Skip to main content

Posts

Showing posts from November, 2022

Blog number 1096. ಖ್ಯಾತ ಪತ್ರಕರ್ತ ಸಾಹಿತಿ ಅರುಣ್ ಕುಮಾರ್ ಹಬ್ಬು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಷೆ ಮಾಡಿದ್ದಾರೆ.

ಕಾರವಾರ ಮತ್ತು ಹುಬ್ಬಳ್ಳಿ ಕೇಂದ್ರಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಅರುಣ್ ಕುಮಾರ್ ಹಬ್ಬು ಈಗ ಹುಬ್ಬಳ್ಳಿಯ ವಿದ್ಯಾನಗರ ನಿವಾಸಿಗಳು.  ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಲ್ಲಿ ೨೩ ವರ್ಷಗಳ ಕಾಲ ಪತ್ರಕರ್ತರಾಗಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ನಂತರ ಉದಯವಾಣಿಯಲ್ಲಿ ಎಂಟು ವರ್ಷ ಹುಬ್ಬಳ್ಳಿ ಕಚೇರಿಯ ಮುಖ್ಮಸ್ಥರಾಗಿದ್ದರು  ಮುಂದೆ ಹತ್ತು ವರ್ಷಗಳ ಕಾಲ ಯುಎನ್ ಐ ಸುದ್ದಿ ಸಂಸ್ಥೆಯ ವರದಿಗಾರ, ಹದಿನೈದು ವರ್ಷ ಪತ್ರಿಕೋದ್ಯಮ ವಿಷಯದ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.     ಇವರ ಇಡೀ ಕುಟುಂಬ ಸಾಹಿತ್ಯ ಕ್ಷೇತ್ರದಲ್ಲಿರುವುದು ಅಪರೂಪ ಇವರು ಆರು ಸಹೋದರರೂ ಮತ್ತು ಇವರ ತಂದೆ ಸೇರಿ ಎಲ್ಲರೂ ಕನ್ನಡ ಸಾಹಿತ್ಯದಲ್ಲಿ ಅನೇಕ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ.   ಬಹುಶಃ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರ ಕುಟು೦ಬದ ಈ ದಾಖಲೆ ಮೊದಲನೆಯದ್ದು ಈ ಬಗ್ಗೆ ಅನೇಕರು ತಿಳಿಸಿದ್ದು ನಮ್ಮ ದೇಶದ ಯಾವುದೇ ಬಾಷೆಯಲ್ಲಿ ಒಂದೇ ಕುಟುಂಬದಲ್ಲಿನ ಏಳು ಜನರು ಇಷ್ಟೆಲ್ಲ ಕೃತಿಗಳನ್ನು ಬರೆದು ಪ್ರಕಟಿಸಿದ ದಾಖಲೆ ಇಲ್ಲ ಇದು ಗಿನ್ನೆಸ್ ದಾಖಲೆಗೆ ಸೇರುವಂತಹದ್ದು ಅನ್ನುತ್ತಾರೆ.   ಅರುಣ್ ಕುಮಾರ್ ಹಬ್ಬು ಸ್ವತಃ  ಬರೆದು ಪ್ರಕಟಿಸಿದ ಕೃತಿಗಳು  1. #ಪತ್ರಿಕೋಧ್ಯಮದ_ತ್ರಿವಿಕ್ರಮ (ಡಿವಿಜಿ ಕುರಿತು). 2.#ನೀವು_ಉತ್ತಮ_ಸಂದಶ೯ಕಲಾಗುವಿರಾ (ಸಾಹಿತ್ಯ ಪ್ರಕಾಶನ) 3.#ವೈವಿಧ್ಯ_ಕಲಾ_ನಿದಿ_ಗೋಪಾಲಕೃಷ್ಣನಾಯಕ (ಜೀವನ ಚರಿತ್ರೆ )

Blog number 1097. ಆನಂದಪುರಂ ಇತಿಹಾಸ ಸಂಖ್ಯೆ 87. ಬಂಗಿ ನೈವೆದ್ಯದ ಬಂಗಿ ಬೂತಪ್ಪ ದೇವಸ್ಥಾನ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಸಮೀಪವಿದೆ, ಇಲ್ಲೇ ಕಲ್ಯಾಣಿ ಬಸವನ ಹೊಂಡ ಕೂಡಾ ಇದೆ.ಶಿವನಿಗೂ ಗಾಂಜಾಕ್ಕೂ ಇರುವ ಪೌರಾಣಿಕ ಹಿನ್ನೆಲೆ, ನಾಥ ಸಂಪ್ರದಾಯಿಗಳ ಅಗ್ಗಿಷ್ಟಿಕೆ ಸ್ಥಳ ಇದಾಗಿತ್ತಾ?

