Skip to main content

Posts

Showing posts from May, 2023

Blog number 1571. ಆನಂದಪುರಂ ಇತಿಹಾಸ ಭಾಗ 28. ಬ್ರಿಟೀಶರ ಬಂಗಲೆಯ ರೂಪಾಂತರ

#ಆನಂದಪುರಂ_ಇತಿಹಾಸ_ಭಾಗ_28 #ಬ್ರಿಟೀಷರ_ಆಡಳಿತದ_ಪಳಿಯುಳಿಕೆಯಂತೆ_ಉಳಿದಿರುವ_ಆನಂದಪುರಂನ_ಪ್ರವಾಸಿ_ಮಂದಿರ. #ಸುಮಾರು_ಮೂರು_ಶತಮಾನಕ್ಕೂ_ನಂಟು_ಇದೆ. #ಆನಂದಪುರಂ_ತಾಲ್ಲೂಕ್_ಆಗಿದ್ದಾಗ_ಇದು_ತಾಲ್ಲೂಕ್_ಕಚೇರಿ. #ಸಾಗರ_ತಾಲ್ಲೂಕಿನ_ಮೊದಲ_ನ್ಯಾಯಾಲಯ_ಕಚೇರಿ_ಇದಾಗಿತ್ತು. #ಒಂದು_ಕಾಲದ_ಶ್ರೀಮಂತ_ಬ್ರಿಟೀಶ್_ಬಂಗ್ಲೆ #ಇಲ್ಲಿ_ತಂಗಿದ್ದ_ಮಹನೀಯರು_ಅನೇಕರು.   ಬ್ರಿಟಿಷರು ಯಡೇಹಳ್ಳಿಯ ದಟ್ಟ ಅರಣ್ಯದ ಮಧ್ಯೆ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಕಟ್ಟಿದ ಈ ಸುಸಜ್ಜಿತವಾದ ಬಂಗ್ಲೆ ಆ ಕಾಲದಲ್ಲಿ A ಗ್ರೇಡಿನದ್ದಂತೆ.   ಪೂರ್ವದ ಎಡಗಡೆ ತಾವರೆಕೆರೆ ಬಲ ಬಾಗದಲ್ಲಿ ಶಿವಮೊಗ್ಗ ಕೊಲ್ಲೂರು ಹೆದ್ದಾರಿ ಇದೆ, ಕಾಡುಪ್ರಾಣಿಗಳು ನೀರು ಕುಡಿಯಲು ಬಂದಾಗ ಬ್ರಿಟೀಷ್ ದೊರೆಗಳು ಶಿಕಾರಿ ಮಾಡಲು ಅನುಕೂಲ ಇತ್ತು.   ಸುಮಾರು 5 ಎಕರೆ ಪ್ರದೇಶದ ಮಧ್ಯದಲ್ಲಿ ಅತ್ಯುತ್ತಮ ಎರೆಡು ಬೆಡ್ ರೂಂನ (ಅಟ್ಯಾಚ್ ಟಾಯಲೆಟ್ ಇರುವ) ಸೂರ್ಯೋದಯ ಮತ್ತು ಸೂಯಾ೯ಸ್ಥಗಳ ವೀಕ್ಷಣೆಗೆ ವರಾಂಡಗಳಿರುವ, ಸುಸಜ್ಜಿತ ಅಡುಗೆ ಮನೆ ಮತ್ತು ಹಾವು ಇತ್ಯಾಧಿ ಸರಿಸೃಪಗಳಿಂದ ರಕ್ಷಣೆಗಾಗಿ ಸುಮಾರು 4 ಅಡಿ ಎತ್ತರದ ಅಡಿಪಾಯದ ವಿಷಾಲವಾದ ಮೆಟ್ಟಿಲುಗಳ ಈ ಸುಸಜ್ಜಿತ ಕಟ್ಟಡದ ಉತ್ತರಕ್ಕೆ ತೆರೆದ ಬಾವಿ ಅದರ ಸಮೀಪ ಬಂಗ್ಲೆ ಕಾವಲುಗಾರನ ಮನೆ ನಿರ್ಮಿಸಿದ್ದಾರೆ.   ಇಲ್ಲಿ ತಂಗಿ ವಿಹರಿಸಲು ಬ್ರಿಟಿಷರಿಗೆ ಇದು ಸೊಗಸಾದ ಸುಸಜ್ಜಿತವಾದ ತಂಗುದಾಣವಾಗಿ ನೂರಾರು ವರ್ಷ ಬಳಕೆ ಆಗಿತ್ತು.   1970ರ

Blog number 1570. ಆನಂದಪುರಂನ ಜನಾನುರಾಗಿ ವಕೀಲರಾದ ವಾಸು ಲಾಯರ್

#ಆನಂದಪುರಂನ_ಜನಪರ_ವಾಸು_ವಕೀಲರು. #ಮಗನ_ವಿವಾಹ_ಆರತಕ್ಷತೆ_ನಮ್ಮ_ಕಲ್ಯಾಣ_ಮ೦ಟಪದಲ್ಲಿ_ನೆರವೇರಿತು. #ವೃತ್ತಿ_ಜೀವನದಂತೆ_ನಿತ್ಯ_ಜೀವನದಲ್ಲೂ_ಶಿಸ್ತು_ಕಾಪಾಡಿದ್ದಾರೆ. #ವಿನಯತೆಯಿಂದ_ಎಲ್ಲರ_ಜೊತೆ_ಗೌರವದಿಂದ_ನಡೆದುಕೊಳ್ಳುವ_ವಾಸುಲಾಯರ್_ನನಗೆ_ಇಷ್ಟವಾದರು.     ಆನಂದಪುರಂನ ವಾಸು ವಕೀಲರು ಅವರ ವೃತ್ತಿ ಜೀವನ ಪ್ರಾರಂಬಿಸಿ 25 ವರ್ಷ ಆಗಿರಬಹುದು ಅವತ್ತಿನಿಂದ ಇವತ್ತಿನವರೆಗೂ ಅವರ ನಡತೆಯಲ್ಲಿ ನಾನು ವ್ಯತ್ಯಾಸ ಕಂಡಿಲ್ಲ.    ಇವರ ಪತ್ನಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಇವರು ಸಾಗರದ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ, ಏಕೈಕ ಪುತ್ರನ ವಿವಾಹ ಕಳೆದ ಭಾನುವಾರ ಸಾಗರದಲ್ಲಿ ನಡೆಯಿತು. ನಿನ್ನೆ ಮ೦ಗಳವಾರ ಮಗನ ವಿವಾಹ ಆರತಕ್ಷತೆ ನಮ್ಮ ಶ್ರೀಕೃಷ್ಣ ಸರಸ ಕನ್ವೆನ್ಷನ್ ಹಾಲ್ ನಲ್ಲಿ ವಿಜೃಂಭಣೆಯಿಂದ ನಡೆಸಿದರು.    ಒಂದು ತಿಂಗಳ ಹಿಂದೆಯೇ ಕಲ್ಯಾಣ ಮಂಟಪ ನಿಗದಿ ಮಾಡಲು ಕಲಾವಿದ, ವಿಜಯ ಆರ್ಟ್ಸನ ವಿಜಯ ಜೊತೆ ಬಂದಿದ್ದರು.    ಅವತ್ತು ಅವರ ಆಶಯ ಅವರ ಹುಟ್ಟೂರಿನ ಸಂಬಂದಿಗಳು, ಗೆಳೆಯರು ಮತ್ತು ಅವರ ಕಕ್ಷಿದಾರರೆಲ್ಲರನ್ನು ಕರೆಯಬೇಕು ಅವರಿಗೆ ಔತಣ ಕೂಟ ನೀಡಬೇಕು ಎಂಬುದು.   ಆರತಕ್ಷತೆ ಹಿಂದಿನ ದಿನ ರಾತ್ರಿ ಅವರ ಜೊತೆ ಮಾತಾಡುವಾಗ ಕೇಳಿದ್ದೆ ಎಷ್ಟು ಜನರ ಕರೆದಿದ್ದೀರಿ ಮತ್ತು ನಿಮ್ಮ ನಿರೀಕ್ಷೆ ಎಷ್ಟು ಜನ ಅಂತ ಆಗ ಅವರು ಹೇಳಿದ್ದು 1200 ಜನ ಆಗಮಿಸುವ ನಿರೀಕ್ಷೆ ತಮ್ಮದು ಸುಮಾರು 1500 ಜನರಿಗಾಗಿ ವಿಶೇಷವಾಗಿ ಕುರಿ ಮತ್ತು ಕೋಳಿ ಮಾಂಸದ

Blog number 1569. ಟಿಡಿಕೆ ಪಂಡಿತರ ನೆನಪು ಭಾಗ -3. ಸಾಗರದ ಒಂದು ಕಾಲದ ತ್ರಿಮೂರ್ತಿಗಳಾಗಿದ್ದ ಪಂಡಿತ್ - ಪುಟ್ಟಯ್ಯ - ಕುಮುಟಾ, ಪಂಡಿತರು ಸಾಗರದಲ್ಲಿ ಶ್ರೀಕಂಠದತ್ತ ಒಡೆಯರ್ ಗೆ ಸಾಷ್ಟಾಂಗ ನಮಸ್ಕಾರದ ಬಿಸಿ ಚರ್ಚೆ.

