆ ಬೇಕು ಅದೇ ಇವರ ಕಾಂಕ್ರಿಟ್ ನಲ್ಲಿ 4OO ರಿಂದ 500 ರೂಪಾಯಿಯಲ್ಲಿ ಆಗುತ್ತೆ ಆದರೆ ಇದು ಲಡ್ಡಾಗುವುದಿಲ್ಲ, ಒರಲೆ ತಿನ್ನುವುದಿಲ್ಲ  ಮೈoಟೆನೆನ್ಸ್ ಪ್ರೀ.    ಆನಂದ್ ಎಂಬುವವರು ಪ್ರಾರಂಬಿಸಿದ ಈ ಸಂಸ್ಥೆಯಲ್ಲಿ ನೂರಾರು ಕುಟುಂಬ ಉದ್ಯೋಗ ಮಾಡುತ್ತಿದೆ, ಅವರಿಗೆ ಊಟ / ವಸತಿ ವ್ಯವಸ್ಥೆ, ಕಾಮಿ೯ಕರಿಗಾಗಿಯೇ ಸಹಕಾರಿ ಮಾಲ್ ನಿಮಿ೯ಸಲಾಗಿದೆ.   ಕಾಮಿ೯ಕರ ಮಕ್ಕಳಿಗೆ ವಿದ್ಯಾಭ್ಯಾಸ, ಊಟ ವಸತಿ ವ್ಯವಸ್ಥೆ ಕೂಡ ಅತ್ಯುತ್ತಮವಾಗಿ ಮಾಡಿದ್ದಾರೆ.   ಮಹಿಳಾ ಸಿಬ್ಬಂದಿಗಳು ಇಲ್ಲಿ ತಯಾರು ಮಾಡುವ ಉತ್ಪನ್ನಗಳನ್ನ ತಯಾರಿಸುವ

Blog number 1626. ಕೊಡಚಾದ್ರಿಗೆ ರಸ್ತೆ ಬೇಡವೇ?

ಕೊಡಚಾದ್ರಿಗೆ ಉತ್ತಮ ರಸ್ತೆ ಮಂಜೂರಾಗಿತ್ತು, ಪರಿಸರವಾದಿಗಳು ವಿರೋದಿಸಿದ್ದರಿಂದ ಆಗಲಿಲ್ಲ, ಈಗ ರಸ್ತೆಯೇ ಇಲ್ಲ, ಅರಣ್ಯ ಇಲಾಖೆ ಕೂಡ ಇಲ್ಲಿ ರಸ್ತೆ ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ, ಮುಂದಿನ ದಿನಗಳಲ್ಲಿ ಇಲ್ಲಿ ಪ್ರವಾಸಿಗರಿಗೆ ಅಪಾಯ ಕಾದಿದೆ. KODACHADRI HILL OF SHIMOGA DIST IS BEAUTIFUL HILL STATION AND TOURIST VISITING MUKAMBIKA THEY DONT MISS TO REACH THIS PLACE WHERE SHANKARACHARYA MADE TAPASSU.    NOW DAYS THIS ROAD IS BECAME HELL BECAUSE ENVIRONMENTALISTS APPOSING ROAD CONSTRUCTION AND FOREST DEPARTMENT NOT ALLOWING.      LAST WEEK ONE KERALA TOURIST JEEP MET ACCIDENT AND ONE DEATH.

Blog number 1625. ಈ ವರದಿ ಜನ ಹೊರಾಟ ಪತ್ರಿಕೆಯಲ್ಲಿ ಓದಿದ ಮೇಲೆ...

ಇವತ್ತಿನ ಮನದ ಮಾತು ಓದಿದ ಮೇಲೆ ಅನ್ನಿಸಿದ್ದು. ನಮಗೆ ಈ ಕೋನದ ದೃಷ್ಠಿ ಖಂಡಿತ ಇಲ್ಲ ನಾನು ಈ ಸಾಮೂಹಿಕ ಸನ್ನಿಗೆ ಒಳಗಾಗಿದ್ದೆ ಸಮುದಾಯದ ನೆನಪಿನ ಶಕ್ತಿ ಅತ್ಯಲ್ಪ ಎಂಬುದು ಸವ೯ ಕಾಲಿಕ ಸತ್ಯ. www.hombujalodge.com

Blog number 1624. ರಾಜ್ಯದ ಪ್ರಖ್ಯಾತ ಶೈಲಿ ಹ್ಯಾಂಡ್ ಲೂಂ ರೆಡಿಮೆಡ್ ಕ್ಲಾತ್ ಸಂಸ್ಥೆ ಯಶಸ್ಸಿನ ಸಾದಕರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಸುಂದರ್ ಮತ್ತು ವಿಜಯ ಲಕ್ಷ್ಮಿ ದಂಪತಿಗಳು ನನ್ನ ಅತಿಥಿ.

