Skip to main content

Posts

Showing posts from February, 2023

Blog number 1274. ಎರೆಡು ಬಾರಿ ನನ್ನಿಂದ ಲಾಭ ಪಡೆದವರೇ ಹಾಕಿದ ಚೆಕ್ ಕೇಸುಗಳು... ಕೊಟ್ಟ ತೊಂದರೆಗಳು ಮರೆಯುವುದಾದರೂ ಹೇಗೆ?

ಎರೆಡು ಚೆಕ್ ಕೇಸಿನಲ್ಲಿ ಸಿಕ್ಕಿ ಬಿಳಿಸಿದ ವಂಚಕರ ಬಲೆಯಲ್ಲಿ ನನ್ನ ಪರದಾಟ, ಲಾಭ ಪಡೆದವರಿಂದಲೇ ಮೋಸ.        ಖಾಲಿಚೆಕ್ ನಿಂದ ಬಡ್ಡಿ ವ್ಯವಹಾರದವರ ಅಪರಾ ತಪರಾ ವಸೂಲಿ ಸಾಲಗಾರರ ಆತ್ಮಹತ್ಯಗೆ ಪ್ರೇರಣೆ.   ಇವತ್ತಿನ (1- ಮಾರ್ಚ್ -2020 )  ವಿಜಯಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ.  ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ.        ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ, ಮೊನ್ನೆ ಮೊನ್ನೆ ಗೆಳೆಯರಾದ ಗೇರುಬೀಸಿನ ದೇವರಾಜ ಆಚಾರ್ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವರ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು.    ಆದರೆ ಸಾಲ ಕೊಟ್ಟವ ಶಿಕಾರಿಪುರದ ಪೋಲಿಸರು ಅವರ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಕೂಡ (ಸಾಲ ವಸೂಲಿಗೆ ಆದಾರವಾಗಿ) ಮಾಡಿಸಿಕೊಂಡಿದ್ದರು.   ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವರ ಹೆಸರು ನಮೂದಾಗಿತ್ತು.     ಸಾಲ ಪಡೆದವರಿಂದ ನಾಕಾರು ಖಾಲಿ ಚೆಕ್ ಬೇರೆ ಪಡೆದು ಅದನ್ನು ಬೇರೆ ಬೇರೆಯವರ ಹೆಸರಲ್ಲಿ ಕಲೆಕ್ಷನ್ ಗೆ ಹಾಕಿ ಬೌನ್ಸ್ ಮಾಡಿ

Blog number 1273. ಸಾಗರದ ಪುಣ್ಯ ಕ್ಷೇತ್ರ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ವಿಶೇಷ ಮಹಾ ರುದ್ರಯಾಗದ ಗೌರವಾಧ್ಯಕ್ಷ ಟಿ.ವಿ. ಪಾಂಡುರಂಗ ಅವರೊಂದಿಗೆ.

https://youtu.be/Emz3jWVMC_o #ಪಾಂಡಣ್ಣರ_ಗೌರವಾಧ್ಯಕ್ಷತೆಯಲ್ಲಿ_ಸಾಂಗವಾಗಿ_ನಡೆದ_ಮಹಾರುದ್ರ_ಯಾಗ #ಶ್ರೀಶ್ರೀಧರ_ದತ್ತ_ಮಂದಿರ_ಅಗ್ರಹಾರ_ಸಾಗರದಲ್ಲಿ #ಇದೇ_ಪೆಬ್ರುವರಿ_24ರಿಂದ_26ರವರೆಗೆ_ನಡೆಯಿತು #ಮಹಾರುದ್ರಯಾಗ_ಇದೇ_ಮೊದಲು_ಸಾಗರ_ತಾಲ್ಲುಕಿನಲ್ಲಿ_ನಡೆದದ್ದು_ಎನ್ನುತ್ತಾರೆ. #ಈ_ದತ್ತಮಂದಿರದಲ್ಲಿ_1950ರಲ್ಲಿ_ಶ್ರೀಧರ_ಸ್ಟಾಮಿಗಳ_ಪ್ರವಚನದಲ್ಲಿ #ಶಿವಮೊಗ್ಗದ_ಪಿ_ಪುಟ್ಟಯ್ಯ_ನಿತ್ಯ_ಭಾಗವಹಿಸಿದ್ದ_ನೆನಪು. #ಸಾಗರದ_ಮುನ್ಸಿಪಾಲಿಟಿ_ಪ್ರಥಮ_ಅಧ್ಯಕ್ಷರಾದ_ಖ್ಯಾತ_ವಕೀಲ #ಮೃತ್ಯುಂಜಯಬಾಪಟ್_ದತ್ತಮಂದಿರ_ಕಮಿಟಿ_ದಮ೯ದರ್ಶಿಯಾಗಿದ್ದರು. #ಮಹಾರುದ್ರಯಾಗದ_ಆಮಂತ್ರಣ_ಪತ್ರ_ವಿಶೇಷವಾಗಿ_ಮುದ್ರಿಸಲಾಗಿದೆ.     ಟಿ.ವಿ.ಪಾಂಡುರಂಗ ದೈವಭಕ್ತರು ಅವರನ್ನು ಜನ ಪಾಂಡಣ್ಣ ಎಂದೇ ಪ್ರೀತಿಯಿ೦ದ ಕರೆಯುತ್ತಾರೆ ಅವರು ಸುಮಾರು 15 ವರ್ಷದಿಂದ ನಮ್ಮ ಊರಿನ ಶ್ರೀವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿಯಂದು ಚಂದ್ರದರ್ಶನದ ನಂತರದ ಅನ್ನ ಸಂತರ್ಪಣೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಕನಿಷ್ಟ 500 ಗರಿಷ್ಟ 1500 ಭಕ್ತರು ಆ ದಿನ ಪ್ರಸಾದ ಸೇವಿಸುತ್ತಾರೆ.   ತುಂಬಾ ದಿನಗಳ ನಂತರ ನನ್ನ ಆಫೀಸಿಗೆ ಪಾಂಡಣ್ಣ ಇವತ್ತು ಬಂದಿದ್ದರು ಇದೇ ಫೆಬ್ರುವರಿ 24 ರಿಂದ 26 ರವರೆಗೆ ಸಾಗರದ ಅಗ್ರಹಾರದ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ಮಹಾರುದ್ರಯಾಗದ ಗೌರವಾಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಡೆಸಿದ ಬಗ್ಗೆ ಅವರ ಹತ್

Blog number 1272. ನೀವು ಹೋಟೆಲ್ ಮಾಲಿಕರಾಗಬೇಕಾ?

