Skip to main content

4115. ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ. ಈ ರೀತಿ ಭೂಕುಸಿತಕ್ಕೆ ಕಾರಣ ಏನು?... ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....


ಮಳೆಗಾಲದಲ್ಲಿ_ಮಲೆನಾಡಿನಲ್ಲಿ_ಭೂಕುಸಿತ.

  ಈ ರೀತಿ ಭೂಕುಸಿತಕ್ಕೆ ಕಾರಣ ಏನು?...  ಸೆನ್ಸಾರ್ ಉಪಕರಣಗಳ ಬಳಕೆ ಇನ್ನು ಪ್ರಾರಂಭವಾಗಿಲ್ಲ ಏಕೆ?....

  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನೂತನ ಮನೆ ನಿರ್ಮಾಣ ಕಾಮಗಾರಿಗೆ ನಿರ್ಮಿಸಿದ್ದ ತಡೆಗೋಡೆ ಮಣ್ಣು ಕಾರ್ಮಿಕರ ಶೆಡ್ ಮೇಲೆ ಕುಸಿದು ಮೂವರು ಕಾರ್ಮಿಕ ಕುಟುಂಬ ಭಾನುವಾರ ಮೃತರಾದ ದುರಂತ ನಡೆದಿದೆ.

  ಮಲೆನಾಡು ಪಶ್ಚಿಮ ಘಟ್ಟಗಳ ಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ,ಭೂಕುಸಿತ ಸಂಭವಿಸಲು ನೈಸರ್ಗಿಕ ಕಾರಣಗಳು ಮತ್ತು ಮಾನವಕೃತ ಕಾರಣಗಳು  ಪ್ರಮುಖ ಪಾತ್ರವಹಿಸುತ್ತವೆ.  

  ಮಲೆನಾಡಿನಲ್ಲಿ ಕೆಲವೇ ದಿನಗಳಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದಾಗ ಮಣ್ಣು ಹೆಚ್ಚಿನ ಪ್ರಮಾಣದ ನೀರನ್ನು ಹೀರಿಕೊಂಡಾಗ,ಮಣ್ಣಿನ ಕಣಗಳ ನಡುವಿನ ಸಾಂದ್ರತೆ ಕಡಿಮೆಯಾಗಿ ಭಾರ ಹೆಚ್ಚುತ್ತದೆ.

​   ಗುಡ್ಡಗಳಲ್ಲಿ ಕೆಂಪು ಮಣ್ಣು  ಮತ್ತು ಜೇಡಿಮಣ್ಣಿನ ಅಂಶ ಹೆಚ್ಚಿರುವಾಗ ನೀರು ಬಿದ್ದಾಗ ಈ ಮಣ್ಣು ಬೇಗನೆ ಸಡಿಲಗೊಂಡು ಜಾರಲು ಪ್ರಾರಂಭಿಸುತ್ತದೆ.

​   ಪಶ್ಚಿಮ ಘಟ್ಟಗಳ ಭೂಪ್ರದೇಶವು ಕಡಿದಾದ ಇಳಿಜಾರುಗಳನ್ನು ಹೊಂದಿದ್ದು, ಗುರುತ್ವಾಕರ್ಷಣೆಯ ಬಲದಿಂದಾಗಿ ಸಡಿಲಗೊಂಡ ಮಣ್ಣು ಮತ್ತು ಬಂಡೆಗಳು ವೇಗವಾಗಿ ಕೆಳಗೆ ಜಾರುತ್ತವೆ.

 ​ಅವೈಜ್ಞಾನಿಕ ರಸ್ತೆ ಮತ್ತು ಹೆದ್ದಾರಿ ನಿರ್ಮಾಣ,ಗುಡ್ಡಗಳನ್ನು ಕಡಿದು ರಸ್ತೆ ಅಗಲೀಕರಣ ಮಾಡುವಾಗ ಸರಿಯಾದ ತಡೆಗೋಡೆಗಳನ್ನು  ನಿರ್ಮಿಸದಿರುವುದರಿಂದ ಕೂಡ ಈ ಅಪಾಯ ಹೆಚ್ಚು.