#ಶಿವಮೊಗ್ಗ_ಜಿಲ್ಲೆಯ_ಹೆಗ್ಗೋಡಿನ_ಕೈಮಗ್ಗದ_ಸಿದ್ಧಉಡುಪುಗಳ_ಶೈಲಿ_ಸಂಸ್ಥೆ #ಈ_ಸಂಸ್ಥೆಯ_ಹಿಂದಿನ_ಶ್ರಮಜೀವಿ_ದಂಪತಿಗಳು #ಸುಂದರ್_ವಿಜಯಲಕ್ಷ್ಮಿ_ದಂಪತಿಗಳು. #ರಾಜ್ಯದಾದ್ಯಂತ_ಮಾರಾಟ_ಆಗುತ್ತಿರುವ_ಶೈಲಿ_ಬ್ರಾಂಡ್_ಕೈಮಗ್ಗದ_ಸಿದ್ದಉಡುಪು #ಯಶಸ್ವಿ_ಉದ್ದಿಮೆಯ_ದಂಪತಿಗಳು_ನನ್ನ_ಅತಿಥಿಗಳು.    1996ರಲ್ಲಿ ಹೆಗೋಡಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಸನ್ನರು ಪ್ರಾರಂಭ ಮಾಡಿದ ಚರಕ ಸಂಸ್ಥೆಯಲ್ಲಿ ಈ ಸುಂದರ್ ಪ್ರಾರಂಭದಿಂದ ಇದ್ದವರು.   ಆಗ ನಾನು ಚರಕ ಸಂಸ್ಥೆಯಲ್ಲಿ ನನ್ನ ಅಳತೆಯ ಶರ್ಟ್ ಮತ್ತು ಜುಬ್ಬಾಗಳು ನನಗೆ ಸರಿ ಹೊಂದುವುದಿಲ್ಲ ಎಂದು ಪ್ರಸನ್ನರಲ್ಲಿ ಹೇಳಿದಾಗ ಅವರು ನಮ್ಮಲ್ಲಿರುವ ಸುಂದರ್ ಎ೦ಬ ಯುವಕ ತುಂಬಾ ಪರಿಣಿತರಿದ್ದಾರೆ ಅವರನ್ನು ಪರಿಚಯಿಸುತ್ತೇನೆಂದು ಪರಿಚಯ ಮಾಡಿದ ಸುಂದರ್ ಹೆಸರಿಗೆ ತಕ್ಕ ಸುಂದರಾಂಗನೇ ಆಗಿದ್ದರು.   ಸದಾ ಹಸನ್ಮುಖಿ, ಮಿತ ಭಾಷಿ ಹಾಗೂ ಶ್ರಮಜೀವಿ ಆದ ಸುಂದರ್ ಪ್ರಸನ್ನ ಒಮ್ಮೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ಚೆಕ್ ಕೇಸ್ ದಾಖಲಿಸಿದ್ದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸಂದಾನಕ್ಕೆ ಮತ್ತಿಕೊಪ್ಪದ ಹರನಾಥ ರಾಯರ ಜೊತೆ ಹೋದಾಗ ಪ್ರಸನ್ನರ ಜೊತೆ ಈ ಸುಂದರ್ ಇದ್ದರು.   ನಂತರ ಕೆಲ ವರ್ಷ ನನಗೆ ಬೇಕಾದ ಶರ್ಟ್ ಮತ್ತು ಜುಬ್ಬಾಕ್ಕೆ ನಾನು ಸುಂದರ್ ಅವರನ್ನು ಅವಲಂಬಿಸಿದ್ದೆ ಅದು 2013ರ ವರೆಗೆ ಹೆಗ್ಗೋಡಿನ ಮುಖ್ಯ ರಸ್ತೆಯ ಚರಕ ಮಳಿಗೆಯಲ್ಲೂ ಖರೀದಿಸುತ್ತಿದ್ದೆ.   2014ರಿಂ

Blog number 1623. ಪುಸ್ತಕ ಮುದ್ರಣ ಮಾರಾಟ ಈಗ ಸುಲಭ ಮತ್ತು ಲಾಭದಾಯಕವಾಗಲಿದೆ ಹೊಸ ಮುದ್ರಣ ತಂತ್ರಜ್ಞಾನದಲ್ಲಿ ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಿಂದ.

#ನಿಮ್ಮ_ಪುಸ್ತಕ_ಮುದ್ರಣ_ಈಗ_ಸುಲಭ_ಮತ್ತು_ಲಾಭದಾಯಿಕ #ಬರಹಗಾರರಿಗೆ_ದೊಡ್ಡ_ಸವಾಲು #ಬರೆದ_ಪುಸ್ತಕ_ಪ್ರಕಟ_ಮಾಡುವುದು. #ಇದಕ್ಕೆ_ಪರಿಹಾರವಿದೆ_ನವೀನ_ಮುದ್ರಣ_ತಂತ್ರಜ್ಞಾನ #ಅಂತರಾಷ್ಟ್ರೀಯ_ಪಬ್ಲಿಷರಗಳಿಂದ  #ಇಂಗ್ಲೀಷ್_ಸೇರಿ_ಎಲ್ಲಾ_ಭಾರತೀಯ_ಭಾಷೆಗಳಲ್ಲಿ_ಸಾಧ್ಯವಿದೆ.     ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಪ್ರತಿಷ್ಟಿತ ಪ್ರಕಾಶನಗಳು ಮುದ್ರಿಸಿ ಮಾರಾಟ ಮಾಡಲು ಮುಂದೆ ಬರುತ್ತದೆ ಮತ್ತು ಲಾಭಾಂಶವನ್ನು ಬರಹಗಾರರ ಖಾತೆಗೆ ಜಮಾ ಮಾಡುತ್ತದೆ.   ಆದರೆ ಹೊಸ ಬರಹಗಾರರಿಗೆ ಪ್ರಾರಂಭದಲ್ಲೇ ಈ ಅವಕಾಶ ಸಿಗಲು ಸಾಧ್ಯವಿಲ್ಲ ಆದ್ದರಿಂದ ಅನೇಕ ಬರಹಗಾರರ ಪುಸ್ತಕ ಮುದ್ರಿಸಲು ಸಾಧ್ಯವಾಗುವುದಿಲ್ಲ.    ಆದ್ದರಿಂದ ಬರಹಗಾರರೇ ಪುಸ್ತಕ ಮುದ್ರಿಸಿ ಮಾರಿಕೊಳ್ಳಬೇಕು ಅಥವ ಸರಕಾರದ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜುದಾರರ ಮೊರೆ ಹೋಗಬೇಕು.   200 ರಿಂದ 250 ಪುಟಗಳ ಪುಸ್ತಕ ಬರಹಗಾರರೇ ಪ್ರಕಟಿಸಲು 70 ರಿಂದ  80 ಸಾವಿರ ಹಣ ವಿನಿಯೋಗಿಸ ಬೇಕು ಮತ್ತು ಕನಿಷ್ಟ 1000 ಪ್ರತಿ ಮುದ್ರಿಸ ಬೇಕು.    ನಂತರ ಮುದ್ರಿತ ಈ ಪುಸ್ತಕ ಮಾರಾಟದ ಜವಾಬ್ದಾರಿ ಬರಹಗಾರರದ್ದೆ.    ಅಥವ ಸರಕಾರಿ ಗ್ರಂಥಾಲಯಗಳಿಗೆ ಪ್ರತಿ ವರ್ಷ ಪುಸ್ತಕ ಮಾರಾಟ ಮಾಡುವ ಪ್ರಕಾಶಕರನ್ನ ಹಿಡಿಯಬೇಕು ಇವರು ಒಂದು ಸಾವಿರ ಪ್ರತಿ ಮುದ್ರಿಸಿ ಅದರಲ್ಲಿ 100 ಪ್ರತಿ ಬರಹಗಾರರಿಗೆ ಸಂಭಾವನೆ ಅಥವ ಗೌರವ ಪ್ರತಿ ಆಗಿ ನೀಡಿ ಉಳಿದ 900 ಪ್ರತಿ ಅವರು ರಾಜ್ಯ ಗ್ರಂಥಾಲಯಗಳಿಗೆ ಮಾರಿಕೊಳ್ಳುತ್ತಾರೆ ಇದ

Blog number 1622. ಇರುವೆ ಹುತ್ತ ನೋಡಿ, ಇರುವೆಗಳಲ್ಲಿರುವ ಹವಾಮಾನಕ್ಕೆ ತಕ್ಕಂತೆ ತಮ್ಮ ಮನೆ ನಿರ್ಮಿಸುವ ಕೌಶಲ್ಯ

