Skip to main content

Posts

Showing posts from November, 2019

#ಮರೆತೇ ಹೋಗಿದ್ದ ಮಲೆನಾಡಿನ ನೀರುಕಡುಬು #

#ಮರೆತೇ ಹೋಗಿದ್ದ ನಮ್ಮ ಅಮ್ಮ ಮಾಡುತ್ತಿದ್ದ ನೀರುಕಡುಬು ಇವತ್ತಿನ ಉಪಹಾರ.#  1965 ರಿಂದ 1974ರ ತನಕ ಈ ನೀರುಕಡಬು ವಾರಕ್ಕೆ ಒಮ್ಮೆಯಾದರೂ ನಮ್ಮ ಅಮ್ಮ ತಯಾರಿಸುತ್ತಿದ್ದಳು, 1975 ರಲ್ಲಿ ಅಮ್ಮನ ಅಕಾಲಿಕ ನಿಗ೯ಮನ ಮನೇಲಿ ಅಡುಗೆ ಇತ್ಯಾದಿ ಗೃಹ ಕೃತ್ಯ ನಮ್ಮದಾಯಿತು ಆದರೆ ಅಮ್ಮನ ಅನೇಕ ರುಚಿಕಟ್ಟಾದ ಅಡುಗೆ ರೆಸಿಪಿ ಮರೆತೇ ಹೋಯಿತು.   ಅಕ್ಕಿ ಬೀಸು ಕಲ್ಲಿನಲ್ಲಿ ಬೀಸಿ ರವೆ ಮಾಡಿ ಅದನ್ನ ಬಿಸಿ ನೀರಿನಲ್ಲಿ ರುಚಿಗೆ ಉಪ್ಪು ಸೇರಿಸಿ ಆದ೯ ಬೇಯಿಸಿ ವಡೆ ಆಕಾರ ಮಾಡಿ ಕುದಿಯುವ ನೀರಿನಲ್ಲಿ ಬೇಯಿಸಬೇಕು ತುಂಬಾ ಸರಳ ಆದರೆ ಹದ ತಪ್ಪಿದರೆ ನೀರು ಕಡಬು ಗಂಜಿ ಆಗಿ ಕರಗಿ ಆಡುಗೆ ಹದ ತಪ್ಪಿ ಹಾಳಾಗುತ್ತದೆ.   ಅನೇಕರಲ್ಲಿ ನೀರು ಕಡಬು ಮಾಡೋದು ಹೇಗೆ? ಅಂತ ಕೇಳುತ್ತಿದ್ದೆ ಆದರೆ ಅವರಿಗೆ ಮಲೆನಾಡಿನ ಉ೦ಡೆ ಕಡಬು ಗೊತ್ತಿತ್ತೇ ವಿನಃ ನನಗೆ ಮಾತ್ರ ಗೊತ್ತಿದ್ದ ನೀರು ಕಡುಬು ಅವರಿಗೆ ಗೊತ್ತಾಗುತ್ತಿರಲಿಲ್ಲ.    ನೀರು ಕಡಬು ಮಲೆನಾಡಿನ ತಿಂಡಿ ಆದರೂ ಜನಮಾನಸದಲ್ಲಿ ಮರೆತೇ ಹೋಗಿತ್ತು, ಮಲೆನಾಡಿನ ವೈವಿಧ್ಯಮಯ ಭತ್ತದ ಅಕ್ಕಿಯಲ್ಲಿ ಒಂದೊಂದು ಸಾರಿ ಒಂದೊಂದು ಗಮ ರುಚಿ, ಗಟ್ಟಿ ಕಾಯಿ ಚಟ್ನಿ ಜೊತೆಗೆ ಬಾಳೆ ಎಲೆಯಲ್ಲಿ ನೀರುಕಡುಬು ಸೇವನೆ ಒಮ್ಮೆ ಸವಿದರೆ ನೀವು ಬಿಡುವುದಿಲ್ಲ.   ದೂರದ ಭಟ್ಕಳದ ನವಾಯಿತರ ಹೆಣ್ಣುಮಗಳು ಮಲೆನಾಡಿನ ನೀರುಕಡುಬಿನ ರೀತಿಯ ಕಡಬು ತಯಾರಿಸುವ ಮಾದರಿ ಸೋಷಿಯಲ್ ಮೀಡಿಯಾದಲ್ಲಿ ನೋಡಿ ಮತ್ತು ನನ್ನ ಅಮ್ಮ ತಯಾರಿಸುವ ವಿದಾನ ಮತ್ತ

#ಹಲವಾರಿ ಮಠದ ನೂತನ ಸ್ವಾಮೀಜಿ ಶ್ರೀ ಜಗದೀಶ್ ಜೀ #

# ನಮ್ಮ ಇವತ್ತಿನ ಅತಿಥಿಗಳು ಗೋರಕಪುರದ ಬಾರ ಪಂತ್ ಗೆ (ನಾಥ ಪoತದ) ಸೇರಿದ ಉಡುಪಿ ಜಿಲ್ಲೆಯ ಹಲವಾರಿ ಮಠದ ಶ್ರೀ ಜಗದೀಶ್ ಸ್ವಾಮಿಜಿ#   2017ರಲ್ಲಿ ನಾಸಿಕ್ ನಿ೦ದ ನಡೆದು ಬಂದ 630 ಸನ್ಯಾಸಿಗಳ ಬಾರ ಪಂತ್ ಯಾತ್ರೆ ಉಡುಪಿ ಜಿಲ್ಲೆಯ ಸಿದ್ದಾಪುರ ಸಮೀಪದ ಕಮಲಶಿಲೆ ಹತ್ತಿರದ 5000ಕ್ಕೂ ಹೆಚ್ಚು ವಷ೯ದ ಇತಿಹಾಸ ಪ್ರಸಿದ್ದ ಹಲವಾರಿ ಮಠಕ್ಕೆ ಶ್ರೀ ಜಗದೀಶ್ ಸ್ವಾಮಿಜಿಯವರನ್ನ ಮಠದ ಅಧಿಪತಿ ಆಗಿ ನಿಯಮಿಸಿದ್ದಾರೆ.   ಈ ಮಠದಲ್ಲಿ 34 ವಷ೯ ದೀಘ೯ ಅವದಿಗೆ ಸ್ವಾಮಿಗಳಾಗಿದ್ದ ಶ್ರೀ ಸೋಮನಾಥ ಪೀರ್ ಸ್ವಾಮಿಜಿ ಬಾರ ಪಂತ್ ಬರುವ 2 ವಷ೯ ಮೊದಲೇ ಇಹಲೋಕ ತ್ಯಜಿಸಿದ್ದರು.   ಉತ್ತರ ಪ್ರದೇಶದ ಹಾಲಿ ಮುಖ್ಯಮಂತ್ರಿ ಆದಿತ್ಯನಾಥರು ಗೋರಕ್ ಪುರದ ಸಂತರು ಇವರಿಗೆ ಮುಖ್ಯಸ್ಥರು.    ಹಿಂದಿನ ಸೋಮನಾಥ ಪೀರ್ ಸ್ವಾಮಿಗಳು ನನ್ನ ಗುರುಗಳು ಇವತ್ತು ಅವರ ಕೃಪಕಟಾಕ್ಷ ನನ್ನ ಮೇಲಿದೆ ಅಂತಹ ಅನೇಕ ಆಗೋಚರ ಅನುಭವ ನನ್ನ ಮೇಲೆ ಆಗುತ್ತಿರುತ್ತದೆ.   ಆದಿಚುಂಚನ ಗಿರಿ ಸ್ವಾಮಿಜಿಗಳ ಆಮಂತ್ರಣದ ಮೇರೆಗೆ ಆದಿಚುಂಚನಗಿರಿಯ ಕಾಲ ಬೈರವೇಶ್ವರ ಸನ್ನಿದಿಗೆ ಹೋಗುವ ಮಾಗ೯ದಲ್ಲಿ ನಮ್ಮ ನೂತನ ಲಾಡ್ಜ್ ಕಚೇರಿಗೆ ಆಗಮಿಸಿದ್ದರು.        ಸೋಮನಾಥ ಪೀರ್ ಸ್ವಾಮಿಗಳು ಇದ್ದಾಗ ಕುಂದಾಪುರದಿಂದ ಬರುವಾಗ  ಒಂದು ರಾತ್ರಿ ನಾನು ಹಲವಾರಿ ಮಠಕ್ಕೆ ಹೋದಾಗ ಇದೇ ಜಗದೀಶ್ ಸ್ವಾಮಿಜಿ (ಆಗ ಪೀಟಾದೀಶರಾಗಿರಲಿಲ್ಲ) ಅಲ್ಲಿಗೆ ಬಂದು ತಂಗಿದ್ದರು ಅವರೇ ನಮಗೆ ಗೋದಿ ರೊಟ್ಟಿ ಆಲೂ ಪಲ್ಯ ಮಾಡಿ ಬಡಿಸಿ

