Skip to main content

Posts

Showing posts from July, 2023

Blog number 1687. ಕಾಟ ಕೊಡುವ ಮಂಗನ ಹಿಡಿಯುವ ಬೋನು.

#ಮಂಗನ ಕಾಟ ಪರಿಹಾರ ಸುಲಭ ಸಾಧ್ಯವಲ್ಲ ಯಾವುದೇ ಸಾಕುಪ್ರಾಣಿ, ಕಾಡು ಪ್ರಾಣಿ ಕಾಟವನ್ನ ತಡೆಯ ಬಹುದು ಆದರೆ ಮಂಗನ ಕಾಟವಿದೆಯಲ್ಲ ಅದು ಅನುಭವಿಸಿದವರಿಗೆ ಗೊತ್ತು, ಅವುಗಳ ದಾಳಿಯಿಂದ ತತ್ತರಿಸಿ ಹತಾಶರಾಗುತ್ತಾರೆ, ಅವುಗಳ ಕೈಗೆ ಸಿಕ್ಕಿದ್ದೆಲ್ಲ ಖಲಾಸ್!    ಮಂಗನಿಗೆ ಹಿಂಸೆ ನೀಡಿದರೆ ಶಾಪಗ್ರಸ್ತರಾಗುವ ಭಯ, ಸಿಡಿ ಮದ್ದು ಸಿಡಿಸಿದರೆ ಆ ಕ್ಷಣದಲ್ಲಿ ಪರಾರಿ ಆದರೂ ಮತ್ತೊ೦ದು ಕ್ಷಣದಲ್ಲಿ ಪ್ರತ್ಯಕ್ಷ.   ಇಂತಹ ಕಾಟ ಕೊಡುವ ಮಂಗಗಳ ಹಿಡಿಯಲು ರಿಪ್ಪನ್ ಪೇಟೆಯ ಕೃಷಿ ವಿಜ್ಞಾನಿ ಅನಂತಮೂತಿ೯ ಜವಳಿ ಒಂದು ಬೋನು ಮಾಡಿದ್ದಾರೆ ಅವರ ಪಾರಂಗೆ ನುಗ್ಗಿ ದಾಂದಲೆ ಮಾಡುವ ಮಂಗಗಳನ್ನ ಹಿಡಿದು ಆಗುಂಬೆ, ಬಾಳೆಬರೆ ಅಥವ ಹುಲಿಕಲ್ ಫಾಟಿಗಳಲ್ಲಿ ಬಿಡುತ್ತಾರೆ ಆ ಬೋನು ಮಾಡಿ ಮಂಗನ ಕಾಟದಿಂದ ಪರಿಹಾರ ಕ೦ಡುಹಿಡಿಯಲು ಆಸಕ್ತರು ಇವರನ್ನ ಬೇಟಿ ಮಾಡಿ ಮಾಹಿತಿ ಪಡೆಯಬಹುದು.   ಇವರ ವಿಳಾಸ   ಶ್ರೀ ಅನಂತ ಮೂತಿ೯ ಜವಳಿ  ಅಂಕುರ್ ನಸ೯ರಿ ರಿಪ್ಪನ್ ಪೇಟೆ ಹೊಸನಗರ ತಾII, ಶಿವಮೊಗ್ಗ ಜಿಲ್ಲೆ.

Blog number 1686. ದಂಡಿಗೆಸರದ ನಂದ್ಯಣ್ಣ ನಮ್ಮ ಕುಟುಂಬದ ಆಪ್ತರು ಅವರು ನಮ್ಮ ತಂದೆಯ ಅತ್ಯಾಪ್ತರು ಇನ್ನು ಅವರು ನೆನಪು ಮಾತ್ರ.

#ಹುಟ್ಟು_ಅನಿಶ್ಚಿತ_ಸಾವು_ನಿಶ್ಚಿತ #ನಮ್ಮ_ಕುಟುಂಬದ_ಆಪ್ತರಾದ_ದಂಡಿಗೆಸರದ_ನಂದ್ಯಣ್ಣ_ಇನ್ನಿಲ್ಲ #ಶ್ರಮಜೀವಿ_ಅಸಾಧ್ಯ_ಕೋಪ_ಆದರೆ_ಹೃದಯವಂತರು. #ನಮ್ಮ_ತಂದೆಗೆ_ಅತ್ಯಾಪ್ತರು_ನಮ್ಮ_ಮನೆಯ_ಎಲ್ಲಾ_ಕಷ್ಟ_ಸುಖದಲ್ಲಿ_ಭಾಗಿಯಾದವರು.   ಮೊನ್ನೆ ಬುಧವಾರ ನಂದ್ಯಣ್ಣರನ್ನು ನೋಡಲು ಅವರ ಊರಾದ ಸೊರಗುಂದದ ದಂಡಿಗೆಸರಕ್ಕೆ ಹೋಗಿದ್ದೆ ಅವರಿಗೆ ಪ್ರಜ್ಞೆ ಇರಲಿಲ್ಲ ಅದರ ಹಿಂದಿನ ರಾತ್ರಿ ದೀರ್ಘ ರಾತ್ರಿವರೆಗೆ ಅವರೆಲ್ಲ ಇಲ್ಲಿಗೆ ( ಘಟ್ಟಕ್ಕೆ ) ತಂದೆ ಕಾಲದಲ್ಲಿ ಬಂದದ್ದು, ಹರತಾಳಿನಲ್ಲಿ ಮೊದಲು ನೆಲೆಸಿದ್ದು ಇತ್ಯಾದಿ ಎಲ್ಲಾ ನೆನಪು ಮಾಡಿದರಂತೆ ಜೊತೆಗೆ ನಮ್ಮ ಮನೆ ವಿಚಾರ ಕೂಡ ಪ್ರಸ್ತಾಪಿಸಿದರೆಂದು ಅವರ ಪತ್ನಿ ಗಿರಿಜಕ್ಕ ಹೇಳುವಾಗ ನನಗೆ ಹಿಂದಿನ ನೆನಪುಗಳ ಚಕ್ರ ತಿರುಗಲು ಪ್ರಾರಂಭ ಆಯಿತು.   1970 ರಲ್ಲಿ ನನಗೆ 5 ವರ್ಷ ನಮ್ಮ ತಂದೆಗೆ 34 ವರ್ಷ ನಂದ್ಯಣ್ಣರಿಗೆ 24 ವರ್ಷ ಇರಬೇಕು ಅವರು ನಮ್ಮ ತಂದೆಗೆ ಅತ್ಯಾಪ್ತ ಗೆಳೆಯರು ಆಗಲೇ ನಂದ್ಯಣ್ಣ ಯಾರಿಗೂ ಹೇಳದೆ ಒಬ್ಬರೇ ಮನೆ ಬಿಟ್ಟು ಬೊಂಬಾಯಿಗೆ ಹೋದರೆಂಬ ಸುದ್ದಿ ನಮಗೆಲ್ಲ ಕಣ್ಣೀರು ತರಿಸಿತ್ತು.    ನಂದ್ಯಣ್ಣರ ತಂದೆ ಪುಟ್ಟ ಶೇರೆಗಾರರು ಮತ್ತು ಹಾದಿಬೀಸಿನ ಮೊಯಿದೀನ್ ಸಾಹೇಬರು ನಮ್ಮ ಆನಂದಪುರಂಗೆ ಯಕ್ಷಗಾನ ಬಂದಾಗ ಖಾಯಂ ಪ್ರೇಕ್ಷಕರು, ಯಕ್ಷಗಾನ ನೋಡಿ ಬೆಳಿಗ್ಗೆ ಯಡೇಹಳ್ಳಿ ವೃತ್ತದ ನಮ್ಮ ಹುಲ್ಲಿನ ಮನೆಯ ಕಟ್ಟೆ ಮೇಲೆ ಕುಳಿತು ನಮ್ಮ ತಾಯಿ ನಮ್ಮ ಅಜ್ಜಿಯ ಆದೇಶದ ಮೇಲೆ ಮಾಡಿಕೊಡುತ್ತಿದ್