ANTS ARE GOOD ARCHETIC? # ಇರುವೆಗಳು ಉತ್ತಮ ವಿನ್ಯಾಸ ಇಂಜಿನಿಯರ್ಗಳೆ?#      ಇಂತಹದೊ೦ದು ಅನುಮಾನ ಬರಲು ಈ ಚಿತ್ರ ನೋಡಿ ನಿನ್ನೆ ನಮ್ಮ ರಬ್ಬರ್ ತೋಟದಲ್ಲಿ ಇದನ್ನ ನೋಡಿದೆ, ನಾಲ್ಕು ಭಾಗದ ಗೂಡು ಕೋಟೆಯOತೆ ಇದೆ, ಅವುಗಳ ಭಾಗಿಲುಗಳಲ್ಲಿ ಭಿನ್ನತೆ ಇದೆ ಅದಕ್ಕಿ೦ತ ಮಧ್ಯದಲ್ಲಿ ಚಿಗುರಿದ ಗಿಡ ಒಂದನ್ನ ಹಾಗೆ ಉಳಿಸಿಕೊಂಡಿರುವುದು ಅವುಗಳಿಗೂ ಇರುವ ಸೌ೦ದಯ೯ ಪ್ರಜ್ನೆಗೆ ಸಾಕ್ಷಿ.

Blog number 1621. ಶಿವಮೊಗ್ಗ ಜಿಲ್ಲಾ ರಬ್ಬರ್ ಬೆಳೆಗಾರರಿಗೆ ದಿನಾಂಕ 24 ಜೂನ್ 2020 ರಲ್ಲಿ ಮಾಡಿದ ಮನವಿ, ರಬ್ಬರ್ ಬೆಲೆ ಏರಿಕೆ ಆಯಿತಾ?

#ಶಿವಮೊಗ್ಗ_ಜಿಲ್ಲಾ_ರಬ್ಬರ್_ಬೆಳೆಗಾರರ_ಗಮನಕ್ಕಾಗಿ     ಕೇಂದ್ರ ಸಕಾ೯ರದ ರಬ್ಬರ್ ಬೋಡ್೯ ಮಲೆನಾಡು ಪ್ರದೇಶದಲ್ಲಿ ರಬ್ಬರ್ ಇಳುವರಿ ಹೆಚ್ಚು ಬರುತ್ತದೆ ಎಂದು ಸಾಗರ ತಾಲ್ಲುಕಿನ  ಆನಂದಪುರ೦,ಇಡುವಳ್ಳಿ ಮತ್ತು ನಾಗವಳ್ಳಿಯಲ್ಲಿ ಮುಂಬಾಳಿನ ಗೋಕುಲ್ ಪಾರಂ ಪಾದರ್ ಜೋಸ್ ರಬ್ಬರ್ ಬೋಡ್೯ ಜೊತೆ ಬೆಳೆಸಿದ ಪ್ರಾತ್ಯಕ್ಷಿಕಾ ರಬ್ಬರ್ ತೋಟದ ಸಂಶೋದನೆಯಿಂದ ಪುರಸ್ಕರಿಸಿ ಈ ಪ್ರದೇಶದಲ್ಲಿ ರೈತರು ರಬ್ಬರ್ ಬೆಳೆಸಲು ಪ್ರೋತ್ಸಾಹಿಸಿ, ರಬ್ಬರ್ ಬೋಡ್೯ನ ಪ್ರಾದೇಶಿಕ ಕಛೇರಿ ಸಾಗರದಲ್ಲಿ ಪ್ರಾರ೦ಬಿಸಿತ್ತು.    ರೈತರಿಗೆ ಬೇಕಾದ ಮಾಹಿತಿ,ಸಹಾಯಧನಗಳನ್ನ ಕೊಡಿಸಲು ಸಹಾಯ ಪ್ರಾರ೦ಬಿಸಿದ್ದರಿಂದ ಮತ್ತು ಈ ಬೆಳೆಗೆ ನೀರಾವರಿ ಅವಶ್ಯವಿಲ್ಲ ಮಳೆ ನೀರಿನ ಆಶ್ರಯದಲ್ಲಿ ರಬ್ಬರ್ ಬೆಳೆ ಬರುವುದರಿಂದ ಮತ್ತು ರಬ್ಬರ್ ದಾರಣೆ ಹೆಚ್ಚು ಆ ಸಂದಭ೯ದಲ್ಲಿ ಇದ್ದಿದ್ದರಿಂದ ಮಲೆನಾಡಿನ ರೈತರು ಹೆಚ್ಚು ಹೆಚ್ಚು ತಮ್ಮ ಖುಷ್ಕಿ ಜಮೀನಿನಲ್ಲಿ  ರಬ್ಬರ್ ಬೆಳೆಸಿದ್ದಾರೆ.     ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಟನ್ ರಬ್ಬರ್ ಗೆ ಬೇಡಿಕೆ ಇದೆ ಆದರೆ 7 ಲಕ್ಷ ಟನ್ ಮಾತ್ರ ರೈತರು ಬೆಳೆಯುತ್ತಾರೆ೦ಬ ಮಾಹಿತಿ ಇದ್ದರೂ ಕಳೆದ 10 ವರ್ಷದಿಂದ ರಬ್ಬರ್ ಖರೀದಿ ಬೆಲೆ 100 ರಿಂದ 150 ರ ಒಳಗೆ ಉಳಿದು ಬಿಟ್ಟಿದ್ದು ಮಾತ್ರ ಸೋಜಿಗ ಇದರಿ೦ದ ಮಲೆನಾಡಿನ ರಬ್ಬರ್ ಬೆಳೆಗಾರರು ರಬ್ಬರ್ ಬೆಳೆಯ ಮೇಲೆ ವಿಶ್ವಾಸ ಕಳೆದು ಕೊಂಡು ರಬ್ಬರ್ ಬೆಳೆ ತೆಗೆದು ಅಡಿಕೆ ತೋಟ ಮಾಡಲು ಪ್ರಾರಂಬಿಸಿದರು.  

Blog number 1620. ಕೆಳದಿ ಇತಿಹಾಸಕ್ತರು ಓದ ಬೇಕಾದ ಪುಸ್ತರ ಪುತ್ತೂರು ಅನಂತರಾಜ ಗೌಡರು ಬರೆದಿರುವ ಗೌಡ ಪರಂಪರೆ 10 ಕುಟುಂಬ 18 ಗೋತ್ರ.

