#ಪ್ರಸಕ್ತ ರಾಜಕಾರಣದ ಒಳಗುಟ್ಟು# ಲೋಕಸಭಾ ಚುನಾವಣಾ ಅOಕಣ - 12. (ಕೆ.ಅರುಣ್ ಪ್ರಸಾದ್) ಶಿವಮೊಗ್ಗ ಬಿಜೆಪಿಯಲ್ಲೂ ಯಡೂರಪ್ಪ ವಿರೋದಿ ಬಣವೇ ಮೋದಿ ಹವಾ ಏರಲು ಬಿಡುತ್ತಿಲ್ಲವಾ? ಶಿವಮೊಗ್ಗದಲ್ಲಿ ಯಡೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡೂರಪ್ಪ ಎಂಬುದು ನಿಸ್ಸಂಶಯ ಇದಕ್ಕೆ ಯಡೂರಪ್ಪರ ಕೊಡುಗೆಯೇನೂ ಕಡಿಮೆ ಇಲ್ಲ. ಯಡೂರಪ್ಪನವರು ಶಿಕಾರಿಪುರ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರ ಮಾತ್ರ ತಮ್ಮ ಮತ್ತು ತಮ್ಮ ಕುಟುಂಬದ ಹೊರತು ಬೇರೆಯವರಿಗೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ ಎಂಬ ಬಗ್ಗೆ ಅವರ ಸ್ವಪಕ್ಷಿಯರಲ್ಲೇ ಒಳಗಿOದೊಳಗೆ ವಿರೋದವಿದೆ ಆದರೆ ಎದುರಿಗೆ ತೋರಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಕಾರಣ ಯಡೂರಪ್ಪರಿಂದ ಈ ಜಿಲ್ಲೆಯಲ್ಲಿ ರಾಜಕೀಯವಾಗಿ ಅಧಿಕಾರ, ಹಣ ಪಡೆದವರು ಬೇರೆ ಪಕ್ಷಕ್ಕಿಂತ ಕೆಲವು ಪಟ್ಟು ಹೆಚ್ಚು ಬಿಜೆಪಿಯವರೇ. ಹಾಗಂತ ಯಡೂರಪ್ಪನವರನ್ನ ಅವರ ವಿರೋದಿಗಳು ರಾಜೋರೋಷವಾಗಿ ವಿರೋದಿಸಿದ್ದು ಇದೇ ಅದು ಯಾವಾಗOದರೆ ಯಡೂರಪ್ಪರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ. ನಂತರ ಅವರ ಪುನರಾಗಮನ ಅವರನ್ನ ಹಿಂಬಾಲಿಸದೇ ಉಳಿಗಾಲವಿಲ್ಲ ಎಂದೇ ಕಳೆದ ಲೋಕಸಭಾ ಚುನಾವ ಣೆಯಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ಒಗ್ಗಟ್ಟಿನ ಹೋರಾಟ ಮಾಡಿದರು, ಗೆದ್ದು ಕೇಂದ್ರದ ಮಂತ್ರಿ ಆಗುತ್ತಾರೆಂಬ ನಿರೀಕ್ಷೆ ಹುಸಿ ಆಯಿತು, ಯಡೂರಪ್ಪರ ಎಲ್ಲಾ ಮಾತು ಕೇಂದ್ರದ ನಾಯಕತ್ವ ಕೇ...