Skip to main content

Blog number 922. ಶಿವಮೊಗ್ಗ ಜಿಲ್ಲೆಯ ಮ್ಯಾಜಿಕ್ ವಿಸ್ಮಯ ಸಂಸ್ಥೆ ಪ್ರಖ್ಯಾತ ಜಾದುಗಾರರಾದ ಪ್ರಶಾಂತ ಹೆಗಡೆ ಜಾದುಗಾರರದ್ದು ಇದು ದೇಶ ವಿದೇಶಗಳಲ್ಲಿ ಸಾವಿರಕ್ಕೂ ಹೆಚ್ಚಿನ ಪ್ರದರ್ಶನ ನೀಡಿದ ದಾಖಲೆಯ ಶಿವಮೊಗ್ಗದ ಏಕೈಕ ಜಾದುಗಾರರ ಸಂಸ್ಥೆ.

#ಶಿವಮೊಗ್ಗ_ಜಿಲ್ಲೆಯ_ಪ್ರಶಾಂತಹೆಗಡೆ_ಜಾದೂಗಾರ್_ನನ್ನ_ಅತಿಥಿ

#ಇವರ_ಮ್ಯಾಜಿಕ್_ವಿಸ್ಮಯ_ತಂಡದ_ದೇಶ_ವಿದೇಶದಲ್ಲಿನಪ್ರದರ್ಶನ_ಸಾವಿರಕ್ಕೂ_ಮಿಕ್ಕಿದೆ.

#ಕಾಯ೯ಕ್ರಮ_ಆಯೋಜಿಸುವವರ_ಕೈಸುಡದಂತೆ_ಅವರ_ಬಜೆಟ್_ಅನುಗುಣವಾಗಿ_ಮ್ಯಾಜಿಕ್_ಮಾಡಿ_ತೋರಿಸುತ್ತಾರೆ.

#ಶಿವಮೊಗ್ಗ_ಜಿಲ್ಲೆಯ_ಮ್ಯಾಜಿಕ್_ಸಾಧನೆಗೈದ_ಏಕೈಕ_ತಂಡ.

#ಮ್ಯಾಜಿಷಿಯನ್_ಜೀವನದಲ್ಲಿ_ಛಲಗಾರನಾಗಿ_ಗುರಿಮುಟ್ಟಿದ_ಇವರ_ಜೀವನದ_ಕಥೆ.

#ಒಂದು_ಕಾಲದಲ್ಲಿ_ಶಿವಮೊಗ್ಗದಲ್ಲಿ_ಪ್ರಖ್ಯಾತ_ಬ್ಯಾನರ್_ಬರಹಗಾರರೂ_ಆಗಿದ್ದರು.

#ಇವರ_ಪ್ರದಶ೯ನದ_ಉದ್ಘಾಟನೆ_ಎಣ್ಣೆಯ_ಬದಲು_ನೀರು_ಸುರಿದು_ದೀಪ_ಬೆಳಗಿಸುತ್ತಾರೆ!!

