Skip to main content

Posts

Showing posts from January, 2020

#ಈ ಬಸ್ ನಿಲ್ದಾಣ ಪರಿಸರ ಪ್ರೇಮಿ#

#ದಾಸವಾಳದ ಹೂವಿನ ಬಸ್ ನಿಲ್ದಾಣ ತಾಳಗುಪ್ಪ ಮತ್ತು ಸಿದ್ದಾಪುರ ಮದ್ಯದಲ್ಲಿದೆ#   ತಾಳಗುಪ್ಪದಿಂದ ಸಿಸಿ೯-ಸಿದ್ದಾಪುರ ಮಾಗ೯ದಲ್ಲಿ 10 ಕಿ.ಮಿ.ದೂರ ಸಾಗಿದರೆ ಅಕ್ಕುOಜಿಗಿ೦ತ 5 ಕಿ.ಮಿ.ಹಿಂದೆ ಎಡ ಭಾಗದಲ್ಲಿ ಒಂದು ವಿಶಿಷ್ಟ ಬಸ್ ನಿಲ್ದಾಣ ಒಂದು ಇದೆ ಅನೇಕ ವಷ೯ದಿಂದ ನೋಡುತ್ತಿದ್ದೆ ಹತ್ತಿರ ಹೋಗಿ ನಿಂತು ನೋಡಲು ಆಗಿರಲಿಲ್ಲ ಇವತ್ತು ಸಾಧ್ಯವಾಯಿತು.     ಕೆ೦ಪು ದಾಸವಾಳದ ಹೂವಿನ ಗಿಡವನ್ನ ಸುಮಾರು ಹತ್ತು ವಷ೯ದಿOದ ಜೋಪಾನ ಮಾಡಿ ಅದನ್ನ ಚಪ್ಪರದ೦ತೆ ಆಗಾಗ್ಗೆ ಪ್ರೋನಿ೦ಗ್ ಮಾಡಿ ಸುತ್ತಲೂ ಅದಕ್ಕೆ ಸಪೋಟ್೯ ಆಗಿ ದೆಬ್ಬೆಯ ಚಪ್ಪರ ಕೊಟ್ಟು  ಸುತ್ತ ಕಲ್ಲಿನ ಕಟ್ಟೆ ಕಟ್ಟಿದ್ದಾರೆ ಮತ್ತು ಮುಂದುಗಡೆ ಚಪ್ಪಡಿಕಲ್ಲಿನ ಕಟ್ಟೆ ಇದೆ.   ಬಸ್ ಗೆ ಕಾಯುವ ಜನ ಈ ಸುಂದರ ಹೂವಿನ ಚಪ್ಪರದ ಬಸ್ ನಿಲ್ದಾಣದ ನೆರಳಿನಲ್ಲಿ ವಿರಮಿಸಿದರೆ ಹಿಂಬಾಗದ ಇದರ ನೆರಳಿನಲ್ಲಿ ಮೊಟಾರ್ ಸೈಕಲ್ ಗಳ ಪಾಕಿ೯೦ಗ್ ಆಗಿದೆ.   ಈ ಪರಿಸರ ಪ್ರೇಮಿ ಬಸ್ ನಿಲ್ದಾಣದ ಕಲ್ಪನೆ, ನಿಮಾ೯ಣ ಮತ್ತು ನಿವ೯ಹಣೆ ಹಿಂಬಾಗದಲ್ಲಿನ ದಿನಸಿ ಅಂಗಡಿ ಮಾಲಿಕ ಅಣ್ಣಪ್ಪರದ್ದು.   TV ಯವರ ಕಣ್ಣಿಗೆ ಇನ್ನು ಬಿದ್ದಿಲ್ಲ, ನಿಜಕ್ಕೂ ಇವರಿಗೊಂದು ಪ್ರಶಸ್ತಿ ಕೊಡಬೇಕು ಈ ಹಳ್ಳಿಯ ಹೆಸರು ಅರೆಂದೂರು.

# ನಿರOಜನ ಕುಗ್ವೆ ನಮ್ಮ ಊರ ಜಾತ್ರೆಯಲ್ಲಿ ಮತ್ತು ನನ್ನ ಆಪೀಸಿನಲ್ಲಿ #

#ನಿರOಜನಕುಗ್ವೆ ಇವತ್ತು ನನ್ನ ಕಚೇರಿಯಲ್ಲಿ ಮತ್ತು ನಮ್ಮ ಊರ ವರಸಿದ್ಧಿ ವಿನಾಯಕ ಜಾತ್ರೆಯಲ್ಲಿ #   ಅವರು ಬರುವುದೇ ಹಾಗೆ ಸುದ್ದಿ ಇಲ್ಲದೆ ಹಾಗೇ ಇವತ್ತು ನಿರ೦ಜನ್ ಕುಗ್ವೆ ನನಗಾಗಿ ಬರೆದ ಕ್ಯಾರಿಕೇಚರ್ ಉಡುಗೊರೆ ಪ್ರೇ೦ ಹಾಕಿ ತಲುಪಿಸಿದರು ಸಂತೋಷದಿ೦ದ ಸ್ಟೀಕರಿಸಿದೆ ನನ್ನ ಆಪೀಸಿನಲ್ಲಿ ಇಟ್ಟು ಕೊಂಡಿದ್ದೇನೆ.  ಅವರಿಗೆ ಕಾಫಿಯೊ೦ದಿಗೆ ಅವರ ಹುಟ್ಟುಹಬ್ಬದ ನೆನಪಿಗಾಗಿ ಸಾಗರದ ಪ್ರಖ್ಯಾತ ಬರಹಗಾರ ಪತ್ರಕತ೯ರಾದ ಆರ್.ಟಿ. ವಿಠಲ್ ಮೂತಿ೯ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿದೆ .   ನಮ್ಮ ಊರ ವರಸಿದ್ದಿ ವಿನಾಯಕ ದೇವರ ದೇವಲಯದಲ್ಲಿ ಅವರ ಎಲ್ಲಾ ಹೋರಾಟಕ್ಕೆ ಯಶಸ್ಸು ದೊರೆಯಲಿ ಎಂದು ವಿಶೇಷ ಪೂಜೆ ಮಾಡಿ ಪ್ರಾಥಿ೯ಸಿ ಪ್ರಸಾದ ನೀಡಲಾಯಿತು.   ಪ್ರತಿ ವಷ೯ ನಡೆಯುವ ಜಾತ್ರ ರಂಗೋಲಿ ಸ್ಪದೆ೯ಯ ತೀಪು೯ಗಾರರಾಗಿ ಕಾಯ೯ ನಿವ೯ಹಿಸಿದರು ಅಲ್ಲೆಲ್ಲಾ ಇವರು ನನ್ನ ಬಗ್ಗೆ ಬರೆದ ಕಾಟೂ೯ನ್ ಬಗ್ಗೆಯೆ ಎಲ್ಲರೂ ಮಾತಾಡುತ್ತಿದ್ದದ್ದು ವಿಶೇಷ.   ನಮ್ಮ ಊರ ಜಾತ್ರೆಗೆ ಬಂದು ಭಾಗವಹಿಸಿದ ಕುಗ್ವೆ ನಿರಂಜನರಿಗೆ ಕೃತಜ್ಞತೆಗಳು.