​ ಮರಗಳ ಬೇರುಗಳು ಮಣ್ಣನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ ಆದರೆ ಬೃಹತ್ ಪ್ರಮಾಣದಲ್ಲಿ ಕಾಡು ನಾಶ ಮಾಡುವುದರಿಂದ ಮಣ್ಣ ಸವಕಳಿ ಹೆಚ್ಚಾಗಿ ಭೂಕುಸಿತಕ್ಕೆ ದಾರಿಯಾಗುತ್ತದೆ.  

  ನೈಸರ್ಗಿಕ ಅರಣ್ಯಗಳನ್ನು ಕಡಿದು ಏಕಬೆಳೆ ಅಂದರೆ ಅಡಿಕೆ, ಕಾಫಿ, ರಬ್ಬರ್ ಇತ್ಯಾದಿ ತೋಟಗಳನ್ನಾಗಿ ಪರಿವರ್ತಿಸುವುದರಿಂದ,
​ಬಾರಿ ಯಂತ್ರಗಳ ಬಳಕೆ ಮತ್ತು ಕ್ವಾರಿಗಳು,ಬಂಡೆಗಳನ್ನು ಸ್ಫೋಟಿಸುವುದು  ಹಾಗೂ ಬೆಟ್ಟ-ಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ಮಾಡುವುದರಿಂದ ಭೂಮಿಯ ಒಳಗಿನ ಪದರಗಳು ಕಂಪಿಸಿ ಸಡಿಲಗೊಳ್ಳುವುದರಿಂದ ಭೂಕುಸಿತ ಸಂಭವ ಜಾಸ್ತಿ ಆಗುತ್ತದೆ.

   ​ಪ್ರಾಕೃತಿಕವಾಗಿ ಹರಿಯುವ ನೀರು ಹರಿವಿನ ಮಾರ್ಗ ಬದಲಾವಣೆ ಕೂಡ ಭೂಕುಸಿತಕ್ಕೆ ಕಾರಣ,ಗುಡ್ಡಗಳಿಂದ ಇಳಿಯುವ ನೈಸರ್ಗಿಕ ತೊರೆ ಮತ್ತು ಕಾಲುವೆಗಳನ್ನು ಮುಚ್ಚುವುದು ಅಥವಾ ಅವುಗಳ ದಾರಿ ಬದಲಿಸುವುದರಿಂದ ನೀರು ಗುಡ್ಡದ ಒಳಗಡೆ ಇಳಿದು ಮಣ್ಣು ಕುಸಿಯುತ್ತದೆ.

​  ನಿಸರ್ಗದ ಅತಿಯಾದ ಮಳೆಯ ಜೊತೆಗೆ ಬೆಟ್ಟ-ಗುಡ್ಡಗಳ ಇಳಿಜಾರಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಮಾನವ ಚಟುವಟಿಕೆಗಳು ಮಲೆನಾಡಿನಲ್ಲಿ ಪ್ರಕೃತಿ ವಿಕೋಪ ಹೆಚ್ಚಾಗಲು ಮುಖ್ಯ ಕಾರಣವಾಗಿವೆ.

  ಮಲೆನಾಡಿನಲ್ಲಿ ಗುಡ್ಡ ಕುಸಿತವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ವೈಜ್ಞಾನಿಕ ಕ್ರಮಗಳು ಮತ್ತು ಸರಿಯಾದ ಯೋಜನೆಯ ಮೂಲಕ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು.

  ಬೆಟ್ಟದ ಮೇಲಿಂದ ಹರಿಯುವ ಮಳೆ ನೀರು ನೇರವಾಗಿ ಮಣ್ಣಿನೊಳಗೆ ಇಳಿಯದೆ, ಸಣ್ಣ ಕಾಲುವೆಗಳ ಮೂಲಕ ಸುರಕ್ಷಿತವಾಗಿ ಹರಿದು ಹೋಗುವಂತೆ ಮಾಡುವುದು.