#ರಾಜ್ಯದಾದ್ಯಂತ_ನನ್ನ_ನೂತನ_ಉದ್ಯಮದಲ್ಲಿ_ನೀವು_ಸ್ವಯಂ_ಉದ್ಯೋಗಿ_ಆಗಬಹುದು. #ನಿಮ್ಮ_ಗೆಳೆಯರು_ನಿಮ್ಮ_ಮಕ್ಕಳಿಗೂ_ಈ_ಮಾಹಿತಿ_ಪಾರ್ವರ್ಡ್_ಮಾಡಲು_ವಿನಂತಿ #ಶಿವಮೊಗ್ಗದಿಂದ_ಜೋಗ್_ಪಾಲ್ಸ್_ತನಕ_ಪ್ರಾರಂಭವಾಗಲಿರುವ_ಪೈಲಟ್_ಪ್ರಾಜೆಕ್ಟ್ #ಸ್ಟಯಂ_ಉದ್ಯೋಗಿ_ಆಗಲು_ಉತ್ಸಹ_ದೃಡನಿರ್ಧಾರ_ಇದ್ದರೆ_ಸಾಕು #ಬೇಕಾಗುವ_ಎಲ್ಲಾ_ವ್ಯವಸ್ಥೆ_ತರಬೇತಿ_ನಾವು_ನೀಡುತ್ತೇವೆ #ಮುಂದಿನದಿನಗಳಲ್ಲಿ_ಆಹಾರ_ಉದ್ಯಮಕ್ಕೆ_ಮಾತ್ರ_ಹೆಚ್ಚಿನ_ಅವಕಾಶವಿದೆ_ನೆನಪಿರಲಿ. #ಈಗಾಗಲೇ_ಸಂಪರ್ಕಿಸಿದವರಿಗೆ_ಶಿವಮೊಗ್ಗದಿಂದ_ಜೋಗ್_ಜಲಪಾತದವರೆಗಿನ #ಪೈಲಟ್_ಪ್ರಾಜೆಕ್ಟ್_ಪ್ರಾರ೦ಬೋತ್ಸವಕ್ಕೆ_ಆಹ್ವಾನಿಸುತ್ತೇನೆ. #ಈ_ಮಾರ್ಗದಲ್ಲಿ_ಹೋಟೆಲ್_ಉದ್ಯಮ_ಪ್ರಾರಂಬಿಸುವ_ಅಭಿಲಾಷೆ_ಇದ್ದಲ್ಲಿ_ಸಂಪರ್ಕಿಸಿ. #ನನ್ನ_ವಾಟ್ಸಪ್_ನಂಬರ್_9449253788_ಸಂದೇಶ_ಕಳಿಸಿ_ಸಂಪರ್ಕಿಸುತ್ತೇನೆ.        ನಾನು ನನ್ನ ಜೀವನದಲ್ಲಿ ಸ್ವಯಂ ಉದ್ಯೋಗಿ ಆಗಿ ನೆಲೆ ನಿಲ್ಲಲು ಪಟ್ಟ ಕಷ್ಟಗಳು ಮಾಡಿದ ಅನೇಕ ಅವತಾರಗಳ ಬಗ್ಗೆ ಲೇಖನ ಬರೆದಾಗೆಲ್ಲ ಅನೇಕರು ಸಂಪರ್ಕಿಸುತ್ತಾರೆ ಅವರ ಪ್ರಶ್ನೆ ಯಾವ ಉದ್ಯೋಗ ಮಾಡಬಹುದು? ಉದ್ಯೋಗದಲ್ಲಿ ಯಶಸ್ವಿ ಆಗುವುದೆಂತು? ಹಣ ಇಲ್ಲ ಆದರೆ ಹ್ಯಾಗೆ ಉದ್ಯೋಗ ಪ್ರಾರಂಬಿಸಬಹುದು? , ಕೆಲವಷ೯ದಿಂದ ಅವರಿಗೆ ನನ್ನ ಕೈಲಾದ ಮಾಹಿತಿ ನೀಡಿದರೂ ಅದು ಪರಿಪೂರ್ಣ ಆಗಿರಲಿಲ್ಲ.    ಅನೇಕ ರೈತರು ಸಾಲ ಮಾಡಿ ಕೈ ಸುಟ್ಟಿಕೊಂಡು ಭಯ ಮತ್ತು ಹತಾಷೆಯಿಂದ ಜೀವನಕ್ಕೆ ಭವಿಷ್ಯವಿಲ್ಲ ಎಂದೆಣಿಸಿ ಆತ್ಮಹ

Blog number 1271. ಹಿಟ್ಲರ್ ಗೆ ಮಹಾತ್ಮಾ ಗಾಂಧಿ ಯುದ್ಧ ಬೇಡ ಎಂದು ಬರೆದ ಪತ್ರ

#23/7/1939ರಲ್ಲಿ ಸವಾ೯ಧಿಕಾರಿ ಹಿಟ್ಲರ್ ಗೆ ಗಾಂಧಿ ಬರೆದ ಪತ್ರ   ಅನೇಕ ಮಿತ್ರರು ಗಾಂಧಿಜೀ ಅವರಿಗೆ  ಹಿಟ್ಲರ್ ಗೆ ಪತ್ರ ಬರೆದು ಯುದ್ಧ ತಡೆಯಲು ವಿನಂತಿಸಲು ಕೋರುತ್ತಾರೆ ಗಾಂಧಿಜಿ ಮೊದಲಿಗೆ ಹಿಂಜರಿದರೂ ನಂತರ ಪತ್ರ ಬರೆಯುತ್ತಾರೆ.   ಇದರಿಂದ ಹಿಟ್ಲರ್ ಏನೂ ಹಿಂದೆ ಸರಿಯಲಿಲ್ಲ, ವಿಶ್ವ ಯುದ್ಧ ನಡೆದೇ ಬಿಟ್ಟಿತ್ತು ಅಂತ ಇವತ್ತಿನ ಅನೇಕ ಸೋಷಿಯಲ್ ಮೀಡಿಯಾದಲ್ಲಿ ಬಂದೂಕು ಹಿಡಿದು ಯುದ್ಧ ಮಾಡಲು ಮುಂದಾಗಿ ರಣ ಕಹಳೆ ಮೊಳಗಿಸುವ ಮಿತ್ರರನ್ನ ತಡೆಯಲಾಗದ್ದಕ್ಕೆ ಕ್ಷಮೆ ಕೋರುತ್ತಾ...   ಹಿಟ್ಲರ್ ಕನಸು ಭಗ್ನ ಆಯಿತು, ಗಾಂಧಿ ಕನಸಿನ ಭಾರತ ಸ್ವಾತಂತ್ರ್ಯ ಪಡೆಯಿತು ಎಂದು ನೆನಪಿಸುತ್ತೇನೆ.  ಅನೇಕ ಮಿತ್ರರು ಗಾಂಧಿಜೀ ಅವರಿಗೆ  ಹಿಟ್ಲರ್ ಗೆ ಪತ್ರ ಬರೆದು ಯುದ್ಧ ತಡೆಯಲು ವಿನಂತಿಸಲು ಕೋರುತ್ತಾರೆ ಗಾಂಧಿಜಿ ಮೊದಲಿಗೆ ಹಿಂಜರಿದರೂ ನಂತರ ಪತ್ರ ಬರೆಯುತ್ತಾರೆ.   ಇದರಿಂದ ಹಿಟ್ಲರ್ ಏನೂ ಹಿಂದೆ ಸರಿಯಲಿಲ್ಲ, ವಿಶ್ವ ಯುದ್ಧ ನಡೆದೇ ಬಿಟ್ಟಿತ್ತು ಅಂತ ಇವತ್ತಿನ ಅನೇಕ ಸೋಷಿಯಲ್ ಮೀಡಿಯಾದಲ್ಲಿ ಬಂದೂಕು ಹಿಡಿದು ಯುದ್ಧ ಮಾಡಲು ಮುಂದಾಗಿ ರಣ ಕಹಳೆ ಮೊಳಗಿಸುವ ಮಿತ್ರರನ್ನ ತಡೆಯಲಾಗದ್ದಕ್ಕೆ ಕ್ಷಮೆ ಕೋರುತ್ತಾ...   ಹಿಟ್ಲರ್ ಕನಸು ಭಗ್ನ ಆಯಿತು, ಗಾಂಧಿ ಕನಸಿನ ಭಾರತ ಸ್ವಾತಂತ್ರ್ಯ ಪಡೆಯಿತು ಎಂದು ನೆನಪಿಸುತ್ತೇನೆ.