Blog number 1687. ತಮಿಳು ಚಿತ್ರರಂಗದ ಸೂಪರ್ ಹಿಟ್ ನಿರ್ಮಾಪಕ ಪಿರಮಿಡ್ ನಟರಾಜರು ನನ್ನ ಅತಿಥಿಗಳಾಗಿದ್ದ ನೆನಪುಗಳು.

#ತಮಿಳು_ಚಿತ್ರರಂಗದ_ಯಶಸ್ವಿ_ನಿರ್ಮಾಪಕ_ನಟ    ಪಿರಮಿಡ್_ನಟರಾಜ್ #ಖ್ಯಾತ_ನಿಧೇ೯ಶಕ_ಕೆ_ಬಾಲಚಂದರ್_ಮತ್ತು_ಇವರ_ಜೋಡಿ_ನೀಡಿದ_ಸೂಪರ್_ಹಿಟ್_ಸಿನಿಮಾಗಳು. #ಇವರ_ತಮಿಳು_ಚಿತ್ರ_ಅವಲ್_ಒರು_ಥೋಡರ್_ಕಧ್ಯೆ_ಕನ್ನಡದಲ್ಲಿ_ಬೆಂಕಿಯಲ್ಲಿ_ಅರಳಿದ_ಹೂವು_ಸಿನಿಮಾ.  #ನನ್ನ_ಚಂಪಕಾ_ಪ್ಯಾರಾಡೈಸ್_ನಾನ್_ವೆಜ್_ರೆಸ್ಟೋರಾಂಟ್_ಪ್ರಾರಂಬಿಸಲು_ಕಾರಣಕರ್ತರು. #ನಮ್ಮ_ಹೊಂಬುಜ_ರೆಸಿಡೆನ್ಸಿ_ಲಾಡ್ಜನ_ವಿಕ್ಟೋರಿಯಾ_ಕಾಟೇಜಿನಲ್ಲಿ_ತಂಗಿದ್ದರು.    ಪಿರಮಿಡ್ ನಟರಾಜ್ ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಇವರು 1997 ರಲ್ಲಿ ಸ್ಥಾಪಿಸಿದ ಪಿರಮಿಡ್ ಎಂಟರ್ ಟೈನ್ ಮೆಂಟ್ ಲಿ. ಸಂಸ್ಥೆಯ ಪ್ರಖ್ಯಾತಿ ನಟರಾಜ್ ಹೆಸರಿಗೆ ಪಿರಮಿಡ್ ಸೇರಲು ಕಾರಣ.     ಪ್ರಖ್ಯಾತ ನಿಧೇ೯ಶಕ ಕೆ.ಬಾಲಚಂದರ್ ಜೊತೆ ಕವಿತಾಲಯ ಸಂಸ್ಥೆ ಪೋಷಕರಾಗಿ ಅನೇಕ ಯಶಸ್ಸಿಗೆ ಕಾರಣರಾದರು.   ಪಿರಮಿಡ್ ನಟರಾಜರು 60 ಕ್ಕೂ ಹೆಚ್ಚು ಚಲನ ಚಿತ್ರ ನಿರ್ಮಾಣ ಮಾಡಿದ್ದಾರೆ ಇವರ ನಿರ್ಮಾಣದಲ್ಲಿ ಕೆ.ಬಾಲಚಂದರ್ ನಿರ್ದೇಶನದಲ್ಲಿ ಸೂಪರ್ ಹಿಟ್ ಆಗಿದ್ದ ಅವಲ್ ಒರು ಥೋಡರ್ ಕಧ್ಯೆ ಸಿನಿಮಾ ಕನ್ನಡದಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಆಗಿ ಪ್ರಖ್ಯಾತಿ ಆಗಿದ್ದು ಇತಿಹಾಸ.    2015ರಲ್ಲಿ ಪಿರಮಿಡ್ ನಟರಾಜ್ ಇನ್ನೊಬ್ಬ ನಿರ್ಧೇಶಕ ವೆಂಕಟ್ ಜೊತೆ ಅನೇಕ ಭಾರಿ ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ನ ವಿಕ್ಟೋರಿಯಾ ಕಾಟೇಜಿನಲ್ಲಿ ತಂಗಿದ್ದರು ಅವಾಗ ಅವರು ತಮ್ಮ ಉಪಹಾರ ಊಟಕ್ಕೆ ನಮ್ಮ

Blog number 1685. ಸಾಗರದ ಪುರಾತನ ಗಣಪತಿ ದೇವಸ್ಥಾನದ ಬಗ್ಗೆ ಪ್ರಕಟವಾಗಿರುವ ಪುಸ್ತಕ ಶ್ರೀ ಗಣಪತಿ ದೇವಾಲಯದ ಇತಿಹಾಸ.

