Skip to main content

Posts

Showing posts from December, 2016

ದೇವನೂರು ಮಹಾದೇವರ ಪೋನ್ ಬ0ದಾಗ.........

ಇವತ್ತು ಬೆಳಿಗ್ಗೆ ದೇವನೂರು ಮಹದೇವರಿಂದ ಪೋನ್ ಬಂದಿತ್ತು, ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು.ಹಲೋ ನಾನು ದೇವನೂರು ಮಹಾದೇವ ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........ ನೀವು ಬರೆದ ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ, ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ ಅಂದರು, ನಿಮ್ಮ ಮೈಸೂರು ಗ್ರಾಮ್ಯ ಕನ್ನಡ ಮಲೆನಾಡಿನ ಕನ್ನಡಿಗರಿಗೆ ಅಥ೯ವಾಗೋದು ಕಷ್ಟ ಅಂದೆ. ನೀವು ದಸರಾ ಎದ್ಘಾಟನೆ ನಿರಾಕರಿಸಿದೀರಿ, ಪ್ರಶಸ್ತಿ ನಿರಾಕರಿಸಿದೀರಿ ಅಂದಾಗ ಹಾಗೇನಿಲ್ಲ ಸಂದಭ೯ ಹಾಗಿತ್ತು ನಿರಾಕರಿಸಿದೆ, ಈ ಸಾರಿಯ ಕುವೆಂಪು ಪ್ರಶಸ್ತಿ ಸ್ವೀಕರಿಸಲು ಒಪ್ಪಿದ್ದೇನೆ ಅಂದರು.ಸನ್ಮಾನಗಳ ಬಗ್ಗೆ ನಿಮ್ಮ ಅಭಿಪ್ರಾಯ ಅಂದದ್ದಕ್ಕೆ ನಾನು ಯಾವುದೆ ಸನ್ಮಾನ ಸಮಾರಂಭಕ್ಕೆ ಹೋಗುವುದಿಲ್ಲ ಹಾಗಂತ ಅದೇ ಅಭ್ಯಾಸವು ಸರಿ ಅಲ್ಲ ಅಂದರು........................... ಮೈಸೂರಿಗೆ ಬನ್ನಿ ಅಂತ ಆಮಂತ್ರಿಸಿದರು.ಅವರೊಂದಿಗಿನ ಪೋನ್ ಸ೦ಬಾಷಣೆ ತುಂಬಾ ಸಂತೋಷ ನೀಡಿದೆ, ಮುಖತಃ ಅವರನ್ನ ಬೇಟಿ ಮಾಡಲು ಉತ್ಸುಕನಾಗಿದ್ದೇನೆ.(4 ನವೆಂಬರ್ 20l 6)     ನಿನ್ನೆ ನಮ್ಮ ಜಿಲ್ಲೆಯ ಕುವೆಂಪು ಮನೆ ಕುಪ್ಪಳ್ಳಿಯಲ್ಲಿ ಸಾಹಿತಿ ಸಾಮಾಜಿಕ ಹೋರಾಟಗಾರ ದೇವನೂರು ಮಹಾದೇವರಿಗೆ ಕುವೆಂಪು ರಾಷ್ಟ್ರ ಪ್ರಶಸ್ತಿ ನೀಡಲಾಯಿತು.   ನವೆ೦ಬರ 4ರಂದು ನಾನು ಅದರೊಂದಿಗೆ ಪೋನ್ನಲ್ಲಿ ಮಾತ

ಮಹಾನ್ ಮಾನವತಾವಾದಿ ಯೋಮಕೇಶ್ವರಗೌಡರು.