#ಪತ್ರಿಕೋದ್ಯಮದ ದಿಗ್ಗಜ ಶಾಮರಾವ್ ರ ಸಾಗರ ತಾಲ್ಲೂಕಿನ ನಂಟು #

#ಸಂಯುಕ್ತ ಕನಾ೯ಟಕದ ಶಾಮರಾವ್ ರ ಆತ್ಮಚರಿತ್ರೆ ಸಂಜಯ ಉವಾಚದಲ್ಲಿ ಸಾಗರ ತಾಲ್ಲೂಕ್ #  1. ಕೆಳದಿ ಮಠದ ಹೋರಾಟದಲ್ಲಿ. ಶಾಮರಾಯರು.  ಸಂಯುಕ್ತ ಕನಾ೯ಟಕದ ಸಂಪಾದಕರಾದ ಶಾಮರಾಯರೆಂದರೆ ಪತ್ರಿಕೋದ್ಯಮದ ಬೀಷ್ಮರಿದ್ದ೦ತೆ ಅವರು ಪ್ರಾರಂಭದಲ್ಲಿ  ಸಂಜಯ ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು ಆ ವಾರ ಪತ್ರಿಕೆಗೆ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಚಂದಾದರರಿದ್ದರು, ಈ ಪತ್ರಿಕೆ ಸಾಗರ ತಾಲ್ಲೂಕಿನ ಅಡಕೆ ಬೆಳೆಗಾರರು, ಕೆಳದಿ ಮಠ, ಕಾಗೋಡು ಹೋರಾಟದ ಬಗ್ಗೆ ಹೆಚ್ಚು ವರದಿ ಮಾಡಿದ ಖ್ಯಾತಿ ಇದೆ.   ಶಾಮರಾಯರ ಆತ್ಮಚರಿತ್ರೆ ಅವರ ಶಿಷ್ಯ ಖ್ಯಾತ ಪತ್ರಕತ೯ ವಿಶ್ವೇಶ್ವರ ಭಟ್ಟರು ಬರೆದು ಪ್ರಕಟಿಸಿದ್ದಾರೆ ಅದರ ಹೆಸರು "ಸಂಜಯ ಉವಾಚ ''ಆದರಲ್ಲಿ ಸಾಗರ ತಾಲ್ಲೂಕಿನ ಕೆಲ ನೆನಪು ಘಟನೆ ದಾಖಲಿಸಿದ್ದಾರೆ ಅದನ್ನ ಕೆಲ ಬಾಗಗಳಾಗಿ ಇಲ್ಲಿ ಬರೆದಿದ್ದೇನೆ.  ಕೆಳದಿ ರಾಜ ಮಠದ ವ್ಯಾಜ್ಯಗಳು ಸ್ವಾತಂತ್ರ ಪೂವ೯ದಿOದಲೂ ಇದೆ, ಮೊನ್ನೆ ದಸರಾದಲ್ಲಿ ಆ ಮಠದ ಪಚ್ಚೆ ಲಿಂಗ ಲಾಕರ್ ನಿಂದ ತಂದು ಪ್ರದಶ೯ನಕ್ಕೆ ಇಡಲಾಗಿತ್ತು.   ಇದು ಕೆಲ ವ್ಯಾಜ್ಯದಿಂದ ಭಕ್ತರ ದಶ೯ನಕ್ಕೆ ಲಭ್ಯವಿದ್ದಿಲ್ಲ ಹಾಲಿ ಮಠದ ಸ್ವಾಮಿಗಳು ಸಾಗರದ ಶಾಸಕರಾದ ಹಾಲಪ್ಪರಿಗೆ ಮನವಿ ಮಾಡಿದಾಗ ಅವರು ರಾಜ್ಯದ ಮುಖ್ಯಮಂತ್ರಿ ಯಡೂರಪ್ಪರಿಗೆ ವಿನಂತಿಸಿ ಭಕ್ತರ ದಶ೯ನಕ್ಕೆ ಅಪೂವ೯ವಾದ ಕೆಳದಿ ಅರಸರು ನೀಡಿದ ಪಚ್ಚೆ ಲಿಂಗ ಈ ವಷ೯ ಪ್ರದಶ೯ನಕ್ಕೆ ಇಡಲಾಗಿತ್ತು.   ಈ ಮಠದ ಸ್ವಾಮಿಯವರನ್ನ ಕೆಳಗಿಳಿಸ

#ಸಾಗರದ ಆರ್.ಟಿ.ವಿಠಲ್ ಮೂತಿ೯ ರಾಜ್ಯದ ಪ್ರತಿಷ್ಟಿತ ಪತ್ರಕತ೯ರು #

#ಸಾಗರ ತಾಲ್ಲೂಕಿನ ಹೆಸರು ಪತ್ರಿಕೋದ್ಯಮದಲ್ಲಿ ಉತ್ತುಂಗಕ್ಕೆ ಏರಿಸಿದ ಆರ್.ಟಿ. ವಿಠಲ್ ಮೂತಿ೯#    ಆರ್.ಟಿ.ವಿ. ಸಾಗರದವರು ಇವರಣ್ಣ ಸಾಗರದ ಮುನ್ಸಿಪಲ್ ಹೈಸ್ಕೂಲಲ್ಲಿ ನನಗೆ ಕ್ಲಾಸ್ ಮೇಟ್, ಆರ್.ಟಿ.ವಿ.ಜೂನಿಯರ್  ನಮಗೆಲ್ಲರಿಗೂ ಹಾಲಿ ಮOತ್ರಿ ಶ್ರೀನಿವಾಸ ಪೂಜಾರ್ ರ ಈಗಿನ ವಿಶೇಷ ಕತ೯ವ್ಯಧಿಕಾರಿ ಆಗಿರುವ ಕೆ.ದಮ೯ಪ್ಪ ಸಾಹೇಬರು ಆಗ ಗುರುಗಳು, ಆರ್.ಟಿ.ವಿ ರವಿ ಬೆಳೆಗೆರೆ ಜೊತೆ ಸೇರಿ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದಾಗ ನಮಗೆಲ್ಲ ಅವರು ಸ್ಟಾರ್ ಪತ್ರಕತ೯ರು.    ನಾನು ಹೊಸದಾಗಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ 1995 ರಲ್ಲಿ ಆಯ್ಕೆ ಆದಾಗ ಕಾಗೋಡು ತಿಮ್ಮಪ್ಪರ ಜೊತೆ ಹಳ್ಳಿ ತಿರುಗಾಟದಲ್ಲಿ ಹೋಗುವಾಗ ಹಳ್ಳಿಯ ರೈತರು ಕೃಷಿ ಇಲಾಖೆಯ ಭೂ ಸಂರಕ್ಷಣಾ ಇಲಾಖೆಯ ಬಗ್ಗೆ ದೂರುತ್ತಿದ್ದರು ಆಗ ಕಾಗೋಡು ನನಗೆ ಇದನ್ನೆಲ್ಲ ಪರಿಶೀಲನೆ ಮಾಡಲು ತಿಳಿಸಿದರು, ಹುಮ್ಮಸ್ಸಿನಿಂದ ಪರಿಶೀಲಿಸಿದಾಗ ಸಾಗರ ತಾಲ್ಲೂಕಿನಲ್ಲಿ ಕೋಟ್ಯಾ೦ತರ ರೂಪಾಯಿ ಅಪರಾ ತಪರಾ ಆಗಿದ್ದು ಬಯಲಾಯಿತು.   ತನಿಖೆ ಮಾಡಿದ ನಮ್ಮ ಕೈಕಟ್ಟಿ ಹಾಕುವ ಕೆಲಸ ಪ್ರಾರಂಭ ಆಯಿತು ಆಗ ಸಾಗರದ ಉತ್ಸಾಹಿ ಯುವಕ (ಈಗ ಕೆ.ಪಿ.ಸಿ.ಸಿ. ಸದಸ್ಯ) ತಾಳಗುಪ್ಪದ ಸಲೀo ವೈಕುಂಟ ರಾಜುರವರ ವಾರಪತ್ರಿಕೆಯಲ್ಲಿ ಆಗ ವರದಿಗಾರರಾಗಿದ್ದ ವಿಠಲ ಮೂತಿ೯ಯವರನ್ನ ಕರೆತಂದರು, ಸ್ಥಳ ಪರಿಶೀಲಿಸಿ ನಮ್ಮ ಆರೋಪದ ಸತ್ಯಾಸತ್ಯತೆ ತಿಳಿದ ಆರ್.ಟಿ.ವಿ. ವಾರಪತ್ರಿಕೆಯಲ್ಲಿ ವಿಶೇಷ ಲೇಖನ ಮಾಡಿದ್

