Skip to main content

Posts

Showing posts from July, 2022

Blog number 926. ಶಿವಮೊಗ್ಗದ ಮಾಜಿ ವಿದಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ಮತ್ತು ಇವರ ತಂದೆ ಹಿರಿಯ ಕಾಂಗ್ರೇಸ್ ಮುಖಂಡರಾಗಿದ್ದ ಟಿ.ರಾಮಪ್ಪನವರು ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ರಾಜಕಾರಣದ ದಾಖಲೆ.

#ಶಿವಮೊಗ್ಗದ_ಮಾಜಿ_ವಿಧಾನಪರಿಷತ್_ಸದಸ್ಯರಾದ_ಆರ್_ಪ್ರಸನ್ನಕುಮಾರ್ #ತಮ್ಮ_ಪುತ್ರನ_ವಿವಾಹ_ಆಹ್ವಾನಪತ್ರಿಕೆ_ನೀಡಲು_ಬಂದಿದ್ದರು. #ಇವರ_ತಂದೆ_ಟಿ_ರಾಮಪ್ಪನವರು_ಬದರಿನಾರಾಯಣಯ್ಯಂಗಾರರ_ಚುನಾವಣೆಗಳನ್ನು_ಮಾಡಿದವರು #ಶಿವಮೊಗ್ಗ_ಜಿಲ್ಲಾ_ವಿದ್ಯಾರ್ಥಿಕಾಂಗ್ರೇಸ್_ಯುವಕಾಂಗ್ರೇಸ್_ಜಿಲ್ಲಾಕಾಂಗ್ರೇಸ್_ಮುನ್ಸಿಪಲ್_ಕೌನ್ಸಿಲರ್ #ಶಿವಮೊಗ_ಭದ್ರಾವತಿ_ಕಾಪೋ೯ರೇಷನ್_ಕಾಪೋ೯ರೇಟರ್_ವಿದಾನಪರಿಷತ್_ಸದಸ್ಯರೂ_ಆದವರು #ತಂದೆ_ಮಗ_ಇಬ್ಬರೂ_ಶಿವಮೊಗ್ಗ_ಮುನ್ಸಿಪಲ್_ಅಧ್ಯಕ್ಷರಾಗಿದ್ದು_ದಾಖಲೆ   ಆರ್. ಪ್ರಸನ್ನಕುಮಾರ್ ಶಿವಮೊಗ್ಗದ ಪ್ರತಿಷ್ಠಿತ ಕುಟುಂಬ ಟಿ.ರಾಮಪ್ಪರವರ ಪುತ್ರ, ಇವರ ಸಹೋದರ ಐಪಿಎಸ್ ಮಾಡಿ ಬೆಂಗಳೂರಲ್ಲಿ ಡಿಐಜಿ ಆಗಿದ್ದಾರೆ.    ಕಾಂಗ್ರೇಸ್ ಪಕ್ಷದ ನಿಷ್ಟಾವಂತ ಕುಟುಂಬ ಇವರದ್ದು, ಇವರ ತಂದೆ 1967ಮತ್ತು 1972ರಲ್ಲಿ  ಆನಂದಪುರಂನ ಬದರಿನಾರಾಯಣ ಅಯ್ಯಂಗಾರ್ ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆಯ್ಕೆ ಮಾಡುವಲ್ಲಿ ಇವರೆಲ್ಲರ ಸಹಾಯ ಮತ್ತು ಸಹಕಾರ ಇತ್ತು.     ಟಿ.ರಾಮಪ್ಪನವರು ಶಿವಮೊಗ್ಗದ ಗೋಪಿ ವೃತ್ತದ ಸಮೀಪದ ಸಹ್ಯಾದ್ರಿ ಪೆಟ್ರೋಲ್ ಬಂಕ್ ಮಾಲಿಕರು, ಟಿಂಬರ್ ಗುತ್ತಿಗೆದಾರರಾಗಿದ್ದರು.     ಶಿವಮೊಗ್ಗದ ಮುನ್ಸಿಪಲ್ ಅಧ್ಯಕ್ಷರಾಗಿದ್ದರು, ರಾಜ್ಯದ ಹಿರಿಯ ಕಾಂಗ್ರೇಸ್ ನಾಯಕರಾಗಿದ್ದ ಮಂತ್ರಿಗಳಾಗಿದ್ದ ಬಸಲಿಂಗಪ್ಪರ ಖಾಸಾ ಖಾಸಾ ಮಿತ್ರರು ಇವರಿಬ್ಬರು ಸೇರಿ ಶಿವಮೊಗ್ಗ

Blog number 925. ಗಟಾರಿ ಅಮಾವಾಸ್ಯೆಎಂಬ ಹಾಸ್ಯದ ಹೆಸರಲ್ಲಿ ಕರೆಯುವ ಬೀಮನ ಅಮಾವಾಸ್ಯೆ ಅಥವ ಆಷಾಡ ಆಮಾವಾಸ್ಯೆ ಮಹಾರಾಷ್ಟ್ರದ ಬಾರ್ ರೆಸ್ಟೋರೆಂಟ್ ಗಳ ಲಾಭದ ವಾಣಿಜ್ಯ ಉದ್ದೇಶಕ್ಕೆ ಹೆಚ್ಚು ಪ್ರಚಾರ ಪಡೆದಿದೆ