#ಶೃ೦ಗೇಶ್ ರಾಜ್ಯ ಮತ್ತು ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಅಚ್ಚಳಿಯದ ಹೆಸರು#

#ಶೃ೦ಗೇಶ್ ಸಂಪಾದಕತ್ವದ ಜನ ಹೋರಾಟಕ್ಕೆ ಇವತ್ತಿಗೆ 15 ನೇ ವಾಷಿ೯ಕೋತ್ಸವ #      ಶೃ೦ಗೇಶ್ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಒಂದು ಹೊಸ ಆಯಮ ತಂದವರು.     ಶೃ೦ಗೇಶ್ ಪರಿಚಯ ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗಿ೦ದ ಪ್ರಾರಂಭವಾದದ್ದು ಇಲ್ಲಿ ತನಕ ಮುಂದುವರಿದು ಕೊಂಡು ಬಂದಿದೆ.      ಅವರು ಶಿವಮೊಗ್ಗದ ಕ್ರಾಂತಿ ದೀಪ ಪತ್ರಿಕೆಯಲ್ಲಿ ವರದಿಗಾರರಾಗಿದ್ದಾಗ ಅವರ ಮೇಲಿನ ಹಲ್ಲೆ ಆದಾಗ ಅವರನ್ನೆಲ್ಲ ನಂಜಪ್ಪ ಆಸ್ಪತ್ರೆಗೆ ಸೇರಿಸಿದ್ದಾರೆಂದಾಗ ನಾವೆಲ್ಲ ಜಿಲ್ಲಾ ಪಂಚಾಯತ್ ಕಚೇರಿಯಿಂದ ಅಲ್ಲಿಗೆ ಹೋಗಿದ್ದೆವು.        ಮರುದಿನ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯಲ್ಲಿ ಬಾಗಿಯಾದ ನೆನಪು ಹಸಿರಾಗಿದೆ.       ರವಿ ಬೆಳೆಗೆರೆ ಸಾರಥ್ಯದ ಹಾಯ್ ಬೆಂಗಳೂರಲ್ಲಿ ಇವರ ತನಿಖಾ ವರದಿಗಳು ಓದಲು ರೋಮಾಂಚನ ಉಂಟು ಮಾಡುತ್ತಿತ್ತು, ಇಂತಹ ವರದಿಗಳಿಂದ ಇವರಿಗೆ ರೋವಿಂಗ್ ರಿಪೋಟ೯ರ್ ಎಂಬ ಬಿರುದನ್ನ ರವಿ ಬೆಳೆಗೆರೆಯವರೆ ನೀಡಿದ್ದಾರೆ.       ನಮ್ಮ ನಾಡು ಪತ್ರಿಕೆಯ ಸಂಪಾದಕರಾಗಿ ಜಿಲ್ಲೆಯ ಪತ್ರಿಕೋದ್ಯಮದಲ್ಲಿ ಹೊಸತನ ತಂದವರು ಕಾಲಾ೦ತರದಲ್ಲಿ ತಮ್ಮ ಸ್ವಂತ ಪತ್ರಿಕೆ ಜನ ಹೋರಾಟ ಪ್ರಾರ೦ಬಿಸಿ 15ನೇ ವಷ೯ಕ್ಕೆ ಕಾಲಿಟ್ಟಿದ್ದಾರೆ.     ಅನೇಕ ಜನಪರ ಹೋರಾಟಗಳಿಗೆ ಧ್ವನಿಯಾಗಲು ಹೋಗಿ ಅನೇಕ ತೊಂದರೆ ಅನುಭವಿಸಿದ್ದಾರೆ, ನ್ಯಾಯದ ಪರವಾಗಿ ಇರುವವರಿಗೆ ಗೆಳೆಯರಾಗಿ ತಪ್ಪು ಮಾಡುವವರ

#ಪ್ರಖ್ಯಾತ ಕಾಟೂ೯ನಿಸ್ಟ ಕುಗ್ವೆ ನಿರ೦ಜನರ ಕೈಚಳಕದಲ್ಲಿ ನನ್ನ ಕ್ಯಾರಿಕೇಚರ್#

#ನಿರ೦ಜನಕುಗ್ವೆ ಕಾಟೂ೯ನಿಸ್ಟ್, ಹೋರಾಟಗಾರ, ಶಿಕ್ಷಕ ಮತ್ತು ಕೃಷಿಕರು ಇವರು ಅಭಿಮಾನ ಪೂವ೯ಕವಾಗಿ ನನ್ನ ಕ್ಯಾರಿಕೇಚರ್ ಉಡುಗೊರೆ ಇವತ್ತು ನೀಡಿದ್ದಾರೆ#   ಉದಯೋನ್ಮುಖ ಚಿತ್ರಕಾರರಾದ  ಸಾಗರ ತಾಲ್ಲೂಕಿನ ಕುಗ್ವೆಯವರು ಶಿಕ್ಷಕರಾಗಿ ಸಕಾ೯ರಿ ಸೇವೆಯಲ್ಲಿದ್ದಾರೆ ಇವರು ಇವರ ಸಮಾಜದ ಮಠಾದೀಷರ ಅನೈತಿಕ ವತ೯ನೆಯನ್ನ ತಮ್ಮ ಕುಂಚದಲ್ಲಿ ಮೊನಚಾಗಿ ವ್ಯಂಗ್ಯ ಚಿತ್ರವಾಗಿಸುತ್ತಿದ್ದರಿಂದ ಇವರನ್ನ ಅನೇಕ ತೊಂದರೆಗೆ ಗುರಿಪಡಿಸಿದ್ದರು ಆದರೂ ಇವರು ತಮ್ಮ ಹೋರಾಟಕ್ಕೆ ಬೆನ್ನು ತೋರಿಸಲಿಲ್ಲ ಆಗ ಎಲ್ಲರ ವಿರುದ್ದವಿತ್ತು ಈಗ ಸತ್ಯಾಂಶ ಗೊತ್ತಾಗಿ ಇವರಿಗೆ ಜನಬೆಂಬಲ ಹೆಚ್ಚಾಗಿದೆ.  ನಾನು ಇವರ ಕಲೆಗೆ ಅಭಿಮಾನಿ, ಇವರ ಹೋರಾಟಕ್ಕೆ ಬೆಂಬಲಿಗ ಇವರು ಮುಂದಿನ ದಿನದಲ್ಲಿ ರಾಜ್ಯದ ಪ್ರಖ್ಯಾತ ಕಲಾವಿದರಾಗುವ ದಿನ ದೂರವಿಲ್ಲ ಪ್ರಖ್ಯಾತ ಚಿತ್ರಕಾರ ಪಂಜುಗOಗೋಲಿ ಕೂಡ ಇವರ ಅಥ೯ಗಬಿ೯ತ ಸಾಂದಭಿ೯ಕ ಚಿತ್ರಗಳನ್ನ ಅಭಿನಂದಿಸಿದ್ದಾರೆ.   ಇವತ್ತು ಇವರು ನೀಡಿದ ಉಡುಗೊರೆ ಸಂತೋಷದಿಂದ ಸ್ವೀಕರಿಸಿದ್ದೇನೆ, ನನ್ನ ಕಚೇರಿಯಲ್ಲಿ ನಿರಂಜನರ ಸವಿ ನೆನಪಿನೊಂದಿಗೆ ಇಟ್ಟುಕೊಳ್ಳುತ್ತೇನೆ.