#ಮುಂದುವರಿದ_ಭಾಗ_3. #ಟಿಡಿಕೆಪಂಡಿತ್_ಪುಟ್ಟಯ್ಯ_ಸತ್ಯಣ್ಣ_ತ್ರಿಮೂರ್ತಿಗಳು #ಕಮ೯ಚಾರಿ_ದಿನ_ಪತ್ರಿಕೆ #ಕೊನೆಯವರೆಗೂ_ಕಾಂಗ್ರೇಸ್_ಪಕ್ಷದ_ಕಟ್ಟಾಳು. #ಬಿಜೆಪಿ_ಸೇರಿದ್ದ_ಶ್ರೀಕಂಠದತ್ತ_ಒಡೆಯರಿಗೆ_ಪಂಡಿತರು_ಮಾಡಿದ_ಸಾಷ್ಟಾಂಗ_ನಮಸ್ಕಾರ. #ಕಾಂಗ್ರೇಸ್_ಸಭೆಯಲ್ಲಿ_ಕಾಗೋಡರ_ಕೋಪಾತಾಪ .    ಟಿ.ಡಿ. ಕೆ. ಪಂಡಿತರು ಕಾಂಗ್ರೇಸ್ ಪರವಾಗಿದ್ದರೂ ಅವರ ಪರಮಾಪ್ತ ಮಿತ್ರರಾದ ಪಿ.ಪುಟ್ಟಯ್ಯ ಮತ್ತ ಎಸ್.ಎಸ್. ಕುಮುಟಾ ಸಮಾಜವಾದಿಗಳಾಗಿದ್ದರೂ ಅವರ ಗೆಳೆತನಕ್ಕೆ ಯಾವುದೇ ಅಡೆ ತಡೆ ಆಗದೆ ತ್ರಿಮೂರ್ತಿಗಳಂತೆ ಉಳಿದರು.   ಕನ್ನಡ ಭಾಷೆ ಉಳಿಯ ಬೇಕು ಅನ್ನುವ ವಿಚಾರದಲ್ಲೂ ಈ ಮೂವರು ನಡೆಸಿದ ಜನ ಜಾಗೃತಿ - ಪ್ರತಿಭಟನೆ - ರಾಜ್ಯಮಟ್ಟದ ಸಮಾವೇಶವೇ ಇದಕ್ಕೆ ಸಾಕ್ಷಿ.    ಅತ್ಯುತ್ತಮ ಬರವಣಿಗೆ ಶೈಲಿ ದೈವದತ್ತವಾಗಿ ಪಂಡಿತರಿಗೆ ಬಂದಿತ್ತು ಅದನ್ನು ಅವರು ಸಾಗರದಲ್ಲಿ ಪ್ರಾರಂಬಿಸಿದ ಕಮ೯ಚಾರಿ ಕನ್ನಡ ದಿನ ಪತ್ರಿಕೆಯಲ್ಲಿ ಚೆನ್ನಾಗಯೇ ಬಳಸಿಕೊಂಡರು, ದಿನಕ್ಕೊಂದು ಸುದ್ದಿಯ ಆಕರ್ಷಕ ಸಂಕ್ಷಿಪ್ತ ತಲೆ ಬರಹದಲ್ಲೇ ಎಲ್ಲಾ ವಿಷಯಗಳನ್ನು ನವಿರು ಹಾಸ್ಯದಲ್ಲಿ ಪದಬಂದ ಶೈಲಿಯಲ್ಲಿ ಪ್ರಕಟವಾಗುವುದನ್ನು ವಾಚಕರು ಕಾಯುತ್ತಿದ್ದರು ಅದು ಹೆಚ್ಚು ಚರ್ಚೆ ಆಗುತ್ತಿತ್ತು.    ಕಮ೯ಚಾರಿ ದಿನಪತ್ರಿಕೆ ಕಛೇರಿ ಸಾಗರದ ಬಿ.ಹೆಚ್. ರಸ್ತೆಯ ಲಕ್ಷ್ಮೀ ಲಾಡ್ಜ್ ಎದುರಿನ ಪುತ್ತೂರಾಯರ ಬಿಲ್ದಿಂಗ್ ನ ಮೊದಲ ಅಂತಸ್ತಿನಲ್ಲಿತ್ತು ಅದೇ ಕಟ್ಟಡದ ನೆಲ ಅಂತಸ್ತಿನಲ್ಲಿ ಅವರ ಮುದ್ರಣಾಲಯ

Blog number 1568. ನಮ್ಮ ಊರಲ್ಲೂ ಇದೆ ಶಿಲಾಮಯ ಬೃಹತ್ ಸೆಂಗೋಲ್

#ಆನಂದಪುರಂ_ಇತಿಹಾಸ_ಭಾಗ_100. https://youtu.be/-vztlvQjXJU #ನಮ್ಮ_ಊರಿನಲ್ಲಿ_ಬೃಹತ್_ಶಿಲಾಮಯ_ಸೆಂಗೋಲ್_ಇದೆ. #ಕೆಳದಿ_ಅರಸರು_ಉಂಬಳೆ_ನೀಡಿದ_ಹಳ್ಳಿಯಲ್ಲಿದೆ. #ಇದನ್ನು_ನಿರ್ಮಿಸಿದವರು_ಕೆಳದಿ_ಅರಸರಾ ? #ನಂದಿದ್ವಜ_ದರ್ಮದಂಡ_ಸೆಂಗೋಲ್_ಹೆಚ್ಚು_ಚರ್ಚೆಯ_ಕಾಲದಲ್ಲಿ.   ಹೊಸ ಪಾರ್ಲಿಮೆಂಟ್ ನಲ್ಲಿ ಸ್ಪೀಕರ್ ಬಲ ಬಾಗದಲ್ಲಿ ಪ್ರದಾನಿ ಮೋದಿಯವರು ಪ್ರತಿಷ್ಟಾಪಿಸಿದ ರಾಜ ಧಂಡ/ ಧರ್ಮ ಧಂಡ/ ನಂದಿಧ್ವಜ / ಸೆಂಗೋಲ್ ಬಗ್ಗೆ ಹೆಚ್ಚಿನ ಚಚೆ೯ ಆಗುವಾಗಲೇ ನನಗೆ ನೆನಪಾಗಿದ್ದು ನಮ್ಮ ಗ್ರಾಮ ಪಂಚಾಯಿತಿ ಯಡೇಹಳ್ಳಿಯ ಘಂಟಿನಕೊಪ್ಪದ ಸಮೀಪದ ಕೆರೆಕೊಪ್ಪದ ಖಾತೆ ಕಾನೂನಿನಲ್ಲಿ ಶಿಲಾಮಯ ನಂದಿ ಧ್ವಜ ಒಂದನ್ನು 1995 - 2000 ಇಸವಿಯಲ್ಲಿ ನೋಡಿದ ನೆನಪಾಯಿತು.   ಈ ಗ್ರಾಮ ಪಂಚಾಯಿತಿ ಸದಸ್ಯ - ಉಪಾಧ್ಯಕ್ಷ - ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆಯಾ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಪಾದಯಾತ್ರೆ ನಡೆಸುತ್ತಿದ್ದೆ ಅದರಿಂದ ಅನೇಕ ಹೊಸ ವಿಚಾರ ತಿಳಿಯಲು, ಸ್ಥಳಿಯರ ಸಮಸ್ಯೆ - ಬೇಡಿಕೆಗಳ ಪಟ್ಟಿ ಮಾಡಲು ಮತ್ತು ಸ್ಥಳಿಯರ ಜೊತೆ ಬೆರೆಯಲು ಸಹಕಾರಿ ಆಗುತ್ತಿತ್ತು.    ಆಗ ಊರಿನ ಪ್ರಮುಖರ ಜೊತೆ ಆ ಕಾಡಿನಲ್ಲಿ 10 ಅಡಿ ಎತ್ತರದ ಬೃಹತ್ ಶಿಲಾಮಯ ನಂದಿ ಧ್ವಜ ನೋಡಿದ್ದೆ , ಇದಕ್ಕೆ ವರ್ಷಕ್ಕೊಮ್ಮೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ, ಇಪ್ಪತ್ತು ವರ್ಷಗಳ ಹಿಂದೆ ದಟ್ಟ ಅರಣ್ಯದ ಮಧ್ಯೆ ಸೂರ್ಯನ ಕಿರಣಗಳು ತಾಗದಂತ ಪ್ರದೇಶವಾಗಿತ್ತು ಈ ಸ

#Blog number 1567. ಜಂಬಿಟ್ಟಿಗೆ ಕಲ್ಲು ಅಳತೆಗೆ ಸರಿಯಾಗಿ ಡ್ರೆಸ್ ಮಾಡಿ ಕೊಡುವ ಯಂತ್ರ ಬಂದಿದೆ.