ಇವರು ಯೋಮಕೇಶ್ವರಪ್ಪ ಗೌಡರು ಹಾಲಿ ವಾಸ ಹಿರೆಯರಕ ಎಂಬ ಗೌತಮಪುರ ಗ್ರಾಮ ಪಂಚಾಯತ ಗೆ ಸೇರಿದ ಹಳ್ಳಿಯಲ್ಲಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿ.       ಇವರನ್ನ ಯಾಕೆ ಸ್ಮರಿಸುತ್ತೇನೆಂದರೆ ನನ್ನ ಬಾಲ್ಯದ ಅನೇಕ ನೆನಪು, ನನ್ನ ತಂದೆಯ ಆತ್ಮೀಯ ಗೆಳೆಯರು ಹಾಗೂ ನಮ್ಮ ಮನೆತನಕ್ಕೆ ಕೃಷಿ ಜಮೀನು ನೀಡಿದ ದಾನಿಗಳು.      ನಮ್ಮ ತಂದೆ ಎಸ್.ಕೃಷ್ಣಪ್ಪ ಮತ್ತು ನನ್ನ ತಾಯಿ ಶ್ರೀಮತಿ ಸರಸಮ್ಮ ಸ್ಮರಣಾಥ೯ ಆನಂದಪುರಂನಲ್ಲಿ ನಾನು ಮತ್ತು ನನ್ನ ಸಹೋದರ ಕೆ.ನಾಗರಾಜ್ ನಿಮಿ೯ಸಿರುವ "ಕೃಷ್ಣ ಸರಸ" ಕನ್ವೆನ್ಷನ್ ಹಾಲ್ ಉದ್ಘಾಟನೆ ಸಂದಭ೯ದಲ್ಲಿ ನಮ್ಮ ತಂದೆಯ ಗೆಳೆಯರಿಗೆಲ್ಲ ಮುರುಘಾಮಠದ ಶ್ರೀ ನಿರಂಜನ ಜಗದ್ಗುರು ಮಲ್ಲಿಕಾಜು೯ನ ಮಹಾಸ್ವಾಮಿಯಿ೦ದ ಸನ್ಮಾನ ಮಾಡಿಸಿದ್ದೆ, ಅವತ್ತು ಶ್ರೀಯೋಮ ಕೇಶಗೌಡರಿಗೂ ಸನ್ಮಾನ ವಿತ್ತು.       ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಗೌಡರನ್ನ ದಾನ ಕೊಡ ಬೇಕಾದ ಅನಿವಾಯ೯ತೆಗೆ ರಿಪ್ಪನ್‌ಪೇಟೆ ಸಮೀಪದ ದೊಡ್ಡ ಶ್ರೀಮಂತ ಮನೆತನ ತಯಾರಾಗುತ್ತೆ (ಈಗೆಲ್ಲ ಇದು ಮೌಡ್ಯ, ನಮ್ಮ ವಿದ್ಯಾದೇವತೆಯೆ ಮೂಲ ನಕ್ಷತ್ರದಲ್ಲಿ ಹುಟ್ಟಿದ್ದು ಅಂತಾರೆ ) ಆಗ ಅವರಿಗೆ ಸರಿಸಮಾನ ಎನ್ನಿಸಿದ ಆನಂದಪುರ ಸಮೀಪದ ಬಸವನಕೊಪ್ಪದ ಶ್ರೀ ಚನ್ನವೀರಪಗೌಡರಿಗೆ ದಾನ ಕೊಡುತ್ತಾರೆ, ಅವರು ಇವರನ್ನ ಸಾಕಿ ಮಗಳನ್ನ ಕೊಟ್ಟು ಮದುವೆ ಮಾಡಿ ಹಿರಿಯರಕದ ಅವರ ಜಮೀನು ಕೊಡುತ್ತಾರೆ.      ಆ ಕಾಲದಲ್ಲಿ ಲಾರಿ ಖರೀದಿಸುವುದು ಸಣ್ಣ ವಿಷಯ

ಕಡಿದಾಳು ಶಾಮಣ್ಣರ ಪರಿಚಯ ಒಡನಾಟ.