Blog number 1269. ತೀರ್ಥೇಶ್ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ಹಳ್ಳಿಯೊಂದರಲ್ಲಿ ಕೃಷಿ-ಪತ್ರಿಕೋದ್ಯಮ ನಡೆಸುತ್ತಿರುವವರು ರಾಜ್ಯ ಸರ್ಕಾರದ ನಿಗಮ ಮಂಡಳಿ ಸದಸ್ಯರಾಗಿ ನೇಮಕವಾಗಿದ್ದಾರೆ.

#ಹೊಸನಗರದ_ಕುಗ್ರಾಮದ_ಯುವಕ_ತೀಥೆ೯ಶ್_ಈಗ_ರಾಜ್ಯದ_ಪ್ರತಿಷ್ಠಿತ_ನಿಗಮದ_ನಿರ್ಧೇಶಕರು.      ಆರ್.ಎಸ್.ಎಸ್. ಕಾಯ೯ಕರ್ತರಾಗಿ ಕಟ್ಟರ್ ಬಿಜೇಪಿಯ ನಿಷ್ಟಾವಂತರಾಗಿ ಅನೇಕ ವರ್ಷದಿಂದ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸಮೀಪದ ತೀಥೆ೯ಶ್ ವಾರಪತ್ರಿಕೆಯೊಂದನ್ನು ಕೆಲವು ವರ್ಷ ಹೊರ ತರುತ್ತಿದ್ದರು, ನಂತರ ಬಿಜೆಪಿಯ ಮಾಧ್ಯಮ ಮತ್ತು ಪ್ರಚಾರದಲ್ಲಿ ಐಟಿ ಸೆಲ್ ನಲ್ಲಿ ಪ್ರಮುಖರಾಗಿ ಕಾರ್ಯನಿವ೯ಹಿಸುತ್ತಿದ್ದರು.   ಕಡಿಮೆ ಮಾತು, ಹೆಚ್ಚು ಕೆಲಸ ಮಾಡುತ್ತ ಅದರಲ್ಲೇ ಸಂತೃಪ್ತರಾಗಿದ್ದರು, ಇತ್ತೀಚಿಗೆ ರಾಜ್ಯ ಸಕಾ೯ರ ಇವರನ್ನು ಕನಾ೯ಟಕ ರಾಜ್ಯದ ಪ್ರತಿಷ್ಠಿತ ನಿಗಮ ಮಂಡಳಿ ಆಗಿರುವ ಮಾಕೆ೯ಟಿಂಗ್ ಕಮ್ಯುನಿಕೇಷನ್ & ಅಡ್ವಟೈ೯ಸಿಂಗ್ ಲಿಮಿಟೆಡ್ (ಕನಾ೯ಟಕ ಸಕಾ೯ರದ ಒಂದು ಉದ್ದಿಮೆ ) ನ ನಿಧೇ೯ಶಕರನ್ನಾಗಿ ನೇಮಕ ಮಾಡಿದ್ದು ನನಗೆ ತುಂಬಾ ಸಂತಸ ತಂದಿದೆ.   ಈ ಸಂಸ್ಥೆ ಕನಾ೯ಟಕ ಪ್ರವಾಸೋದ್ಯಮ, ಮೈಸೂರು ಸ್ಯಾಂಡಲ್, ಕನಾ೯ಟಕ ರೇಷ್ಮೆ ಕೈಗಾರಿಕೆಗಳ ನಿಗಮ, ಪ್ರಿಯದಶಿ೯ನಿ, ಕಾವೇರಿ ಕರಕುಶಲ ವಸ್ತುಗಳ ಬ್ರಾಂಡ್ ನಿಮಾ೯ಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ "ಮುಖ್ಯಮಂತ್ರಿ ರತ್ನ" ಪ್ರಶಸ್ತಿಗೆ ಬಾಜನ ಆಗಿದೆ.   ಸದಾ ಹಸನ್ಮುಖಿಯಾಗಿ ತನ್ನೆಲ್ಲ ಕೌಟುಂಬಿಕ ನೋವು ನುಂಗಿ ಕಷ್ಟದ ಜೀವನದ ಮಧ್ಯ ರಾಷ್ಟ್ರೀಯ ಸ್ವಯ೦ ಸೇವಕನಾಗಿ ಅದರ ತತ್ವ ಸಿದ

Blog number 1268. ಜನವಾರ್ತೆ ನಾಗರಾಜ್ ಅಪಘಾತದಿಂದ ಇಹಲೋಕ ತ್ಯಜಿಸಿದ್ದಾರೆ, ಉದ್ಯಮ ಲೋಕದ ಕನಸುಗಾರನ ದುರಂತ ಜೀವನ.

#ಶ್ರದ್ಧಾಂಜಲಿಗಳು. #ಜನವಾರ್ತೆ_ನಾಗರಾಜ್_ಅಪಘಾತದಿಂದ_ವಿದಿವಶ. #ಶಿವಮೊಗ್ಗದ_ಮೊದಲ_ಅಂತರ್_ಜಿಲ್ಲಾ_ನಾಲ್ಕು_ಪುಟಗಳ_ದಿನಪತ್ರಿಕೆ_ಪ್ರಾರಂಬಿಸಿದವರು. #ಸ್ವಂತ_ಆಫ್_ಸೆಟ್_ಮುದ್ರಣದ_ಪತ್ರಿಕೆ_ಜನವಾರ್ತೆ #ಕನಸುಗಾರ_ಉದ್ಯಮಿಯನ್ನು_ದಾರಿತಪ್ಪಿಸಿದ_ಜಿಲ್ಲೆಯ_ರಾಜಕಾರಣಿಗಳು #ಆಶ್ರಯ_ಹಗರಣದಲ್ಲಿ_ಬಲಿಪಶು #ಕೊನೆಯವರೆಗೂ_ಇವರೊಂದಿಗೆ_ಉಳಿದವರು_SPಶೇಷಾದ್ರಿ #ದುರಂತ_ಕಥಾ_ನಾಯಕ_ಜಿ_ಎಸ್_ನಾಗರಾಜ್ #ಯಶಸ್ಸಿಗೆ_ಹಲವು_ಅಪ್ಪಂದಿರು_ಇರುತ್ತಾರೆ_ಸೋಲು_ಅನಾಥ_ಎಂಬ_ಗಾದೆ_ಸುಳ್ಳಲ್ಲ.    1995ರಲ್ಲಿ ಶಿವಮೊಗ್ಗದಿಂದ ಜಿ.ಎಸ್.ನಾಗರಾಜ್ ಸಂಪಾದಕತ್ವದಲ್ಲಿ ಪ್ರಾರಂಬಿಸಿದ #ಜನವಾರ್ತೆ ಪತ್ರಿಕೆ ಆ ಕಾಲದಲ್ಲಿ ಅನೇಕ ಪ್ರಥಮಗಳ ದಾಖಲೆ ಮಾಡಿತ್ತು.   ಡೆಮ್ಮಿಸೈಜಿನ (ಪ್ರಜಾವಾಣಿ ಸೈಜಿನಲ್ಲಿ) ನಾಲ್ಕು ಪುಟದ ಶಿವಮೊಗ್ಗ ಜಿಲ್ಲೆಯ ಮೊದಲ ದಿನ ಪತ್ರಿಕೆ ಜನವಾರ್ತೆ, ಸ್ವಂತದ್ದಾದ ಬೃಹತ್ ಆಫ್ ಸೆಟ್ ಮುದ್ರಣ ಯಂತ್ರ ಹೊಂದಿದ ಮೊದಲ ಸ್ಥಳಿಯ ದಿನ ಪತ್ರಿಕೆ ಮತ್ತು ಶಿವಮೊಗ್ಗ - ದಾವಣಗೆರೆ (ಆಗ ಚಿತ್ರದುರ್ಗ ಜಿಲ್ಲೆಯಲ್ಲಿತ್ತು) - ಚಿಕ್ಕಮಗಳೂರು - ಹಾಸನ ಜಿಲ್ಲೆಗಳಿಗೆ ಪ್ರಸಾರಣ ಹೊಂದಿದ್ದ ಮೊದಲ ಅಂತರ್ ಜಿಲ್ಲಾ ಪತ್ರಿಕೆ.    1995-2000 ಇಸವಿ ಅವಧಿಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನಗೆ ಜನವಾರ್ತೆ ಪತ್ರಿಕೆ ನನ್ನ ಹೋರಾಟ, ಪತ್ರಿಕಾ ಹೇಳಿಕೆಗಳ ಪ್ರಕಟನೆ ಮುಖಾಂತರ ಹೆಚ್ಚಿನ ಸಹಾಯ ಮಾಡಲು ಜಿ.ಎಸ್.ನಾಗರಾಜ್ ಕಾರಣರಾಗ

