Skip to main content

4183.ಕರ್ಮಯೋಗಿ_ಶ್ರೀಕೃಷ್ಣನ_ಜನ್ಮದಿನ.ಬದುಕಿಗೆ_ಬೆಳಕಾಗಲಿ_ಗೀತೆಯ_ಸಂದೇಶ.​


ಕರ್ಮಯೋಗಿ_ಶ್ರೀಕೃಷ್ಣನ_ಜನ್ಮದಿನ.
ಬದುಕಿಗೆ_ಬೆಳಕಾಗಲಿ_ಗೀತೆಯ_ಸಂದೇಶ.
  ​ದ್ವಾಪರಯುಗದಲ್ಲಿ ಅಧರ್ಮ ಅಳಿಸಿ, ಧರ್ಮವನ್ನು ರಕ್ಷಿಸಲು ಕಾರಾಗೃಹದಲ್ಲಿ ಜನಿಸಿದ ದೇವಕಿನಂದನ, ಯಶೋದೆಯ ಮುದ್ದು ಕಂದ ಶ್ರೀಕೃಷ್ಣನ ಜನ್ಮದಿನವೇ ಈ ಪವಿತ್ರ 'ಕೃಷ್ಣ ಜನ್ಮಾಷ್ಟಮಿ.

  ಜ್ಯೋತಿಷ್ಯ ಹಾಗೂ ಪೌರಾಣಿಕ ಕಾಲಗಣನೆಯ ಪ್ರಕಾರ ಶ್ರೀಕೃಷ್ಣನ ಜನನ ಕ್ರಿ.ಪೂ. 3228 ಎಂದು ಪರಿಗಣಿಸಿದರೆ 2026ನೇ ಇಸವಿಯಲ್ಲಿ ಇವತ್ತು ಆಚರಿಸಲಾಗುತ್ತಿರುವುದು ಶ್ರೀಕೃಷ್ಣನ 5253ನೇ ಜನ್ಮಾಷ್ಟಮಿ.

 ಹಿಂದೂ ಪುರಾಣ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ 12:00 ಗಂಟೆಗೆ (ನಿಶೀಥ ಕಾಲದಲ್ಲಿ) ಮಥುರೆಯ ಕಾರಾಗೃಹದಲ್ಲಿ ಜನಿಸಿದನು.

​​  ಜ್ಯೋತಿಷ್ಯ ಲೆಕ್ಕಾಚಾರಗಳು ಮತ್ತು ಪೌರಾಣಿಕ ದಾಖಲೆಗಳನ್ನು ಆಧರಿಸಿ ಸಂಶೋಧಕರು ಹಾಗೂ ವಿದ್ವಾಂಸರು ಶ್ರೀಕೃಷ್ಣನ ನಿಖರ ಜನನ ದಿನಾಂಕವನ್ನು ಕ್ರಿ.ಪೂ. 3228 ಜುಲೈ 18 ಅಥವಾ ಜುಲೈ 21 ಎಂದು ಗುರುತಿಸಿದ್ದಾರೆ.

   ​ಹಿಂದೂ ಪಂಚಾಂಗದ ದಿನಾಂಕ ಶ್ರಾವಣ ಮಾಸ, ಕೃಷ್ಣ ಪಕ್ಷದ ಅಷ್ಟಮಿ ತಿಥಿ (ರೋಹಿಣಿ ನಕ್ಷತ್ರ)
​ಆಚರಣೆ,ಈ ದಿನವನ್ನೇ ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲಾಗುತ್ತದೆ.

 ​ ತುಂಟಾಟದ ಬಾಲಗೋಪಾಲನಾಗಿ ಗೋಪಿಯರ ಮನಗೆದ್ದವನು, ಕೊಳಲನೂದಿ ಗೋವುಗಳ ಕಾಯ್ದವನು, ಕಾಳಿಂಗ ಮರ್ದನ ಮಾಡಿ ದುಷ್ಟರನ್ನು ಶಿಕ್ಷಿಸಿದವನು ಮತ್ತು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಭಗವದ್ಗೀತೆಯ ತತ್ವಬೋಧೆ ಮಾಡಿದ ಜಗದ್ಗುರು ಶ್ರೀಕೃಷ್ಣ.