     ಕಡಿದಾಳು ಶಾಮಣ್ಣರ ಹೆಸರು ಲಂಕೇಶ್ ಪತ್ರಿಕೆಗಳಲ್ಲಿ ನೋಡಿದ್ದು ಬಿಟ್ಟರೆ ಅವರ ಪರಿಚಯ ಇರಲಿಲ್ಲ. ಶಿವಮೊಗ್ಗದ ನೆಹರೂ ರಸ್ತೆಯ ಎರಡನೆ ತಿರುವಿನ ಪ್ರಕೃತಿ ಮುದ್ರಣಾಲಯದಲ್ಲಿ ಅನೇಕ ಬಾರಿ ಇವರನ್ನ ನೋಡಿದ್ದೆ ಆದರೆ ಪರಿಚಯ ಆಗಿರಲಿಲ್ಲ.        ರೈತ ಸಂಘದ ಉಚ್ಚಾಯ ಸನ್ನಿವೇಶದಲ್ಲೂ ಕಡಿದಾಳು ಶಾಮಣ್ಣರ ಹೆಸರು ಅತಿ ಹೆಚ್ಚು ಕೇಳುತ್ತಿದ್ದೆ, 1995 ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯನಾದಾಗ ರೈತ ಸಂಘದಿಂದ ಸಿದ್ದಪ್ಪ ಎಂಬುವವರು ಸದಸ್ಯರಾಗಿದ್ದರು, ಸದಾ ಹಸಿರು ಶಾಲು ಹೊದ್ದು ಸಭೆಗೆ ಬರುತ್ತಿದ್ದ ಅವರು ಮಿತ ಬಾಷಿಗಳು ಯಾವಾಗಲು ನನ್ನ ಪಕ್ಕದಲ್ಲೆ ಕುಳಿತುಕೊಳ್ಳುತ್ತಿದ್ದರು, ಒಮ್ಮೆ ಜಿಲ್ಲಾ ಪಂಚಾಯತ್ ಸಭೆ ನಡೆಯುವಾಗ ಕಡಿದಾಳು ಶಾಮಣ್ಣ ಗ್ಯಾಲರಿಯಲ್ಲಿ ಬ೦ದು ಕುಳಿತರು ಇದನ್ನ ಸಿದ್ದಪ್ಪರ ಗಮನಕ್ಕೆ ತಂದಾಗ ಸಿದ್ದಪ್ಪ ಗಾಭರಿ ಆದರು "ಕೆಲಸ ಮಾಡಿಸಿಕೊಡುತೀನಿ ಅಂದರು ಬಿಡಲ್ಲ'' ಅಂತ ಚಡ ಪಡಿಸಿದರು, ನಾನು ಶಾಮಣ್ಣರನ್ನ ನೋಡುತ್ತಾ ಸಭಾ ಕಲಾಪ ಆಲಿಸುತ್ತಿದ್ದೆ.        ಶಾಮಣ್ಣ ಸಿದ್ದಪ್ಪರ ಕಡೆಯೇ ನೋಡುತ್ತಾ ಕುಳಿತಿದ್ದರೆ, ಸಿದ್ದಪ್ಪ ಶಾಮಣ್ಣರನ್ನ ನೋಡದಂತೆ ನಟಿಸುತ್ತಿದ್ದರು. ಕೊನೆಗೆ ಶಾಮಣ್ಣ ನನಗೆ ಕೈಸನ್ನೆ ಮಾಡಿ ಸಿದ್ದಪ್ಪರನ್ನ ಕರೆಯಲು ಸನ್ನೆ ಮಾಡಿದರು.ಸಿದ್ದಪ್ಪರಿಗೆ ಎಚ್ಚರಿಸಿದೆ ಸಿದ್ದಪ್ಪ ಮಾತ್ರ ಶಾಮಣ್ಣರ ಕಡೆ ಯಾವ ಕಾರಣಕ್ಕೂ ನೋಡದೆ ನನಗೂ ಆ ಕಡೆ ನೋಡದಂತೆ ಎಚ್ಚರಿಸಿದರು.         ನಂತರ ನಾನು ಪ್ರಸ್ತಾಪಿಸಿದ ಯ

ಚಂಪಕ ಸರಸು (ಕೆಳದಿ ರಾಣಿ ಚಂಪಕಳ ಸ್ಮರಣಿಯ ಸ್ಥಳ)

  ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕಷಿ೯ತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ, ಆದರೆ ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋದಿಸುತ್ತಾರೆ, ಮುಂದೆ ಇದೇ ಪಟ್ಟದ ರಾಣಿ ಭದ್ರಮಾಜಿ ಅನಾರೋಗ್ಯಕ್ಕೆ ಕಾರಣ ವಾಯಿತು ಮು೦ದೆ ಅವರ ಮರಣಕ್ಕೂ ಕಾರಣವಾಯಿತು.    ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ೦ಪಕ ಮಾಯಾವಿ ಅವಳು ಅನ್ಯ ಆಹಾರ ಸೇವಿಸುತ್ತಾಳೆ, ರಾಜಾ ವೆಂಕಟಪ್ಪ ನಾಯಕರನ್ನ ತಲೆ ಕೆಡಿಸಿದ್ದಾಳೆ ಅಂತೆಲ್ಲ ಆರೋಪ ಮಾಡುತ್ತಾರೆ ಇದರಿOದ ನೊಂದ ಚಂಪಕ ರಾಣಿ ಆನಂದಪುರದ ಕೋಟೆಯಲ್ಲಿ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.     ಸುಂದರವಾಗಿ ಚಿತ್ರಿಸುತ್ತಿದ್ದ ರಂಗೋಲಿಯಿಂದ ಆಕಷಿ೯ತರಾಗಿ ಅವಳಾರು ಅಂತ ತಿಳಿದಾಗ ಚಂಪಕಾ ಎಂಬ ಸುಂದರ ತರುಣಿ ಅಂತ ಗೊತ್ತಾದ ನಂತರ ಅವಳಲ್ಲಿ ಅನುರಕ್ತನಾದ ರಾಜ ವೆಂಕಟಪ್ಪ ನಾಯಕ ಚOಪಕಳನ್ನ ಶಾಸ್ತ್ರ ಬದ್ದವಾಗಿಯೆ ಮದುವೆ ಆಗಿ ಆನಂದಪುರದ ಕೋಟೆಯಲ್ಲಿನ ಅರಮನೆಯಲ್ಲಿ ಇಡುತ್ತಾರೆ, ಆದರೆ ಕೆಳದಿ ಇತಿಹಾಸದಲ್ಲಿ ಕೆಳ ಜಾತಿ ಎಂಬ ಕಾರಣದಿಂದ ಚಂಪಕಾಳ ಇತಿಹಾಸ ತಿರುಚಲಾಗಿದೆ.      ಚಂಪಕ ಪ್ರಜೆಗಳು ತಪ್ಪು ಬಾವಿಸಿ ಆರೋಪ ಮಾಡಿದ್ದರಿಂದ ಜೀವ ತ್ಯಾಗ ಮಾಡಿದ್ದು ರಾಜ ವೆಂಕಟಪ್ಪ ನಾಯಕರಿಗೆ ಅಸಾಧ್ಯ ವೇದನೆ ಆಗುತ್ತೆ ಚಂಪಕಾಳ ನೆನಪು ಶಾಶ್ವ