Blog number 1267. ಸಾಕುಪ್ರಾಣಿಯಾಗಿ ಬಿಳಿ ಇಲಿ ಸಾಕುವ ವಿಚಾರ ಅನೇಕರಿಗೆ ತಿಳಿದಿಲ್ಲ, ಬಿಳಿ ಇಲಿ ಸಾಕಿದರೆ ಬೇರೆ ಇಲಿ ಬರುವುದಿಲ್ಲ, ವೈಟ್ ಮೌಸ್ ಎನ್ನುವ ಬುದ್ಧಿವಂತ ಇಲಿಗಳು ಮಾಲಿಕರ ಜೊತೆ ಬೇಗ ಹೊಂದಿಕೊಳ್ಳುತ್ತದೆ, ಬೆಂಗಳೂರು ಮೈಸೂರಿನಲ್ಲಿ ಬಿಳಿ ಇಲಿ ಸಾಕುವವರಿದ್ದಾರೆ.

#ಬಿಳಿ_ಇಲಿ_ಮನೆಗಳಲ್ಲಿ_ಸಾಕುಪ್ರಾಣಿಯಾಗಿ_ಸಾಕುತ್ತಾರೆಂಬುದು_ಬಹಳ_ಜನರಿಗೆ_ಗೊತ್ತಿಲ್ಲ. #ಮೈಸೂರು_ಬೆಂಗಳೂರಲ್ಲಿ_ಮಾತ್ರವಲ್ಲ_ವಿಶ್ವದಾದ್ಯಂತ_ಇಲಿ_ಸಾಕುಪ್ರಾಣಿ. #ಈ_ಬಗ್ಗೆ_ಬಹಳ_ಹಿಂದೆ_ಬರೆದ_ಲೇಖನ_ಕಳೆದು_ಹೋಗಿದೆ. #ಇವತ್ತು_ಆಕೃತಿಕನ್ನಡದಲ್ಲಿ_ಇವತ್ತಿನ_ಲೇಖನ_ಇಲಿ_ಪ್ರಬೇದದ_ಬಗ್ಗೆ_ಓದಿ_ನೆನಪಾಯಿತು. #ಬಿಳಿ_ಇಲಿ_ಸಾಕಿದರೆ_ಬೇರೆ_ಇಲಿ_ಬರುವುದಿಲ್ಲ.    ಇವತ್ತು ಶಾಲಿನಿ ಹೂಲಿ ಪ್ರದೀಪರ #ಆಕೃತಿ_ಕನ್ನಡದಲ್ಲಿ ಒಂದು ಇಲಿಗಳ ಪ್ರಬೇದದ ಬಗ್ಗೆ #ಶಕುಂತಲಾಶ್ರೀಧರ್ ಅವರ ಅನುಭವದ ಕಥನ ಪ್ರಕಟವಾಗಿತ್ತು ಅದನ್ನು ಓದಿದಾಗಲೇ ಸುಮಾರು 20 ವರ್ಷದ ಹಿಂದೆ ರೈಲಿನ ಸಹ ಪ್ರಯಾಣಿಕರಿಂದ ತಿಳಿದ ಬಿಳಿ ಇಲಿ ಸಾಕು ಪ್ರಾಣಿಯ ವೃತ್ತಾಂತ ನೆನಪಾಯಿತು.    2010ರಲ್ಲಿ ನನ್ನ ಲ್ಯಾಪ್ ಟಾಪ್ ನಲ್ಲಿ ಪೇಸ್ ಬುಕ್ ನಲ್ಲಿ ಬರೆದ ಲೇಖನ ಹುಡುಕಿದೆ ಆದರೆ ಸಿಗಲಿಲ್ಲ ಆಗ ಬ್ಲಾಗ್ ಇರಲಿಲ್ಲ.   ಒಮ್ಮೆ ಬೆಂಗಳೂರಿಂದ ರೈಲಿನಲ್ಲಿ ಬರುವಾಗ ಪರಿಚಯವಾದ ಮೈಸೂರಿನ ಸಹ ಪ್ರಯಾಣಿಕರು ತುಮಕೂರಿನ ಮಗಳ ಮನೆಗೆ ಪ್ರಯಾಣಿಸುತ್ತಿದ್ದರು, ತಮ್ಮ ಜೊತೆ ಒಯ್ಯುತ್ತಿದ್ದ ಎರೆಡು ಬಿಳಿ ಇಲಿಗೆ ಕಾಳುಗಳನ್ನು ಕೊಡುವುದು ನೋಡಿ ಆಶ್ಚರ್ಯದಿಂದ ಕೇಳಿದಾಗಲೇ ಗೊತ್ತಾಗಿದ್ದು ಅದು ಅವರು ಸಾಕುತ್ತಿರುವ ಸಾಕು ಪ್ರಾಣಿ ಬಿಳಿ ಇಲಿಗಳು.   ಅವರ ಪತ್ನಿ ಇಹಲೋಕ ತ್ಯಜಿಸಿದ್ದರಿಂದ ಒಂಟಿ ಜೀವನ ಅವರದ್ದು ಮಗಳ ಮನೆಗೆ ಹೋಗುವಾಗಲೂ ಈ ಬಿಳಿ ಇಲಿಗಳನ್ನು ತೆಗೆದು ಕೊ

Blog number 1265. ಕಾರಿನ ಸೈಲೆನ್ಸ್ ರ್ ಬಿಸಿಯಿಂದ ಕಾರಿನ ಕೆಳಗಿನ ಹುಲ್ಲು ಬೆಂಕಿಯಿಂದ ನೂರಾರು ಕಾರುಗಳು ಭಸ್ಮವಾದ ಬೆಂಗಳೂರಿನ ಏರ್ ಶೋನಲ್ಲಿ ನಡೆದ ದುರಂತ 2019 ರಲ್ಲಿ.