#ಜOಬಿಟ್ಟಿಗೆ_ಕಲ್ಲು_ಕೆತ್ತುವ_ಯOತ್ರ_ಬಾಡಿಗೆಗೆ_ಬಂದಿದೆ.    ಗುಜರಾತಿನ ಕರಾವಳಿಯಿ೦ದ ಕೇರಳ ಕರಾವಳಿವರೆಗೆ ಗೋವಾ ಕನಾ೯ಟಕ ರಾಜ್ಯ ಸೇರಿ ಈ ಕೆಂಪು ಕಲ್ಲು (ಜಂಬಿಟ್ಟಿಗೆ / ಇಂಗ್ಲೀಷ್ ನಲ್ಲಿ Latreat stone) ಸ್ಥಳಿಯವಾಗಿ ಸುಲಭವಾಗಿ ಸಿಗುವ ಕಲ್ಲು, ಇದರಿಂದ ಕೋಟಿ, ದೇವಸ್ಥಾನ, ಕೊಳ, ಸೇತುವೆ, ಕೆರೆ ಕಟ್ಟಿ ಮತ್ತು ಬಾವಿಗಳನ್ನ ಒ೦ದು ಕಾಲದಲ್ಲಿ ನಿಮಿ೯ಸಿದ್ದನ್ನು ನೋಡುತ್ತೇವೆ.    ಈಗ ದೈಹಿಕ ಶ್ರಮ ಮಾಡುವುದು ಕಡಿಮೆ ಆದ ಮೇಲೆ ಈ ಕಲ್ಲಿನ ಬಳಕೆ ಕ್ರಮೇಣ ಕಡಿಮೆ ಆಗುತ್ತಿದೆ, ಇದರ ಬಾರ 30 kg ಗೂ ಹೆಚ್ಚಾದ್ದರಿಂದ ಕಟ್ಟಡ ಕಟ್ಟುವವರೂ ಕೂಡ ಇದನ್ನ ಇಷ್ಟ ಪಡುವುದು ಕಡಿಮೆ ಆಗಿದೆ.    ಕಚ್ಚಾ ಕಲ್ಲು ತಂದ ನಂತರ ಈ ಕಲ್ಲಿನ ನಾಲ್ಕು ಮುಖ ಸರಿಯಾಗಿ ಕೆತ್ತಿ ಸಮತಟ್ಟು ಮಾಡುವ ಕೆಲಸ ಇದೆ, ಇದನ್ನ ಸರಿಯಾದ ಅನುಭವಿ ಕೆಲಸಗಾರ ಮಾಡಿದರೆ ಮಾತ್ರ ಕಟ್ಟಡ ಭದ್ರ ಮತ್ತು ಸಿಮೆಂಟ್ ಮರಳು ಮಿತವ್ಯಯ ಇಲ್ಲದಿದ್ದರೆ ಕಟ್ಟಡ ಸರಿ ಆಗುವುದಿಲ್ಲ ಈಗ ಈ ಕಲ್ಲು ಕೆತ್ತುವ ನುರಿತ ಕೆಲಸಗಾರರ ಕೊರತೆ ಕೂಡ ಈ ಕಲ್ಲಿನ ಬಳಕೆ ಕಡಿಮೆಗೆ ಕಾರಣವಾಗಿದೆ.    ನನ್ನ ಕಟ್ಟಡದಲ್ಲಿ ಹೊಸ ತಂತ್ರಜ್ಞಾನದ ಲೈಟ್ ವೈಟ್ ಬ್ರಿಕ್ಸ್ ಬಳಸಿದ್ಧರಿಂದ ನಮ್ಮ ಊರಲ್ಲೇ ಸಿಗುವ ಜಂಬಿಟ್ಟಿಗೆ ಖರೀದಿಸಿರಲಿಲ್ಲ ಆದರೆ ಲಿಪ್ಟ್ ರೂಂ ಅದ೯ ಜಂಬಿಟ್ಟಿಗೆಯಲ್ಲಿ ಕಟ್ಟಿದ್ದರಿಂದ ಒಂದು ಲಾರಿ ಜಂಬಿಟ್ಟಿಗೆ ತರಿಸಿದ್ದೆ ಆದರೆ ಇದನ್ನ ಕೆತ್ತಿ ಸಮತಳ ಮಾಡಿ ಕೊಡುವವರು ಮಾತ್ರ ಸಿಗಲೇ ಇಲ್ಲ.  

#Blog number 1566.ಕೊರಾನಾ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್ - 43 (31- ಮೇ-2020).

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 43.    ದಿನಾ೦ಕ: 31-ಮೇ -2020 #ನೂರು_ದಿನದ_ಲಾಕ್_ಡೌನ್_ಕೇ೦ದ್ರ_ಸಕಾ೯ರದ_ಗುರಿ "ಮುಂದಿನ 15 ದಿನದಲ್ಲಿ ಇವತ್ತಿನ ರೋಗ ಪೀಡಿತರ ಸಂಖ್ಯೆ ದ್ವಿಗುಣವಾಗದಿದ್ದರೆ ಕೊರಾನಾ ನಿಯOತ್ರಣದಲ್ಲಿ ಇದೆ ಅಂತ ಬಾವಿಸ ಬಹುದಾ? ಎಲ್ಲಾ ಕಟ್ಟುನಿಟ್ಟಿನ ತಪಾಸಣೆ ಕೈಬಿಡುವುದು, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಭರಿಸದಿರುವುದು ಇತ್ಯಾದಿ ಸಕಾ೯ರದ ಕ್ರಮ ಆಶಾದಾಯಕವಲ್ಲ!?"   ಲಾಕ್ ಡೌನ್ 4 ಇವತ್ತಿಗೆ ಮುಗಿದು 5 ಪ್ರಾರಂಭ ಆಗಲಿದೆ, ಇದು ಜೂನ್ 30ರವರೆಗೆ ಮು೦ದುವರಿಯುತ್ತದೆ ಎಂದು ಸುದ್ಧಿ ಇದೆ.   ಮೊದಲ ಲಾಕ್ ಡೌನ್ ಸಂಪೂಣ೯ ಕಪ್ಯೂ೯ ಅಂತ ಇದ್ದದ್ದು ನಂತರ ಹಂತ ಹಂತವಾಗಿ ಸಡಿಲಿಸಲಾಗುತ್ತಾ ಬಂದು ಈಗ 5 ನೇ ಹಂತದ ಲಾಕ್ ಡೌನ್ ಯಾವುದೇ ಪ್ರತಿಬಂದಕಗಳಿಲ್ಲದ ಲಾಕ್ ಡೌನ್ ಆಗಲಿದೆ.   ಎಲ್ಲಾ ಪ್ರಾಥ೯ನ ಮಂದಿರ ಪ್ರಾರಂಭ, ಹೋಟೆಲ್ ಲಾಡ್ಜ್ ಪ್ರಾರಂಭ, ರೈಲು ವಿಮಾನ ಪ್ರಾರಂಭ, ಮಾಲ್ ಗಳು ಪ್ರಾರಂಭ, ತಡೆಹಿಡಿದ SSLC ಮತ್ತು PUC ಪರೀಕ್ಷೆ ಪ್ರಾರಂಭ ಹೀಗೆ ನಿಂತಿದ್ದೆಲ್ಲಾ ಪ್ರಾರಂಭ ಆಗಲಿದೆ.   ಪ್ರತಿ ಜಿಲ್ಲೆಯಲ್ಲಿ ತಪಾಸಣ ಗೇಟ್ಗಳು ಈಗಿಲ್ಲ, ಕೊರಾ೦ಟೈ ಕೇವಲ 7 ದಿನ, ಸೋ೦ಕು ಪರೀಕ್ಷೆ ವೆಚ್ಚ ಸಕಾ೯ರ ಇನ್ನು ಭರಿಸುವುದಿಲ್ಲ ಎಂದಿದೆ.   ಜೂನ್ 30 ಕ್ಕೆ ಭಾರತ ದೇಶ 100 ದಿನದ ಲಾಕ್ ಡೌನ್ ನಲ್ಲಿ ಏನು ಸಾದಿಸಿತು!? ಎಂಬುದರ ಬಗ್ಗೆ ಹಿಂದೆ ತಿರುಗಿ ನೋಡ ಬೇಕು.   ವಿಶ್ವ ಆರೋಗ್ಯ ಸಂಸ್ಥೆಯ ನ

#Blog number 1565. ಸಂಪೂರ್ಣ ಬತ್ತಿ ಹೋದ ಚ೦ಪಕ ಸದಸ್ಸು 20-ಮೇ -2020.