ತಮಿಳು ಖ್ಯಾತ ನಟ ರಾಧಾರವಿಯೊ೦ದಿಗೆ

    ಬೆಳಿಗ್ಗೆ ಬೆಳಿಗ್ಗೆನೆ ಕನ್ನಡದ ಖ್ಯಾತ ಹಾಸ್ಯ ನಟರಾದ ದೊಡ್ಡಣ್ಣನವರ ಕರೆ " ಏನ್ರಿ ನಿನ್ನೆಯಿಂದ ಒಬ್ಬ ದೊಡ್ಡ ಮನುಷ್ಯರಿಗೆ ನಿಮ್ಮ ನಂಬರ್ ಕೊಟ್ಟಿದ್ದೆ ಅವರೆಷ್ಟು ಸಾರಿ ರಿಂಗ್ ಮಾಡಿದರೂ ನೀವು ಪಿಕ್ ಮಾಡಿಲ್ಲ " ಅಂತ, ಯಾರಿಗೆ ನನ್ನ ನಂಬರ್ ಕೊಟ್ಟಿದ್ದಿರಿ? ಅವರು ನನಗೆ ಯಾರು ಅಂತ ಹೇಗೆ ಗೊತ್ತಾಗಬೇಕು? ಅಂದೆ. ಈಗ ನಿಮಗೆ ಪೋನ್ ಮಾಡ್ತಾರೆ ದಯಮಾಡಿ ಪೋನ್ ತಗೋಳಿ, ರಾಕ್ ಲೈನ್ ವೆಂಕಟೇಶ್ ಹೆಸರು ಕೇಳಿದೀರಲ್ಲ ಅವರೆ ಅಜೆ೯೦ಟ್ ಅವರಿಗೆ ನಿಮ್ಮಿO ದ ಉಪಕಾರ ಆಗಬೇಕು, ಅವರು ಇಂತಾ ನಂಬರಿಂದ ಕಾಲ್ ಮಾಡ್ತಾರೆ ಅಂದರು.       ಸ್ವಲ್ಪ ಹೊತ್ತಲ್ಲೆ ರಾಕ್ ಲೈನ್ ಪೋನ್ ಮಾಡಿದರು "ಬ್ರದರ್ ನಿಮ್ಮಿ೦ದ ಉಪಕಾರ ಆಗಬೇಕು " ಅಂದರು ಅಂತಹ ಕೋಟ್ಯಾದಿಪತಿ ಚಲನಚಿತ್ರ ನಿಮಾ೯ಪಕರು ಕೇಳುವಾಗ ನನಗೆ ಗೊತ್ತಿಲ್ಲದಂತೆ ಹೇಳಿ ಸಾರ್ ಅಂತದ್ದೇನು ಅಂದೆ, ತಮಿಳು ಚಿತ್ರರಂಗದ ಪ್ರಖ್ಯಾತರೊಬ್ಬರು ನಿಮ್ಮ ಅತ್ಯಂತ ಆಪ್ತರಾದ ವೈದ್ಯ ನಾರಾಯಣ ಮೂತಿ೯ಯವರನ್ನ ಬೇಟಿ ಮಾಡಬೇಕಂತೆ ಯಾವತ್ತು ಅವರನ್ನ ನಿಮ್ಮ ಹತ್ತಿರ ಕಳಿಸಲಿ ಅಂದರು.           ರಾಕ್ ಲೈನ್ ರ ಅಭಿಲಾಷೆಯಂತೆ ತಮಿಳು ಚಿತ್ರರಂಗದ ಹಿರಿಯರು, ಪ್ರಖ್ಯಾತ ವಿಲನ್, ಮಾಜಿ ಶಾಸಕ, ತಮಿಳು ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ, ಖ್ಯಾತ ಅಭಿನೇತ್ರಿ ರಾದಿಕಾ ಸಹೋದರ, ಒಂದು ಕಾಲದ ಎಂ.ಜಿ.ಆರ್.ರೊಂದಿಗೆ ನಟಿಸುತ್ತಿದ್ದ ನಂತರ ಎಂ.ಜಿ.ಆರ್ ಕಟ್ಟಾ ವಿರೋದಿ ನಟರಾದ ಎಂ.ಆರ್.ರಾದಾರವರ ಮಗ ರಾಧಾರವ

ದಂಡಾವತಿ ಆಣೆಕಟ್ಟಿನ ದಂಡನಾಯಕ ವಾಮದೇವ ಗೌಡರು ಸೊರಬ .