#ಬೀಮನಅಮವಾಸ್ಯೆ_ಆಷಾಡಅಮವಾಸ್ಯೆ_ಗಾಯಿತ್ರಿಅಮಾವಸ್ಯೆ #ಶ್ರಾವಣಮಾಸದ_ಮೊದಲ_ಹಬ್ಬ #ಇದರ_ಮರುದಿನದಿಂದ_ಮಾಂಸಹಾರ_ಕುಡಿತ_ಮಾಡುವುದಿಲ್ಲ #ಕೊನೆಯದಿನ_ಯಥೇಚ್ಚವಾಗಿ_ಕುಡಿದು_ತಿಂದು_ಗಟಾರಕ್ಕೆ_ಬೀಳುವ_ಜನರಿಂದ_ಇದಕ್ಕೆ_ಗಟಾರಿಅಮಾವಸ್ಯೆ_ಎಂಬ_ಹೆಸರು  #ಇದನ್ನು_ಪ್ರಚಾರ_ಮಾಡಿ_ಭರಪೂರ_ವ್ಯಾಪಾರ_ಗಿಟ್ಟಿಸುವ_ಬಾರ್_ರೆಸ್ಟೋರಾಂಟಗಳು.    ಬೀಮನ ಅಮಾವಾಸ್ಯೆ, ಆಷಾಡ ಅಮಾವಾಸ್ಯೆ ಶ್ರಾವಣ ಮಾಸದ ಮೊದಲ ಹಬ್ಬ, ಮನೆಯ ಹೆಣ್ಣು ತನ್ನ ಗಂಡ ಮತ್ತು ಸಹೋದರನ ಒಳಿತಿಗಾಗಿ ಈ ದಿನ ಪೂಜೆ ಮಾಡುತ್ತಾಳೆ.  ಕರ್ನಾಟಕದಲ್ಲಿ ಬೀಮನ ಅಮಾವಾಸ್ಯೆ, ಗುಜರಾತಿನಲ್ಲಿ ಹರಿಯಾಲ ಅಮಾವಾಸ್ಯೆ, ಆಂದ್ರದಲ್ಲಿ ಚುಕ್ಕೇಲ ಅಮಾವಾಸ್ಯೆ, ಗಾಯಿತ್ರಿ ಅಮಾವಾಸ್ಯೆ, ಆಷಾಡ ಅಮಾವಾಸ್ಯೆ ಅಂತ ಚಂದ್ರಮಾನ ಪದ್ಧತಿ ಪ್ರಕಾರ ಶ್ರಾವಣ ಮಾಸ ಪ್ರಾರಂಭದ ಹಿಂದಿನ ದಿನ ಕರೆಯುತ್ತಾರೆ.    ಉತ್ತರ ಭಾರತದಲ್ಲಿ 15 ದಿನದ ಹಿಂದಿನಿಂದಲೇ ಶ್ರಾವಣ ಮಾಸ ಪ್ರಾರಂಭ ಆಗಿ ಜನ ಗಂಗಾ ನದಿ ತಟಕ್ಕೆ ಕಾವಡಿ ಸೇವೆ ಅಭಿಶೇಕ ಮಾಡುತ್ತಿದ್ದಾರೆ.    ಶ್ರಾವಣ ಮಾಸ ಶಿಸ್ತುಬದ್ದವಾಗಿ ಆಚರಿಸುವ ಮರಾಠಿ ಜನರಲ್ಲಿ ಗಟಾರಿ ಅಮಾವಾಸ್ಯೆ ಹಾಸ್ಯದ ಜೊತೆ ಹಾಸು ಹೊಕ್ಕಾಗಿದೆ.   ಮಹಾರಾಷ್ಟ್ರದಲ್ಲಿ ಮಾಂಸಹಾರಿಗಳು ಶ್ರಾವಣದಲ್ಲಿ ಸಂಪೂರ್ಣ ಸಸ್ಯಹಾರ ಸೇವಿಸುವಂತಾಗುವ ನಿಯಮ ಪಾಲಿಸುತ್ತಾರೆ ಮತ್ತು ಈ ತಿಂಗಳು ಪೂರ್ತಿ ಮಧ್ಯಪಾನ ಕೂಡ ತ್ಯಜಿಸುತ್ತಾರೆ ಆದ್ದರಿಂದ ಮದ್ಯಪಾನ ಮಾಂಸಹಾರ ಸೇವಿಸುವ

Blog number 924. ಆನಂದಪುರಂನ ರಾಮ ಭಟ್ಟರಿಗೆ ಶ್ರದ್ಧಾಂಜಲಿಗಳು, ಹೆಬ್ರಿಯ ಸಮೀಪದ ಶಿವಪುರದಲ್ಲಿ ಇವರು ಸ್ಥಾಪಿಸಿದ ವಿಜಯ ಗ್ರೂಪ್ ಅಕ್ಕಿ ಉತ್ಪಾದನೆ - ಪಶು ಆಹಾರ ಉತ್ಪಾದನೆ - ಗೇರು ಬೀಜ ಸಂಸ್ಕರಣ ಘಟಕಗಳು ಯಶಸ್ವಿ ಉದ್ಯಮಗಳಾಗಿದೆ.

#ಶ್ರದ್ದಾ೦ಜಲಿಗಳು #ಆನಂದಪುರಂನ_ರಾಮಭಟ್_ಪಿ_ಎನ್. #ರೈತಬಂದು_ಸುಬ್ಬಣ್ಣನಾಯಕರ_ಶಿವಪುರದ_ಅಕ್ಕಿಗಿರಣಿ_ಖರೀದಿಸಿದವರು. #ಹೆಬ್ರಿಯ_ವಿಜಯ_ಗ್ರೂಪಿನ_ಅಕ್ಕಿ_ಪಶುಆಹಾರ_ಮತ್ತು_ಗೇರುಬೀಜ_ಸಂಸ್ಕರಣಾ_ಘಟಕದ_ಯಶಸ್ವಿ_ಉದ್ದಿಮೆದಾರರು.       ಆನಂದಪುರಂನ ರೈತ ಬಂದು ಗ್ರಾಮೋದ್ಯೋಗದ ಸುಬ್ಬಣ್ಣ ನಾಯಕರ ಜೊತೆ ಅನೇಕ ವಷ೯ ಕೆಲಸ ನಿರ್ವಹಿಸಿದ ವ್ಯವಸ್ಥಾಪಕ ವಗ೯ದ ಹೆಚ್ಚಿನ ಜನ ಸುಬ್ಬಣ್ಣ ನಾಯ್ಕರಂತೆ ಅಕ್ಕಿ ಮತ್ತು ಅವಲಕ್ಕಿ ಉದ್ಯಮದಲ್ಲಿ ಯಶಸ್ವಿ ಉದ್ದಿಮೆದಾರರಾಗಿದ್ದಾರೆ.     ಆನಂದಪುರಂನ ಅವರ ಅಕ್ಕಿ ಅವಲಕ್ಕಿ ಗಿರಣಿ ಸುಬ್ಬರಾವ್ ಖರೀದಿಸಿದರು ಹಾಗೆಯೇ ಹೆಬ್ರಿ ಸಮೀಪದ ಶಿವಪುರದ ಅಕ್ಕಿ ಗಿರಣಿ ರಾಮ ಭಟ್ P.N. ಖರೀದಿಸಿದರು ಇವರೆಲ್ಲರೂ ಸುಬ್ಬಣ್ಣ ನಾಯಕರ ಜೊತೆ ಅನೇಕ ವರ್ಷ ಅವರ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ಆಪ್ತರು.    ಶಿವಪುರದ ಸುಬ್ಬಣ್ಣನಾಯಕರ ಶಾಲಾ ಸಹಪಾಠಿ ಆಗಿದ್ದ ನಾಗರಾಜ ಭಟ್ಟರ ಅವಳಿ ಗಂಡು ಮಕ್ಕಳು ಈ ರಾಮ ಭಟ್ ಮತ್ತು ಲಕ್ಷ್ಮಣ ಭಟ್ .    ಆನಂದಪುರಂನ ಯಡೇಹಳ್ಳಿಯ ವಾಸಿಗಳಾಗಿದ್ದ ಈ ಅವಳಿ ಸಹೋದರರು ಸುಬ್ಬಣ್ಣ ನಾಯಕರ ಸಂಸ್ಥೆ ಸೇರಿದ್ದರು.   ಶಿವಪುರದ ಸುಬ್ಬಣ್ಣ ನಾಯಕರ ಅಕ್ಕಿ ಗಿರಣಿ ಖರೀದಿಸಿದ ರಾಮ ಭಟ್ಟರು ತಮ್ಮ ಶ್ರಮ ಮತ್ತು ಬುದ್ಧಿವಂತಿಕೆಯಿಂದ ಯಶಸ್ವಿ ಉದ್ದಿಮೆದಾರಾದರು.   ಅಕ್ಕಿ ಉದ್ದಿಮೆ ಜೊತೆಗೆ ಗೇರು ಬೀಜ ಸಂಸ್ಕರಣ ಮತ್ತು ಪಶು ಆಹಾರ ಉತ್ಪಾದನಾ ಘಟಕವೂ ಸ್ಥಾಪಿ

