Skip to main content

Blog number 1257. ನನ್ನ ಕಾದಂಬರಿ ಓದಿ ಪ್ರತಿಕ್ರಿಯಿಸಿರುವ ಬರಹಗಾರರಾದ ನಾಗೇಂದ್ರ ಸಾಗರ್.

ಗೆಳೆಯ Arun Prasad ಬರೆದ ಬೆಸ್ತರರಾಣಿ ಚಂಪಕ ಪುಸ್ತಕದ ಕುರಿತ ನನ್ನ ಇನ್ನೊಬ್ಬ ಹಿರಿಯ ಗೆಳೆಯರಾದ Gangadhara Nayak ತಮ್ಮ ಗೋಡೆಯಲ್ಲಿ ಬರೆದಿದ್ದನ್ನು ನಾನು ಇತ್ತೀಚೆಗೆ ಓದಿದ್ದೆ. 

ಅರೆ ಪುಸ್ತಕ ತಂದು ಇಷ್ಟು ದಿನವಾದರೂ ನಾನು ಓದಿಲ್ಲವಲ್ಲ ಅಂದುಕೊಂಡೆ.ನೋಡು ನೋಡುತ್ತಿದ್ದಂತೆ ಆ ಬರಹದ ಮೇಲೆ ಕೆಲವು ಚರ್ಚೆಗಳಾದವು.. ನನ್ನ ಇನ್ನೊಬ್ಬ ಹಿರಿಯ ಮಿತ್ರರಾದ Ganapathikl Ganapathi ಪುಸ್ತಕದಲ್ಲಿ ಐತಿಹಾಸಿಕ ಪ್ರಮಾದಗಳಿವೆ ಎಂದು ಬರೆದರು. ನನ್ನೊಳಗಿನ ಓದುಗ ಇನ್ನು ತಡಮಾಡದೇ ಪುಸ್ತಕವನ್ನು ಓದು ಎಂದು ಬಡಿದೆಬ್ಬಿಸಿದ.

ಗೆಳೆಯ ಅರುಣ್ ಪ್ರಸಾದ್ ತಮ್ಮ ಮೊದಲ ಕಾದಂಬರಿ ' ಬೆಸ್ತರರಾಣಿ ಚಂಪಕ' ವನ್ನು ಓದಲೆಂದು ಬಹು ದಿನಗಳ ಹಿಂದೆಯೇ ಕೊಟ್ಟಿದ್ದರು. ಕಾರ್ಯ ಬಾಹುಳ್ಯದಿಂದ ಓದಲು ಆಗಿಯೇ ಇರಲಿಲ್ಲ. ಕೆಲವು ದಿನಗಳಿಂದ ಅನಾರೋಗ್ಯದ ನಿಮಿತ್ತ ರೆಸ್ಟ ಮಾಡಲೇ ಬೇಕಾದ ಅನಿವಾರ್ಯತೆ. ಟೇಬಲ್ಲಿನ ಮೇಲೆ ಇದ್ದ ಈ ಪುಸ್ತಕವನ್ನು ಓದಿ ಮುಗಿಸಿದೆ...

ಓದಾದ ಬಳಿಕ ದುರಂತ ಅಂತ್ಯಕ್ಕೊಳಗಾದ ಕಥಾ ನಾಯಕಿ ಚಂಪಕಳ ಅಸಹಾಯಕ ಚಿತ್ರ ಮನಸ್ಸಿನಲ್ಲಿ ಉಳಿಯಿತು.. ಸುಂದರವಾಗಿ ರಂಗೋಲಿ ಬರೆಯುವ ಅವಳ ಕಲೆ ಕೆಳದಿ ಅರಸನ ಮನವನ್ನು ಸೆಳೆದು ಆಕೆಯನ್ನು ಓಲಿಸಿಕೊಂಡು ರಾಣಿಯನ್ನಾಗಿಸಿ ಕೊಳ್ಳುತ್ತಾನೆ.. ಆದರೆ ಆಗಿನ ಕಾಲಕ್ಕೆ ಸಮಾಜದ ಕೆಳವರ್ಗಕ್ಕೆ ಸೇರಿದ ಚಂಪಕಳು ಸಮಾಜದ ಅವಕೃಪೆಗೆ, ಅವಮಾನಗಳಿಗೆ ತತ್ತರಿಸಿ ತನ್ನದಲ್ಲದ ತಪ್ಪಿಗೆ ಪರಿತಪಿಸಿ ವಿಷಪ್ರಾಶನ ಮಾಡಿ ಸಾಯುತ್ತಾಳೆ. 