ಇವತ್ತು ದಿಡೀರ್ ಅಂತ ಸೊರಬದ ವಾಮದೇವ ಗೌಡರು ಬಂದರು ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು ಹಾಲಿ ಹಿರೇಮಠರ ರಾಜ್ಯ ಬ್ರಷ್ಟಾಚಾರಿ ವಿರೋದಿ ಆಂದೋಲನದ ಉಪಾಧ್ಯಕ್ಷರು,    ಚಹಾ ಸ್ವೀಕರಿಸುತ್ತಾ "ದಂಡಾವತಿ ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು ನಾನು ಮರೆತು ಬಿಟ್ಟಿದ್ದೆ ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ, ತೀ.ನಾ.ಶ್ರೀನಿವಾಸ್, ಮಾಜಿ ಶಾಸಕರಾದ ಸ್ವಾಮಿ ರಾವ್, ಕಲ್ಲೂರು ಮೇಘರಾಜ್, ಪತ್ರಕತ೯ರಾದ ಎಂ.ರಾಘು, ಚಾವಾ೯ಕ ರಾಘು ಮತ್ತು ಗೆಳೆಯರು ದಂಡಾವತಿ ಹೋರಾಟದ ಸ್ಥಳಕ್ಕೆ ಹೋಗಿದ್ದೆವು ಅದರ ಹಿಂದಿನ ದಿನ ಗೌರಿ ಗಣಪತಿ ಹಬ್ಬ ಇತ್ತು, ಹೋರಾಟಗಾರರು ಮಣ್ಣಿನ ಗಣಪತಿ ವಿಗ್ರಹ ಪೂಜೆ ಮಾಡಿ ನಿಯೋಜಿತ ಆಣೆಕಟ್ಟು ಪ್ರದೇಶದ ನೀರಲ್ಲಿ ವಿಸಜ೯ನೆ ಮಾಡಿದ್ದರು.      ಮಳೆಗಾಲದ ಆ ದಿನದಲ್ಲೇ ದಂಡಾವತಿ ನದಿ ಸಣ್ಣ ಹಳ್ಳದಂತೆ ಇತ್ತು, ಹಿಂದಿನ ದಿನ ವಿಸಜ೯ನೆ ಮಾಡಿದ ಗಣಪತಿಯೇ ಮುಳುಗಿರಲಿಲ್ಲ ಆಗ ಗಣಪತಿಯಪನವರು ಕೈ ಮುಗಿದು ಮಹಾಗಣಪತಿ ಇಲ್ಲಿ ದಂಡಾವತಿ ಆಣೆಕಟ್ಟು ಕಟ್ಟದಂತೆ ನೋಡಿಕೊಂಡು ಈ ರೈತರ ಹೋರಾಟಕ್ಕೆ ಜಯ ತಂದು ಕೊಡು ಅಂತ ಬೇಡಿಕೊಂಡರು, ರೈತ ಪರ ಹೋರಾಟಗಾರ ಗಣಪತಿಯಪರ ಪ್ರಾಥ೯ನೆಯಂತೆ ಮತ್ತು ವ

ನೈಜ ಜನಪರ ಹೋರಾಟಗಾರ ಟಿ.ಆರ್.ಕೃಷ್ಣ ರಿಪ್ಪನ್ ಪೇಟೆ

ಟಿ.ಆರ್.ಕೃಷ್ಣಪ್ಪ ಶಿವಮೊಗ್ಗ ಜಿಲ್ಲೆಯ ರಿಪನ್ ಪೇಟೆ ನಿವಾಸಿ, ಕ್ರೀಡಾಪಟು, ಜನಪರ ಹೊರಾಟಗಾರರು. ಸಾಮಾನ್ಯ ಜನರ ಸಮಸ್ಯೆ ಬಗೆಹರಿಸಲು ಸದಾ ಶ್ರಮಿಸುತ್ತಾರೆ, ಸಂಬಂದ ಪಟ್ಟಅಧಿಕಾರಿಗಳಿಗೆ ಒಳ್ಳೆಯ ರೀತಿಯಲ್ಲಿ ವಿವರಿಸಿ ಮನವಿ ಮಾಡುತ್ತಾರೆ ಆದರೆ ಲಂಚಕೋರ ಅಧಿಕಾರಿಗಳು ಇವರ ಮನವಿ ನಿಲ೯ಕ್ಷಿಸಿದರೆ ಇವರು ಹಮ್ಮಿಕೊಳ್ಳುವ ಹೋರಾಟ ಮಾತ್ರ ವಿಚಿತ್ರ ಮತ್ತು ಪರಿಣಾಮಕಾರಿ. ಏಕೈಕ ವ್ಯಕ್ತಿ ಈ ರೀತಿ ಸಂಬOದ ಪಟ್ಟವರ ಕಣ್ಣು ತೆರೆಸಿ ಪರಿಹಾರ ಕೊಡಿಸಲು ಸದಾ ಮುಂದಿರುತ್ತಾರೆ. ಕೆಲವರಿಗೆ ಇವರ ಹೋರಾಟ ಐಲು ಅನ್ನಿಸಬಹುದು ಆದರೆ ಇವರ ಹೋರಾಟದಲ್ಲಿನ ಹೂರಣ ಸುಲಭವಾಗಿ ಜೀಣಿ೯ಸಿಕೊಳ್ಳಲಾರದ ನೈಜ ಸತ್ಯವಿರುತ್ತೆ. ಒಂದು ರೀತಿ ಇವರೊಬ್ಬ ಜನಸಾಮಾನ್ಯರ ಒಂಬಡ್ಸ್ ಮನ್.we like him and support his struggle.

