Skip to main content

Blog number 1122. ಒಂದು ಕಾಲದ ಸಾಗರದ ಜೋಗ್ ಬಸ್ ನಿಲ್ದಾಣವನ್ನು ಬೂತಕಾಲದ ಕನ್ನಡಿಯಲ್ಲಿ ನೋಡುವ ಅವಕಾಶ ಮಾಡಿದ ಸಾಗರದ ಸತೀಶ್, ಜೇಡಿಕುಣಿ ಮಂಜುನಾಥ್ ಮತ್ತು ಮುಂಬೈಯಲ್ಲಿ ನೆಲೆಸಿರುವ ಮದು ಇವರ ಜೊತೆಯ ಈ ಸುಂದರ ಸಂಜೆ .

#ಇವತ್ತಿನ_ಸುಂದರ_ಸಂಜೆ

#ಸಾಗರದಿಂದ_ಬಂದವರು_80_ರ_ದಶಕದ_ನೆನಪು_ತಂದರು.

#ಸಾಗರದ_ಪ್ರತಿಭಾವಂತ_ಮದುಸೂದನ್_ಈಗ_ಮುಂಬೈನಲ್ಲಿ_ಯಶಸ್ವಿ_ಡೆವಲಪರ್

#ಇವರ_ಜೊತೆ_ಸಾಗರದ_ರಂಗಕರ್ಮಿ_ಜೇಡಿಕುಣಿ_ಮಂಜುನಾಥ್

#ಒಂದು_ಕಾಲದ_ಸಾಗರದ_ಜೋಗ್_ಬಸ್_ನಿಲ್ದಾಣದ_ಸುಂದರಾಂಗ_ಸ್ಟೇಷನರಿ_ಶಾಪ್_ಮಾಲಿಕರಾಗಿದ್ದ_ಸತೀಶ್_ಬಂದಿದ್ದರು.

#ಆಗಿನ_70_80ರ_ದಶಕದ_ಸಾಗರ_ಜೋಗ್_ಬಸ್_ನಿಲ್ದಾಣದ_ಬೂತ_ಕಾಲದ_ನೆನಪಿಸಿ_ಕೊಂಡು_ಸಣ್ಣ_ಹರಟೆ

   ದಿಡೀರ್ ಆಗಿ ಬಂದ ಈ ಮೂವರೂ ಪರಸ್ಪರ ಜಿಗಣಿ ದೊಸ್ತರಾಗಿ ಮುಂಬೈನಲ್ಲಿನ ಕೆಲ ಕನ್ನಡ ಸಂಘದಲ್ಲಿನ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಮುಂಬೈನ ವಾಸಿ ಬಿಲ್ಡರ್ ಮದುಸೂದನರ ಅತಿಥಿಗಳಾಗಿ ಭಾಗವಹಿಸಿದ್ದರು.
  ಬಹಳ ವರ್ಷಗಳ ನಂತರ ಮದು ಬೇಟಿ ಕಷ್ಟದ ಜೀವನದಲ್ಲಿ ಇಡೀ ಕುಟುಂಬದ ನಾವೆಯನ್ನು ಸರಿ ದಾರಿಯಲ್ಲಿ ನಡೆಸಿ ದಡ ಸೇರಿಸಿದ ಬಂಗಾರದ ಮನುಷ್ಯದ ರಾಜಕುಮಾರರಂತೆಯೇ ನಯ ವಿನಯಗಳ ಸಂಗಮ.
        1978-1983ರವರೆಗೆ ಸಾಗರದಲ್ಲಿ ವಿದ್ಯಾಬ್ಯಾಸ ಮಾಡುವಾಗ ಸಾಗರದ ಜೋಗ್ ಬಸ್ ನಿಲ್ದಾಣ ನೋಡಿದವರಿಗೆ  ಕೃಷ್ಣರಾಯರ ನೆನಪಾಗಬಹುದು ಅವರ ಬಿಳಿ ಷರ್ಟ್ - ಪಂಚೆ ಮತ್ತು ನಿತ್ಯ ಶೇವ್ ಮಾಡಿದ ಅವರ ಆಕರ್ಷಕ ವ್ಯಕ್ತಿತ್ವ ಮರೆಯಲು ಸಾಧ್ಯವೇ ಇಲ್ಲ.
   ಗಜಾನನ ಕಂಪನಿಯ ಬಸ್ ಗಳ ಏಜೆಂಟರೂ ಆಗಿದ್ದರು ಮತ್ತು ಬಸ್ ಸ್ಟಾಂಡ್ ಎದುರು ಅವರ ಸ್ಟೇಷನರಿ ಅಂಗಡಿ ಕೂಡ ಇತ್ತು, ಅಷ್ಟು ಸಣ್ಣ ಜಾಗದಲ್ಲಿ ಅಷ್ಟು ಸುಂದರವಾಗಿ ಅವರು ಸಾಮಾನುಗಳನ್ನು ಜೋಡಿಸಿಡುತ್ತಿದ್ದರು ಅದನ್ನು ಕಣ್ಣು ತುಂಬಿಕೊಳ್ಳುವುದೇ ವಿದ್ಯಾರ್ಥಿಗಳಾದ ನಮಗೆ ವಿಶೇಷ.

