ನನ್ನ 29 ಸಣ್ಣ ಕಥಾ ಸಂಕಲನ ಅಚ್ಚಿನ ಪೂರ್ವದಲ್ಲಿ ಓದಿದ ಮೂರನೆ ಓದುಗ ರಾಜ್ಯದ ಹಿರಿಯ ರಾಜಕೀಯ ವರದಿಗಾರ, ವಿಶ್ಲೇಷಕ ಆರ್.ಟಿ. ವಿಠಲ ಮೂರ್ತಿ ಬರೆದ ಅಭಿಪ್ರಾಯಗಳು
ನನ್ನ 29 ಸಣ್ಣ ಕಥೆಗಳು ಮುದ್ರಣ ಪೂರ್ವ ಓದಿದದವರು ಮೊದಲನೆಯದ್ದಾಗಿ ಪತ್ರಕರ್ತ ಶೃಂಗೇಶ್ ರು , ಎರಡನೆಯವರು ಖ್ಯಾತ ಲೇಖಕರು ಅಂಕಣಕಾರರಾದ #ಅರವಿಂದ_ಚೊಕ್ಕಾಡಿ,ಅವರು ಬರೆದದ್ದು ಈ ಹಿಂದೆ ಪೋಸ್ಟ್ ಮಾಡಿದ್ದೆ. ನಿನ್ನೆ ಹಿರಿಯ ಪತ್ರಕರ್ತರಾದ #ಆರ್_ಟಿ_ವಿಠಲಮೂರ್ತಿ ಈ ಕಥಾ ಸಂಕಲನ ಅಚ್ಚಿನ ಪೂರ್ವದಲ್ಲಿ ಓದಿ ಅಭಿಪ್ರಾಯ ಬರೆದಿದ್ದಾರೆ ಅದನ್ನು ನಿಮಗಾಗಿ ಪೋಸ್ಟ್ ಮಾಡಿದ್ದೇನೆ. ಸಾಗರ ತಾಲ್ಲೂಕಿನವರು ಹಾಲಿ ವಿಧಾನ ಸೌಧದಿಂದ ರಾಜಕೀಯ ವರದಿ ವಿಶ್ಲೇಷಣೆ ಮಾಡುವವರಲ್ಲಿ ಇವರೇ ಹಿರಿಯರೆಂದು ಮೊನ್ನೆ #ವಿಷ್ವೇಶ್ವರ_ಭಟ್ಟರು ಅವರ ಕ್ಲಬ್ ಹೌಸ್ ನಲ್ಲಿ ಘೋಷಿಸಿದ್ದಾರೆ, ಸತತ 35 ವರ್ಷದಿಂದ ರಾಜಕೀಯ ವರದಿಗಾರರು ವಿಠಲಮೂರ್ತಿ ಅನ್ನುವುದು ನಮ್ಮ ತಾಲ್ಲೂಕಿಗೆ ಮತ್ತು ಜಿಲ್ಲೆಗೆ ಹೆಮ್ಮೆ. ಅವರು ನನ್ನ 29 ಸಣ್ಣ ಕಥೆಗಳ ಸಂಕಲನ ಓದಿ ಬರೆದದ್ದು ಇಲ್ಲಿದೆ. #ನನ್ನ_ಓದಿಗೆ_ದಕ್ಕಿದ್ದು.. #ಇದು_ಕಥಾನಾಯಕನ_ಕತೆ! ಇಲ್ಲಿನ ಎಲ್ಲ ಕತೆಗಳ ಒಳ ಹೊಕ್ಕರೆ,ಅವುಗಳ ಮೈ ತಡವುತ್ತಿದ್ದರೆ,ಅವುಗಳ ಎದೆಬಡಿತವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಹೀಗಾಗಿಯೇ ಇದು ಕಥಾನಾಯಕನ ಕತೆ.ಇತ್ತೀಚಿನ ದಿನಗಳಲ್ಲಿ ತಮ್ಮ ಬರಹಗಳ ಮೂಲ...