Skip to main content

Posts

Showing posts from 2022

Blog number 1155. 1979ರಲ್ಲಿ ಇಡೀ ಜಗತ್ತು ಸ್ಕೈ ಲ್ಯಾಬ್ ಭೂಮಿಗೆ ಬೀಳುವುದರಿಂದ ಪ್ರಳಯವೇ ಆದೀತೆಂಬ ಭಯದಲ್ಲಿತ್ತು, ಆ ಕಾಲದಲ್ಲಿ ಮಲೆನಾಡ ಹಳ್ಳಿಗಳಲ್ಲಿ ಇದ್ದ ಆತಂಕ ಈಗ ನೆನಪಿಸಿದರೆ ಹಾಸ್ಯ ಅನ್ನಿಸಬಹುದು ಆದರೆ ಆ ಕಾಲದ ಜಗತ್ತು ಅದಾಗಿತ್ತು.

#ದಕ್ಷಿಣ ಬಾರತೀಯರು ಅತಿ ಹೆಚ್ಚು ಭಯಪಟ್ಟಿದ್ದು ನಾಸಾದ Skylab ಬೀಳುತ್ತೆ ಎಂದು 1979ರಲ್ಲಿ  ಅಮೆರಿಕಾದ ಮೊದಲ ಸೌರ ನಿಲ್ದಾಣವಾದ ಇದರಿಂದ ಅಮೆರಿಕಾ ಅಂತರಿಕ್ಷಾ ಸಂಶೋದನೆ ನಡೆಸಿತ್ತು, ಇದರ ಒಟ್ಟು ತೂಕವೇ 700 ಟನ್ ಗಳಾಗಿತ್ತೆಂದರೆ ಇದರ ಅಗಾದತೆ ಅರಿವಾದೀತು.    ಇದು ತನ್ನ ಕಕ್ಷೆಯಿಂದ ಜಾರಲು ಪ್ರಾರಂಬಿಸಿದಾಗ ವಿಜ್ಞಾನಿಗಳಿಗೆ ಆತಂಕ ಪ್ರಾರಂಭ ಆಯಿತು ಕ್ರಮೇಣ ಇದು ಭೂಮಿಯ ಗುರುತ್ವಾಕಷ೯ಣೆಗೆ ತಲುಪಿ ಭೂಮಿ ಸಮೀಪಿಸಿ ಭೂಮಿಯ ವಾಯುಮಂಡಲ ಪ್ರವೇಶಿಸಿದರೆ ದೊಡ್ಡ ಅಗ್ನಿ ದುರಂತ ಆಗಲಿದೆ ಮತ್ತು ಇದು ಬೀಳುವ ಪ್ರದೇಶ ಜನವಸತಿ ಆದರೆ ಸಾವು ನೋವು, ಅರಣ್ಯ ಪ್ರದೇಶವಾದರೆ ಅರಣ್ಯ ನಾಶ ಎಂಬ ಸುದ್ದಿ ವಿಶ್ವದಾದ್ಯಂತ ದೊಡ್ಡ ಆತಂಕಕ್ಕೆ ಕಾರಣವಾಯಿತು.   ಅಮೆರಿಕಾ ಸಕಾ೯ರ ಈ ಬಗ್ಗೆ ಉದಾಸೀನ ಪಡುತ್ತಿದೆ, ಈ ಪ್ರಯೋಗ ಶಾಲೆಯ ಹೆಚ್ಚಿನ ಭಾಗ ದಕ್ಷಿಣ ಭಾರತದ ಮುOಬೈ, ಕನಾ೯ಟಕ ಕೇರಳದ ಮೇಲೆ ಬೀಳುತ್ತದೆ, ಕ್ಷಣಗಣನೆ ಪ್ರಾರಂಭ ಆಗಿದೆ ಅಂತೆಲ್ಲ ಸುದ್ದಿಗಳು ನಮ್ಮ ಊರಲ್ಲಿ ಆತಂಕಕ್ಕೆ ಕಾರಣ ಆಗಿತ್ತು.   ಸುಮಾರು 3-4 ತಿಂಗಳು ಇದು ಈ ಭಾಗದ ಜನ ಜೀವನಕ್ಕೆ ತುಂಬಾ ಆತಂಕ ತಂದಿತ್ತು, ಅಮೆರಿಕಾದ ನಾಸ ಸುದ್ದಿಗಳು ಈಗಿನಷ್ಟು ಪಾರದಶ೯ಕ ಆಗಿರಲಿಲ್ಲ ಭಾರತ ಮತ್ತು ರಷ್ಯಾದ ಸ್ನೇಹದಲ್ಲಿ ಭಾರತಕ್ಕೆ ಅಮೆರಿಕಾ ಸಹಕರಿಸುತ್ತಿರಲಿಲ್ಲ.   ಮಲೆನಾಡಿನ ಹಳ್ಳಿಗಳಲ್ಲಿ ಈ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇರಲಿಲ್ಲ ಗಾಳಿ ಸುದ್ದಿಗಳಿ೦ದ ಪ್ರಳಯವೇ ಈ ರೀತಿ ಬಂದಿದೆ

Blog number 1153. ನಮ್ಮ ಊರ ಗ್ರಾಮ ಪಂಚಾಯತ್ ಅಧ್ಯಕ್ಷರು ಜೆ. ಶಿವಾನಂದ ನನ್ನ ಆಫೀಸಿನಲ್ಲಿ,ಇವರ ಕುಟುಂಬ ಶರಾವತಿ ಮುಳುಗಡೆ ಸಂತ್ರಸ್ಥರದ್ದು, ಇವರ ತಂದೆ ಜಟ್ಟಪ್ಪ ಇವರಿಗೆ ಬಗರ್ ಹುಕುಂ ಜಮೀನು ಮಂಜೂರಾಗಿದ್ದು 1993ರಲ್ಲಿ.