ಆನಂದಪುರಂ_ಇತಿಹಾಸ_ಸಂಖ್ಯೆ_87. #ಆನಂದಪುರಂನಿಂದ_ಹೊಸನಗರ_ಮಾರ್ಗದಲ್ಲಿರುವ_ವಿಶೇಷ_ದೇವಸ್ಥಾನ #ನೂತನ_ಕೃಷಿ_ವಿಶ್ವವಿದ್ಯಾಲಯ_ಇಲ್ಲಿಂದಲೇ_ಪ್ರಾರಂಭವಾಗುತ್ತದೆ #ಬಂಗಿ_ಬೂತಪ್ಪ_ದೇವಸ್ಥಾನ #ಬಂಗಿ_ಸಿಗರೇಟು_ಬೀಡಿಯೇ_ನೈವೇದ್ಯ. #ಪಕ್ಕದಲ್ಲಿರುವ_ಕಲ್ಯಾಣಿ_ಶಿಥಿಲಾವಸ್ಥೆಯಲ್ಲಿದೆ #ಸ್ಥಳಿಯರು_ಬಸವನಹೊಂಡ_ಎನ್ನುತ್ತಾರೆ. #ನಾಥ_ಸಂಪ್ರದಾಯದ_ಮಹಂತರ_ಸದಾ_ಉರಿಯುತ್ತಿದ್ದ_ಜೂಲ_ಇಲ್ಲಿತ್ತು. #ಹೊಸನಗರಕ್ಕೆ_ಹಿಂದಿನ_ಹೆಸರು_ಕಲ್ಲೂರಶೆಟ್ಟಿಕೊಪ್ಪ      18ನೆ ಶತಮಾನದವರೆಗೆ ಈ ರಸ್ತೆಗೆ ಆನಂದಪುರಂ ಕಲ್ಲೂರ ಶೆಟ್ಟಿ ಕೊಪ್ಪ ರಸ್ತೆ ಎಂಬ ಹೆಸರಿತ್ತು ಕಾರಣ ಹೊಸನಗರದ ಮೂಲ ಹೆಸರು ಕಲ್ಲೂರ ಶೆಟ್ಟಿ ಕೊಪ್ಪ ಅಂತ ಇತ್ತು ನಂತರ ಹೊಸನಗರ ಎಂದು ನಾಮಕರಣವಾಗಿರಬೇಕು, ಇದು ಕೆಳದಿ ಅರಸರ ಕಾಲದಲ್ಲಿ ಆನಂದಪುರಂ ಕೋಟೆಯಿಂದ ಅವರ ರಾಜದಾನಿ ಬಿದನೂರಿಗೆ ಹೋಗುವ ರಾಜ ಮಾರ್ಗವೂ ಆಗಿತ್ತು.   ಆನಂದಪುರಂ ನಿಂದ ಈಗಿನ ಹೊಸನಗರ ರಸ್ತೆಯಲ್ಲಿ ಈಗ ನೂತನವಾಗಿ ನಿರ್ಮಿಸಿರುವ ಕೃಷಿ ವಿಶ್ವವಿದ್ಯಾಲಯದ ಪ್ರಾರಂಭದಲ್ಲೇ ರಸ್ತೆಯ ಎಡಬದಿಗೆ ದೊಡ್ಡ ಆಲದ ಮರ ಇತ್ತು ಅದರ ಕೆಳಗೆ ಸಣ್ಣದಾದ 3X3 ಅಡಿಯ ಕಲ್ಲಿನ ಚಪ್ಪಡಿಯ ಗುಡಿ ಇತ್ತು ಇಲ್ಲಿ ಅಸ೦ಖ್ಯ ವಿವಿದ ಗಾತ್ರದ ತ್ರಿಶೂಲಗಳು ಇತ್ತು.    ಸದಾ ಅಲ್ಲಿ ಬಂಗಿಯ ದೂಮದ ಘಮ ಇರುತ್ತಿತ್ತು, ನಂತರ ಅದು ಸಿಗರೇಟು ಹಚ್ಚಿ ಸಮರ್ಪಿಸುವಲ್ಲಿಗೆ ಬದಲಾಗಿದೆ.    ಈ ಮಾರ್ಗದಲ್ಲಿ  ಪ್ರಯಾಣಿಸುತ್ತಿದ್ದ ಆ ಕಾ

Blog number 1095. ಮಲೆನಾಡ ಶಿವಮೊಗ್ಗ ಜಿಲ್ಲೆಗೆ ರಬ್ಬರ್ ಬೆಳೆ ಪರಿಚಯಿಸಿ ಕೇಂದ್ರದ ರಬ್ಬರ್ ಬೋರ್ಡ್ನಿಂದ ಅಧಿಕೃತ ಅನುಮೋದನೆ ಕೊಡಿಸಿದ ಪಾದರ್ ಜೋಸೆಪ್ ಆನಂದಪುರಂನ ಮುಂಬಾಳಿನ ಗೋಕುಲ್ ಪಾರಂ ಸ್ಥಾಪಿಸಿದವರು ಈಗ ಅಪಾಯದಲ್ಲಿರುವ ರಬ್ಬರ್ ಕೃಷಿಗೆ ಕಾರಣಗಳು.

ಶಿವಮೊಗ್ಗಾ ಜಿಲ್ಲಾ ಮಲೆನಾಡ ರಬ್ಬರ್ ಬೆಳೆಗಾರರೇ ಎಚ್ಚರ! ಹೆಚ್ಚು ರಬ್ಬರ್ ಬರಲು ಎಥಿನೋ ಎಂಬ ಮಾರಕ ರಾಸಾಯನಿಕ ರಬ್ಬರ್ ಪಸಲು ಗುತ್ತಿಗೆದಾರರು ಬಳಸುತ್ತಿದ್ದಾರೆ ಇದರಿಂದ 40 ವರ್ಷ ಪಸಲು ಬರುವ ಮರ 4 ವಷ೯ದಲ್ಲಿ ನಿನಾ೯ಮವಾಗಲಿದೆ. ಶಿವಮೊಗ್ಗ ಜಿಲ್ಲಾ ರಬ್ಬರ್ ಬೆಳೆಗಾರರ ಗಮನಕ್ಕಾಗಿ       ಕೇಂದ್ರ ಸಕಾ೯ರದ ರಬ್ಬರ್ ಬೋಡ್೯ ಮಲೆನಾಡು ಪ್ರದೇಶದಲ್ಲಿ ರಬ್ಬರ್ ಇಳುವರಿ ಹೆಚ್ಚು ಬರುತ್ತದೆ ಎಂದು ಸಾಗರ ತಾಲ್ಲುಕಿನ  ಆನಂದಪುರ೦,ಇಡುವಳ್ಳಿ ಮತ್ತು ನಾಗವಳ್ಳಿಯಲ್ಲಿ ಮುಂಬಾಳಿನ ಗೋಕುಲ್ ಪಾರಂ ಪಾದರ್ ಜೋಸ್   ರಬ್ಬರ್ ಬೋಡ್೯ ಜೊತೆ ಬೆಳೆಸಿದ ಪ್ರಾತ್ಯಕ್ಷಿಕಾ ರಬ್ಬರ್ ತೋಟದ ಸಂಶೋದನೆಯಿಂದ ಪುರಸ್ಕರಿಸಿ ಈ ಪ್ರದೇಶದಲ್ಲಿ ರೈತರು ರಬ್ಬರ್ ಬೆಳೆಸಲು ಪ್ರೋತ್ಸಾಹಿಸಿ, ರಬ್ಬರ್ ಬೋಡ್೯ನ ಪ್ರಾದೇಶಿಕ ಕಛೇರಿ ಸಾಗರದಲ್ಲಿ ಪ್ರಾರ೦ಬಿಸಿತ್ತು.      ರೈತರಿಗೆ ಬೇಕಾದ ಮಾಹಿತಿ,ಸಹಾಯಧನಗಳನ್ನ ಕೊಡಿಸಲು ಸಹಾಯ ಪ್ರಾರ೦ಬಿಸಿದ್ದರಿಂದ ಮತ್ತು ಈ ಬೆಳೆಗೆ ನೀರಾವರಿ ಅವಶ್ಯವಿಲ್ಲ ಮಳೆ ನೀರಿನ ಆಶ್ರಯದಲ್ಲಿ ರಬ್ಬರ್ ಬೆಳೆ ಬರುವುದರಿಂದ ಮತ್ತು ರಬ್ಬರ್ ದಾರಣೆ ಹೆಚ್ಚು ಆ ಸಂದಭ೯ದಲ್ಲಿ ಇದ್ದಿದ್ದರಿಂದ ಮಲೆನಾಡಿನ ರೈತರು ಹೆಚ್ಚು ಹೆಚ್ಚು ತಮ್ಮ ಖುಷ್ಕಿ ಜಮೀನಿನಲ್ಲಿ  ರಬ್ಬರ್ ಬೆಳೆಸಿದ್ದಾರೆ.     ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಟನ್ ರಬ್ಬರ್ ಗೆ ಬೇಡಿಕೆ ಇದೆ ಆದರೆ 7 ಲಕ್ಷ ಟನ್ ಮಾತ್ರ ರೈತರು ಬೆಳೆಯುತ್ತಾರೆ೦ಬ ಮಾಹಿತಿ ಇದ್ದರೂ ಕಳೆದ

