Skip to main content

Blog number 1122. ಒಂದು ಕಾಲದ ಸಾಗರದ ಜೋಗ್ ಬಸ್ ನಿಲ್ದಾಣವನ್ನು ಬೂತಕಾಲದ ಕನ್ನಡಿಯಲ್ಲಿ ನೋಡುವ ಅವಕಾಶ ಮಾಡಿದ ಸಾಗರದ ಸತೀಶ್, ಜೇಡಿಕುಣಿ ಮಂಜುನಾಥ್ ಮತ್ತು ಮುಂಬೈಯಲ್ಲಿ ನೆಲೆಸಿರುವ ಮದು ಇವರ ಜೊತೆಯ ಈ ಸುಂದರ ಸಂಜೆ .

#ಇವತ್ತಿನ_ಸುಂದರ_ಸಂಜೆ

#ಸಾಗರದಿಂದ_ಬಂದವರು_80_ರ_ದಶಕದ_ನೆನಪು_ತಂದರು.

#ಸಾಗರದ_ಪ್ರತಿಭಾವಂತ_ಮದುಸೂದನ್_ಈಗ_ಮುಂಬೈನಲ್ಲಿ_ಯಶಸ್ವಿ_ಡೆವಲಪರ್

#ಇವರ_ಜೊತೆ_ಸಾಗರದ_ರಂಗಕರ್ಮಿ_ಜೇಡಿಕುಣಿ_ಮಂಜುನಾಥ್

#ಒಂದು_ಕಾಲದ_ಸಾಗರದ_ಜೋಗ್_ಬಸ್_ನಿಲ್ದಾಣದ_ಸುಂದರಾಂಗ_ಸ್ಟೇಷನರಿ_ಶಾಪ್_ಮಾಲಿಕರಾಗಿದ್ದ_ಸತೀಶ್_ಬಂದಿದ್ದರು.

#ಆಗಿನ_70_80ರ_ದಶಕದ_ಸಾಗರ_ಜೋಗ್_ಬಸ್_ನಿಲ್ದಾಣದ_ಬೂತ_ಕಾಲದ_ನೆನಪಿಸಿ_ಕೊಂಡು_ಸಣ್ಣ_ಹರಟೆ

   ದಿಡೀರ್ ಆಗಿ ಬಂದ ಈ ಮೂವರೂ ಪರಸ್ಪರ ಜಿಗಣಿ ದೊಸ್ತರಾಗಿ ಮುಂಬೈನಲ್ಲಿನ ಕೆಲ ಕನ್ನಡ ಸಂಘದಲ್ಲಿನ ಸಾಂಸ್ಕೃತಿಕ ಕಾಯ೯ಕ್ರಮಕ್ಕೆ ಮುಂಬೈನ ವಾಸಿ ಬಿಲ್ಡರ್ ಮದುಸೂದನರ ಅತಿಥಿಗಳಾಗಿ ಭಾಗವಹಿಸಿದ್ದರು.
  ಬಹಳ ವರ್ಷಗಳ ನಂತರ ಮದು ಬೇಟಿ ಕಷ್ಟದ ಜೀವನದಲ್ಲಿ ಇಡೀ ಕುಟುಂಬದ ನಾವೆಯನ್ನು ಸರಿ ದಾರಿಯಲ್ಲಿ ನಡೆಸಿ ದಡ ಸೇರಿಸಿದ ಬಂಗಾರದ ಮನುಷ್ಯದ ರಾಜಕುಮಾರರಂತೆಯೇ ನಯ ವಿನಯಗಳ ಸಂಗಮ.
        1978-1983ರವರೆಗೆ ಸಾಗರದಲ್ಲಿ ವಿದ್ಯಾಬ್ಯಾಸ ಮಾಡುವಾಗ ಸಾಗರದ ಜೋಗ್ ಬಸ್ ನಿಲ್ದಾಣ ನೋಡಿದವರಿಗೆ  ಕೃಷ್ಣರಾಯರ ನೆನಪಾಗಬಹುದು ಅವರ ಬಿಳಿ ಷರ್ಟ್ - ಪಂಚೆ ಮತ್ತು ನಿತ್ಯ ಶೇವ್ ಮಾಡಿದ ಅವರ ಆಕರ್ಷಕ ವ್ಯಕ್ತಿತ್ವ ಮರೆಯಲು ಸಾಧ್ಯವೇ ಇಲ್ಲ.
   ಗಜಾನನ ಕಂಪನಿಯ ಬಸ್ ಗಳ ಏಜೆಂಟರೂ ಆಗಿದ್ದರು ಮತ್ತು ಬಸ್ ಸ್ಟಾಂಡ್ ಎದುರು ಅವರ ಸ್ಟೇಷನರಿ ಅಂಗಡಿ ಕೂಡ ಇತ್ತು, ಅಷ್ಟು ಸಣ್ಣ ಜಾಗದಲ್ಲಿ ಅಷ್ಟು ಸುಂದರವಾಗಿ ಅವರು ಸಾಮಾನುಗಳನ್ನು ಜೋಡಿಸಿಡುತ್ತಿದ್ದರು ಅದನ್ನು ಕಣ್ಣು ತುಂಬಿಕೊಳ್ಳುವುದೇ ವಿದ್ಯಾರ್ಥಿಗಳಾದ ನಮಗೆ ವಿಶೇಷ.