#ಇವತ್ತು_ನಮ್ಮ_ಊರಾ_ನೂತನ_ಗ್ರಾಮಪಂಚಾಯತ್_ಅದ್ಯಕ್ಷರು_ಬಂದಿದ್ದರು. #ಗೇರುಬೀಸಿನ_ಶಿವಾನಂದ_ನೂತನ_ಅಧ್ಯಕ್ಷರು. #ಸಾಗರ_ತಾಲ್ಲೂಕಿನ_ಯಡೇಹಳ್ಳಿ_ಗ್ರಾಮಪಂಚಾಯತ್  #ಅನೇಕ_ವಿಚಾರಗಳಲ್ಲಿ_ಮುಂದಿರುವ_ಯಡೇಹಳ್ಳಿ_ಗ್ರಾಮಪಂಚಾಯತ್    ಕೆಳದಿ ಅರಸರು ಕಿರಾತಕರಿಂದ ಯಡೇಹಳ್ಳಿ ಕೋಟೆ ವಶಪಡಿಸಿಕೊಂಡರೆಂಬ ಇತಿಹಾಸ ಇದೆ ನಂತರ ರಾಜ ವೆಂಕಟಪ್ಪ ನಾಯಕ ಮತ್ತು ರಂಗೋಲಿ ಪ್ರವೀಣೆ ಬೆಸ್ತರ ಕುಲದ ಚಂಪಕಾಳ ದುರಂತ ಪ್ರೇಮದ ಸ್ಮಾರಕ ಚಂಪಕ ಸರಸ್ಸು ನಿರ್ಮಾಣ ತಾಜ್ ಮಹಲ್ ಗಿಂತ ಮೊದಲೇ ನಿಮಾ೯ಣ ಮಾಡಿ ಆನಂದಪುರಂ ಎಂದು ನಾಮಕರಣವಾಯಿತು.   ಆಗಿನಿಂದಲೂ ಈ ಪ್ರದೇಶ ಮಾತ್ರ ಯಡೇಹಳ್ಳಿ ಆಗಿಯೇ ಉಳಿಯಿತು, ಯಡೇಹಳ್ಳಿ ಮತ್ತು ಆನಂದಪುರಂ ಎಂದು ವಿಭಜಿಸುವ ಪುರಾತನ ತಾವರೆಕೆರೆ (ಈಗಿನ ಗೌರಿಕೆರೆ) ಇದೆ ಇದರ ವಿಶೇಷ ಅಂದರೆ ಕೆರೆ ತುಂಬಿ ಕೋಡಿ ಬಿದ್ದು ಶರಾವತಿ ನದಿ ಸೇರಿ ಜೋಗದ ಜಲಪಾತ ಸೇರಿ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರಿದರೆ ಈ ಕೆರೆಯ ತೂಬಿನ ನೀರು ಅಂಬ್ಲಿಗೊಳ ಜಲಾಶಯ ಸೇರಿ ನಂತರ ವರದಾ ನದಿ ಮೂಲಕ ತುಂಗಭದ್ರ ಡ್ಯಾಂ ಸೇರಿ ಆಂದ್ರ ಪ್ರದೇಶದಲ್ಲಿ ಹರಿದು ಕೃಷ್ಣಾ ನದಿ ಮೂಲಕ ಬಂಗಾಳ ಕೊಲ್ಲಿಯ ಸೇರುವ  ಸಮತೋಲದ ತಾವರೆಕೆರೆ ನೀರು ಎರೆಡು ಸಮುದ್ರ ಸೇರುವ ಆಪರೂಪದ ವಿಶೇಷತೆ ಹೊಂದಿದೆ.   ಯಡೇಹಳ್ಳಿಯ ವೃತ್ತದಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರದ ಹೆದ್ದಾರಿ ಸೇರುತ್ತದೆ.   ಇಲ್ಲಿ ಮೂರು ಅಕ್ಕಿ

Blog number 1152. ವನ್ಯಜೀವಿ ಛಾಯಾಗ್ರಹಣದಲ್ಲಿ ತಮ್ಮ ದೇ ಛಾಪು ಮುಡಿಸುತ್ತಿರುವ ಕನ್ನಡ ಅಧ್ಯಾಪಕರು, ಖ್ಯಾತ ಸಾಹಿತಿ ಡಾ. ರಹಮತ್ ತರೀಕೆರೆ ಸ್ವಂತ ತಮ್ಮ, ಪೂರ್ಣಚಂದ್ರ ತೇಜಸ್ವಿ ಕುರಿತು ಡಾಕ್ಟರೇಟ್ ಮಾಡಿರುವ ಡಾ. ಕಲಿಮುಲ್ಲಾ ಕ್ಯಾಮೆರಾ ಕಣ್ಣಿಗೆ ಬಿದ್ದ ನೀರಿಗೆ ಬಣ್ಣ ಹಾಕುವ ಅಲ್ಲ ವಿಷ ಹಾಕುವ ಮೀನು ಶಿಕಾರಿ.