Blog number 1094. ನನ್ನ ಪೆವರಿಟ್ ನನ್ನಮ್ಮನ ರೆಸಿಪಿಯ ನೀರು ಕಡಬು, ಈಗ ಈ ನೀರು ಕಡಬು ಪಶ್ಚಿಮ ಘಟ್ಟದಲ್ಲಿ ಮರೆತೇ ಹೋಗಿದೆ

ಮರೆತೇ ಹೋಗಿದ್ದ ನಮ್ಮ ಅಮ್ಮ ಮಾಡುತ್ತಿದ್ದ ನೀರುಕಡುಬು ಇವತ್ತಿನ ಉಪಹಾರ.  1965 ರಿಂದ 1974ರ ತನಕ ಈ ನೀರುಕಡಬು ವಾರಕ್ಕೆ ಒಮ್ಮೆಯಾದರೂ ನಮ್ಮ ಅಮ್ಮ ತಯಾರಿಸುತ್ತಿದ್ದಳು, 1975 ರಲ್ಲಿ ಅಮ್ಮನ ಅಕಾಲಿಕ ನಿಗ೯ಮನ ಮನೇಲಿ ಅಡುಗೆ ಇತ್ಯಾದಿ ಗೃಹ ಕೃತ್ಯ ನಮ್ಮದಾಯಿತು ಆದರೆ ಅಮ್ಮನ ಅನೇಕ ರುಚಿಕಟ್ಟಾದ ಅಡುಗೆ ರೆಸಿಪಿ ಮರೆತೇ ಹೋಯಿತು.   ಅಕ್ಕಿ ಬೀಸು ಕಲ್ಲಿನಲ್ಲಿ ಬೀಸಿ ರವೆ ಮಾಡಿ ಅದನ್ನ ಬಿಸಿ ನೀರಿನಲ್ಲಿ ರುಚಿಗೆ ಉಪ್ಪು ಸೇರಿಸಿ ಆದ೯ ಬೇಯಿಸಿ ವಡೆ ಆಕಾರ ಮಾಡಿ ಕುದಿಯುವ ನೀರಿನಲ್ಲಿ ಬೇಯಿಸಬೇಕು ತುಂಬಾ ಸರಳ ಆದರೆ ಹದ ತಪ್ಪಿದರೆ ನೀರು ಕಡಬು ಗಂಜಿ ಆಗಿ ಕರಗಿ ಆಡುಗೆ ಹದ ತಪ್ಪಿ ಹಾಳಾಗುತ್ತದೆ.   ಅನೇಕರಲ್ಲಿ ನೀರು ಕಡಬು ಮಾಡೋದು ಹೇಗೆ? ಅಂತ ಕೇಳುತ್ತಿದ್ದೆ ಆದರೆ ಅವರಿಗೆ ಮಲೆನಾಡಿನ ಉ೦ಡೆ ಕಡಬು ಗೊತ್ತಿತ್ತೇ ವಿನಃ ನನಗೆ ಮಾತ್ರ ಗೊತ್ತಿದ್ದ ನೀರು ಕಡುಬು ಅವರಿಗೆ ಗೊತ್ತಾಗುತ್ತಿರಲಿಲ್ಲ.    ನೀರು ಕಡಬು ಮಲೆನಾಡಿನ ತಿಂಡಿ ಆದರೂ ಜನಮಾನಸದಲ್ಲಿ ಮರೆತೇ ಹೋಗಿತ್ತು, ಮಲೆನಾಡಿನ ವೈವಿಧ್ಯಮಯ ಭತ್ತದ ಅಕ್ಕಿಯಲ್ಲಿ ಒಂದೊಂದು ಸಾರಿ ಒಂದೊಂದು ಗಮ ರುಚಿ, ಗಟ್ಟಿ ಕಾಯಿ ಚಟ್ನಿ ಜೊತೆಗೆ ಬಾಳೆ ಎಲೆಯಲ್ಲಿ ನೀರುಕಡುಬು ಸೇವನೆ ಒಮ್ಮೆ ಸವಿದರೆ ನೀವು ಬಿಡುವುದಿಲ್ಲ.   ದೂರದ ಭಟ್ಕಳದ ನವಾಯಿತರ ಹೆಣ್ಣುಮಗಳು ಮಲೆನಾಡಿನ ನೀರುಕಡುಬಿನ ರೀತಿಯ ಕಡಬು ತಯಾರಿಸುವ ಮಾದರಿ ಸೋಷಿಯಲ್ ಮೀಡಿಯಾದಲ್ಲಿ ನೋಡಿ ಮತ್ತು ನನ್ನ ಅಮ್ಮ ತಯಾರಿಸುವ ವಿದಾನ ಮತ್ತು