#ಪುತ್ತೂರು_ಅನಂತರಾಜಗೌಡರ_ಈ_ಪುಸ್ತಕ #ಗೌಡ_ಪರಂಪರೆ_10_ಕುಟುಂಬ_18_ಗೋತ್ರ #ಸಾಹಿತಿ_ವಿಮರ್ಶಕರಾದ_ಅರವಿಂದಚೊಕ್ಕಾಡಿ_ವಿಮರ್ಷೆಯಲ್ಲಿ #ಗೌಡ_ಪರಂಪರೆಯ_ಪ್ರಾರ್ಥನೆಯಲ್ಲಿ_ಅರಮನೆ_ಇಕ್ಕೇರಿ #ಗುರುಮನೆ_ಶೃಂಗೇರಿ #ಅನಂತರಾಜರ_ಈ_ಪುಸ್ತಕದಲ್ಲಿ_ಕೆಳದಿ_ವಂಶಸ್ತರ_ಮೂಲದ_ಬಗ್ಗೆ_ಕೂಡ_ದಾಖಲಿಸಿದ್ದಾರೆ. #ಇದು_ಕೆಳದಿ_ಇತಿಹಾಸಕ್ತರು_ಓದ_ಬೇಕಾದ_ಪುಸ್ತಕ.  ಅರವಿಂದ ಚೊಕ್ಕಾಡಿ ಅವರ ಪೇಸ್ ಬುಕ್ ನಿಂದ      ಪುತ್ತೂರು ಅನಂತರಾಜ ಗೌಡ ಅವರು ಬರೆದಿರುವ ' ಗೌಡ ಪರಂಪರೆ 10 ಕುಟುಂಬ 18 ಗೋತ್ರ' ಪುಸ್ತಕವನ್ನು ಕೇವಲ ಕುತೂಹಲದಿಂದ ಓದಿದೆ. ನಾನು ಜನಾಂಗೀಯ ಅಧ್ಯಯನಕಾರನಾಗಲಿ, ಜನಪದ ಅಧ್ಯಯನಕಾರನಾಗಲಿ ಅಲ್ಲದಿರುವುದರಿಂದ ಇದು ಕೇವಲ ಆಸಕ್ತಿ ಮತ್ತು ಕುತೂಹಲದ ಓದೇ ಹೊರತು ಅಧ್ಯಯನ ಉದ್ದೇಶದ ಓದಲ್ಲ.  ಇಲ್ಲಿರುವ ಹಲವು ವಿಷಯಗಳು ಬೇರೆ ಬೇರೆ ಸಂದರ್ಭದಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ಸಂಗತಿಗಳಾಗಿವೆ. ಅಂತಹ ಸಂಗತಿಗಳನ್ನು ಮತ್ತು ಇದು ವರೆಗೆ ಹೆಚ್ಚು ಚರ್ಚೆಗೊಳಗಾಗಿರದ ಸಂಗತಿಗಳನ್ನು ಕ್ರೋಢೀಕರಿಸಿ ಸಮುದಾಯದ ನೆಲೆಗಟ್ಟಿನಲ್ಲಿ ಅನಂತರಾಜ ಗೌಡರು ವಿಸ್ತೃತ ಚರ್ಚೆ ನಡೆಸಿದ್ದಾರೆ. ಗೌಡ ಸಮುದಾಯದ ವಲಸೆ ಮತ್ತು ಅದರ ಹಿಂದಿರುವ ಮತಧಾರ್ಮಿಕ ಸಂಗತಿಗಳ ಅಭಿಪ್ರೇರಣೆಯ ವಿಷಯಗಳು ಸ್ವಾರಸ್ಯಕರವಾಗಿದೆ. ಇತಿಹಾಸದ ಉದ್ದಕ್ಕೂ ಜಾತ್ಯಂತರ, ಮತಾಂತರ ನಡೆದ ಬಗ್ಗೆ, ಹಿಮ್ಮರಳುವಿಕೆ ಆದ ಬಗ್ಗೆ ಹೇಳುವ ಕೃತಿಯು ವ್ಯವಸ್ಥೆ ಮತ್ತು ಮಾನವ ಸ್ವಭಾವದ ಚಲನಶೀಲತೆಯ

Blog number 1619. ಶಾಲಾ ಬಸ್ಸುಗಳ ಬಗ್ಗೆ ಯೋಚಿಸಿ

#ಶಾಲಾ_ಬಸ್ಸುಗಳ_ಬಗ್ಗೆ_ಸರ್ಕಾರ_ಗಮನ_ಹರಿಸಬಾರದೇಕೆ. ಶಾಲೆಗಳಲ್ಲಿ ಮಕ್ಕಳನ್ನ ಕರೆತರಲು ಶುಲ್ಕ ನಿಗದಿ ಮಾಡಿರುತ್ತಾರೆ ವಾಹನ ಮಾತ್ರ ರಿಕ್ಷಾ ಅಥವ ಮಾರುತಿ, ಇದರಲ್ಲಿ ಕೋಳಿ ತು೦ಬಿದ ಹಾಗೆ, ಇದಕ್ಕೆ ಚಾಲಕರು ಎಂತವರೆಂದರೆ ಅನನುಭವಿ, ಸರಿಯಾಗಿ ಕೆಲಸ ನಿವ೯ಹಿಸದ ಕಡಿಮೆ ವೇತನಕ್ಕೆ ಬರುವವರು. ಸಂಬ oದ ಪಟ್ಟ ಶಾಲೆಗಳು ತಮ್ಮದೇ ಸ್ವ೦ತ ಶಾಲಾ ಬಸ್ಸುಗಳನ್ನ ಬ್ಯಾಂಕ್ ಸಾಲದಿಂದ ನಿಯೋಜಿಸಬಹುದು, ಸ್ಥಳಿಯ ಬ್ಯಾಂಕ್ ಅಧಿಕಾರಿಗಳು ಮುಗ್ಡ ಮಕ್ಕಳಿಗಾಗಿ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಬೇಟಿ ನೀಡಿ ಶಾಲಾ ಬಸ್ಸಿಗೆ ಸುಲಭ ಸಾಲ ಸೌಲಭ್ಯ ವಿವರಿಸಿದರೆ ದೊಡ್ಡ ಉಪಕಾರ.  ಕಾನೂನು, ಅಧಿಕಾರಿಗಳಿಂದ ಏನೂ ಸಾಧ್ಯವಿಲ್ಲ. ನಮ್ಮ ಊರಲ್ಲಿ ಪೇಲಾಗುವ ಮಕ್ಕಳಿಗಾಗಿ ಶಾಲೆ ಪ್ರಾರಂಬಿಸಲು ಊರ ಹೊರಗಿನ ಜಮೀನಿನಲ್ಲಿ ಅನುಮತಿಗೆ ಆಜಿ೯ಸಲ್ಲಿಸಿದರೆ ಖಾಸಗಿ ಶಾಲೆಗಳಿಂದ ಹಣ ತಿಂದು ಅನುಮತಿ ಕೊಡಲೇ ಇಲ್ಲ. ಹಣದ ಲೂಟಿ ಹೊಡೆಯಲು ಶಿಕ್ಷಣ ಇಲಾಖೆಯಲ್ಲಿ ಹೆಗ್ಗಣದ ಹಿಂಡೇ ಇದೆ. ಕೆಲಸ ಮಾಡದ ಸೊಮಾರಿ ಶಿಕ್ಷಕರು ನಿಯೋಜನೆ ಮೇಲೆ ಬಿಇಓ ಕಚೇರಿಯಲ್ಲಿ ದಲ್ಲಾಳಿ ಕೆಲಸ ಮಾಡ್ತಾ ಇದ್ದಾರೆ.ಇನ್ನು ಕೆಲವರು ಸಾಹಿತ್ಯ ಪರಿಷತ , ನೌಕರರ ಸಂಘಗಳ ಪದಾಧಿಕಾರಿಗಳಾಗಿ ತಮ್ಮ ಮೂಲ ಶಿಕ್ಷಕ ವೃತ್ತಿ ಮರತೇ .ಬಿಟ್ಟಿದ್ದಾರೆ, ಪ್ರತಿ ನಿತ್ಯ ಆಡಳಿತರೂಡ ರಾಜಕಾರಣಿಗಳಿಗೆ ಚಾಮರ ಬೀಸುತ್ತಿದ್ದಾರೆ. ಅವರ ನಿತ್ಯ ಕೆಲಸ ಪತ್ರಿಕಾಗೋಷ್ಟಿ ಹಾಗಂತ ಒಂದೇ ಒಂದು ಕನ್ನಡ ಪತ್ರಿಕೆ ಖರೀದಿಸುವುದಿಲ್ಲ, ಅ