  ​ಕೃಷ್ಣನ ಜೀವನ ನಮಗೆ ಕೇವಲ ಭಕ್ತಿಯನ್ನಷ್ಟೇ ಅಲ್ಲ, ಬದುಕಿನ ಪ್ರತಿಯೊಂದು ಹಂತದಲ್ಲೂ ಸಂಕಷ್ಟಗಳನ್ನು ನಗುಮುಖದಿಂದಲೇ ಹೇಗೆ ಎದುರಿಸಬೇಕೆಂಬ ಜೀವನ ಪಾಠವನ್ನು ಕಲಿಸುತ್ತದೆ. 

  ಫಲದ ನಿರೀಕ್ಷೆಯಿಲ್ಲದೆ ಕರ್ಮ ಮಾಡಬೇಕೆಂಬ ಆತನ ಮಾತು ಇಂದಿನ ಒತ್ತಡದ ಬದುಕಿಗೆ ದಾರಿದೀಪ.

  ​ಮನೆಗಳ ಮುಂದೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಕೃಷ್ಣನನ್ನು ಸ್ವಾಗತಿಸುವಂತೆ ನಮ್ಮ ಮನಸ್ಸುಗಳಲ್ಲಿ ಆತನ ಸದ್ಗುಣಗಳು ನೆಲೆಯಾಗಲಿ.

  ಮುದ್ದು ಮುರಳೀಧರ ಎಲ್ಲರಿಗೂ ಆಯುಷ್ಯ, ಆರೋಗ್ಯ, ಸುಖ ಮತ್ತು ನೆಮ್ಮದಿಯನ್ನು ಕರುಣಿಸಲಿ.

​ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು! ....

#ಕೃಷ್ಣ_ಜನ್ಮಾಷ್ಟಮಿ
#ನನ್ನ_ನೆನಪುಗಳು....
   
  ಕೃಷ್ಣ ನನ್ನ ಅತ್ಯಂತ ಪ್ರೀತಿಯ ದೇವರು, ನಮ್ಮ ತಂದೆ ಹೆಸರು, ನನ್ನ ಭಾವನ ಹೆಸರು ಅಷ್ಟೇಕೆ ನನ್ನ ಮಗನ ಹೆಸರೂ ಕೃಷ್ಣ.

  ನಮ್ಮ ರೈಸ್ ಮಿಲ್ ಹೆಸರು ಕೃಷ್ಣಾ ರೈಸ್ ಮಿಲ್ ಆಗಿತ್ತು ಈಗಿನ ನಮ್ಮ ಕಲ್ಯಾಣ ಮಂಟಪದ ಹೆಸರು ಕೃಷ್ಣ ಸರಸ ಕನ್ವೆನ್ಷನ್ ಹಾಲ್,

   ನಾನು ಉಡುಪಿ ಕೃಷ್ಣನು ಒಲಿದ ಕನಕದಾಸರ ಭಕ್ತನೂ ಹೌದು, ಕನಕದಾಸರ ಹುಟ್ಟಿದ ಸ್ಥಳ, ಅವರ ಕೋಟೆ, ಅವರು ನೆಟ್ಟಿದ ಅರಳಿ ಮರ, ಅವರು ಬಳಸಿದ ಶಂಖ, ಮರದ ಬಿಕ್ಷಾಪಾತ್ರೆ ಮತ್ತು ಅವರ ಸಮಾದಿಯನ್ನು ಕೂಡ ಸಂದರ್ಶಿಸಿದ್ದೇನೆ.

  ಸಮುದ್ರದಲ್ಲಿ ಮುಳುಗಿದ ದ್ವಾರಕೆ ಸಂಶೋದಿಸಿದ S.R. ರಾವ್ ಜನಿಸಿದ್ದು ನಮ್ಮೂರು ಆನಂದಪುರಂ ನಲ್ಲಿ ಅವರನ್ನು ಬೇಟಿ ಮಾಡಿದ್ದು ಕೂಡ ನನ್ನ ಬಾಗ್ಯ.

    ಪುರಿ,ದ್ವಾರಕೆ ಮತ್ತು ಮಥುರಾ ನೋಡಿ ಬರಲು ಇನ್ನೂ ಕಾಲ ಕೂಡಿ ಬರಲಿಲ್ಲ.