Blog number 1093. ಆನಂದಪುರಂ ಇತಿಹಾಸ ಸಂಖ್ಯೆ - 86.ಆನಂದಪುರಂನ ಸಮೀಪದ ಬ್ಯಾಡರ ಕೊಪ್ಪದ 1960 ರ ವಿಚಿತ್ರ ಘಟನೆಗೆ ಕಾರಣವಾಗಿದ್ದ ದತ್ತೂರದ ಬೀಜ,1583 ರಲ್ಲಿ ಗೋವಾ ಸಂದರ್ಶಿಸಿದ್ದ ವಿದೇಶಿ ಪ್ರವಾಸಿ ಡೈರಿಯಲ್ಲಿ, ಶಿಶುನಾಳ ಷರೀಪರ ಚರಿತ್ರೆಯಲ್ಲಿ೦ದ ಇತ್ತೀಚಿನ ಸಾಗರ ತಾಲ್ಲುಕಿನ ಪತ್ರಕರ್ತ ತಲವಾಟ ರಾಘವೇಂದ್ರ ಶರ್ಮಾರವರೆಗೆ.

  1960ರ ಆನಂದಪುರO ಸಮೀಪದ ಬ್ಯಾಡರ ಕೊಪ್ಪದ ಘಟನೆಗೆ 58 ವಷ೯ದ ನಂತರ ಉತ್ತರ ಸಿಕ್ಕಿತು  ಉಮ್ಮತ್ತದ ಬೀಜ ಪುಡಿ ಮಾಡಿ ಬಂಗಿ ಸೋಪ್ಪಿನಲ್ಲಿ ಮಿಶ್ರ ಮಾಡಿ ಬೆಲ್ಲ ಸೇರಿಸಿ ಪಾನಕ ಮಾಡಿ ಕುಡಿದ ಬುಟ್ಟಿ ಮಾಡುವ ಇಡೀ ಕೇರಿಯ ಜನ ವಿಚಿತ್ರ ವತ೯ನೆ ಮಾಡಲು ಪ್ರಾರಂಬಿಸಿದ್ದರಂತೆ 1960ರಲ್ಲಿ ಆನoದಪುರಂ ಸಮೀಪದ ಬ್ಯಾಡರ ಕೊಪ್ಪದಲ್ಲಿ, ಅವರನ್ನೆಲ್ಲ ಎತ್ತಿನಗಾಡಿಯಲ್ಲಿ ಆನOದಪುರಂನ ಆಸ್ಪತ್ರೆಗೆ ಕರೆ ತಂದಿದ್ದರಂತೆ ಎಲ್ಲರೂ ಸ್ತ್ರಿ ಪುರುಷರು ಮೈಮೇಲೆ ಬಟ್ಟೆ ಇಟ್ಟು ಕೊಳ್ಳುತ್ತಿರಲಿಲ್ಲ೦ತೆ, ಹುಚ್ಚು ಹಿಡಿದವರಂತೆ ಅವರೆಲ್ಲರ ವತ೯ನೆ.       ಆಗ ಊರಿನ ಹಿರಿಯರಾದ ಶ್ರೀ ವೆಂಕಟಾಚಲಯ್ಯOಗಾರ್ (ಮಂತ್ರಿಗಳಾಗಿದ್ದ ಬದರಿನಾರಾಯಣರ ಸಹೋದರರು) ಈ ಬಗ್ಗೆ ಮುಂದೆ ನಿಂತು ಚಿಕಿತ್ಸೆ ನೀಡಿಸಿ, ಇದಕ್ಕೆ ಕಾರಣನಾದನನ್ನ ಶಿಕ್ಷಿಸಿದರಂತೆ, ಬುಟ್ಟಿ ಮಾಡುವವರ ನೆಂಟನೋವ೯ ಯಾವುದೊ ಬಿನ್ನಾಭಿಪ್ರಾಯದಿಂದ ಇಡೀ ಕೇರಿಯವರ ಬಟ್ಟೆ ಬಿಚ್ಚಿಸುತ್ತೇನೆ ಅಂತ ಶಪತ ಮಾಡಿದ್ದನಂತೆ.   ಪತ್ರಕತ೯ ತಲವಾಟದ ರಾಘವೇ೦ದ್ರ ಶಮಾ೯ರ ಅನುಭವ ನೋಡಿದರೆ ಅವರೆಲ್ಲರಿಗೆ ಮೈ ತುಂಬ ಕಂಬಳಿ ಹುಳ ಹತ್ತಿದ ಅನುಭವ ಆಗಿಯೇ ಬಟ್ಟೆ ಕಿತ್ತಿ ಎಸೆಯುತ್ತಿದ್ದರಿರಬೇಕು.  ಈ ವಿಚಾರ ಸುಮಾರು 40 ವಷ೯ ಚಾಲ್ತಿಯಲ್ಲಿತ್ತು, ಮೊಬೈಲ್ ಬಂದ ಮೇಲೆ ಮರೆತೆ ಹೋಗಿತ್ತು ಶಮಾ೯ರ FB ಲೇಖನದಿಂದ ಇದೆಲ್ಲ ನೆನಪಾಯಿತು.     ಇದರ ಬೀಜದ ಎಣ್ಣಿ ತಲೆಗೆ ಹಾಕಿದರೆ ಹುಚ್ಚು ಹಿಡಿಯುತ್ತೆ ಅಂತೆ.