#ಈ ವಷ೯ದ ಬೇಸಿಗೆ. (20-ಮೇ-2020).  1973 ಮತ್ತು 1974ರಲ್ಲಿ  ಆನಂದ ಪುರದ ಚಂಪಕ ಸರಸು ಎಂದು ಕರೆಯುವ ಕೆಳದಿ ಅರಸ ರಾಜಾ ವೆಂಕಟಪ್ಪ ನಾಯಕರ ಆನಂದಪುರಂನ ರಾಣಿ ಚಂಪಕಳ ಸ್ಮರಣಾತ೯ವಾಗಿ ನಿಮಿ೯ಸಿದ ಸುಂದರ ಕೊಳ ಕೂಡ ಈ ವಷ೯ದoತೆ ಬತ್ತಿತ್ತು.   ಆ ವಷ೯ ಬಿದಿರಕ್ಕಿ ಆಗಿತ್ತು, ಎಲ್ಲಾ ಕೆರೆಗಳು ಬತ್ತಿ ಹೋಗಿತ್ತು, ತೆರೆದ ಬಾವಿಗಳಲ್ಲಿ ನೀರು ಇರಲಿಲ್ಲ, ಬೆಳಗಿನ ಜಾವ ಮೊದಲು ಹೊದವರಿಗೆ ನಾಕಾರು ಕೊಡ ನೀರು ಸಿಗುತ್ತಿತ್ತು ಅದಕ್ಕೂ ಹೊಡೆದಾಟ ಜಗಳ.   45 ವಷ೯ದ ನಂತರ ಅದೇ ಪರಿಸ್ಥಿತಿ ಪುನಾರಾವತ೯ನೆ ಆಗಿದೆ, ಆಗ ಈಗಿನಷ್ಟು ಕಾಡು ನಾಶ ಆಗಿರಲಿಲ್ಲ, ಪ್ಲಾಸ್ಟಿಕ್ ಈ ಪ್ರಮಾಣದ ಬಳಸಿ ಬಿಸಾಡುವ ಕಾಲ ಆಗಿರಲಿಲ್ಲ, ವಾಹನಗಳು ಈ ಪ್ರಮಾಣದಲ್ಲಿ ರಸ್ತೆಯಲ್ಲಿ ಇರಲಿಲ್ಲ, ಕಾಬ೯ನ್ ಎಮಿಷನ್ ಇರಲಿಲ್ಲ, ಹಸಿರು ಮನೆ ಪರಿಣಾಮ ಇರಲಿಲ್ಲ, ಓಜೋನ್ ಕವಚ ಶಿಥಿಲ ಆಗಿರಲಿಲ್ಲ.   ಪ್ರಕೃತಿಯಲ್ಲಿ ಮನುಷ್ಯನ ಅಂದಾಜಿಗೂ ಮೀರಿದ ಯಾವುದೋ ಒಂದು ಶಕ್ತಿ 30 ರಿಂದ 50 ವಷ೯ಕೊಮ್ಮೆ ಭೂಮಿಯ ತಾಪಮಾನ ಹೆಚ್ಚು ಮಾಡಿ, ಅಂತರ್ ಜಲ ಸಿಗದಂತೆ ಮಾಡಿ ನಂತರ ಸುಮಾರು 30 ರಿಂದ 50 ವಷ೯ ಮಳೆ, ಬೆಳೆ, ಜಲಪೂರಣ ಮಾಡುವ ಒಂದು ವಿಸ್ಮಯ ಚಕ್ರ ಅಧ್ಯಯನಯೋಗ್ಯವಾಗಿದೆ.  ಇವತ್ತು ಆನಂದಪುರದ ಪ್ರೊಪೆಷನಲ್ ಕೋರಿಯರ್ ಮಾಲಿಕ ಗುರು ಕಳಿಸಿದ ನೀರು ಸಂಪೂಣ೯ ಬತ್ತಿದ ಚಂಪಕ ಸರಸುವಿನ ಚಿತ್ರ ನೋಡಿ ಇದೆಲ್ಲ ನೆನಪಾಯಿತು.

Blog number 1564.ಕೊರಾನಾ ಲಾಕ್ ಡೌನ್ ಡೈರಿ - 2020 ಲೆಟರ್ ನಂಬರ್ 42 (29 - ಮೇ -2020)

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 42.    ದಿನಾ೦ಕ: 30-ಮೇ -2020 #ಕೊರಾನಾ_ನಿಯ೦ತ್ರಣ_ಮತ್ತು_ಮುಖ್ಯಮ೦ತ್ರಿ_ಗಾದಿ.     ಜನವರಿ ತಿಂಗಳಲ್ಲೇ ಯಡೂರಪ್ಪರ ವಿರುದ್ದ ಬಂಡಾಯ ಅಂತಿಮ ಹಂತ ತಲುಪುವ ಕ್ಷಣಗಣನೆಯ ಹಂತ ತಲುಪಿತ್ತು, ಹೊಸ ಮುಖ್ಯಮ೦ತ್ರಿ ನೇಮಕ ಮತ್ತು ಹೊಸ ಮಂತ್ರಿ ಮಂಡಲದ ಸಂಬಾವಿತರ ಪಟ್ಟಿ ತಯಾರಾಗಿತ್ತು.   ಇದರ ನಡುವೆ ಕೊರಾನಾ ವೈರಸ್ ಸೃಷ್ಟಿ ಮಾಡಿದ ಸಂದಿಗ್ದದಿ೦ದ ಈ ಬಂಡಾಯ ಮೇ ತಿಂಗಳ ಕೊನೆಯವರೆಗೆ ಎಳೆದುಕೊಂಡು ಬಂದಿದೆ.   ದಿನೇ ದಿನೇ ಹೆಚ್ಚಾಗುತ್ತಿರುವ ವೈರಸ್ ಪೀಡಿತರ ಸಂಖ್ಯೆ, ಸಾವಿನ ಸಂಖ್ಯೆ ಮತ್ತು ಲಾಕ್ ಡೌನ್ ತೆರವು ಮಾಡಬೇಕಾದ ಅನಿವಾಯ೯ತೆಗಳು ಮುಖ್ಯಮOತ್ರಿ ಆದವರಿಗೆ ಸಹಜ ಸಂಕಷ್ಟ ತರುತ್ತಿದೆ ಆದರೂ ಕನಾ೯ಟಕದ ಮುಖ್ಯಮ೦ತ್ರಿ ಯಡೂರಪ್ಪರಿಗೆ ಮಾತ್ರ ಅವರ ಪಕ್ಷದ ಬಂಡಾಯ ಉoಟು ಮಾಡುತ್ತಿರುವ ಸಂಕಷ್ಟ ತುಂಬಾ ದೊಡ್ಡದಾಗಿದೆ.    ದೆಹಲಿಯಿ೦ದ ಸಂತೋಷ್ ಜೀ ಅಥವ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆ ಹೆಸರು ಹರಿದು ಬಿಡಲಾಗಿದೆ.   ಯಡೂರಪ್ಪರಿಗೆ ಕೇ೦ದ್ರ ಮOತ್ರಿ ಮಂಡಲ ಸೇರಿಸಿ ಸಮಾಧಾನ ಮಾಡುವ ತಂತ್ರ ಕೂಡ ಇದೆ.   ಯಡೂರಪ್ಪನವರೆ ಬಂಡಾಯ ಹೂಡಿ ಕಾಂಗ್ರೇಸ್ ಬಂಡಾಯ ಶಾಸಕರು,ಜೆಡಿಎಸ್ ಪಕ್ಷದ ಜೊತೆ ಸಕಾ೯ರ ರಚಿಸುವ ಸಾಧ್ಯತೆ ಕೂಡ  ಅಲ್ಲಗೆ ಳೆಯಲು ಸಾಧ್ಯವಿಲ್ಲ ಆದ್ದರಿಂದಲೇ ಯಡೂರಪ್ಪರ ಸ್ವಜಾತಿ ಬಾ೦ದವರನ್ನೆ ಯಡೂರಪ್ಪರ ವಿರುದ್ದ ಎತ್ತಿಕಟ್ಟಲಾಗಿದೆ.   ಮುಂದಿನ ತಿಂಗಳು ಕೊರಾನಾ ಮತ್ತು ಕನಾ೯ಟಕ ಮು