#ಶ್ರೀ ಗಣಪತಿ ದೇವಾಲಯದ ಇತಿಹಾಸ ಪುಸ್ತಕ  #ಸಾಗರದ ಪುರಾತನ ಗಣಪತಿ ದೇವಸ್ಥಾನದ ಅಚ೯ಕರ 4 ತಲೆಮಾರುಗಳ ಇತಿಹಾಸ ಈಗ ಪುಸ್ತಕವಾಗಿದೆ. #ಶ್ರೀಮತಿ ಸಹನಾದೀಪಕ್ ಸಾಗರ್ ಬರೆದು ಪ್ರಕಟಿಸಿದ್ದಾರೆ. #ಇವರು ಈ ದೇವಾಲಯದ ಪ್ರದಾನ ಅರ್ಚಕರ ಪುತ್ರಿ #ಸಾಗರದ ಪತ್ರಕರ್ತ ದೀಪಕ್ ಸಾಗರ್ ಪತ್ನಿ #ಈ ಪುಸ್ತಕದಲ್ಲಿ ನಾನು ಬರೆದ ಬಾರಾಪಂತ್ ಲೇಖನ ಸೇರಿಸಿದ್ದಾರೆ #ಪ್ರತಿ 12 ವರ್ಷಕ್ಕೆ ಬಾರಾಪಂತ್ ಯಾತ್ರೆ ಸಾಗರದ ಗಣಪತಿ ದೇವಸ್ಥಾನದಲ್ಲಿ ತಂಗುತ್ತದೆ.   ಎರೆಡು ವಷ೯ದ ಹಿಂದೆ ಸಾಗರದ ಪತ್ರಕತ೯ ಮಿತ್ರ ದೀಪಕ್ ಸಾಗರ್ ಪೋನಾಯಿಸಿ ಪ್ರತಿ 12 ವಷ೯ಕ್ಕೆ ಒಮ್ಮೆ ಪಶ್ಚಿಮ ಘಟ್ಟದಲ್ಲಿ ದೂರದ ನಾಸಿಕ್ ನಿಂದ ಕರಾವಳಿಯ ಮಂಗಳೂರಿನ ಕದ್ರಿಗೆ ತಲುಪುವ "ಬಾರ ಪಂಥ್ " ಯಾತ್ರೆಯ ಬಗ್ಗೆ ನಾನು ಬರೆದ ಲೇಖನ ಯಾವುದೋ ಒಂದು ಪುಸ್ತಕದಲ್ಲಿ ಬಳಸಿಕೊಳ್ಳಬಹುದಾ? ಎಂದು ಕೇಳಿದ್ದರು, ದಾರಾಳವಾಗಿ ಬಳಸಿಕೊಳ್ಳಿ ಎಂದಿದ್ದೆ ಕಾರಣ ಸುಮಾರು 34 ವಷ೯ ಸಿದ್ದಾಪುರದ ಕಮಲಶಿಲೆ ಹತ್ತಿರದ ಹಲವಾರಿ ಮಠದ ಪಟ್ಟದ ಸ್ವಾಮಿಗಳಾಗಿದ್ದ ಸೋಮನಾಥ ಬಾಬರವರು ಈ ಬಾರ ಪಂಥ ಯಾತ್ರೆ ಬಗ್ಗೆ ಹೆಚ್ಚು ಪ್ರಚಾರ ಮತ್ತು ಪ್ರಸಾರ ಮಾಡಲು ನನಗೆ ಆದೇಶಿಸಿದ್ದರು.   ನಿನ್ನೆ ಬೆಳಿಗ್ಗೆ ಪತ್ರಕತ೯ರ ದಿನಾಚಾರಣೆಯ೦ದು ದೀಪಕ್ ಸಾಗರ್ ಮತ್ತು ಅವರ ಪತ್ನಿ ಶ್ರೀಮತಿ ಸಹನಾ ಈ ಪುಸ್ತಕ ಗೌರವ ಪ್ರತಿಯಾಗಿ ನೀಡಿದರು.    *ಶ್ರೀಮಹಾಗಣಪತಿ ದೇವಾಲಯದ ಇತಿಹಾಸ* ಎಂಬ ಈ ಪ್ರಸ್ತಕ ಸಾಗರದ ಪುರಾತ

Blog number 1684. ಗೆಳೆತನಕ್ಕೆ ಸಾಕ್ಷಿ ಆದ ಯೂನಿಯನ್ ಜಾಕ್ ಅಂಬ್ರೆಲಾ ಲಂಡನ್ ನಿಂದ ಡಿ.ಪಿ. ಸತೀಶ್ ತಂದ ಉಡುಗರೆ,

https://youtu.be/dC79ok4V9mo #ಗೆಳೆತನಕ್ಕೆ_ಇಂಗ್ಲೇಂಡ್ನಿಂದ_ಬಂದ_ಉಡುಗೊರೆ. #ಯೂನಿಯನ್_ಜ್ಯಾಕ್_ಛತ್ರಿ #ಲಂಡನ್_ಶೇಕ್ಸ್_ಪಿಯರ್_ಮನೆಯಲ್ಲಿ_ಉಪನ್ಯಾಸಕ್ಕೆ_ಹೋಗಿದ್ದ #ಪತ್ರಕರ್ತ_ಡಿಪಿ_ಸತೀಶರಿಂದ.   ಗೆಳೆತನಕ್ಕೆ ಸಾಕ್ಷಿ ಆಗುವ ಇಂತಹ ಘಟನೆಗಳು ಯಾವಾಗಲೂ ಸ್ಮರಣೀಯವಾಗಿರುತ್ತದೆ ನಿನ್ನೆ ಬೆಳೆಗ್ಗೆ ವಾಟ್ಸಪ್ ನಲ್ಲಿ ದಕ್ಷಿಣ ಭಾರತದ CNN NEWS 18 ಗ್ರೂಪ್ ಎಡಿಟೋರಿಯಲ್ ಅಡ್ವೈಸರ್ ಆಗಿರುವ D.P. ಸತೀಶ್ "ನಿಮಗಾಗಿ ತಂದಿರುವ Umbrella ನೋಡಿದಿರಾ? ನಿಮಗೆ ಇಷ್ಟ ಆಯಿತಾ" ಅಂತ ಮೆಸ್ಸೇಜ್ ಮಾಡಿದ್ದರು.    ಆಫೀಸಿನ ಟೀಬಲ್ ಮೇಲೆ ಅವರ ಉಡುಗೊರೆಯಾದ ಇಂಗ್ಲೇಂಡ್ ನಿಂದ ತಂದ ಮಿನಿ ಅಂಬ್ರೆಲ್ಲಾ 3 ಪೋಲ್ಡ್ ಯುನಿಯನ್ ಜ್ಯಾಕ್ ಅಂಬ್ರೆಲ್ಲಾ ಅವರ ವಿಸಿಟಿಂಗ್ ಕಾರ್ಡ್ ಜೊತೆ ಇತ್ತು ನನ್ನ ಛತ್ರಿ ಹಾಳಾಗಿತ್ತು ಹೊಸ ಛತ್ರಿ ಖರೀದಿಸಬೇಕೆಂದಿದ್ದ ಸಂದರ್ಭದಲ್ಲೇ ಹೊಸ ಛತ್ರಿ ಉಡುಗೊರೆಯಾಗಿ ಅಲ್ಲಿತ್ತು.   ಅವರು ಅರ್ಜೆಂಟ್ ಆಗಿ ಬೆಂಗಳೂರಿಗೆ ತಲುಪಬೇಕಾದ್ದರಿಂದ ನನಗೆ ಕಾಯದೇ ನನ್ನ ಮ್ಯಾನೇಜರ್ ಗೆ ಹಸ್ತಾಂತರ ಮಾಡಿ ಕಾಫಿ ಕೂಡ ಸ್ವೀಕರಿಸದೆ ಓಡಿದ್ದಾರೆ.    UK ಯ ರಾಷ್ಟ್ರೀಯ ಧ್ವಜ ಯುನಿಯನ್ ಜಾಕ್ ಆಗಿದೆ ಅದು ಇಂಗ್ಲೇಂಡ್ ವೇಲ್ಸ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ದೇಶಗಳು ಬಳಸುತ್ತಿದೆ. ಯುನಿಯನ್ ಜ್ಯಾಕ್ ದ್ವಜ ಅನ್ನು ಒಳಗೊಂಡ 23 ದೇಶಗಳಿದೆ ಇವು ಒಂದು ಕಾಲದ ಬ್ರಿಟೀಶ್ ವಸಾಹತುಗಳು,ಕಾಮನ್ ವೆಲ್ತ್ ದೇಶಗಳ