Blog number 1092. ಗೋರಕ್ ಪುರದ ನಾಥಪಂತದ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಸೇರಿದ ಕುಂದಾಪುರ ತಾಲ್ಲೂಕಿನ ಕಮಲಶಿಲೆ ಸಮೀಪದ ಯಡಮೊಗೆಯ ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ ಹಲವರಿ ಮಠದ ಶ್ರೀ ಫೀರ್ ಯೋಗಿ ಜಗದೀಶ್ ನಾಥಜೀ ನನ್ನ ಸಂಸ್ಥೆಗೆ ಬೇಟಿ ನೀಡಿದಾಗ

  ಬಾರ ಪಂತ್ ಗೆ (ನಾಥ ಪoತದ) ಸೇರಿದ ಉಡುಪಿ ಜಿಲ್ಲೆಯ ಹಲವಾರಿ ಮಠದ ಶ್ರೀ ಜಗದೀಶ್ ಸ್ವಾಮಿಜಿ .   2017ರಲ್ಲಿ ನಾಸಿಕ್ ನಿ೦ದ ನಡೆದು ಬಂದ 630 ಸನ್ಯಾಸಿಗಳ ಬಾರ ಪಂತ್ ಯಾತ್ರೆ ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಕಮಲಶಿಲೆ ಹತ್ತಿರದ 5000ಕ್ಕೂ ಹೆಚ್ಚು ವಷ೯ದ ಇತಿಹಾಸ ಪ್ರಸಿದ್ದ ಹಲವಾರಿ ಮಠಕ್ಕೆ ಶ್ರೀ ಜಗದೀಶ್ ಸ್ವಾಮಿಜಿಯವರನ್ನ ಮಠದ ಅಧಿಪತಿ ಆಗಿ ನಿಯಮಿಸಿದ್ದಾರೆ.   ಈ ಮಠದಲ್ಲಿ 34 ವಷ೯ ದೀಘ೯ ಅವದಿಗೆ ಸ್ವಾಮಿಗಳಾಗಿದ್ದ ಶ್ರೀ ಸೋಮನಾಥ ಪೀರ್ ಸ್ವಾಮಿಜಿ ಬಾರ ಪಂತ್ ಬರುವ 2 ವಷ೯ ಮೊದಲೇ ಇಹಲೋಕ ತ್ಯಜಿಸಿದ್ದರು.   ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆದಿತ್ಯನಾಥರು ಗೋರಕ್ ಪುರದ ಸಂತರು ಇವರಿಗೆ ಮುಖ್ಯಸ್ಥರು.    ಹಿಂದಿನ ಸೋಮನಾಥ ಪೀರ್ ಸ್ವಾಮಿಗಳು ನನ್ನ ಗುರುಗಳು, ಇವತ್ತು ಅವರ ಕೃಪಕಟಾಕ್ಷ ನನ್ನ ಮೇಲಿದೆ ಅಂತಹ ಅನೇಕ ಆಗೋಚರ ಅನುಭವ ನನ್ನ ಮೇಲೆ ಆಗುತ್ತಿರುತ್ತದೆ.   ಜಗದೀಶ್ ಸ್ವಾಮಿಗಳು ಆದಿಚುಂಚನ ಗಿರಿ ಸ್ವಾಮಿಜಿಗಳ ಆಮಂತ್ರಣದ ಮೇರೆಗೆ ಆದಿಚುಂಚನಗಿರಿಯ ಕಾಲ ಬೈರವೇಶ್ವರ ಸನ್ನಿದಿಗೆ ಹೋಗುವ ಮಾಗ೯ದಲ್ಲಿ ನಮ್ಮ ನೂತನ ಲಾಡ್ಜ್ ಕಚೇರಿಗೆ ಆಗಮಿಸಿದ್ದರು.               ಸೋಮನಾಥ ಪೀರ್ ಸ್ವಾಮಿಗಳು ಇದ್ದಾಗ ಕುಂದಾಪುರದಿಂದ ಬರುವಾಗ  ಒಂದು ರಾತ್ರಿ ನಾನು ಹಲವಾರಿ ಮಠಕ್ಕೆ ಹೋದಾಗ ಇದೇ ಜಗದೀಶ್ ಸ್ವಾಮಿಜಿ (ಆಗ ಪೀಠಾದೀಶರಾಗಿರಲಿಲ್ಲ) ಅಲ್ಲಿಗೆ ಬಂದು ತಂಗಿದ್ದರು, ಅವರೇ ನಮಗೆ ಗೋದಿ ರೊಟ್ಟಿ ಆಲೂ ಪಲ್ಯ ಮ

Blog number 1091. ಶರಾವತಿ ನದಿ ಮುಳುಗಡೆ ಸಂತ್ರಸ್ಥರ ನಿಯೋಗ ಪ್ರದಾನಿ ಜವಾಹರಲಾಲ್ ನೆಹರೂರವರನ್ನು ಬೇಟಿ ಮಾಡಿತ್ತು, ಸಂತ್ರಸ್ಥರಿಗಾಗಿ ನಿರ್ಮಿಸಿದ ಸಾಗರದ ನಿವೇಶನಗಳು,ಭದ್ರಾವತಿ ತರಿಕೆರೆಯ ಕೃಷಿ ಭೂಮಿಗಳು ಯಾರದ್ದೋ ಪಾಲಾಗಿದೆ, ರಾತ್ರೋ ರಾತ್ರಿ ಸಂತ್ರಸ್ಥರನ್ನು ತಂದು ಅರಣ್ಯದಲ್ಲಿ ಒಗೆದು ಹೋದ ಸರ್ಕಾರ ಅವರಿಗೆ ಈವರೆಗೆ ಭೂಮಿ ಹಕ್ಕು ನೀಡಿಲ್ಲ

