Blog number 1137. ಶಿವಮೊಗ್ಗ ಮುನೀರ್ ನೆನಪಿನ ಸರಣಿ - 3 . ಪ್ರೋಪೆಸರ್ ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಸ್ಥಾಪಸಿದ ಕಷ್ಟದ ದಿನಗಳು, ಚಂದ್ರಗುತ್ತಿ ಬೆತ್ತಲೆ ಸೇವೆ ನಿಶೇದ ಹೋರಾಟದಲ್ಲಿ ಬಿ.ಕೃಷ್ಣಪ್ಪ ಮತ್ತು ಕಡಿದಾಳು ಶಾಮಣ್ಣ ಬದುಕಿ ಬಂದ ರೋಚಕ ಕಥೆ ಇಲ್ಲಿದೆ.
https://youtu.be/aa_Ba3MVCFg #ಶಿವಮೊಗ್ಗ_ಮುನೀರ್_ನೆನಪಿನ_ಸರಣಿ_3. #ಸಮಾಜವಾದಿ_ಯುವಜನ_ಸಭಾದ_ಬಿ_ಕೃಷ್ಣಪ್ಪ #ದಲಿತ_ಸಂಘರ್ಷ_ಸಮಿತಿ_ಸ್ಥಾಪಿಸಿದ_ಕಾರಣ #ಪ್ರಾರಂಭದಲ್ಲಿ_ಯುವಜನ_ಸಭಾದ_ಗೆಳೆಯರ_ವಿರೋದ #ಸ್ವತಃ_ಹಾಡುಗಾರ_ಬಿ_ಕೃಷ್ಣಪ್ಪ. ದಲಿತ ಸಂಘರ್ಷ ಸಮಿತಿ ಕಟ್ಟುವ ಉದ್ದೇಶ ಬಿ.ಕೃಷ್ಣಪ್ಪರಿಗೆ ಬಂದದ್ದು ಅವರು ಹೆಚ್ಚು ಹೆಚ್ಚು ಅಂಬೆಡ್ಕರ್ ಓದಿದ್ದರಿಂದ, ನ೦ತರ ಸಮಾಜವಾದಿ ಯುವ ಜನ ಸಭಾ ತ್ಯಜಿಸಿ ಹಗಲಲ್ಲಿ ಕಾಲೇಜಿನಲ್ಲಿ ಉಪನ್ಯಾಸ ಮಾಡಿ ರಾತ್ರಿ ದಲಿತರ ಕಾಲೋನಿಯಲ್ಲಿ ದಲಿತರ ಜನ ಜಾಗೃತಿ ಸಂಘಟನೆಯ ಸಭೆ ನಡೆಸುತ್ತಿದ್ದರಂತೆ. ನಂತರ ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಇಂದೂದರ ಹೊನ್ನಾಪುರ ಮುಂತಾದವರು ಸೇರಿ ಇಡೀ ರಾಜ್ಯಕ್ಕೆ ಡಿ.ಎಸ್.ಎಸ್ ವ್ಯಾಪಿಸಿತು. ಚಂದ್ರಗುತ್ತಿ ಬೆತ್ತಲೆ ಸೇವೆ ವಿರೋದಿಸಿ ಬಿ.ಕೃಷ್ಣಪ್ಪನವರು ಪ್ರಾರಂಬಿಸಿದ ಚಳವಳಿ, ಬಿ.ಕೃಷ್ಣಪ್ಪರ ಹತ್ಯಾ ಪ್ರಯತ್ನದದಲ್ಲಿ ಬದುಕುಳಿದದ್ದು, ಕಡಿದಾಳು ಶಾಮಣ್ಣ ಓಡಿ ಬಚಾವಾದದ್ದು ಇಲ್ಲಿ ಅವರ ಒಡನಾಡಿ ಶಿವಮೊಗ್ಗ ಮುನೀರ್ ನೆನಪಿನ ಸರಣಿಯಲ್ಲಿದೆ.