Blog number 1618. ಪರಿಸರ ಪ್ರೇಮಿ ಬೆಳ್ಳೂರು ನಾಗರಾಜ್ ಈ ಗೊಜ ಮೊಟ್ಟಿಯ ಕಪ್ಪೆಯ ಮಾಹಿತಿ ನೀಡಿದ್ದಾರೆ ನೋಡಿ.

#ನಿನ್ನೆಯ_ಗೊಜಮೊಟ್ಟೆಯ_ಕಪ್ಪೆಗಳ_ಬಗ್ಗೆ_ಮಾಹಿತಿ_ಕೇಳಿದ್ದೆ #ಪರಿಸರ_ಕಾಳಜಿಯ_ಬೆಳ್ಳೂರುನಾಗರಾಜ್_ಈ_ಕಪ್ಪೆಗಳ_ಬಗ್ಗೆ_ಮಾಹಿತಿ_ನೀಡಿದ್ದಾರೆ. #ಈ_ಕಪ್ಪೆಯ_ವೈಜ್ಞಾನಿಕ_ಹೆಸರು_Clinotarsus_curtipes    #ದೇಶಿ_ಹೆಸರು_ಮಲಬಾರ್_ಪ್ರಾಗ್_ಬೈ_ಕಲರ್ಡ್_ಪ್ರಾಗ್ #ಪರಿಸರ_ಪ್ರೇಮಿ_ಬೆಳ್ಳೂರು_ನಾಗರಾಜರಿಗೆ_ದನ್ಯವಾದಗಳು. https://youtu.be/X246K0Y-GHE #ಬೆಳ್ಳೂರು_ನಾಗರಾಜರು_ನೀಡಿದ_ಮಾಹಿತಿ_ಈ_ಕೆಳಗಿನದ್ದು_ಓದಿ.          ಒಂದೊಂದು ಜಾತಿ ಕಪ್ಪೆಗಳದ್ದು ಒಂದೊಂದು ರೀತಿಯ ಜೀವನ ಶೈಲಿ ಇರುತ್ತದೆ, ಹಲವು ಜಾತಿ ಕಪ್ಪೆಗಳು ಗೊದಮೊಟ್ಟೆಯಿಂದ ಮರಿ ಕಪ್ಪೆಗಳಾಗುತ್ತವೆ, ಕೆಲವು ಜಾತಿಗಳಲ್ಲಿ ಗೊದಮೊಟ್ಟೆಯ ಹಂತವೇ ಇಲ್ಲದೆ ಮೊಟ್ಟೆಗಳಿಂದ ನೇರವಾಗಿ ಮರಿ ಕಪ್ಪೆಗಳಾಗುತ್ತವೆ, ಇನ್ನು ಕೆಲವು ಗೊದಮೊಟ್ಟೆಗಳು 1-2 ತಿಂಗಳಲ್ಲಿ ಮರಿಕಪ್ಪೆಗಳಾಗುತ್ತವೆ. ವೀಡಿಯೋದಲ್ಲಿರುವ ಕಪ್ಪೆಗಳಿಗೆ     bicolored frog ಅಥವಾ  Malabar frog ಎನ್ನುತ್ತಾರೆ, ಕನ್ನಡದಲ್ಲಿ ದ್ವಿವರ್ಣ ಕಪ್ಪೆ ಎನ್ನಬಹುದು. ಈ ಕಪ್ಪೆಗಳು ಗೊದಮೊಟ್ಟೆ ಹಂತದಲ್ಲೇ 8-10 ತಿಂಗಳು ಕಳೆಯುತ್ತವೆ, ಕೆರೆ ಅಥವಾ ಜಲಾಶಯಗಳಲ್ಲಿ ಕಪ್ಪನೆಯ ದೊಡ್ಡ  ಗೊದಮೊಟ್ಟೆಯ ಹಿಂಡುಗಳನ್ನು ನೋಡಿರಬಹುದು, ಇವು ಗೊದಮೊಟ್ಟೆ ಹಂತದಲ್ಲಿ 8-10 ತಿಂಗಳು ಕಳೆಯುವುದರಿಂದ ಇವುಗಳು ಬದುಕುಳಿಯಲು ವರ್ಷ ಪೂರ್ತಿ ನೀರಿರುವ ಜಲಮೂಲ ಇರಲೇಬೇಕು. ಮುಂಗಾರು ಶುರುವ

