Skip to main content

Posts

Showing posts with the label My friends of tribles

ವಷ೯ಕ್ಕೆ ಒಂದೆರೆಡು ಬಾರಿ ಕಾಡು ಗೆಡ್ಡೆ ಗೆಣಸು ತಂದು ತಿನ್ನಿಸುವ ಹಾವು ಗೊಲ್ಲ ಮಿತ್ರ ವೆಂಕಟೇಶ್

ಹಾವು ಗೊಲ್ಲರು ಈಗ ಅರೆ ಅಲೆಮಾರಿಗಳು , ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶಿರವ೦ತೆ, ಹೆಗ್ಗೋಡು, ಹೊಸನಗರ ತಾಲ್ಲೂಕಿನ ಹಾಲು ಗುಡ್ಡೆಗಳಲ್ಲಿ ಸಕಾ೯ರದ ಜಾಗ ಮನೆ ಪಡೆದಿದ್ದಾರೆ, ಹಾವು ಹಿಡಿದು ಜೀವನ ಮಾಾಡುವುದಕ್ಕಿಂತ ಬೇರೆ ಉದ್ಯೋಗದಲ್ಲಿ ಹೆಚ್ಚು ತೊಡಗಿದ್ದಾರೆ, ಇವರ ಕೇರಿಯಲ್ಲಿ ನಾಗ ಪ್ರತಿಷ್ಟೆ ಮಾಡಿ ಹಾವು ಹಿಡಿಯದ೦ತೆ ಕೆಲವರು ತಾಕೀತು ಮಾಡಿದ್ದಾರೆ ಗುುಟ್ಟಾಗಿ ಹಾವು ಹಿಡಿಯುವ ಇವರ ಪುರಾತನ ವಂಶಪಾರಂಪಯ೯ ವಿದ್ಯ ಉಳಿಸಿ ಕೊಂಡಿದ್ದಾರೆ, 1985 ರಲ್ಲಿ ಕ್ಯಾಮೆರ ಕಡಿಮೆ ಇರುವ ಕಾಲದಲ್ಲಿ ಇವರೆಲ್ಲರ ಕುಟುಂಬದ photo ಸೆಷನ್ ಮಾಡಿದ್ದೆ ನಮ್ಮ ರೈಸ್ ಮಿಲ್ನಲ್ಲಿ,ಒಂದು ಕೋಟು, ಕಪ್ಪು ಕನ್ನಡಕ ಮಾತ್ರ ಎಲ್ಲಾ ಕುಟು೦ಬದ ಹಿರಿಯ ನು ಧರಿಸಲು ಬದಲಾಗುತ್ತಿತ್ತು, ಅವತ್ತು ಚಿತ್ರದಲ್ಲಿದ್ದ ಮಕ್ಕಳೆಲ್ಲ ಈಗ ಅಜ್ಜO ದಿರಾಗಿದ್ದಾರೆ. ಇವರೆಲ್ಲ ಆಗಾಗ್ಗೆ ಬಂದು ಬೇಟಿ ಮಾಡಿ ಅದಕಾಗಿ ಭಕ್ಷೀಸು ಪಡೆಯುತ್ತಾರೆ. ಇವರು ದಶ೯ನ ನೀಡಿದಕ್ಕಾಗಿ ನಾನು ಭಕ್ಷಿಸು ನೀಡಬೇಕು ವಷ೯ಕ್ಕೆ ಒಮ್ಮೆ ಆದರೂ ತಿನ್ನ ಬೇಕು ಈ ಕಾಡು ಗೆಣಸು ಇದರಲ್ಲಿ ಔಷಧ ಇದೆ.