#ಅಭಿರಾಮ ಹೆಗ್ಗಡೆ ಎಂಬ fb ಮಿತ್ರ ಅಕಸ್ಮಾತ್ ಬೇಟಿ#

#Facebook ನಿನ್ನ ಮಹಿಮೆ ಅಪಾರ #   ಸಿದ್ದಾಪುರ ತಾಲ್ಲೂಕಿನ ಒಬ್ಬರ ಮನೆಗೆ ಹೋಗ ಬೇಕಾಗಿತ್ತು, ವಿಳಾಸ ತಪ್ಪಾಗಿ ಪಕ್ಕದ ಮನೆಗೆ ಹೋದಾಗ ಆ ಮನೆಯವರು ಸರಿ ವಿಳಾಸ ತಿಳಿಸಿದರು ವಾಪಾಸು ಬರುವಾಗ ಅರುಣ್ ಪ್ರಸಾದ್ ಅ೦ದ೦ಗೆ ಆಯಿತು ಆದರೆ ದೂರದ ಆ ಊರಲ್ಲಿ ಪರಿಚಿತರಿಲ್ಲವಲ್ಲ ಬೇರೆ ಯಾರ ಬಗ್ಗೆನೋ ಅಂತ ನಿಲ೯ಕ್ಷಿಸಿದೆ.   ಮುಂದೆ ಗೇಟು ದಾಟುವಾಗ ನನ್ನ ಕರೆಯುತ್ತಾ ಒಬ್ಬರು ಬಂದರು ನಾನು ಯಾವತ್ತೂ ಬೇಟಿ ಆಗಿರಲಿಲ್ಲ ಆದರೆ ಅವರ ಚಹರೆ ಚಿರಪರಿಚಿತ ಎನ್ನಿಸುತ್ತಿತ್ತು ಅವರೇ ಮುಂದಾಗಿ "ನಾನು ಅಭಿರಾಮ್ " ಎಂದಾಗ ಮೆದುಳಿನ ಮೆಮೊರಿ ಚಿಪ್ ಕನೆಕ್ಟ್ ಆಯಿತು.   ನನ್ನ FB ಫ್ರೆಂಡ್ ಅಭಿರಾಮ್ ನಿಜ ಗೆಳೆಯರಾದರು ಅವರು ಸಂಬಂದಿಗಳ ಮನೆಗೆ ಬಂದವರು ಅಲ್ಲಿ೦ದ ಹೊನ್ನಾವರಕ್ಕೆ ಹೋದರು.   ಇವರು ರಾಮಚಂದ್ರಪುರದ ಹಾಲಿ ಸ್ವಾಮಿಗಳ ವಿರುದ್ಧದ ಕೇಸಿನಲ್ಲಿ prime witness, ಇವರ ಕನ್ನಡ ಮತ್ತು ಇಂಗ್ಲೀಷ್ ಟಿವಿ ಮಾಧ್ಯಮದಲ್ಲಿನ ಸಂದಶ೯ನ ವೈರಲ್ ಆಗಿತ್ತು ಇವರ ವಿರುದ್ಧ ಮಠ 5 ಕೋಟಿ ಮಾನ ನಷ್ಟ ಕೇಸು ಹಾಕಿತ್ತು ನಂತರ ವಾಪಾಸ್ ಪಡೆಯಿತು ಅಂತಾರೆ ಮತ್ತು ಇವರ ಟಿವಿ ಸಂದಶ೯ನ ಟೆಲಿಕಾಸ್ಟ್ ಮಾಡದಂತೆ ನ್ಯಾಯಾಲಯದ ಪ್ರತಿಬಂದಕ ಆಜ್ನೆ ಇದೆ.   ಒಂದು ಹಂತದಲ್ಲಿ ಇವರಿಗೆ ಜೀವ ಬೆದರಿಕೆಯೂ ಇತ್ತು.   ವಾಮನನಂತೆ ಚಿಕ್ಕ ಮೈಕಟ್ಟಿನ ಪ್ರಚಂಡ ಬುದ್ಧಿವಂತ ಕೆಲವರಿಗೆ ಸೆಲಬ್ರಿಟಿ ಮತ್ತೆ ಕೆಲವರಿಗೆ ವಿಲನ್ ರ೦ತೆ ಕಾಣುವ ಅಭಿರಾಮ ಹೆಗ್ಗಡೆ ಹೀಗೆ ಅಕಸ್ಮಿಕ ಬ

#2019ರ ಸಾಗರ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ ನ ಸಮಾವೇಶ #

#ಸಾಗರ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆ.ವಿ.ಅಕ್ಷರ ನೀನಾಸಂ ಮ್ಯಾಗ್ಸೆಸ್ಸೆ ಅವಾಡ್೯ ಪಡೆದ ಕೆ.ವಿ. ಸುಬ್ಬಣ್ಣರ ಪುತ್ರರ ಸಂದಶ೯ನ ಪ್ರಕಟಿಸಿದ ಮಲೆನಾಡು ಮಲ್ಲಿಗೆ ಸಾಗರದ ವಾರಪತ್ರಿಕೆ #   ಇವತ್ತು ಅಂಚೆಯಲ್ಲಿ ಬಂದ ಸಾಗರದ ಮಲೆನಾಡು ಮಲ್ಲಿಗೆ ಈ ವಷ೯ದ ವಿಶಿಷ್ಟ ಸಂಚಿಕೆ ಆಗಿದೆ.   ಅಕ್ಷರರ ತಂದೆ ನಾಡಿಗೆ ಪ್ರಸಿದ್ದರು ಮಗ ಅಕ್ಷರ ಹೆಚ್ಚಾಗಿ ಎಲೆ ಮರೆಯ ಕಾಯಿಯ೦ತೆ ಅವರನ್ನ ತಾಲ್ಲೂಕ ಸಾಹಿತ್ಯ ಪರಿಷತ್ ಈ ಬಾರಿಯ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಸಿದ್ದು ಶ್ಲಾಘನೀಯ.  ಬೇದೂರು ವೆಂಕಟಗಿರಿ ಸಂಪಾದಕತ್ವದ ವಾರ ಪತ್ರಿಕೆ ಸಾಹಿತ್ಯ ಸಮ್ಮೇಳನದ ವಿಶೇಷ ಸಂಚಿಕೆ ಪ್ರಕಟಿಸಿದೆ ಅದು ಸಂಗ್ರಹ ಯೋಗ್ಯ.    ಎನ್.ಎಂ.ಕುಲಕಣಿ೯ಯವರ ಹಾಟ್ ಸೀಟ್ ಸಂದಶ೯ನ, ಸಂಪಾದಕರ ಕೆ.ವಿ.ಅಕ್ಷರ ಪರಿಚಯ, ಕೆ.ವಿ.ಅಕ್ಷರರ "ಚಿತ್ರದ ಕುದುರೆ "ಕವನ, ಕೆ.ವಿ.ಅಕ್ಷರ ತಮ್ಮ ಜನ್ಮ ನೀಡಿದ ಜಾತಿ ಹವ್ಯಕದ ಬಗ್ಗೆ 2002 ರಲ್ಲಿ ಬರೆದ ಲೇಖನ, ಎರೆಡು ಸಮುದ್ರದ ನಡುವೆ, ಸಾಲ ಮನ್ನ ಕುರಿತು, ಟಿ.ಪಿ.ಅಶೋಕರ ಬೌದ್ಧಿಕ ಒಡನಾಡಿ ... ಹೀಗೆ ಸಾಗರದ ಸಾಹಿತ್ಯ ಸಮ್ಮೇಳನದ ಬಗ್ಗೆ ಅಧ್ಯಕ್ಷರಾದ ಅಕ್ಷರರ ಪರಿಚಯದ ವಿಶೇಷ ಸಂಚಿಕೆ ಮನಸೆಳೆಯುತ್ತದೆ.   ನಿಕಟಪೂವ೯ ಅಧ್ಯಕ್ಷ ಪ್ರಸನ್ನರ ಉದ್ದೇಶ ಪೂವ೯ಕ ಅನುಪಸ್ತಿತಿ ಮತ್ತು ಅಕ್ಷರರ ಪ್ರಾಥಮಿಕ ಶಿಕ್ಷಣದ ಮಾಹಿತಿ ನೀಡದಿರುವುದು ಕೊರತೆ ಅನ್ನಿಸಿತು.

#ಚಂಪಕ ಸರಸ್ಸು ಬಗ್ಗೆ ಆದಶ೯ ಹುOಚದ ಕಟ್ಟೆ ನೀಡಿದ ಉಪಯುಕ್ತ ಮಾಹಿತಿ ಮತ್ತು ಚಿತ್ರ ಗಳು#

ಅಲ್ಲಿ ಸ್ಥಾಪಿತವಾಗಿರುವ ಆನೆಗಳಲ್ಲಿ ಒಂದು ಗಂಡಾನೆಯಾಗಿದ್ದು ವೆಂಕಟಪ್ಪ ನಾಯಕ ಮತ್ತು ಇನ್ನೊಂದು ಹೆಣ್ಣಾಗಿದ್ದು ಚಂಪಕ ಅರಸಿಯ ನೆನಪಿಗೆ ವೆಂಕಟಪ್ಪ ನಾಯಕ ನಿಲ್ಲಿಸಿ ಸತ್ತ ನಂತರ ಜನಮಾನಸದಲ್ಲಿ ಅವರ ನೆನಪು ಉಳಿಯಲಿ ಎಂದು ಹಾರೈಸಿದ್ದನಂತೇ.‌.... ಮೊಘಲ್ ದೊರೆಗಳು ಗುಲಾಬಿಯನ್ನು ಪ್ರೀತಿಯ ಸಂಕೇತ ವನ್ನಾಗಿ ಮಾಡುವ ಮೊದಲು ಕಮಲ ಪ್ರೀತಿಯ ಸಂಕೇತವಾಗಿತ್ತು...ಅರಳಿದ ಕಮಲ ಗಂಡಾನೆ ಬಳಿ ಇದ್ದು ಮೊಗ್ಗು ಕಮಲ ಹೆಣ್ಣಾನೆ ಬಳಿ ಇದೆ.....ಗಂಡನ್ನು ಅರಳಿದ ಕಮಲಕ್ಕೂ ಹೆಣ್ಣನ್ನು ಮೊಗ್ಗಾಗಿಯೂ ತೋರಿಸಿದ್ದಾರೆ.....ಗಂಡಾನೆಯ ಕಾಲುಗಳ ದಷ್ಟಪುಷ್ಟವಾಗಿದೆ, ಹೆಣ್ಣಾನೆಯ ಕಾಲು ಸ್ವಲ್ಪ ತಳುಕು ಬಳಕು ಹೊಂದಿದೆ, ಕಣ್ಣುಗಳ ಅಲಂಕಾರದಲ್ಲೂ ವ್ಯತ್ಯಾಸವಿದೆ, ಕಿವಿಗಳು ಬೇರೆ ಬೇರ ಅಕಾರದಲ್ಲಿದೆ....ಗಂಡಾನೆಯ ಹಣೆಯ ಮೇಲಿನ ಕೆತ್ತನೆಯು ಅರೇಬಿಯನ್ ಶೈಲಿಯ ಗಿಳಿ ಎಂದು ಕನಫ್ಯೂಸ್ ಆಗಬಹುದು ಆದರೆ ನಿಜವಾಗಲೂ ನೋಡಿದರೆ ಅದು ಗಂಡ ಬೇರುಂಡದ ಮಿರರ್ ಅಥವಾ ಫ್ಲೀಪ್ ಇಮೇಜ್ ಆಗಿದೆ.....  ಹೆಣ್ಣು ಮತ್ತು ಗಂಡಾನೆಯ ಹಣೆಯ ಅಲಂಕಾರವೂ ಬೇರೆ ಬೇರೆ ಆಗಿದೆ.... ಇನ್ನು ಚಂಪಕ ಅರಸಿ ಅಥವಾ ಸರಸಿ ಅತಿಲೋಕ ಸುಂದರಿಯಾಗಿದ್ದು ಬಾಂಗಾರದ ನೀಳ ರಾಶಿ ಹೊಂದಿದ್ದಳು, ಅವಳ ಕೂದಲು, ಬಟ್ಟೆ ಇನ್ನೂ ಎಲ್ಲಿಯೋ ಅನಂತಪುರದ ಯಾರದೋ ಮನೆಯಲ್ಲಿದೆ ಎಂಬ ಗುಮಾನಿಯಿದೆ... ದೊಡ್ಡ ರಾಣಿಯ ಸನ್ಯಾಸತ್ವ,ಜನರ ಹೀಗೆಳಿಯುವಿಕೆ ಎದುರು ವೆಂಕಟಪ್ಪನ ಪ್ರೀತಿ ಕೆಲ ಕಾಲ ಕಾಪಾಡಿತ್