#ಮೀನು_ಹಿಡಿಯುವಾಗ_ಈ_ರೀತಿ_ಬಣ್ಣದ_ದ್ರಾವಣ_ಏಕೆ_ಹಾಕುತ್ತಾರೆ?  ರಿಜ್ವಾನ್ ಕಳಸ ಈ ರೀತಿ ಅಭಿಪ್ರಾಯ ಪೋಸ್ಟ್ ಮಾಡಿದ್ದಾರೆ ಹಾಗಾದರೆ ಇದು ಕೆರೆ ನೀರು ವಿಷ ಮಾತ್ರ ಮಾಡುವುದಲ್ಲ ಮೀನು ತಿನ್ನುವವರ ಹೊಟ್ಟೆಗೂ ವಿಷ ಹಾಕಿದ ಹಾಗೆ !?         #ಶುಂಠಿಗೆ_ಹೊಡೆಯುವ_ಔಷಧಿ ಹೆಸರು ಗೊತ್ತಿಲ್ಲ. ನದಿಯಲ್ಲಿ ವಿಷ ಹಾಕಿದಾಗ ಕಲ್ಲು-ಬಂಡೆಗಳಲ್ಲಿ ಅಡಗಿ ಕೂತ ಮೀನುಗಳು ವಿಷದ ಪ್ರಭಾವದಿಂದ ದಿಕ್ಕಾಪಾಲಾಗಿ ಜೀವ ಉಳಿಸಿಕೊಳ್ಳಲು ಮೀನುಗಾರರ ಬಲೆಗೆ  ಸಿಕ್ಕಿಕೊಳ್ಳುತ್ತದೆ. ಇಂತಹ ಪೈಶಾಚಿಕ ಮೀನುಗಾರಿಕೆ ಮೀನುಗಳ ಸಂತತಿಯನ್ನು ನಾಶಮಾಡೋದೊಂದಿಗೆ ಮೀನು ತಿನ್ನುವರ ಆರೋಗ್ಯಕ್ಕು ಮಾರಕ. ಹೆಚ್ಚಿನ ಒಳನಾಡು ಮೀನುಗಾರರು ಹಣದ ದುರಾಸೆಗೆ ಈ ರೀತಿಯ ಕುತಂತ್ರ ಮಾಡುತ್ತಾರೆ.    ವನ್ಯಜೀವಿ ಛಾಯಾಗ್ರಾಹಕ ಡಾ.ಕಲೀಮುಲ್ಲಾ ಪೇಸ್ ಬುಕ್ ಪೋಸ್ಟ್ ಲ್ಲಿ    ಶಿಕಾರಿಪುರದ ಕಡೆ ಹೊರಟಾಗ ಬೆಳಗಿನ ಚುಮುಚುಮು ಬೆಳಕು. ಕೆರೆಯ ಮೇಲೆ ಬಣ್ಣದೋಕುಳಿ. ಹಕ್ಕಿ ಚಿತ್ರ ತೆಗೆಯಲು ಹೋದ ನಮಗಿದು ಮೊದಲ ಅನುಭವ. ಅವರು ಮೀನುಗಾರರು. ಈ ಬಣ್ಣದ ನೀರು ಔಷಧಿಯೋ, ಆಹಾರವೋ ತಿಳಿಯಲಿಲ್ಲ. ಕೇಳಿದರೂ ಅವರೂ ಹೇಳಲಿಲ್ಲ. ನಮ್ಮ ಕಲರವದ ಹಕ್ಕಿಗಳ ಓಡಿಸುತ್ತಿದ್ದಾರೆಂದು ನಮಗವರ ಮೇಲೆ ಸಿಟ್ಟು. ಹಕ್ಕಿ ಬೇಕೆಂದರೆ ದೊಡ್ಡ ಕೆರೆಯ ಹತ್ತಿರ ಬನ್ನಿ ಎಂದರು.‌ ಬಿಳಿಯ ಹಕ್ಕಿಗಳ ಬಿಟ್ಟು ಬಣ್ಣದ ನೀರ ಚಿತ್ರಿಸಿದೆ.

Blog number 1051. ದೇವನೂರು ಮಹಾದೇವ ಮೈಸೂರು ದಸರಾ ಉದ್ಘಾಟನೆಯ ಆಮಂತ್ರಣ ಸ್ವೀಕರಿಸಲಿಲ್ಲ ಆದರೆ 2016ರ ಕುವೆಂಪು ರಾಷ್ಟ್ರಪ್ರಶಸ್ತಿ ಸ್ವೀಕರಿಸಿದರು.

