Skip to main content

4127.ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?... ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.


ಜೋಗ್_ಜಲಪಾತದ_ಹತ್ತಿರ_ಚೈನಾ_ಗೇಟ್?...

  ಇದು ಹೇಗೆ ಸಾಧ್ಯ ಎನ್ನುತ್ತೀರಾ.. ಹಾಗಾದರೆ ಈ ಲೇಖನ ಪೂರ್ಣ ಓದಿ.

  ಶಿವಮೊಗ್ಗ ಮಾರ್ಗದಿಂದ ಜೋಗ್ ಫಾಲ್ಸ್ ನೋಡಲು ಬರುವ ಪ್ರವಾಸಿಗಳು ಸಾಗರದ ನಂತರ ತಾಳಗುಪ್ಪಗೆ ಹೋದರೆ ಅಲ್ಲಿಂದ ಜೋಗ್ ಜಲಪಾತಕ್ಕೆ ಎರೆಡು ಮಾರ್ಗಗಳಿದೆ ಒಂದು ಕಾರ್ಗಲ್ ಮೂಲಕ ಇನ್ನೊಂದು ಹೊನ್ನಾವರ ಮಾರ್ಗದಲ್ಲಿ ಸಾಗಿ ನೇರವಾಗಿ ಜೋಗ್ ಫಾಲ್ಸ್ ಗೆ ಹೋಗುವುದು.

  ನೀವೇನಾದರು ತಾಳಗುಪ್ಪದಿಂದ ಕಾರ್ಗಲ್ ಮಾರ್ಗವಾಗಿ ಸಾಗಿದರೆ ಈ ಜೈನಾ ಗೇಟ್ ಮೂಲಕವೇ ಹೋಗುತ್ತೀರಿ.

  ಪ್ರಾಜೆಕ್ಟ್ ಅಧಿಕೃತ ದಾಖಲೆಯಲ್ಲಿ ಈ ಹೆಸರು ಇಲ್ಲ ಆದರೆ ಜನರ ಬಾಯಲ್ಲಿ ಈ ಪ್ರದೇಶ ಚೈನಾ ಗೇಟ್ ಅಂತಾಗಿದೆ.

ಇಲಾಖಾ ಉದ್ಯೋಗಿಗಳ ಪ್ರಕಾರ
ಇಲ್ಲಿಂದ ಮಹಾತ್ಮಾಗಾಂಧಿ ಪವರ್ ಪ್ಲಾಂಟಿಗೆ ನೀರನ್ನು
ಕಾಲುವೆಗೆ ಬಿಡುವ ಗೇಟ್ ಜೈನ್ ಪುಲ್ಲಿಯಿಂದ ಆಪರೇಟ್ ಆಗುವುದರಿಂದ #ಚೈನ್_ಗೇಟ್ ಎಂಬ ಹೆಸರೇ ಈಗಾ ಚೈನಾ ಗೇಟ್ ಆಗಿದೆ ಅಂತಾರೆ.

 ಲಿಂಗನಮಕ್ಕಿ ಮೂಲ ನಿವಾಸಿಗಳ ಪ್ರಕಾರ
#ಲಿಂಗನಮಕ್ಕಿ ಪ್ರಾಜೆಕ್ಟ್ ಕಾರ್ಮಿಕರಿಗೆ ಸೈನಸ್ ಗ್ಯಾಸ್ ಚೆಂಬರ್ ಮೂಲಕ ಪ್ರಾಜೆಕ್ಟ್ ಪ್ರದೇಶಕ್ಕೆ ಪ್ರವೇಶ ಇದ್ದಿದ್ದರಿಂದ ಈ ಹೆಸರು ಬಂದಿರಬಹುದು ಅನ್ನುತ್ತಾರೆ.

     ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆಗಾಗಿ ಮಡೇನೂರು ಅಥವ ಹಿರೇ ಭಾಸ್ಕರ ಡ್ಯಾಮ್ ನಿರ್ಮಾಣ ಮಾಡಿದಾಗ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್ಗಳನ್ನು ಅಳವಡಿಸಲಾಯಿತು.

  ಇಲ್ಲಿಂದ ಶರಾವತಿ ನೀರು ಕಾಲುವೆ ಮುಖಾಂತರ ಫೋರ್ ಬೇಗೆ ತಲುಪುತ್ತದೆ.

 ಮೊದಲಿಗೆ ಮಡೆನೂರು ಡ್ಯಾಮಿನಿಂದ ಬಂದ ನೀರಿಗೆ ಇಲ್ಲಿ ಚೆಕ್ ಡ್ಯಾಮ್ ನಿರ್ಮಿಸಿದ್ದಾರೆ, ಇಲ್ಲಿ ನಿಂತ ನೀರು ಚೈನ್ ಪುಲ್ಲಿಗಳಿಂದ ನಿಯಂತ್ರಿಸುವ ಚೈನ್ ಗೇಟ್ ಮುಖಾಂತರ ಮಹಾತ್ಮ ಗಾಂಧಿ ವಿದ್ಯುತ್ ಕೇಂದ್ರಕ್ಕೆ ಈ ನೀರನ್ನು ನಿಯಂತ್ರಿಸಿ ಬಿಡಲಾಗುತ್ತದೆ.