#1980ರ ದಶಕದಲ್ಲಿ ಸಾಗರ ತಾಲ್ಲೂಕಿನ ಹೋರಾಟದ ದಿನಗಳಲ್ಲಿನ ಸಂಗಾತಿಗಳು#

1985 ರಲ್ಲಿ ಸಾಗರದಲ್ಲಿ ದಲಿತ ಸಂಘಷ೯ ಸಮಿತಿ ಪ್ರಾರಂಭದ ದಿವಸಗಳು, ಶಿವಾನಂದ ಕುಗ್ವೆ, ವಸಂತ ಕುಗ್ವೆ,ಸಿಗರೇಟು ನಾಗರಾಜ್, ತೀ.ನಾ.ಶ್ರೀನಿವಾಸ್, ಅದರOತೆ ವಿಶ್ವನಾಥ ಗೌಡರು ನಮಗೆ ನಾಯಕರು, ಬಗರ್ ಹುಕುಂ ಮಂಜೂರಾತಿ ಒತ್ತಾಯಿಸಿ ಸಾಗರದ AC ಕಚೇರಿ ಎದರು 43 ದಿನ ಧರಣಿ, ಆನಂದಪುರಂ ರೈತ ಬಂದು ಗ್ರಾಮೋದ್ಯೋಗದ ಕಾಮಿ೯ಕ ಚಳವಳಿ, ಆನಂದಪುರದಿಂದ ಸಾಗರದ ವರೆಗೆ ಪಾದಯಾತ್ರೆ, ಆನಂದಪುರದಿಂದ ಶಿವಮೊಗ್ಗದ ತನಕ ಸೈಕಲ್ ಯಾತ್ರೆ, ಲಾಠಿ ಚಾಜ್೯ ಜೈಲು ಹೀಗೆ ಈ ಎಲ್ಲಾ ಸಂದಭ೯ದಲ್ಲಿ ಹಸಿವು ಕಾಡುತ್ತಿದ್ದಾಗ ಕಂಚಿನ ಕಂಠದಲ್ಲಿ ವಸಂತರ ಹಾಡು ನಮ್ಮ ಹೊಟ್ಟೆ ತುಂಬಿಸುತ್ತಿತ್ತು, ಅವರ ಕುಗ್ವೆ ಮನೇಲಿ ಅನ್ನ ಟೋಮೊಟೋ ಹಣ್ಣು ಮತ್ತು ಉಪ್ಪು ಹಾಕಿಕೊ೦ಡು  ಊಟ ಮಾಡಿದ್ದು ನೆನಪು.  ಮೊನ್ನೆ ನನ್ನ ಮಗಳ ಮದುವೆಗೆ ತಂದೆ ಮತ್ತು ಮಗ ಕವಿಗಳಾದ ವಿ.ಟಿ.ಸ್ವಾಮಿ ಜೊತೆಗೆ ಬಂದಿದ್ದರು ತುಂಬಾ ಸಂತೋಷ ಪಟ್ಟಿದ್ದೆ ಇವತ್ತು ಈ ಲೇಖನ ಸಂತೋಷ ದುಪ್ಪಟ್ಟಾಗಿಸಿದೆ.

#ಚOಪಕ ಸರಸ್ಸು ಕೆಳದಿ ರಾಣಿಯ ದುರಂತ ಪ್ರೇಮಕಥೆಯ ಸ್ಮಾರಕ ಜೋಗಿ ಜನಪದ ಸಂಗೀತ ಕಲಾವಿದ ನಾಗರಾಜ ತೋOಬ್ರಿ ಧ್ವನಿಯಲ್ಲಿ ಮತ್ತು ಕಿನ್ನರಿಯ ನಾದದೊಂದಿಗೆ #

ಜೋಗಿ ಜನಪದ ಸಂಗೀತ ಕಲಾವಿದ ಜಿ.ನಾಗರಾಜ ತೋoಬ್ರಿ. ಆನoದಪುರದ ಚಂಪಕ ಸರಸ್ಸು ಎಂಬ ಸುಂದರ ಕೊಳ, ಸ್ವಾಗತಿಸುವ ಕಲಾತ್ಮಕ ಕಲ್ಲಿನ ಜೋಡು ಆನೆ, ಕೊಳದ ಮದ್ಯದ ದೇವಾಲಯ, ಸುತ್ತುವರಿದ ಪಗಾರ, ದೇವರ ಕಣ್ಣು ಚಲನ ಚಿತ್ರದಲ್ಲಿ ಪ್ರಖ್ಯಾತ ಚಲನ ಚಿತ್ರಗೀತೆ "ಓ ಇನಿಯಾ ನೀ ಎಲ್ಲಿರುವೆ" ಹಾಡು 1970 ರ ದಶಕದಲ್ಲಿ ಚಿತ್ರಿಕರಣ ಆದ ಸ್ಥಳ ಈಗ ಪಾಳು ಬೀಳುವುದನ್ನ ಸ್ಥಳಿಯ ಕ್ರೀಯಾ ಶೀಲ ಯುವ ಪಡೆ ಪ್ರತಿ ವಷ೯ ಶ್ರಮದಾನದಿಂದ ಪ್ರವಾಸಿಗರ ವೀಕ್ಷಣೆಗೆ, ಸ್ಥಳಿಯರ ಈಜು ತರಬೇತಿಗೆ ವ್ಯವಸ್ಥೆಗೆ ಅನುವು ಮಾಡಿ ಸಾವ೯ಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ.     ಚಂಪಕ ಸರಸ್ಸು ಅಂದರೇನು? ಚಂಪಕ ಯಾರು ಎನ್ನುವ ಚಚೆ೯ ಆಗಾಗ್ಗೆ ಮುನ್ನಲೆಗೆ ಬಂದು ಮರೆತು ಹೋಗುತ್ತಿದೆ.   ಆನಂದಪುರದ ಹಿಂದುಳಿದ ಜಾತಿಯ ಸುಂದರ ತರುಣಿ ಚOಪಕಳು ಪ್ರತಿ ದಿನ ಮುಂಜಾನೆ  ರಾಜ ವೆಂಕಟಪ್ಪ ನಾಯಕ ಸಾಗಿ ಹೋಗುವ ರಾಜ ಮಾಗ೯ದ ಇತಿ ಹಾಸ ಪ್ರಸಿದ್ಧ ಗಂಗಾ ಮಠದ ಎದುರಿನ ಮನೆಯವಳು, ರಾಜರ ಸ್ವಾಗತಕ್ಕೆ ದಿನಕ್ಕೆ ಒಂದೊಂದು ರೀತಿ ಸುಂದರ ರಂಗೋಲಿ ಬಿಡಿಸಿ ಮರೆಯಲ್ಲಿ ವೀಕ್ಷಿಸುತ್ತಿದ್ದಳು ರಾಜ ವೆಂಕಟಪ್ಪ ನಾಯಕ ಗಂಗಾಮಠದ ಗಂಗಾಮಾತೆಗೆ ಬಲಕ್ಕೆ ತಿರುಗಿ ಕುದುರೆ ಮೇಲಿಂದ ತಲೆಬಾಗಿ ವ೦ದಿಸುವುದು ನಂತರ ಎಡಕ್ಕೆ ತಿರುಗಿ ಸುಂದರ ರಂಗೋಲಿ ವೀಕ್ಷಿಸುವುದು ಪದ್ದತಿ ಆಗಿ ಇದು ಪ್ರೇಮ ಕಥೆಗೆ ಕಾರಣವಾಗಿ ರಾಜವೆಂಕಟಪ್ಪ ನಾಯಕರು ಚಂಪಕಳನ್ನ ವರಸಿ ವಿವಾಹವಾಗಿ ಆನಂದಪುರದ ಕೋಟೆಯ ಅರಮನೆಯಲ್ಲಿ

