Skip to main content

4190.ಜನೌಷದಿಜನರಿಕ್_ಔಷದಿ_ಅಂತ_ಮೂಗು_ಮುರಿಯಬೇಡಿ.


ಜನೌಷದಿ
ಜನರಿಕ್_ಔಷದಿ_ಅಂತ_ಮೂಗು_ಮುರಿಯಬೇಡಿ.

 ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆ ಆಗಿದೆ.

  ಬ್ರಾಂಡೆಡ್ ಔಷಧಗಳಲ್ಲಿ ಔಷಧದ ಮೂಲ ಬೆಲೆಗಿಂತ ಕಂಪನಿಯ ಮಾರ್ಕೆಟಿಂಗ್, ಜಾಹೀರಾತು ಮತ್ತು ಕಮಿಷನ್‌ಗಳ ಪಾಲೇ ಶೇ. 70-80 ರಷ್ಟಿರುತ್ತದೆ ಎಂಬ ಸತ್ಯ ಸಾಮಾನ್ಯ ಜನರಿಗೆ ತಿಳಿದಿಲ್ಲ.

  ಜನರಿಕ್ ಔಷಧಿ ವಿಶ್ವದಾದ್ಯಂತ ಮುಂದುವರಿದ ದೇಶಗಳಲ್ಲೂ ಲಭ್ಯವಿದೆ ಇದು ನಮ್ಮ ಪಾಕೆಟ್ ಫ್ರೆಂಡ್ಲಿ ಔಷದಿ ನೀವು ಖರೀದಿಸುವ ಈ ಔಷಧಿ ಬಿಲ್ಲಿನಲ್ಲಿ ಜಾಹಿರಾತಿಗೆ ಮತ್ತು ಮಧ್ಯವರ್ತಿ ವೈದ್ಯರಿಗೆ ಕಮಿಷನ್ ಹೋಗುವುದಿಲ್ಲ ಆದ್ದರಿಂದ ಅತಿ ಕಡಿಮೆ ಬೆಲೆಗೆ ಲಭ್ಯ.

  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಿಂದ ಕೊಟ್ಯಾಂತರ ಬಡವರಿಗೆ ವರದಾನ ಆಗಿದೆ.

  #ಆದರೆ ....

 ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಬ್ರಾಂಡೆಡ್ ಚೀಲದಲ್ಲಿ ಹಾಕಿ ಮಾರಿ ಜನರಿಂದ ದುಬಾರಿ ಬೆಲೆ ಪಡೆಯುವಂತೆ ಔಷಧ ಮಾರುಕಟ್ಟೆಯಲ್ಲೂ ಇದೇ ಮಾನಸಿಕತೆ ಕೆಲಸ ಮಾಡುತ್ತಿದೆ.

  ​ಜನರು ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಕಡೆಗಣಿಸಲು ಪ್ರಮುಖ ಕಾರಣಗಳು ​ಬೆಲೆ ಮತ್ತು ಗುಣಮಟ್ಟದ ಭ್ರಮೆ.
 
 ​ಸಮಾಜದಲ್ಲಿ "ಹೆಚ್ಚು ಬೆಲೆ ಇದ್ದರೆ ಒಳ್ಳೆಯ ಗುಣಮಟ್ಟ, ಕಡಿಮೆ ಬೆಲೆ ಇದ್ದರೆ ಕಳಪೆ" ಎಂಬ ಗಟ್ಟಿಯಾದ ಪೂರ್ವಾಗ್ರಹವಿದೆ.
 
 ​ಬಟ್ಟೆ, ಮೊಬೈಲ್ ಅಥವಾ ದಿನಸಿ ವಿಷಯದಲ್ಲಿ ಈ ಯೋಚನೆ ಕೆಲವೊಮ್ಮೆ ನಿಜವಿರಬಹುದು ಆದರೆ ಜೀವರಕ್ಷಕ ಔಷಧಗಳ ವಿಷಯದಲ್ಲೂ ಜನರು ಇದೇ ಲೆಕ್ಕಾಚಾರ ಹಚ್ಚಿ ಕಡಿಮೆ ಬೆಲೆ ಕಂಡ ಕೂಡಲೇ "ಇದು ರೋಗ ವಾಸಿ ಮಾಡುವುದಿಲ್ಲವೇನೋ" ಎಂದು ಭಯಪಡುತ್ತಾರೆ.

 ​ಆಕರ್ಷಕ ಪ್ಯಾಕೇಜಿಂಗ್ ಮತ್ತು ಪ್ರಚಾರದ ಪ್ರಭಾವ
​ಬ್ರಾಂಡೆಡ್ ಕಂಪನಿಗಳು ಹೊಳಪಿನ ಫಾಯಿಲ್,ಆಕರ್ಷಕ ಬಣ್ಣಗಳು ಹಾಗೂ ಬ್ರಾಂಡ್ ಲೋಗೋಗಳ ಮೂಲಕ ಔಷಧವನ್ನು ಪ್ರೀಮಿಯಂ ಉತ್ಪನ್ನದಂತೆ ಪ್ರಸ್ತುತಪಡಿಸುತ್ತವೆ.
 