Blog number 923. ಆನಂದಪುರಂ ಇತಿಹಾಸ ಭಾಗ-77, ಆನಂದಪುರಂ ಸಮೀಪದ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದ ಕೆರೆ ಸಮೀಪದ ವೀರಗಲ್ಲು 12ನೇ ಶತಮಾನದ ಕೋಟಿ ನಾಯಕನ ವೀರ ಮರಣದ ಕಥೆ ಹೇಳುತ್ತಿದೆ.

#ಆನಂದಪುರಂ_ಇತಿಹಾಸ_ಭಾಗ_77. #ಸಮೀಪದ_ಹೊಸೂರು_ಗ್ರಾಮಪಂಚಾಯತನ_ಚೆನ್ನಶೆಟ್ಟಿ_ಗ್ರಾಮದ_ಕೆರೆ_ಬಳಿ_ನೆಟ್ಟಿರುವ_ವೀರಗಲ್ಲು. #ಹನ್ನೆರಡನೆ_ಶತಮಾನದ_ಕಥೆ_ಹೇಳುತ್ತದೆ. #ಎಂಟು_ಅಡಿ_ಎತ್ತರ_ಮತ್ತು_ಐದು_ಅಡಿ_ಅಗಲದ_ವೀರಗಲ್ಲು #ಆ_ಕಾಲದಲ್ಲಿ_ಈ_ಪ್ರದೇಶ_ಆಳುತ್ತಿದ್ದ_ಕೋಟಿನಾಯಕ_ಯದ್ದದಲ್ಲಿ_ವೀರಮರಣ_ಹೊಂದಿದ್ದಕ್ಕಾಗಿ #ಅವನ_ಅಳಿಯ_ತನ್ನ_ಮಾವನ_ಸ್ಮರಣೆಗಾಗಿ_ಸ್ಥಾಪಿಸಿದ_ವೀರ_ಶಾಸನ #ಈ_ನಾಯಕರು_ಯಾರು_ದೀವರಾ_ಸಂಶೋದನೆಗಳಾಗಬೇಕು. #ಈ_ಸಂಶೋದನೆಗಳು_ಕೆಳದಿ_ಅರಸರ_ಮೂಲ_ಸಂಶೋದನೆಗೂ_ಕಾರಣ_ಆಗಬಹುದು ಶಿವಮೊಗ್ಗ ಜಿಲ್ಲೆ ಆನಂದಪುರಂ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಎಂಬ ಗ್ರಾಮದ ದೊಡ್ಡ ಕೆರೆ ಬಳಿ ಇರುವವೀರಕಲ್ಲು ಕ್ರಿ.ಶ.1292ರಲ್ಲಿ ಸ್ಥಾಪಿಸಲಾಗಿದೆ.   ವೀರ ಕೋಟಿ ನಾಯಕ ತನ್ನ ರಾಜ್ಯವನ್ನು ಶಾಂತಿಯಿಂದ ಬುದ್ದಿಶಕ್ತಿಯಿಂದ ಆಳುತ್ತಿದ್ದ ಅವನ ಅನೇಕ ಬಿರುದಾವಳಿ ಈ ವೀರ ಕಲ್ಲಿನಲ್ಲಿ ಕೆತ್ತಲಾಗಿದೆ.   ಕೋಟಿ ನಾಯಕ ಕಮದೂರು ಎಂಬಲ್ಲಿ (ಹಾಲಿ ರಿಪ್ಪನ್ ಪೇಟೆ ಸಮೀಪ ಕಮದೂರು ಎಂಬ ಹಳ್ಳಿ ಇದೆ ಇದೇ ಕಮದೂರ ಗೊತ್ತಿಲ್ಲ?) ಮಾಚನಾಯಕ,ದೇಸುನಾಯಕ, ಆಲೂರು ಜಕ್ಕೆ ನಾಯಕರ ಜೊತೆ ಯುದ್ಧದಲ್ಲಿ ದೈಯ೯ದಿಂದ ಹೋರಾಡಿ ಕುದುರೆಯ ರುಂಡ ಚಂಡಾಡಿ ನಂತರ ವೀರ ಮರಣ ಪಡೆಯುತ್ತಾರೆ ಆದ್ದರಿಂದ ಅವರ ಪತ್ನಿ ಮಕ್ಕಳಿಗೆ ಭೂದಾನ ಮಾಡಿ ಅವರ ನೆನಪಿಗಾಗಿ ಅವರ ಅಳಿಯ ( ಹೆಸರು ನಮೂದಾಗಿಲ್ಲ) ತನ್ನ ಮಾವನ ವೀರ ಮರ

Blog number 922. ಶಿವಮೊಗ್ಗ ಜಿಲ್ಲೆಯ ಮ್ಯಾಜಿಕ್ ವಿಸ್ಮಯ ಸಂಸ್ಥೆ ಪ್ರಖ್ಯಾತ ಜಾದುಗಾರರಾದ ಪ್ರಶಾಂತ ಹೆಗಡೆ ಜಾದುಗಾರರದ್ದು ಇದು ದೇಶ ವಿದೇಶಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ ದಾಖಲೆಯ ಶಿವಮೊಗ್ಗದ ಏಕೈಕ ಜಾದುಗಾರರ ಸಂಸ್ಥೆ.