   ವಾಹನಗಳ ಮಾಲಿಕರೆ ಗಮನಿಸಿ      ನೀವು ಚಲಾಯಿಸುವವ ಯಾವುದೇ ವಾಹನ 5 ರಿಂದ 10 ನಿಮಿಷದಲ್ಲಿ ಅದರ ಹೊಗೆ ಕೊಳವೆ ಉಷ್ಣ 200 ಡಿಗ್ರಿ ಸಮೀಪ ತಲುಪಿರುತ್ತದೆ.             ನಿಮ್ಮ ವಾಹನ ಪಾಕ್೯ ಮಾಡುವುದಾದರೆ ಪಾಕಿ೯೦ಗ್ ನೆಲ ಗಮನಿಸಿ, ಮಣ್ಣು, ಸಿಮೆ೦ಟ್, ಟೈಲ್ಸ್ ಅಥವ ಟಾರ್ ಇದ್ದರೆ ತೊಂದರೆ ಇಲ್ಲ, ರಸ್ತೆ ಬದಿಯಲ್ಲಿ ಒಣ ಹುಲ್ಲಿದ್ದರೂ ಅದು ನಿಮ್ಮ ಸೈಲೆನ್ಸ್ ರ್ ತಲುಪವಷ್ಟು ಎತ್ತರ ಇಲ್ಲದಿದ್ದರೆ ತೊಂದರೆ ಇಲ್ಲ.   ಮೊನ್ನೆ ಏರ್ ಶೊ ಆರಂಬಿಸಿದಲ್ಲಿ ಪಾಕಿ೯oಗ್ ಜಾಗ ಹೇಗಿತ್ತೆ೦ದರೆ ಮಲೆನಾಡಿನ ಕರಡ ಬೆಳೆದ ಬ್ಯಾಣದ ಹಾಗೆ ಇತ್ತು, ಅದನ್ನ ತೆಗೆದು ಪಾಕಿ೯೦ಗ್ ಮಾಡದ ಸಂಬಂದಪಟ್ಟ ಅಧಿಕಾರಿಗಳು ಮತ್ತವರ ಬುದ್ಧಿಮತ್ತೆ ಪ್ರಶ್ನಾಹ೯?!   ಯಾರೋ ಭಯಾತ್ಪಾದಕರ ಕೃತ್ಯ ಇರಬಹುದೆಂದು ಅನುಮಾನಿಸಿ ತಕ್ಷಣಕ್ಕೆ ಅನೇಕರು ಪ್ರತಿಕ್ರಿಯಿಸಿದಾಗ ನಾನು ಇದು ಕಾರಿನ ಹೊಗೆ ಕೊಳವೆ ಒಣ ಹುಲ್ಲಿಗೆ ಹರಡಿದ ಬೆಂಕಿ ಅಂತ ಬರೆದಿದ್ದೆ, ಈಗ ಅದು ಅದೇ ರೀತಿ ಆಗಿದೆ ಎಂದು ಸಾಬೀತಾಗಿದೆ ನೋಡಿ.

Blog number 1264. ಆನಂದಪುರಂನ ಮಾರಿಕಾಂಬಾ ಜಾತ್ರೆ 28- ಫೆಬ್ರುವರಿ 2023ರಿಂದ 6- ಮಾರ್ಚ್ -2023. ಹಿಂದಿನ ಜಾತ್ರೆ 11- ಮಾರ್ಚ್ -2023ರಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಿ ಕೊರಾನಾದಿ0ದ ಜಾತ್ರೆಯೇ ರದ್ದಾಗಿತ್ತು.

#ನಮ್ಮ_ಊರಿನ_ಮಾರಿಕಾಂಬಾ_ಜಾತ್ರೆ https://youtu.be/SWSw2bNVRx0 #ಆನಂದಪುರ0_ಜಾತ್ರೆ #ದಿನಾಂಕ_27_ಪೆಬ್ರುವರಿಯಿಂದ_6_ಮಾರ್ಚ್_2023ರ_ವರೆಗೆ #ಆಹ್ವಾನ_ಪತ್ರಿಕೆ_ನೀಡಲು_ಜಾತ್ರಾಸಮಿತಿ_ಅಧ್ಯಕ್ಷ_ಬಸವರಾಜ್ #ಕಾರ್ಯದರ್ಶಿ_ಉಮೇಶ್_ಮತ್ತು_ಪದಾಧಿಕಾರಿಗಳು_ಬಂದಿದ್ದರು. #ಕಳೆದ_2020ರ_ಜಾತ್ರೆಯಲ್ಲಿ_ಅದ್ದೂರಿ_ಆಗಿ_ನಡೆಯುತ್ತಿದ್ದಾಗ_ರಾಷ್ಟ್ರೀಯ_ಹೆದ್ದಾರಿ_4_ಗಂಟೆ_ಬಂದ್_ಆಗಿದ್ದು. #ಅದರ_ಮರುದಿನವೇ_ಜಿಲ್ಲಾಡಳಿತ_ಕೊರಾನಾದಿಂದ_ಜಾತ್ರೆ_ರದ್ದು_ಮಾಡಿದ್ದು. #ನಂತರ_ಜನತಾಕರ್ಪ್ಯೂ_ಲಾಕ್_ಡೌನ್_ಜಾರಿ_ಆಯಿತು #ಅಮ್ಯೂಸ್_ಮೆಂಟ್_ಹಾಕಿದವರೆಲ್ಲ_ಲಾಕ್_ಡೌನ್_ನಿಂದ_ಊರಿಗೆ_ತಲುಪಲಾಗದೆ_ಕೂಲಿ_ಕೆಲಸಕ್ಕೆ #ಈ_ವರ್ಷದ_ಜಾತ್ರೆಯಲ್ಲಿ_ಬುದವಾರ_1_ಮಾರ್ಚ್_2023ರಂದು_ಆನಂದಪುರಂನ_ದಾಸಕೊಪ್ಪ_ವೃತ್ತದಿಂದ_ಯಡೇಹಳ್ಳಿ_ವೃತ್ತದವರೆಗೆ #ವಾಹನ_ನಿಲುಗಡೆ_ನಿಷೇದಕ್ಕೆ_ವಿನಂತಿಸಿದ್ದೇನೆ.     ಇವತ್ತು ಆನಂದಪುರಂ ಮಾರಿ ಜಾತ್ರಾ ಸಮಿತಿ ಅಧ್ಯಕ್ಷರಾದ ಬಸವರಾಜ್ ಮತ್ತು ಕಾರ್ಯದರ್ಶಿ ಉಮೇಶ್ ಜಾತ್ರಾ ಆಹ್ವಾನ ನೀಡಲು ಬಂದಿದ್ದರು.   ಕಳಿದ ಮಾರಿಕಾಂಬಾ ಜಾತ್ರೆ 11-ಮಾರ್ಚ್ -2020ರಂದು ಆನಂದಪುರಂ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾಗಿ ನಡೆಯಿತು ಆಗ ಅಧ್ಯಕ್ಷರಾಗಿದ್ದವರು ಆನಂದಪುರಂನ ಟಿಂಬರ್ ಉದ್ಯಮಿ ಚಂದ್ರಹಾಸ್ ಶೇಟ್ ಅವರ ಜೊತೆ ಇದ್ದವರೆ ಈ ಬಸವರಾಜ್ ಮತ್ತು ಉಮೇಶ್.    ಆನಂದಪುರಂ ಮಾರಿಕಾಂಬಾ ಜಾತ್ರೆಗೆ ಶಿಸ್ತಿನ ಅಡಿಪಾಯ

Blog number 1263. ಉದಯೋನ್ಮುಖ ಸಾಹಿತಿ ಕಾರ್ತಿಕಾದಿತ್ಯ ಬೆಳಗೋಡು ಅವರೊಡನೆ ಭಾಗ-2 .

