#ಮರಕಿಣಿ_ನಾರಾಯಣಮೂರ್ತಿಗಳು #ನಮ್ಮಿಬ್ಬರ_ಮುಖತಃ_ಬೇಟಿಗೆ_ಮಹೂರ್ತ_ಯಾವಾಗ ? #marakininarayanamurthy #facebookpost #tkrameshshetty #ninasam #kannada #drama #yakshgana #tvserial ಸದಾ ನಗುಮೊಗದ ಕನ್ನಡದ ಸಾಹಿತಿಗಳಿಗೆ, ಯಕ್ಷಗಾನ - ನಾಟಕ - ದಾರಾವಾಹಿಗಳ ಲೋಕದವರಿಗೆ ಚಿರಪರಿಚಿತರು ಮರಕಿಣಿ ನಾರಾಯಣ ಮೂರ್ತಿಯವರು. ಪ್ರತಿ ವರ್ಷ ನಮ್ಮ ಸಾಗರ ತಾಲ್ಲೂಕಿನ ಹೆಗ್ಗೋಡಿನ ನಿನಾಸಂ - ತುಮರಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಕಾರ್ಯಕ್ರಮಕ್ಕೆ ತಪ್ಪದೆ ಬಂದು ಹೋಗುತ್ತಾರೆ. ಆದರೂ ನಮ್ಮಿಬ್ಬರ ಬೇಟಿಗೆ ಮಹೂರ್ತ ಮೂಡಿಬಂದಿಲ್ಲ ಆದ್ದರಿಂದ ನಾನು ಅವರಿಗೆ ನನ್ನ ಸಂದೇಶ ಕಳಿಸಿದ್ದೇನೆ ... "ಸರ್ ನಾನು ನಿಮ್ಮ ಅಭಿಮಾನಿ ನನಗೂ ನಿಮ್ಮ ಅನಿರೀಕ್ಷಿತ ಬೇಟಿಯಲ್ಲಿ ಮುಖಾಮುಖಿ ಆಗಲಾಗದ್ದು ಬೇಸರ ಅನ್ನಿಸಿತು, ಅನೇಕ ವರ್ಷದಿಂದ ಬೇಟಿಯ ನಿರೀಕ್ಷೆ ಮುಂದು ಮುಂದು ಹೋಗುತ್ತಿದೆ ಆದ್ದರಿಂದ ಮುಂದಿನ ಬಾರಿ ಹೀಗೆ ದಿಡೀರ್ ಬರಬೇಡಿ,ಒಂದು ದಿನ ನನ್ನ ಅತಿಥಿ ಆಗಿ ಉಳಿದು ಹೋಗುವಂತೆ ಬಿಡುವು ಮಾಡಿಕೊಂಡು ಬನ್ನಿ ಮತ್ತುಬರಲೇ ಬೇಕು" ಅಂತ. ನನ್ನ ಅಣ್ಣನಂತೆ ಇರುವ ಇವರು ನನ್ನಂತೆ ಪಂಚೆದಾರಿಗಳು ಆದರೆ ಬಾಯಿ ತುಂಬಾ ನನಗೆ "ಅರುಣಣ್ಣ" ಅನ್ನುತ್ತಾರೆ ಅದೊಂದು ತರ ಅಪ್ಯಾಯವಾಗಿ ನನಗೆ ಕೇಳುತ್ತದೆ ಮತ್ತು ಇಷ್ಟ ಆಗಿದೆ, ನಮ್ಮಿಬ್ಬರನ್ನ ಗೆಳೆಯರನ್ನಾಗಿ ಮಾಡಿದ ಪೇಸ್ ಬುಕ್ ಗೆ ಎಷ್ಟು ಧ...