Blog number 1958. ಅಸ್ತಂಗತರಾದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿ ಬರೆದ ಕಾದಂಬರಿ ಸಿನಿಮಾ ಮಾಡಿದ ಕೋಣಂದೂರು ವೆಂಕಪ್ಪ ಗೌಡರು ... ಈ ಕಥೆಯ ನಿಜ ಕಥಾ ನಾಯಕ ನಮ್ಮ ಊರಿನ ಹಯಾತ್ ಸಾಹೇಬರು,
#ಖ್ಯಾತ_ಸಾಹಿತಿ_ಕೆಟಿ_ಗಟ್ಟಿ_ಇಹಲೋಕ_ಯಾತ್ರೆ_ಮುಗಿಸಿದ್ದಾರೆ #ಅವರ_ಕಾರ್ಮುಗಿಲು_ಕಾದಂಬರಿ_ಸಿನಿಮಾ_ಆಗಿದೆ #ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲುಕಿನ_ರಾಮಚಂದ್ರಪುರ_ಮಠದಲ್ಲಿ_ನಡೆದ_ಸತ್ಯಕಥೆ #ಆ_ಕಾಲದಲ್ಲಿ_ದಾರಾವಾಹಿಯಂತೆ_ಇದು_ಪ್ರಜಾವಾಣಿಯಲ್ಲಿ_ಸುದ್ದಿಯಾಗಿತ್ತು #ಈ_ಘಟನೆ_ಆದರಿಸಿ_ಕೆ_ಟಿ_ಗಟ್ಟಿ_ಪ್ರಜಾವಾಣಿ_ದೀಪಾವಳಿ_ವಿಶೇಷಾಂಕದ #ಕಥಾ_ಸ್ಪದೆಗೆ_ಬರೆದ_ಕಥೆ_ಅವರಿಗೆ_ಪ್ರಥಮ_ಬಹುಮಾನ_ತಂದಿತ್ತು #ನಮ್ಮ_ಜಿಲ್ಲೆಯ_ಖ್ಯಾತ_ಸಮಾಜವಾದಿ_ಲೇಖಕ_ಕೋಣಂದೂರು_ವೆಂಕಪ್ಪಗೌಡರು #ಇದನ್ನು_ಸಿನೆಮಾ_ಮಾಡಿದ್ದರು #ಅವತ್ತು_ರಾತ್ರಿ_ಕಾರ್ಮುಗಿಲು_ಕಾದಂಬರಿಯ_ನಿಜ_ಕಥಾನಾಯಕನನ್ನ_ಅವರಿಗೆ_ಬೇಟಿ_ಮಾಡಿಸಿದ್ದೆ. ನನ್ನ ಬಾಲ್ಯದ ನೆನಪು ಬಹುಶಃ 1972-73 ನಾನು ಎರಡನೆ ತರಗತಿ ಓದುವಾಗ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠದಲ್ಲಿ ನಡೆದ ಒಂದು ಘಟನೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಕಂತುಗಳಾಗಿ ಸುದ್ದಿ ಪ್ರಕಟವಾಗುತ್ತಿತ್ತು. ಇದು ಆ ಕಾಲದ ವೈರಲ್ ಸುದ್ದಿ, ನಮ್ಮ ಹಳ್ಳಿಗೆ ನಮ್ಮ ಮನೆಗೆ ಮಾತ್ರ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಆದ್ದರಿಂದ ಈ ಸುದ್ದಿ ಓದಲು ಅನೇಕರು ನಮ್ಮ ಮನೆಗೆ ಬರುತ್ತಿದ್ದರು, ಓದಿ ಚರ್ಚಿಸುತ್ತಿದ್ದರು. ಸಂಜೆ ನಂತರ ಈ ಪತ್ರಿಕೆ ನನ್ನ ತಾಯಿ ಮತ್ತು ಅವರ ಗೆಳತಿಯರ ನಡುವೆ ಚರ್ಚಾ ವೇದಿಕೆ ಆಗುತ್ತಿತ್ತು. ಅದೇನೆಂದರೆ ಈ ಮಠದಲ್ಲಿ ಆನೆ ಕುದುರೆಗಳ ಸಾಕಲು ...