#ಶಿವಮೊಗ್ಗ_ಜಿಲ್ಲೆಯ_ಪ್ರಶಾಂತಹೆಗಡೆ_ಜಾದೂಗಾರ್_ನನ್ನ_ಅತಿಥಿ #ಇವರ_ಮ್ಯಾಜಿಕ್_ವಿಸ್ಮಯ_ತಂಡದ_ದೇಶ_ವಿದೇಶದಲ್ಲಿನಪ್ರದರ್ಶನ_ಸಾವಿರಕ್ಕೂ_ಮಿಕ್ಕಿದೆ. #ಕಾಯ೯ಕ್ರಮ_ಆಯೋಜಿಸುವವರ_ಕೈಸುಡದಂತೆ_ಅವರ_ಬಜೆಟ್_ಅನುಗುಣವಾಗಿ_ಮ್ಯಾಜಿಕ್_ಮಾಡಿ_ತೋರಿಸುತ್ತಾರೆ. #ಶಿವಮೊಗ್ಗ_ಜಿಲ್ಲೆಯ_ಮ್ಯಾಜಿಕ್_ಸಾಧನೆಗೈದ_ಏಕೈಕ_ತಂಡ. #ಮ್ಯಾಜಿಷಿಯನ್_ಜೀವನದಲ್ಲಿ_ಛಲಗಾರನಾಗಿ_ಗುರಿಮುಟ್ಟಿದ_ಇವರ_ಜೀವನದ_ಕಥೆ. #ಒಂದು_ಕಾಲದಲ್ಲಿ_ಶಿವಮೊಗ್ಗದಲ್ಲಿ_ಪ್ರಖ್ಯಾತ_ಬ್ಯಾನರ್_ಬರಹಗಾರರೂ_ಆಗಿದ್ದರು. #ಇವರ_ಪ್ರದಶ೯ನದ_ಉದ್ಘಾಟನೆ_ಎಣ್ಣೆಯ_ಬದಲು_ನೀರು_ಸುರಿದು_ದೀಪ_ಬೆಳಗಿಸುತ್ತಾರೆ!!    ಶಿವಮೊಗ್ಗದ ಪ್ರಶಾಂತ ಹೆಗಡೆ ಜಾದೂಗಾರ್ ನನ್ನ ಪೇಸ್ ಬುಕ್ ಗೆಳೆಯರಲ್ಲಿ ವಿಶೇಷ ಗೆಳೆಯರು ಕಾರಣ ಇವರು ಬಾಲ್ಯದಲ್ಲಿ ಬೇಸಿಗೆ ರಜೆ ಆನಂದಪುರಂನ ಆಗಿನ ಪ್ರಖ್ಯಾತ ಕೋಮಲ ವಿಲಾಸ್ ಕುಟುಂಬದಲ್ಲಿ ಕಳೆಯುತ್ತಿದ್ದರಂತೆ ಹಾಗಾಗಿ ಇವರಿಗೆ ಆನಂದಪುರಂ ಚಿರಪರಿಚಿತ.   ಆನಂದಪುರಂನ ಕೋಮಲ ವಿಲಾಸ್ ನ ಜಯವೀರ ನಾಯಕರ ಪತ್ನಿ ಇವರ ತಾಯಿ ತಂಗಿ ಅಂದರೆ ಚಿಕ್ಕಮ್ಮ ಈಗ ಅವರಾರು ಆನಂದಪುರಂನಲ್ಲಿ ಇಲ್ಲ.    ಪ್ರಶಾಂತ ಹೆಗಡೆ ಜಾದೂಗಾರರ ತಂಡದ ಹೆಸರು #ಮ್ಯಾಜಿಕ್_ವಿಸ್ಮಯ ಇದು ಸಾವಿರಕ್ಕೂ ಮಿಕ್ಕಿ ದೇಶ ವಿದೇಶಗಳಲ್ಲಿ ಪ್ರದರ್ಶನ ಮಾಡುವ ಮೂಲಕ ಶಿವಮೊಗ್ಗದ ಏಕೈಕ ಜಾದೂ ಸಂಸ್ಥೆ ಎಂಬ ಖ್ಯಾತಿಗಳಿಸಿದೆ.   ಸ್ವತಃ ಕಲಾವಿದರಾದ ಪ್ರಶಾಂತ ಹೆಗಡೆ ಜಾದುಗಾರ್ ವೇದಿಕೆಯನ್ನು ಪ್ರದರ್ಶನದಲ್ಲಿ ತಮ್

Blog number 921. ಪೂರ್ಣಚಂದ್ರ ತೇಜಸ್ವಿಯವರ ಕಥೆಗಳ ಪಾತ್ರವೇ ಆಗಿದ್ದ ಅವರ ಆಪ್ತ ಬಿರಿಯಾನಿ ಕೆರಿಯಪ್ಪನವರಿಗೆ ಶ್ರದ್ಧಾಂಜಲಿಗಳು