Blog number 1563. ಮಟ್ಕಾ ಕಿಂಗ್ ರತನ್ ಲಾಲ್ ಖತ್ರಿ ನೆನಪು

#ಒಸಿ_ಮಟಕಾ_ಒಪನ್_ಕ್ಲೋಸ್_ರತನ್_ಲಾಲ್_ಖತ್ರಿ_ನೆನಪು. #ಕೊರಾನಾ_ಕಾಲದಲ್ಲಿ_9_ಮೇ_2020_ರತನ್_ಲಾಲ್_ಖತ್ರಿ_ಇಹಲೋಕ_ತ್ಯಜಿಸಿದ್ದಾರೆ. #ಇದು_ಪ್ರತಿನಿತ್ಯ_ಕೋಟ್ಯಾಂತರ_ಹಣದ_ಗ್ಯಾಂಬ್ಲಿಂಗ್. #ಜಂಗ್ಲಿರಮ್ಮಿ_ಸ್ಕಿಲ್_ಗೇಮ್_ಅಂತ_ಸರ್ಕಾರ_ಅನುಮತಿ_ನೀಡಿದೆ. #ಮಟ್ಕಾ_ಓಸಿ_ನಿಶಿದ್ದವಾದರು_ನಿರಂತರ. #ಒಸಿ_ಅಂದರೆ_ಒಪನ್‌_ಕ್ಲೋಸ್_ಇದಕ್ಕೆ_ಕಾರಣ   ಸ್ವಾತ೦ತ್ರ್ಯ ಪೂರ್ವದಿಂದ ನ್ಯೂಯಾರ್ಕ್ ಕಾಟನ್ ಮಾರ್ಕೆಟ್ ಮು೦ಬೈ ಕಾಟನ್ ಮಾರ್ಕೆಟ್ ಗೆ ವಾರದಲ್ಲಿ 5 ದಿನ ತಲುಪುತ್ತಿದ್ದ ಹತ್ತಿ ಖರೀದಿ ಬೆಲೆಯ ಮೊದಲ ಮತ್ತು ಕೊನೆಯ ಅಂಕಿಯನ್ನು ಈ ಜೂಜಿಗೆ ಬಳಸುತ್ತಿದ್ದರಿಂದ ಓಪನ್ ಕ್ಲೋಸ್ ನಂಬರ್ ನಿಂದ ಓಸಿ ಎಂಬ ಹೆಸರಾಯಿತು.   ನಂತರ ನ್ಯೂಯಾರ್ಕ್ ಕಾಟನ್ ಮಾರ್ಕೆಟ್ ರದ್ದುಗೊಳಿಸಿದ್ದರಿಂದ ರತನ್ ಲಾಲ್ ಖತ್ರಿ ಮಡಕೆಯಲ್ಲಿ 0 ದಿಂದ 9 ರವರೆಗಿನ ನಂಬರ್ ಚೀಟಿ ಹಾಕಿ ಅದನ್ನು ಎತ್ತಿ ಡ್ರಾ ಮಾಡಲು ಪ್ರಾರಂಬಿಸಿದ ನಂತರ ಮಟ್ಕಾ ಎಂಬ ಹೆಸರು ಜನಪ್ರಿಯವಾಯಿತು.   ಹಳ್ಳಿ ಹಳ್ಳಿಗಳಲ್ಲೂ ಜನ ಒಸಿ ಮಟ್ಕಾ ಆಡುತ್ತಾರೆ, ಮೊದಲಿಗೆ ಒಪನ್ ನಂತರ ಕ್ಲೋಸ್ ಅಂಕೆ ಮುಂಬೈನಿ೦ದ ರತನ್ ಲಾಲ್ ಖತ್ರಿ ಪ್ರತಿದಿನ ನಿದಿ೯ಷ್ಟ ಸಮಯದಲ್ಲಿ ಡ್ರಾ ಮಾಡುತ್ತಿದ್ದ.   ಆ ನಂಬರ್ ಗೆ ಹಣ ಕಟ್ಟಿದವರಿಗೆ ಬಿಡ್ಡರ್ ಎಂಬ ಬುಕ್ಕಿಗಳು ಒಪನ್ ಅಥವ ಕ್ಲೋಸಿಗೆ ಏಕ ಅಂಕಿಗೆ 1 ರೂಪಾಯಿ ಕಟ್ಟಿದರೆ 7 ಅಥವ 8 ರೂಪಾಯಿ, ಎರಡು ಅ೦ಕೆ ಸೇರಿಸಿ ಆ ನಂಬರ್ ಗೆ 1 ರೂಪಾಯಿ ಕಟ್ಟಿದರೆ 80 ರ

Blog number 1562.ಟಿ.ಡಿ.ಕೆ.ಪಂಡಿತ್ ಭಾಗ - 2

#ಮುಂದುವರಿದ_ಭಾಗ_2. #ಸಾಗರದ_ಟಿಡಿಕೆ_ಪಂಡಿತ್_ಪೂರ್ಣ_ಹೆಸರು_ಕಮಲಾಕ್ಷ_ಪಂಡಿತ್ #ಕರ್ಮಚಾರಿ_ಪತ್ರಿಕೆ_ಸಂಪಾದಕರು #ಸಮಾಜವಾದಿ_ಶಾಂತವೇರಿ_ಗೋಪಾಲಗೌಡ_ಎಸ್_ಎಸ್_ಕುಮುಟಾ_ಪಿ_ಪುಟ್ಟಯ್ಯರ_ಒಡನಾಡಿ #ಕನ್ನಡ_ಸಮಾಜವಾದಿ_ಯುವಜನ_ಸಭೆಯ_ಮೊದಲ_ರಾಜ್ಯ_ಸಮ್ಮೇಳನ_ಯಶಸ್ವಿಗೆ_ಕಾರಣಕರ್ತರು. #ಮೈಸೂರು_ರಾಜ್ಯದ_ಮೊದಲ_ಕನ್ನಡ_ಸಮಾವೇಶ #ಹಿರಿಯ_ಸಮಾಜವಾದಿ_ಶಿವಮೊಗ್ಗದ_ಪ್ರಕೃತಿ_ಮುದ್ರಣಾಲಯದ_ಪಿ_ಪುಟ್ಟಯ್ಯ_ಪಂಡಿತರ_ಬಗ್ಗೆ_ಹೇಳಿದ್ದು.    ಕನ್ನಡ ಯುವಜನ ಸಭಾ ಸಮಾಜವಾದಿ ಪಕ್ಷದ ಅಂಗ ಸಂಸ್ಥೆಯೇ ಆಗಿತ್ತು, ಇದರ ರಾಜ್ಯ ಅಧ್ಯಕ್ಷರು ಆ.ನ.ಕೃ ಆಗಿದ್ದರು ಪ್ರದಾನ ಕಾಯ೯ದರ್ಶಿ ಕೋಣಂದೂರು ಲಿಂಗಪ್ಪನವರು, ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಪಿ.ಪುಟ್ಟಯ್ಯನವರು.   ಆಗ ಪಿ. ಪುಟ್ಟಯ್ಯ, ಎಸ್.ಎಸ್.ಕುಮಟಾ ಮತ್ತು ಟಿ.ಡಿ.ಕೆ ಪಂಡಿತರು ತ್ರಿಮೂರ್ತಿಗಳಂತ ಗೆಳೆಯರು, ಟಿ.ಡಿ.ಕೆ. ಪಂಡಿತರು ಕಾಂಗ್ರೇಸ್ ಪಕ್ಷದ ಒಲವು ಉಳ್ಳವರಾದರೂ ಸಮಾಜವಾದಿ ಗೆಳೆಯರ ಜೊತೆ ಹೆಚ್ಚು ಒಡನಾಟ ಉಳ್ಳವರಾಗಿ ಆಗಿನ ಶಾಸಕರಾದ ಶಾಂತವೇರಿ ಗೋಪಾಲಗೌಡರ ನಿಕಟ ಸಂಪರ್ಕದಲ್ಲಿದ್ದರು ಅಂತ ಪುಟ್ಟಯ್ಯನವರು ಹೇಳುತ್ತಾರೆ.    ಈ ಸಂದರ್ಭದಲ್ಲಿ ಅಂದಾಜು 1955 ರಿಂದ 1957 ರಲ್ಲಿ ಸಾಗರದಲ್ಲಿ ಕನ್ನಡ ಯುವ ಜನ ಸಭಾದಿಂದ ಅನೇಕ ಕಾರ್ಯಕ್ರಮ ಈ ತ್ರಿಮೂರ್ತಿಗಳಿಂದ ನಡೆಯುತ್ತದೆ.   ಸಾಗರದಲ್ಲಿ ರಾಜ್ಯ ಮಟ್ಟದ ಮೊದಲ ಕನ್ನಡ ಸಮಾವೇಶ ಸಾಗರದ ಗಾಂಧಿ ಮಂದಿರದಲ್ಲಿ ಇವರೆಲ್ಲ ಸೇರಿ ಆಯೋಜಿಸುತ್ತ

Blog number 1561. ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯ ಆಗಿರುವ ವಿರಳೇತಿ ವಿರಳ ಮಂತ್ರಿ