   ಪಂಜಾಬಿನ ಜಲಂದರ್ ಪಟ್ಟಣದಲ್ಲಿ ನಾನು ನೋಡಿದ ಜನ್ಮಾಷ್ಟಮಿಯಷ್ಟು ದೊಡ್ಡ ವೈಭವ ನಾನು ಬೇರೆಲ್ಲೂ ನೋಡಿಲ್ಲ, ಆ ದಿನ ಜಲಂದರ್ ನ ಮುಖ್ಯ ರಸ್ತೆಯಲ್ಲಿ ಸಾಗುವ ಬೃಹತ್ ಮೆರವಣಿಗೆಯಿಂದ ರಸ್ತೆ ದಾಟಲು ಗಂಟೆಗಟ್ಟಲೆ ಕಾಯಬೇಕು, ಅತಿ ಹೆಚ್ಚು ಸಿಖ್ ಧರ್ಮಿಯರು ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

   ನಾನು ಪ್ರತಿ ದಿನ ಪೂಜಿಸುವ ಪಂಚಲೋಹದ ಕಡೆಗೋಲು ಕೃಷ್ಣ ವಿಗ್ರಹ ನೀಡಿದವರು ಮಂಗಳೂರಿನ ಪ್ರದೀಪ್ ಕುಮಾರ್ ಕಲ್ಕೂರರು.

  ಕಾಸರಗೋಡಿನಲ್ಲಿ ನಡೆದ ದಾಸ ಸಾಹಿತ್ಯದ ಒ0ದು ಸಭೆಯಲ್ಲಿ ಕಾಸರಗೋಡಿನ ಗಡಿನಾಡ ಕನ್ನಡ ಸಂಘಟನೆಯ ಶಿವರಾಂ ಕಾಸರಗೋಡು ನನ್ನನ್ನು ಆಗಿನ ದ.ಕ.ಜಿಲ್ಲೆಯ ಸಾಹಿತ್ಯ ಪರಿಷತ್ ಅಧ್ಯಕ್ಷರ ಜೊತೆ ವೇದಿಕೆಯಲ್ಲಿ ಕುಳ್ಳಿರಿಸಿದಾಗ ಪ್ರದೀಪ್ ಕುಮಾರ್ ಕಲ್ಕೂರರು ನನಗೆ ನೀಡಿದ ನೆನಪಿನ ಕಾಣಿಕೆ ಇದು.

  ಪ್ರದೀಪ್ ಕುಮಾರ್ ಕಲ್ಕೂರರು ಮಂಗಳೂರಿನ ಪ್ರತಿಷ್ಠಿತ ಜಾಹಿರಾತು ಸಂಸ್ಥೆ ಮುಖ್ಯಸ್ಥರು, ಇವರ ಕಲ್ಕೂರ್ ಪ್ರಕಾಶನದಿಂದ ಕನ್ನಡ ಮತ್ತು ತುಳು ಭಾಷೆಯ ಅನೇಕ ಯಕ್ಷಗಾನ ಪುಸ್ತಕ ಪ್ರಕಟಿಸಿದ್ದಾರೆ.

  ಇವರ ನೇತೃತ್ವದಲ್ಲಿ ಇವರ ಕಲ್ಕೂರ್ ಪ್ರತಿಷ್ಟಾನದಿಂದ ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಗೆ ಮಂಗಳೂರಿನ ಕದ್ರಿ ದೇವಾಲಯದಲ್ಲಿ ಇವರು ನಡೆಸುವ ಮಕ್ಕಳ ಕೃಷ್ಣ ವೇಷ ಸ್ಪರ್ದೆ ತುಂಬಾ ಪ್ರಸಿದ್ದಿ ಪಡೆದಿದೆ.

 ಇವತ್ತು ಮಂಗಳೂರಲ್ಲಿ ಇವರ ಪ್ರತಿಷ್ಟಾನದ ಕಾಯ೯ಕ್ರಮ ತುಂಬಾ ಅದ್ದೂರಿಯಾಗಿ ನಡೆದ ವರದಿಗಳು ಇದೆ.

  ಪ್ರತಿ ವರ್ಷ ಕೃಷ್ಣಾಷ್ಟಮಿಯಂದು ಪ್ರದೀಪ್ ಕುಮಾರ್ ಕಲ್ಕೂರರು ಈ ರೀತಿ ನೆನಪಾಗುತ್ತಾರೆ.

  ಕೃಷ್ಣ ಜನ್ಮಾಷ್ಟಮಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

#KrishnaJanmashtami #JanmashtamiSpecial #ShreeKrishna #HappyJanmashtami #ಕೃಷ್ಣಜನ್ಮಾಷ್ಟಮಿ #ಗೀತಾಉಪದೇಶ #FestivalOfJoy
#KrishnaJanmashtami #JanmashtamiSpecial #ShreeKrishna #HappyJanmashtami #ಕೃಷ್ಣಜನ್ಮಾಷ್ಟಮಿ #ಗೀತಾಉಪದೇಶ #FestivalOfJoy

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...