ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರರಾಣಿ ಚಂಪಕ (ಕೆಳದಿಯ ಖ್ಯಾತ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕಾ ರಾಣಿ ದುರಂತ ಪ್ರೇಮ ಕಥೆ ) ಇದು ಇತಿಹಾಸವನ್ನಾಧರಿಸಿದ ಕಾಲ್ಪನಿಕ ಕಾದ೦ಬರಿ ಸುಮಾರು 10 ವರ್ಷದ ಹಿಂದೆ ಮುದ್ರಿಸ ಬೇಕಾದ ಈ ಕಾದಂಬರಿ ಇವತ್ತು ಮಿತ್ರರಾದ ಹಾಯ್ ಬೆಂಗಳೂರು ವರದಿಗಾರ ಮತ್ತು ಶಿವಮೊಗ್ಗದ ಜನ ಹೋರಾಟ ಪತ್ರಿಕೆ ಸಂಪಾದಕರಾದ ಶೃಂಗೇಶ್ ರ ಸಹಕಾರದಿಂದ ಪ್ರಿಂಟ್ ಆಗಿ ರಕ್ಷಾ ಬಂದನದ ದಿನ ನನ್ನ ಕೈ ತಲುಪಿದೆ. ನನ್ನ ಹಲವು ಅವತಾರ ನೋಡಿರುವ ಅವರದ್ದೇ ಸುಂದರ ಮುನ್ನುಡಿ ಇದೆ. ಈ ಪುಸ್ತಕ ಆನಂದಪುರದ #ಮುರುಘರಾಜೇಂದ್ರ_ಸ್ವಾಮೀಜಿಗಳಿಗೆ, #ಆನಂದಪುರದ_ಕನ್ನಡ_ಸಂಘಕ್ಕೆ, #ಆನಂದಪುರದ_ಇತಿಹಾಸ_ಉಳಿಸಿ_ಅಭಿಯಾನ_ಸಮಿತಿಗೆ ಮತ್ತು #ಆನಂದಪುರದ_ಈಜು_ಮಿತ್ರರ_ಬಳಗಕ್ಕೆ_ಅಪಿ೯ಸಿದ್ದೇನೆ. ಇದು ಆನಂದಪುರದ್ದೇ ಇತಿಹಾಸ ಮತ್ತು ಆನಂದಪುರದಲ್ಲೇ ಇರುವ ಚಂಪಕ ರಾಣಿ ಸ್ಮಾರಕದ ಕಥೆ ಆಗಿದೆ. ಕೆಳದಿಯಿಂದ ಕೇರಳದ ಬೇಕಲ್ ವರೆಗೆ ಕೆಳದಿ ರಾಜ್ಯದ ಆಡಳಿತ, ಅವರ ಅವಧಿಯಲ್ಲಿ ನಿಮಿ೯ಸಿದ ಕೋಟೆ ಕೊತ್ತಳ, ದೇವಾಲಯ ಆ ಕಾಲದ ರೀತಿ ನೀತಿ ರಿವಾಜು, ಕೋಟಿ ಕಟ್ಟಿ ಕೋಟೆ ನಿವ೯ಹಿಸುವ ಕೋಟೆಗಾರ ಸಮಾಜ, ಕೊಡಚಾದ್ರಿಯ ತುದಿಯ ಮೂಲ ಮುಕಾಂಬಿಕೆಯ ಅಚ೯ಕರಾದ ಬಳೆಗಾರರು, ಪ್ರತಿ 12 ...