Blog number 1618. ಜೋಳದ ಕಡಕ್ ರೊಟ್ಟಿ ಭಾರತೀಯ ಮೂಲದ ನೈಸರ್ಗಿಕ ಬ್ರೆಡ್

#ಜೋಳದ_ಕಡಕ್_ರೊಟ್ಟಿ #ಭಾರತೀಯ_ಮೂಲದ_ನೈಸರ್ಗಿಕ_ಪದಾರ್ಥದ_ಬ್ರೆಡ್  #ಮಲೆನಾಡಿನ_ಪತ್ರೋಡೆ_ಗಸಿ_ಕಡಕ್_ಜೋಳದ_ರೊಟ್ಟಿ_ಚಟ್ನಿಪುಡಿ_ಮೊಸರು_ಇವತ್ತಿನ_ಉಪಹಾರ   ನಾನು ಹುಬ್ಬಳ್ಳಿಗೆ ಹೋದರೆ ಬಾಬು ರಾವ್ ಪೇಡಾ, ಕಡಕ್ ರೊಟ್ಟಿ ಖಾಯಂ ತರುವುದು ಪದ್ದತಿ.   ಜೋಳದಿಂದ ತಯಾರಿಸುವ ಈ ಕಡಕ್ ರೊಟ್ಟಿಗೆ 6ರಿಂದ 9 ತಿಂಗಳು ಹಾಳಾಗದೆ ಉಳಿಯುವ ಶೆಲ್ಪ್ ಲೈಪ್ ಇರುವುದರಿಂದ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಜೋಳದ ಕಡಕ್ ರೊಟ್ಟಿ ಪ್ರತಿ ಮನೆಯಲ್ಲು ಸಂಗ್ರಹಿಸಿಡುತ್ತಾರೆ.    ಸಿರಿಧಾನ್ಯ (ಮಿಲೆಟ್ ) ಬಿಳಿ ಜೋಳದಲ್ಲಿರುವ ಪೌಷ್ಟಿಕಾಂಶಗಳಿರುವ ಈ ರೊಟ್ಟಿ ಬಳಕೆಯಿಂದ ಜೀರ್ಣ ವ್ಯವಸ್ಥೆ ಸುದಾರಿಸುತ್ತದೆ, ಬ್ಲಡ್ ಶುಗರ್ ಕಡಿಮೆ ಮಾಡುತ್ತದೆ, ರಕ್ತದ ಒತ್ತಡ ನಿಯಂತ್ರಿಸುತ್ತದೆ ಮತ್ತು ತೂಕ ಇಳಿಯಲು ಸಹಕಾರಿ ಅನ್ನುತ್ತಾರೆ.   ಭಾರತೀಯ ಮೂಲದ ಈ ಜೋಳದ ಕಡಕ್ ರೊಟ್ಟಿಯೂ ಸೇರಿ ಭಾರತದಲ್ಲಿ 150 ವಿದದ ರೊಟ್ಟಿಗಳು ಆಯಾ ಪ್ರದೇಶದ ಬಳಕೆಯಲ್ಲಿದೆ.   ಬೆಳಿಗ್ಗೆ ಹೊಲಕ್ಕೆ ಹೋಗಿ ಸಂಜೆ ಬರುವವರಿಗೆ, ತಿಂಗಳಗಟ್ಟಲೆ ಪ್ರಯಾಣದಲ್ಲಿರುವವರಿಗೆ ಈ ಕಡಕ್ ರೊಟ್ಟಿ ಆರೋಗ್ಯಕರ ಆಹಾರ, ಈ ಕಡಕ್ ರೊಟ್ಟಿಗೆ ಚಟ್ನಿ ಪುಡಿ, ಮೊಸರು, ತರಕಾರಿ ಪಲ್ಯಗಳ ಜೊತೆ ಮತ್ತು ಮಾಂಸಹಾರಿಗಳಿಗೆ ಮಾಂಸದ ಖಾದ್ಯದ ಜೊತೆ ಈ ಕಡಕ್ ರೊಟ್ಟಿ ಅತ್ಯುತ್ತಮ ಕಾಂಬಿನೇಷನ್ ಆಗುತ್ತದೆ.   ಹುಬ್ಬಳ್ಳಿಯಿಂದ ಜೋಳದ ಕಡಕ್ ರೊಟ್ಟಿ ಮಾಡಿ ವಿದೇಶಕ್ಕೆ ರಪ್ತು ಮಾಡುವ ಸಂಸ್ಥೆಯಿಂದ ತಂದಿದ್ದ ಸುಮಾ

Blog number 1617. ನಮ್ಮ ಮಲೆನಾಡಿನ ಕೆರೆ ಕಟ್ಟೆಯ ಗೊಜಮೊಟ್ಟೆಯ ಈ ಕಪ್ಪೆಯ ವೈಜ್ಞಾನಿಕ ಹೆಸರೇನು?

#ಮುಂಗಾರು_ಮಳೆ_ಪ್ರಾರಂಭದ_ಈ_ಕಪ್ಪೆ https://youtu.be/I4_DORW7J9k https://youtube.com/shorts/Db-F97P9D7Y?feature=share #ಕೆರೆ_ಕಟ್ಟೆಯಲ್ಲಿ_ಗುಂಪು_ಗುಂಪಾದ_ಗೊಜಮೊಟ್ಟೆಯಿಂದ_ಕಪ್ಪೆ #ಈ_ಕಪ್ಪೆ_ಜಾಸ್ತಿ_ಆದರೆ_ಮಳೆ_ಜಾಸ್ತಿ_ಅನ್ನುವ_ನಂಬಿಕೆ #ಕಳೆದ_ವರ್ಷಗಳಲ್ಲಿ_ಮಳೆ_ಜಾಸ್ತಿ_ಆದಾಗ_ಈ_ಕಪ್ಪೆ_ಇಲ್ಲವೇ_ಇಲ್ಲ #ಈ_ವಷ೯_ಮುಂಗಾರು_ವಿಳಂಬದಲ್ಲಿ_ಈ_ಕಪ್ಪೆ_ಜಾಸ್ತಿ_ಇದೆ_ಏಕೆ?   ಫೆಬ್ರುವರಿ ಕೊನೆಯಿಂದ ಮುಂಗಾರು ಪ್ರಾರಂಭದ ಕಾಲದವರೆಗೆ ನಮ್ಮ ಊರ ಸುತ್ತಮುತ್ತದ ಕೆರೆ ಕಟ್ಟೆಗಳಲ್ಲಿ ಈ  ಕಪ್ಪೆ ಲಾವಾ೯ಗಳು ಕಪ್ಪಾದ ಬಣ್ಣದ ಗುಂಪು ಗುಂಪಾಗಿ ಕಾಣಿಸುತ್ತದೆ ಇದನ್ನು ಸ್ಥಳಿಯರು ಗೊಜ ಮೊಟ್ಟೆ ಅಂತ ಕರೆಯುತ್ತಾರೆ.   ಮುಂಗಾರು ಭೂಮಿಯ ಸ್ಪರ್ಶ ಮಾಡಿದಾಗ ಈ ಗೊಜ ಮೊಟ್ಟೆ ಎಂಬ ಲಾರ್ವಾಗಳು ಕಪ್ಪೆ ಮರಿಗಳಾಗಿ ನೀರಿನಿಂದ ಗುಂಪು ಗುಂಪಾಗಿ ಹೊರ ಬಂದು ಕೆರೆ ಕಟ್ಟೆಯಿಂದ ನೂರು ಅಥವ ಇನ್ನೂರು ಮೀಟರ್ ಕುಪ್ಪಳಿಸಿ ಮರ ಗಿಡದ ನೆರಳಲ್ಲಿ ಸೇರುತ್ತದೆ.   ಕಾಲು ಹೊಟ್ಟೆ ಕಪ್ಪಾಗಿರುವ ಈ ಕಪ್ಪೆಗಳ ಬೆನ್ನು ಮಾತ್ರ ಹಳದಿ ಇದು ಗಿಡ ಮರಗಳ ಬುಡದಲ್ಲಿ ಹೆಚ್ಚು ಇರುವುದರಿಂದ ಮರ ಕಪ್ಪೆ ಅಂತಲೂ ಕರೆಯುತ್ತಾರೆ ಆದರೆ ಇದಕ್ಕೆ ವೈಜ್ಞಾನಿಕವಾದ ಹೆಸರು ಗೊತ್ತಿರುವವರು ತಿಳಿಸಬಹುದು.    ಈ ಕಪ್ಪೆ ಕಳೆದ ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ಆಗಿತ್ತು, ಗೊಜಮೊಟ್ಟೆಗಳೂ ಇರಲೇ ಇಲ್ಲ ಆದರೆ ಮಳೆ ಪ್ರಮಾಣ ಹೆಚ್ಚಾಗಿತ್ತು.   ಸ್ಥಳಿಯರಲ್ಲಿ