Blog number 1683. ಶಾಸನ ರಹಿತ ಶಿಲ್ಪಗಳಾದ ಫಲವತ್ತತೆಯ ಸಂಕೇತವಾದ ಶಿವಮೊಗ್ಗ ಜಿಲ್ಲೆಯ ಸೊರಬ-ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ 15 - 16 ನೇ ಶತಮಾನದಲ್ಲಿ ನಿಮಿ೯ಸಿದ ಕೆರೆ ದಂಡೆಯಲ್ಲಿ ಮಾತ್ರ ಇರುವ ನಗ್ನ ಸ್ತ್ರೀ-ಪುರುಶ ವಿಗ್ರಹ ಇದನ್ನು ರಾತ್ರಿ ವೇಳೆ ಗುಪ್ತವಾಗಿ ಅವಿವಾಹಿತರು ಪೂಜಿಸುವ ಪದ್ಧತಿ ಇದೆ ಅಂತೆ.

#ಶಾಸನರಹಿತ_ಶಿಲ್ಪಗಳು. #ನಮ್ಮ_ಚೆನ್ನಶೆಟ್ಟಿಕೊಪ್ಪದ_ಕೆರೆದಂಡೆಯ_ನಗ್ನ_ಸ್ತ್ರೀ_ಪುರುಷ_ವಿಗ್ರಹದ_ಮಾಹಿತಿ_ನೀಡಿದ #ಇತಿಹಾಸ_ಸಂಶೋದನೆ_ಸಂರಕ್ಷಣೆ_ಮತ್ತು_ಅಧ್ಯಯನದಲ್ಲಿ_ತೊಡಗಿರುವ  #ನಿವೃತ್ತ_ಕೃಷಿ_ಅಧಿಕಾರಿ_ಹಿರೇನೆಲ್ಲೂರು_ಪಾಂಡುರಂಗ_ ಕಳಸ  #ಇವರು_ಹುಟ್ಟಿದ್ದು_ಸಾಗರ_ತಾಲ್ಲೂಕಿನಲ್ಲಿ #ಇವರ_ತಂದೆ_ಮಡಸೂರುಲಿಂಗದಳ್ಳಿ_ಮಂಗಳಬೀಸು_ಶಾಲೆಯಲ್ಲಿ_ಶಿಕ್ಷಕರಾಗಿದ್ದ. #ಹೆಚ್_ಜಿ_ರುದ್ರಪ್ಪನವರು.   ಮೊನ್ನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದ ಕೆರೆ ದಂಡೆಯ ಶಾಸನದ ಬಗ್ಗೆ ಬರೆದ ಲೇಖನ ಪೋಸ್ಟ್ ಮಾಡಿದ್ದೆ ಈ ಕ್ಷಣದವರೆಗೆ 14 ಸಾವಿರದ 554 ಜನರಿಗೆ ತಲುಪಿದೆ ಮತ್ತು ಆ ಕೆರೆ ದಂಡೆಯ ಮೇಲಿನ ನಗ್ನ ಸ್ತ್ರೀ ಪುರುಷ ವಿಗ್ರಹದ ಪೋಟೋದ ಬಗ್ಗೆ ಬಹು ಜನರು ಮಾಹಿತಿ ಕೇಳಿದ್ದರು.   ನನಗೆ ಅಷ್ಟು ಹೆಚ್ಚು ಮಾಹಿತಿ ಇಲ್ಲವಾದ್ದರಿಂದ ನಾನು ಕಳಸದ ನಿವೃತ್ತ ಕೃಷಿ ಅಧಿಕಾರಿಗಳಾದ ಹಿರೇನೆಲ್ಲೂರು ಪಾಂಡುರಂಗ ಕಳಸ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದೆ.    ಚಿಕ್ಕಮಗಳೂರು ಜಿಲ್ಲೆಯ ಹಿರೇನೆಲ್ಲೂರಿನ ಮೂಲದವರಾದ ಇವರ ತಂದೆ ಶಿಕ್ಷಕರಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಗಳಬೀಸು ಮತ್ತು ಮಡಸೂರು ಲಿಂಗದಳ್ಳಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರಂತೆ ಆದ್ದರಿಂದ ಸಾಗರ  ಪಾಂಡುರಂಗ ಅವರು ಹುಟ್ಟಿದ ಸ್ಥಳ ಸಾಗರ.    ಸಾಗರದ ಪಾಂಡುರಂಗ ದೇವರ ಹರಕೆ ಕಾರಣ ಇವರ ಹೆಸರು ಪಾಂಡು

Blog number 1682. ಈ ವರ್ಷ (2023) ಲಿಂಗನಮಕ್ಕಿ ಡ್ಯಾ೦ ಭರ್ತಿ ಆದೀತಾ? 2021 ರಲ್ಲಿ ಯಾವ ಪರಿಸ್ಥಿತಿ ಇತ್ತು.