#ಸ್ವತಃ_ಕನಿಷ್ಟ_ಪೇಸ್_ಬುಕ್_ವಾಟ್ಸ್_ಅಪ್_ಬಳಸಲು_ಬಾರದ_ಜನಪ್ರತಿನಿದಿಗಳ_ನಡುವೆ_ಇದನ್ನೆಲ್ಲ_ಬಳಸಿ_ಜನರಿಗೆ_ಹತ್ತಿರ_ಆಗಿರುವ #ಮOತ್ರಿ_ಸುರೇಶ್_ಕುಮಾರ್ 27th may 2020.     ಕಂಪ್ಯೂಟರ್ ಇರಲಿ ನಿತ್ಯ ದಿನ ಪತ್ರಿಕೆನೇ ಓದದ ಶಾಸಕರು ಸಂಸದರೇ ಹೆಚ್ಚು ಜನ,ಇವರಿಗೆಲ್ಲ ಪ್ರತಿ ವಷ೯ ಹೆಚ್ಚು ಬೆಲೆಯ ಲಾಪ್ ಟಾಪ್ ಸಕಾ೯ರ ನೀಡುತ್ತದೆ, 5 ವಷ೯ ದಿನಪತ್ರಿಕೆ ಬಿಲ್ ಸಕಾ೯ರ ನೀಡುತ್ತದೆ.   ಅದೇನೇ ಇರಲಿ ಅತಿ ಹೆಚ್ಚು ಬೆಲೆಯ ಮೊಬೈಲ್ ಕೈನಲ್ಲಿ ಶೋ ಮಾಡುತ್ತಿರುತ್ತಾರೆ ಆದರೆ ಅದನ್ನ ಬಳಸುವುದೂ ಕಲಿತಿಲ್ಲ ಇವರ ಪೇಸ್ ಬುಕ್, ವಾಟ್ಸ್ ಅಪ್ ಪ್ರತಿ ತಿಂಗಳಿಗೆ 20 ಸಾವಿರ ಪಡೆದು ಬೇರಾರೋ ನಿವ೯ಹಿಸುತ್ತಾರೆ.    ಇದರಿಂದ ಇವರಿಗೆ ಇವತ್ತಿನ ಸೋಷಿಯಲ್ ಮೀಡಿಯಾದಲ್ಲಿ ಏನು ನಡೆಯುತ್ತದೆಂಬ ಜ್ಞಾನ ಇರುವುದಿಲ್ಲ ಬೇರಾರೋ ಇವರ ಆಪ್ತರು ತಿಳಿಸದೆ ಇವರಿಗೆ ತಿಳಿಯುವುದಿಲ್ಲ.   ಇದೆಲ್ಲ ತಿಳಿಯದ ಇವರು ಈಗಿನ ಕಾಲದ ಅನಕ್ಷರಸ್ಥರೆಂದರೆ ತಪ್ಪಾಗದು.   ಇದರ ಮದ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದ ಮುಖಾಂತರ ರಾಜ್ಯದ ಜನರಿಗೆ ಅತಿ ಸಮೀಪ ಆಗಿದ್ದಾರೆ.   ರಾಜ್ಯ ಸಕಾ೯ರದ ಪ್ರತಿ ನಿತ್ಯದ ಕೆಲಸ ಮಾದ್ಯಮಕ್ಕೆ ಪರಿಣಾಮಕಾರಿಯಾಗಿ ತಲುಪಿಸುತ್ತಾರೆ.   ಸಜ್ಜನತೆ, ಸುಸ೦ಸ್ಕೃತ ನಡತೆ ಮತ್ತು ಮಾತಿನಿಂದ ಇವರ ವ್ಯಕ್ತಿತ್ವಕ್ಕೆ ವಿಶೇಷ ಗೌರವ ಉoಟಾಗಿದೆ, ಇವತ್ತು ಇವರು ಹಾಕಿದ Post ನ ಪೋಟೋ ಇಲ್ಲಿ ಲಗತ್ತಿಸಿದೆ, 7ನೇ ತರಗತಿಯ ಪುಟಾಣಿ ಒಬ್ಬಳು

Blog number 1560.District minister Eshwarappa visited Vaidya Narayanmurty

Today evening (27-May-2020)karnataka state Rural development minister and incharge minister of Shimoga Mr Eshwappa and Sagar Assembly member Mr Halappa along with District officers visited vaidya NARAYANAMURTHY NARASIPURA home and discussed about restart of medicine production and distribution.

Blog number 1559. ನಾಲ್ಕು ವರ್ಷಗಳಲ್ಲಿ ನನ್ನ ದೇಹದ ಸ್ಥೂಲಕಾಯ ಬದಲಾಯಿಸಿ ಕೊಂಡ ಈ ಎರೆಡು ಚಿತ್ರಗಳ ಸಾಕ್ಷಿ ನೋಡಿ.

#ನಾಲ್ಕು_ವರ್ಷದ_ಹಿಂದೆ_ಇದೇ_ದಿನದ_ಚಿತ್ರ. #ನಾಲ್ಕು_ವರ್ಷದ_ನಂತರ_ಇವತ್ತಿನ_ನನ್ನ_ಚಿತ್ರ. #ಮನಸ್ಸು_ಮಾಡಿದರೆ_ಎಲ್ಲದೂ_ಸಾಧ್ಯ_ಅನ್ನುತ್ತಿದೆ.         ನಾಲ್ಕು ವರ್ಷಗಳ ಹಿಂದೆ ಇದೇ ದಿನ ಅಂದರೆ ದಿನಾಂಕ 26-ಮೇ -2019 ರಂದು ಉಡುಪಿಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿದ್ದ ಮಂಜುನಾಥ ಬಂದಿದ್ದರು ಅವರು ಉಡುಪಿಗೆ ವರ್ಗಾವಣೆ ಮೊದಲು ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ಟಿಪ್ ಕಾಪ್ ಎಂಬ ಬಿರುದು ಪಡೆದವರು.   ಮಲ್ಪೆಯ ಸುವರ್ಣ ತ್ರಿಭುಜ ಎಂಬ ಮೀನುಗಾರಿಕಾ ಬೋಟು ಅಪಘಾತ ಅದರಲ್ಲಿದ್ದವರೆಲ್ಲ ನಾಪತ್ತೆ ಪ್ರಕರಣದಲ್ಲಿ ಇವರು ತನಿಖಾಧಿಕಾರಿ ಆಗಿದ್ದರು, ನಂತರ ರಾಷ್ಟ್ರಪತಿ ಪ್ರಶಸ್ತಿ ಹಾಗೂ ಪದೋನ್ನತಿ ಪಡೆದಿದ್ದಾರೆ ಅವತ್ತು ಅವರ ಜೊತೆ ಪೋಟೋ ತೆಗೆದು ಬರೆದ ಲೇಖನ ಪೇಸ್ ಬುಕ್ ನೆನಪಿಸಿದೆ ಅವತ್ತಿನ ಲೇಖನದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ನೋಡಿ https://arunprasadhombuja.blogspot.com/2023/05/blog-number-1558_25.html    ಅವತ್ತು ನನ್ನ ತೂಕ 140 ಕೆ.ಜಿ. ದಾಟಿ ದಾಪುಗಾಲು ಹಾಕುತ್ತಾ ಹೋಗುತ್ತಿತ್ತು, ಹತ್ತು ಹೆಜ್ಜೆ ಹಾಕಲು ಅಸಾಧ್ಯ ಅನ್ನಿಸಿ ಬಿಟ್ಟಿತ್ತು, ಮಲಗಿದ ತಕ್ಷಣ ಘೋರ ಗೊರಕೆಯೊಂದಿಗೆ   ಗಾಡ ನಿದ್ದೆ, ಹೊಟ್ಟೆ ಹೊಕ್ಕುಳಲ್ಲಿ ಹರ್ನಿಯಾ, ಅನಿಯಂತ್ರಿತ ಬಿಪಿ -ಶುಗರ್ ಒಟ್ಟಾರೆ ಜೀವನೋತ್ಸವ ಸತ್ತೇ ಹೋಗಿದ್ದ ನರಕವಾಗಿತ್ತು.    ಈ ನಾಲ್ಕು ವರ್ಷಗಳಲ್ಲಿ ರಾತ್ರಿ ಊಟ ಬಿಟ್ಟೆ, ಬೆಳಿಗ್ಗೆ ಒಂದು ಗಂಟ

Blog number 1558. ಶಿವಮೊಗ್ಗ ದೊಡ್ಡ ಪೇಟೆ ಪೋಲಿಸ್ ಠಾಣೆ ಟಪ್ ಕಾಪ್ ಮಂಜುನಾಥ್ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣದಲ್ಲಿ ತನಿಖಾಧಿಕಾರಿ ಆಗಿದ್ದರು.