Blog number 1616.ಶರಾವತಿ ನದಿ ಮಾರಾಟಕ್ಕೆ ಇದೆ.(21- ಜೂನ್-2019)

* ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ಮಾರಾಟಕ್ಕೆ ಇದೆ  1.ಜೋಗ ಜಲಪಾತ ದುಬೈ ಶೆಟ್ಟರಿಗೆ ಮಾರಾಟದ ಒಂದು ಹಂತದ ಮಾತುಕತೆ ನಡೆದಿದೆ. 2. ಹೆಚ್ಚುವರಿ ಜಲ ವಿದ್ಯುತ್ ಯೋಜನೆಗಾಗಿ ಅನೇಕರು ಪ್ರಯತ್ನಿಸುತ್ತಿದ್ದಾರೆ. 3. ಇಡೀ ರಾಜ್ಯಕ್ಕೆ ವಿದ್ಯುತ್ ಗಾಗಿ ನವೀಕರಣ, ದುರಸ್ತಿ ಅಂತ ಹಣದ ವಹಿವಾಟು ವಷ೯೦ಪ್ರತಿ ವಿನಿಯೋಗ ಆಗುತ್ತಿದೆ. 4. ಶರಾವತಿ ನದಿ ದಂಡೆಯ ಮರಳು ಮತ್ತು ಅದರ ಮಾಫಿಯಾ ಪ್ರತಿವಷ೯ ಹಲವು ಕೋಟಿ ಮೌಲ್ಯದ್ದು. 5. ಈಗ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 12 ಸಾವಿರ ಕೋಟಿಯ ಯೋಜನೆ.

Blog number 1615.ಕೋಕೋ ಕೋಲಾ ಪೆಪ್ಸಿ ಹಠಾವೋ ಭಾರತ್ ದೇಶ್ ಬಚಾವೋ ಘೋಷಣೆ ಸತತ 10ವರ್ಷ ಒಂದು ದಿನವೂ ತಪ್ಪದೆ ನಿತ್ಯ ದರಣಿ ಮೆರವಣಿಗೆ ಮಾಡಿ ದೆಹಲಿಯ ಸಂಸತ್ ಮಾರ್ಗದ ಪೋಲಿಸ್ ಠಾಣೆಯಲ್ಲಿ ಬಂದನಕ್ಕೆ ಒಳಗಾಗುತ್ತಿದ್ದ ಕುಂದಾಪುರದ ಅನಿಲ್ ಪ್ರಸಾದ್ ಹೆಗ್ಡೆ.

#ಇವರು_ಯಾರು_ಗೊತ್ತಾ? #ಬಿಹಾರದಿಂದ_ಸಂಸದರು. #ಇವರು_ಕುಂದಾಪುರದವರು #ಜಾರ್ಜ್_ಫರ್ನಾಂಡೀಸರ_ನಂತರ_ಇನ್ನೊಬ್ಬ_ಕರಾವಳಿ_ಕನ್ನಡಿಗ_ಬಿಹಾರದಿಂದ_ಸಂಸತಗೆ #ಕೊಕಾ_ಕೋಲಾ_ಪೆಪ್ಸಿ_ಹಠಾವೋ #ಭಾರತ್_ದೇಶ್_ಬಚಾವೋ #ಸತತ_ಹತ್ತು_ವರ್ಪ_ದೆಹಲಿಯಲ್ಲಿ_ನಿತ್ಯ_ಧರಣಿ_ಬಂದನ #ನಾನು_ಇವರೊಡನೆ_ಎರೆಡು_ಸಾರಿ_ಭಾಗವಹಿಸಿದ್ದೆ.     ಜಾಜ್೯ ಪನಾ೯೦ಡಿಸರ ನಿಕಟವತಿ೯, ಹಾಲಿ ಬಿಹಾರದ ನಿತೀಶರ ಜೊತೆಗಾರರು ಮತ್ತು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಆದ ಸಂಸದರು. 10 ವಷ೯ ನಿರ೦ತರವಾಗಿ ಒಂದು ದಿನವೂ ತಪ್ಪದೆ ಕೋಕೊಕೋಲಾ, ಪೆಪ್ಸಿ ವಿರುದ್ಧ ಪ್ರತಿ ದಿನ ಸಂಸದ ಭವನದ ಎದರು ದರಣಿ ಮಾಡಿ ಪ್ರತಿದಿನ ಸಂಸದ ಮಾಗ್೯ದ ಪೋಲಿಸ್ ಠಾಣೆಯಲ್ಲಿ ಬಂದನ ಬಿಡುಗಡೆ ಆಗುತ್ತಿದ್ದರು.     ಶ್ರೀ ಅನಿಲ್ ಪ್ರಸಾದ್ ಹೆಗ್ಡೆ ನಮ್ಮ ಕು೦ದಾಪುರದವರು, ಕನ್ನಡಿಗರು.     ಇವರು ನನ್ನ ಗೆಳೆಯರು ದೆಹಲಿಯಲ್ಲಿ ಎರಡು ಬಾರಿ ನಾನು ಇವರ ಚಳವಳಿಯಲ್ಲಿ ಭಾಗವಹಿಸಿ ಸಂಸದ ಭವನ ಮಾಗ್೯ದ ಫೋಲಿಸ್ ಠಾಾಣೆಯಲ್ಲಿ ಬಂದನಕ್ಕೆ ಒಳಗಾಗಿದ್ದು ಒಂದು ಸವಿ ನೆನಪು.    ಜಾರ್ಜ್ ಪರ್ನಾಂಡಿಸರ ಸಮತಾ ಪಾರ್ಟಿಯಲ್ಲಿ ನಂತರ ಅದು ಜನತಾ ದಳ U ಆದಾಗ ನಾನು ಕರ್ನಾಟಕ ರಾಜ್ಯದ ಪ್ರದಾನ ಕಾಯ೯ದರ್ಶಿ ಆದ್ದರಿಂದ ಈ ಹೋರಾಟದಲ್ಲಿ ಭಾಗವಹಿಸಲು ಅವಕಾಶವಾಗಿತ್ತು.    ಕರಾವಳಿಯ ಮಂಗಳೂರಿಂದ - ಮುಂಬೈ ಮತ್ತು ಬಿಹಾರದಿಂದ ಸಂಸದರಾಗಿ ಮಂತ್ರಿಗಳಾಗಿದ್ದ ಜಾರ್ಜ್ ನಂತರ ಕರಾವಳಿ ಕುಂದಾಪುರದ ಅನಿಲ್ ಪ್ರಸಾದ್ ಹೆಗ್ಡೆ ಬಿಹಾರದಿಂದ ರ