#ಶರಾವತಿ_ಮುಳುಗಡೆ_ಸಂತ್ರಸ್ಥರ_ಬವಣೆಗೆ_83_ವರ್ಷ. #ಅವೈಜ್ಞಾನಿಕ_ಪರಿಹಾರ_ಪುನರ್_ವಸತಿ_ಯೋಜನೆ #ಆರ್ಥಿಕ_ಸಾಮಾಜಿಕವಾಗಿ_ಮೂರು_ತಲೆಮಾರು_ಕಷ್ಟದಲ್ಲಿ_ಕಳೆದಿದೆ. #ಮುಳುಗಡೆ_ರೈತರ_ಕುಟುಂಬಕ್ಕೆ_ಒಂದು_ಉದ್ಯೋಗದ_ಭರವಸೆ_ಈಡೇರಲಿಲ್ಲ. #ಸಾಗರದ_ಸಂಜಯ್_ಪಾಲಿಟೆಕ್ನಿಕ್_ಪಕ್ಕದ_ಶರಾವತಿ_ಸಂತ್ರಸ್ಥರ_ನೂರಾರು_ನಿವೇಶನ_ಯಾರ_ಪಾಲಾಯಿತು?   1939 ರಲ್ಲಿ ಶರಾವತಿ ವಿದ್ಯುತ್ ಯೋಜನೆಗಾಗಿ ಸಾಗರ ತಾಲ್ಲೂಕಿನ ಕರೂರು - ಬಾರಂಗಿ ಹೋಬಳಿಯ ಮಡೆನೂರು ಹಿರೇಬಾಸ್ಕರ ಡ್ಯಾಂ ನಂತರ ಇಲ್ಲಿ೦ದ 20 ಕಿ ಮಿ ಜೋಗ್ ಸಮೀಪದ ಲಿಂಗನಮಕ್ಕಿಯಲ್ಲಿ 1964ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಡ್ಯಾಂನಿಂದ ಶರಾವತಿ ನದಿಯಲ್ಲಿ ಮುಳುಗಡೆ ಆದ ಜನವಸತಿ ಕೇಂದ್ರಗಳು ಮತ್ತು ಪಲವತ್ತಾದ ಜಮೀನು ಅಡಿಕೆ ತೋಟಗಳು ಅಪಾರ.    ಮೊದಲ ಮುಳುಗಡೆ ಮಡೆನೂರು ತನಕ ಹೊಸನಗರ ತಾಲ್ಲೂಕ್ ಭೂ ಪ್ರದೇಶವೂ ಸೇರಿ ಆದಾಗಲೇ ಅಲ್ಲಿನ ಸಂತ್ರಸ್ಥರ ಪುನರ್ ವಸತಿ ವ್ಯವಸ್ಥಿತವಾಗಿ ಆಗಿರಲೇ ಇಲ್ಲ ಆಗ ಬ್ರಿಟೀಶ್ ನಿಯಂತ್ರಣದ ಮೈಸೂರು ಆಡಳಿತವಾಗಿತ್ತು ಬ್ರಿಟೀಶರಿಗೆ ಭಾರತೀಯ ಸಂತ್ರಸ್ಥರ ಪುನರ್ವಸತಿಗೆ ಅಂತಹ ಕಾಳಜಿ ಇರಲಿಲ್ಲ ಎಂಬುದು ವಾಸ್ತವ ಸತ್ಯ.   ಆದರೆ 1964ರಲ್ಲಿ ಹಿರೇಬಾಸ್ಕರ ಡ್ಯಾಂ ನ್ನೆ ಮುಳುಗಿಸಿ ಮಡೆನೂರುನಿಂದ 20 ಕಿ.ಮಿ.ದೂರದ ಲಿಂಗನಮಕ್ಕಿ ಡ್ಯಾಂ ನಿಮಿ೯ಸಿದಾಗ ಎರಡನೆ ಸಾರಿ ಮುಳುಗಡೆ ಆದವರ ಸಂಖ್ಯೆ ಅಸಂಖ್ಯ ಹಾಗಂತ 1964 ರಲ್ಲಿ ಸ್ವಾತಂತ್ರ್ಯ ಭಾರತದ ಆಡಳಿತವಿತ್ತು 3ನೇ ಚು

Blog number 1090. ಉದಯೋನ್ಮುಖ ಚಲನ ಚಿತ್ರ ನಿಧೇ೯ಶಕ ಮತ್ತು ಕದಂಬ ಪಿಲಂ ಇನ್ಸ್ಟಿಟ್ಯೂಟ್ ಸ್ಥಾಪಕರಾದ ಟಿ.ಎನ್. ನಾಗೇಶ್ ನಿನ್ನೆ ನನ್ನ ಅತಿಥಿ. (26- ನವೆಂಬರ್ -2022)