  ​ಬೆಟ್ಟದ ಇಳಿಜಾರುಗಳಲ್ಲಿ ಮರ ನೆಡುವುದು, ಸ್ಥಳೀಯ ಜಾತಿಯ, ಆಳವಾದ ಬೇರು ಬಿಡುವ ಮರಗಳನ್ನು (ಉದಾ: ಹಾಲಮರ, ಹೆಬ್ಬಲಸು) ಮತ್ತು ಹುಲ್ಲುಗಳನ್ನು ನೆಡುವುದರಿಂದ ಬೇರುಗಳು ಮಣ್ಣನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ.

​  ಕಡಿದಾದ ಭೂಮಿಯನ್ನು ಮೆಟ್ಟಿಲುಗಳ ರೂಪದಲ್ಲಿ ಮಾಡುವುದರಿಂದ ಮಳೆ ನೀರಿನ ರಭಸ ಮತ್ತು ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.

​  ಸೂಕ್ಷ್ಮ ಪ್ರದೇಶಗಳಲ್ಲಿ ಬೆಟ್ಟಗಳನ್ನು ಸ್ಫೋಟಿಸುವುದು  ಮತ್ತು ಭಾರಿ ಯಂತ್ರಗಳ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವುದು.

​  ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು  ಗುರುತಿಸಿ ಅವುಗಳ ರಕ್ಷಣೆ ಮಾಡುವುದು
  
  ಹೆಚ್ಚು ಮಳೆ ಬೀಳುವ ಸಮಯದಲ್ಲಿ ಮಣ್ಣಿನ ತೇವಾಂಶ ಮತ್ತು ಚಲನೆಯನ್ನು ಅಳೆಯುವ ಸೆನ್ಸರ್‌ಗಳನ್ನು  ಅಳವಡಿಸಿ, ಅಪಾಯಕ್ಕೂ ಮುನ್ನವೇ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬಹುದು ಇಂತಹ ಸೆನ್ಸಾರ್ ಪರಿಕರಗಳನ್ನ ಸ್ಥಳೀಯ ಸಂಸ್ಥೆಗಳು ಬಳಸಬೇಕು.

  ಭೂಕುಸಿತ  ಸಂಭವಿಸುವ ಮೊದಲು ಪ್ರಕೃತಿ ಮತ್ತು ಪರಿಸರದಲ್ಲಿ ಕೆಲವು ಪೂರ್ವಸೂಚನೆಗಳು  ಕಂಡುಬರುತ್ತವೆ ಅದನ್ನು ಯಾವ ಕಾರಣಕ್ಕೂ ಕಡೆಗಾಣಿಸಬಾರದು.

   ಇವುಗಳನ್ನು ಸರಿಯಾದ ಸಮಯಕ್ಕೆ ಗುರುತಿಸುವುದರಿಂದ ಅಪಾಯದಿಂದ ಪಾರಾಗಬಹುದು.

  ನಿಮ್ಮ ಮನೆ, ರಸ್ತೆ, ಕಾಂಕ್ರೀಟ್ ನೆಲ ಅಥವಾ ತಡೆಗೋಡೆಗಳಲ್ಲಿ  ದಿಢೀರನೆ ಹೊಸ ಬಿರುಕುಗಳು ಕಾಣಿಸಿಕೊಂಡರೆ ಅಥವಾ ಹಳೆಯ ಬಿರುಕುಗಳು ಅಗಲವಾದರೆ ಅದು ಭೂಮಿ ಸರಿಯುತ್ತಿರುವುದರ ಸಂಕೇತ.

 ​ ಬೆಟ್ಟದ ಇಳಿಜಾರಿನಲ್ಲಿರುವ ಮರಗಳು, ವಿದ್ಯುತ್ ಕಂಬಗಳು ಅಥವಾ ಬೇಲಿಗಳು ಒಂದು ಬದಿಗೆ ವಾಲುತ್ತಿದ್ದರೆ ಭೂಮಿ ಕುಸಿಯುತ್ತಿದೆ ಎಂದರ್ಥ.