#ಶುOಠಿ ಬೆಳೆ ಲಾಭದಾಯಕ ಕೃಷಿ ಇದನ್ನ ರಾಸಾಯನಿಕ ಮುಕ್ತ ಮಾಡುವ ಮತ್ತು ಹೆಚ್ಚು ಲಾಭದಾಯಕ ಮಾಡುವ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿದೆ #

      ಶುOಠಿ ಬೆಳೆ ಸಾವಯುವ ಆಗುವ ಪ್ರಕ್ರಿಯೆ ಪ್ರಾರಂಭ ಆಗಬೇಕು     ಶುಂಠಿ ನಮ್ಮ ಭಾಗದ ರೈತರನ್ನ ಹಣವಂತರಾಗಿ ಸಾಲ ಮುಕ್ತರನ್ನಾಗಿಸಿದೆ, ಮನೆ, ವಾಹನ ಖರೀದಿ, ಮದುವೆಗಳಿಗೆ ಸಹಕಾರಿ ಆಗಿದೆ ಈಗಲೂ ನಮ್ಮ ರೈತರು ಬೆಳೆದ ಶುಂಠಿಗೆ ವಿಷಕಾರಿ ಕೀಟನಾಶಕದ ಕಾರಣ ಮುಂದುವರಿದ ದೇಶದಲ್ಲಿ ಪ್ರವೇಶವಿಲ್ಲ, ದೇಶಿಯ ಮಾರುಕಟ್ಟೆ, ಗಲ್ಪ್ ದೇಶಗಳಿಗೆ ಮಾತ್ರ ಸೀಮಿತ ಆಗಿದೆ.  ಇಲ್ಲಿ ಇನ್ನೋOದು ಸ್ವಾರಸ್ಯವಿದೆ ಏನೇOದರೆ ಈ ಕ್ಷೇತ್ರಕ್ಕೆ ಸಂಬಂದ ಪಡದ ಶ್ರೀಮಂತರು, ದೊಡ್ಡ ಬಡ್ಡಿ ಕುಳಗಳು, ಶೇರು ದಲ್ಲಾಳರು ಒಣ ಶುಂಠಿ ಖರೀದಿಸಿ ದಾಸ್ತಾನು ಮಾಡಿ ಬೆಲೆ ಹೆಚ್ಚಿದಾಗ ಲಾಭಕ್ಕೆ ಮಾರಾಟ ಮಾಡುವ ಪ್ರಕ್ರಿಯೆ ಶುಂಠಿ ಉದ್ಯಮಕ್ಕೆ ವರ ಆಗಿದೆ.   ರಾಸಾಯನಿಕವಲ್ಲದ ಸಾವಯವ ಶುಂಠಿಗೆ ಸರಿಯಾದ ಪ್ರೋತ್ಸಾಹ, ಮಾರುಕಟ್ಟೆ ಬೆಂಬಲ ಸದ್ಯ ರೈತರಿಗೆ ದೊರೆಯುತ್ತಿಲ್ಲ ಇದಕ್ಕೆ ಸಂಬಂದ ಪಟ್ಟ ಸಕಾ೯ರ ಅಥವ ಸಂಸ್ಥೆಗಳು ಇನ್ನು ಗಮನಹರಿಸಿಲ್ಲ.   ಶುಂಠಿ ಬೆಳೆಗೆ ಬೆಂಬಲ ನೀಡಿ ರಾಸಾಯನಿಕ ಬಳಕೆ ಮುಕ್ತ ಮಾಡುವಂತ ವ್ಯವಸ್ಥೆ ಬರಬೇಕು ಇದು ಕೃಷಿಕರಲ್ಲಿ ಹೆಚ್ಚು ಉದ್ಯೋಗ ಮತ್ತು ಹಣ ಗಳಿಸುವ ಬೆಳೆ ಆಗಿದೆ ಎನ್ನುವುದು ನಿಸ್ಸಂಶಯ.

My daughter marriage

With the blessings of God, my daughter’s wedding was solemnised . I could not invite everyone personally due to time constraints. I sent invitation via post,WhatsApp, messenger. I was not expecting that everyone will be able to attend.  It was a pleasant surprise for me to see that many of them graced their presence and blessed the newly weds. I could not thank all of them personally.  As I was thinking of thanking all my friends through Facebook, my dear friend Nagendra Sagar posted an article on this. It touched my heart, I am sharing the article. Thank you.. may you people’s well wishes lead us on the right path..  thank you K.Arun prasad Ex Zilla Panchayath member. ANANDAPURAM www.hombujalodge.com

#ಕುಟ್ಟಿಚನ್ ಮಲೆಯಾಳಿ ಮಿತ್ರನ ದೈವ ನಂಬಿಕೆ ಮತ್ತು ಏಡಿ ಓಡಿನಲ್ಲಿ ಶಿಲುಬೆ ಚಿತ್ರ#

#ನOಬಿಕೆಯೆ ದೇವರಲ್ಲವೆ? #   ನನ್ನ ಕೇರಳ ಮೂಲದ ಮಿತ್ರ ಕುಟ್ಟೀಚನ್ ಇವತ್ತು ಬಂದಿದ್ದರು, ಇವರ ನನ್ನ ಗೆಳೆತನಕ್ಕೆ  30 ವಷ೯ ವಾಯಿತು.   ಶ್ರಮ ಜೀವಿ, ಹಠವಾದಿ ಮತ್ತು ಹಸನ್ಮುಕಿ, ಕ್ರಿಸ್ತರ ಪೆಂಥಗೋಸ್ ಪಂಥ ಇವರು ಅವಲಂಬಿಸಿದ್ದಾರೆ.    ನನ್ನ ಇಷ್ಟದ ನೇ೦ದ್ರ ಬಾಳೆ, ಭೂದುಗುOಬಳ ಮತ್ತು ಸುವಣ೯ ಗಡ್ಡೆ ಸರಬರಾಜುದಾರರು.   ಇವತ್ತು ಬ೦ದಾಗ ಇವರ ಕುತ್ತಿಗೆಯಲ್ಲಿ ದೊಡ್ಡ ಪದಕ ನೋಡಿದೆ ವಿಚಾರಿಸಿದಾಗ ಇದು ಇವರು ಮೀನು ಮಾರುಕಟ್ಟೆಯಲ್ಲಿ ಖರೀದಿಸಿದ ಏಡಿಯಲ್ಲಿ ಶಿಲುಬೆ ನೋಡಿ ಅದನ್ನ ಧರಿಸಿದ್ದಾರೆ.   ಜೊತೆಯಲ್ಲಿದ್ದ ಗೆಳೆಯರು ಅಪಹಾಸ್ಯ ಮಾಡಿದಾಗ ಹೇಳಿದೆ ನಾವೆಲ್ಲ ಕಲ್ಲಿನಲ್ಲಿ, ಪ್ರಾಣಿ ಪಕ್ಷಿಗಳಲ್ಲಿ ದೇವರ ನೋಡುವುದನ್ನ ನೆನಪಿಸಿ ಕೊಳ್ಳಿ ಹಾಗಿದ್ದಾಗ ಕುಟ್ಟೀಚನ್ ಅವನ ನಂಬಿಕೆಯ ಏಸು ದೇವನ ಶಿಲುಬೆ ಏಡಿ ಓಡಿನಲ್ಲಿ ಕಂಡಾಗ ಅದನ್ನ ಕುತ್ತಿಗೆಯ ಹಾರದಲ್ಲಿ ಧರಿಸಿದ್ದು ತಪ್ಪೆ? ಅಂತ.   ಪ್ರಕೃತಿಯಲ್ಲಿ ಇಂತಹದೆಲ್ಲ ಸಿಗುವುದು ಕೂಡ ಸೋಜಿಗ.