#ಕಾಗಿ೯ಲ್ ನ ದೇಶ ಪ್ರೇಮಿ ಮೊಹಮದ್ ಆಲೀ ಅಕ್ಬರ್ ನಮ್ಮ ಅತಿಥಿ #

    ಮೊಹಮದ್ ಆಲೀ ಅಕ್ಬರ್ ಕಾಗಿ೯ಲ್ ನಿವಾಸಿ ಇವತ್ತು ನಮ್ಮ ಅತಿಥಿ ಇವರು ಮಹಾನ್ ದೇಶ ಪ್ರೇಮಿ ಇವರ ಕುಟುಂಬ ಸಮಾಜ ಸೇವೆಯಲ್ಲಿ ಮು೦ದೆ ದೇಶದ ರಕ್ಷಣಾ ಇಲಾಖೆಗೆ ಇವರು ತುಂಬಾ ಸಹಾಯ ಮಾಡುತ್ತಾರೆ ಇವರ ಮಾವನಿಗೆ ಕ್ಯಾನ್ಸರ್ ಎಲ್ಲಾ ಕಡೆ ಚಿಕಿತ್ಸೆ ಮಾಡಿದರೂ ಪ್ರಯೋಜನ ಆಗಿಲ್ಲ ಹಾಗಾಗಿ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಆಯುವೆ೯ದ ಪಂಡಿತರಾದ ನರಸೀಪುರ ನಾರಾಯಣ ಮೂತಿ೯ ಜಾಷದಿಗಾಗಿ ಬರುತ್ತಿದ್ದಾರೆ ಆದರೆ ಆದನ್ನೆಲ್ಲ ಅವರು ಹೇಳಿಕೊಳ್ಳುವುದಿಲ್ಲ       ಅವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕಾಗಿ ಕಾಗಿ೯ಲ್ ಆಮಿ೯ ಬೇಸ್ ನಿಂದ ಬಂದ ಕರೆಯOತೆ ಇವರ ಕುಟುಂಬವನ್ನ ನಮ್ಮ ಲಾಡ್ಜ್ ನಲ್ಲಿ ಉಳಿಸಿ ವೈದ್ಯರನ್ನ ಬೇಟಿ ಮಾಡಿಸಿ ಔಷದಿ ಕೊಡಿಸಿ ವಿದಾಯ ಮಾಡಿದೆ.    ಇವರ ತಂದೆ ಕಾಗಿ೯ಲ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ದೊಡ್ಡ ಕೊಡುಗೆ ನೀಡಿದವರು ಇವರ ಪ್ರಯತ್ನದಿಂದ ಇಡೀ ಜಿಲ್ಲೆ 75% ಅಕ್ಷರಸ್ಥರಾಗಿದ್ದಾರೆ, ಬಂದ ಪ್ರಶಸ್ತಿಗಳನ್ನ ನಯವಾಗಿ ನಿರಾಕರಿಸಿದವರು ಅವರು ಒಪ್ಪಿದ್ದರೆ ಶಾಸಕ ಸಂಸದರಾಗ ಬಹುದಿತ್ತು ಅವರು ಅದನ್ನೆಲ್ಲ ಬಯಸದೆ ಕಿಂಗ್ ಮೇಕರ್ ಆಗಿದ್ದರು ಅಂತ ಅಕ್ಬರ್ ವಿವರಿಸಿದರು.   ಸ್ಥಳಿಯರ ಸಹಕಾರ ಇಲ್ಲದೆ ಕಾಗಿ೯ಲ್ ಯುದ್ಧ ಗೆಲ್ಲಲಾಗುತ್ತಿರಲಿಲ್ಲ ಅಂತ ಅವತ್ತಿನ ಮುಂಚೂಣಿ ಸೇನಾ ಅಧಿಕಾರಿಗಳ ಹೇಳಿಕೆ 1999ರಲ್ಲಿ ನೆನಪಿತ್ತು ಇದನ್ನ ಪ್ರಸ್ತಾಪಿಸಿದಾಗ ಅವರು ಹೇಳಿದ್ದು ಕಾಗಿ೯ಲ್ ನಲ್ಲಿ 85% ಮುಸ್ಲಿ೦ ಇದ್ದಾರೆ ಅವರೆಲ್ಲ ಶಿಯಾ ಪಂಥದವರ

#ರಾಷ್ಟ್ರಿಯ ಸಂತ ಜಂಗಲ್ ವಾಲೆ ಬಾಬರು ನಮ್ಮಲ್ಲಿ ತಂಗಿದ್ದರು #

#ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರ ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ನಿನ್ನೆ ಶನಿವಾರದಿಂದ (12 ಅಕ್ಟೋಬರ್ 2019) ದಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದೇಹ ತ್ಯಾಗ ಮಾಡಿದ್ದಾರೆ#.   ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮಾಡಿದ್ದು ನನ್ನ ಸೌಬಾಗ್ಯ ಮತ್ತು ಪೂವ೯ಜನ್ಮದ ಪುಣ್ಯ ಎಂದು ಬಾವಿಸುತ್ತೇನೆ ಇವರ ಬಗ್ಗೆ ನಾನು ಬರೆದ ಬ್ಲಾಗ್ ಲೇಖನ ಯಥಾವತ್ತು ಇಲ್ಲಿ ಹಾಕಿದ್ದೇನೆ.  ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಅಂತ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.     ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಾರೆ.       ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ

ಚಿತ್ರಸಿರಿ ಶಿರವಂತೆ ಮಲೆನಾಡ ಕಲಾಕೇ೦ದ್ರ

#ಶಿರವಂತೆಚಂದ್ರಶೇಖರ್ ರ ಚಿತ್ರ ಸಿರಿ ಎಂಬ ಮಲೆನಾಡಿನ ಕಲಾ ಕೇಂದ್ರ# ಅನೇಕ ಬಾರಿ ಇಲ್ಲಿಗೆ ಬೇಟಿ ನೀಡಬೇಕೆಂದಿದ್ದರೂ ಆಗಿರಲಿಲ್ಲ ಮೊನ್ನೆ ಸಿರಸಿಗೆ ಹೋಗುವಾಗಲೇ ವಾಪಾಸ್ ಬರುವಾಗ ಇಲ್ಲಿ ಬೇಟಿ ಮಾಡುವ ವಿದಾ೯ರ ಮಾಡಿದ್ದೆ.   ಚಂದ್ರಶೇಖರ್ ಮತ್ತು ಅವರ ಪತ್ನಿ ಗೌರಮ್ಮ ಹಸೆ ಚಿತ್ತಾರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.    ಇಲ್ಲಿ ಇವರು ಭತ್ತದ ತೆನೆಯಿ೦ದ ಮಾಡುವ ತೋರಣ ಅತಿ ಸುಂದರ 40-50 ವಷ೯ದ ಹಿಂದೆ ಇದು ಮಲೆನಾಡಿನ ಪ್ರತಿ  ಕೃಷಿಕರ ಮನೆಯಲ್ಲಿ ಸುಗ್ಗಿಯ ಮೊದಲು ಹಸಿ ಕಾಳು ಕಟ್ಟಿದ ಭತ್ತದ ತೆನೆ ಆಯ್ದು ಸುಂದರ ತೋರಣ ಮಾಡಿ ಮನೆಯ ಮುಂಬಾಗಿಲಿಗೆ ಹಾಕುತ್ತಿದ್ದರು, ಭತ್ತದ ತೆನೆಯ ತೋರಣ ಮನೆಯ ಒಳ ಹೊರಗುವವರ ತಲೆಗೆ ಸ್ಪಷ೯ವಾಗುತ್ತಿದ್ದರೆ ಅದು ಆ ಕುಟು೦ಬಕ್ಕೆ ಸಮೃದ್ಧಿ ಉoಟು ಮಾಡುತ್ತದೆ ಎಂಬ ನಂಬಿಕೆ ಇದೆ ಅ೦ತ ಚಂದ್ರಶೇಖರ್ ಹೇಳುತ್ತಿದ್ದರು.   ಇವರು ಸ್ವತಃ ತಯಾರಿಸುವ ಆಯುವೆ೯ದದ ಕಾಷಾಯ ಅದಕ್ಕೆ ಜೇನುತುಪ್ಪ ಮಿಶ್ರ ಮಾಡಿ ಕುಡಿಯಲು ಇವರು ನೀಡಿದ್ದರು ಅದರ ರುಚಿ ಅದ್ಬುತ.    ಭತ್ತದ ತೆನೆಯ ತೋರಣ, ಹಸೆ ಚಿತ್ರ ಬಿಡಿಸಿದ ಪೆನ್ ಸ್ಟ್ಯಾ೦ಡ್, ಕಷಾಯದ ಪುಡಿ ಖರೀದಿಸಿದೆ.   ಜೋಗ ಮತ್ತು ಸಾಗರದ ಮಧ್ಯೆ ಶಿರವಂತೆ ಯಲ್ಲಿ ಇವರ ಔಟ್ ಲೆಟ್ ಇದೆ ಈ ಮಾಗ೯ದಲ್ಲಿ ಹೋಗುವಾಗ ಇಲ್ಲಿ ಒಮ್ಮೆ ಬೇಟಿ ಮಾಡಿ. ಅವರ ಸೆಲ್ ನಂಬರ್ 9449698979

#ಚಂಪಕ ರಾಣಿ ಕಾದ೦ಬರಿಯಲ್ಲಿ ರಂಗೋಲಿ #

#ರOಗೋಲಿ ಏನಿದರ ಮಹತ್ವ?#  ನಾನು ಬರೆದಿರುವ ಸದ್ಯದಲ್ಲೇ ಪ್ರಕಟ ಆಗಲಿರುವ ಕೆಳದಿ ರಾಣಿ ಚಂಪಕಾ ಪುಸ್ತಕದಲ್ಲಿ ಚಂಪಕಾ ರಂಗೋಲಿ ಪ್ರವೀಣೆ, ರಾಜ ವೆಂಕಟಪ್ಪ ನಾಯಕರು ಅವಳು ಬಿಡಿಸುವ ರಂಗೋಲಿ ನೋಡಿಯೇ ಅವಳ ಮೇಲೆ ವ್ಯಾಮೋಹಗೊ೦ಡು ವಿವಾಹ ಆಗುತ್ತಾರೆ.   ಈ ಕಾದಂಬರಿಯಲ್ಲಿ....   "ಚಂಪಕಾಳ ರಂಗೋಲಿಯಲ್ಲಿ ಅದೆಂತಹ ಆಕಷ೯ಣೆ ಇದೆ"  ರಂಗೋಲಿಯ ಬಗ್ಗೆ ಆಸ್ಥಾನದ ಪಂಡಿತರ ಹತ್ತಿರ ಒಮ್ಮೆ ಚಚಿ೯ಸಿದಾಗ ಅವರು ಹೇಳಿದ್ದು ಅರುಣೋದಯದಲ್ಲಿ ಲಲನೆಯರು ತಮ್ಮ ಮನೆಯಂಗಳದಲ್ಲಿ ವಿವಿದ ರೀತಿಯ ರಂಗೋಲಿಯನ್ನ ರಚಿಸುವುದು ಭಾರತೀಯ ಸಂಸ್ಕೃತಿಯ ಒಂದು ಪ್ರಾಚೀನ ಸಂಪ್ರದಾಯವಾಗಿದೆ.ರಂಗೋಲಿಯು ಶಿಲ್ಪ ಕಲೆಗೂ ಆದಾರವಾಗಿತ್ತೆ೦ದು ತಿಳಿದು ಬಂದಿದೆ, ದೇವಾಲಯಗಳಲ್ಲಿ ದಾಮಿ೯ಕ ವಿಧಿ ವಿಧಾನಗಳಲ್ಲಿ ರಂಗೋಲಿ ಬಿಡಿಸುತ್ತಾರೆ.ಇದರಲ್ಲಿ ನಾನಾ ರೀತಿಯ ಕೋನಗಳು, ಆಕೃತಿಗಳು, ಆಯತಗಳು, ಮಂಡಲಗಳು ಇದೆ. ಸಮೂಹ ಚುಕ್ಕಿಗಳನ್ನ ಹಾಕಿ ಅದಕ್ಕೆ ರೇಖೆಗಳನ್ನ ಕೂಡಿಸಿ ಪ್ರಮಾಣಬದ್ಧವಾದ ರಂಗೋಲಿ ಹಾಕಿದರೆ ಮಾತ್ರ ರಂಗೋಲಿ ಸುಂದರವಾಗುತ್ತದೆ. ರಂಗೋಲಿಯಲ್ಲಿ ಆಧಿಕೃತ ಅಳತೆಗಳಿದೆ, ಈ ಕಲೆಯ ಪ್ರಾಚೀನತೆ ನಿಖರವಾಗಿ ತಿಳಿದಿಲ್ಲ, ವಿನ್ಯಾಸಗಳಂತೂ ಲೆಖ್ಖಕ್ಕೆ ಸಿಗುವುದಿಲ್ಲ.   ರಂಗೋಲಿಯು ದೇವರನ್ನ ಒಲಿಸಿಕೊಳ್ಳುವ ಒಂದು ಆರಾದನಾ ಸಂಪ್ರದಾಯವೂ ಆಗಿದೆ, ಬಣ್ಣ ಬಣ್ಣದ ಹಿಟ್ಟುಗಳಿ೦ದ, ಕಲ್ಲಿನ ಪುಡಿಗಳಿಂದ ರಂಗೋಲಿಯನ್ನ ರಂಗು ರOಗಾಗಿಸುವ ಕಲೆ ಹೆಣ್ಣು ಮಕ್ಕಳು ಕಲಿತಿದ್ದಾರೆ,