ಯಹ್ಯಾ ಸಾಹೇಬರೆಂಬ ಸಜ್ಜನ ಶ್ರೀಮ೦ತರು.

1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು, ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು, ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು. ದಿನಸಿ ಪಟ್ಟಿ ಬರೆಯಲು ನಾ ಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಮಾಲಿಕರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರಾಜೇಶ್ ಖನ್ನರ ಸ್ಟೇಲ್ ನ ಟೈಟ್ ಪ್ಯಾಂಟ್, ಚೂಪು ಬೂಟು, ಸೊ೦ಟದಲ್ಲಿ ರಿವಾಲಾವರ್ ಗಮ ಗಮ ಎನ್ನಿಸುವ ಪರಿಮಳ ಸಿಂಪಡಿಸಿಕೊಂಡು ಟಕ್ ಟಕ್ ಎನ್ನುವ ಭೂಟಿನ ಸದ್ದಿನೊಂದಿಗೆ ಬಂದು ತಿರುಗುವ ಕುಚಿ೯ಯಲ್ಲಿ ಕುಳಿತು ಪಕ್ಕದಲ್ಲಿನ ದೊಡ್ಡ ಟ್ರಿಜರಿಯ ಬಾಗಿಲು ತೆಗೆದರೆ ಅದರಲ್ಲಿ ಕಂತೆ ಕಂತೆ ನೋಟು.       ಅವರಿಗೆ ಉದನೂರು ಎಂಬಲ್ಲಿ 100 ಎಕರೆ ಜಮೀನು, ಅಲ್ಲಿ ಕಾಡು ಪ್ರಾಣಿ ಶಿಕಾರಿ ಮಾಡುತ್ತಾರೆ ಅದಕ್ಕೆ ಡಬಲ್ ಬ್ಯಾರೆಲ್ ತೋಟ ಬಂದೂಕು, ತಿರುಗಾಡಲು ಜಾತಿಯ ಕುದುರೆ ಹೀಗೆ ಯಾಹ್ಯಾ ಸಾಹೇಬರದ್ದು ರಾಜಾ ಠೀವಿ.      ಇವತ್ತು 95ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು, ಯಾರಿಗೂ ತೊಂದರೆ ಕೊಡದ ಊರ ಉಪಕಾರಿ ಸಾಹುಕಾರರಿವರು, ಇವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಹಾರೈಸುತ್ತೇನೆ.       ಇವರ ಅಂಗಡಿಯಲ್ಲಿ ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕಿದವರ ಮನೆಯಲ್ಲಿ ಆ ಕಾಲದಲ್ಲಿ ಹಸಿವು ಇರುತ್ತಿರಲಿಲ್ಲ, ಆದರೆ ಅದು ಸುಲ

BHARAPANTH,JUNDI YATRA OF NATHA PANTH.ಬಾರಾ ಪಂಥ್, ಜೋOಡಿ ಹೀಗೆ ಕರೆಯುವ 12 ವಷ೯ಕೊಮ್ಮೆ ನಾಸಿಕ್ ನಿಂದ ಮಂಗಳೂರಿಗೆ ಬರುವ ನಾಥಪಂಥದ ಪಾದಯಾತ್ರೆ.