29 ಡಿಸೆಂಬರ್ 2016ರಂದು ನಮ್ಮ ಜಿಲ್ಲೆಯ ಕುವೆಂಪು ಮನೆ ಕುಪ್ಪಳ್ಳಿಯಲ್ಲಿ ಸಾಹಿತಿ ಸಾಮಾಜಿಕ ಹೋರಾಟಗಾರ ದೇವನೂರು ಮಹಾದೇವರಿಗೆ ಕುವೆಂಪು ರಾಷ್ಟ್ರ ಪ್ರಶಸ್ತಿ ನೀಡಲಾಯಿತು.   2016 ನವೆ೦ಬರ 4ರಂದು ನಾನು ಅದರೊಂದಿಗೆ ಪೋನ್ನಲ್ಲಿ ಮಾತಾಡಿದಾಗ ಅವರು ಕುವೆಂಪು ಪ್ರಶಸ್ತಿ ಸ್ವೀಕರಿಸುವುದಾಗಿ ತಿಳಿಸಿದ್ದರು.     ಕುವೆಂಪು ಚಿಂತನೆ, ಆಚಾರ, ವಿಚಾರ ಮತ್ತು ಬರವಣಿಗೆಗೆ ಅತ್ಯಂತ ಸಮೀಪ ಅನ್ನಿಸುವ ದೇವನೂರು ಮಹಾದೇವರಿಗೆ ಕುವೆಂಪು ಪ್ರಶಸ್ತಿ ನೀಡಲು ತೀಮಾ೯ನ ತೆಗೆದುಕೊಂಡು ಪ್ರಶಸ್ತಿ ನೀಡಿದ ಸಂಬಂದ ಪಟ್ಟ ಸಮಿತಿಗೆ 100ಕ್ಕೆ 100 ಅಂಕ ನೀಡುತ್ತೇನೆ.    ಈ ಪ್ರಶಸ್ತಿ ಸ್ಥಾಪಿಸಿದ ದಾನಿ ಚಂದ್ರಶೇಖರ್ ಕುಟುಂಬಕ್ಕೆ ಮಲೆನಾಡಿನ ಕುವೆಂಪು ಹಾಗೂ ತೇಜಸ್ವಿ ಅಭಿಮಾನಿಗಳ ಪರವಾಗಿ ಕೃತಜ್ಞತೆ ಮತ್ತು ಅಭಿನಂದನೆ ಈ ಮೂಲಕ ಸಲ್ಲಿಸುತ್ತೇನೆ.    4- ನವೆಂಬರ್ -2016.    ಇವತ್ತು ಬೆಳಿಗ್ಗೆ ದೇವನೂರು ಮಹದೇವರಿಂದ ಪೋನ್ ಬಂದಿತ್ತು, ಮೈಸೂರಿನ ಗೆಳೆಯ ಕರುಣಾಕರ್ ಈ ಬಗ್ಗೆ ಮೊದಲೇ ತಿಳಿಸಿದ್ದರು.ಹಲೋ ನಾನು ದೇವನೂರು ಮಹಾದೇವ ಅಂದ ತಕ್ಷಣ ನಮಸ್ಕಾರ ಸಾರ್ ಒಂದು ನಿಮಿಷ ಅಂತ ಹೇಳಿ ರೆಕಾಡ೯ರ್ ಆನ್ ಮಾಡಿದೆ ನಂತರ ನಡೆದ ನಮ್ಮ ಸಂಬಾಷಣೆ........ ನೀವು ಬರೆದ ಕುಸುಮಬಾಲೆ ನನಗೆ ಓದಿ ಅಥ೯ ಮಾಡಿಕೊಳ್ಳಲಾಗಲೇ ಇಲ್ಲ ಅಂದೆ, ಅದು ಒಂದು ಕಥೆ ಬೇರೆ ಯಾರಿಂದಲಾದರು ಓದಿಸಿ ಕೇಳಿ ಅಂದರು, ನಿಮ್ಮ ಮೈಸೂರು ಗ್ರಾಮ್ಯ ಕ

Blog number 1150. ಶಿವಮೊಗ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ 2023ರಲ್ಲಿ ಆನಂದಪುರಂನ ಐತಿಹಾಸಿಕ ಸ್ಮಾರಕ ಚಂಪಕ ಸರಸ್ಸುವಿದೆ.ಪ್ರತಿ ತಿಂಗಳ ಪೋಟೋದಲ್ಲಿ ಶಿವಮೊಗ್ಗ ಜಿಲ್ಲೆಯ ಇತಿಹಾಸವಿದೆ ಸು೦ದರವಾಗಿ ಮುದ್ರಿಸಿದ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ಜಿಲ್ಲೆಯ ಇತಿಹಾಸ - ಪ್ರೇಕ್ಷಣೀಯ ಸ್ಥಳದ ಮಹತ್ತದ ದಾಖಲೆಯ ಕ್ಯಾಲೆಂಡರ್ ಆಗಿದೆ. ಕ್ಯಾಲೆಂಡರ್ ಗಳಿಗೆ ಪ್ರಶಸ್ತಿ ನೀಡುವುದಾದರೆ ಪ್ರಥಮ ಪ್ರಶಸ್ತಿ ಈ ಕ್ಯಾಲೆಂಡರ್ ಗೆ ನೀಡಲೇ ಬೇಕು

