Skip to main content

Posts

Showing posts with the label He diclares him self Prison number 4 theief but it was his agetation against rich people

Blog number 1826. ನಾನು ನಾಲ್ಕನೇ ನಂಬರ್ ಕಳ್ಳ ಎಂದು ತನ್ನ ಒಂಟಿ ಹ್ಯಾಂಡಲ್ ಲಟಾರಿ ಸೈಕಲ್ ನಲ್ಲಿ ಸ್ಲೇಟಿನಲ್ಲಿ ಬರೆದು ತಗಲಿಸಿಕೊಂಡು ತಮ್ಮ ಜೀವಿತಾವದಿ ಪ್ರತಿಭಟನೆ ದಾಖಲಿಸಿದ ಪುರಪ್ಪೆ ಮನೆ ನಾಯಕರು 70 ರ ದಶಕದಲ್ಲಿ ಮಲೆನಾಡು ಪ್ರಾಂತ್ಯದಲ್ಲಿ ರೋಚಕ ಕಥೆಗಳ ನಿಗೂಡ ವ್ಯಕ್ತಿ ಆಗಿದ್ದರು.

#ಅರವತ್ತು_ಎಪ್ಪತ್ತು_ದಶಕದಲ್ಲಿ_ಮಲೆನಾಡು_ಪ್ರಾಂತ್ಯದಲ್ಲಿ_ನಾಲ್ಕನೇ_ನಂಬರ್_ಕಳ್ಳ. #ಇವರ_ಬಗ್ಗೆ_ಅನೇಕ_ರೋಚಕ_ಕಥೆಗಳು_ಹರಿದಾಡುತ್ತಿತ್ತು #ತಾಯಂದಿರುಗಳು_ಮಕ್ಕಳಿಗೆ_ಊಟ_ನಿದ್ದೆ_ಮಾಡಿಸಲು_ಗುಮ್ಮನ_ಕಥೆ_ಜೊತೆ_ಇವರನ್ನು_ಸೇರಿಸುತ್ತಿದ್ದರು. #ಇವರು_ಹೋದಲ್ಲೆಲ್ಲ_ಜನ_ಮುತ್ತಿಕೊಳ್ಳುತ್ತಿದರು. #ಕಿನ್ನರ_ಜೋಗಿಯಂತೆ_ಮಕ್ಕಳು_ಹಿಂಬಾಲಿಸುತ್ತಿದ್ದರು. #ಬಡವ_ಶ್ರೀಮಂತರ_ವರ್ಗ_ಸಂಘರ್ಷದಲ್ಲಿ_ಜೈಲು_ಸೇರಿದ್ದಕ್ಕೆ_ಪ್ರತಿಭಟನೆ_ಇದಾಗಿತ್ತು. #ಕುಟುಂಬದವರಿಗೆ_ಅವಮಾನ_ನೋಡುವವರಿಗೆ_ಗೇಲಿಗೆ_ಕಾರಣವಾಗಿದ್ದರು. #ಆದರೆ_ಇವರು_ಶೋಷಣೆಯನ್ನು_ಇವರದೇ_ರೀತಿಯಲ್ಲಿ_ವಿರೋದಿಸಿದವರು. ಇವತ್ತು ಮಧ್ಯಾಹ್ನ ಬೆಂಗಳೂರಿಂದ ಚಲನ ಚಿತ್ರ ನಿಧೇ೯ಶಕರಾದ  ಬಾಳೆಗುಂಡಿ ಈಶ್ವರ್ ತಮ್ಮ ಬಾಲ್ಯದಲ್ಲಿ ನೋಡಿದ್ದ 4 ನೇ ನಂಬರ್ ಕಳ್ಳ ಎಂದು ಸೈಕಲ್ ನಲ್ಲಿ ಸಂಚರಿಸುತ್ತಿದ್ದವರ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದಿಯಾ ಅಂತ ಕೇಳಿದ್ದರು.    ಈಶ್ವರ್ ಬಾಳೆಗುಂಡಿ ಪ್ರೀತಿ ನೀನಿಲ್ಲದೆ ನಾ ಹೇಗಿರಲಿ ಎಂಬ ಯಶಸ್ವಿ ಚಿತ್ರದ ನಿರ್ದೇಶಕರು, ಇವರು ನಿರ್ದೇಶಿಸಿದ ಉಮೆನ್ಸ್ ಡೇ - ಮಹಾನಗರ - ಸಲ್ಯೂಟ್ - ಗ್ರೀನ್ ಸಿಗ್ನಲ್ ಚಿತ್ರಗಳು ಬಿಡುಗಡೆ ಆಗಿದೆ, ಶಿವಮೊಗ್ಗ ಜಿಲ್ಲಾ ಮಂತ್ರಿ ಮದುಬಂಗಾರಪ್ಪರ ದೇವಿ ಸಿನಿಮಾ ಇವರೇ ನಿರ್ಧೇಶಿಸಿದ್ದು ಆದರೆ ಅದಿನ್ನೂ ಬಿಡುಗಡೆ ಆಗಿಲ್ಲ. ಆಗ ನೆನಪಾಯಿತು ನಾಲ್ಕನೇ ನಂಬರ್ ಕಳ್ಳ ಎಂದು ಸ್ವಯಂ ಘೋಷಿಸಿ ಕೊಂಡ ಹೆಗ್ಗ...