#ಕಾರ್ತಿಕಾದಿತ್ಯ_ಬೆಳಗೋಡು_ಅವರೊಂದಿಗೆ_ಭಾಗ_2 https://youtu.be/bY6BEKUksuc #ತೇಜಸ್ವಿಯವರು_ಮೂಡಿಗೆರೆಯವರಿಗೆ_ಅಪರಿಚಿತರಂತೆ_ಇದ್ದರು. #ಅವರ_ಅಂತಿಮದರ್ಶನಕ್ಕೆ_ರಾಜ್ಯದ_ಮೂಲೆ_ಮೂಲೆಯಿಂದ_ಹರಿದು_ಬಂದ_ಜನಸಾಗರ #ಈಗಲೂ_ಮೂಡಿಗೆರೆಯ_ಗ್ರಂಥಾಲಯಗಳಲ್ಲಿ_ತೇಜಸ್ವಿ_ಪುಸ್ತಕಗಳಿಲ್ಲ. #ಬಿರಿಯಾನಿ_ಕೆರಿಯಪ್ಪ_ತಯಾರಿಸಿದ_ಬಿರಿಯಾನಿ_ಸವಿದ_ನೆನಪು_ಕಾರ್ತಿಕಾದಿತ್ಯರ_ಸಂದರ್ಶನದಲ್ಲಿ     ಶ್ರೀಮತಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರೇ ಇವರ ಪುಸ್ತಕ ಓದಿ  ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ನಿಮ್ಮ ಬರವಣಿಗೆ ಅದ್ಬುತ ಎಂದಿದ್ದರೆಂದರೆ ಅರ್ಥವಾದೀತು ಇವರ ಬರವಣಿಗೆ.    ಹಾಗಂತ ಇವರು ಮೂಡಿಗೆರೆಯವರೇ ಆದರೂ ನೇರವಾಗಿ ತೇಜಸ್ವಿ ಅವರ ಜೊತೆ ಮಾತಾಡಿಲ್ಲ, ಅವರ ಸಾಹಿತ್ಯ ಓದಲು ಇವರಿಗೆ ಮೂಡಿಗೆರೆಯ ಪುಸ್ತಕದ ಅಂಗಡಿ ಅಥವ ಲೈಬ್ರರಿಯಲ್ಲಿ ಲಭ್ಯವಿರಲಿಲ್ಲ ತೇಜಸ್ವಿ ಪುಸ್ತಕಗಳು.    ಬಿರಿಯಾನಿ ಕೆರಿಯಪ್ಪನನ್ನ ನೋಡಿದ್ದಾರೆ,ತೇಜಸ್ಸಿ ಪ್ರತಿಷ್ಟಾನದ ಭವನ ಉದ್ಘಾಟನೆಯ ದಿನ 120 ಜನ ಅತಿಥಿಗಳಿಗೆ ರಾಜೇಶ್ವರಿ ಮೇಡಂ ಬಿರಿಯಾನಿ ಕೆರಿಯಪ್ಪರಿಂದಲೇ ಬಿರಿಯಾನಿ ಮಾಡಿಸಿದ್ದರಂತೆ.   ಮೂಡಿಗೆರೆಯ ಸ್ಥಳಿಯರು ತೇಜಸ್ವಿ ತಕ್ಷಣ ಸಿಟ್ಟಿಗೇಳುತ್ತಾರೆ, ಜನರ ಹತ್ತಿರ ಒಡನಾಡುವುದಿಲ್ಲ, ಅವರ ಸ್ಕೂಟರ್ ನಲ್ಲಿ ಡ್ರಾಪ್ ಕೇಳುತ್ತಾರಂತ ಹಿಂದಿನ ಸೀಟು ತೆಗೆದಿದ್ದಾರೆ ಇತ್ಯಾದಿ ತಪ್ಪು ಗ್ರಹಿಕೆ ಇತ್ತಂತೆ ಅದಕ್ಕೆ ಕಾರಣ ಅವರ ಬದುಕು -

Blog number 1262. ಸಾಗರ ತಾಲ್ಲೂಕ್ ಕೃಷಿಕ ಸಮಾಜದ ಉದ್ದೇಶವನ್ನೆ ಬುಡಮೇಲು ಮಾಡುವ ಸದಾ ಅವರ ಗುಂಪು ಆಡಳಿತ ಮಂಡಳಿಯಲ್ಲಿರುವಂತೆ, ಬೇರಾರು ಹೊಸ ರೈತರು ಕೃಷಿಕ ಸಮಾಜದ ಸದಸ್ಯರಾಗದಂತೆ ನೋಡಿಕೊಳ್ಳುವ ಪಟ್ಟಭದ್ರರಿದ್ದಾರೆ ಈಗ ಸಾಗರ ತಾಲ್ಲೂಕಿನಲ್ಲಿ ಕೃಷಿ ವಿಶ್ವವಿದ್ಯಾಲಯ ಕಾಯಾ೯ರಂಭ ಮಾಡಿದೆ.

# ಸಾಗರ ತಾಲ್ಲೂಕಿನ ಕೃಷಿಕ ಸಮಾಜಕ್ಕೆ ಹೊಸದಾಗಿ ಸದಸ್ಯರಾಗದಂತೆ ನೋಡಿಕೊಂಡು ಅವರವರೇ ಅವಿರೋಧವಾಗಿ ಆಯ್ಕೆ ಆಗುವ ಅಯೋಗ್ಯ ಪದ್ದತಿ.        ಸಾಗರ ತಾಲ್ಲೂಕಿನ ಕೃಷಿ ಇಲಾಖೆ ಅವ್ಯವಹಾರ ಬೆಳಕಿಗೆ ತಂದು ಆಗಿನ ಕೃಷಿ ಸಚಿವರಾದ ಬೈರೇ ಗೌಡರನ್ನ ಸ್ಥಳ ಪರಿಶೀಲನೆಗೆ ಕರೆತಂದು 8 ಜನ ಕೃಷಿ ಇಲಾಖೆ ಅಧಿಕಾರಿಗಳನ್ನ ಜೈಲಿಗೆ ಕಳಿಸಿದ ಹೋರಾಟದಿಂದ ಮುಂದಿನ ದಿನದಲ್ಲಿ ಪಡಬಾರದಷ್ಟು ಕಷ್ಟ ಪ್ರತಿಫಲವಾಗಿ ಪಡೆದೆ.  ಆ ದಿನದಲ್ಲಿ ಸಾಗರ ತಾಲ್ಲೂಕ್ ಕೃಷಿಕ ಸಮಾಜದ ಅಧ್ಯಕ್ಷರಾದವರೆ ಈಗಲೂ ಅದ್ಯಕ್ಷರು ಅಂದರೆ ಸುಮಾರು 23 ವಷ೯ದಿಂದ ಒಬ್ಬರೆ ಹೇಗೆ ಅಧ್ಯಕ್ಷರು? ಎಂದು ಕೇಳಿದರೆ ಕಾಲ ಕಾಲಕ್ಕೆ ಚುನಾವಣೆ ನಡೆದು ಆಯ್ಕೆ ಆಗಿದ್ದಾರೆ ಎಂಬ ಸಿದ್ದ ಉತ್ತರ ಇದೆ ಆದರೆ ಸುಮಾರು 50 ವಷ೯ದಿಂದ ಮತದಾರರ ಪಟ್ಟಿ ಪರಿಷ್ಕೃತ ಆಗಿಲ್ಲ.   ಸಾಗರ ತಾಲ್ಲೂಕಿನಲ್ಲಿ ಅನೇಕ ಪ್ರಗತಿ ಪರ ರೈತರಿದ್ದಾರೆ, ಹೊಸ ಪ್ರಯೋಗ ಮಾಡಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಾದನೆ ಮಾಡಿದ್ದಾರೆ ಅವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚಿರ ಬಹುದು ಆದರೆ 230 ಜನರ ಹಳೆ ಪಟ್ಟಿ ಇಟ್ಟುಕೊಂಡಿದ್ದಾರೆ ಇದರಲ್ಲಿ ಅನೇಕರು ಮೃತ ಪಟ್ಟಿದ್ದಾರೆ.   ಕೃಷಿಕ ಸಮಾಜ ಕೃಷಿ ಇಲಾಖೆಗೆ ಸಮಾನಾ೦ತರವಾಗಿ ಕಾಯ೯ ನಿವ೯ಹಿಸುವ ಜನಪ್ರತಿನಿಧಿ ಸಂಸ್ಥೆ, ತಾಲ್ಲೂಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿದೆ ಮಾಸಿಕ ಪತ್ರಿಕೆ ಇದೆ, ತಾಲ್ಲೂಕ್ ಪಂಚಾಯತ್ ನಂತೆಯೆ ಕೃಷಿ ಇಲಾಖೆ ಪರಿಶೀಲನೆ ಸಲಹೆ ನೀಡಬಹುದಾದ ಈ ಸಂಸ್ಥೆ ರಾಜ್ಯ