   ಶಿವಮೊಗ್ಗದ ಪ್ರಶಾಂತ ಹೆಗಡೆ ಜಾದೂಗಾರ್ ನನ್ನ ಪೇಸ್ ಬುಕ್ ಗೆಳೆಯರಲ್ಲಿ ವಿಶೇಷ ಗೆಳೆಯರು ಕಾರಣ ಇವರು ಬಾಲ್ಯದಲ್ಲಿ ಬೇಸಿಗೆ ರಜೆ ಆನಂದಪುರಂನ ಆಗಿನ ಪ್ರಖ್ಯಾತ ಕೋಮಲ ವಿಲಾಸ್ ಕುಟುಂಬದಲ್ಲಿ ಕಳೆಯುತ್ತಿದ್ದರಂತೆ ಹಾಗಾಗಿ ಇವರಿಗೆ ಆನಂದಪುರಂ ಚಿರಪರಿಚಿತ.
  ಆನಂದಪುರಂನ ಕೋಮಲ ವಿಲಾಸ್ ನ ಜಯವೀರ ನಾಯಕರ ಪತ್ನಿ ಇವರ ತಾಯಿ ತಂಗಿ ಅಂದರೆ ಚಿಕ್ಕಮ್ಮ ಈಗ ಅವರಾರು ಆನಂದಪುರಂನಲ್ಲಿ ಇಲ್ಲ.
   ಪ್ರಶಾಂತ ಹೆಗಡೆ ಜಾದೂಗಾರರ ತಂಡದ ಹೆಸರು #ಮ್ಯಾಜಿಕ್_ವಿಸ್ಮಯ ಇದು ಸಾವಿರಕ್ಕೂ ಮಿಕ್ಕಿ ದೇಶ ವಿದೇಶಗಳಲ್ಲಿ ಪ್ರದರ್ಶನ ಮಾಡುವ ಮೂಲಕ ಶಿವಮೊಗ್ಗದ ಏಕೈಕ ಜಾದೂ ಸಂಸ್ಥೆ ಎಂಬ ಖ್ಯಾತಿಗಳಿಸಿದೆ.
  ಸ್ವತಃ ಕಲಾವಿದರಾದ ಪ್ರಶಾಂತ ಹೆಗಡೆ ಜಾದುಗಾರ್ ವೇದಿಕೆಯನ್ನು ಪ್ರದರ್ಶನದಲ್ಲಿ ತಮ್ಮ ಕೈಚಳಕ - ಆಕರ್ಷಕವಾದ ಮಾತಿನಿಂದ-ಹಾಡು ನೃತ್ಯದಿಂದ ಕಿನ್ನರ ಲೋಕ ಸೃಷ್ಟಿಸುತ್ತಾರೆ.
   ಅಷ್ಟೇ ಅಲ್ಲ ಅಲ್ಲಿ ಅನೇಕ ದೇವಮಾನವರ ಪವಾಡ ರಹಸ್ಯ, ಮೂಡನಂಬಿಕೆ ಬಯಲು ಮಾಡುತ್ತಾ ಮನೋರಂಜನೆ ಜೊತೆ ಸಮಾಜಕ್ಕೆ ನೀತಿ ಪಾಠವೂ ಬೋದಿಸುತ್ತಾರೆ.
  ಗ್ರಾಮೀಣ ಪ್ರದೇಶದಲ್ಲೂ ಜನರಿಗೆ ಇವರ ಪ್ರದರ್ಶನವನ್ನು ಸುಲಭವಾಗಿ ನೋಡಲಿಕ್ಕಾಗಿ ಕಾರ್ಯಕ್ರಮದ ಆಯೋಜಕರ ಜೊತೆ ಅವರ ಆರ್ಥಿಕ ಸಭಲತೆಗೆ ತಕ್ಕದಾಗಿ ಕಾರ್ಯಕ್ರಮ ನೆರವೇರಿಸಿ ಕೊಡುತ್ತಾರೆ.
  ಇವರ ಜಾದು ಪ್ರದರ್ಶನದ ಉದ್ಘಾಟನೆ ದೀಪ ಹಚ್ಚುವ ಮೂಲಕ ಆದರೆ ಇಲ್ಲಿ ದೀಪಕ್ಕೆ ಎಣ್ಣೆ ಬದಲು ನೀರು ಬಳುಸುತ್ತಾರೆ!!! .... ನೀರಿನಲ್ಲಿ ದೀಪ ಉರಿಯುವುದೆಂತು?... ಜಾದುಗಾರರ ಈ ರಹಸ್ಯವನ್ನೂ ಪ್ರೇಕ್ಷಕರಿಗೆ ಬಿಚ್ಚಿ ತೋರಿಸುತ್ತಾರೆ.