#ಶ್ರದ್ದಾ೦ಜಲಿಗಳು. #ಮೂಡಿಗೆರೆಯ_ಗೋಣಿಬೀಡಿನ_ನಿಡುಗೋಡಿನ_ಬಿಯಾ೯ನಿ_ಕೆರಿಯಪ್ಪ_ಮರೆಯಲುಂಟೆ. #ತೇಜಸ್ವಿ_ಕಥೆಗಳ_ಬಿರಿಯಾನಿ_ಕೆರಿಯಪ್ಪ_ಇನ್ನಿಲ್ಲ. #ತೇಜಸ್ವಿಯವರ_ಕಥೆಗಳಲ್ಲಿ_ಸದಾ_ನೆನಪಿನಲ್ಲಿ_ಉಳಿಯುವ_ಬಿರಿಯಾನಿ_ಕೆರಿಯಪ್ಪ. #ಕಥೆಗಾರನ_ನಿಜಜೀವನದ_ಜೀವಂತ_ಪಾತ್ರಗಳು.   ಪೂರ್ಣಚಂದ್ರ ತೇಜಸ್ವಿಯವರ ಅಪ್ತ ಬಿರಿಯಾನಿ ಪ್ರವೀಣ ಬಿರಿಯಾನಿ ಕೆರಿಯಪ್ಪ, ತೇಜಸ್ವಿಯವರ ಕಾವಾ೯ಲೋ ಜನಪ್ರಿಯ ಕಾದಂಬರಿಯಲ್ಲಿ ಬಿರಿಯಾನಿ ಕೆರಿಯಪ್ಪರ ಪಾತ್ರ ಮತ್ತು ಸಂಬಾಷಣೆ ಈ ಕಾದಂಬರಿ ಓದಿದ್ದವರಾರು ಬಿರಿಯಾನಿ ಕೆರಿಯಪ್ಪರನ್ನು ಮರೆಯಲಾರದಂತೆ ತೇಜಸ್ವಿಯವರು ದಾಖಲಿಸಿದ್ದಾರೆ.     ಅನೇಕರು ಬಿಯಾ೯ನಿ ಕೆರಿಯಪ್ಪರನ್ನು ಸಂದರ್ಶಿಸಿ ಬರೆದ ಲೇಖನಗಳು, ಸಾಕ್ಷಾ ಚಿತ್ರಗಳೂ ಬಂದಿದೆ ಅದರಲ್ಲಿ ಕೆರಿಯಪ್ಪ ತೇಜಸ್ವಿ ಅವರ ಮದುವೆಗೆ ಬಿರಿಯಾನಿ ಮಾಡಿದ ಅನುಭವ ಹೇಳಿಕೊಂಡಿದ್ದಾರೆ ಬಹುಶಃ ಕಾದಂಬರಿಯ ಕಥಾ ಪಾತ್ರವೊಂದು ಇಷ್ಟು ಜನಪ್ರಿಯ ಆಗಿರುವುದು ಈ ಬಿರಿಯಾನಿ ಕೆರಿಯಪ್ಪರ ವಿಚಾರದಲ್ಲಿ ಮಾತ್ರ.   ಪ್ರಸಾದ ರಕ್ಷಿದಿಯವರು ಬಿರಿಯಾನಿ ಕೆರಿಯಪ್ಪನವರ ಬಗ್ಗೆ ಬರೆದ ಬ್ಲಾಗ್ ಓದಲು ಈ ಲಿಂಕ್ ಕ್ಲಿಕ್ ಮಾಡ https://avadhimag.in/%e0%b2%a4%e0%  ತೇಜಸ್ಟಿಯವರೂ ಇಲ್ಲ ಅವರ ಶ್ರೀಮತಿ ರಾಜೇಶ್ವರಿಯವರೂ ಇಲ್ಲ ಇವತ್ತು ಬಿರಿಯಾನಿ ಕೆರಿಯಪ್ಪ ಕೂಡ ಇಹಲೋಕ ತ್ಯಜಿಸಿದ್ದಾರೆ ಆದರೆ ಪೂರ್ಣಚಂದ್ರ ತೇಜಸ್ವಿಯವರ ಕಥೆ ಕಾದಂಬರಿಗಳಿಂದ ಇವರೆಲ್ಲ ಕನ್ನ

Blog number 921. ನಶ್ಯ ಎಂಬ ಹೊಗೆರಹಿತ ತಂಬಾಕಿನ ವಿಶ್ವದ ಕಥೆಗಳು, ವಷ೯ದಲ್ಲಿ ಎರಡು ಬಾರಿ ನಾನು ನಶ್ಯ ಬಳಸಲು ಕಾರಣ.

#ಮೂಗಿದ್ದವರಿಗೆ_ಮಾತ್ರ_ಶೀಥ #ನಶ್ಯದ_ಕಥೆಗಳು #ಸ್ತ್ರೀ_ಪುರುಷರೂ_ಸಮಾನ #ಅರ್ಚಕರಿಗೆ_ದೇವಸ್ಥಾನದ_ಒಳಗೆ_ನಶ್ಯ_ನಿಷೇದವಿಲ್ಲ. #ನನ್ನ_ನಶ್ಯದ_ಜುಗಲ್_ಬಂದಿ_ಕೇಳಿ. #ಹದಿನೇಳನೇ_ಶತಮಾನದಲ್ಲಿ_ಚರ್ಚಿನಲ್ಲಿ_ನಶ್ಯಾ_ನಿಷೇದವಿತ್ತು.   ಮೂಗಿದ್ದವರಿಗೆ ಮಾತ್ರ ಶೀಥ ಅಂದಾಗ ನಾವು ಮೂಗು ಮುರಿಯುವಂತಿಲ್ಲ ಯಾಕೆಂದರೆ ಎಲ್ಲರಿಗೂ ಮೂಗಿದೆ!.   ವರ್ಷಕ್ಕೆರೆಡು ಸಾರಿ ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ನನಗೆ ತಂಡಿ ಶೀಥ ಆಗಿ ಮೂಗು ಕಟ್ಟುತ್ತದೆ, ಕೆಮ್ಮು, ಜ್ವರ ಕೂಡ ಆಗ ವೈದ್ಯರ ಮಾತ್ರೆ, ಶಿವಮೊಗ್ಗದ ದನ್ವಂತರಿ ಶಾಪಿನಿಂದ ಶ್ವಾಷಾಮೃತ ಸಿರಪ್, ಅಂಗಡಿಯಿಂದ ವಿಕ್ಸ್ ಮತ್ತು ವಿಶೇಷವಾಗಿ ತರಿಸುವುದು ನಶ್ಯ ಪುಡಿ.   ತಂಡಿ ಶೀಥದ ಕನಿಷ್ಟ 7 ರಿಂದ 10 ದಿನದಲ್ಲಿ ನನಗೆ ಹೆಚ್ಚು ರಿಲೀಪ್ ಸಿಗುವುದು ಈ ನಶ್ಯ ಪುಡಿ ಎ೦ಬ ತಂಬಾಕು ರಹಿತ ಹೊಗೆಸೊಪ್ಪು ಪುಡಿಯಲ್ಲಿ.   ನಾವು ಸಣ್ಣವರಿದ್ದಾಗ ನಮ್ಮ ಮನೆ ಸುತ್ತಲಿನ ನನ್ನ ತಾಯಿಯ ಗೆಳತಿಯರಾದ ಬಾಯಮ್ಮ೦ದಿರು ಮತ್ತು ಬೂಬಮ್ಮ೦ದಿರು ಎಲ್ಲರೂ ನಶ್ಯ ಪ್ರಿಯರು ನಮ್ಮಮ್ಮನ ಪ್ರೀತಿಯ ಸಣ್ಣ ಮಗನಾದ ನನ್ನನ್ನು ಎತ್ತಾಡುವವರೇ ಅವರೆಲ್ಲ ಹಾಗಾಗಿ ನನಗೆ ನಶ್ಯ ಬಾಲ್ಯದಿಂದಲೇ ಸುಪರಿಚಿತ.   ಆಗ ಉತ್ಕೃಷ್ಟ ನಶ್ಯ ಪುಡಿಗಳು ಕಾರ್ಕಳದಲ್ಲಿ ತಯಾರಾಗುತ್ತಿತ್ತು ಅಲ್ಲಿಂದ ತಂದು ಮಾರಾಟ ಮಾಡುವ ಅಂಗಡಿಗಳಲ್ಲಿ ನಶ್ಯ ತೂಕ ತೊಲದಲ್ಲಿ ತೂಕಾ ಮಾಡುವ ಬಂಗಾರ ಅಳತೆ ಮಾಡುವಂತ ಸಣ್ಣ ತಕ್ಕಡಿಗಳು ಇರುತ್ತಿತ್ತು.    70 ರ ದಶಕದಲ್ಲಿ