#ಹೊಸವರ್ಷದ_ಡಿಸಿಸಿ_ಬ್ಯಾಂಕ್_ಕ್ಯಾಲೆಂಡರ್ #ಸುಂದರವಾದ_ಶಿವಮೊಗ್ಗ_ಜಿಲ್ಲೆಯ_ಚಿತ್ರಗಳೊಂದಿಗೆ #ಇದರಲ್ಲಿ_ಆನಂದಪುರಂನ_ಚಂಪಕ_ಸರಸ್ಸು_ಚಿತ್ರವೂ_ಇದೆ. #ಅಭಿನಂದನೆಗಳು_ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾದ_ಚನ್ನವೀರಪ್ಪನವರಿಗೆ #ಈ_ಕ್ಯಾಲೆಂಡರ್_ನಿಜಕ್ಕೂ_ಅದ್ಬುತವಾಗಿದೆ.      ಬಹಳಷ್ಟು ರಾಜಕಾರಣಿಗಳು ಅಧಿಕಾರ ಸಿಕ್ಕಾಗ ತಮ್ಮ ಊರು ಮತ್ತು ಹಳ್ಳಿಯನ್ನು ದೂರದ ದೇಶವಾದ ಸಿಂಗಾಪುರದಂತೆ ಮಾಡುವುದಾಗಿ ಹೇಳಿ ಬಿಡುತ್ತಾರೆ.   ಆದರೆ ತಮ್ಮ ಊರಿನ ಚರಿತ್ರೆ ಸಿಂಗಾಪುರಕ್ಕಿಂತ ಶ್ರೀಮಂತವಾಗಿತ್ತು ಎಂಬ ಜ್ಞಾನ ಇಲ್ಲದವರ ಮುಂದೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಬಿನ್ನವಾಗಿ ಕಾಣುತ್ತಾರೆ ಅದಕ್ಕೆ ಉದಾಹರಣೆ ಮೊನ್ನೆ ಅವರು ಬಿಡುಗಡೆ ಮಾಡಿದ 2023ರ ಕ್ಯಾಲೆಂಡರ್ ಅವರ ಜಿಲ್ಲೆಯ ಇತಿಹಾಸದ ಕಾಳಜಿ ತೋರಿಸಿದೆ.   2023ರ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ನ ಜನವರಿ ಮಾಸ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕೇಂದ್ರ ಕಛೇರಿ ಚಿತ್ರವಿದೆ.   ಪೆಬ್ರವರಿ ಮಾಸ ಶಿಕಾರಿಪುರದ ಅಂಜನಾಪುರದ ರೈತರ ನಿರಾವರಿ ಆಣೆಕಟ್ಟಿನ ಚಿತ್ರವಿದೆ.    ಮಾರ್ಚ ಮಾಸ ಸಕ್ರೆಬೈಲು ಆನೆ ಬಿಡಾರದ ಸುಂದರ ಚಿತ್ರ ಹಾಕಿದ್ದಾರೆ.   ಏಪ್ರಿಲ್ ಮಾಸಕ್ಕೆ ಶಿವಮೊಗ್ಗದ ಕೆಳದಿ ಅರಸರ ಶಿವಪ್ಪ ನಾಯಕರ ಬೇಸಿಗೆ ಅರಮನೆ ಚಿತ್ರವಿದೆ.    ಮೇ ಮಾಸದ್ದು ಸಾವೆ ಹಕ್ಕಲುವಿನ ವರಾಹಿ ಆಣೆಕಟ್ಟಿನ ಚಿತ್ರವಿದೆ.

Blog number 1149.ಉಂಟೂರು ಮಾನಪ್ಪ ಗೌಡರೆಂಬ ಸಮರ್ಥ ಮಾರ್ಗದರ್ಶಿ ಕವಿಶೈಲವನ್ನು ಕುವೆಂಪು ಅವರ ಕಥೆ ಕವನಗಳ ಜೊತೆ ಕುವೆಂಪು ಅವರ ಸ್ಮರಣೆ ಜೀವಂತಗೊಳಿಸುತ್ತಿದ್ದರು ಈಗ ಅವರು ಇಹಲೋಕ ತ್ಯಜಿಸಿದ್ದಾರೆ ಅವರ ನೆನಪು ಮರೆಯಲಾಗದು.

https://youtu.be/kRXXOCiP8wU #ನನ್ನ_ಕವಿ_ಕುವೆಂಪು_ಅವರ_118_ರ_ಹುಟ್ಟು_ಹಬ್ಬ_ಈ_ದಿನ. #ಕುವೆಂಪು_ಅವರ_113ನೇ_ಹುಟ್ಟು_ಹಬ್ಬದಂದು_ನಮಗೆ_ಮಾರ್ಗ_ದರ್ಶಕರಾಗಿದ್ದ #ಉಂಟೂರು_ಮಾನಪ್ಪ_ಗೌಡರು_ಈಗಿಲ್ಲ #ಆದರೆ_ಅವರ_ಮರೆಯಲುಂಟೆ. ದಿನಾಂಕ 29- ಡಿಸೆಂಬರ್ -2017 ರಂದು ಕುವೆಂಪು ಅವರ 113ನೇ ಜನ್ಮ ದಿನದಂದು ನಾನು ಕವಿಶೈಲಕ್ಕೆ ಹೋದಾಗ ಅಲ್ಲಿನ ನಿವ೯ಹಣೆ ನೋಡಿ ಸಂತೋಷ ಆಯಿತು, ಕವಿ ಸಮಾದಿ ಹತ್ತಿರ ಗೈಡ್ ಒಬ್ಬರು ಸಿಕ್ಕಿದ್ದರು.      ಇಲ್ಲಿನ ವಿವರ ನೀಡುತ್ತೀರಾ ಅಂದೆ ಖಂಡಿತಾ ಅಂದ ಅವರ ಬಾಯಲ್ಲಿ ಕುವೆಂಪುರವರ ಹುಟ್ಟು ಸಾವಿನ ಮದ್ಯದ ಘಟನೆಗಳು, ಕವನಗಳ ಸಾಲು ಸಾಲು, ಸಂಬಂದಿಗಳ ಹೆಸರು, ಮಕ್ಕಳು ಮರಿ ಮಕ್ಕಳುಗಳ ವಿವರಗಳು ತೆರೆ ತೆರೆಯಾಗಿ ಬಂತು, ಇದ ಕೇಳಿ ಸಂತೋಷ ಆಯಿತು ಇವರ ನೆನಪಿನ ಶಕ್ತಿ ನೋಡಿ ಆಶ್ಚಯ೯ವಾಯಿತು.   ಇವರಿಗೆ ಟ್ರಸ್ಟ ಮಾಸಿಕ ವೇತನ 10 ಸಾವಿರ ನೀಡುತ್ತದೆ, ವಷ೯ದಿಂದ ವಷ೯ಕ್ಕೆ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆಯ೦ತೆ, ಈಗ ವಾಷಿ೯ಕ ಒಂದು ಲಕ್ಷದ ಅರವತ್ತು ಸಾವಿರ ಜನ ಭೇಟಿ ನೀಡುತ್ತಿದ್ದಾರಂತೆ.   ಮಳೆಗಾಲದಲ್ಲಿ ಬರುವವರು ಕಡಿಮೆ ಇರಬೇಕು ಅಂದೆ ಅದಕ್ಕೆ ಅವರು ಹೇಳಿದ್ದು ಮಳೆಗಾಲದಲ್ಲಿ  ಬೆಂಗಳೂರಿನವರು ಅತಿ ಹೆಚ್ಚು ಬರುತ್ತಾರೆ ಅಂದರು. ಬರುವಾಗ ಗೈಡ್ ಗೆ ಹಣ ಕೊಡಲು ಹೋದಾಗ ನಿರಾಕರಿಸಿದರು.   ಇವರ ಹೆಸರು ಉಂಟೂರು ಮಾನಪ್ಪ ಗೌಡರು ಇವರು ಕವಿ