# ಆ ಕಾಲದಲ್ಲಿ ಮರ ಕಡಿಯಲು ನಿಧಿ೯ಷ್ಟ ಜನರಿದ್ದರು ಅವರಿಗೆ ನಿಯಮಗಳಿದ್ದವು ಅವರು ವನದೇವಿ ಆರಾದಕರು ಅವರೇ ಗಂಜಿಯವರು#

#ಗಂಜಿಯವರು# ಮರ ಮಟ್ಟುಗಳನ್ನ ಕಾಡಿನಿ೦ದ ಕಡಿದು ಉಪಯೋಗಕ್ಕೆ ಬೇಕಾದ ಆಕಾರರಕ್ಕೆ ಕೊಯ್ಯುವ ಕೆಲಸ ಮಾಡುವವರಿಗೆ ಗಂಜಿಯವರು ಎನ್ನುತ್ತಾರೆ ಅವರೆಲ್ಲರ ಹೆಸರಿನ ಮುಂದೆ ಗಂಜಿ ಬರುತ್ತದೆ ಉದಾಹರಣೆಗೆ ಅವರಲ್ಲಿ ಗಣಪ ಎಂಬ ಹೆಸರಿದ್ದರೆ ಅವರು ಗಂಜಿ ಗಣಪ ಅಂತ.      ಇವರು ವನದೇವಿಯ ಭಕ್ತರು, ಬೇಕಾದ ಸೂಕ್ತ ಮರ ಆಯ್ಕೆ ಮಾಡಿದ ಮೇಲೆ ಸುತ್ತ ಮುತ್ತ ಯಾವುದೇ ದೇವಾಲಯವಿದ್ದರೆ ಆ ಮರ ಕಡಿಯುವುದಿಲ್ಲ, ಶಕುನಗಳನ್ನ ಹೆಚ್ಚು ನಂಬುತ್ತಾರೆ, ಎಲ್ಲವೂ ಸರಿಯಾದ ಮರ ಆಯ್ಕೆ ಮಾಡಿದ ಮೇಲೆ ಯಾರಿಗೆ ಆ ಮರ ಬಳಕೆ ಆಗುತ್ತದೆ ಆ ಮನೆಯ ಯಜಮಾನನಿOದ ಮೊದಲ ಕೊಡಲಿ ಕಚ್ಚು ಹಾಕಿಸುತ್ತಾರೆ ಯಾಕೆಂದರೆ ಆ ಮರದಲ್ಲಿ ಯಾವುದೇ ಅಗೋಚರ ಶಕ್ತಿ ಇದ್ದರೆ ಗಂಜಿಯವರಿಗೆ ಬಾಧಿಸದಿರಲಿ ಎಂದು ಮರ ಕಡಿದ ಪಾಪ ತಮಗೆ ತಟ್ಟಬಾರದು ಎಂಬುದು ಅವರ ಉದ್ದೇಶ.   ಬೇಕಾಬಿಟ್ಟ ಕಾಡು ಕಡಿಯುವವರು ಇವರಲ್ಲ, ನೂರು ಮರ ಇದ್ದರೆ ಅದರಲ್ಲಿ ಒಂದು ಮರ ಮಾತ್ರ ಇವರ ಆಯ್ಕೆ.   ಇವರುಗಳು ಪಶ್ಚಿಮ ಘಟ್ಟ ಮತ್ತು ಕರಾವಳಿ ಅಂಚಿನ ಬೈಂದೂರು, ಭಟ್ಕಳ, ಗೇರುಸೊಪ್ಪೆ, ಕುಮಟಾದಲ್ಲಿ ಹೆಚ್ಚಾಗಿ ಇದ್ದಾರೆ.   ಇದೇ ರೀತಿ ಕಾಸರಗೋಡು, ಕುಂಬಳೆ, ಬೇಕಲ್ ನ ಮಲೆಯಾಳಿ ಮರ ಕೊಯ್ಯುವವರಿದ್ದಾರೆ ಆದರೆ ಅವರಿಗೆ ಗಂಜಿಯವರ೦ತೆ ನಿಯಮ ಇಲ್ಲ.   ಇದು ನಾನು ಬರೆದು ಪ್ರಕಟನೆ ಹಂತದಲ್ಲಿ ರುವ ಕೆಳದಿ ರಾಣಿ ಚOಪಕಾ ಕಾದ೦ಬರಿಯಲ್ಲಿ ಆ ಕಾಲದಲ್ಲಿ ಮಲೆನಾಡಿನಲ್ಲಿ ಮನೆ ಕಟ್ಟುವವರಿಗೆ ಕಾಡಿನಿಂದ ಮರ ಕಡಿದು ಮರ ಮಟ್ಟು ತಯಾರಿಸ

# ಸಾಗರದ ಜನಪರ ಹೋರಾಟದಲ್ಲಿ ಇವತ್ತೂ ಮುಂಚೂಣಿಯಲ್ಲಿರುವ ಜನ ನಾಯಕರು#

#ಜನರಿಗಾಗಿ ಹೋರಾಡುವ ಈ ಇಬ್ಬರು ಅಭಿನಂದನೀಯರು#   ಶಿವಾನಂದ ಕುಗ್ವೆ ಸಾಗರ ತಾಲ್ಲೂಕಿನಲ್ಲಿ ನಿಜ ಜನತಂತ್ರದ ಪರವಾಗಿ ತಮ್ಮ ಜೀವ ಸವೆಸಿದವರು ದಲಿತ ಸಂಘಷ೯ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪರ ನಿಕಟವತಿ೯ಗಳು .      ರೈತ ಹೋರಾಟದ ಹೆಸರಿಂದನೇ ಜನ ಗುರುತಿಸುವ ವಸಂತ ಕುಮಾರ್ ಪ್ರೋ ನಂಜುಂಡ ಸ್ವಾಮಿಯವರ ನಿಕಟವತಿ೯ಗಳು.  ಇವರಿಬ್ಬರೂ ಜನಪರ ಹೋರಾಟದಲ್ಲಿ ಇನ್ನೂ ನಂಬಿಕೆಯಿ೦ದ ಹೋರಾಟ ನಿರ೦ತರ ನಡೆಸುತ್ತಿದ್ದಾರೆ ಇವತ್ತು ಸಾಗರದಲ್ಲಿ ದಿನಾಂಕ 15 ಜನವರಿ 2020 ರಂದ ಒಂದು ಕಾಯ೯ಕ್ರಮದ ಆಮಂತ್ರಣ ನೀಡಲು ಬಂದಿ    ಆವರ ಉತ್ಸಾಹ ನೋಡಿ ನನಗೆ ಖಷಿ ಆಯಿತು.   ಅನೇಕ ವಷ೯ದ ಗೆಳೆತನ ನೆನಪಾಯಿತು.