ಅವಳ ಬಗ್ಗೆ ಪೂರ್ವಾಗ್ರಹ ಪೀಡಿತ ಸಮಾಜ ಆಕೆಗೆ ವೇಶ್ಯೆಯ ಪಟ್ಟ ಕಟ್ಟಿರುತ್ತದೆ.. ಆ ಚಾಳಿಯು ಪ್ರಸ್ತುತದಲ್ಲೂ ಮುಂದುವರೆದು ಚಂಪಕಳ ನೆನಪಿನಲ್ಲಿ ಅರಸು ಕಟ್ಟಿಸಿದ ಚಂಪಕಸರಸ್ಸಿನ ಬಗ್ಗೆ ಬರೆದ ಪತ್ರಿಕೆಯಲ್ಲಿ ಚಂಪಕಳನ್ನು ಮತ್ತದೇ ವೇಶ್ಯೆ ಎಂದು ಕರೆದ ಕಾರಣದ ಪ್ರತಿಭಟನೆಯ ಪ್ರತಿರೂಪವೇ ಈ ಪುಸ್ತಕ ಎಂದು ಹೇಳಬಹುದು.. ಆ ನಿಟ್ಟಿನಲ್ಲಿ ಗೆಳೆಯ ಅರುಣ್ ಪ್ರಸಾದರ ಅಂತರಂಗದ ಕಾಳಜಿಯನ್ನ, ಅಸಮಾನತೆಯ ಮನಸ್ಥಿತಿಯ ವಿರೋಧಿ ಗುಣವನ್ನ ನಾನು ಮೆಚ್ಚಿದ್ದೇನೆ.. ಮಹಿಳೆಯ ಕುರಿತಾದ ಸಮಾಜದ ಈ ವಿಕೃತ ಮನಸ್ಥಿತಿಯನ್ನು ಕೇವಲ ಮಾತಿನ ಉತ್ತರ, ಸಮಜಾಯಿಷಿಗೆ ಮಿತಗೊಳಿಸದೇ ಸಾರ್ವಕಾಲಿಕ ದಾಖಲೆಯಾಗಿ ಪುಸ್ತಕ ರೂಪದಲ್ಲಿ ತಂದ ಅರುಣ್ ಪ್ರಸಾದ ಒಳಗಿರುವ ಈ ಕೆಚ್ಚು ಖುಷಿ ಕೊಟ್ಟಿತು..

ಈ ಐತಿಹಾಸಿಕ ಕಾದಂಬರಿ ರಚನೆಯ ಹಿಂದೆ ಅವರ ಶ್ರದ್ಧೆ ಎದ್ದು ಕಾಣುತ್ತದೆ.. ವಿಷಯ ಸಂಗ್ರಹಣೆ, ಐತಿಹಾಸಿಕ ಸಂಗತಿಗಳ ಕಲೆ ಹಾಕುವಿಕೆ.. ಘಟನಾವಳಿಗಳ ಜೋಡಣೆ.. ಆಗಿನ ಕಾಲದ ಜನರ ಮನಸ್ಥಿತಿ, ಸಮಾಜದ ನಡವಳಿಕೆಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಬರೆದಿದ್ದಾರೆ.. ಶೋಷಿತ ಮಹಿಳೆಯೊಬ್ಬಳಿಗೆ ಗೌರವ ದೊರಕಿಸಿಕೊಡಬೇಕು ಎನ್ನುವ ಅವರ ಹಂಬಲ ಕೇವಲ ಉದ್ವೇಗ ಮತ್ತು ಸಿಟ್ಟಿನ ತಳಹದಿಯ ಮೇಲೆ ರೂಪುಗೊಳ್ಳಲಿಲ್ಲ ಎನ್ನುವುದೂ ಗಮನಾರ್ಹ.

ಈಗ ಇತಿಹಾಸಜ್ಞರು ಆ ಕಾಲದ ಕೆಳದಿ ಅರಸ ವೆಂಕಟಪ್ಪ ನಾಯಕನ ಕಾಲದಲ್ಲಿ ಇಂತಹದ್ದೊಂದು ಪ್ರಕರಣ ನಡೆದ ದಾಖಲೆಗಳಿಲ್ಲ ಎಂದು ಹೇಳುತ್ತಿದ್ದಾರೆ.. ಆ ಸಂಗತಿಯನ್ನು ಬದಿಗಿರಿಸಿಯೂ ಪುಸ್ತಕವು ಆ ಕಾಲದ ಚಿತ್ರಣಗಳನ್ನು, ಸಾಮಾಜಿಕ ಸ್ಥಿತಿಗತಿಗಳನ್ನು ಎತ್ತಿ ತೋರಿಸಿದೆ.. ಅಂತೆಯೇ ಬರವಣಿಗೆಯಲ್ಲಿ ಕೊಂಚ ಆತುರವೂ ಇದ್ದಂತೆ ಕಂಡಿತು.. 

ಸಾಮಾಜಿಕ ಜಾಲತಾಣಗಳಲ್ಲಿ ಅರುಣ್ ಪ್ರಸಾದ್ ಸದಾ ಸಕ್ರಿಯರು.. ಸಮಾಜದ ಅಸಮಾನತೆ, ಪೂರ್ವಾಗ್ರಹ ಚಿಂತನೆಗಳು ಆಡಳಿತದ ಓರೆಕೋರೆಗಳನ್ನು ಬಹಳ ಸಮರ್ಥವಾಗಿ ತಮ್ಮ ಬರವಣಿಗೆಯಲ್ಲಿ ತಿಳಿಸುವ, ತಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಚಿತ್ರಣವನ್ನೂ ಚಂದದಿಂದ ಮಾಡಿಕೊಡುವ ಅರುಣ್ ಪ್ರಸಾದ್ ಈ ವಿಷಯದಲ್ಲಿ ಕ್ರಿಯಾಶೀಲರಾದಷ್ಟೂ ಸಮಾಜಕ್ಕೆ, ಸಾಹಿತ್ಯ ಕ್ಷೇತ್ರಕ್ಕೆ ಒಳ್ಳೆಯದು..

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...