Blog number 920. ಕಾಗೋಡು ಸತ್ಯಾಗ್ರಹದ ಮೊದಲ ಪುಸ್ತಕ ಬರೆದು ಅನೇಕರಿಗೆ ಪ್ರೇರಣೆ ನೀಡಿದ ಚಿಂತಕ ಬರಹಗಾರ ಜಿ.ರಾಜಶೇಖರ್ ಇನ್ನು ನೆನಪು ಮಾತ್ರ.

#ಶ್ರದ್ದಾ೦ಜಲಿಗಳು #ಚಿಂತಕ_ಬರಹಗಾರ_ಜಿ_ರಾಜಶೇಖರ್ #ಶಿವಮೊಗ್ಗಜಿಲ್ಲೆಯ_ಕಾಗೋಡು_ರೈತಸತ್ಯಾಗ್ರಹದ_ಮೊದಲ_ಪುಸ್ತಕ_ಬರೆದವರು. ಉಡುಪಿ ಮೂಲದ ಚಿಂತಕರು, ಬರಹಗಾರರಾದ ಜಿ.ರಾಜಶೇಖರ್ ಇಹ ಲೋಕ ತ್ಯಜಿಸಿದ್ದಾರೆ ಅವರಿಗೆ ಶ್ರದ್ದಾಂಜಲಿ ಅಪಿ೯ಸುತ್ತಾ ಅವರಿಗಾಗಿ ಈ ನುಡಿ ನಮನ.   ಐತಿಹಾಸಿಕ ಭೂ ಹೋರಾಟ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿನ ಸಾಗರ ತಾಲ್ಲೂಕಿನ ಕಾಗೋಡಿನಲ್ಲಿ ಹೋರಾಟದ ಕಿಡಿ ಎದ್ದು ಜ್ವಾಲೆಯಾಗಿ ಅದಕ್ಕೆ ರಾಷ್ಟಮಟ್ಟದಲ್ಲಿ ಬೆಂಬಲ ಸಿಕ್ಕಿದ್ದು ಇತಿಹಾಸವೇ.   ಈ ಹೋರಾಟದ ಬಗ್ಗೆ ಕನ್ನಡದಲ್ಲಿ 144 ಪುಟಗಳ #ಕಾಗೋಡು_ರೈತ_ಸತ್ಯಾಗ್ರಹ ಎಂಬ ಮೊದಲ ಪುಸ್ತಕ ಬರೆದವರು ಈ ಜಿ.ರಾಜಶೇಖರ್.   ಈ ಪುಸ್ತಕ ಪ್ರಕಟಿಸಿದವರು ಹೆಗ್ಗೋಡಿನ ಕೆ.ವಿ.ಸುಬ್ಬಣ್ಣರ ಅಕ್ಷರ ಪ್ರಕಾಶನ.   ವಿಶೇಷ ಅಂದರೆ ಜಿ.ರಾಜಶೇಖರ್ ಕಾಗೋಡು ಹೋರಾಟದ ಭೂಮಿಯಲ್ಲಿ ಓಡಾಡಿ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಸ್ಥಳಿಯ ಹೋರಾಟಗಾರರನ್ನು ಬೇಟಿ ಮಾಡಿದ್ದರು.   ಮರೆತು ಹೋಗುತ್ತಿದ್ದ ಕಾಗೋಡು ಚಳವಳಿಯನ್ನು ಜನರ ಸೃತಿಯಲ್ಲಿ ಖಾಯಂ ಆಗಿ ಉಳಿಯುವಂತೆ ಮತ್ತು ಮುಂದಿನ ದಿನಗಳಲ್ಲಿ ಕಾಗೋಡು ರೈತ ಹೋರಾಟದ ಅನೇಕ ಪುಸ್ತಕಗಳು ಬರಲು ಪ್ರೇರಣೆ ಆದವರು ಜಿ.ರಾಜಶೇಖರ್.