 ​ಜನೌಷಧಿ ಅಥವಾ ಜೆನೆರಿಕ್ ಔಷಧಗಳ ಪ್ಯಾಕಿಂಗ್ ತುಂಬಾ ಸರಳವಾಗಿರುತ್ತದೆ.

  ಮೇಲ್ನೋಟದ ಅಂದ-ಚೆಂದ ನೋಡಿ ನಿರ್ಧರಿಸುವ ಗ್ರಾಹಕರು, ಒಳಗೆ ಇರುವ ರಾಸಾಯನಿಕ ಸೂತ್ರ ಎರಡರಲ್ಲೂ ಒಂದೇ ಎಂಬುದನ್ನು ಗಮನಿಸುವುದಿಲ್ಲ.

ಇಲ್ಲಿ ಹೇಳಿದ ಉದಾಹರಣೆ ಸಂಪೂರ್ಣ ಸತ್ಯ ಮತ್ತು ವಾಸ್ತವಕ್ಕೆ ಹಿಡಿದ ಕನ್ನಡಿ.

​ಆರೋಗ್ಯದ ವಿಷಯದಲ್ಲಿ 'ರಿಸ್ಕ್' ತೆಗೆದುಕೊಳ್ಳದ ಭಯ
​ಮನುಷ್ಯರಿಗೆ ತಮ್ಮ ಅಥವಾ ಕುಟುಂಬದವರ ಆರೋಗ್ಯದ ವಿಷಯದಲ್ಲಿ ಸಣ್ಣ ಅನುಮಾನವಿದ್ದರೂ ಆತಂಕ ಕಾಡುತ್ತದೆ.

​"ಹಣ ಹೋದರೂ ಪರವಾಗಿಲ್ಲ, ಪ್ರಾಣ ಮುಖ್ಯ ಎಂದು ವೈದ್ಯರು ಬರೆದದ್ದನ್ನೇ ತರೋಣ" ಎಂಬ ಭಾವನಾತ್ಮಕ ಒತ್ತಡದಿಂದಾಗಿ ಜನರು ಸಾಲ ಮಾಡಿಯಾದರೂ ದುಬಾರಿ ಬ್ರಾಂಡೆಡ್ ಔಷಧಗಳನ್ನೇ ಖರೀದಿಸುತ್ತಾರೆ.

  #​ಮಾಹಿತಿಯ_ಕೊರತೆ.
​ಬ್ರಾಂಡೆಡ್ ಔಷಧಗಳಲ್ಲಿ ಔಷಧದ ಮೂಲ ಬೆಲೆಗಿಂತ ಕಂಪನಿಯ ಮಾರ್ಕೆಟಿಂಗ್, ಜಾಹೀರಾತು ಮತ್ತು ಕಮಿಷನ್‌ಗಳ ಪಾಲೇ ಶೇ. 70-80 ರಷ್ಟಿರುತ್ತದೆ ಎಂಬ ಸತ್ಯ ಸಾಮಾನ್ಯ ಜನರಿಗೆ ತಿಳಿದಿಲ್ಲ.

 ​ಜನೌಷಧಿಯಲ್ಲಿ ಈ ಮಾರ್ಕೆಟಿಂಗ್ ವೆಚ್ಚವಿಲ್ಲದಿರುವುದರಿಂದಲೇ ಬೆಲೆ ಕಡಿಮೆಯಾಗಿದೆ ವಿನಃ ಗುಣಮಟ್ಟ ಕಡಿಮೆಯಿರುವುದರಿಂದಲ್ಲ ಎಂಬ ತಿಳಿವಳಿಕೆ ಇನ್ನೂ ತಳಮಟ್ಟಕ್ಕೆ ತಲುಪಬೇಕಿದೆ.

 ​ಪಡಿತರದ ಅಕ್ಕಿಯಾಗಲಿ ಅಥವಾ ಪಾಲಿಶ್ ಮಾಡಿದ ಸೂಪರ್ ಮಾರ್ಕೆಟ್ ಅಕ್ಕಿಯಾಗಲಿ ಹೊಟ್ಟೆ ತುಂಬಿಸುವುದು ಅಕ್ಕಿಯಲ್ಲಿರುವ ಕಾರ್ಬೋಹೈಡ್ರೇಟ್ ಮಾತ್ರ.

  ಅದೇ ರೀತಿ ರೋಗ ವಾಸಿ ಮಾಡುವುದು ಬ್ರಾಂಡ್ ಹೆಸರಲ್ಲ, ಅದರಲ್ಲಿರುವ ರಾಸಾಯನಿಕ (ಸಾಲ್ಟ್). 

   ಈ ಸತ್ಯದ ಅರಿವು ಜನರಲ್ಲಿ ಹೆಚ್ಚಾದಾಗ ಮಾತ್ರ ಈ ಮನಸ್ಥಿತಿ ಬದಲಾಗಲು ಸಾಧ್ಯ.

   ಮುಂದಿನ ಲೇಖನದಲ್ಲಿ ಜನರಿಕ್ ಔಷಧಿಗಳ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಿ.

 #genericmedicine #brand #doctor #prescription #govtofindia #janowshadi

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...