#ಶಿವಮೊಗ್ಗದ ಪ್ರಖ್ಯಾತ ಪಾತ್ರೆ ಉದ್ದಿಮೆದಾರರಾದ ಶಾ೦ ಟ್ರೇಡರ್ಸ್ #

#ಶಿವಮೊಗ್ಗದ ಪ್ರಖ್ಯಾತ ಶ್ಯಾಮ್ ಟ್ರೇಡರ್ಸ್ ಕುಟುಂಬ ನಮ್ಮ ಇವತ್ತಿನ ಅತಿಥಿ#   ಶಿವಮೊಗ್ಗದ ನೆಹರೂ ರೋಡಿನ ಎರಡನೇ ತಿರುವಿನ ಮೊದಲ ಕಾನ೯ರ್ ಆಂಗಡಿ ಶಾಮ್ ಟ್ರೇಡರ್ಸ್ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಹೋಟೆಲ್, ಶಾಮಿಯಾನ, ಮದುವೆ ಮOಟಪದವರಿಗೆ, ದೇವಸ್ಥಾನ ಮತ್ತು ವಿದ್ಯಾಥಿ೯ ನಿಲಯ ನಡೆಸುವವರಿಗೆ ತುಂಬಾ ಚಿರಪರಿಚಿತ ಅಂಗಡಿ.   ಸಣ್ಣ ಚಮಚದಿಂದ ಅತಿ ದೊಡ್ಡ ಕ್ವಿOಟಾಲ್ ಆಕ್ಕಿ ಬೇಯಿಸುವ ಪಾತ್ರೆ ಮತ್ತು ದಕ್ಷಿಣ ಬಾರತೀಯ ಅಡುಗೆಯಿ೦ದ ಉತ್ತರ ಭಾರತೀಯ ಅಡುಗೆ ತಯಾರಿಗೆ ಬೇಕಾದ ಎಲ್ಲಾ ಅಡುಗೆ ಉಪಕರಣಗಳ ಪಾತ್ರೆಗಳ ಮಾರಾಟಗಾರರು ಇವರು.   ಈಗ ನೆಹರೂ ರಸ್ತೆಯಿಂದ 2ನೇ ತಿರುವಿನಲ್ಲಿ ಸ್ವ೦ತ ಜಾಗದಲ್ಲಿ ನಾಲ್ಕು ಅಂತಸ್ತಿನ ಬೃಹತ್ ಕಟ್ಟಡದಲ್ಲಿ ಶಾಂ ಟ್ರೇಡರ್ಸ್ ಕಾಯ೯ ನಿವ೯ಹಿಸುತ್ತಿದೆ.   ಮಾಲಿಕರಾದ ಬಾಲರಾಜ್ ದಂಪತಿಗಳು ತಮ್ಮ ಮಗ ಮಗಳೂ ಸೇರಿ ತಮ್ಮ ಅನೇಕ ದಶಕದ ಖಾಯಂ ಸಿಬ್ಬOದಿಗಳ ಜೊತೆ ಸೇರಿ ಅನೇಕ ದಶಕಗಳಿ೦ದ ಯಶಸ್ವಿಯಾಗಿ ನಡೆಸುತ್ತಿದ್ದಾರೆ.  ಇಲ್ಲಿ ಇವರೊಡನೆ ಸಹಕರಿಸುವ ನಿವೃತ್ತ ಶಿಕ್ಷಣ ಇಲಾಖೆಯ ನೌಕರರಾದ ರಾಜಣ್ಣ ಇವರ ಸುOದರ ಕೈಬರಹ ನನಗೆ ಯಾವತ್ತೂ ಆಕಷ೯ಣನೀಯ.  ಇವತ್ತು ತಮ್ಮ ಪುತ್ರಿಯ ವಿವಾಹ ಆಮOತ್ರಣ ನೀಡಲು ಕುಟುಂಬ ಸಮೇತ ಆಗಮಿಸಿದ್ದರು.   ಇವರ ಮೂಲ ಅಂಗಡಿಯಲ್ಲಿ ನೀಲಿ background ನಲ್ಲಿ ಬಿಳಿ ಅಕ್ಷರದ ಶಾ೦ ಟ್ರೇಡರ್ಸ್ ಎಂಬ ಸುಂದರ ಬೋಡ್೯ ನಿಜಕ್ಕೂ ಆಕಷ೯ಕ ಆಗಿತ್ತು ಇಡಿ ಶಿವಮೊಗ್ಗದ ನೆಹರೂ

# ಶಿಶುನಾಳದಲ್ಲಿ ಷರೀಪರ 5ನೇ ತಲೇಮಾರು ಬೇಟಿ #

# ಶಿಶುನಾಳ ಷರೀಪರ 5ನೇ ತಲೆಮಾರು#   ಮೊನ್ನೆ 11ನೇ ತಾರೀಖು ಮದುವೆ ಮಾಡಿಕೊಟ್ಟ ಮಗಳು ಅಳಿಯನನ್ನ ಹುಬ್ಬಳ್ಳಿಯಿ೦ದ ಕರೆ ತರುವಾಗ ಶಿಶುನಾಳದ ಬೇಟಿ ಕಾಯ೯ಕ್ರಮ ನಿಗದಿ ಮಾಡಿದ್ದೆ ಅಲ್ಲಿಗೆ ತಲುಪುವಾಗ ರಾತ್ರಿ 8 ಆಗಿತ್ತು ಷರೀಪರ ಸಮಾದಿ ಸುತ್ತ ಅಲ್ಲಲ್ಲಿ ಅಲ್ಲಿನ ವಿದ್ಯಾಥಿ೯ ನಿಲಯದ ವಿದ್ಯಾಥಿ೯ಗಳು ತಮ್ಮ ಓದು ಬರಹದಲ್ಲಿ ನಿರತರಾಗಿದ್ದರು.   ಅಲ್ಲಿನ ಪದ್ದತಿ ಪ್ರಕಾರ ಸಕ್ಕರೆ ಸಮಪಿ೯ಸಿದೆ ಅಲ್ಲಿದ್ದ ಒವ೯ರು ಪ್ರಾಥ೯ನೆ ಮಾಡಿದರು, ಬೇರಾರು ಇರಲಿಲ್ಲವಾದ್ದರಿಂದ ಅವರನ್ನ ಮಾತಿಗೆ ಎಳೆದೆ, ಷರೀಪರ ವಂಶದವರು ಇದ್ದಾರ ಅಂದಾಗ "ನಾನು ಷರೀಪರ 5ನೇ ತಲೇ ಮಾರು" ಅಂದಾಗ ನಮ್ಮ ಮುಂದಿನ ಮಾತುಕತೆ ವಿಡಿಯೋದಲ್ಲಿದೆ.   ಷರೀಪರು ತಮ್ಮ ತಂದೆ ತಾಯಿ ಸಮಾದಿ ಅಕ್ಕಪಕ್ಕ ನಿಮಿ೯ಸಿ ಎರೆಡು ಬೇವಿನಮರ ನಡುತ್ತಾರೆ ಒಂದು ಮಲ್ಲಿಗೆ ಬಳ್ಳಿ ನಡುತ್ತಾರೆ ಪ್ರತಿ ದಿನ ಒಂದು ಮಲ್ಲಿಗೆ ಹೂವಾದರೂ ಅವರ ತಂದೆ ತಾಯಿ ಸಮಾದಿ ಮೇಲೆ ಬೀಳಬೇಕೆಂಬ ಅವರ ಅಭಿಲಾಷೆ ಈಡೇರಿದೆ, ಎರೆಡು ಬೇವಿನಮರ ಈಗ ಸೇರಿ ಒಂದಾಗಿದೆ ಅವರ ತಂದೆ ತಾಯಿ ಸಮಾದಿ ಪಕ್ಕದಲ್ಲೇ ಷರೀಫರ ಸಮಾದಿಯೂ ಆಗಿ ಒಂದೇ ಸ್ಮಾರಕವಾಗಿದೆ.   ಇವರು ಮೂವರ ಸಮಾದಿ ಮೇಲೆ ಷರೀಪರ , ಗುರು ಗೋವೀ೦ದ ಭಟ್ಟರ ವಿಗ್ರಹ ಮಧ್ಯ ಬಸವೇಶ್ವರ ಪ್ರತಿಮೆ ಪ್ರತಿಷ್ಟಾಪಿಸಿದ್ದಾರೆ.   ಷರೀಪರ 22 ಎಕರೆ ಜಮೀನಿನಲ್ಲಿ 2 ಎಕರೆ ಸಮಾದಿಗಾಗಿ ಸ್ಮಾರಕಕ್ಕಾಗಿ ಉಪಯೋಗಿಸಲಾಗಿದೆ ಉಳಿದ 20 ಎಕರೆ ವಂಶಸ್ಥರು ಸಾಗುವಳಿ ಮಾಡುತ್ತಿದ್ದಾರೆ.   8