Blog number 1261. ಅಡಿಕೆ ಯಂತ್ರ ಅವಿಷ್ಕಾರದ ಪಿತಾಮಹ ಮುಂಡಿಗೆಸರದ ಮಂಜಪ್ಪಯ್ಯ.

ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಅವಿಷ್ಕಾರದ ಪಿತಾಮಹ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ 1945ರಲ್ಲಿಯೇ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರಯತ್ನಿಸಿದ್ದರಿಂದ ಅವರು ಅಡಿಕೆ ಸುಲಿಯುವ ಯಂತ್ರ ಅವಿಷ್ಕಾರದ ಪಿತಾಮಹ ಎಂಬುದು ಉದ್ದೇಶ ಪೂವ೯ಕವಾಗಿ ಮರೆಲಾಚುತ್ತಿದ್ದಾರೆಂದು ಈ ಲೇಖನದಲ್ಲಿದೆ ಮುಂಡಿಗೆಸರದ ಮಂಜಪ್ಪಯ್ಯರ ಪೋಟೋ, ಅಡಿಕೆ ಪತ್ರಿಕೆಯಲ್ಲಿ ಇವರ ಬಗ್ಗೆ ಬಂದ ಲೇಖನ ಯಾರಾದರೂ ನೀಡಲು ಸಾಧ್ಯವೆ?     ಅಡಿಕೆ ಸುಲಿಯುವ ಯಂತ್ರದ ಸಂಶೋಧಕ ಮುಂಡಿಗೆಸರ ಮಂಜಪ್ಪಯ್ಯನವರ ಪುಣ್ಯ ಸ್ಮರಣೆ.      ರೈತ ಕುಲದಲ್ಲಿ ನಾವೇ ಶ್ರೇಷ್ಠರೆಂದು ಬೀಗುವ  ಅಡಿಕೆ ಬೆಳೆಗಾರರೂ ಸಹ ಎಲ್ಲಾ ಸಮಾಜದಲ್ಲಿರುವ ಶ್ರೇಷ್ಠತೆಯ ವ್ಯಸನಿಗಳ ಹಾಗೆ ನಯವಂಚನೆ, ಜಾಣ ಕುರುಡುತನದಂತಹ ಆತ್ಮಘಾತುಕುತನ ಬೆಳೆಸಿಕೊಂಡು ಚರಿತ್ರೆಗೆ ದ್ರೋಹವೆಸಗುವವರೆಂದು ಅತ್ಯಂತ ವಿಷಾದದಿಂದ ಹೇಳಬೇಕಾದ ದಿನ ಈ ತಾರೀಕು.    ಪ್ರತಿ ಆಗಸ್ಟ್ 28 ರಂದು ಹೀಗೆಯೇ ಸಿಟ್ಟು ಬಂದು ಸಮಾಧಾನಿಸಿಕೊಂಡಿದ್ದಿದೆ. ನಮ್ಮ ಸುತ್ತ ಮುತ್ತಲಿನ ಡಂಬಾಚಾರಿಗಳ ಸನ್ಮಾನ, ಪುಗಸಟ್ಟೆ ಪ್ರಶಸ್ತಿ ಪ್ರತಾಪಿಗಳ ಅಬ್ಬರ ಅಡಿಕೆ ಅಂಗಳಕ್ಕೂ ಕಾಲಿಟ್ಟು ಊಳಿಟ್ಟರೂ ಬಾಯಿಬಿಡದ ಅವಿವೇಕಿ ಬೆಳೆಗಾರರು, ರೈತ ಸಂಘಟನೆಯ ನೇತಾರರು, ಗಜ ಗಾಂಭೀರ್ಯ ಘತ್ತಿನ ಅಡಿಕೆ ಸಹಕಾರಿ ಸಂಘಗಳ ಸೋ ಕಾಲ್ಡ್ ಬಲಿಷ್ಠರು ತುಟಿಪಿಟಕ್ಕೆನ್ನದೇ ಮಳ್ಳರಂತೆ ನುಣಚಿಕೊಳ್ಳುವುದು ನೋಡಿ ಇವರಲ

Blog number 1260. ಉದಯೋನ್ಮುಖ ಸಾಹಿತಿ ಕಾರ್ತಿಕಾದಿತ್ಯ ಬೆಳಗೋಡು ಅವರೊಂದಿಗೆ ಭಾಗ-1

#ಭಾಗ_1. https://youtu.be/sXs_jc79lng #ಕಾರ್ತಿಕಾದಿತ್ಯಬೆಳಗೋಡು_ಕೆಂಜಳಿಲು_ಪ್ರಕಾಶನ_ಮೂಡಿಗೆರೆ #ಚಿಕ್ಕಮಗಳೂರು_ಜಿಲ್ಲೆಯಿಂದ_ಮೂಡಿಬಂದ_ಉದಯೋನ್ಮುಖ_ಸಾಹಿತಿ #ರಾಜೇಶ್ವರಿತೇಜಸ್ವಿ_ಇವರ_ಪುಸ್ತಕ_ಮೆಚ್ಚಿ_ಪ್ರೋತ್ಸಾಹಿಸಿದ್ದರು. #ಪೇಸ್_ಬುಕ್_ಜಗತ್ತಿನಲ್ಲಿ_ಸಿಕ್ಕ_ಮಿತಬಾಷಿ_ಗೆಳೆಯ #ಇವರ_ನಾಲ್ಕು_ಪುಸ್ತಕಗಳು_ಪ್ರಸಿದ್ದಿ_ಪಡೆದಿದೆ #ಕಾಡುಹಾದಿಯಜಾಡುಹತ್ತಿ_ಕಾಟೀಹರದತೀರ_ಪ್ಯಾರಾಸ್ಯೆಟ್_ನಾನುನೀವುಜೊತೆಗಿ೦ದಷ್ಟು #ಶನಿವಾರ_ನನ್ನ_ಕಛೇರಿಯಲ್ಲಿ_ಕುಶಲೋಪರಿ    ಮೊನ್ನೆ ಶನಿವಾರ ದಿನಾಂಕ 18- ಪೆಬ್ರುವರಿ-2023ರ ಮಧ್ಯಾಹ್ನ ಚಿಕ್ಕಮಗಳೂರಿನ ಉದಯೋನ್ಮುಖ ಸಾಹಿತಿ ಕಾರ್ತಿಕಾದಿತ್ಯ ಬೆಳಗೋಡು ಅವರು ಪೋನಾಯಿಸಿ ನನ್ನ ಲಾಡ್ಜ್ ಎದುರಿನಿಂದ ಸಿಗಂದೂರು ಹೋಗುವ ದಾರಿಯಲ್ಲಿರುವುದಾಗಿ ತಿಳಿಸಿದಾಗ ಅವರನ್ನು ಆಹ್ವಾನಿಸಿದೆ.    ಈಗಾಗಲೇ ಇವರು ಬರೆದು ಪ್ರಕಟಿಸಿರುವ ನಾಲ್ಕು ಪುಸ್ತಕಗಳು "ನಾನು ನೀವು ಜೊತೆಗೊಂದಿಷ್ಟು" -"ಕಾಡು ಹಾದಿಯ ಜಾಡು ಹತ್ತಿ" - "ಕಾಟೇಹರದ ತಿರುವು" - "ಪ್ಯಾರಾ ಸೈಟ್" ಪುಸ್ತಕ ಇವರ ಕೆಂಜಳಿಲು ಪ್ರಕಾಶನದಿಂದ ಕಾನ್ ಕ್ಲೇವ್ ಪಬ್ಲಿಷರ್ ರಿಂದ ಪ್ರಕಟಗೊಂಡು ರಾಜ್ಯದಾದ್ಯಂತ  ಸಾಹಿತ್ಯ ಆಸಕ್ತರ ಮನ ಸೆಳೆದಿದೆ.    ಕೃಷಿ- UPVC ಗ್ಲಾಸ್ ವಿಂಡೋ ಉದ್ಯಮ - ಬರವಣಿಗೆ - ಶಾಲೆಗಳಲ್ಲಿ ಪರಿಸರ ಜಾಗೃತಿ ಅಭಿಯಾನ - ಪರಿಸರ ವಿಕೋಪಗ