Blog number 1148. ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಗೆ 2020 ಕ್ಕೆ ನೂರನೇ ವರ್ಷಾಚಾರಣೆಯ ಸಂಭ್ರಮದಲ್ಲಿ ಬೆಂಗಳೂರಿನ ಗಾಂಧೀ ಬಜಾರಿನಲ್ಲಿ ನಾನು ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಖರೀದಿಸಿದ್ದೆ

#ಬೆಂಗಳೂರುಪ್ರೆಸ್ ಕ್ಯಾಲೆ೦ಡರ್ ಗೆ  ಶತಮಾನೋತ್ಸವ#  ಮೊನ್ನೆ ಬೆಂಗಳೂರಿನ ಅವೆನ್ಯೂ ರೋಡಿಗೆ 2020ರ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಮತ್ತು ಒ೦ಟಿಕೊಪ್ಪಲು ಕ್ಯಾಲೆ೦ಡರ್, ಪಂಚಾಂಗ ತರಲು ಹೋಗಿದ್ದೆ.   35 ರೂಪಾಯಿಯ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ತುಂಬಾ ಉಪಯುಕ್ತ ದಿನಚರಿ ಇರುವಂತಾದ್ದು ಅದರಲ್ಲಿ ಸಕಾ೯ರಿ ರಜಾ, ದಾಮಿ೯ಕ ಹಬ್ಬ ಹರಿದಿನಗಳ ಮಾಹಿತಿ ಇರುತ್ತದೆ ಅಷ್ಟೆ ಅಲ್ಲ ಅದರ ಸುಂದರ ಮುದ್ರಣ ಗೋಡೆಗೆ ಒಂದು ಶೋಬೆ ಆದರೆ ಕಣ್ಣ ದೃಷ್ಟಿಗೂ ಸ್ಪಷ್ಟ ಹಾಗಾಗಿ ಹೆಚ್ಚಿನ ಜನ ಬೆಂಗಳೂರು ಪ್ರೆಸ್ ಕ್ಯಾಲೆಂಡರ್ ಗೆ ಮೊದಲ ಆದ್ಯತೆ ನೀಡುತ್ತಾರೆ.   ಈ ವಷ೯ದ ಕ್ಯಾಲೆಂಡರ್ ಈ ಸಂಸ್ಥೆಯ 100ನೇ ಕ್ಯಾಲೆಂಡರ್ ! 1921ರಲ್ಲಿ ಮೊದಲ ಇಂಗ್ಲೀಷ್  ಕ್ಯಾಲೆಂಡರ್ ಹೊರತಂದಿದ್ದು ಮೈಸೂರು ಸಂಸ್ಥಾನ, 1916 ಆಗಸ್ಟ 5ಕ್ಕೆ ಬೆಂಗಳೂರು ಪ್ರೆಸ್ ಕಾಯಾ೯ರಂಭ ಮಾಡಿದ್ದು, 1936ರಿಂದ ಕನ್ನಡ ಕ್ಯಾಲೆಂಡರ್ ಮುದ್ರಿಸುತ್ತಿದೆ, 1988 ರಿಂದ ಟೇಬಲ್ ಕ್ಯಾಲೆಂಡರ್ ಮುದ್ರಿಸುತ್ತಿದೆ.   ನಮ್ಮ ಹೆಮ್ಮೆಯ ಬೆಂಗಳೂರು ಪ್ರೆಸ್ ನ ಶತಮಾನೋತ್ಸವದ 2020ರ ಕ್ಯಾಲೆಂಡರ್ ಗೆ ಅಭಿನಂದನೆ ಸ್ವಾಗತ ಕೋರುತ್ತ 2019ರ ಕ್ಯಾಲೆಂಡರ್ ಹಿಂಬಾಗ ಅಳವಡಿಸಿದ್ದೇನೆ.  ನೀವು ಮರೆಯದೆ 2020ರ ಬೆಂಗಳೂರು ಪ್ರೆಸ್ ನ ಶತಮಾನೋತ್ಸವದ ಕ್ಯಾಲೆಂಡರ್ ಮರೆಯದೇ ಖರೀದಿಸಿ ಪ್ರೋತ್ಸಾಹಿಸಿ.   ವಿಶೇಷ ಅಂದರೆ ಪ್ರಜಾವಾಣಿ 28- ಡಿಸೆಂಬರ್ -2019ಕ್ಕೆ ಲೇಖನ ಪ್ರಕಟಿಸಿದೆ ನಾನು ದಿನಾಂಕ

Blog number 1154.ಜೆ.ಹೆಚ್.ಪಟೇಲರು ಹೇಳಿದ ಕುಡಿಯೋರೇ ಬೇರೆ... ಕುಡುಕರೆ ಬೇರೆ ಏನಿದರ ಅರ್ಥ?