#ನನ್ನ ಇವತ್ತಿನ ಅತಿಥಿ  ಸುವಣ೯ ತ್ರಿಭುಜ ಬೋಟಿನ ನಾಪತ್ತೆಯ ಪ್ರಕರಣದ ತನಿಖಾಧಿಕಾರಿ ಉಡುಪಿ ಸಕ೯ಲ್ ಇನ್ಸ್ಪೆಕ್ಟರ್ ಮಂಜುನಾಥ್.(26_ಮೇ_2019).   ಒಂದು ಕಾಲದ ಶಿವಮೊಗ್ಗ ದೊಡ್ಡ ಪೇಟೆ ಠಾಣೆಯ ಪ್ರಖ್ಯಾತ ಟಪ್ ಕಾಪ್ ಎಂದೇ ಪ್ರಖ್ಯಾತರಾಗಿದ್ದ ಮಂಜುನಾಥ್ ನಂತರ ಮಂಗಳೂರು ಟವನ್ನಲ್ಲಿ ಕೆಲಸ ನಿವ೯ಹಿಸಿ ಈಗ ಉಡುಪಿಯಲ್ಲಿದ್ದಾರೆ.  ಉಡುಪಿ ಮತ್ತು ಮಲ್ಪೆ ಬಂದರು ಪ್ರದೇಶ ಇವರ ವ್ಯಾಪ್ತಿ (ಉಡುಪಿ ಟ್ರಾಪಿಕ್ ಸೇರಿ).   2018ರ ಡಿಸೆಂಬರ್ 13ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವಣ೯ ತ್ರಿಭುಜ ಬೋಟ್ ಮತ್ತು ಅದರಲ್ಲಿದ್ದ 7 ಜನ ನಾಪತ್ತೆ ಪ್ರಕರಣದ ತನಿಖಾಧಿಕಾರಿಗಳು ಇವರೇ.   ಇವರ ತನಿಖಾ ವರದಿ ವಸ್ತುನಿಷ್ಟ ಮತ್ತು ಪ್ರಶಂಸನೀಯ ಕೂಡ ಆಗಿದೆ, ಈ ಘಟನೆ ಇಡೀ ದೇಶದ ಗಮನ ಸೆಳೆದಿದೆ.   ಮಂಜುನಾಥ ನಿತ್ಯ ಶಟಲ್ ಬ್ಯಾಡ್ಮಿOಟನ್ ಆಡುತ್ತಾರೆ ಈಗ ಉಡುಪಿಯಲ್ಲಿ ತಮ್ಮ ಪಿಟ್ನೆಸ್ ಗೆ ಟೆನ್ನಿಸ್ ಆಡುತ್ತಾರಂತೆ, ಉಡುಪಿಯ ಮಾಜಿ ಮಂತ್ರಿ ಪ್ರಮೋದ್ ಮದ್ವರಾಜ್ ಒಳ್ಳೆಯ ಟೆನ್ನಿಸ್ ಒಳಾಂಗಣ ಕ್ರೀಡಾOಗಣ ಮಾಡಿದ್ದಾರಂತೆ.   ಇವರು ನಮ್ಮ ಸಾಗರ ತಾಲ್ಲೂಕಿನ ಅಳಿಯ, ತ್ಯಾಗತಿ೯ ಸಮೀಪದ ನನ್ನ ಗೆಳೆಯ ಸಹಕಾರಿ ಬಂಧು ಮೈಲಾರಿಕೊಪ್ಪದ ಹೊಳೆಯಪ್ಪರ ಅಳಿಯ. ಇವತ್ತು ಇವರ ಮಾವನ ಹೊಸ ಮನೆ ಗೃಹ ಪ್ರವೇಶ ಮತ್ತು ಮಗಳ ಹುಟ್ಟು ಹಬ್ಬದ ಕಾಯ೯ಕ್ರಮಕ್ಕೆ ಬರುವಾಗ ನನಗೆ ಫೋನಾಯಿಸಿದರು ಮತ್ತು ಬಂದರು, ಇವರ ಸ್ವ೦ತ ಊರು ತೀಥ೯ಹಳ್ಳಿ ತಾಲ್ಲ

Blog number 1557. ಕೊರಾನಾ ಲಾಕ್ ಡೌನ್ ಡೈರಿ 2020 ಲೆಟರ್ ನಂಬರ್ 41(26-ಮೇ 2020)

ಕೊರಾನಾ ಲಾಕ್ ಡೌನ್ ಡೈರಿ -2020  ಲೆಟರ್ ನಂಬರ್- 41.    ದಿನಾ೦ಕ: 27-ಮೇ -2020 #ಕೊರಾನಾ_ಬರಲಿ_ಬಿಡಲಿ #ಸತ್ತರೂ_ಚಿOತೆಯಿಲ್ಲ_ಊರು_ಮುಟ್ಟಬೇಕು.     ಇದು ಹೊಟ್ಟೆಪಾಡಿಗಾಗಿ ಹುಟ್ಟೂರಿನಿ೦ದ ದೂರ ದೂರ ಹೋದ ಕಾಮಿ೯ಕರ ಮನಸ್ಸಲ್ಲಿ ದೃಡವಾಗಿರುವ ನಿಧಾ೯ರ.    Homesickness ಯಾವ ರೀತಿ ಮನುಷ್ಯನನ್ನ ಮಾಡುತ್ತದೆ ಎಂಬುದಕ್ಕೆ ಮನಶಾಸ್ತ್ರದಲ್ಲಿ ಹೆಚ್ಚಿನ ವಿವರ ಇರಬಹುದು.    ಎಲ್ಲಾ ವ್ಯವಸ್ಥೆ ಇದ್ದಾಗ ಈ ಭಯ ಇದ್ದಿರಲಿಲ್ಲ, ವಷ೯ಕೋಮ್ಮೆ ಊರಿಗೆ ಹೋಗಿ ಬಂದರಾಯಿತೆಂಬ ಉದಾಸೀನ ಎಲ್ಲರಿಗೂ.   ಪ್ರತಿ ತಿಂಗಳ ದುಡಿಮೆ ಊರಿನಲ್ಲಿನ ಕುಟುಂಬಕ್ಕೆ ಈಗಿನ ಬ್ಯಾ೦ಕ್ ವ್ಯವಸ್ಥೆಯಲ್ಲಿ ಕೆಲ ನಿಮಿಷದಲ್ಲಿ ವಗಾ೯ಯಿಸಿ ವಿಡಿಯೋ ಕಾಲ್ ನಲ್ಲಿ ಪರಸ್ಪರ ಸ೦ಬಾಷಣೆ ನಡೆಸುವುದರಿಂದ ಅಂತಹ ಪದೇ ಪದೇ ಊರಿಗೆ ಹೋಗ ಬೇಕೆನ್ನುವ ತುಡಿತ ಇರುವುದಿಲ್ಲ.   ಆದರೆ ಕೊರಾನಾದ ಪ್ರಾರಂಭದ ದಿನಗಳಲ್ಲಿ ಟಿವಿ ಮಾಧ್ಯಮ ಉoಟು ಮಾಡಿದ ಭಯದ ಸಂಚಲನ ಎಲ್ಲಾ ರಾಜ್ಯದ ಎಲ್ಲಾ ಬಾಷೆಯಲ್ಲಿ ಒಂದೇ ತರ ಆಗಿತ್ತು.   ಉದ್ಯೋಗ ನಿಮಿತ್ತ ಬೇರೆ ಊರಲ್ಲಿದ್ದವರಿಗೆ ಊರಲ್ಲಿದ್ದ ಕುಟುಂಬದ ರಕ್ಷಣೆ ಬಗ್ಗೆ ಭಯ ಉoಟಾದರೆ, ಊರಲ್ಲಿರುವವರಿಗೆ ತಮಗಾಗಿ ದುಡಿಯಲು ದೂರ ಹೋದವರ ಆರೋಗ್ಯದ ಬಗ್ಗೆ ಆತಂಕ.    ಜೀವ ಇದ್ದರೆ ಬೇಡಿ ತಿನ್ನ ಬಹುದು ಆದಷ್ಟು ಬೇಗ ಊರು ಸೇರಿ ಜೀವ ಉಳಿಸಿಕೊಳ್ಳಬೇಕು ಎಂಬ ತುಡಿತ ಹೆಚ್ಚಾಯಿತು, ಇದೇ ಸಂದಭ೯ದಲ್ಲಿ ರೈಲು, ಬಸ್ ಸಂಚಾರ ರದ್ದು, ಲಾಕ್ ಡೌನ್, 144 ಕಪ್ಯೂ೯,

Blog number 1556.ಟಿ.ಡಿ. ಕಮಲಾಕ್ಷ ಪಂಡಿತ್ ನೆನಪುಗಳು.