#ಈ_ವರ್ಷ_ಲಿಂಗನಮಕ್ಕಿ_ಜಲಾಶಯ_ಭರ್ತಿ_ಆದೀತಾ? (27 ಜುಲೈ 2023) #ಜೋಗ_ಜಲಪಾತದ_ಸೆರಗಿನ_ಬರಹಗಾರ. #ಮಾವಿನಗುಂಡಿ_ಅಶೋಕ_ಹೆಗ್ಗಡೆ #ಅವರು_2021_ರ_ಈ_ದಿನ_ಬರೆದಿದ್ದ_ಲೇಖನ_ಇನ್ನೊಮ್ಮೆ #ಅವತ್ತು_7_ದಿನದ_ಮಳೆಯಲ್ಲಿ_ಲಿಂಗನಮಕ್ಕಿ_ಡ್ಯಾಂ_ಶೇಕಡಾ_70_ಭಾಗ_ತಲುಪಿತ್ತು. #ಇವತ್ತು_ಲಿಂಗನಮಕ್ಕಿ_ಶೇಕಡಾ_40_ಭಾಗದಲ್ಲಿದೆ. #ಅವತ್ತು_12_ಜುಲೈ_2021ರಲ್ಲಿ_ಶೇಕಡಾ_40_ತಲುಪಿತ್ತು    ಮಾವಿನ ಗುಂಡಿಯ ಅಶೋಕ ಹೆಗ್ಗಡೆ ಹಿಂದಿನ 80 ರ ದಶಕದಲ್ಲಿ ಅನಾನಸ್ ಹಣ್ಣಿನ ಮೌಲ್ಯವರ್ಧನೆಗೆ ತುಂಬಾ ಪ್ರಯತ್ನಿಸಿದವರು ಇವರ ಐನಕೈ (ಇದರ ಅರ್ಥ ಗೊತ್ತಿಲ್ಲ) ಎಂಬ ಬ್ರಾಂಡಿನ ಅನಾನಸ್ ಹಣ್ಣಿನ ರಸ, ಜಾಮ್ ಇತ್ಯಾದಿ ತಯಾರಿಸಿ ಮಾರಾಟ ಮತ್ತು ಇದೇ ಹೆಸರಿನ ಔಟ್ ಲೆಟ್ ಒಂದು ಮಾವಿನಗುಂಡಿಯಲ್ಲಿ ತೆರೆದಿದ್ದರು.    ಆಗ ಇವರದ್ದೊಂದೆ ಅಂಗಡಿ ಮತ್ತು ಎದುರಿನಲ್ಲಿ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮಾತ್ರ ಮಾವಿನ ಗುಂಡಿಯಲ್ಲಿತ್ತು ಅಲ್ಲಿನ ಇನ್ನೊಂದು ವಿಶೇಷ ಅಂದರೆ ಮಾವಿನಗುಂಡಿ ವೃತ್ತದಲ್ಲಿ ಸಿದ್ದಾಪುರ ರಸ್ತೆಗೆ ಹೊರಳಿದರೆ ಅಲ್ಲೊಂದು ವರ್ಷ ಪೂರ್ತಿ ನಿರಂತರವಾಗಿ ಬರುವ ಅಬ್ಬಿ ನೀರಿಗೊಂದು ಕೊಳವೆ ಅಳವಡಿಸಿದ್ದ ಸಾರ್ವಜನಿಕ ಕುಡಿಯುವ ನೀರು ಮಾತ್ರ.   ಈಗ ಅಶೋಕ ಹೆಗ್ಗಡೆ ವ್ಯವಹಾರಗಳಿಂದ ನಿವೃತ್ತರಾಗಿದ್ದಾರೆ, ಇಂಗ್ಲೀಷ್ ಭಾಷೆಯಲ್ಲಿ ಇವರ ಮಾತು ಬರವಣಿ ಆಕಷ೯ಕ, ಜೋಗ್ ಪಾಲ್ಸನ ಪ್ರವಾಸೋದ್ಯಮದಲ್ಲಿ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಬಳಸಿಕೊಳ್ಳಬಹುದು.   ಜೋಗ ಜಲ

Blog number 1680. ಡಾಕ್ಟರ್ ವಿಘ್ನೇಶರ ಮನದಾಳದ ಮಾತುಗಳು, ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಮುಖ್ಯ ಕಾರಣಕರ್ತರು.

