ಇಸ್ಕಾನ್_ಮುಂಜಾನೆ_ಮಂಗಲ_ಆರತಿ_ಜಪ_ಯಜ್ಞದಲ್ಲಿ ... ನಗರ ಸಂಕೀರ್ತನೆಗಾಗಿ ನಮ್ಮ #ಕೃಷ್ಣಸರಸ_ಕನ್ವೆನ್ಷನ್_ಹಾಲ್ ಕಲ್ಯಾಣ ಮಂಟಪದಲ್ಲಿ ತಂಗಿರುವ ಇಸ್ಕಾನ್ ಸಂಸ್ಥೆಯ ಮುಂಜಾನೆಯ ಮಂಗಲ ಆರತಿ ಮತ್ತು ಜಪ ಯಜ್ಞದಲ್ಲಿ ಭಾಗಿ ಆಗುವ ಅವಕಾಶ ನನ್ನದಾಗಿತ್ತು. ಹರೇ ಕೃಷ್ಣ ಪಂಥದ (ಇಸ್ಕಾನ್) ಮುಂಜಾನೆಯ ಮಂಗಲ ಆರತಿ ಮತ್ತು ಜಪ ಯಜ್ಞ ಮುಂಜಾನೆ 4:30ರ ಪ್ರಶಾಂತ ವಾತಾವರಣದಲ್ಲಿ ನಡೆಯುತ್ತದೆ. ಇಸ್ಕಾನ್ (ISKCON) ಹಾಗೂ ಗೌಡೀಯ ವೈಷ್ಣವ ಪಂಥದಲ್ಲಿ ಪ್ರತಿದಿನ ಮುಂಜಾನೆ 4:30 ಕ್ಕೆ ನಡೆಯುವ ಅತ್ಯಂತ ಪವಿತ್ರವಾದ ಮೊದಲ ಪೂಜೆ ಮತ್ತು ಆರತಿಯನ್ನು #ಮಂಗಲ_ಆರತಿ ಎಂದು ಕರೆಯಲಾಗುತ್ತದೆ. ಪ್ರತಿದಿನ ಮುಂಜಾನೆ 4:30 ಈ ಸಮಯವನ್ನು 'ಬ್ರಹ್ಮ ಮುಹೂರ್ತ' ಎಂದು ಕರೆಯಲಾಗುತ್ತದೆ. ಭಗವಂತನಿಗೆ ನಿತ್ಯ ಸೇವೆಯನ್ನು ಸಲ್ಲಿಸಲು ಮತ್ತು ದಿನವನ್ನು ಭಕ್ತಿಪೂರ್ವಕವಾಗಿ ಪ್ರಾರಂಭಿಸಲು ಇದು ಅತ್ಯಂತ ಶ್ರೇಷ್ಠ ಸಮಯ. ಆರತಿಯ ಸಮಯದಲ್ಲಿ ಭಕ್ತರೆಲ್ಲರೂ ಸೇರಿ ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕೂರರು ರಚಿಸಿದ "ಸಂಸಾರ ದಾವಾನಲ ಲೀಢ ಲೋಕ..." (ಗುರು ಅಷ್ಟಕ) ಎಂಬ ಪ್ರಸಿದ್ಧ ಪ್ರಾರ್ಥನೆಯನ್ನು ಹಾಡುತ್ತಾರೆ. ಪೂಜಾರಿಯು ಭಗವಂತನಿಗೆ ಧೂಪ, ದೀಪ (ನೆಯ್ಯಿ ದೀಪ), ಜಲ, ವಸ್ತ್ರ, ಪುಷ್ಪ ಮತ್ತು ಚಾಮರವನ್ನು ಅರ್ಪಿಸಿ ಆರತಿ ಬೆಳಗುತ್ತಾರೆ. ಆರತಿಯ ನಂತರ ಭಗವಂತನ ರಕ್ಷಣೆಗಾಗಿ "ನಮಸ್ತೇ ನರಸಿಂಹಾಯ......