ಈ ಲೇಖನಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತರಾದ ಡಿ.ಪಿ.ಸತೀಶ್ ಬರೆದಿದ್ದಾರೆ ಅದೇನೆಂದರೆ ಇವರ ಅಂಗಡಿ ಹೆಸರು ಕರ್ನಾಟಕ ಸ್ಟೋರ್ ಅಂತ ಮೈಸೂರು ರಾಜ್ಯಕ್ಕೆ ಕನಾ೯ಟಕ ಎಂಬ ನಾಮಕರಣ ಆಗದ ಕಾಲದಲ್ಲೇ ಇವರು ಕರ್ನಾಟಕ ಎಂದು ತಮ್ಮ ಅಂಗಡಿಗೆ ಹೆಸರಿಟ್ಟಿದ್ದರಂತೆ ಮತ್ತು ಜನರು ಇವರನ್ನು ಕರ್ನಾಟಕ ಸ್ಟೋರ್ ಕೃಷ್ಣ ರಾವ್ ಅಂತಲೇ ಕರೆಯುತ್ತಿದ್ದರಂತೆ.

   ಕೃಷ್ಣರಾಯರ ಪುತ್ರರೇ ಸತೀಶ್ ಇವರೂ ನೋಡಲು ಬಾಲೀವುಡ್ ಚಾಕೋಲೆಟ್ ಪೇಸಿನ ಸುಂದರಾಂಗ ತಂದೆಗೆ ಸಹಾಯಕರಾಗಿ ಅಂಗಡಿ ನೋಡಿಕೊಳ್ಳುತ್ತಾ ವಿದ್ಯಾಬ್ಯಾಸ ಮಾಡುತ್ತಿದ್ದರು ಈಗ ಹವ್ಯಾಸಿ ರಂಗಭೂಮಿ ಕಲಾವಿದರೂ ಆಗಿದ್ದಾರೆ.