#ಕನ್ನಡ_ಉದಯೋನ್ಮುಖ_ನಿಧೇ೯ಶಕ_ಟಿ_ಎನ್_ನಾಗೇಶ್_ನನ್ನ_ಅತಿಥಿ #ಇಪ್ಪತ್ತೆರೆಡು_ವಷ೯ದ_ಗೆಳೆತನ, #ಇವರ_ನಿಧೇ೯ಶನದಲ್ಲಿ_ಆರು_ಚಲನಚಿತ್ರ_ಬಂದಿದೆ #ಹದಿಮೂರು_ಮೆಗಾ_ಸಿರಿಯಲ್_ಮಾಡಿದ್ದಾರೆ #ಇಪ್ಪತ್ತು_ಚಲನ_ಚಿತ್ರಗಳಿಗೆ_ಅಸಿಸ್ಟೆಂಟ್_ಡೈರೆಕ್ಟರ್ #ಇವರದ್ದೇ_ಸ್ವಂತ_ಕದಂಬ_ಪಿಲಂ_ಇನ್ಸ್ಟಿಟ್ಯೂಟ್_ಕೂಡ_ಇದೆ      ಒಂದು ಕಾಲದಲ್ಲಿ ಬೆಂಗಳೂರಿನ ಹೈಲ್ಯಾಂಡ್ ಹೋಟೆಲ್ ಚಲನ ಚಿತ್ರ ಉಧ್ಯಮಿಗಳ ಕೇಂದ್ರವೇ ಆಗಿತ್ತು ಅಲ್ಲಿನ ಮ್ಯಾನೇಜರ್ ಚಂದ್ರು ಅವರು ಹೈಲ್ಯಾಂಡ್ಸ್ ಚಂದ್ರು ಅಂತಾನೆ ಪ್ರಸಿದ್ದಿ ಪಡೆದಿದ್ದರು ಅವರು ಶಿವಮೊಗ್ಗ ಜಿಲ್ಲೆಯ ಮೂಲದ ತೀರ್ಥಹಳ್ಳಿಯ ಕನ್ನಂಗಿಯವರು.    90 ರ ದಶಕದಲ್ಲಿ ಇವರೆಲ್ಲ ಬೆಂಗಳೂರಿನ ಬಂಗಾರಪ್ಪನವರ ಅಭಿಮಾನಿಗಳು, ಬಂಗಾರಪ್ಪನವರು ಕಾಂಗ್ರೇಸ್ ನಿಂದ ಸಿಡಿದು KCP ಎಂಬ ಬೇರೆ ಪಕ್ಷ ಕಟ್ಟಿದಾಗ ಚ೦ದ್ರು ಬೆಂಗಳೂರಿನ ಗಾಂಧಿ ನಗರ ವಿದಾನ ಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ದರು.    ಹೀಗೆ ಹೈಲ್ಯಾಂಡ್ ಚಂದ್ರುರವರ ಗೆಳೆಯರಾಗಿದ್ದ ಟಿ.ಎನ್. ನಾಗೇಶ್ 1997 ರಿಂದ ನನಗೂ ಗೆಳೆಯರಾಗಿದ್ದು.   ಟಿ.ಎನ್. ನಾಗೇಶ್ ತುಂಬಾ ತಾಳ್ಮೆ ಸ್ವಬಾವದವರು ಮತ್ತು ಮೆದು ಮಾತಿನವರು, ಕನ್ನಡ ಸಾಹಿತ್ಯ ಇತಿಹಾಸದ ಬಗ್ಗೆ ತುಂಬಾ ಓದಿದ್ದಾರೆ, ತಮ್ಮ ಕೆಲಸದಲ್ಲಿ ಹೆಚ್ಚು ಕಲಿಯಬೇಕೆಂಬ ತುಡಿತವೇ ಈಗ ಇವರು ಈ ಸ್ಥಾನಕ್ಕೆ ಏರಲು ಕಾರಣವಾಗಿದೆ.   ಸುಮಾರು 20 ಚಲನಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಹದಿಮೂರು ಮೆಗಾ

Blog number 1089. ನಾನೂ ನನ್ನ ಸಹೋದರ ಮತ್ತು ನಮ್ಮಿಬ್ಬರ ಜೀವನ - ವ್ಯವಹಾರ

#ನಾನು_ನನ್ನ_ಸಹೋದರ ಹೆಚ್ಚಿನ ಕುಟುಂಬದಲ್ಲಿ ಸಹೋದರರು ಮದುವೆ ಆಗುತ್ತಲೇ ಆಸ್ತಿ ಪಾಲು ಮಾಡಿಕೊಂಡು ಅಥವ ಪಿತ್ರಾಜಿ೯ತ ಆಸ್ತಿ ಮಾರಿಕೊಂಡು ಹಣ ಹಂಚಿಕೊಂಡು ಪ್ರತ್ಯೇಕರಾಗಿ ಬಿಡುತ್ತಾರೆ.  ಪರಸ್ಪರ ಹೊಡೆದಾಟ ದ್ವೇಷದಲ್ಲಿ ಒಂದೇ ತಾಯಿ ಮಕ್ಕಳಲ್ಲ ಎನ್ನುವಂತೆ ವತಿ೯ಸುತ್ತಾರೆ.  ನಾನು ಬಾಲ್ಯದಲ್ಲೇ ಒ0ದು ತೀಮಾ೯ನ ಮಾಡಿದ್ದೆ ನಾನು ನನ್ನ ಅಣ್ಣ ಜೀವನ ಪಯ೯೦ತ ಜೊತೆಯಲ್ಲಿರಬೇಕು ಅಂತ.  ನನ್ನೆಲ್ಲ ದಶಾವತಾರಗಳನ್ನ ಹತ್ತು ಹಲವು ವ್ಯವಹಾರಗಳನ್ನ ನನ್ನಣ್ಣ ಪ್ರಶ್ನಿಸದೇ ಸಹಕರಿಸಿದ್ದ, ನಮ್ಮ ತಂದೆ ದೇಹಾಂತ್ಯದ ನಂತರ ಬ್ಯಾಂಕಿನ ಸಾಲ ಸೋಲಗಳಿಗೂ ಕಣ್ಣು ಮುಚ್ಚಿ ಸಹಿ ಹಾಕಿದ್ದ, ನಂತರ ಉದ್ದಿಮೆಯಲ್ಲಿ ನಷ್ಟವಾಗಿ ಸಾಲ ತೀರಿಸಲಾಗದೇ ಆಸ್ತಿ ಹರಾಜಿಗೆ ಬಂದರೂ "ನಿನ್ನಿ೦ದ ನಾನು ಆಸ್ತಿ ಕಳೆದುಕೊಂಡೆ " ಅಂತ ಒಂದು ದಿನವೂ ಅನ್ನಲಿಲ್ಲ.  ದೇವರ ದಯೆಯಿಂದ ಎಲ್ಲಾ ಸಾಲಗಳನ್ನು ತೀರಿಸಿ ಆಸ್ತಿ ಉಳಿಸಿಕೊಂಡೆವು 2015 ರ ತನಕ ಒಂದೇ ಮನೆಯಲ್ಲಿ ವಾಸವಾಗಿದ್ದೆವು ನಂತರ ಒಂದೇ ತರದ ಎರೆಡು ಮನೆ ನಿಮಿ೯ಸಿ ಅಕ್ಕ ಪಕ್ಕದಲ್ಲಿ ಇದ್ದೇವೆ.  ನಮ್ಮೆಲ್ಲ ವ್ಯವಹಾರ ಈಗಲೂ ಅಧಿಕೃತ ಕಾನೂನು ಬದ್ದ ಪಾಲುದಾರಿಕೆಯಲ್ಲಿ ಲಾಭ ನಷ್ಟದಲ್ಲಿ ಸರಿ ಸಮನಾಗಿ ನಡೆಸುತ್ತಿದ್ದೇವೆ.  ಈಗಲೂ ಲೆಖ್ಖ ಪತ್ರ ನಾನೇ ನೋಡುತ್ತೇನೆ ಆದರೆ ಬ್ಯಾಂಕ್ ಅಕೌಂಟ್ ಮತ್ತು ಚೆಕ್ ಗೆ ನನ್ನ ಅಣ್ಣನೆ ಸಹಿ ಮಾಡಬೇಕು, ಊರಲ್ಲಿ ಅನೇಕ ನನ್ನ ತಂದೆಯ ಮಿತ್ರರು ನಮ್ಮಿಬ್ಬರ ಸಹೋದರ

