Skip to main content

Posts

Showing posts with the label 28- August-2020 My first novel Besthara Rani champaka released

Blog number 1718. ನನ್ನ ಮೊದಲ ಕಾದಂಬರಿ ಬೆಸ್ತರ ರಾಣಿ ಚಂಪಕ ಇವತ್ತು 28- ಆಗಸ್ಟ್ -2020 ಬಿಡುಗಡೆ ಆಯಿತು.

#ಬಹುದಿನದ_ನಿರೀಕ್ಷೆ_ಇವತ್ತು_ಈಡೇರಿತು     ನಮ್ಮ ಊರು "ಆನಂದಪುರ" ಎಂಬ ಹೆಸರು ಬರಲು ಕಾರಣಳಾದವಳು #ಚಂಪಕಾ ಇವಳ ಮತ್ತು ಕೆಳದಿ ರಾಜಾ ವೆಂಕಟಪ್ಪ ನಾಯಕರ ಪ್ರೇಮ ಕಥೆ ಪ್ರಾರಂಭ ಆಗುವುದು ಸು೦ದರಿ ಚಂಪಕಳು ರಾಜರಿಗಾಗಿ ಬಿಡಿಸುತ್ತಿದ್ದ ಸುಂದರ ರಂಗೋಲಿ .   ಚಂಪಕಳಿಗಾಗಿ #ಯಡೇಹಳ್ಳಿ ಕೋಟೆ ಎಂಬ ಹೆಸರು ಬದಲಿಸಿ #ಆನಂದಪುರ ಎಂಬ ಹೆಸರು ಇಟ್ಟವರು ರಾಜ ವೆಂಕಟಪ್ಪ ನಾಯಕರು.   ದೀಘ೯ ಕಾಲ ಕೆಳದಿ ರಾಜ್ಯಬಾರ ಮಾಡಿದ ಮತ್ತು ರಾಜ್ಯ ವಿಸ್ತಾರ ಮಾಡಿದ ವೆಂಕಟಪ್ಪ ನಾಯಕರು ಈಗಿನ ಸಾಗರ ಪಟ್ಟಣದ ನಿರ್ಮಾತರು.    ಜಾತಿ ಮತ್ತು ಆಹಾರ ಪದ್ಧತಿಯ ಕಾರಣದಿಂದ ತಿರಸ್ಕೃತಳಾಗುವ ಚಂಪಕಾ ಹಾಲಿನಲ್ಲಿ ವಜ್ರ ಸೇರಿಸಿ ಹಾಲಾಹಲ ಸೇವಿಸುವ ದುರ೦ತ ಪ್ರೇಮ ಕಥೆ.   ಚಂಪಕಳ ಸ್ಮಾರಕವಾಗಿ ಆನಂದಪುರದಿಂದ ಶಿಕಾರಿಪುರ ಮಾಗ೯ದ ಮಲಂದೂರಿನಲ್ಲಿ ನಿರ್ಮಿಸಿರುವ ಸುಂದರ #ಚಂಪಕ_ಸರಸ್ಸು.   ಇವೆಲ್ಲ ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ ಮತ್ತು ಗೆಜೆಟಿಯರ್ ನಲ್ಲಿ ಲಭ್ಯ.   ಇದು ಆನಂದಪುರದ ಜನಪದ ಕಥೆ, ನಿಜ ಕಥೆ.   ಇದನ್ನೆಲ್ಲ ಆದರಿಸಿ ಹತ್ತು ವರ್ಷದ ಹಿಂದೆ ನಾನು ಬರೆದ ಕಾಲ್ಪನಿಕ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ" #ಬೆಸ್ತರ_ರಾಣಿ_ಚಂಪಕಾ ಕಾದಂಬರಿ ಆಗಿ ಇವತ್ತು ಗೆಳೆಯರು ಆತ್ಮೀಯರೂ ಆದ ಹಾಯ್ ಬೆಂಗಳೂರು ವಾರಪತ್ರಿಕೆ "ರೋವಿಂಗ್ ರಿಪೋರ್ಟರ್ " ಮತ್ತು ಶಿವಮೊಗ್ಗ #ಜನಹೋರಾಟ ದಿನಪತ್ರ...