Blog number 1076. ಕೆ.ವಿ.ಸುಬ್ಬಣ್ಣ ಸ್ಮರಣೆಯ ದಿನಾಂಕ 16- ಜುಲೈ -2013ರ ಕಾಯ೯ಕ್ರಮ ಸಂಚಿ ಪೌಂಡೇಶನ್ ಮೂಲಕ ಡಿಜಲೀಕರಣ ಆಗಿದ್ದು ಈ ಡಿಜಿಟಲ್ ಆವೃತ್ತಿ ಅತ್ಯುತ್ತಮ ಮಾಹಿತಿಯಾಗಿದೆ.
#ಕೆ_ವಿ_ಸುಬ್ಬಣ್ಣ_ಸ್ಮರಣೆ_16_ಜುಲೈ_2013. #ಸಂಚಿ_ಪೌಂಡೇಶನ್_ಡಿಜಿಟಲ್_ಆವೃತ್ತಿಯಲ್ಲಿ_ಲಭ್ಯ. #ಈ_ಕಾಯ೯ಕ್ರಮ_ಉದ್ಘಾಟಿಸಿದವರು_ತೀರ್ಥಹಳ್ಳಿಯ_ಕಲ್ಲಹಳ್ಳಿ_ಗಂಗಾದರ್ #ಸಹಕಾರ_ಚಳವಳಿಯ_ಉಪನ್ಯಾಸ_ಐಐಟಿ_ಡಾ_ಎಂ_ಎಸ್_ಶ್ರೀರಾಮು. #ಕೆ_ವಿ_ಸುಬ್ಬಣ್ಣರ_ಶಿಕ್ಷಣದ_ಕಾಲ_ಮೊದಲ_ಪ್ರಕಟನೆ_ಮಾರಾಟ #ನಂದಿನಿ_ಅಮುಲ್_ಹೆರಿಟೇಜ್_ಸಹಕಾರಿ_ಚಳವಳಿ_ಮಾಹಿತಿ_ಆಮೂಲ್ಯ ತೀರ್ಥಹಳ್ಳಿಯ ಶ್ರೀಧರ ಕಲ್ಲಹಳ್ಳ ಗಂಗಾದರ್ ಖ್ಯಾತ ವಿನ್ಯಾಸಗಾರರು, ಒಮ್ಮೆ ಆಮ್ ಆದ್ಮಿ ಪಾರ್ಟಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ದೆ ಮಾಡಿದವರು. ಇವತ್ತು ಒಂದು ಪೋಸ್ಟ್ ಹಾಕಿದ್ದರು ಅದು ದಿನಾಂಕ 16 ಜುಲೈ 2013 ರಲ್ಲಿ ಹೆಗ್ಗೋಡಿನ ನಿನಾಸಂ ಏರ್ಪಡಿಸಿದ್ದ ಕೆ.ವಿ.ಸುಬ್ಬಣ್ಣ ಸ್ಮರಣೆಯ ಕಾರ್ಯಕ್ರಮ ಇವರ ತಂದೆ ಉದ್ಘಾಟಿಸಿದ ವಿಡಿಯೋ ಮದ್ಯ ಪ್ರದೇಶದ ಸಂಚಿ ಪೌಂಡೇಶನ್ ಮಾಡಿರುವ ಡಿಜಿಟಲ್ ಆವೃತ್ತಿ. ಅವರ ತಂದೆ ಮತ್ತು ಕೆ.ವಿ.ಸುಬ್ಬಣ್ಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಒಟ್ಟಿಗೆ ವಿದ್ಯಾಬ್ಯಾಸ ಮಾಡಿದವರು ಹಾಸ್ಟೆಲ್ ನ ಒಂದೇ ಕೋಣೆಯಲ್ಲಿ ವಾಸ್ತವ್ಯ ಮಾಡಿದವರು ಜೊತೆಗೆ ಯು.ಆರ್.ಅನಂತಮೂರ್ತಿ ಕೂಡ ಇವರಿಬ್ಬರ ಒಡನಾಡಿ ಈ ಮೂವರೂ ಈಗ ಇಲ್ಲ. ಕೆ .ವಿ . ಸುಬ್ಬಣ್ಣನವರ ವ್ಯಾಸಂಗದ ದಿನಗಳು ಅವರ ಅಕ್ಷರ ಪ್ರಕಾಶನದ ಮೊದಲ ಪುಸ್ತಕ ಮಾರಾಟ ಮುಂತಾದ ಅನೇಕ ಸ್ವಾರಸ್ಯ ಘಟನೆಗಳು ಅವರ ಉದ್ಘಾಟನಾ ಬಾಷಣದಲ್ಲಿ ಕೇಳುವುದೇ ಸ್ವ...