Blog 919. ನೇರಳೆ ಹಣ್ಣಿನ ಮೂಲ ಭಾರತ,ಅತಿ ಎತ್ತರ ನೂರು ಅಡಿ ಬೆಳೆಯುವ ಮತ್ತು ನೂರು ವರ್ಷ ಬಾಳುವ ಔಷದಿ ಗುಣ ಹೊಂದಿದ ನೇರಳೆ ಹಣ್ಣು

#ನೇರಳೇಹಣ್ಣು_ಭಾರತೀಯ_ಮೂಲದ_ಸಸ್ಯ. #ಪುರಾಣದಲ್ಲಿ_ನೇರಳೆಮರದ_ಉಲ್ಲೇಖಗಳಿದೆ #ಅತಿ_ಎತ್ತರ_ಬೆಳೆಯುವ_ನೂರು_ವರ್ಷ_ಬಾಳುವ_ಮರ ಈ ವರ್ಷ ನೇರಳೆ ಹಣ್ಣು ನಮ್ಮ ಭಾಗದಲ್ಲಿ ತು೦ಬಾ ಕಡಿಮೆ, ಶಿವಮೊಗ್ಗದಲ್ಲೂ ಮಾರಾಟಕ್ಕೆ ಬರುತ್ತಿದ್ದ ನೇರಳೆ ಈ ವರ್ಷ ಇಲ್ಲವೇ ಇಲ್ಲ ಅನ್ನಿಸಿತ್ತು.   ಮೊನ್ನೆ ಶಿವಮೊಗ್ಗದಲ್ಲಿ ದೂರದ ಬೆಳಗಾಂನ ಖಾನಾಪುರದವರು ನೇರಳೆ ಹಣ್ಣು ತಂದು ಮಾರಾಟ ಮಾಡಿದ್ದಾರೆ ಅವರಿಂದ ಕೆ.ಜಿ.ಗೆ 200 ರ೦ತೆ ನೇರಳೆ ಹಣ್ಣು ಖರೀದಿಸಿದೆ ಆದರೆ ಈ ನೇರಳೆ ಹಣ್ಣಿನಲ್ಲಿ ಕಳೆದ ವರ್ಷದ ರುಚಿ ಇಲ್ಲವೇ ಇಲ್ಲ.   ಮಲಬಾರ್ ಪ್ಲಮ್ / ಬ್ಲಾಕ್ ಪ್ಲಮ್ ಎಂದು ಇಂಗ್ಲೀಷ್ ನಲ್ಲಿ ಕರೆಯುವ ನೇರಳೆ ಮರ ಭಾರತದ ಮೂಲದ್ದು, ಗೌತಮ ಬುದ್ಧ ಈ ಮರದ ನೆರಳಲ್ಲಿ ಮೊದಲ ಜ್ಞಾನೋದಯ ಆಯಿತೆಂದು ಉಲ್ಲೇಖವಿದೆ ಹಾಗೆ ಶ್ರೀ ಕೃಷ್ಣ ಪರಮಾತ್ಮರೂ ಪುರಾಣದಲ್ಲಿ ಉಲ್ಲೇಖಿಸಿದ್ದಾರೆ.   ಅತಿ ಎತ್ತರ 100 ಅಡಿ ಎತ್ತರ ಬೆಳೆಯುವ ನೂರು ವರ್ಷ ಬಾಳುವ ಈ ಮರದಿಂದ ರೈಲ್ವೆ ಸ್ಲೀಪರ್ ಮಾಡುತ್ತಿದ್ದರು.    83% ನೀರು, 16% ಕಾರ್ಬೋಹೈಡ್ರೇಟ್ ಮತ್ತು 1% ವಿಟಮಿನ್ ಅಂಶ ಇರುವ ನೇರಳೆ ಹಣ್ಣು ಅನೇಕ ಔಷದಿ ಗುಣವೂ ಹೊಂದಿದೆ.

Blog number 918. ಗಾಂಜಾ ಬೆಳೆ ಮಲೆನಾಡು ಅಕ್ರಮಿಸಿತಾ?

#ಇದೊಂದು ಮನ ಮುಟ್ಟುವ ಕಥೆ   ಸಾಗರ ತಾಲ್ಲೂಕು, ಹೊಸನಗರ ತಾಲ್ಲೂಕುಗಳ ಹಳ್ಳಿಗಳಲ್ಲಿ ವಾಡಿಕೆ ಮಳೆ ಕಡಿಮೆ ಆದಾಗ ಹತ್ತಿ ಮತ್ತು ಜೋಳದ ಕೃಷಿ ಪ್ರಾರಂಭವಾಯಿತು ಅದರ ಮಧ್ಯ ಗಾಂಜಾ ಬೆಳೆ ಸೇರಿಕೊಂಡಿತು, ಮೊದಲಿಗೆ ಮನೆಯ ಹೆಣ್ಣು ಮಕ್ಕಳು ವಾಷಿ೯ಕ ಒಂದು 50 ಸಾವಿರ ಆದಾಯ ಪಡೆಯಲು ಪ್ರಾರಂಬಿಸಿದರು ನಂತರ ಇದಕ್ಕೆ ದೊಡ್ಡ ಮಾರುಕಟ್ಟೆಯೇ ಸೃಷ್ಟಿ ಆಯಿತು.  ಉತ್ತರ ಭಾರತದಿಂದ ಹಳ್ಳಿಗಳಿಗೆ ದಲ್ಲಾಳರು ಬಂದರು ಬೀಜ, ಮುಂಗಡ ನೀಡಿದರು ಮತ್ತು ಅವರೇ ಖರೀದಿ ಮಾಡಲು ಶುರು ಮಾಡಿದರು. ಬೇರೆಯವರಿಗೆ ಅನುಮಾನ ಬಾರ ಬಾರೆದೆಂದು ಬೆಡ್ ಶೀಟ್, ಬಟ್ಟೆ ವ್ಯಾಪಾರಿಗಳಾಗಿ ಸಂವಹನ ಶುರು ಮಾಡಿದರು.   ಒಬ್ಬರ ನೋಡಿ ಎಲ್ಲರೂ ಗಾಂಜಾ ಕೃಷಿಕರಾದರು ವಾಷಿ೯ಕ ಆದಾಯ ಕೆಲ ಲಕ್ಷಗಳಾಯಿತು, ಮನೆ, ಬೈಕ್, ಕಾರುಗಳು ಬಂತು ಜನಪ್ರತಿನಿಧಿಗಳು ಇವರ ಮನೆಗೆ ಬರಲು ಪ್ರಾರಂಭಿಸಿದರು ಎಲ್ಲೋ ಒಂದು ಕಡೆ ಸಿಕ್ಕಿಬಿದ್ದರೆ ಊರವರೆಲ್ಲ ಸೇರಿ ರಾಜಿ ಮಾಡಿ ಬಿಡಿಸಲು ಪ್ರಾರಂಭಿಸಿದರು ಅದಿಕಾರದಲ್ಲಿನ ರಾಜಕಾರಣಿಗಳು ಸಹಕರಿಸಿದರು.   ಹಳ್ಳಿಯ ಮಕ್ಕಳಿಗೆ ಕಾನ್ವೆ೦ಟ್ ಶಾಲೆಗೆ ಸೇರಿಸುವ ಮತ್ತು ಅವರನ್ನ ನಿತ್ಯ ಬರುವ ಶಾಲಾ ವಾಹನದಲ್ಲಿ ಕಳಿಸುವ ಶೋಕಿ ಪ್ರಾರ೦ಭವಾಯಿತು ಮುಂದೆ ಹೆಚ್ಚಿನ ಶಿಕ್ಷಣಕ್ಕೆ ಆಳ್ವಾಸ್ಗೆ ಸೇರಿಸಿದರು.   ಎಲ್ಲಾ ಸುಖಾಂತ್ಯದಲ್ಲಿ ಆಗಲಿಲ್ಲ ಮಗು ಈಗ ಡ್ರಗ್ ವ್ಯಸನಿ, ಅಲ್ಲಿ ಗಾಂಜಾದಿಂದ ಪ್ರಾರಂಭವಾಗಿ ಈಗ ಬಹಳ ಮುಂದುವರಿದಿದ್ದಾನೆ, ಇನ್ನು ಕೆಲವರ ಮಕ್ಕಳು ಗಾಂಜಾ

