Skip to main content

Posts

Showing posts with the label Tenth anniversary of My firm desition on political retirement

Blog number 1952. ನನ್ನ ರಾಜಕಾರಣದ ನಿವೃತ್ತಿಗೆ ಒಂದು ದಶಕ, 2014 ಲೋಕ ಸಭಾ ಚುನಾವಣೆಯ ಪ್ರಚಾರ ಸಭೆಗಳು ರಾಜಕಾರಣದ ಕೊನೆಯ ದಿನಗಳ ನೆನಪು.

#ಪುಲ್ವಾಮ_ಭಾರತೀಯ_ಸೈನಿಕರ_ಹತ್ಯಾಕಾಂಡಕ್ಕೆ_ಐದು_ವರ್ಷ #ಭಯೋತ್ಪಾದನೆ_ನಿಗ್ರಹ_ಅಷ್ಟು_ಸುಲಭವಲ್ಲ_ವಿಶ್ವದ_ಹಿರಿಯಣ್ಣ_ಅಮೇರೀಕಾವೇ_ಬಸವಳಿದಿದೆ. #ಅಯನೂರು_ಮಂಜುನಾಥರು_2014ರ_ಲೋಕಸಭಾ_ಚುನಾವಣೆಯಲ್ಲಿ_ಜಿಲ್ಲಾ_ಭಾಜಪ_ಅಧ್ಯಕ್ಷರು #ಅವರ_ಮಾತುಗಳು_ಪರಿಣಾಮಕಾರಿಯಾಗಿ_ಮತಗಳಾಗಿ_ಪರಿವರ್ತನೆ_ಆಯಿತು #ಈ_ಚುನಾವಣೆಯೇ_ನನ್ನ_ರಾಜಕೀಯ_ಜೀವನದ_ಕೊನೆ #ರಾಜಕೀಯದಿಂದ_ನಿವೃತ್ತಿ_ಫೋಷಿಸಿಕೊಂಡು_10_ವರ್ಷ_ಆಯಿತು.    ಇವತ್ತಿಗೆ ಸರಿಯಾಗಿ 5 ವರ್ಷದ ಹಿಂದೆ ಪುಲ್ವಾಮ ಸೈನಿಕರ ಹತ್ಯಾಕಂಡ ನಡೆಯಿತು,ಇಲ್ಲಿ ಈಗ ಈ ವಿಚಾರ ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಾಚಟ ಸರಿ ಅಲ್ಲ, ಸೈನ್ಯದ ವಿಚಾರವನ್ನ ಚುನಾವಣ ಅಸ್ತ್ರವಾಗಿ ಬಳಸುವುದೂ ಕೂಡ ಸರಿಯಲ್ಲ, ಇದನ್ನೆಲ್ಲ ಎದುರಿಸಲು ನೈತಿಕ ಬೆಂಬಲ ಬೇಕಾಗಿದೆ, ಭಕ್ತರು V/S ಗುಲಾಮರು ಎನ್ನುತ್ತಾ ಪರಸ್ಪರ ನಿಂದನೆಯ ಸೋಷಿಯಲ್ ಮೀಡಿಯಾದ ವಚು೯ಯಲ್ ವಾರ್ ನ ಪೌರುಷಕ್ಕೆ ಯಾವುದೇ ಬೆಲೆ ಇಲ್ಲ.   ಇದನ್ನ ಇಲ್ಲಿ ಉಲ್ಲೇಖಿಸಲು ಕಾರಣ ಇದೆ, 2013 ರ ವಿದಾನಸಭಾ ಚುನಾವಣೆಯಲ್ಲಿ ನಾನು ಸಾಗರ ತಾಲ್ಲೂಕಿನ JDS ಪಾಟಿ೯ ಅಧ್ಯಕ್ಷ ನಮ್ಮ ಅಭ್ಯಥಿ೯ 2 ಬಾರಿ ಬಿಜೆಪಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಆ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನ ಕಾಗೋಡು ವಿಜಯಿ ಆದರು, ಬಿಜೆಪಿ ಅಭ್ಯರ್ಥಿ ಶ್ರೀಮತಿ ಶರಾವತಿ ಸಿ.ರಾವ್ ಐದು ಸಾವಿರ ಮತ ಪಡೆದರು, ನಮ್ಮ ಅಭ್ಯರ್ಥಿ ಗೋಪಾಲ ಕೃಷ್ಣ ಬೇಳೂರು 23 ಸಾ...