Blog number 1258. ಅಪರೂಪದ ಬಣ್ಣದ ರಚನೆಯ ದಾಸವಾಳದ ಹೂವು

ಅಪರೂಪದ ರಚನೆ   ರಂಗು ರಂಗಾದ ದಾಸವಾಳ   ಇವತ್ತು ನಮ್ಮ ಮನೆಯ ದಾಸವಾಳದ ಹೂವುಗಳ ಮಧ್ಯೆ ಅಪರೂಪದ ಈ ಹೂವು ಸಿಕ್ಕಿದೆ, ಆರೂ ದಳಗಳು ಹಳದಿ ಇದ್ದು ಬುಡದಲ್ಲಿ ಕೆಂಪು ಇರಬೇಕಾಗಿದ್ದ ಈ ದಾಸವಾಳದ ಹೂವಿನ ಗಿಡದಲ್ಲಿ ಅಪರೂಪವಾಗಿ ಒಂದು ದಳ ಪೂಣ೯ ಕೆಂಪಾಗಿದೆ.

Blog number 1259. ದಿನದ 24 ಗಂಟೆಯೂ ಎಚ್ಚರವಾಗಿರುವ ರಾಜ್ಯದ ಏಕೈಕ ಪುಟ್ಟ ಊರು ಮಾವಿನಗುಂಡಿ ಜೋಗ್ ಜಲಪಾತದ ಪಕ್ಕದಲ್ಲಿದೆ.

#ಮಾವಿನಗುಂಡಿ_ಎಂಬ_ಮಾಯಾ_ಜಗತ್ತು #ಶಿವಮೊಗ್ಗ_ಜಿಲ್ಲೆಯ_ಅಂಚು_ಉತ್ತರಕನ್ನಡ_ಜಿಲ್ಲೆ #ಇದು_ಪಶ್ಚಿಮಘಟ್ಟದ_ಉತ್ತರ_ದಕ್ಷಿಣ_ಪೂರ್ವ_ಪಶ್ಚಿಮ_ಸಂಪರ್ಕಿಸುವ_ಹೆಬ್ಬಾಗಿಲು #ಮಹಿಳಾ_ಸತ್ಯಾಗ್ರಹಿಗಳ_ಊರು #ಮಳೆಗಾಲದ_ಮಾವಿನಗುಂಡಿ_ಪಾಲ್ಸ್ #ಜೋಗಜಲಪಾತದಿಂದ_ಕೇವಲ_ಮೂರು_ಕಿಮಿ #ಅನಾನಸ್_ಹಣ್ಣಿನ_ಮೌಲ್ಯವರ್ಧನೆ_ಮೊದಲು_ಮಾಡಿದ_ಐನಕೈ_ಅಶೋಕಹೆಗಡೆ_ಊರು #ದಿನದ_ಇಪ್ಪತ್ನಾಲ್ಕು_ಗಂಟೆಯೂ_ಎಚ್ಚರವಾಗಿರುವ_ಪುಟ್ಟ_ಊರು.    ಮಾವಿನಗುಂಡಿ ಅನ್ನುವ ಊರೇ ಒಂದು ವಿಸ್ಮಯ ಅಲ್ಲಿ ಮೂರು ರಸ್ತೆ ಸೇರುತ್ತದೆ, ಪಶ್ಚಿಮ ಘಟ್ಟದ ಮಧ್ಯದ ಈ ಪುಟ್ಟ ಊರಿ೦ದ ಜೋಗ ಜಲಪಾತ 3 ಕಿ.ಮಿ ಮಾತ್ರ.   ಈ ಊರಿನ ಹೆಸರಿನದ್ದೇ 292 ಮೀಟರ್ ಎತ್ತರದ ಜಲಪಾತ ಮಳೆಗಾಲದ ಜೂನ್ ನಿಂದ ನವೆಂಬರ್ ತನಕ ವೀಕ್ಷಿಸಬಹುದು.   ಈ ಊರಿಗೆ ಕೇರಳ - ಗೋವಾ ಮತ್ತು ಕರಾವಳಿಯ ಸಂಪರ್ಕದ ಹೊನ್ನಾವರ - ಬೆಂಗಳೂರು ಘಾಟಿ ರಸ್ತೆಗೆ ನೂರಾರು ವರ್ಷದ ಇತಿಹಾಸ ಇದೆ ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ ಆಳಿದ ಗೇರುಸೊಪ್ಪೆಗೆ ಸಿರ್ಸಿ - ಸಿದ್ಧಾಪುರ - ಸಾಗರಗಳಿಂದ ಇದೇ ಮಾರ್ಗದಲ್ಲಿ ಸಾಗಬೇಕಾಗಿತ್ತು.   ಇಲ್ಲಿಂದ ಸಿದ್ದಾಪುರ - ಸಿರ್ಸಿ - ಹುಬ್ಬಳ್ಳಿಗೂ ಒಂದು ರಸ್ತೆ ಇದೆ.    ಅರಬ್ಬೀ ಸಮುದ್ರದಿಂದ ಶರಾವತಿ ನದಿಯಲ್ಲಿ ಇಲ್ಲಿಯವರೆಗೆ ನದಿ ಮಾರ್ಗವೂ ಒಂದು ಕಾಲದಲ್ಲಿ ಬಳಕೆಯಲ್ಲಿತ್ತು ಈಗ ಮಧ್ಯದಲ್ಲಿ ಗೇರುಸೊಪ್ಪೆಯಲ್ಲಿ ಆಣೆಕಟ್ಟು ನಿರ್ಮಾಣವಾಗಿದೆ.    ಬ್ರಿಟಿಷರ ಕಾಲದಲ್ಲಿ ಇದು ಬಾಂಬೆ