#ಡಾಕ್ಟರ್_ವಿಘ್ನೇಶ್_ಮಂಚಾಲೆ_ಇವರ_ಮನದಾಳದ_ಮಾತುಗಳು . #ಕ್ಯಾಂಪಸ್_ಭೂಮಿ_ಗುರುತಿಸಿದ_ವಿಶೇಷಾಧಿಕಾರಿ_ಅವರು #ಈ_ಮಹತ್ಕಾರ್ಯದಲ್ಲಿ_ಅವರಿಗೆ_ಮುಕ್ತವಾಗಿ_ಮತ್ತು_ಬಹಿರಂಗವಾಗಿ_ಬೆಂಬಲಿಸಿದವರ_ನೆನೆಸಿದ್ದಾರೆ. #ಇಬ್ಬರನ್ನು_ಹೆಸರಿಸಿದ್ದಾರೆ #ಅದು_ಹಿರಿಯ_ಕಾಂಗ್ರೇಸ್_ಮುಖಂಡರಾದ_ಈಳಿ_ನಾರಾಯಣಪ್ಪನವರು. #ಇನ್ನೋಬ್ಬರು? #ನಾನಂತೆ ! #ನನ್ನ_ಕಥಾಸಂಕಲ_ಬಿಲಾಲಿ_ಬಿಲ್ಲಿಯಲ್ಲಿ_ಒಂದು_ಕಥಾ_ನಾಯಕ_ಇವರು. ಡಾ.ವಿಷ್ನೇಶ್. ಅರುಣ್ ಪ್ರಸಾದರಿಗೆ ಧನ್ಯವಾದಗಳು...    ನೀವು ಮಾತ್ರ ಪ್ರತಿ ವರ್ಷ ಕನ್ವೊಕೇಷನ್ ಹಬ್ಬದಲ್ಲಿ ನನ್ನ ನೆನಪು ಮಾಡಿಕೊಳ್ಳುತ್ತಲೇ ಇರುವಿರಿ. ನಾನು ವಿಶೇಷ ಅಧಿಕಾರಿಯಾಗಿ ಇರುವಕ್ಕಿ ಕ್ಯಾಂಪಸ್ ಮಾಡುವುದು ನನ್ನ ವೃತ್ತಿ ಜೀವನದ ಬಹು ದೊಡ್ಡ ಜವಾಬ್ದಾರಿ ಮತ್ತು ಚಾಲೆಂಜ್ ಆಗಿತ್ತು. ವರದ ಪುರದ ಮಹಾ ಯೋಗಿ ಶ್ರೀ ಶ್ರೀಧರ ಸ್ವಾಮಿಗಳ ಆಶೀರ್ವಾದದಿಂದ ಮಾತ್ರ ಇದು ಸಾಕಾರ ಆಯಿತು ಎಂದು ನಂಬಿದವನು. ನಿಮ್ಮ ಸಹಕಾರವೂ ಪ್ರಮುಖ ವಾಗಿತ್ತು. ಇದರ ಸಂಪೂರ್ಣ ದಾಖಲಾತಿಯ ವಿವರ ನಿಮಗೆ ಕೊಡುತ್ತೇನೆ. ಕಿಮ್ಮನೆ ರತ್ನಾಕರ್ ಕೂಡ ಬಹಳ ಸಹಕರಿಸಿದರು. ಮೊದಲಿಗೆ ನಾನು ಗುರುತಿಸಿದ್ದು 1300 ಎಕರೆ ಜಾಗ.ಆದರೆ ಸಿಕ್ಕಿದ್ದು 777 ಎಕರೆ ಮಾತ್ರ. ಈ ಮಹತ್ಕಾರ್ಯದಲ್ಲಿ ನನಗೆ ಮುಕ್ತವಾಗಿ ಮತ್ತು ಬಹಿರಂಗವಾಗಿ ಸಪೋರ್ಟ್ ಮಾಡಿದ್ದು ನೀವು ಮತ್ತು ಶ್ರೀ ದಿವಂಗತ ಇಳಿ ನಾರಣಪ್ಪನವರು. ಸಾಗರ ತಾಲೂಕಿನ ಪ್ರಬಲ ಸಮುದಾಯಕ್ಕೆ ಸೇರಿದವನು ಆದರೂ ಯಾರೂ ಸಪೋರ್ಟ

Blog number 1679. ಸಾಗರ ತಾಲ್ಲೂಕಿನ ಆನಂದಪುರಂ ಸಮೀಪದಲ್ಲಿ ಕೃಷಿ ವಿಶ್ವವಿದ್ಯಾಲಯ ರೂಪುಗೊಳ್ಳಲು ಕಾರಣರಾದ ಗಣ್ಯ ವ್ಯಕ್ತಿಗಳು.

#ಕೃಷಿ_ವಿಶ್ವ_ವಿದ್ಯಾಲಯದ_ಎರಡನೆ_ವಾರ್ಷಿಕೋತ್ಸವ_ಇವತ್ತು . #ಶಂಕುಸ್ಥಾಪನೆ_ಆಗುವಾಗ_ಯಡೂರಪ್ಪ_ಸಂಸದರು. #ಉದ್ಘಾಟಿಸುವಾಗ_ಮುಖ್ಯಮಂತ್ರಿಯಾಗಿ_ಕೊನೆದಿನಗಳು. #ಶಂಕುಸ್ಥಾಪನೆ_ದಿನಾಂಕ_17_ಜೂನ್_2017. #ಉದ್ಘಾಟನ_ದಿನಾಂಕ_23_ಜುಲೈ_2021. #ಯಡೂರಪ್ಪನವರಿಗೆ_ಗೌರವ_ಡಾಕ್ಟರೇಟ್_21_ಜುಲೈ_2023. #ಇರುವಕ್ಕಿ  ಇರುವಕ್ಕಿ ನಮ್ಮದೇ ಯಡೇಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ ಇದು ಒಂದು ಕಾಲದಲ್ಲಿ ಮಡಿಕೆ ತಯಾರಿಸುತ್ತಿದ್ದ ಕುಂಬಾರ ಜನಾಂಗದವರು ವಲಸೆ ಬಂದು ನೆಲೆ ನಿಂತ ದಟ್ಟ ಅರಣ್ಯ ಪ್ರದೇಶ.     #ವಿನೋಬಾ_ಬಾವೆ_ಭೂದಾನ_ಚಳವಳಿಯಲ್ಲಿ_ಭಾಗವಹಿಸಿ_ಭೂದಾನ_ಮಾಡಿದ_ಇರುವಕ್ಕಿ_ಪುಟ್ಟಶೆಟ್ಟರು       ಇಲ್ಲಿನ ಪುಟ್ಟ ಶೆಟ್ಟರೊಬ್ಬರೆ ಆ ಕಾಲದ ಕುಂಬಾರ ಸಮೂದಾಯದ ಖಾತೆ ಜಮೀನುದಾರರು ಇವರು ಆಗಿನ ವಿದ್ಯಾ ಮಂತ್ರಿ ಆಗಿದ್ದ  ಬದರಿನಾರಾಯಣ ಆಯ್ಯಂಗಾರ ತಂದೆ ಜಮೀನ್ದಾರ್, ಇನಾಂದಾರ್ ಮತ್ತು ಕೊಡುಗೈ ದಾನಿ ಆಗಿದ್ದ ರಾಮಕೃಷ್ಣ ಅಯ್ಯಂಗಾರ್ ಮತ್ತು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲ ಆಯ್ಯಂಗಾರರ ಆಪ್ತರು ಅವರೆಲ್ಲರ ಸಲಹೆ ಮತ್ತು ಸಹಕಾರದಿಂದ ಅಡಿಕೆ ಕೃಷಿ ಮಾಡುತ್ತಾರೆ.   ವಿನೋಬಾ ಭಾವೆಯವರು ಭೂದಾನ ಚಳವಳಿಗೆ ಆನಂದಪುರಂಗೆ ಬಂದಾಗ ತಮ್ಮ ಭತ್ತ ಬೆಳೆಯುವ 5 ಎಕರೆ ತರಿ ಜಮೀನು ದಾನ ಮಾಡಿದ ಮಹಾನುಭವರು ಅವರು ಆ ಕಾಲದಲ್ಲಿ ಅತ್ಯಂತ ಹಿಂದುಳಿದ ಕುಂಬಾರ ಜನಾಂಗದ ಪುಟ್ಟ ಶೆಟ್ಟರ ಭೂದಾನವನ್ನು ಅವತ್ತಿನ ಸಭೆಯಲ್ಲಿ ಸರ್ದಾರ್ ಎಣ