   ಇವರ ತಂದೆಯ ತಂದೆ ಅಂದರೆ ಅಜ್ಜ ಮೂಲತ: ಕಾರ್ಕಳದಿಂದ ಶಿವಮೊಗ್ಗದಲ್ಲಿ ನೆಲೆಸಿ ನಂತರ ಮಹಾರಾಷ್ಟ್ರದ ಪಂಡರಾಪುರದಲ್ಲಿ ಪ್ರಸಿದ್ಧ ಹೋಟೆಲ್ ಮಾಲಿಕರಾಗಿ ಯಶಸ್ವೀ ಆಗಿದ್ದಾಗಲೇ ಅವರ ಮರಣದಿಂದಾಗಿ ಮತ್ತು ಅನೇಕರ ವಂಚನೆಗೀಡಾಗಿ ಅಲ್ಲಿಂದ    ಇಡೀ ಕುಟುಂಬ ಸೋಲಾಪುರಕ್ಕೆ ಬಂದು ಅಲ್ಲಿ ಹೋಟೆಲ್ ಉದ್ಯಮ ಪ್ರಾರಂಬಿಸುತ್ತಾರೆ ಭವಾನಿ ರೆಸ್ಟೋರಾಂಟ್ ಎಂಬ ಹೆಸರಲ್ಲಿ ಈಗಲೂ ಇವರ ಇಬ್ಬರು ಸಹೋದರರು ಅಲ್ಲೇ ಹೋಟೆಲ್ ಉದ್ಯಮ ಮುಂದುವರಿಸಿದ್ದಾರೆ.
  ಇವರ ತಾಯಿಯ ತಂದೆ ಆಗುಂಬೆ- ಹೆಬ್ರಿಗೆ ಆಗುಂಬೆ ಘಾಟಿಯಲ್ಲಿ ಎತ್ತಿನಗಾಡಿಯಲ್ಲಿ ಸರಕು ಸಾಗಾಣಿಕೆ ಮಾಡುತ್ತಾ ನಂತರ ಚಾಲಕ ವೃತ್ತಿ ಕಲಿತು CKMS ಬಸ್ ಡ್ರೈವರ್ ಆಗಿ ನಂತರ ಶಿವಮೊಗ್ಗದಲ್ಲಿ ನೆಲೆಸಿ MGTS ಎಂಬ ದೊಡ್ಡ ಸಾರಿಗೆ ಸಂಸ್ಥೆ ಕಟ್ಟುತ್ತಾರೆ ನಂತರ ಈ ಸಂಸ್ಥೆಯ ಪಾಲುದಾರರು ಬೇರೆ ಬೇರೆ ಆಗುತ್ತಾರೆ ಮತ್ತು ಅದರಿಂದ ಹೊರಬಂದ ಇವರ ಅಜ್ಜ ದಾಮೋದರ ಟ್ರಾನ್ಸ್ ಪೋರ್ಟ್ ಎಂಬ ಅನೇಕ ಲಾರಿ ಹೊಂದಿದ ಸಂಸ್ಥೆ ನಡೆಸಿದರೆ, ಇನ್ನೊಬ್ಬರು ಆನಂದ್ ಎ೦ಬ ಲಾರಿ ಸಂಸ್ಥೆ ಮತ್ತು ಜಯಪ್ರಕಾಶ್ ಶೆಣೈರ ತಂದೆ ವಿಜಯಾ ಮೋಟಾರ್ಸ್ ಎಂಬ ಬಸ್ಸಿನ ಸಾರಿಗೆ ಸಂಸ್ಥೆ ಸ್ಥಾಪಿಸುತ್ತಾರೆ.
   ಒಂದು ಹಂತದಲ್ಲಿ ಪ್ರಶಾಂತ ಹೆಗಡೆ ಜಾದುಗಾರರು ಶಿವಮೊಗ್ಗದಲ್ಲಿ ಬ್ಯಾನರ್ ಬರೆಯುತ್ತಿದ್ದರು, ಇವರ ಕಛೇರಿ ಶಿವಮೊಗ್ಗದ ಕರ್ನಾಟಕ ಸಂಘದ ಎದುರಿತ್ತು, ಕರ್ನಾಟಕ ಸಂಘದ ಕಾರಿಡಾರ್ ಗಳಲ್ಲಿ ಬ್ಯಾನರ್ ಬರೆಯುತ್ತಿದ್ದರು.
  ಮಗ ಇಂಜಿನಿಯರ್ ಆಗಿ ವರ್ಕ್ ಪ್ರ0 ಹೋಮ್, ಮಗಳು ಪದವಿ ಪೂರ್ವ ಕಾಲೇಜ್ ವ್ಯಾಸಂಗ ಮಾಡುತ್ತಿದ್ದಾರೆ.