Blog number 1614. ಕನ್ನಡದಲ್ಲಿ ಐಎಎಸ್ ಮಾಡಿದ ಮೊದಲ ವ್ಯಕ್ತಿ ಕೆ.ಶಿವರಾಂ.

ಕೆ.ಶಿವರಾಂ ಕನ್ನಡದಲ್ಲಿ ಐಎಎಸ್ ಮಾಡಿದ ಮೊದಲಿಗರು. *20- ಜೂನ್ -2018ರಲ್ಲಿ ನನ್ನ ಅತಿಥಿಗಳು. ಇವರ ಜೀವನ ಒಂದು ಹೊರಾಟ ಯಾಕೆಂದರೆ ಇವರ ಬಾಲ್ಯ ಅತ್ಯಂತ ಬಡತನದ್ದು, ದಲಿತ ಕುಟುಂಬದಲ್ಲಿ ಜನಿಸಿದ ಇವರು ಎಲ್ಲಾ ಸವಾಲುಗಳನ್ನ ಎದುರಿಸಿ ದೊಡ್ಡ ಹುದ್ದೆ ಪಡೆದ ಕಥೆ ಎಲ್ಲರಿಗೂ ಒಂದು ಪ್ರೇರಣೆ ಆಗುತ್ತದೆ.   ಶಿವಮೊಗ್ಗದ ಜಿಲ್ಲಾ ಪಂಚಾಯತ್ ಗೆ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಯಾಗಿ ಇವರು ಬಂದಾಗ ಜಿಲ್ಲಾ ಪಂಚಾಯತ್ ಸದಸ್ಯರಾದ ನಮಗೆಲ್ಲ ಕುತೂಹಲ ಆಗಷ್ಟೆ ಇವರ ಬಾ ನಲ್ಲೆ ಮದು ಚಂದ್ರಕೆ ಎಂಬ ಸಿನಿಮಾದಿಂದ ಇವರು ಖ್ಯಾತರಾಗಿದ್ದರು, ಬೆಂಗಳೂರು ಬಿಡಿಎ ಅಧಿಕಾರಿ ಆಗಿದ್ದಾಗ ಬೆಂಗಳೂರಲ್ಲಿ ಬಡವರಿಗೆ ಆಶ್ರಯ ನಿವೇಶನ ನೀಡಿ ದಾಖಲೆ ಮಾಡಿದ್ದರು, ಮೈಸೂರಿನಲ್ಲಿ ಕೂಡ ಅಭಿವೃದ್ಧಿ ಮಾಡಿ ಖ್ಯಾತರಾಗಿದ್ದರು.    ಇವರು ಶಿವಮೊಗ್ಗ ಬಂದಾಗಲೇ ನಮ್ಮ ಊರಾದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನ ಕನ್ನಡ ಸಂಘದ ಆಗಿನ ಅದ್ಯಕ್ಷರಾಗಿದ್ದ ಹಾ.ಮೊ.ಬಾಷ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೆವು. ಉದ್ಘಾಟನೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ, ಕಾಗೋಡು ತಿಮ್ಮಪ್ಪ, ಕುಮಾರ್ ಬಂಗಾರಪ್ಪಾ, ಆಗಿನ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಬಲ್ಕಿಶ್ ಬಾನು ಮುಂತಾದವರೆಲ್ಲ ಭಾಗವಹಿಸಿದ್ದರು,.   ಈ ಅದ್ದೂರಿ ಮತ್ತು ಯಶಸ್ವಿ ಯುವಜನ ಮೇಳ ಅತ್ಯಂತ ವಣ೯ಮಯವಾಗಿ ನಡೆಯಲು ಅವತ್ತು ಜಿಲ್ಲಾ ಪಂಚಾಯತ್ ಅಧಿಕಾರಿಯಾಗಿದ್ದ ಕೆ.ಶಿವರಾಂ ಕಾರಣ ಕತ೯ರು. ಅವರ ಮತ್

Blog number 1613. ಶರಾವತಿ ನೀರು ಬೆಂಗಳೂರಿಗೆ ಕೊಡುವ ಯೋಜನೆ ಜಾರಿ ಮಾಡದಂತೆ ಶಾಸಕ ಹರತಾಳು ಹಾಲಪ್ಪ ಮನವಿ (20- ಜೂನ್ -2019).

# ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರ ಕ್ಷಿಪ್ರವಾದ ಪ್ರತಿಕ್ರಿಯೆ ಅಭಿನಂದನಾಹ೯ *ಶರಾವತಿ ಹಿನ್ನೀರಿನ ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಒದಗಿಸುವ ಯೋಜನೆ ಕೈ ಬಿಡುವಂತೆ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಹಾಲಪ್ಪ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ,ಉಪ ಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಕುರಿತು ಮನವಿ ನೀಡಿದರು.*