Skip to main content

ಅಂಕಣ - 12 ಲೋಕಸಭಾ ಚುನಾವಣೆ

#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ
ಅOಕಣ - 12.
(ಕೆ.ಅರುಣ್ ಪ್ರಸಾದ್)

ಶಿವಮೊಗ್ಗ ಬಿಜೆಪಿಯಲ್ಲೂ ಯಡೂರಪ್ಪ ವಿರೋದಿ ಬಣವೇ ಮೋದಿ ಹವಾ ಏರಲು ಬಿಡುತ್ತಿಲ್ಲವಾ?
 
ಶಿವಮೊಗ್ಗದಲ್ಲಿ ಯಡೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡೂರಪ್ಪ ಎಂಬುದು ನಿಸ್ಸಂಶಯ ಇದಕ್ಕೆ ಯಡೂರಪ್ಪರ ಕೊಡುಗೆಯೇನೂ ಕಡಿಮೆ ಇಲ್ಲ.
  ಯಡೂರಪ್ಪನವರು ಶಿಕಾರಿಪುರ ವಿಧಾನಸಭಾ ಕ್ಷೇತ್ರ ಮತ್ತು ಲೋಕಸಭಾ ಕ್ಷೇತ್ರ ಮಾತ್ರ ತಮ್ಮ ಮತ್ತು ತಮ್ಮ ಕುಟುಂಬದ ಹೊರತು ಬೇರೆಯವರಿಗೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ ಎಂಬ ಬಗ್ಗೆ ಅವರ ಸ್ವಪಕ್ಷಿಯರಲ್ಲೇ ಒಳಗಿOದೊಳಗೆ ವಿರೋದವಿದೆ ಆದರೆ ಎದುರಿಗೆ ತೋರಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಕಾರಣ ಯಡೂರಪ್ಪರಿಂದ ಈ ಜಿಲ್ಲೆಯಲ್ಲಿ ರಾಜಕೀಯವಾಗಿ ಅಧಿಕಾರ, ಹಣ ಪಡೆದವರು ಬೇರೆ ಪಕ್ಷಕ್ಕಿಂತ ಕೆಲವು ಪಟ್ಟು ಹೆಚ್ಚು ಬಿಜೆಪಿಯವರೇ.
  ಹಾಗಂತ ಯಡೂರಪ್ಪನವರನ್ನ ಅವರ ವಿರೋದಿಗಳು ರಾಜೋರೋಷವಾಗಿ ವಿರೋದಿಸಿದ್ದು ಇದೇ ಅದು ಯಾವಾಗOದರೆ ಯಡೂರಪ್ಪರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದಾಗ.
  ನಂತರ ಅವರ  ಪುನರಾಗಮನ ಅವರನ್ನ ಹಿಂಬಾಲಿಸದೇ ಉಳಿಗಾಲವಿಲ್ಲ ಎಂದೇ ಕಳೆದ ಲೋಕಸಭಾ ಚುನಾವ ಣೆಯಲ್ಲಿ ಜಿಲ್ಲೆಯ ಬಿಜೆಪಿಯಲ್ಲಿ ಒಗ್ಗಟ್ಟಿನ ಹೋರಾಟ ಮಾಡಿದರು, ಗೆದ್ದು ಕೇಂದ್ರದ ಮಂತ್ರಿ ಆಗುತ್ತಾರೆಂಬ ನಿರೀಕ್ಷೆ ಹುಸಿ ಆಯಿತು, ಯಡೂರಪ್ಪರ ಎಲ್ಲಾ ಮಾತು ಕೇಂದ್ರದ ನಾಯಕತ್ವ ಕೇಳುವುದಿಲ್ಲ ಎಂದಾದ ಮೇಲೆ ಜಿಲ್ಲಾ ಬಿಜೆಪಿಯಲ್ಲಿನ ಪರದೆ ಹಿಂದೆ ಯಡೂರಪ್ಪರ ವಿರೋದಿ ಗುಂಪು ಸಕ್ರಿಯವಾಗಲು ಪ್ರಾರಂಬಿಸಿತು.
  6 ತಿಂಗಳ ಹಿಂದೆ ಮಧ್ಯOತರ ಲೋಕ ಸಭಾ ಚುನಾವಣೆ ನಡೆಯದಂತೆ ನೋಡಿಕೊಂಡಿದ್ದ ಯಡೂರಪ್ಪರ ಪ್ರಯತ್ನ ವಿಫಲಗೊಳಿಸಿದ್ದು ಇದೇ ಗುಂಪು, ಒಲ್ಲದ ಚುನಾವಣೆಗೆ ಮಗನನ್ನ ನಿಲ್ಲಿಸಿ ತುಂಬಾ ಶ್ರಮ ಮತ್ತು ಹಣದಿಂದ ರಾಘವೇಂದ್ರರನ್ನ ಗೆಲ್ಲಿಸಿಕೊಂಡ ಯಡೂರಪ್ಪರಿಗೆ ಈಗ ಈ ಚುನಾವಣೆಯಲ್ಲಿ ಸಕಾ೯ರ, ಕಾಂಗ್ರೇಸ್, ಜೆಡಿಎಸ್ ಜೊತೆ ಸ್ಪಪಕ್ಷದ ಶತೃಗಳನ್ನ ಕೂಡ ಎದುರಿಸ ಬೇಕಾಗಿದೆ.