#ರಾಜಕಾರಣದ ಹೊಸ ಪ್ರಯೋಗ ಸೋತ ಕಾಗೋಡು ಕೈ ಹಿಡಿದು ಗೌರವಿಸುವ ಗೆದ್ದ ಹರತಾಳು ಹಾಲಪ್ಪ#

#ಹರತಾಳುಕಾಗೋಡು ಜುಗಲ್ಬ೦ದಿ, ಹಾಲಪ್ಪರ ಜಾಣ ನಡೆ ಹತಾಷ ಕಾ೦ಗ್ರೇಸ್ ಕಾಯ೯ಕತ೯ರು#   ಇಡೀ ರಾಜ್ಯದಲ್ಲೇ ಬಹುಶಃ ವಿಧಾನ ಸಭೆಗೆ ಪರಸ್ಪರ ಸ್ಪದಿ೯ಸಿದ ಸೋತವರೂ ಗೆದ್ದವರೂ ಈ ರೀತಿ ಸಾಮರಸ್ಯದಲ್ಲಿ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಅಂತ ನನ್ನ ಅಂದಾಜು.   ಸೊರಬದಲ್ಲಿ ಕುಮಾರ್ ಮತ್ತು ಮದು, ತೀಥ೯ಹಳ್ಳಿಯಲ್ಲಿ ಜ್ಞಾನೆಂದ್ರ ಮತ್ತು ಕಿಮ್ಮನೆ, ಭದ್ರಾವತಿಯಲ್ಲಿ ಸಂಗಮೇಶ್ ಮತ್ತು ಅಪ್ಪಾಜಿಗೌಡರು, ಶಿವಮೊಗ್ಗದಲ್ಲಿ ಈಶ್ವರಪ್ಪ ಮತ್ತು ಪ್ರಸನ್ನ ಕುಮಾರ್,  ಶಿಕಾರಿಪುರದಲ್ಲಿ ಯಡೂರಪ್ಪ ಮತ್ತು ಗೋಣಿ ಮಾಲ್ತೇಶ್, ಶಿವಮೊಗ್ಗ ಗ್ರಾಮಾಂತರದಲ್ಲಿ ಅಶೋಕ ನಾಯಕ ಮತ್ತು ಶಾರದಾ ಪೂಯ೯ ನಾಯಕ್ ರ ಜಟಾಪಟಿ ಮತ್ತು ಆಯಾ ಪಕ್ಷದ ಕಾಯ೯ಕತ೯ರು ಹಾವು ಮುಂಗುಸಿಯ೦ತೆ ಇದ್ದಾರೆ.   ಆದರೆ ಸಾಗರದ ಶಾಸಕರಾಗಿರುವ ಹರತಾಳು ಹಾಲಪ್ಪ ತಾವು ಸೋಲಿಸಿದ ಕಾಂಗ್ರೇಸ್ ನ ಮಂತ್ರಿ ಕಾಗೋಡು ತಿಮ್ಮಪ್ಪ ರ ಜೊತೆ ಗೆಳೆತನ ಬೆಳೆಸಿದ್ದಾರೆ, ಪರಸ್ಪರ ವೇದಿಕೆಯಲ್ಲಿ ಅವರವರ ಪಕ್ಷದ ಹಿತ ಕಾಪಾಡುವ ಮಾತು ವತ೯ನೆ ಕಡಿಮೆ ಏನು ಆಗಿಲ್ಲ.   ಮತದಾರರಿಗೆ ಇವರಿಬ್ಬರ ಈ ಸಂಬಂದ ಆದಶ೯ವಾಗಿ ಕಂಡು ಬಂದರೂ ಬಿಜೆಪಿ ಮತ್ತು ಕಾಂಗ್ರೇಸ್ ಕಾಯ೯ಕತ೯ರಿಗೆ ಇದು ಬಿಸಿ ತುಪ್ಪ ಆಗಿದೆ ನುOಗಲು ಆಗುತ್ತಿಲ್ಲ ಉಗಳಲು ಸಾಧ್ಯವಿಲ್ಲ.    ಹಾಲಿ ಶಾಸಕರಾದ ಹಾಲಪ್ಪರಿಗೆ ಇದರಿಂದ ಲಾಭವೇ ಹೊರತು ನಷ್ಟವಿಲ್ಲ ಆದರೆ ಕಾಗೋಡರ ಕಾಂಗ್ರೇಸ್ ಪಕ್ಷಕ್ಕೆ ನಷ್ಟವಲ್ಲದೆ ಬೇರೆ ಏನೂ

#HOSAGUNDA UMA MAHESHWARA TEMPLE PREVIOUSLY IT WAS KALLESHWARA TEMPLE #

The village Hosagunda in Anandapuram hobli is quite well known in Sagara Taluk. The reason it came to limelight was Hedatri Mallappa Gowda. When Linganamakki dam was built against the river Sharavati, many villages including Hedatri submerged in water. Sri Mallappa Gowda's family shifted to Hosagunda from Hedatri. It was a wealthy family, people used to tell various stories about their richness. Malappa Gowda foresaw the needs for the future generations. A public well for drinking water was dug and a school was constructed. The school was inaugurated by the then chief minister Sri Nijalingappa. This shows the prestigious social status Sri Mallappa Gowda enjoyed. After him, his son Sri *Hedatri Nagaraja Gowda* lead the same dignified social life like his father. Nagaraja Gowda used to say that there was a temple in the forests of Hosagunda. They were not aware of it for many years. That stone temple was constructed on a human constructed soil mound. Later archaeological

#ಯಡೂರಪ್ಪರOತ ಇನ್ನೊಬ್ಬರು ಬಿಜೆಪಿಯಲ್ಲಿ ಕಾಣಲು ಸಾಧ್ಯವೇ?#

#ಯಡಿಯೂರಪ್ಪ ತರದವರು ಬಿಜೆಪಿಯಲ್ಲಿ ಮು೦ದಿನ ದಿನದಲ್ಲಿ ಇರಲು ಸಾಧ್ಯವಿಲ್ಲ#    ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಸಮಾವೇಶ ಶೃ೦ಗೇರಿಯಲ್ಲಿ ಜಿಲ್ಲಾ ಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸಿ.ಟಿ.ರವಿಯವರ ಎಲ್ಲಾ ರೀತಿಯ ಬೆದರಿಕೆ ಒತ್ತಡಗಳನ್ನ ಎದುರಿಸಿಯೂ ಪ್ರಾರಂಭ ಆಗಿದೆ.     ಸಕಾ೯ರದ ಹಸ್ತಕ್ಷೇಪ ಇಲ್ಲದೆ ನಾಡು ನುಡಿಯ ಅಕ್ಷರ ಜಾತ್ರೆಯನ್ನ ಸಾಹಿತ್ಯ ಪರಿಷತ್ ನಡೆಸಿಕೊಂಡ ಇತಿಹಾಸವನ್ನ ಬಿಜೆಪಿ ಮಂತ್ರಿ ಮುರಿದಿದ್ದಾರೆ ಕಲ್ಕುಳಿ ವಿಠಲ ಹೆಗ್ಡೆಯನ್ನ ವೈಯಕ್ತಿಕವಾಗಿ ವಿರೋದಿಸಲು ಹೋಗಿ ಬಿಜೆಪಿ ಪಕ್ಷಕ್ಕೆ ಕೆಟ್ಟ ಇಮೇಜ್ ತಂದಿದ್ದಾರೆ ಮತ್ತು ಬಿಜೆಪಿ ವಿರೋದಿ ಶಕ್ತಿಗಳಿಗೆ ಹೆಚ್ಚಿನ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.   ಇವತ್ತು ನಮ್ಮ ಜಿಲ್ಲೆಯ ಯಡೂರಪ್ಪನವರು ಮುಖ್ಯಮಂತ್ರಿ, ಅವರ ಇವತ್ತಿನ ತನಕದ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಯಾವುದೇ ಕಪ್ಪು ಚುಕ್ಕೆ ಉoಟು ಮಾಡುವ ಘಟನೆಗೆ ಆಸ್ಪದ ನೀಡಲಿಲ್ಲ, ಕಳೆದ ಅವದಿಯಲ್ಲಿ ಇವರು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ವರೇ ಆದ ಸಾಹಿತಿ ನಾ.ಡಿಸೋಜ ಇವರನ್ನ ಎಲ್ಲಾ ರೀತಿಯಿಂದಲೂ ವಿರೋದಿಸುತ್ತಿದ್ದರು ಆದರೆ ಒಮ್ಮೆಯೂ ಯಡೂರಪ್ಪ ತಮ್ಮ ಅಧಿಕಾರ ದುಬ೯ಳಕೆ ಮಾಡಲಿಲ್ಲ ಅವರ ಕಾಯ೯ಕ್ರಮ ತಡೆಯಲಿಲ್ಲ.   1980 ರಲ್ಲಿ ಆನಂದಪುರಕ್ಕೆ ಆಗಾಗ್ಗೆ ಕುಮಧ್ವತಿ ಬಸ್ ನಲ್ಲಿ ಬಂದು ಅವತ್ತಿನ ದಿನದಲ್ಲಿ ಆನಂದಪುರದ ಬಿಜೆಪಿ ತ್ರಿಮೂತಿ೯ಗಳಾಗಿದ್ದ ಗ

