# ಪರಿಸರ ಉಳಿಸುವುದರಲ್ಲೂ ಎಡ ಮತ್ತು ಬಲ ಸರಿ ಅಲ್ಲ# ಕಳೆದ ವಷ೯ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಜೋಗ ಅಭಿವೃದ್ಧಿ ಯೋಜನೆಯಲ್ಲಿ ಜೋಗ ಜಲಪಾತ ಸವ೯ರುತುವಿನ ಜಲಪಾತಕ್ಕಾಗಿ ನೀರು ಮರು ಪೂರಣ ಯೋಜನೆಗೆ ಸಾಗರದ ನಾ.ಡಿಸೋಜರಾದಿಯಾಗಿ ಅನೇಕರು ವಿರೋದ ಮಾಡಿದರು ಆದರೆ ಅನಂತ ಹೆಗಡೆ ಅಶೀಸರ ಈ ಬಗ್ಗೆ ವಿರೋದಿಸಲಿಲ್ಲ. ಈಗ ಶರಾವತಿ ಕಣಿವೆಯಲ್ಲಿ ಭೂಗಭ೯ ವಿದ್ಯುತ್ ಯೋಜನೆ ಒಂದು (ವರಾಹಿ ಯೋಜನೆಯಂತೆ) ಪ್ರಾರಂಭವಾಗಲಿದ್ದು ಇದಕ್ಕೆ ಅನಂತ ಹೆಗಡೆ ಅಶೀಸರರ ನೇತೃತ್ವದ ಸಂಘಟನೆ ವಿರೋದಿಸುತ್ತಿದೆ ಆದರೆ ನಾ.ಡಿಸೋಜರ ಒಡನಾಡಿಗಳು ವಿರೋದಿಸುತ್ತಿಲ್ಲ. ಇದೇ ರೀತಿ ಅರಣ್ಯ ಭೂಮಿ ಸಕ್ರಮದಲ್ಲಿ ಕೂಡ ಎರೆಡು ಗುಂಪಾಗಿದ್ದು ಒಂದು ಪರ ಇನ್ನೊಂದು ವಿರೋದ. ಒಂದೊಂದು ರಾಜಕೀಯ ಪಕ್ಷಗಳ ಪರಿಸರ ಹೋರಾಟದ ದಿಕ್ಕು ಒಂದೊಂದು ಕಡೆ ಮುಖ ಮಾಡಿದೆ ಇದರಿ೦ದ ರಾಜಕೀಯ ಪಕ್ಷಕ್ಕೆ ಲಾಭವಾಗಬಹುದೇ ಹೊರತು ಪರಿಸರಕ್ಕಲ್ಲ. ಪಶ್ಚಿಮ ಘಟ್ಟದ ಪರಿಸರ ಉಳಿವಿಗೆ ಎಲ್ಲರ ಕಾಳಜಿ ಸ್ವಾಗತೀಯ ಆದರೆ ಪಕ್ಷ, ದಮ೯ಗಳ ಆಧಾರದಲ್ಲಿ ಪರಿಸರ ಹೋರಾಟ ವಿಭಜನೆಯಾಗಿ ಸಾಗುತ್ತಿರುವುದು ಬೇಸರದ ಸಂಗತಿ.