#ಕುಡುಕರಿಂದ ಕುಡಿಯೋರ        ಮಯಾ೯ದೆ ಹೋಗ್ತಾ ಇದೆ#                      - ಜೆ.ಹೆಚ್.ಪಟೇಲರು           ಶಿವಮೊಗ್ಗದಲ್ಲಿ ಮಿತ್ರರಾದ ಬ್ಯಾಂಕ್ ಕೃಷ್ಣಮೂರ್ತಿ ಅವರ ಭದ್ರಾವತಿ ರಸ್ತೆಯ ಮಲವಗೊಪ್ಪದಲ್ಲಿ ಕದಂಬ ಹೋಟೆಲ್ ಉದ್ಫಾಟನೆ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೆಟ್ ಆಗಿತ್ತು.          ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.          ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ.... ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.             ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಮ್ಮು ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು ನಾವು ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದರು, ಅದನ್ನ ನಾವೆಲ್ಲ ನೋಡುತ್ತಾ ನಿಂತವರಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ.    ಆಗ ಮೊಬೈಲ್ ಇಲ್ಲ, ಪಟೇಲರಿಗೆ ಕುಡಿಯುವ ಸಮಯ ಮೀರಿದ್ದರಿಂದ ಚಟಪಟಿಕೆಯಿಂದ ಕೋಪ ಬಂದಿತ್ತು, ಅಂತೂ ಇವರು ಅವರ ರಂ ಜೊತೆ ಅವರ ಕೋಣೆಗೆ ತಲುಪಿದಾಗ ಪ

Blog number 1146.ಅಶೋಕ್ ಹೆಗ್ಗಡೆ ಮಾವಿನಗುಂಡಿ 70ರ ದಶಕದಲ್ಲಿ ಐನಕೈ ಎಂಬ ಬ್ರಾಂಡ್ ನೇಮ್ ನಿಂದ ಅನಾನಸ್ ಹಣ್ಣಿನ ಮೌಲ್ಯವರ್ಧನೆ ಮಾಡಿದವರು.

#ಪಶ್ಚಿಮ ಘಟ್ಟದ ಬಗ್ಗೆ ಮತ್ತು ಜೋಗ ಜಲಪಾತದ ಬಗ್ಗೆ ಹೆಚ್ಚು ಅದಿಕೃತವಾಗಿ ಮಾತಾಡುವ ಜಲಪಾತದ ಬಗಲಿನಲ್ಲಿನ ಮಾವಿನ ಗುಂಡಿಯಲ್ಲಿರುವ ಅಶೋಕ್ ಮಾವಿನ ಗುಂಡಿ ಇವತ್ತು ಸಂಜೆ ಬಂದಿದ್ದರು.#   ಇವರು ಸ್ಥಳಿಯವಾಗಿ ಬೆಳೆಯುವ ಅನಾನಸ್ ನಿಂದ ಐನಕೈ ಎಂಬ ಸಂಸ್ಥೆಯ ಮೂಲಕ ಅನಾನಸ್ ಜ್ಯೂಸ್, ಜಾ೦ ತಯಾರಿಸಿ ಮಾವಿನಗುಂಡಿ ವೃತ್ತದಲ್ಲಿ ಸುಮಾರು 35 ವಷ೯ ಮಾರಾಟ ಮಾಡಿ ಈಗ ನಿವೃತ್ತರಾಗಿದ್ದಾರೆ.   ಇವರು ಪೇಸ್ ಬುಕ್ ನಲ್ಲಿ ಬರೆಯುವ ಅದ್ಬುತ ಲೇಖನಗಳಿ೦ದ ನಾನು ಇವರ ಅಭಿಮಾನಿ, ಇವತ್ತು ಉಡುಪಿಯ ಲಾಡ್ಜ್ ಮಾಲಿಕರಾದ ಮತ್ತು ಮಣಿಪಾಲ್ ನ HP ಗ್ಯಾಸ್ (ಸುದೀ೦ದ್ರ ಏಜೆನ್ಸಿ) ಮಾಲಿಕರಾದ  ಕೆ.ಬಾಲಕೃಷ್ಣ ಶೆನಯ್ ಜೊತೆ ಬಂದಿದ್ದರು.   ಅವರು ಈ ಹಿಂದೆ FBಯಲ್ಲಿ ಬರೆದು ಪಶ್ಚಿಮ ಘಟ್ಟದ ಬಗ್ಗೆ ಕಸ್ತೂರಿ ರಂಗನ್ ವರದಿ ಬಗ್ಗೆ ಬರೆದ ಲೇಖನ ಒಂದನ್ನು ಇಲ್ಲಿ ರೀ ಪೋಸ್ಟ್ ಮಾಡಿದ್ದೇನೆ.               ಒಂದು Observation cum ಅಭಿಪ್ರಾಯ ಮಾತ್ರ. ಸದುದ್ದೇಶದ ಈ ಕಾನೂನು ಬರುವ ಪೂರ್ವ ದಲ್ಲಿ ಪಶ್ಚಿಮ ಘಟ್ಟದಲ್ಲಿ ಶರಾವತಿ, ಕಾಳಿ ನದಿಗಳಿಗೆ ದೊಡ್ಡ ದೊಡ್ಡ ಆಣೆಕಟ್ಟುಗಳು, ಕೊಳ್ಳದಲ್ಲೆಲ್ಲ ದೊಡ್ಡ ದೊಡ್ಡ ವಿದ್ಯುದಾಗಾರಗಳನ್ನು ನಿರ್ಮಿಸಲಾಯಿತು. ಅವುಗಳೆಲ್ಲ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲ್ಪಡಬಹುದಾದ ಪ್ರದೇಶಗಳೇ. ಈಗಿನಂತೆ ಮನುಕುಲ, ಭೂಮಂಡಲ ರಕ್ಷಕ ಪರಿಸರ ಪ್ರೇಮಿಗಳ  ಒತ್ತಡ, ಪ್ರಭಾವ ಆಗ ಇಲ್ಲದಿದ್ದರೂ ಅಂದಿನ ಯೋಜಕರು, ತಂತ್ರಜ್ಞರು ನಿರ್ಮಿ