Blog number 1678. ಸಿದ್ದ ಸಮಾದಿ ಯೋಗ ಸಂಸ್ಥೆ 2008ರಲ್ಲಿ ನೀಡಿದ ತರಬೇತಿ, ಶ್ರಾವಣ ಮಾಸದ ಆಚರಣೆ ಮತ್ತು ಧ್ಯಾನದ ಉಪಯೋಗ

#ಶ್ರಾವಣ_ಮಾಸ_ಬಂದಾಗ. #ಈ_ವರ್ಷ_ಅಧಿಕ_ಶ್ರಾವಣದ_ಬೋನಸ್‌ #ತೂಕ_ಇಳಿಸುವವರಿಗೆ_ದೇಹ_ಡಿಟಾಕ್ಸ್_ಮಾಡುವವರಿಗೆ_ವರದಾನ. #ದ್ಯಾನ_ಸರಿಯಾಗಿ_ಗುರು_ಮೂಲಕ_ಕಲಿತು_ಅನುಭವಿಸಿದರೆ_ಮಾತ್ರ_ಅದರ_ಅನುಭವ_ಸಾಧ್ಯ.   ಪ್ರತಿ ವರ್ಷ ಶ್ರಾವಣ ಮಾಸ ಬಂದಾಗ ನಾನು ನನ್ನ ದೇಹ ಡಿಟಾಕ್ಸ್ ಮಾಡುವ ಕ್ರಮ ಪ್ರಾರಂಬಿಸುತ್ತೇನೆ ಅದಕ್ಕಾಗಿ ಶ್ರಾವಣ ಮಾಸ ಕಾಫಿ ಟೀ ಕೂಡ ಸೇವಿಸುವುದಿಲ್ಲ.   ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾಂಸಹಾರಿ ಕುಟುಂಬಗಳು ಮಾಂಸಹಾರ ತ್ಯಜಿಸುವುದು ಆ ಕುಟುಂಬದವರಿಗೆ ಇಂತಹ ಪ್ರಯೋಗ ಮಾಡಲು ಸಹಕಾರಿ.   ಮಧ್ಯಪಾನ - ದೂಮಪಾನ - ತಂಬಾಕು - ಮಾಂಸಹಾರ ಸೇವನೆ ಶ್ರಾವಣ ಪ್ರಾರಂಭದ ಹಿಂದಿನ ದಿನದ ಭೀಮನ ಅಮಾವಾಸ್ಯೆ ದಿನಕ್ಕೆ ಕೊನೆಯಾಗುತ್ತದೆ ಇದನ್ನು ಮಹಾರಾಷ್ಟ್ರದಲ್ಲಿ ಗಟಾರ ಅಮವಾಸ್ಯೆ ಎಂದು ಹಾಸ್ಯದಿಂದ ಉಲ್ಲೇಖಿಸುತ್ತಾರೆ.   ಇಡೀ ಶ್ರಾವಣ ಮಾಸ ಮಧ್ಯಪಾನ,ದೂಮಪಾನ ಮತ್ತು ಗುಟ್ಕಾ ಇತ್ಯಾದಿ ರೀತಿಯ ಚಟ ಅಥವ ಅಡಿಕ್ಷನ್ ಸ್ವಯಂ ನಿಯಂತ್ರಣಕ್ಕೆ ಕಾರಣವಾಗಲಿದೆ.   ಮಹಾರಾಷ್ಟ್ರದಲ್ಲಿ ಶ್ರಾವಣ ಮುಗಿದು ಗಣಪತಿ ಹಬ್ಬದ ತನಕ ಈ ನಿಯಮ ಮುಂದುವರಿಸುತ್ತಾರೆ.   ನನ್ನ 140 ಕಿಲೋ ದೇಹ ತೂಕ ಇಳಿಸುವ ನಿಟ್ಟಿನಲ್ಲಿ ದಿನದ ಒಂದು ಗಂಟೆ ಬೆಳಗಿನ ನಡಿಗೆ ಜೊತೆ ಸಿದ್ದ ಸಮಾದಿಯೋಗದ   ವ್ಯಾಯಾಮ, ಪ್ರಾಣಯಾಮ, ಕಪಾಲ ಬಾತಿ ಮತ್ತು ಧ್ಯಾನ, ರಾತ್ರಿ ಊಟ ತ್ಯಜಿಸಿದರ ಜೊತೆ ಶ್ರಾವಣ ಮಾಸಾಚಾರಣೆ ನನಗೆ ತುಂಬಾ ಉಪಯುಕ್ತವಾಗಿದೆ.    ಈ ವರ್ಷದ ಶ್ರಾವಣ ಅಧಿಕ ಮಾಸದ

Blog number 1677. ಈ ಎರೆಡು ಪುಸ್ತಕಕ್ಕೆ ಮುನ್ನುಡಿ ಬರೆಯುವ ಭಾಗ್ಯ ನನ್ನದು, ಇದೇ ಮೊದಲ ಮುನ್ನುಡಿ ಎ.ವಿ.ಕೃಷ್ಣ ಮೂರ್ತಿ ಅವರು ಬರೆದ ನನ್ನ ಬಾಲ್ಯ ಎಂಬ ಎರೆಡು ಪುಸ್ತಕ ಓದಿ ಅಭಿಪ್ರಾಯಿಸಿ.