#ಕಲಸಿ ಸ್ವಾಮಿಗಳು ನಿಜ ಸಾದಕ ಯೋಗಿಗಳು,ಖೇಚರೀಯೋಗಿ ವಿದ್ಯೆ ಪಡೆದವರು #

ಖೇಚರೀಯೋಗಿ .  ****************************************************    ಎಲ್ಲವನ್ನು ತ್ಯಜಿಸಿ ನಿಸ್ಪೃಹರಾಗಿ ಬದುಕುವುದು ಸುಲಭದ  ಮಾತಲ್ಲ . ಅದು ಒಂದು ಮಹಾ ಸಾಧನೆ. ಅದೆಷ್ಟೋ ಸನ್ಯಾಸಿಗಳಿಗೆ ಯೋಗ ಮಾರ್ಗದ ದಿಗ್ದರ್ಶನ ಮಾಡಿದ ಮಹಾತ್ಮರು ಇವರು.  ಬಾಡಿಹೋದ ಜೀವನಗಳಿಗೆ ಹೊಸ ಸ್ಫೂರ್ತಿ  ತುಂಬಿ ನವ ಜೀವನದ ಮಹಾದ್ವಾರವನ್ನು ತೆರೆದುಕೊಟ್ಟ ದಿವ್ಯಪುರುಷರು..! ಕುಬ್ಜ ದೇಹ ..  ಯೋಗಸಾಧನೆಯಿಂದಲೇ ಸೊರಗಿಹೋದ ಶರೀರ… ತೀಕ್ಷ್ಣ ಕಣ್ ದೃಷ್ಟಿ..  ನೇರ ಮಾತು.. ಸದಾ ಸಾಧನೆ… ಇದೇ ಅವರ ಪೂರ್ಣವ್ಯಕ್ತಿತ್ವದ ಕಿರು ಚಿತ್ರಣ.          ನಾನು ಹೇಳ ಹೊರಟಿದ್ದು, ಖೇಚರೀ ಯೋಗಿಗಳೂ ಎಂದೇ ಲೋಕವಿಖ್ಯಾತರಾಗಿದ್ದ ಪೂಜ್ಯ ನೃಸಿಂಹಾನಂದ ಸರಸ್ವತೀ ಸ್ವಾಮಿಗಳ ಕುರಿತು. 'ಕಲಸೀ ಸ್ವಾಮಿಗಳೂ' ಎಂದೇ ಪ್ರಸಿದ್ದರಾಗಿದ್ದ ಇವರು ಜನಿಸಿದ್ದು ಉತ್ತರಕನ್ನಡದ ಬನವಾಸಿಯಲ್ಲಿ 1912ರ  ಮಾರ್ಚ್ 20 ರಂದು. ಇವರ ಬಾಲ್ಯದ ಹೆಸರು ಚಿದಂಬರ. ಬಾಲ್ಯದಿಂದಲೇ ತಂದೆಯನ್ನು ಕಳೆದುಕೊಂಡ ಚಿದಂಬರ ದಾಯಾದಿಗಳ ಕಲಹದಿಂದ ಮನನೊಂದು ಅದೊಂದು ದಿನ ಕಾಲಭೈರವನ ದರ್ಶನಕ್ಕೆ ಯಾಣಕ್ಕೆ ಹೋದನಂತೆ. ಅಲ್ಲಿ ಆತನಿಗೆ ದೊರಕಿದ ಶ್ರೀದರ ಸ್ವಾಮಿಗಳ ದಿವ್ಯಾಶೀರ್ವಾದ ಮಹಾ ಯೋಗಿಯಾಗುವುದಕ್ಕೆ ಭದ್ರ ಬುನಾದಿಯನ್ನೇ ನಿರ್ಮಿಸಿತ್ತು.       ಶಾಲೆ ಬಿಟ್ಟು ಮನೆಗಾಗಿ ದುಡಿಯಲು ಆರಂಬಿಸಿದ ಚಿದಂಬರರು.. ಮನೆಯನ್ನು ಬಿಟ್ಟು ಮಾರ್ಗದರ್ಶನ ನೀಡುವ ಗುರುಗಳಿಗಾಗಿ ಅದೆಷ್ಟು ಪುಣ

