Blog number 968. ಶಿವಮೊಗ್ಗದ ಮಾಜಿ ನಗರ ಸಭಾದ್ಯಕ್ಷರು, ಶಿವಮೊಗ್ಗದ ಮೊದಲ ಬಿ ಜೆ ಪಿ ಪಕ್ಷದ ಶಾಸಕರಾದ ಆನಂದರಾವ್ ಪುತ್ರ ಶಂಕರ್ ಮಾಲೂರ್ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಶೆ ಬರೆದಿದ್ದಾರೆ.
#ಶಂಕರ್_ಮಾಲೂರು_ಅವರ_ವಿಮಷೆ೯ ಎಲ್ಲಾ ಪಕ್ಷದವರೊಡನೆ ಸಂವನ ಶಕ್ತಿ ಇರುವ ಶಿವಮೊಗ್ಗದ ಭಾರತೀಯ ಜನತಾ ಪಕ್ಷದ ಶಂಕರ್ ಮಾಲೂರು ಅಗ್ರ ಪಂಕ್ತಿಯಲ್ಲಿದ್ದಾರೆ. ಓದುವ ಹವ್ಯಾಸ ಮತ್ತು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಎಂ.ಆನಂದ್ ರಾವ್ ಟ್ರಸ್ಟ್, ಹೊಯ್ಸಳ ಹೆಲ್ತ್ ಕೇರ್ ಮುಂತಾದ ಸೇವಾ ಚಟುವಟಿಕೆ ಕೂಡ ನಡೆಸಿದ್ದಾರೆ. ಇವರ ಹೊಯ್ಸಳ ಹೆಲ್ತ್ ಕೇರ್ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಿ ಅತಿ ಕಡಿಮೆ ವೆಚ್ಚದಲ್ಲಿ ಮದುಮೇಹಿಗಳಿಗೆ ಡಯಾಲಿಸಿಸ್ ಸೌಲಭ್ಯ ನೀಡುತ್ತದೆ. ಇವರ ತಂದೆ ಆನಂದರಾವ್ ಶಿವಮೊಗ್ಗ ಜಿಲ್ಲೆಯ ಮೊದಲ ಬಿಜೆಪಿ ಶಾಸಕರು ಅವರ ಮನೆ ಮೇಲೆ ಬಾಂಬ್ ದಾಳಿ ಆಗಿತ್ತು ಎನ್ನುವುದು ಇತಿಹಾಸ, ಶಿವಮೊಗ್ಗ ನಗರ ಸಭೆ ಅಧ್ಯಕ್ಷರಾಗಿದ್ದರೂ ಸರಳವಾಗಿ ಸ್ಕೂಟರ್ ಮೇಲೆ ಸಂಚರಿಸುತ್ತ ಜನ ಸಾಮಾನ್ಯರ ಅದ್ಯಕ್ಷರಾಗಿದ್ದ ಶಂಕರ್ ನನ್ನ ಕಾದಂಬರಿ #ಬೆಸ್ತರರಾಣಿ_ಚಂಪಕಾ ಓದಿ ವಿಮಷೆ೯ ಮಾಡಿದ್ದು ನನಗೆ ಸಂತೋಷ ಉಂಟು ಮಾಡಿದೆ