ನಾವೆಲ್ಲ ಆನಂದಪುರಂನಿಂದ ಪ್ರತಿದಿನ ರೈಲಿನಲ್ಲಿ ಪ್ರೌಡ ಶಿಕ್ಷಣಕ್ಕೆ ಸಾಗರಕ್ಕೆ ಹೋಗುತ್ತಿದ್ದೆವು, 1980ನೇ ಇಸವಿ ಇರಬೇಕು ಆ ದಿನ ಸಾಗರಕ್ಕೆ ಬೃಹತ್ ಖಾವಿದಾರಿಗಳ ಮೆರವಣಿಗೆ ಬಂತು, ಅದರಲ್ಲಿ ಗಡ್ಡದಾರಿಗಳು, ಬೆತ್ತಲೆ, ಅರೆಬೆತ್ತಲೆಯವರು ಇದ್ದರು.      ಅವರಾರು ಎಲ್ಲಿಗೆ ಹೋಗುತ್ತಾರೆ, ಎಲ್ಲಿಂದ ಬಂದರು ಅಂತ ಯಾರಿಗೆ ಕೇಳಿದರೂ ಉತ್ತರ ಸಿಗಲಿಲ್ಲ, ವಿದ್ಯಾಥಿ೯ಗಳಾದ ನಮಗೆ ಕುತೂಹಲ ಮತ್ತು ನಾವು ಊರಿಗೆ ಹಿಂದಿರಿಗಿ ಹೋಗುವ ರೈಲು ಬರಲು ಸಾಕಷ್ಟು ವೇಳೆ ಇದ್ದಿದ್ದರಿಂದ ಆ ಮೆರವಣಿಗೆ ಹಿಂದೆಯೇ ನಾವೆಲ್ಲ ಹೋದವು, ಕೆಲವರು "ಓಹೋ ಇವೆರೆಲ್ಲ ಅಗೋರಿಗಳು, ನರಮಾಂಸ ಭಕ್ಷಕರು "ಅಂದಾಗ ಭಯಪಟ್ಟೆವಾದರೂ ನೋಡೇ ಬಿಡೋಣ ಎಲ್ಲಿ ತನಕ ಹೋಗುತ್ತಾರೆ ಅಂತ ನಮ್ಮ ನಡಿಗೆ ಮುಂದುವರಿಸಿದೆವು, ಅಂತಿಮವಾಗಿ ಸಾಗರದ ಗಣಪತಿ ದೇವಸ್ಥಾನ ತಲುಪಿತು.     ದೇವಸ್ಥಾನದ ಹೊರಭಾಗದ ದೊಡ್ಡ ಪೀಠದಲ್ಲಿ ಈ ಯಾತ್ರೆಯ ಮುಖ್ಯಸ್ಥರು ಕುಳಿತರು ಅಷ್ಟರಲ್ಲಿ ಅಲ್ಲಲ್ಲಿ ವಿಶ್ರಮಿಸಿದ ಅವರ ಸಂಗಾತಿಗಳೆಲ್ಲ ಗಾಂಜಾ ಸೇವನೆಯಲ್ಲಿ ತೊಡಗಿದಾಗ ಅಲ್ಲಿನ ವಾತಾವರಣ ಭಯದ ಆಲಯವಾಯಿತು, ಇವರನ್ನ ನೋಡಲು ಸೇರಿದ ಜನಸ೦ದಣಿ ಅವರವರ ಮಕ್ಕಳನ್ನ "ಸಾಕು ಮನೆಗೆ ಹೊರಡಿ ಅವರೆಲ್ಲ ಮೋಡಿ ಮಾಡಿ ಮಕ್ಕಳನ್ನ ಒಯತಾರೆ " ಅಂತ ಹೆದರಿಸಿ ಕರೆದೊಯ್ಯಲು ಶುರು ಮಾಡಿದಾಗ ನಾವು ಹೆದರಿಕೆ ಮತ್ತು ನಮ್ಮ ರೈಲಿನ ಸಮಯ ಆಗಿದ್ದರಿಂದ ಅಲ್ಲಿಂದ ಕಾಲು ಕಿತ್ತೆವು.        ಮರುದಿನ ಮತ್ತೆ ಅಲ್ಲಿಗೆ