   ಕುಮುಟಾದ ಪರ್ತಕಾಳಿ ಮಠದಲ್ಲಿ ಸ್ವಾಮೀಜಿಗಳ ಚಾತುಮಾ೯ಸದ ಅಂಗವಾಗಿ ಅಲ್ಲಿ ಇವರ ಮ್ಯಾಜಿಕ್ ವಿಸ್ಮಯ ಪ್ರದರ್ಶನ ನೀಡಲು ಹೋಗುವ ಮಾರ್ಗದಲ್ಲಿ ನನ್ನ ಬೇಟಿ ನಿಗದಿ ಆಗಿತ್ತು ನಮ್ಮ #ಮಲ್ಲಿಕಾ_ವೆಜ್ ನಲ್ಲಿ ಹಲಸಿನ ಎಲೆ ಕೊಟ್ಟೆ ಕಡಬು, ಗಿರ್ಮಿಟ್ ಮತ್ತು ಮಿರ್ಚಿ ಬೊಂಡಾ ಹಾಗೂ ಕೋಥಾಸ್ ಪಿಲ್ಟ್ ರ್ ಕಾಫಿ ಇವರ ಕುಟುಂಬಕ್ಕೆ ಇಷ್ಟ ಆಯಿತಂತೆ, ನಂತರ ನನ್ನ ಆಫೀಸಿನಲ್ಲಿ ಸುಮಾರು ಹೊತ್ತು ಅವರ ಆನಂದಪುರಂನ ಒಡನಾಟ, ಅವರ ವೃತ್ತಿ ಜೀವನದ ಕಲ್ಲು ಮುಳ್ಳಿನ ಹಾದಿಯ ಸಂಚಾರವೆಲ್ಲಾ ನೆನಪಿಸಿಕೊಂಡರು, ನನಗೆ ಪ್ರಶಾಂತ ಹೆಗಡೆ ಜಾದುಗಾರರ ಬೇಟಿ ಹರ್ಷ ನೀಡಿತು ಅವರ ವಿಸಿಟಿಂಗ್ ಕಾರ್ಡ್ ಪೋಟೋ ಲಗತ್ತಿಸಿದೆ.
  ನಿಮ್ಮ ಊರಿನ, ನಿಮ್ಮ ಸಂಘ ಸಂಸ್ಥೆಯ ಗಣೇಶ ಉತ್ಸವ, ಜಾತ್ರೆ ವಾರ್ಷಿಕೋತ್ಸವದಲ್ಲಿ ಇವರ ಕಾರ್ಯಕ್ರಮ ಹಮ್ಮಿಕೊಳ್ಳಲು ಇವರ ಸಂಪರ್ಕ ಸಂಖ್ಯೆ984418344 ಗೆ ಸಂಪರ್ಕಿಸಬಹುದಾಗಿದೆ.
  ಇನ್ನೊಂದು ವಿಶೇಷ ಮರೆತಿದ್ದೆ... ಇವರ ಪ್ರದರ್ಶನದಲ್ಲಿ ಉದ್ಘಾಟನೆಗೆ ನೀರಿನಿಂದ (ಎಣ್ಣೆ ಬಳಸದೆ ) ಉರಿಸುವ ದೀಪದ ಬತ್ತಿಗೆ ಬೇಕಾದ ರಹಸ್ಯ ವಸ್ತು ನನ್ನಿಂದ ಕಳೆದ ಜನವರಿಯಲ್ಲಿ ಪಡೆದಿದ್ದರು ಅದೇನೆಂದು ಅವರ ಪ್ರದರ್ಶನದಲ್ಲಿ ಅವರೇ ಬಹಿರಂಗ ಪಡಿಸುತ್ತಾರೆ.
   ಮುಂದಿನ ದಿನದಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿಭಾವಂತ ಜಾದುಗಾರರಾದ ಪ್ರಶಾಂತ ಹೆಗಡೆ ಇನ್ನೂ ಹೆಚ್ಚಿನ ಯಶಸ್ಸು-ಆರೋಗ್ಯ-ಐಶ್ವಯ೯ ಪಡೆಯಲಿ ಎಂದು ಹಾರೈಸಿ ನನ್ನ ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ನೆನಪಿನ ಕಾಣಿಕೆ ಆಗಿ ನೀಡಿ ಬಿಳ್ಕೊಟ್ಟೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