   1948ರಲ್ಲಿ ಈ ಯೋಜನೆ ಪ್ರಾರಂಭವಾಯಿತು ಆಗಲೇ ತಾಳಗುಪ್ಪದ ಚೂರಿಕಟ್ಟೆಯಿಂದ ಕಾರ್ಗಲ್ ಗೆ ಇದರ ಪಕ್ಕದಲ್ಲಿ ಶರಾವತಿ ನದಿಗೆ ಸೇತುವೆ ಕೂಡ ನಿರ್ಮಿಸಲಾಯಿತು.

   ನಂತರ ಲಿಂಗನಮಕ್ಕಿಯಲ್ಲಿ ಹೊಸ ಡ್ಯಾಮ್ ನಿರ್ಮಾಣವಾಯಿತು, ಆಗಲೂ ಇದೇ ಚೆಕ್ ಡ್ಯಾಮ್ ಮತ್ತು ಜೈನ್ ಗೇಟನ್ನು ಬಳಸಿಕೊಂಡು ನಿರ್ವಹಿಸುವ ವ್ಯವಸ್ಥೆ ಮುಂದುವರಿಸಲಾಯಿತು.

 ಆದ್ದರಿಂದಲೇ ಈ ಪ್ರದೇಶಕ್ಕೆ ಜನರ ಬಾಯಲ್ಲಿ #ಚೈನ್_ಗೇಟ್ ಎಂಬುದು #ಚೈನಾ_ಗೇಟ್ ಆಗಿ ಬಳಕೆಯಲ್ಲಿದೆ ಎಂದು ಹೇಳುತ್ತಾರೆ.

  ಇನ್ನೊಂದು ಸಾಧ್ಯತೆ ಕೂಡ ಸ್ಥಳೀಯರು ಹೇಳುತ್ತಾರೆ ಅಭಿನಂದರೆ  ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕೆ ಹೊರ ಪ್ರದೇಶದಿಂದ ಬರುತ್ತಿದ್ದ ಕಾರ್ಮಿಕರಗಳನ್ನು ಈ ಪ್ರದೇಶದಲ್ಲಿ
ಸೋಂಕು ರೋಗಗಳ ತಡೆಯಲಿಕ್ಕಾಗಿ ಸೈನಸ್ ಗ್ಯಾಸ್ ಚೇಂಬರ್ಗಳನ್ನು ಅಳವಡಿಸಿದ್ದರು ಅದರ ಮೂಲಕ ಕಾರ್ಮಿಕರು ಹಾದು ಹೋಗಬೇಕಾಗಿತ್ತು ಆದ್ದರಿಂದ ಮುಂದೆ ಸೈನಸ್ ಗ್ಯಾಸ್ ಎಂಬ ಹೆಸರೇ ಚೈನಾ ಗೇಟ್ ಆಯಿತು ಅನ್ನುತ್ತಾರೆ.

   ಶರಾವತಿ ನದಿ ತುಂಬಿ ಲಿಂಗನಮಕ್ಕಿ ಡ್ಯಾಮಿನ ಕ್ರಸ್ಟ್ ಗೇಟ್ ತೆರೆದಾಗ ಜೋಗ್ ಜಲಪಾತ ತನ್ನ ಗತಕಾಲದ ಸೌಂದರ್ಯ ಮರು ಪಡೆದಾಗ ಆಗಮಿಸುವ ಅಸಂಖ್ಯಾತ ಪ್ರವಾಸಿಗಳು ಈ ಪ್ರದೇಶದ ಮುಖಾಂತರವೇ ಪ್ರವೇಶಿಸ ಬೇಕು.

   ಆಗ ಎಲ್ಲರನ್ನು ಪ್ರವೇಶದಲ್ಲೇ ಆಕರ್ಷಿಸುವ ಈ ಸ್ಥಳದಲ್ಲಿ ಪ್ರವಾಸಿಗಳು ನಿಂತು ಅವರೆಲ್ಲರೂ ಪೋಟೋ - ವಿಡಿಯೋ - ಸೆಲ್ಫಿ - ರೀಲ್ ಮಾಡುತ್ತಾರೆ.

  ಅವರ ಬಾಯಲ್ಲಿ ಕೂಡ ಇದು ಚೈನಾ ಗೇಟ್ ಅಂತಲೇ ಉಚ್ಚಾರ ಆಗುತ್ತಿದೆ.

   ಈ ಸಾರಿ ಜೋಗ್ ಫಾಲ್ಸ್ ಪ್ರವಾಸ ಹೋದಾಗ ಮರೆಯದೆ ಇಲ್ಲಿಗೆ ಹೋಗಿ ಚೈನಾ ಗೇಟ್ ನೋಡಿ ಬನ್ನಿ.

#jogfalls #kargal #talaguppa #chinagate 
#sharavathiriver #shimoga #mansoontrip 
#crestgates #linganamakki

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...