Blog number 917. ಹುಬ್ಬಳ್ಳಿಯಲ್ಲಿ ಹಲಸು ಹಬ್ಬ ಎಂಬ ಹಲಸಿನ ಮೇಳ, ಪ್ರಮುಖ ಆಕಷ೯ಣೆ ತುಮಕೂರಿನ ಚೇಳೂರಿನ ಸಿದ್ದು ಹಲಸಿನ ಗಿಡ ಇಲ್ಲಿ ಮಾರಾಟಕ್ಕೆ ಲಭ್ಯ.

#ಹುಬ್ಬಳ್ಳಿಯಲ್ಲಿ_ಹಲಸುಮೇಳ #ಪ್ರಖ್ಯಾತ_ತುಮಕೂರಿನ_ಚೇಳೂರಿನ_ಸಿದ್ದು_ಹಲಸಿನ_ಗಿಡ_ಮಾರಾಟಕ್ಕಿದೆ. #ಹುಬ್ಬಳ್ಳಿಯ_ವುಮೆನ್ಸ್_ಕಾಲೇಜ್_ರಸ್ತೆಯ_ಲಕ್ಷ್ಮಿ_ಸದನದಲ್ಲಿ #ದಿನಾಂಕ_16_ಮತ್ತು_17_ನಾಳೆ_ನಾಡಿದ್ದು.   ನಾಳೆ ದಿನಾಂಕ 16- ಜುಲೈ -2022 ರ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ರಿಂದ ರಾತ್ರಿ 8 ರ ತನಕ ಹುಬ್ಬಳ್ಳಿಯ ವುಮೆನ್ಸ್ ಕಾಲೇಜು ರಸ್ತೆಯ ಲಕ್ಷ್ಮೀ ಸದನದಲ್ಲಿ ಮೈಸೂರಿನ ಸಹಜ ಸಮೃದ್ದಿ ಸಾವಯವ ಕೃಷಿಕರ ಬಳಗ ಸಹಜ ಸೀಡ್ಸ್ ನ ಕೃಷ್ಣ ಪ್ರಸಾದ್ ಗೋವಿಂದಯ್ಯ ಮತ್ತು ಅವರ ಸಹಯೋಗಿ ಸಂಸ್ಥೆಗಳು ಹುಬ್ಬಳ್ಳಿಯಲ್ಲಿ ಹಲಸು ಮೇಳ ಹಮ್ಮಿಕೊಂಡಿದೆ .   ಇಲ್ಲಿ ರಾಜ್ಯದ ಖ್ಯಾತ ಹಲಸಿನ ತಳಿಗಳು, ವಿವಿಧ ದಂಟು ಹರಿವೆ, ಸಿರಿಧಾನ್ಯಗಳು,ಸಾವಯವ ಬೆಳೆಯ ಬೀಜಗಳ ಜೊತೆ ಅನೇಕ ಉಪಯುಕ್ತ ಮಾಹಿತಿ ದೊರೆಯಲಿದೆ.   ಇಲ್ಲಿನ ಹಲಸು ಮೇಳದಲ್ಲಿ ವಿಶೇಷ ಆಕರ್ಷಣೆ ತುಮಕೂರಿನ ಚೇಳೂರಿನ ಸಿದ್ದು ಹಲಸಿನ ಗಿಡಗಳನ್ನು ಅದರ ಮಾಲಿಕ ಪರಮೇಶ್ ಮಾರಾಟಕ್ಕೆ ಇಟ್ಟಿದ್ದಾರೆ, ರೂ 250ಕ್ಕೆ ಒರಿಜನಲ್ ಸಿದ್ದು ಹಲಸಿನ ಗಿಡ ಖರೀದಿಸುವ ಅವಕಾಶ ಇದೆ.   ಸಿದ್ದು ಹಲಸಿನ ಗಿಡವೇ ಸಿಗುವುದಿಲ್ಲ ಎಂಬ ಮಾತುಗಳಿಂದ ಈ ಹಲಸು ಬೆಳೆಸುವ ಆಸೆ ನನ್ನಂತೆ ಅನೇಕರು ಬಿಟ್ಟಿದ್ದೆವು ಈಗ ಸಿನೋರಿಯ ಬದಲಾಯಿಸಿದ್ದಾರೆ ಕೃಷ್ಣ ಪ್ರಸಾದ್ ಗೋವಿಂದಯ್ಯ.   9535144520ಗೆ ಪೋನ್ ಮಾಡಿ ನಿಮಗೆ ಬೇಕಾದಷ್ಟು ಸಿದ್ದು ಹಲಸಿನ ಸಸಿ ಮುಂಗಡವಾಗಿ ಕಾಯ್ದಿರಿಸಬಹುದಾಗ