#ಇವತ್ತು_ಅಂಚೆಯಲ್ಲಿ_ಬಂದ_ಎರಡು_ಪುಸ್ತಕ. #ಎ_ವಿ_ಕೃಷ್ಣಮೂರ್ತಿಯವರ_ನನ್ನ_ಬಾಲ್ಯ_ಭಾಗ_1_ಭಾಗ_2. #ಈ_ಎರಡೂ_ಪುಸ್ತಕದ_ಮುನ್ನುಡಿ_ಬರೆಯುವ_ಭಾಗ್ಯ_ನನ್ನದು. #ಲೇಖಕರ_ಮಾತುಗಳಲ್ಲಿ_ನಾನು_ಪುಸ್ತಕ_ಪ್ರಕಟನೆಗೆ_ಕಾರಣ_ಎಂದು_ದಾಖಲಿಸಿದ್ದಾರೆ. #ಒಂದು_ಪುಟ_ತೆರೆದು_ಓದಲು_ಪ್ರಾರಂಬಿಸಿದರೆ_ಎರಡೂ_ಪುಸ್ತಕ_ಮುಕ್ತಾಯ_ಮಾಡದೇ_ಇರಲಾರಿರಿ.     ನನ್ನ ಜೀವನದಲ್ಲಿ ಪುಸ್ತಕಕ್ಕೆ ಮುನ್ನುಡಿ ಬರೆದದ್ದು ಇದೇ ಮೊದಲು ಅದೂ ಎ.ವಿ.ಕೃಷ್ಣಮೂರ್ತಿ ಅವರ #ನನ್ನ_ಬಾಲ್ಯ (ಬಾಲ್ಯಕಾಲದ ನೆನಪುಗಳು) ಭಾಗ 1 ಮತ್ತು ಭಾಗ 2 ಎರೆಡೂ ಪುಸ್ತಕಕ್ಕೆ ಈ ಅವಕಾಶ ನೀಡಿದ ಎ.ವಿ.ಕೃಷ್ಣಮೂರ್ತಿ ಅವರಿಗೆ ಆಭಾರಿ.    ಅವರು ಪೇಸ್ ಬುಕ್ ನಲ್ಲಿ ಬರೆಯುತ್ತಿದ್ದ ಅವರ ಬಾಲ್ಯದ ನೆನಪುಗಳ ಪ್ರತಿ ಕಂತುಗಳನ್ನು ಓದಲು ಕಾಯುತ್ತಿದ್ದೆ ಅಷ್ಟು ಸುಂದರವಾಗಿ ತಮ್ಮ ಕಷ್ಟದ ಬಾಲ್ಯವನ್ನು ಪ್ರತಿಯೊಂದು ಊರಿನ ವಿವರದೊಂದಿಗೆ ಆ ಕಾಲದ ಎಲ್ಲಾ ಮಹನೀಯರನ್ನು ಪರಿಚಯಿಸುತ್ತಾ ಅವತ್ತಿನ ಕಾಲಮಾನದ ಕೃಷಿ, ಅಡಿಕೆಯ ತೋಟಗಳ ಗೇಣಿ ಪದ್ಧತಿ, ವಾರದ ಸಂತೆಗೆ ಮಾರಾಟಕ್ಕೆ ಒಯ್ಯುತ್ತಿದ್ದ ವೀಳ್ಯದ ಎಲೆ ಅದರ ವ್ಯಾಪಾರ ಅವತ್ತಿನ ರಸ್ತೆಗಳು, ಸಾರಿಗೆ ಸಂಪರ್ಕ ಮಾಡುವ ಬಸ್ಸುಗಳು ಹೋಟೆಲ್ ಗಳು ನೀವು ಈ ಪುಸ್ತಕ ಓದಿ ಸವಿಯ ಬೇಕು.    ಬಡತನ ಮೀರಿ ಬುದ್ದಿವಂತ ಮಕ್ಕಳು ಮುಂದೆ ಬರಲು ಸಾಧ್ಯವಿಲ್ಲದ ದಿನಗಳು ಆ ದಿನಗಳಲ್ಲೂ ಬಡ ವಿದ್ಯಾರ್ಥಿಗಳಿಗೆ ಮೋಸ ಮಾಡುವ ವ್ಯವಸ್ಥೆ ಆ ದಿನದಲ್

Blog number 1676. ಯಡ್ಯೂರಪ್ಪರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ.

#ಜಿಲ್ಲೆಯ_ಕೃಷಿ_ವಿಶ್ವವಿದ್ಯಾಲಯದಿಂದ_ಯಡ್ಯೂರಪ್ಪರಿಗೆ_ಗೌರವ_ಡಾಕ್ಟರೇಟ್_ಪ್ರದಾನ #ಆಗಿನ_ಕೃಷಿ_ಮಂತ್ರಿ_ಕೃಷ್ಣಬೈರೇಗೌಡ_17_ಜೂನ್_2017ರಂದು_ಶಂಕುಸ್ಥಾಪನೆ_ಮಾಡಿದ್ದರು. #ನಾಳೆ_21_ಜುಲೈ_2023_8ನೇ_ಘಟಿಕೋತ್ಸವ #ಇರುವಕ್ಕಿಯ_ಕೃಷಿವಿಶ್ವವಿದ್ಯಾಲಯದ_ಘಟಿಕೋತ್ಸವದ_ಅಧ್ಯಕ್ಷತೆ_ರಾಜ್ಯಪಾಲರದ್ದು #ಕೃಷಿಮಂತ್ರಿ_ಚಿಲುವರಾಯಸ್ವಾಮಿ_ಘನ_ಉಪಸ್ಥಿತಿ #ಘಟಿಕೋತ್ಸವ_ಭಾಷಣ_ದರ್ಮಸ್ಥಳ_ವೀರೇಂದ್ರ_ಹೆಗ್ಗಡೆಯವರಿಂದ. #ಕಾಗೋಡು_ತಿಮ್ಮಪ್ಪನವರಿಗೆ_ಗೌರವ_ಡಾಕ್ಟರೇಟ್_ಯಾವಾಗ?   ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂನ ನಮ್ಮ ಊರಿನ ಇರುವಕ್ಕಿಯಲ್ಲಿ ನಾಳೆ 21- ಜುಲೈ -2023 ಶುಕ್ರವಾರ ಸಂಜೆ 4 ಕ್ಕೆ 8 ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಿದ್ದಾರೆ.   ಘಟಿಕೋತ್ಸವದ ಅದ್ಯಕ್ಷತೆ ರಾಜ್ಯಪಾಲರು ವಹಿಸಲಿದ್ದಾರೆ, ಘಟಿಕೋತ್ಸವ ಭಾಷಣ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರದ್ದು.    ಕೃಷಿ ಮಂತ್ರಿ ಚೆಲುವರಾಯ ಸ್ವಾಮಿ ಘನ ಉಪಸ್ಥಿತಿ ವಹಿಸಲಿದ್ದಾರೆ.    ಶಿವಮೊಗ್ಗ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಡಾಕ್ಟರೇಟ್ ನೀಡುತ್ತಿರುವುದು ಸ್ಟಾಗತಾರ್ಹ ಇದು ರಾಜ್ಯದಾದ್ಯಂತ ಯಡೂರಪ್ಪರ ಅಭಿಮಾನಿಗಳಿಗೆ ಸಿಹಿ ಸುದ್ದಿ.   ಇದೇ ಸಂದರ್ಭದಲ್ಲಿ