Blog number 1144. ವೈನ್ ಏನು ನಿನ್ನ ಮಹಿಮೆ? ವಿದೇಶದ ಜನಪ್ರಿಯ ದ್ರಾಕ್ಷಿ ರಸ ಇದರಲ್ಲಿನ ವಿಬಿನ್ನ ರುಚಿ ಮತ್ತು ಅದರ ಬಳಕೆ.

#ಶಾ೦ಪೇನ್‌_ಮತ್ತು_ವೈನ್ #ಕ್ರಿಸ್ಮಸ್_ಮತ್ತು_ನ್ಯೂಇಯರ್   ಕ್ರಿಸ್ಮಸ್ ಮತ್ತು ಹೊಸ ವಷ೯ದ ಶುಭಾಷಯದ ಜೊತೆ ಕೇಕ್ ಜೊತೆ ದ್ರಾಕ್ಷಾರಸ (ವೈನ್), ಕೆಲ ನಮ್ಮ ಆಪ್ತರಾದ  ಊರಿನ ಕ್ರಿಸ್ತ ಬಾಂದವರಿಗೆ ನೀಡಲು ವೈನ್ ಖರೀದಿಸ ಬೇಕಾಗಿತ್ತು.   ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆ ಸಮೀಪ ( ಶಾಂತವೇರಿ ಗೋಪಾಲ ಗೌಡ ರಸ್ತೆ) ಹಾಪ್ ಕಾಮ್ಸ್ ಪಕ್ಕದಲ್ಲಿ ಸಕಾ೯ರದ ವ್ಯೆನ್ ಶಾಪ್ ನಲ್ಲಿ ಒಳ್ಳೆಯ ವೈನ್ ಮತ್ತು ಶಾಂಪೇನ್ ಗಳು ಮಾರಾಟಕ್ಕೆ ಇದೆ ಅಂತ ಗೊತ್ತಾದ ಮೇಲೆ ಅಲ್ಲಿಂದಲೇ ಖರೀದಿಸಿದೆ.  ದೇಶ ವಿದೇಶದ ಬ್ರಾಂಡ್ ಗಳ ವೈನ್ & ಶಾಂಪೇನ್ ಜೊತೆ ನಮ್ಮ ರಾಜ್ಯದ ದ್ರಾಕ್ಷಿ ಬೆಳೆಗಾರರು ತಯಾರಿಸಿದ ವೈನ್‌ಗಳೂ ಇಲ್ಲಿವೆ. ಕಿಕ್ ಜಾಸ್ತಿ ಇರುವ fortified wine (ಆಲ್ಕೊಹಾಲ್ ಅಂಶ ಹೆಚ್ಚಿರುವ) ಕೂಡ ಇಟ್ಟಿದ್ದಾರೆ.   ವೈನ್ ಮಲೆನಾಡಿನಲ್ಲಿನ ಮದು ಪ್ರಿಯರನ್ನ ಹೇಗೆ ಆಕಷಿ೯ಸಿದೆ ಅಂತ ವಿಚಾರಿಸಿದರೆ ನಿರಾಷೆಯ ಉತ್ತರ ಸಿಕ್ಕಿತು, ಜನ ವಿಸ್ಕಿ ಬ್ರಾಂಡಿ ಕುಡಿಯುವವರು ವೈನ್ ಇಷ್ಟ ಪಡುವುದಿಲ್ಲ.    ದ್ರಾಕ್ಷಿಯನ್ನ ಕೊಳೆ ಹಾಕಿ ಇದಕ್ಕೆ ಸಕ್ಕರೆ ಯಿಸ್ಟ್ ಸೇರಿಸಿ ರಸ ತೆಗೆದು ವೈನ್ ತಯಾರಿಸುತ್ತಾರೆ ಇದರಲ್ಲಿ ನೂರಾರು ಮಾದರಿ ಇದೆ. ಇದೇ ರೀತಿ ಶಾಂಪೇನ್ ಕೂಡ (Sparkling wine) ಆದರೆ ಇದರಲ್ಲೂ ಅನೇಕ ತಕ೯ ಇದೆ "ಶಾಂಪೇನ್ sparkling wine ಒಂದೇ ಆದರೆ ಎಲ್ಲಾ sparkling wine ಶಾಂಪೇನ್ ಅಲ್ಲ" ಅಂತ ಇದಕ್ಕೆ ಕಾರಣ ಯುರೋಪಿನ ಶಾಂ