#ಸಾಗರದ_ಟಿಡಿಕೆ_ಪಂಡಿತ್_ಪೂರ್ಣ_ಹೆಸರು_ಕಮಲಾಕ್ಷ_ಪಂಡಿತ್ #ಕರ್ಮಚಾರಿ_ಪತ್ರಿಕೆ_ಸಂಪಾದಕರು #ಸಮಾಜವಾದಿ_ಶಾಂತವೇರಿ_ಗೋಪಾಲಗೌಡ_ಎಸ್_ಎಸ್_ಕುಮುಟಾ_ಪಿ_ಪುಟ್ಟಯ್ಯರ_ಒಡನಾಡಿ #ಕನ್ನಡ_ಸಮಾಜವಾದಿ_ಯುವಜನ_ಸಭೆಯ_ಮೊದಲ_ರಾಜ್ಯ_ಸಮ್ಮೇಳನ_ಯಶಸ್ವಿಗೆ_ಕಾರಣಕರ್ತರು. #ಹಿರಿಯ_ಸಮಾಜವಾದಿ_ಶಿವಮೊಗ್ಗದ_ಪ್ರಕೃತಿ_ಮುದ್ರಣಾಲಯದ_ಪಿ_ಪುಟ್ಟಯ್ಯ_ಪಂಡಿತರ_ಬಗ್ಗೆ_ಹೇಳಿದ್ದು.   ಸಾಗರದಲ್ಲಿ ಚರ್ಚ್ ಸಮೀಪದಲ್ಲಿ ಕೆ.ಜಿ. ಶಿವಪ್ಪರ ಮನೆ ಎದರು ಟಿ.ಡಿ.ಕೆ. ಪಂಡಿತರ ತಂದೆ ದೇವ ಪಂಡಿತರ ಮನೆ ಇತ್ತು ಅವರ ಮನೆ ಎದರು ನಮ್ಮ ಮನೆ ಇತ್ತು ಅಂತ ಹಿರಿಯ ಸಮಾಜವಾದಿ ದುರೀಣರಾದ ಪಿ.ಪುಟ್ಟಯ್ಯನವರು ಟಿ.ಡಿ.ಕೆ. ಪಂಡಿತರನ್ನು ನೆನಪು ಮಾಡಿ ಕೊಂಡರು.   ನಂತರ ಆ ಕಾಲದಲ್ಲಿ ಶರಾವತಿ ಮುಳುಗಡೆ ಪ್ರದೇಶದಿಂದ ಲೈಟ್ ವುಡ್ ಗಳನ್ನು ಬೆಂಗಳೂರಿನ ಪ್ಲೇ ವುಡ್ ಪ್ಯಾಕ್ಟರಿಗೆ ತಮ್ಮ ಶವರ್ ಲೆಟ್ ಮತ್ತು ಬೆಡ್ ಪೋರ್ಡ್ ಲಾರಿಯಲ್ಲಿ ಸಾಗಾಣಿಕೆ ಮಾಡುವ ದೊಡ್ಡ ಗುತ್ತಿಗೆದಾರರಾಗಿದ್ದ ದೇವ ಪಂಡಿತರು ಪ್ರಾಮಾಣಿಕ ವ್ಯಾಪರಸ್ಥರು, ಅವರು ತಮ್ಮ ನೂತನ ಮನೆ (ಈಗಿನ ಕಾಗೋಡು ತಿಮ್ಮಪ್ಪರ ಮನೆ ಎದುರು) ನಿರ್ಮಿಸಿ ಅಲ್ಲಿ ನೆಲೆಸಿದರು.    ದೇವ ಪಂಡಿತರ ಹಿರಿಯ ಮಗ ಟಿ.ಡಿ.ಕಮಲಾಕ್ಷ ಪಂಡಿತ್, ರಾದಾ ಕೃಷ್ಣ ಪಂಡಿತ್, ಪಾಂಡುರಂಗ ಪಂಡಿತ್, ಸುಧಾರಕರ ಪಂಡಿತ್, ತ್ರಿವಿಕ್ರಮ ಪಂಡಿತ್, ರಾಮ ಪಂಡಿತ್ , ಲಕ್ಷ್ಮಣ ಪಂಡಿತ್ ಮತ್ತು ಮೂವರು ಪುತ್ರಿಯರು ಅಂತ ಅವರ ವಯೋ ಸಹಜ ಮರೆವಿನಲ್ಲೂ ನೆನಪಿಸಿ ಕೊಂಡರ

Blog number 1555. ಹಸಿದವರಿಗೆ ನೀಡುವ ಒ0ದು ಹಿಡಿ ಅನ್ನ ಭಗವಂತನಿಗೆ ಸಮರ್ಪಿಸಿದ ನೈವೇದ್ಯಕ್ಕೆ ಸಮ ಆಗಿರುತ್ತದೆ ನೆನಪಿರಲಿ.

#ಅನ್ನ_ದಾನ_ಮಹಾದಾನ #ಭೂದಾನ_ಗೋದಾನ_ಅರ್ಥದಾನ_ಶ್ರೀಮಂತರು_ಮಾತ್ರ_ಮಾಡ_ಬಹುದು. #ಅನ್ನದಾನ_ಸಾಮಾನ್ಯ_ವ್ಯಕ್ತಿ_ಕೂಡ_ಮಾಡಬಹುದು. #ಸಾವಿರ_ಯಜ್ಞಕ್ಕಿಂತ_ಶ್ರೇಷ್ಟ. #ಸಹಾಯ_ಮಾಡುವ_ಸಂದರ್ಭ_ಬಂದರೆ_ಸಹಾಯ_ಮಾಡುವುದೇ_ದೇವರು_ಕೊಟ್ಟ_ಸುವರ್ಣಾವಕಾಶ. #ಸಹಾಯ_ಮಾಡುವ_ಮನಸ್ಸಿಲ್ಲದೆ_ಟೀಕೆ_ಟಿಪ್ಪಣೆ_ಎಷ್ಟು_ಸರಿ. #ಸರ್ಕಾರದ_ಅನ್ನ_ಭಾಗ್ಯಕ್ಕೆ_ಬಿಟ್ಟಿ_ಬಾಗ್ಯ_ಎನ್ನುವುದು_ಸರಿಯಾ?   ಸರ್ವಜ್ಞ ಆ ಕಾಲದಲ್ಲಿಯೇ ಹೇಳಿದ್ದಾರೆ ಅನ್ನ ದೇವರ ಮುಂದೆ ಅನ್ಯ ದೇವರು೦ಟೆ ಅಂತ.    ಎಲ್ಲಾ ಪ್ರಾಚೀನ ಭಾರತೀಯ ಜ್ಞಾನಿಗಳು ಹೇಳಿದ್ದಾರೆ ಹಸಿವು ಅತ್ಯಂತ ದೊಡ್ಡ ಪಿಡಗು ಇದು ಎಲ್ಲರಿಗೂ ಬರುವ ಕಾಯಿಲೆ ಇದಕ್ಕೆ ಮದ್ದು ಆಹಾರ.    ಜಠರ ಬೆಂಕಿ ವಾಸಿಸುವ ಅಗ್ನಿಕುಂಡ , ಪಂಚಭೂತಗಳಲ್ಲಿ ಒಂದು, ಈ ಅಗ್ನಿ ಕುಂಡ ತಣಿಸಲು ನಾವು ಸಹಾಯ ಮಾಡಿದರೆ ಆ ಕಾರ್ಯವು ಸಾವಿರ ಯಜ್ಞಕ್ಕಿಂತ ಹೆಚ್ಚು ಪುಣ್ಯ ಎನ್ನುತ್ತಾರೆ.     ಸಹಾಯ ಮಾಡುವ ಸಂದರ್ಭ ಬಂದಾಗ ಸಹಾಯ ಮಾಡುವುದೇ ದೇವರು ನಮಗೆ ಕೊಟ್ಟ ಸುವರ್ಣಾವಕಾಶ ಅಂತ ತಕ್ಷಣ ಕಾಯ೯ತತ್ಪರರಾಗಬೇಕು, ಪಾಪಿಗಳು ಈ ಸಂದರ್ಭದಲ್ಲೂ ಸಹಾಯ ಮಾಡವ ಮನಸ್ಸಿಲ್ಲದೆ ಟೀಕೆ ಟಿಪ್ಪಣೆ ಮಾಡುತ್ತಾರೆ.   ಪಂಜಾಬಿನ ಅಮೃತ್ ಸರದ ಗೋಲ್ಡನ್ ಟೆಂಪಲ್ ನ ಲಂಗರ್, ತುಮಕೂರಿನ ಸಿದ್ದಗಂಗಾ ಸ್ವಾಮೀಜಿಗಳು ಪ್ರಾರಂಬಿಸಿ ನಿರಂತರವಾಗಿ ನಡೆಯುತ್ತಿರುವ ದಾಸೋಹ, ಹುಬ್ಬಳ್ಳಿ ಸಿದ್ದಾರೂಡ ಮಠದ ನಿತ್ಯ ದಾಸೋಹ, ಅಜ್ಮೀರದ ದರ್ಗಾದಲ್ಲಿ, ತಿರುಪತಿ, ಶಿ