ಈ ಲೇಖನಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತರಾದ ಡಿ.ಪಿ.ಸತೀಶ್ ಬರೆದಿದ್ದಾರೆ ಅದೇನೆಂದರೆ ಇವರ ಅಂಗಡಿ ಹೆಸರು ಕರ್ನಾಟಕ ಸ್ಟೋರ್ ಅಂತ ಮೈಸೂರು ರಾಜ್ಯಕ್ಕೆ ಕನಾ೯ಟಕ ಎಂಬ ನಾಮಕರಣ ಆಗದ ಕಾಲದಲ್ಲೇ ಇವರು ಕರ್ನಾಟಕ ಎಂದು ತಮ್ಮ ಅಂಗಡಿಗೆ ಹೆಸರಿಟ್ಟಿದ್ದರಂತೆ ಮತ್ತು ಜನರು ಇವರನ್ನು ಕರ್ನಾಟಕ ಸ್ಟೋರ್ ಕೃಷ್ಣ ರಾವ್ ಅಂತಲೇ ಕರೆಯುತ್ತಿದ್ದರಂತೆ.

   ಕೃಷ್ಣರಾಯರ ಪುತ್ರರೇ ಸತೀಶ್ ಇವರೂ ನೋಡಲು ಬಾಲೀವುಡ್ ಚಾಕೋಲೆಟ್ ಪೇಸಿನ ಸುಂದರಾಂಗ ತಂದೆಗೆ ಸಹಾಯಕರಾಗಿ ಅಂಗಡಿ ನೋಡಿಕೊಳ್ಳುತ್ತಾ ವಿದ್ಯಾಬ್ಯಾಸ ಮಾಡುತ್ತಿದ್ದರು ಈಗ ಹವ್ಯಾಸಿ ರಂಗಭೂಮಿ ಕಲಾವಿದರೂ ಆಗಿದ್ದಾರೆ.