   ಕಲ್ಮನೆ ಗ್ರಾಮ ಪಂಚಾಯಿತಿಯಲ್ಲಿನ ಸಹಕಾರಿ ಸಂಘದ ಉತ್ತುಂಗಕ್ಕೆ ಕಾರಣರಾಗಿ ಜನಾನುರಾಗಿ ಆಗಿದ್ದ ಬೀಮಣ್ಣರ ಸಹೋದರ ಖ್ಯಾತ ರಂಗಕರ್ಮಿ ರಂಗ ನಿರ್ದೇಶಕ ಮಂಜುನಾಥ್ ಜೇಡಿಕುಣಿ ಆಗಾಗ್ಗೆ ಬೇಟಿ ಆಗುತ್ತಿರುತ್ತಾರೆ ಹೀಗೆ ಈ ಮೂವರು ಇವತ್ತಿನ ಸಂಜೆಯನ್ನು 1980ರ ದಶಕದ ಸಾಗರ ಪಟ್ಟಣದ ಜೋಗ್ ಬಸ್ ಸ್ಟಾಂಡಿನ ಬೂತಕಾಲದ ನೋಟಕ್ಕೆ ಕರೆದೊಯ್ದು ಸುಂದರ ಸಂಜೆ ಆಗಿಸಿದರು.
  ದೊಡ್ಡ ಹಡಗಿನಂತ 200 ಕ್ಕೂ ಹೆಚ್ಚು ಜನ ಕುಳಿತು ಊಟ-ಉಪಹಾರ ಸೇವಿಸುವ ಬಸ್ ಸ್ಟಾಂಡ್ ಹೋಟೆಲ್ ಅಂಬಿಕಾ ಬೆಳಿಗ್ಗೆ 5.ರಿಂದ ರಾತ್ರಿ 11 ರ ತನಕ ತೆರೆದಿರುತ್ತಿತ್ತು ಆಗ ಬಸ್ ಸ್ಟಾಂಡ್ ಪಕ್ಕದ ಏಕೈಕ ಬಾವಿಯಿಂದ ರಾಟೆ - ಹಗ್ಗದಲ್ಲಿ ನೀರು ಸೇದಿ ಈ ಹೋಟೆಲ್ ನಲ್ಲಿ ಬಳಸುತ್ತಿದ್ದರು, ಗ್ಯಾಸ್ - ಮಿಕ್ಸಿ - ಗ್ರೈಂಡರ್ ಇರಲೇ ಇಲ್ಲ.
  ಎದುರಿನ ಸತೀಶರ ಅಂಗಡಿ ಪಕ್ಕದ ಹಿಮಾಲಯ ಐಸ್ ಕ್ರಿಂ, ಮೂರ್ತಿಯವರ ಅರುಣೋದಯ ಸೈಕಲ್ ಶಾಪ್, ಬೆಳಗಿನಿಂದ ಸಂಜೆ ತನಕ ಇಡೀ ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದು ಸೇರುತ್ತಿದ್ದ ವಿದ್ಯಾರ್ಥಿಗಳಿಂದ ಇಡೀ ಬಸ್ ನಿಲ್ದಾಣ ಜಗ ಮಗಿಸುತ್ತಿತ್ತು.
   ಆಗ ಇಲ್ಲಿ ಬೇರೆ ಹೋಟೆಲ್ ಲಾಡ್ಜ್ ಇರಲೇ ಇಲ್ಲ ನಂತರ ಕೆಳಗಡೆ ಪ್ರವಾಸಿ ಹೋಟೆಲ್ ಪ್ರಾರಂಭವಾಯಿತು.
  ಪಕ್ಕದಲ್ಲೇ ಇದ್ದ ಪೋಲಿಸ್ ಠಾಣೆಗೆ ಆಗಿನ ಅಪರಾದಿಗಳ ಬಾಯಿ ಬಿಡುಸುವ ಕ್ರಮವಾಗಿದ್ದ ಏರೋಪ್ಲೇನ್ ಶಿಕ್ಷೆಗೆ ಇದೇ ಅಂಬಿಕಾ ಹೋಟೆಲ್ ನ ಬಾವಿ ಹಗ್ಗ ರಾತ್ರಿ ಬೇಕಾಗಿತ್ತು ಅಂದಾಗ ಸತೀಶ್ ಇನ್ನೋಂದು ನೆನಪು ಮಾಡಿದರು ಅದೇನೆಂದರೆ ಅಪರಾಧಿಗಳಿಗೆ ಸ್ಲೇಟು ಹಿಡಿಸಿ ಪೋಟೋ ತೆಗೆಯಲು ಇವರ ಅಂಗಡಿಯ ಸ್ಲೇಟು ಒಯ್ದು ಅವರ ಕೆಲಸದ ನಂತರ ಪೋಲಿಸರು ವಾಪಾಸು ಮಾಡುತ್ತಿದ್ದರಂತೆ....
    ಮದು ಮತ್ತು ಮಂಜುನಾಥ್ ಜೇಡಿಕುಣಿ ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕಾ ಎರೆಡು ವರ್ಷದ ಹಿಂದೆಯೇ ಓದಿದ್ದಾರೆ ಇವತ್ತು ಮೂವರಿಗೂ ನನ್ನ ಕಾದಂಬರಿ ಮತ್ತು ಕಥಾ ಸಂಕಲನ ನೀಡಿ ಬೀಳ್ಕೊಟ್ಟೆ.
   ಮಂಜುನಾಥ್ ಜೇಡಿಕುಣಿಗೆ ಬೆಸ್ತರ ರಾಣಿ ಚಂಪಕಾ ರಂಗದ ಮೇಲೆ ತರುವ ಯೋಜನೆ ಇದೆಯಂತೆ ಅವರ ಕನಸು ನನಸಾಗಲಿ ಎಂದು ಹಾರೈಸಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...