  ಪಕ್ಷದ ಸಂಘಟನೆ, ಚುನಾವಣಾ ತಯಾರಿಗಳೆಲ್ಲ ಪಕ್ಷದ ರೀತಿ ನೀತಿಯಂತೆ ಯಾ೦ತ್ರಿಕವಾಗಿ ಒಲ್ಲದ ಮದುವೆಯಲ್ಲಿ ಭಾಗವಹಿಸುವ ದಾಯಾದಿಗಳಂತೆ ನಿವ೯ಹಿಸಿರುವ ಹಿತ ಶತೃ ಮುಖಂಡರು ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಹೇಗೆ ಬಿಜೆಪಿ ಅಭ್ಯಥಿ೯ ಸೋಲಿಸ ಬಹುದೆಂಬ ರಹಸ್ಯ ನೀಡಿದ್ದಾರೆಂಬ ಗುಮಾನಿ ಇವರಿಗಿದೆ.
  ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರೂ, ಮೋದಿ ಹವಾ ಇದ್ದರೂ ಯಡೂರಪ್ಪ ತಮ್ಮದೇ ಸ್ವ೦ತ ಯೋಚನೆಯನ್ನ ಕಾಯ೯ಗತಗೊಳಿಸಲು ಮುಂದಾಗಿದ್ದಾರೆ.
  ಶಿವಮೊಗ್ಗದಲ್ಲಿ ಯಡೂರಪ್ಪರ ಮಗನ ಸೋಲಿಸಿ ರಾಜ್ಯದ ಸಮ್ಮಿಶ್ರ ಸಕಾ೯ರ ಉಳಿಸಿಕೊಳ್ಳಲು ದೇವೇಗೌಡರಾದಿಯಾಗಿ ಎಲ್ಲರೂ ಶತಾಯ ಗತಾಯ ಹೋರಾಟದಲ್ಲಿದ್ದಾರೆ.
  ಇದರ ಮಧ್ಯ ಯಡೂರಪ್ಪ ಏಕಾಂಗಿಯಾಗಿ ಹೋರಾಡುತ್ತಿದ್ದರೂ ತಮ್ಮಲ್ಲಿ ಎಲ್ಲಾ ಒಗ್ಗಟ್ಟು ಇದೆ, ಎಲ್ಲದೂ ಸರಿ ಇದೆ ಎಂಬ ಸಂದೇಶ ಪಕ್ಷದ ಕಾಯ೯ಕತ೯ರಿಗೆ ರವಾನಿಸಲು ಯಶಸ್ವಿಯಾಗಿದ್ದಾರೆ ಆದರೆ ರಾಜ್ಯ ಸಕಾ೯ರ ನಡೆಸುವವರಿಗೆ ಇರುವ ಮಾಹಿತಿ ಶಿವಮೊಗ್ಗ ಜಿಲ್ಲಾ ಬಿಜೆಪಿಯ ನಡುಮನೆಯಲ್ಲಿನ ವಿರೋಧ ಬಿಜೆಪಿ ಸೋಲಿಸಲು ಪ್ರಭಲ ಆಸ್ತ್ರ ಎಂದು ತೀಮಾ೯ನಿಸಿದೆ.
  ಪ್ರಭಲ ಸ್ಪದೆ೯ ಪ್ರಚಾರದ ಅ೦ತಿಮ ದಿನದಲ್ಲಿ ಕಂಡು ಬರುತ್ತಿದೆ ಗೆದ್ದರೆ ಮುಂದೆ ನಿಂತು ಪಟಾಕಿ ಸರದ ತುದಿಗೆ ಬೆಂಕಿ ಹಚ್ಚಿ ಸಂಭ್ರಮಿಸುವ ಸ್ವಪಕ್ಷಿಯರು ಹಿಂದಿನಿಂದ ಮಗನನ್ನ ಸೋಲಿಸಲು ಈಗಾಗಲೇ ಬೆಂಕಿ ಹಚ್ಚಿರುವುದು ಯಡೂರಪ್ಪ ಕುಟುಂಬ ಪ್ರತಿಷ್ಟೆಯಾಗಿ ತೆಗೆದುಕೊಂಡು ಪೀಲ್ಡಿಗೆ ಇಳಿದಾಗಿದೆ.
ಮುಂದಿನ ದಿನದಲ್ಲಿ ಇದರ ಪರಿಣಾಮ ಗೋಚರಿಸಲಿದೆ, ರಾಘವೇಂದ್ರ ಗೆಲ್ಲದಿದ್ದರೆ ಯಡೂರಪ್ಪರ ಸಾಮ್ರಾಜ್ಯಕ್ಕೆ ಕಳಂಕವೇ, ಗೆದ್ದರೆ ಯಡೂರಪ್ಪ ಶಿವಮೊಗ್ಗ ಬಿಜೆಪಿಗೆ ಸಾವ೯ಬೌಮರೆ ಆಗುತ್ತಾರೆ.
ಪಲಿತಾಂಶದ ತನಕ ಕಾಯಬೇಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...