  ​ಹಠಾತ್ತಾಗಿ ಹೊಸ ಕಡೆಗಳಲ್ಲಿ ಬುಗ್ಗೆಗಳು ಚಿಮ್ಮುವುದು,
​ಹರಿಯುವ ತೊರೆ ಅಥವಾ ನದಿಯ ನೀರು ದಿಢೀರನೆ ಕೆಸರುಮಯವಾಗಿ ಬದಲಾಗುವುದು,ಹರಿಯುತ್ತಿದ್ದ ನೀರು ದಿಢೀರನೆ ಇಂಗಿ ಹೋಗುವುದು ಅಥವಾ ಕಡಿಮೆಯಾಗುವುದು (ಮೇಲ್ಭಾಗದಲ್ಲಿ ನೀರು ತಡೆಯಲ್ಪಟ್ಟಿರುವುದರ ಸಂಕೇತ).

   ಮನೆಯ ​ಬಾಗಿಲು ಮತ್ತು ಕಿಟಕಿಗಳು ಸಿಕ್ಕಿಕೊಳ್ಳುವುದು, ಭೂಮಿ ಸಲ್ಪ ಮಟ್ಟಿಗೆ ಜರುಗಿದಾಗ ಮನೆಗಳ ಬಾಗಿಲು ಅಥವಾ ಕಿಟಕಿ ಚೌಕಟ್ಟುಗಳು ವಂಕಿ, ಸರಿಯಾಗಿ ಮುಚ್ಚದಿರಬಹುದು.

​ ಬೆಟ್ಟದ ಒಳಗಿನಿಂದ ಮರಗಳು ಮುರಿಯುವ ಶಬ್ದ, ಕಲ್ಲುಗಳು ಉರುಳುವ ಶಬ್ದ ಅಥವಾ ಭಾರಿ ಸದ್ದು ಕೇಳಿಸುವುದು.

​   ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ನಿರಂತರ ಭಾರಿ ಮಳೆಯಾದಾಗ (ಉದಾಹರಣೆಗೆ: 24 ಗಂಟೆಗಳಲ್ಲಿ 100-200mm ಗಿಂತ ಹೆಚ್ಚು) ನೆಲ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡು ಕುಸಿತ ಉಂಟಾಗುತ್ತದೆ.

​  ಭೂಕುಸಿತದ ಸೂಚನೆ ಸಿಕ್ಕರೆ ಏನು ಮಾಡಬೇಕು? ..
​ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಿ, ಯಾವುದೇ ಅಪಾಯದ ಲಕ್ಷಣ ಕಂಡ ತಕ್ಷಣ ಕೆಳಭಾಗದ ಮನೆಗಳನ್ನು ಖಾಲಿ ಮಾಡಿ ಎತ್ತರದ ಮತ್ತು ಗಟ್ಟಿ ನೆಲವಿರುವ ಪ್ರದೇಶಕ್ಕೆ ಹೋಗಿ.

  ​ಗ್ರಾಮ ಪಂಚಾಯತಿ, ತಾಲೂಕು ಕಚೇರಿ ಅಥವಾ ತುರ್ತು ಸೇವೆಗೆ (112) ತಕ್ಷಣ ತಿಳಿಸಿ.

  ​ಹರಿವಿನ ಹಾದಿಯಿಂದ ದೂರವಿರಿ,ಹಳ್ಳ-ಕೊಳ್ಳ ಮತ್ತು ಇಳಿಜಾರಿನ ನೇರ ಸಾಲಿನ ಪ್ರದೇಶಗಳಲ್ಲಿ ನಿಲ್ಲಬೇಡಿ.

​ ಅತಿಯಾದ ಮಳೆಯಿಂದಾಗಿ ಮಣ್ಣು ನೀರನ್ನು ಹೀರಿಕೊಂಡು ತೂಕ ಹೆಚ್ಚಾಗುತ್ತದೆ ಮತ್ತು ತನ್ನ ಗ್ರಿಪ್ ಕಳೆದುಕೊಳ್ಳುತ್ತದೆ.  

