#ಶುಂಠಿ_ಬಗ್ಗೆ_ಪಿ_ಹೆಚ್_ಡಿ_ಮಾಡುತ್ತಿರುವವರು_ಬಂದಿದ್ದರು. #ನಮ್ಮ_ಆನಂದಪುರಂ_ಶುಂಠಿ_ಟ್ರೇಡಿಂಗ್_ಹಬ್ #ಈ_ಉತ್ಸಾಹಿ_ಸಂಶೋದಕರನ್ನು_ಕಳಿಸಿದ್ದು_ಪ್ರಜಾವಾಣಿ_ಬ್ಯೂರೋ_ಚೀಪ್_ಆಗಿದ್ದ_ಪ್ರಕಾಶ್_ಕುಗ್ವೆ #ಸುಮಾರು_ಒಂದೂವರೆ_ಗಂಟೆ_ವಿಡಿಯೋ_ಸಂದರ್ಶನ_ಅವರ_ಸಂಶೋದನೆಗೆಷ್ಟು_ಎಟುಗುತ್ತದೋ? #ನಮ್ಮ_ಊರ_ಜಾತ್ರೆಯಲ್ಲಿ_ಒಟ್ಟಾಗಿ_ಕುಳಿತು_ಅನ್ನಸಂತರ್ಪಣೆ_ಪ್ರಸಾದ_ಸ್ವೀಕರಿಸಿದೆವು #ಅವರ_ಸಂಶೋಧನಾ_ವರದಿ_2025ರಲ್ಲಿ_ಬರಲಿದೆ #ಅವರ_ಶ್ರಮಕ್ಕೆ_ತಕ್ಕ_ಯಶಸ್ಸು_ಸಿಗಲಿ_ಎಂದು_ಹಾರೈಸಿ_ಬಿಳ್ಕೊಟ್ಟೆ. ಮೊನ್ನೆ ಮಂಗಳವಾರ 13 - ಪೆಬ್ರವರಿ -2024 ಸೋಮವಾರ ನಮ್ಮ ವರಸಿದ್ದಿ ವಿನಾಯಕ ದೇವರ ರಥೋತ್ಸವ ಮುಗಿಸಿ ಅವರಣದ ಮೂಲ ದೇವರುಗಳಾದ ಕೆಂಡದ ಮಾಸ್ತಿಯಮ್ಮ ದೇವರಿಗೆ ಜಾತ್ರಾ ಸಮಿತಿ ಮತ್ತು ಗ್ರಾಮಸ್ಥರ ಪರವಾಗಿ ಪೂಜೆ ಸಲ್ಲಿಸಿ, ರಥೋತ್ಸವದ ದಿನದ ಅನ್ನ ಸಂತರ್ಪಣೆಗೆ ಹೋಳಿಗೆ ತುಪ್ಪದ ಊಟ ನಮ್ಮ ಕುಟುಂಬದಿಂದ ನೀಡುವ ಪದ್ದತಿ ಆದ್ದರಿಂದ ಅಡುಗೆ ಮನೆಯಲ್ಲಿ ಅರ್ಚಕರಿಂದ ಅನ್ನಪೂರ್ಣೇಶ್ವರಿ ಪೂಜೆ ಮುಗಿಸಿ, ಅನ್ನ ಸಂತರ್ಪಣೆ ಪ್ರಾರಂಬಿಸಿದೆವು. ಪ್ರತಿ ವರ್ಷದಂತೆ ಈ ಸಂದರ್ಭದಲ್ಲಿ ಸಾಗರದ ಸಿದ್ಧ ಸಮಾದಿ ಸಂಸ್ಥೆ ಗುರುಗಳಾದ ಶೀ ಗಣೇಶ್ ಗುರೂಜಿ ಭಜನೆ ಪ್ರಾರಂಬಿಸಿದಾಗ ಒಂದು ಕಾಲದ ಪ್ರಜಾವಾಣಿ ಬ್ಯೂರೋ ಚೀಪ್ ಆಗಿದ್ದ ಯುವ ಪತ್ರಕರ್ತ ಪ್ರಕಾಶ್ ಕುಗ್ವೆ ಪೋನ್ ಬಂದಿತು. ಅತಿ ಸಣ್ಣ ವಯಸ್ಸಲ್ಲ...