Skip to main content

Posts

Showing posts with the label Garbage disposal and management is very difficult

ನನ್ನ ಊರಿನ ಗ್ರಾಮ ಪಂಚಾಯತ್ ಕಸ ವಿಲೇವಾರಿ ಅಭಿಯಾನ ಉತ್ಸಾಹಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬ೦ದಿ ವರ್ಗದ ಶ್ರಮದಿಂದ ಯಶಸ್ವಿ ಆಗಲಿದೆ

#ನನ್ನ_ಗ್ರಾಮ_ಪಂಚಾಯತ್_ಗ್ರಾಮದ_ಕಸ_ವಿಲೇವಾರಿಗೆ_ಸಜ್ಜಾಗಿದೆ_ಗ್ರಾಮಸ್ಥರ_ಸಹಕಾರ_ಇರಲಿ     ಇವತ್ತು ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಗಣಪತಿ ಇರುವಕ್ಕಿ ಸದಸ್ಯರಾದ ಗೇರುಬೀಸು ಶಿವಾನಂದ, ಗೇರುಬೀಸು ನಟರಾಜ ಮಹಿಳಾ ಸದಸ್ಯರು, ಉತ್ಸಾಹಿ ಪಿಡಿಓ ಕುಮಾರ್, ಕಾರ್ಯದರ್ಶಿ ಕರಿಬಸಪ್ಪ, ಬಿಲ್ ಕಲೆಕ್ಟರ್ ಇರುವಕ್ಕಿ ಕುಮಾರ್ ಮತ್ತಿತರರೆಲ್ಲ ನೂತನ ಕಸ ಸಾಗಾಣಿಕೆ ವಾಹನದ ಜೊತೆ ಗ್ರಾಮದ ಪ್ರತಿ ಮನೆ ಮನೆಗೂ ಹೋಗಿ ಪ್ರತಿ ಸೋಮವಾರ ಮತ್ತು ಗುರುವಾರ ಗ್ರಾಮ ಪಂಚಾಯತ್ ನ ಕಸ ವಿಲೇವಾರಿ ವಾಹನ ಮತ್ತು ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಕಸ ಸಂಗ್ರಹಿಸಲು, ಒಣ ಕಸ ನೀಲಿ ಡಬ್ಬಿಗೆ ಹಾಕಿಡಿ ಮತ್ತು ಹಸಿ ಕಸ ಹಸಿರು ಡಬ್ಬಿಗೆ ಹಾಕಿಡಿ ಮುಂದಿನ ದಿನದಲ್ಲಿ ಯಡೇಹಳ್ಳಿ ಕಸ ರಹಿತ ಗ್ರಾಮವಾಗಿ ಆರೋಗ್ಯ ಕಾಪಾಡೋಣ ಅಂತ ಹೇಳಿ ಗ್ರಾಮ ಪಂಚಾಯತ್ ನಿಂದ ಒಂದೊಂದು ನೀಲಿ ಮತ್ತು ಹಸಿರು ಡಬ್ಬಿ ಉಚಿತವಾಗಿ ನೀಡುತ್ತಾ ಹೋದರು.   ಕೇಂದ್ರ ಮತ್ತು ರಾಜ್ಯ ಸರ್ಕಾರ #ಸ್ವಚ್ಚತಾ_ಸಂಕಿರ್ಣ ಅನ್ನುವ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ಗೆ ಕಸ ವಿಲೇವಾರಿಗೆ ವಾಹನ ನೀಡುತ್ತಿದೆ ಈ ವಾಹನದ ಬೆಲೆ 5.60 ಲಕ್ಷ ಇದರಲ್ಲಿ 3 ಲಕ್ಷ ಗ್ರಾಮ ಪಂಚಾಯತ್ ಪಾವತಿಸಬೇಕು ಉಳಿದ ಹಣ ಸರ್ಕಾರದ್ದು, ಕಸ ಸಂಗ್ರಹಿಸುವ ಡಬ್ಬಿ ಮತ್ತಿತರ ಸಲಕರಣೆ, ಸಿಬ್ಬಂದಿ ಸುರಕ್ಷೆ, ವ...