Blog number 1965. ಪುರಾತನ ಶಿಲಾಶಾಸನದ ಹೊಸಗನ್ನಡದ ವಿವರದ ಫಲಕ ಆಯಾ ಊರಿನ ಶಿಲಾಶಾಸನದ ಪಕ್ಕದಲ್ಲಿ ಆಳವಡಿಸುವ ಅಭಿಯಾನ ಆಯಾ ಊರವರೇ ಪ್ರಾರಂಬಿಸಲಿ
#ಪುರಾತನ_ಶಿಲಾಶಾಸನದ_ಹೊಸಗನ್ನಡದ_ವಿವರದ_ಫಲಕ_ಅಳವಡಿಸುವ_ಅಭಿಯಾನ_ಆಯಾ_ಊರವರೇ_ಪ್ರಾರಂಭಿಸಲಿ #ಪ್ರತಿ_ಊರಿಗೂ_ಒಂದು_ಹೆಸರಿದೆ_ಅದಕೊಂದು_ಹಿನ್ನೆಲೆ_ಇದೆ #ಊರಿಗೆ_ಇತಿಹಾಸವೂ_ಇದೆ_ಊರಲ್ಲಿನ_ಗುಡಿ_ಗೋಪುರಗಳು #ಶಿಲಾಶಾಸನಗಳು_ರಾಜರ_ಕಾಲದ_ದಾನ_ದತ್ತಿಯ_ಕಥೆ_ಹೇಳುತ್ತದೆ #ಶಿಲಾಶಾಸನದಲ್ಲಿ_ಕೆತ್ತಿರುವ_ಹಳೆಗನ್ನಡ_ಅರ್ಥ_ಆಗದೆ #ಕೆಲವು_ಶಿಲಾಶಾಸನ_ಊರವರು_ಪೂಜಿಸಿದರೆ_ಕೆಲವು_ಬಟ್ಟೆ_ಒಗೆಯುವ_ಚಪ್ಪಡಿ_ಆಗಿದೆ #ಆಚಾಪುರ_ಸಮೀಪದ_ರಾಷ್ಟ್ರೀಯ_ಹೆದ್ದಾರಿ_ಪಕ್ಕದಲ್ಲಿರುವ_ಬೃಹತ್_ಶಿಲಾ_ಶಾಸನ. #ಕ್ರಿಶ_1042ರಲ್ಲಿ_ಸಮೀಪದ_ಅಂದಾಸುರದಲ್ಲಿ_ಗೋನೇಶ್ವರ_ಮತ್ತು_ಸೂರ್ಯಮಾರ್ತಾಂಡ_ದೇವಾಲಯ_ನಿಮಿ೯ಸಿದ #ಬನವಾಸಿ_ನಾಡಿನ_ರಾಜ್ಯಪಾಲ_ಬಿಜ್ಜಳನ_ಸಾಮಂತ_ಗೋರರಸ #ದೇವಾಲಯ_ನಿರ್ಮಿಸಿದ_ಕಮ್ಮಾರಚಿಕ್ಕನಿಗೆ_ಭೂದಾನ_ನೀಡಿದ_ಶಿಲಾಶಾಸನ #ಎಂಟು_ಅಡಿ_ಎತ್ತರ_ನಾಲ್ಕು_ಅಡಿ_ಅಗಲದ_71_ಸಾಲುಗಳ_ಬೃಹತ್_ಶಿಲಾಶಾಸನ #ಈ_ಶಾಸನದಲ್ಲಿ_ಉಲ್ಲೇಖಿಸಿರುವ_ಆ_ಕಾಲದ_ರಾಜದಾನಿ_ಅಂದಾಸುರ_ಈಗ_ಒಂದು_ಹಳ್ಳಿ #ಶಾಸನದಲ್ಲಿರುವ_ಗೋನೇಶ್ವರ_ಮತ್ತು_ಸೂರ್ಯಮಾರ್ತಾಂಡ_ದೇವಸ್ಥಾನದ_ಕುರುಹು_ಇಲ್ಲಿಲ್ಲ. ಆನಂದಪುರಂನಿಂದ ಶಿವಮೊಗ್ಗ ಮಾರ್ಗದಲ್ಲಿ ಆಚಾಪುರದಿಂದ ಒಂದು ಕಿ.ಮಿ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಸ್ತೆಯ ಎಡಬಾಗದಲ್ಲಿ ಸುಮಾರು 980 ವಷ೯ದಿಂದ ಈ ಬೃಹತ್ ಶಿಲಾ ಶಾಸನ ಬಿಸಿಲು ಮಳೆಗೆ ಎದೆ ಒಡ್ಡಿ ನಿಂತಿದೆ. ರಾಜ್ಯ ಹೆದ್ದಾರಿ ರಾಷ್ಟ್...