Blog number 1088. ಪತ್ರಿಕೋದ್ಯಮದ ಬೀಷ್ಮರೆಂದೇ ಖ್ಯಾತರಾಗಿದ್ದ ಸಂಯುಕ್ತ ಕನಾ೯ಟಕದ ಕೆ. ಶ್ಯಾಮರಾವ್ ರ ಆತ್ಮಚರಿತ್ರೆಯಲ್ಲಿ ಸಾಗರ ತಾಲ್ಲೂಕಿನ ಅನೇಕ ಆ ಕಾಲದ ಘಟನಾವಳಿಗಳು ಅವರ ಆತ್ಮಚರಿತ್ರ ಸಂಜಯ ಉವಾಚದಲ್ಲಿ ದಾಖಲಾಗಿದೆ ಅವರ ಸಂಜಯ ಎಂಬ ವಾರಪತ್ರಿಕೆಗೆ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಚಂದಾದಾರರಿದ್ದರು.

ಪತ್ರಿಕೋದ್ಯಮದ ದಿಗ್ಗಜ ಸಂಯುಕ್ತ ಕನಾ೯ಟಕದ ಶಾಮರಾವ್ ರ ಆತ್ಮಚರಿತ್ರೆ ಸಂಜಯ ಉವಾಚದಲ್ಲಿ ಸಾಗರ ತಾಲ್ಲೂಕ್   ಕೆಳದಿ ಮಠದ ಹೋರಾಟದಲ್ಲಿ. ಶಾಮರಾಯರು.  ಸಂಯುಕ್ತ ಕನಾ೯ಟಕದ ಸಂಪಾದಕರಾದ ಶಾಮರಾಯರೆಂದರೆ ಪತ್ರಿಕೋದ್ಯಮದ ಬೀಷ್ಮರಿದ್ದ೦ತೆ ಅವರು ಪ್ರಾರಂಭದಲ್ಲಿ  ಸಂಜಯ ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು ಆ ವಾರ ಪತ್ರಿಕೆಗೆ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಚಂದಾದರರಿದ್ದರು, ಈ ಪತ್ರಿಕೆ ಸಾಗರ ತಾಲ್ಲೂಕಿನ ಅಡಕೆ ಬೆಳೆಗಾರರು, ಕೆಳದಿ ಮಠ, ಕಾಗೋಡು ಹೋರಾಟದ ಬಗ್ಗೆ ಹೆಚ್ಚು ವರದಿ ಮಾಡಿದ ಖ್ಯಾತಿ ಇದೆ.   ಕಾಗೋಡು ಸತ್ಯಾಗ್ರಹದ ರೂವಾರಿ ಹೆಚ್. ಗಣಪತಿಯಪ್ಪರ ಸಂದರ್ಶನ ಸಂಜಯ ವಾರಪತ್ರಿಕೆಗೆ ಮಾಡಿದ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದಾರೆ.    ಶಾಮರಾಯರ ಆತ್ಮಚರಿತ್ರೆ ಅವರ ಶಿಷ್ಯ ಖ್ಯಾತ ಪತ್ರಕತ೯ ವಿಶ್ವೇಶ್ವರ ಭಟ್ಟರು ಬರೆದು ಪ್ರಕಟಿಸಿದ್ದಾರೆ ಅದರ ಹೆಸರು "ಸಂಜಯ ಉವಾಚ ''ಆದರಲ್ಲಿ ಸಾಗರ ತಾಲ್ಲೂಕಿನ ಕೆಲ ನೆನಪು ಘಟನೆ ದಾಖಲಿಸಿದ್ದಾರೆ ಅದನ್ನ ಕೆಲ ಬಾಗಗಳಾಗಿ ಇಲ್ಲಿ ಬರೆದಿದ್ದೇನೆ.  ಕೆಳದಿ ರಾಜ ಮಠದ ವ್ಯಾಜ್ಯಗಳು ಸ್ವಾತಂತ್ರ ಪೂವ೯ದಿOದಲೂ ಇದೆ, ಮೊನ್ನೆ ದಸರಾದಲ್ಲಿ ಆ ಮಠದ ಪಚ್ಚೆ ಲಿಂಗ ಲಾಕರ್ ನಿಂದ ತಂದು ಪ್ರದಶ೯ನಕ್ಕೆ ಇಡಲಾಗಿತ್ತು.   ಇದು ಕೆಲ ವ್ಯಾಜ್ಯದಿಂದ ಭಕ್ತರ ದಶ೯ನಕ್ಕೆ ಲಭ್ಯವಿದ್ದಿಲ್ಲ ಹಾಲಿ ಮಠದ ಸ್ವಾಮಿಗಳು ಸಾಗರದ ಶಾಸಕರಾದ ಹಾಲಪ್ಪರಿಗೆ ಮನವಿ ಮಾಡಿದಾಗ ಅವರು ರಾಜ್ಯದ ಮುಖ್ಯಮಂತ