Skip to main content

Posts

Showing posts with the label Gajananamahale Honnavar very active in social media

Blog number 1061. ಹೊನ್ನಾವರದ ಗಜಾನನ ಮಹಾಲೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವವರು ನನ್ನ ಕಥಾ ಸಂಕಲನ ಬಿಲಾಲಿ ಬಿಲ್ಲಿ ಅಭ್ಯ೦ಜನ ಓದಿ ತಮ್ಮ ಅಭಿಪ್ರಾಯ ಪೇಸ್ ಬುಕ್ ಲ್ಲಿ ಬರೆದಿದ್ದಾರೆ.

#ಗ್ರಾಮೀಣಲೋಕದ_ಗಟ್ಟಿ_ಕಥೆಗಳು  ಹಿರಿಯ ಸ್ನೇಹಿತ ಕೆ. ಅರುಣ್ ಪ್ರಸಾದ್ ತಮ್ಮ ಕಥಾ ಸಂಕಲನ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ" ಎಂಬ ಪುಸ್ತಕವನ್ನು ಕಳಿಸಿದ್ದು ದೀಪಾವಳಿಗೆ ನಾಲ್ಕು ದಿನಗಳಿರುವಾಗ. ದೀಪಾವಳಿಯ ಸಡಗರ ಮುಗಿದ ಮೇಲೆ ಬಿಡುವು ಮಾಡಿಕೊಂಡು ಓದೋಣ ಎಂದು ಕಾದು, ಈಗಷ್ಟೇ ಓದಿ ಮುಗಿಸಿದೆ. ಎಷ್ಟು ಖುಷಿಯಾಗಿ ಓದಿಸಿಕೊಳ್ಳುವ ತಾಕತ್ತಿನ ಕಥೆಗಳೆಂದರೆ, ಅರೆ... ಓದಿ ಮುಗಿದೇ ಹೋಯ್ತಾ... ಮತ್ತಷ್ಟು ಕಥೆಗಳು ಇರ್ಬೇಕಿತ್ತು ಅನ್ನಿಸಿತು... ಶಿವಮೊಗ್ಗ ಜಿಲ್ಲೆಯ, ಬೇರೆ ಬೇರೆ ಗ್ರಾಮೀಣ ಪ್ರದೇಶಗಳಲ್ಲೇ ನಡೆದ, ತಮ್ಮ ಜೀವನದ ಭಾಗವಾಗಿಯೇ ಇದ್ದ, ತಾವು ಸಹ ಭಾಗಿಯಾಗಿದ್ದ ಹಲವು ಘಟನೆಗಳನ್ನು ಸಹ ಕಥೆಯಾಗಿಸಿದ್ದಾರೆ ಅರುಣ್. ಇಲ್ಲಿಯ ಕಥೆಗಳನ್ನು ಓದುತ್ತಾ ಹೋದಂತೆ ಹಳ್ಳಿಯ ಬದುಕು, ಸಂಸ್ಕೃತಿ, ನಂಬಿಕೆ, ಪರಂಪರೆ, ಎಲ್ಲಾ ಅನಾವರಣಗೊಳ್ಳುತ್ತಾ ಹೋಗುತ್ತವೆ. ಗ್ರಾಮೀಣ ಭಾರತದ ಪರಿಚಯ ಆಗುವುದರ ಜೊತೆಗೆ ನಾವೂ ಸಹ ಇಂತಹ ಕಥೆಗಳಲ್ಲಿ ಬರುವ ಒಂದು ಪಾತ್ರವಾಗಿ ಬಿಡುತ್ತೇವೆ... "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ ", "ಮಂಜ ಬ್ರಹ್ಮ ರಾಕ್ಷಸನಾಗಿ ಕಾಡಿದರೆ...!?", "ವಿಲ್ಲಿ ಭೂತವಾಗಿ", "ಇನಾಮುದಾರರ ಮಂಚ", "ಹೋರಿ ಮಂಜ ಮತ್ತು ಗಾಡಿ ಎತ್ತಿನ ಬ್ರಾಂಡಿ" ಸೇರಿದಂತೆ ಒಟ್ಟಿಗೆ 29 ಕಥೆಗಳು ಇರುವ ಈ ಪ...