  ​ಮುಖ್ಯವಾಗಿ #Rain_Gauges #Sensors ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬಿಡುವಿಲ್ಲದೆ ಹರಿಯುವ ಮಳೆಯ ಪ್ರಮಾಣ (Intensity) ಮತ್ತು ಸಮಯವನ್ನು (Duration) ನಿರಂತರವಾಗಿ ಅಳೆಯುತ್ತವೆ.  

  ​ಪ್ರತಿ ಬೆಟ್ಟ ಅಥವಾ ಇಳಿಜಾರಿನ ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ, ಅದು ಎಷ್ಟು ಮಿಲಿಮೀಟರ್ ಮಳೆಯನ್ನು ತಡೆಯಬಲ್ಲದು ಎಂಬ "ಸುರಕ್ಷಿತ ಮಿತಿ" (Threshold) ಇರುತ್ತದೆ.  

  #ಟಿಲ್ಟ್_ಸಂವೇದಕಗಳು (Tilt Sensors)
​ಕೆಲಸ ಮಾಡುವ ವಿಧಾನ, ಇವುಗಳನ್ನು ನೆಲದ ಮೇಲ್ಭಾಗದಲ್ಲಿ, ಬೆಟ್ಟದ ಇಳಿಜಾರಿನ ಬಂಡೆಗಳ ಮೇಲೆ, ತಡೆಗೋಡೆಗಳಲ್ಲಿ (Retaining walls) ಅಥವಾ ವಿದ್ಯುತ್ ಕಂಬಗಳ ಮೇಲೆ ಜೋಡಿಸಲಾಗುತ್ತದೆ.  

  ​ಇಳಿಜಾರು ಅಥವಾ ಗೋಡೆ ಕಣ್ಣಿಗೆ ಕಾಣಿಸದಷ್ಟು (ಮಿಲಿಮೀಟರ್ ಲೆಕ್ಕದಲ್ಲಿ) ವಾಲಿದರೂ (Angle of Tilt), ಈ ಸಂವೇದಕ ಅದನ್ನು ತಕ್ಷಣ ಗುರುತಿಸಿ ವೈರ್‌ಲೆಸ್ ಮೂಲಕ ಕಂಟ್ರೋಲ್ ರೂಮ್‌ಗೆ ಡೇಟಾ ಕಳುಹಿಸುತ್ತದೆ.  

 ​#Rainfall_Threshold_Sensors – ಯಾವಾಗ ಅಪಾಯ ಸಂಭವಿಸಬಹುದು?... ಮಳೆಯ ಆಧಾರದಲ್ಲಿ
​Inclinometers & Tilt Sensors – ಭೂಮಿ ಈಗಾಗಲೇ ಜಾರಲು ಶುರುವಾಗಿದೆಯೇ?... ಮಣ್ಣಿನ ಚಲನೆಯ ಆಧಾರದಲ್ಲಿ,
​ಈ ಎರಡೂ ವ್ಯವಸ್ಥೆಗಳನ್ನು ಒಂದಾಗಿಸಿ 'Early Warning System' ಆರಂಭಿಕ ಮುನ್ನೆಚ್ಚರಿಕಾ ವ್ಯವಸ್ಥೆ ನಿರ್ಮಿಸಲಾಗುತ್ತದೆ. 

  ಇದು ಪ್ರಾಣಹಾನಿಯನ್ನು ಸಂಪೂರ್ಣವಾಗಿ ತಡೆಯಲು ಸಹಾಯ ಮಾಡುತ್ತದೆ ಆದ್ದರಿಂದ ಬದಲಾದ ಕಾಲದಲ್ಲಿ ಸರ್ಕಾರಿ ಸಂಸ್ಥೆಗಳು ಕೂಡ ಬದಲಾಗಬೇಕು ಅದರಿಂದ ಅಮಾಯಕರ ಜೀವ ಉಳಿಸಲು ಸಾಧ್ಯವಿದೆ.

#landsliding #thirthahalli #shivamogga #heavyrain #sensor #mansoonseason

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...