#ಇನ್ನೂ ಎಂಥಹ ಸಾಕ್ಷಿ ಬೇಕು ಈತ ಕಾವಿ ತೊಟ್ಟ ಕಾಮಿ#

ತೂ... ಇನ್ನೂ ಎಂಥಹ ಸಾಕ್ಷಿ ಬೇಕು ಈತ ಸಂನ್ಯಾಸಿ ಅಲ್ಲ, ಕಾವಿ ವಸ್ತ್ರದಲ್ಲಿರುವ ಕಾಮುಕ, ಯಾವ ಜಾತಿಗೆ ಮಠಾದೀಶ ಆಗಿದ್ದಾರೋ ಆ ಜಾತಿಯ ಜನರ ಉದ್ದಾರ ಮಾಡಬೇಕಾಗಿದ್ದವರು ಆ ಜಾತೀಯ ಕನ್ಯರನ್ನು ರಾಜಾರೋಷ್ ಆಗಿ ತನ್ನ ಲೈoಗಿಕ ಸುಖಕ್ಕೆ ಬಳಸಿಕೊಳ್ಳುತ್ತಿರುವುದು ಅದಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡುವ ಆ ಸಮಾಜದ ಪ್ರಮುಖರ ಸಮಿತಿಗಳು ಇದನ್ನ ವಿರೋದಿಸದ, ಪ್ರತಿಭಟಿಸದ ಆದರೆ ಯಾರು ಇದನ್ನ ಬಹಿರಂಗ ಪಡಿಸುತ್ತಾರೋ ಅವರನ್ನ ವಿರೋದಿಸುವ ಈ ಬುದ್ಧಿವಂತ ಸಮಾಜದ ಯುವ ಶಕ್ತಿ ಇದನ್ನೆಲ್ಲ ನೋಡಿದರೆ ಹಣ ಆಸ್ತಿಗಾಗಿ ಯಾವುದೊ ಮಾಫಿಯಾ ಇದೆಲ್ಲ ನಿವ೯ಹಿಸುತ್ತಿದಿಯಾ ಅಥವ ಮಠಾಧೀಶರ ಕುಟು೦ಬದ ಉಸ್ತುವಾರಿಯಲ್ಲಿಯೇ ನಡೆಯುತ್ತಿದೆಯೋ? ಅನುಮಾನ ಇದೆ.   ದೇವಾಲಯದಲ್ಲಿ, ಸನ್ಯಾಸಿ ಮಠದಲ್ಲಿ ರಾಜಾರೋಷ್ ಆಗಿ ಅನಾಚಾರ, ಅತ್ಯಾಚಾರ ಗಳಿಗೆ ಈ ಪರಿಯ ವ್ಯವಸ್ಥೆ ಮತ್ತು ಮಧ್ಯರಾತ್ರಿ ಮಠಾದೀಶನ ಹಾಸಿಗೆ ಸೇರುವ ಬಿಸಿ ಕಾಮದ ಹೆಣ್ಣುಗಳ ಸಾಲು ಅವರ ಜೊತೆ ರಾತ್ರಿ ಪೂರ ಬರಪೂರ ಪೋನ್ ಸಲ್ಲಾಪ ಬಾಕಿ ಇರುವ ರೇಪ್ ಕೇಸ್, ಇಂತಹ ನೀಚ ಗುಣದವರಿಗೆ ಹೆಚ್ಚಿನ ಅನ್ಯಾಯ ಅನೈತಿಕ ಕೆಲಸಕ್ಕೆ ಹೆಚ್ಚು ಆದಾಯ ನೀಡುವ ಗೋಕಣ೯ ದಾರೆ ಎರೆದುಕೊಟ್ಟ ಸಕಾ೯ರ ಹೀಗೆ ಯಾರು ಇಲ್ಲಿ ರಾಕ್ಷಸರೋ ಆ ರಾಕ್ಷಸನ ಅನಾಚಾರ ಪೋಷಿಸುವ ಎಲ್ಲರೂ ಅನಾಚಾರಿಗಳೇ ಆಗಿದ್ದಾರೆ.   ಇದಕ್ಕೆ ಕೊನೆ ಇಲ್ಲವೇ? ದೇವರು ನ್ಯಾಯವಿಳಂಬ ಮಾಡಿದಷ್ಟು ಈ ಬುದ್ಧಿವಂತ ಜನಾಂಗ ಎಂಬ ಹೆಸರಿಗೆ ಕಳಂಕವಲ್ಲವೆ? ಆದ

#ಹೊಸಗುಂದದ ಕಲ್ಲೇಶ್ವರ ದೇವಸ್ಥಾನಕ್ಕೆ ಅಂಟಿಕೊಂಡು ಬೆಳೆದ ನೀರಟ್ಟಿ ಮರ ತೆಗೆದ ಕಥೆ ಈಗ ಅದು ಉಮಾಮಹೇಶ್ವರ ದೇವಸ್ಥಾನ#

ಹೊಸಗು೦ದದ ಕಲ್ಲೇಶ್ವರ ದೇವಸ್ಥಾನದ ಮರದ ಕಥೆ '            ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯ ಹೊಸಗುಂದ ಎಂದರೆ ತುಂಬಾ ಪ್ರಸಿದ್ದಿಯ ಹಳ್ಳಿ ಈ ಗ್ರಾಮಕ್ಕೆ ಪ್ರಸಿದ್ದಿಬರಲು ಕಾರಣ ಶರಾವತಿ ನದಿಗೆ ಜೋಗ ಜಲಪಾತದ ಲಿಂಗನಮಕ್ಕಿ ಎಂಬಲ್ಲಿ ಆಣೆಕಟ್ಟು ಕಟ್ಟಿ ಜಲ ವಿದ್ಯುತ್ ಯೋಜನೆ ಪ್ರಾರಂಬಿಸಿದ್ದರಿಂದ ಹೆಡತ್ರಿ ಎಂಬ ಊರು ಕೂಡ ಮುಳುಗಡೆ ಆಯಿತು, ಆ ಊರಿನ ಶ್ರೀಮಂತ ದೊಡ್ಡ ರೈತ ಕುಟು೦ಬವಾದ ಹೆಡ ತ್ರಿ ಮಲ್ಲಪಗೌಡರ ಕುಟುಂಬ ಇಲ್ಲಿಗೆ ವಲಸೆ ಬಂತು. ಆ ಕಾಲದಲ್ಲೇ ಜೀಪು, ಟ್ರಾಕ್ಟರ್ ಮತ್ತು ಬುಲೆಟ್ ಬೈಕ್ ಇದ್ದ ಈ ಕುಟು೦ಬಕ್ಕೆ ಸಕಾ೯ರ ನೀಡಿದ ಪರಿಹಾರ ಇಡೀ ಜೀಪಲ್ಲಿ ತುಂಬಿಸಿದರೂ ಮತ್ತೂ ಉಳಿದಿತ್ತು ಅಂತ ಅವರ ಶ್ರೀಮಂತಿಗೆ ವಣ೯ನೆ ಮಾಡುತ್ತಿದ್ದರು ಜನ.        ಮಲ್ಲಪ್ಪ ಗೌಡರು ದೂರದೃಷ್ಟಿ ಇದ್ದ೦ತಹ ವ್ಯಕ್ತಿ ಆದ್ದರಿಂದ ಹೊಸಗುಂದಕ್ಕೆ ಬಂದವರೆ ಸಾವ೯ಜನಿಕರಿಗಾಗಿ ಕುಡಿಯುವ ನೀರಿನ ಬಾವಿ ಮತ್ತು ಶಾಲೆ ಒಂದನ್ನ ನಿಮಿ೯ಸಿ ಅದರ ಉದ್ಘಾಟನೆಯನ್ನ ಆ ಕಾಲದ ಜನಪ್ರಿಯ ಮುಖ್ಯ ಮಂತ್ರಿ ನಿಜಲಿಂಗಪ್ಪರನ್ನ ಕರೆಸಿ ಮಾಡಿಸಿದ್ದರೆಂದರೆ ಅವರ ಘನತೆ ಅಥ೯ವಾದೀತು.         ಅವರ ನಂತರ ಅವರ ಮಗ ಹೆಡ ತ್ರಿ ನಾಗರಾಜ ಗೌಡರು ಅವರ೦ತೆ ಜನ ಬಳಕೆ, ಸಂಸ್ಕಾರ ಮತ್ತು ಗೌರವಯುತ ಜೀವನ ನಡೆಸಿದರು, ಅವರು ಹೇಳುವಂತೆ ಮುಳುಗಡೆಯಿ೦ದ ಬ೦ದ ಕೆಲ ವಷ೯ ಹೊಸಗುಂದದ ಕಾಡಲ್ಲಿದ್ದ ದೇವಸ್ಥಾನ ಅವರ ಕುಟು೦ಬಕೆ ಗೊತ್ತೆ ಇರಲಿಲ್ಲ, ಆ ದೇವಸ್ಥಾನ ದಟ್ಟ