# ನನ್ನ ಮಗಳ ಮದುವೆಗೆ ಹಾರೈಸಿದ ಎಲ್ಲರಿಗೂ ಕೃತಜ್ಞತೆಗಳು #

ನಿನ್ನೆ ನನ್ನ ಮಗಳ ವಿವಾಹ ಗುರು- ಹಿರಿಯರ ಆಶ್ರೀವಾದ ಅನುಗ್ರಹದಿಂದ ಸಾಂಗವಾಗಿ ನೆರವೇರಿತು, ತಂದೆ ಆದ ನನ್ನ ಕತ೯ವ್ಯ ಪೂರೈಸಿದೆ.  ನನಗೆ ಯಾರನ್ನೂ ವೈಯಕ್ತಿಕವಾಗಿ ಆಹ್ವಾನ ಮಾಡಲು ಆಗಲಿಲ್ಲ ಕೆಲವರಿಗೆ ಅಂಚೆಯಲ್ಲಿ ಕಳಿಸಿದೆ, ಹೆಚ್ಚಿನವರಿಗೆ ಮೆಸೆoಜರ್, ವಾಟ್ಸ್ಅಪ್ ಮಾಡಿದೆ, ಇಷ್ಟು ಜನ ಬರುತ್ತಾರೆ ಅಂತ ನಿರೀಕ್ಷೆಯೇ ಮಾಡಿರಲಿಲ್ಲ ಬಂದು ಶುಭ ಹಾರೈಸಿದವರಿಗೆ ಹೆಚ್ಚಿನ ಜನರಿಗೆ ಕೃತಜ್ಞತೆ ಸಲ್ಲಿಸಿದರೂ ಬಹಳಷ್ಟು ಜನರಿಗೆ ಸಲ್ಲಿಸಲು ಆಗಲಿಲ್ಲ.  ಅವರೆಲ್ಲರಿಗೂ ಪುನಃ ಪೇಸ್ ಬುಕ್ ಮುಖಾ೦ತರವೇ ಕೃತಜ್ಞತೆ ಹೇಳಬೇಕಂತ ಇರುವಾಗ ಜೀವದ ಮಿತ್ರ ಪ್ರಗತಿ ಪರ ಕೃಷಿಕ, ಜೇನುತಜ್ಞ ಪತ್ರಕತ೯ ನಾಗೇಂದ್ರ ಸಾಗರ್ ಮಗಳನ್ನ ಅಳಿಯನ ಜೊತೆ ಕಳಿಸುವ ಸಂದಭ೯ದಲ್ಲಿ ಇದ್ದವರು ಅವರೇ ತೆಗೆದ ನನ್ನ ಕುಟುಂಬದ ಪೋಟೋ(ಪೇಸ್ ಬುಕ್ನಲ್ಲಿ ಪ್ರಕಟವಾದ ನನ್ನ ಕುಟುಂಬದ ಮೊದಲ ಪೋಟೋ ಕೂಡ)  ಮತ್ತು ಬರೆದ ಲೇಖನ ನಿನ್ನೆಯ ಎಲ್ಲಾ ಶುಭ ಸಮಾರಂಭದ ಸಾರOಶವಾಗಿತ್ತು ಮತ್ತು ಸಮಯೋಜಿತವಾಗಿದೆ,ನನ್ನ ಮನ ಮುಟ್ಟಿತ್ತು ಹಾಗಾಗಿ ಅದನ್ನ ಪುನಃಶೇರ್ ಮಾಡಿದ್ದೇನೆ.   ಎಲ್ಲರಿಗೂ ಕೃತಜ್ಞತೆಗಳು, ನಿಮ್ಮ ಶುಭ ಹಾರೈಕೆಗಳು ಸದಾ ನಮ್ಮನ್ನ ಸರಿ ಮಾಗ೯ದಲ್ಲಿ ಮುನ್ನಡಿಸಲಿ ಎಂದು ಪ್ರಾಥಿ೯ಸುತ್ತೇನೆ. ದನ್ಯವಾದಗಳೊಂದಿಗೆ  ಇತಿ ತಮ್ಮ ಕೆ.ಅರುಣ್ ಪ್ರಸಾದ್. 11 ನವೆಂಬರ್ 2019 ಹೊಂಬುಜ ರೆಸಿಡೆನ್ಸಿ ಆನಂದಪುರಂ. www.hombujalodge.com ಆನಂದಪುರದ ಅರುಣ್ ಪ್ರಸಾದ್ ನನ್ನ

ಹೆಚ್.ಎಂ.ಚಂದ್ರಶೇಖರಪ್ಪ ಕ್ರಿಯಾಶೀಲ ಮಾಜಿ ಶಾಸಕರು

#ಇವತ್ತಿನ ನಮ್ಮ ವಿಶೇಷ ಅತಿಥಿಗಳು#  ಕನಾ೯ಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾ ಕನಾ೯ಟಕ ರಾಜ್ಯ ಘಟಕದ ಉಪಾಧ್ಯಕ್ಷರಾಗಿರುವ ಶಿವಮೊಗ್ಗ   ದ ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪನವರು ಮತ್ತು ಜಿಲ್ಲಾ ಅಧ್ಯಕ್ಷರು ಸಾಗರದ ಸಭೆಗೆ ಹೋಗುವ ಮಾಗ೯ದಲ್ಲಿ ಬಂದಿದ್ದರು.   ಇವರ ತಂದೆ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಿಂದ ಶಾಸಕರಾಗಿದ್ದರು, ಇವರನ್ನ ಶಿವಮೊಗ್ಗದಲ್ಲಿ ಈಶ್ವರಪ್ಪರ ವಿರುದ್ಧ ಬಂಗಾರಪ್ಪನವರು ಸಾದರ ಲಿಂಗಾಯಿತರ ಅಭ್ಯಥಿ೯ಯಾಗಿ ನಿಲ್ಲಿಸಿ ಈಶ್ವರಪ್ಪರನ್ನ ಸೋಲಿಸಿದ್ದರು, ಮುಂದಿನ ಚುನಾವಣೆಗೆ ಕಾಂಗ್ರೇಸ್ ನಿಂದ ಇವರ ಮಗ ಶಿವಮೊಗ್ಗ ನಗರಸಭಾ ಕಾಪೊ೯ರೇಟರ್ ಯೋಗೀಶ್ ತಯಾರಾಗುತ್ತಿದ್ದಾರೆ, ಎಣಿಸಿದ೦ತೆ ನಡೆದರೆ ಇದೊಂದು ದಾಖಲೆ.    ನನ್ನ ಮಗಳ ವಿವಾಹ ಆಮOತ್ರಣ ಪೋಸ್ಟ್ ಮಾಡಿದ್ದೆ ಆ ದಿನ ಅವರಿಗೆ ಪೂವ೯ ನಿಗದಿಯಾದ ಕಾಯ೯ಕ್ರಮ ಇರುವುದರಿಂದ ಇವತ್ತೇ ಬೇಟಿ ಆಗಿ ಶುಭ ಹಾರೈಸಿದರು.   ಸದಾ ಕ್ರಿಯಾಶೀಲರಾಗಿರುವ, ಕಾಂಗ್ರೇಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ದೀಘ೯ 8 ವಷ೯ ಸೇವೆ ಸಲ್ಲಿಸಿದ ಇವರನ್ನ ಮುಂದಿನ ದಿನದಲ್ಲಿ ಪಕ್ಷ ಸರಿಯಾಗಿ ಬಳಸಿಕೊಂಡರೆ ಆ ಪಕ್ಷಕ್ಕೆ ಹೆಚ್ಚಿನ ಅನುಕೂಲ ಕೂಡ.   ಸಾವಿರಾರು ಮಾಜಿ ಶಾಸಕರು ಸದಸ್ಯರಾಗಿರುವ ಮಾಜಿ ಶಾಸಕರ ವೇದಿಕೆ ಅಧ್ಯಕ್ಷರಾಗಿ ವಿಧಾನ ಸೌದದಲ್ಲಿ ಕಚೀರಿ ಹೊಂದಿರುವ ಇವರು ಪ್ರಸಕ್ತ ರಾಜಕಾರಣದಲ್ಲಿ ಇನ್ನು ಹೆಚ್ಚು ಕ್ರಿಯಾಶೀಲರಾಗಿರುವುದು ಕೇಳಿ ಸಂತೋಷ

ಇಕ್ಕೇರಿ ನಾರಾಯಣ ಶಮಾ೯ ವಿಶೇಷ ವ್ಯಕ್ತಿ

#ಇಕ್ಕೇರಿ ನಾರಾಯಣ ಶಮಾ೯ ಸಾಮಾಜಿಕ ವಿಜ್ಞಾನಿ, ಸಂಸ್ಕೃತ ಪಂಡಿತ, ಮಲೆನಾಡಿನ ಜನಾನುರಾಗಿ ಕಲಾವಿದ, ಸಾಹಸಿ ಇವರ ಬಗ್ಗೆ ವಿವರಿಸಲು ಬಲು ಕಷ್ಟ#  1995ರಲ್ಲಿ ನಾನು ಆನಂದಪುರದ ಜಿಲ್ಲಾ ಪಂಚಾಯತ್ ಸದಸ್ಯ, ಹೊಸ ಹುಮ್ಮಸ್ಸು ಕ್ಷೇತ್ರದಲ್ಲಿ 100 ತೆರೆದ ಭಾವಿ ಮೊದಲ ವಷ೯ ನಿಮಿ೯ಸ ಬೇಕೆಂಬ ಬಯಕೆ ಇದನ್ನ ವ್ಯಕ್ತ ಪಡಿಸಿದಾಗ ಎಲ್ಲಾ ಸದಸ್ಯರು ಗೇಲಿ ಮಾಡಿ ಜೋಕರ್ ತರ ನನ್ನ ನೋಡಿದರು.  ಇದನ್ನ ಪ್ರತಿಷ್ಟೆಯಾಗಿ ಪರಿಗಣಿಸಿ ಜಿಲ್ಲಾ ಪಂಚಾಯತನ  ಪ್ಲಾನಿOಗ್ ಆಪಿಸರ್, ಮುಖ್ಯ ಅಕೌ೦ಟ್ ಆದೀಕಾರಿಗಳಲ್ಲಿ ಚಚಿ೯ಸಿದಾಗ ಅವರು ಹೇಳಿದ್ದು, ತೆರದ ಬಾವಿ ಹಣ ಮಾಚ್೯ 31 ರ ಒಳಗೆ ಬಳಕೆ ಆಗದೆ ವಾಪಾಸ್ ಹೋಗುತ್ತೆ ನೀವು ಮಾಚ್೯ ನಲ್ಲಿ 100 ಬಾವಿ ನಿಮಿ೯ಸಿದರೆ ಅದಕ್ಕೆ ಹಣ ಹೊಂದಿಸಬಹುದು ಅಂತ.  ಆಗ ಇಕ್ಕೇರಿ ಶಮ೯ ಇಕ್ಕೇರಿ ಬಂಗಾರದ ಗಣಿ ವಿರೋದಿ ಜನಜಾಗೃತಿಗಾಗಿ ತಮ್ಮ ತನು ಮನ ಧನ ದೊ೦ದಿಗೆ ತಮ್ಮ ಜೀಪಿಗೆ ಮೈಕ್ ಆಳವಡಿಸಿ ಪ್ರತಿದಿನ ಸ೦ಜೆ ಜನಜಾಗೃತಿ ಸಭೆಗೆ ಸಹಕರಿಸುತ್ತಿದ್ದರು ಆಗ ಜಿ.ಪಂ.ಸದಸ್ಯನಾಗಿದ್ದ ನನಗೂ ಮುಖ್ಯ ಬಾಷಣಕಾರನ ಕೆಲಸ ಈ ವಿಶ್ವಾಸದಿಂದ ಶಮಾ೯, ಗುತ್ತಿಗೆದಾರರಾದ ಬೇಬಿ ಮುಂತಾದವರಿಂದ ಮಂಜೂರಾಗದೇ 100 ಬಾವಿ ನಿಮಿ೯ಸಿದ್ದು ಇತಿಹಾಸ, ಬೇರೆಲ್ಲ ಸದಸ್ಯರು ಭಾವಿ ನಿಮಿ೯ಸದೆ ಉಳಿದ ವಾಪಾಸ್ ಹೋಗುವ ಹಣ ನನ್ನ ಕ್ಷೇತ್ರದ 100 ಬಾವಿಗೆ ವಿನಿಯೋಗವಾಗಿ ಜಿ.ಪಂ.ಸದಸ್ಯನಾಗಿ ಮೊದಲ ವಷ೯ 100ಕ್ಕೂ ಹೆಚ್ಚು

ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟದ ನೈಜ ಮುಖoಡರು

# ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟ ಅನೇಕರ ಹೋರಾಟದ ಫಲ ಮತ್ತು ಯಡೂರಪ್ಪರ ಇಚ್ಚಾ ಶಕ್ತಿಯಿ೦ದ ಸಾಧ್ಯವಾಯಿತು# ಬ್ರಾಡ್ ಗೇಜ್ ಪರಿವತ೯ನೆಗಾಗಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ವಿದಾನ ಪರಿಷತ್ ಸದಸ್ಯ ಮಾದಪ್ಪ, ಸಾಹಿತಿ ಕೋಣ0ದೂರು ವೆ೦ಕಪ್ಪ ಗೌಡರು, ರಾಜ್ಯ ಸಭಾ ಸದಸ್ಯ ಹಾಸನದ ಜವರೇ ಗೌಡರು, ಆಗಿನ ಕೇಂದ್ರ ಸಚಿವರಾದ ಶ್ರೀನಿವಾಸ ಪ್ರಸಾದ್‌, ರಕ್ಷಣಾ ಸಚಿವ ಜಾಜ್೯ ಪನಾ೯೦ಡೀಸ್, ರೈಲ್ವೆ ಮಂತ್ರಿ ನಿತೀಶ್ ಕುಮಾರ್, ಉಪ ಪ್ರದಾನಿ ಆಡ್ವಾನಿ, ಅನಿಲ್ ಹೆಗ್ಗಡೆ, ಕಲ್ಲೂರು ಮೇಘರಾಜ್, ದೆಹಲಿ ಚಲೋ ಮಾಡಿದ ನೂರಾರು ಹೋರಾಟಗಾರರು, ರೈಲು ತಡೆದು ಚಳವಳಿ ಮಾಡಿ ಕೇಸು ಹಾಕಿಸಿಕೊಂಡು ಹಲವಾರು ವಷ೯ ಕೋಟ್೯ ಗೆ ಓಡಾಡಿದ ಕಾಂಗ್ರೇಸ್ ಕಾಯ೯ಕತ೯ರು, ತಾಳಗುಪ್ಪದಿಂದ ಶಿವಮೊಗ್ಗದವರೆಗಿನ ಕಾನಲೆ, ಸಾಗರ, ಬಾಳೆಗುOಡಿ, ಅಡ್ಡೇರಿ, ಆನಂದಪುರಂ, ಕೆಂಚನಾಲ, ಅರಸಾಳು, ಕುಂಸಿ ತನಕ ಜನ ಜಾಗೃತಿ ಸಭೆ ನಡೆಸಿದ ಗಣಪತಿಯಪ್ಪರ ನೇತೃತ್ವದ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟ ಸಮಿತಿ, ಬ್ರಾಡ್ ಗೇಜ್ ಗೆ ಬೇಕಾದ ಹಣ ರಾಜ್ಯ ಸಕಾ೯ರದಿಂದ ದೊರೆಯುವ೦ತೆ ಮಾಡಿ ಕೇಂದ್ರ ರೈಲ್ವೇ ಇಲಾಖೆ ಬಾಕಿ ಹಣ ಬಿಡುಗಡೆ ಮಾಡಿಸಿದ ಅವತ್ತಿನ ಲೋಕಸಭಾ ಸದಸ್ಯ ರಾಘವೇಂದ್ರ, ತಕ್ಷಣ ರಾಜ್ಯ ಸಕಾ೯ರದ ಹಣ ಬಿಡುಗಡೆ ಮಾಡಿದ ಆಗಿನ ಮುಖ್ಯಮಂತ್ರಿ ಯಡೂರಪ್ಪ ಆಗಿನ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು, ರೈತ ಸಂಘ, ಸಾಗರ ತಾಲ್ಲೂಕ್ ಅಭಿವೃದ್ದಿ ಹೋರಾಟ ಸಮಿತಿ, ಪತ್ರಕತ೯ರು ಇವರ

ಬಾಲಕೃಷ್ಣ ಕನ್ನಡದ ಪ್ರಖ್ಯಾತ ನಟರು, ಅವರ ಜೀವನ ಚರಿತ್ರೆ ದುರಂತ

ಕನ್ನಡದ ಪ್ರಖ್ಯಾತ ಮನರಂಜನಾ ಶೋ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಕಾರ್ಯಕ್ರಮ ಯಶಸ್ವಿ 500 ಸಂಚಿಕೆ ಪೂರೈಸಿ ಶೋ ಗೆ ತೆರೆ ಎಳೆಯಲಾಯಿತು. ಆದರೆ ಕಾರ್ಯಕ್ರಮದ ಕೊನೆಯ ಕೆಲ ತಿಂಗಳುಗಳ ಕಾಲ ಶೋ ಪ್ರಾರಂಭವಾಗುವ ಮುನ್ನ ಅನೇಕ ಅದ್ಭುತ ವಿಚಾರಗಳನ್ನು ಸೃಜನ್ ಅವರು ಹಂಚಿಕೊಂಡಿದ್ದರು. ಕನ್ನಡದ ಸ್ಟಾರ್ ನಟ ಮಗುವಾಗಿದ್ದಾಗ ಅವನ ತಾಯಿಯೇ ಕೇವಲ 8 ರೂಪಾಯಿಗೆ ಮಾರಿಬಿಡುತ್ತಾಳೆ.. ಮುಂದೆ ಆತ ದೊಡ್ಡ ನಟನಾಗಿ.. ಇಡೀ ಕರುನಾಡೇ ಮೆಚ್ಚುವಂತ ಮಹಾನ್ ಕಲಾವಿದನಾಗಿ ಬೆಳೆದು ನಿಲ್ಲುತ್ತಾನೆ.. ಯಾರಾತ?? ನಿಜಕ್ಕೂ ಮನಮುಟ್ಟುವ ಕತೆ ಕೇಳಿದರೆ ಆಶ್ಚರ್ಯವಾಗುತ್ತದೆ.. ಹಾಸನದಲ್ಲಿ 95 ವರ್ಷಗಳ ಹಿಂದೆ ಜೀವನ ನಡೆಸುವುದು ಕಷ್ಟ ಎಂದು ತನ್ನ ಮಗುವನ್ನ 8 ರೂಪಾಯಿಗೆ ಮಾರಿ ಬಿಡುತ್ತಾಳೆ… ಆ ಹುಡುಗನ ಬಾಲ್ಯ ಬಹಳ ಕಷ್ಟಕರವಾಗಿತ್ತು.. ಆ ಹುಡುಗನ ತಾಯಿ ಆತನನ್ನು ಮಂಡಿ ವ್ಯಾಪಾರಿಗಳಿಗೆ ಮಾರ್ತಾಳೆ.. ಆನಂತರ ಸಾಕು ತಂದೆ ತಾಯಿ ಜೊತೆ ಆ ಹುಡುಗ ಇರ್ತಾನೆ.. ಆ ಹುಡುಗನಿಗೆ ನಾಟಕದ ಹುಚ್ಚು ಜಾಸ್ತಿ ಇತ್ತು.. ಒಂದು ದಿನ ನಾಟಕ ನೋಡೋಕೆ ಅಂತ ಆ ಹುಡುಗ ತನ್ನ ಸಾಕು ತಂದೆಯ ಜೇಬಿನಿಂದ ಹಣವನ್ನ ಕದಿತಾನೆ.. ಇದು ಆ ಸಾಕು ತಂದೆಗೆ ಗೊತ್ತಾಗಿ ಬಿಡತ್ತೆ.. ತಕ್ಷಣ ಆ ಹುಡುಗನಿಗೆ ಹೊಡೆದು ಬಡೆದು ಮನೆ ಬಿಟ್ಟು ಓಡಿಸಿ ಬಿಡ್ತಾರೆ.. ಆಮೇಲೆ ಏನ್ ಮಾಡೋದು.. ಹೆತ್ತವರು ಮಾರಿಬಿಟ್ಟರು.. ಸಾಕಿದವರು ಮನೆ ಬಿಟ್ಟು ಓಡಿಸಿದರು.. ಆ ಹುಡುಗ ಸುಮ್ಮನಾಗಲಿಲ್ಲ.. ನಾಟಕದ ಪೋಸ್ಟರ್ ಗಳನ್ನ ಅಂಟಿಸೋದ