   ಕಲ್ಮನೆ ಗ್ರಾಮ ಪಂಚಾಯಿತಿಯಲ್ಲಿನ ಸಹಕಾರಿ ಸಂಘದ ಉತ್ತುಂಗಕ್ಕೆ ಕಾರಣರಾಗಿ ಜನಾನುರಾಗಿ ಆಗಿದ್ದ ಬೀಮಣ್ಣರ ಸಹೋದರ ಖ್ಯಾತ ರಂಗಕರ್ಮಿ ರಂಗ ನಿರ್ದೇಶಕ ಮಂಜುನಾಥ್ ಜೇಡಿಕುಣಿ ಆಗಾಗ್ಗೆ ಬೇಟಿ ಆಗುತ್ತಿರುತ್ತಾರೆ ಹೀಗೆ ಈ ಮೂವರು ಇವತ್ತಿನ ಸಂಜೆಯನ್ನು 1980ರ ದಶಕದ ಸಾಗರ ಪಟ್ಟಣದ ಜೋಗ್ ಬಸ್ ಸ್ಟಾಂಡಿನ ಬೂತಕಾಲದ ನೋಟಕ್ಕೆ ಕರೆದೊಯ್ದು ಸುಂದರ ಸಂಜೆ ಆಗಿಸಿದರು.
  ದೊಡ್ಡ ಹಡಗಿನಂತ 200 ಕ್ಕೂ ಹೆಚ್ಚು ಜನ ಕುಳಿತು ಊಟ-ಉಪಹಾರ ಸೇವಿಸುವ ಬಸ್ ಸ್ಟಾಂಡ್ ಹೋಟೆಲ್ ಅಂಬಿಕಾ ಬೆಳಿಗ್ಗೆ 5.ರಿಂದ ರಾತ್ರಿ 11 ರ ತನಕ ತೆರೆದಿರುತ್ತಿತ್ತು ಆಗ ಬಸ್ ಸ್ಟಾಂಡ್ ಪಕ್ಕದ ಏಕೈಕ ಬಾವಿಯಿಂದ ರಾಟೆ - ಹಗ್ಗದಲ್ಲಿ ನೀರು ಸೇದಿ ಈ ಹೋಟೆಲ್ ನಲ್ಲಿ ಬಳಸುತ್ತಿದ್ದರು, ಗ್ಯಾಸ್ - ಮಿಕ್ಸಿ - ಗ್ರೈಂಡರ್ ಇರಲೇ ಇಲ್ಲ.
  ಎದುರಿನ ಸತೀಶರ ಅಂಗಡಿ ಪಕ್ಕದ ಹಿಮಾಲಯ ಐಸ್ ಕ್ರಿಂ, ಮೂರ್ತಿಯವರ ಅರುಣೋದಯ ಸೈಕಲ್ ಶಾಪ್, ಬೆಳಗಿನಿಂದ ಸಂಜೆ ತನಕ ಇಡೀ ತಾಲ್ಲೂಕಿನ ಮೂಲೆ ಮೂಲೆಗಳಿಂದ ಬಂದು ಸೇರುತ್ತಿದ್ದ ವಿದ್ಯಾರ್ಥಿಗಳಿಂದ ಇಡೀ ಬಸ್ ನಿಲ್ದಾಣ ಜಗ ಮಗಿಸುತ್ತಿತ್ತು.
   ಆಗ ಇಲ್ಲಿ ಬೇರೆ ಹೋಟೆಲ್ ಲಾಡ್ಜ್ ಇರಲೇ ಇಲ್ಲ ನಂತರ ಕೆಳಗಡೆ ಪ್ರವಾಸಿ ಹೋಟೆಲ್ ಪ್ರಾರಂಭವಾಯಿತು.
  ಪಕ್ಕದಲ್ಲೇ ಇದ್ದ ಪೋಲಿಸ್ ಠಾಣೆಗೆ ಆಗಿನ ಅಪರಾದಿಗಳ ಬಾಯಿ ಬಿಡುಸುವ ಕ್ರಮವಾಗಿದ್ದ ಏರೋಪ್ಲೇನ್ ಶಿಕ್ಷೆಗೆ ಇದೇ ಅಂಬಿಕಾ ಹೋಟೆಲ್ ನ ಬಾವಿ ಹಗ್ಗ ರಾತ್ರಿ ಬೇಕಾಗಿತ್ತು ಅಂದಾಗ ಸತೀಶ್ ಇನ್ನೋಂದು ನೆನಪು ಮಾಡಿದರು ಅದೇನೆಂದರೆ ಅಪರಾಧಿಗಳಿಗೆ ಸ್ಲೇಟು ಹಿಡಿಸಿ ಪೋಟೋ ತೆಗೆಯಲು ಇವರ ಅಂಗಡಿಯ ಸ್ಲೇಟು ಒಯ್ದು ಅವರ ಕೆಲಸದ ನಂತರ ಪೋಲಿಸರು ವಾಪಾಸು ಮಾಡುತ್ತಿದ್ದರಂತೆ....
    ಮದು ಮತ್ತು ಮಂಜುನಾಥ್ ಜೇಡಿಕುಣಿ ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ ಬೆಸ್ತರ ರಾಣಿ ಚಂಪಕಾ ಎರೆಡು ವರ್ಷದ ಹಿಂದೆಯೇ ಓದಿದ್ದಾರೆ ಇವತ್ತು ಮೂವರಿಗೂ ನನ್ನ ಕಾದಂಬರಿ ಮತ್ತು ಕಥಾ ಸಂಕಲನ ನೀಡಿ ಬೀಳ್ಕೊಟ್ಟೆ.
   ಮಂಜುನಾಥ್ ಜೇಡಿಕುಣಿಗೆ ಬೆಸ್ತರ ರಾಣಿ ಚಂಪಕಾ ರಂಗದ ಮೇಲೆ ತರುವ ಯೋಜನೆ ಇದೆಯಂತೆ ಅವರ ಕನಸು ನನಸಾಗಲಿ ಎಂದು ಹಾರೈಸಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