Skip to main content

Posts

Showing posts with the label Horses are dumping in Malenadu village for horse surviving.

Blog number 1758. ಎಲ್ಲಿಂದಾ?...ಯಾರು?...ಯಾಕೆ? ...ಹಳ್ಳಿಗಳಿಗೆ ಕುದುರೆಗಳನ್ನ ತಂದು ಬಿಡುತ್ತಿದ್ದಾರೆ?....

#ಕುದುರೆ_ಸಾಕುವವರಿಲ್ಲ #ಜಟಕಾಗಾಡಿ_ಟಾಂಗಾ_ಸಾರೋಟು_ಕಾಲ_ಮುಗಿಯಿತು. #ಅಶ್ವದಳ_ಈಗ_ಪ್ರದರ್ಶನಕ್ಕೆ_ಮಾತ್ರ #ಕುದುರೆ_ಹೊಟ್ಟೆಗೆ_ಹಾಕಲಾಗದವರು_ಹಳ್ಳಿಗಳಿಗೆ_ಕುದುರೆ_ತಂದು_ಬಿಡುತ್ತಿದ್ದಾರೆ #ಬಿಡಾಡಿ_ಕುದುರೆ_ಸಾಕುವವರೂ_ಹಳ್ಳಿಗಳಲ್ಲಿ_ಇದ್ದಾರೆ. #ಕುದುರೆಗಳು_ಆ_ಕಾಲದಲ್ಲಿ_ಬೆಂಜ್_ಕಾರಿದ್ದಂತೆ. #ಕ್ರಿಸ್ತಪೂರ್ವ_ನಾಲ್ಕು_ಸಾವಿರ_ವಷ೯ದಿಂದ_ಕುದುರೆ_ಬಳಕೆಯಲ್ಲಿತ್ತು.   ಆನಂದಪುರಂ ಇತಿಹಾಸದಲ್ಲಿ ಬರುವ ಆನಂದಪುರಂನ ಸುಂಕದ ಮನೆತನದ ಚಿರುಡ ಶೆಟ್ಟರು 1916 ರಿಂದ 1932ರವರೆಗೆ ವಕೀಲರಾಗಿದ್ದರು ಅವರೇ ನಮ್ಮ ಊರಿನ ಪ್ರಥಮ ವಕೀಲರು, ಆಗ ಆನಂದಪುರಂನ ಬ್ರಿಟೀಶ್ ಬಂಗ್ಲೆ ತಾಲ್ಲೂಕಿನ ಮೊದಲ ನ್ಯಾಯಾಲಯ ಆಗಿತ್ತು ಆಗ ಚಿರುಡ ಶೆಟ್ಟರು ಬಳಸುತ್ತಿದ್ದ ಕುದುರೆ ಉತ್ಕೃಷ್ಟ ತಳಿಯದಂತೆ.     ಆ ಕಾಲದಲ್ಲಿ ಸಂಚಾರಕ್ಕೆ ಕುದುರೆ ಬಳಕೆಯಲ್ಲಿದ್ದ ಕಾಲ ಬಹುಶಃ ಈಗಿನ ಇಷಾರಾಮಿ ಕಾರಿನಂತೆ ಶ್ರೀಮಂತರು ಮತ್ತು ದೊಡ್ಡ ಅಧಿಕಾರಿಗಳಿಗೆ ಮಾತ್ರ ಕುದುರೆ ಖರೀದಿಸುವ ಶಕ್ತಿ ಇದ್ದ ಕಾಲ.    1950ರ ತನಕ ಕುದುರೆ ಸವಾರಿಗೆ ಬಳಸುತ್ತಿದ್ದರಂತೆ ನಂತರ ಸೈಕಲ್ -ಬೈಕ್ -ಕಾರು - ರಿಕ್ಷಾಗಳಿಂದ ಕುದುರೆ ಬಳಕೆ ನಿ೦ತು ಹೋಯಿತು.   ಜಟಕಾ ಬಂಡಿ, ಟಾಂಗಾ ಎಂಬ ಜನ ಸಾಮಾನ್ಯರ ಸಾರಿಗೆ ಆಗಿದ್ದ ಕುದುರೆ ಗಾಡಿ ಸವಾರಿ ಈಗ ಇಲ್ಲವೇ ಇಲ್ಲ.   ರಾಜರ ಕಾಲದಲ್ಲಿ ಸೈನ್ಯದಲ್ಲಿ ಅಶ್ವದಳ ಒಂದು ಪ್ರಮುಖ ಸೇನಾ...