Skip to main content

Posts

Showing posts from March, 2020

#21 ದಿನದ ಲಾಕ್ ಡೌನ್ ನಲ್ಲಿ ಸಂಪೂಣ೯ ಮದ್ಯಪಾನ ಮಾರಾಟ ರದ್ದು ಸರಿಯಾದ ಕ್ರಮವೆ?#

#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 4.  (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 31 - ಮಾಚ್೯ - 2020 #21ದಿನದಲಾಕ್ಡೌನ್ #ಮದ್ಯಪಾನಿಗಳಮೇಲಿನಪರಿಣಾಮದಸಂಶೋದನೆಗೆಕಾರಣವಾಗಿದೆ.       ಇವತ್ತಿಗೆ ಅಂದರೆ 31 ಮಾಚ್ 2020 ರ ಮಧ್ಯರಾತ್ರಿ ತನಕ ಇದ್ದ ಮದ್ಯ ಮಾರಾಟ ನಿಷೇದ ನಾಳೆ ಅಂದರೆ ಏಪ್ರಿಲ್ 1 ರಿಂದ ತೆರವು ಆಗಲಿದೆ ಎಲ್ಲಾ ಸಕಾ೯ರಗಳು ನಿಯಮಿತ ಸಮಯದಲ್ಲಿ ಮಧ್ಯಮಾರಾಟ ಮಾಡಲಿದೆ ಎಂಬ ಆಶಾಭಾವನೆ ಮದ್ಯಪಾನಿಗಳಲ್ಲಿ ಇತ್ತು.   ಇದಕ್ಕೆ ಪೂರಕವಾಗಿ ಕುಡುಕರು ಕೇರಳದಲ್ಲಿ ಆತ್ಮಹತ್ಯ ಮಾಡಿಕೊಂಡಿದ್ದು, ಖ್ಯಾತ ಚಿತ್ರ ನಟರು ರಾಜಕಾರಣಿಗಳು ಮನೋವೈದ್ಯರು ಮದ್ಯಪಾನ ಸಂಪೂಣ೯ ನಿಲ್ಲಿಸುವುದರಿಂದ ಅನೇಕರ ಆರೋಗ್ಯ ಮಾರಕವಾಗಲಿದೆ ಎಂದು ಎಚ್ಚರಿಸಿದ್ದರು.   ಆದರೆ ಏಪ್ರಿಲ್ 14 ರ ವರೆಗೆ ಮದ್ಯ ಮಾರಾಟ ನಿಷೇದ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದೆ.    ಕೇರಳ ಮತ್ತು ಪಂಜಾಬ್ ರಾಜ್ಯದಲ್ಲಿ ಅವಶ್ಯಕ (Essential) ಆಹಾರ ಪಟ್ಟಿಯಲ್ಲಿ ಮಧ್ಯ ಸ್ಥಾನ ಪಡೆದಿದೆ.   ಇಡೀ ದೇಶದಲ್ಲಿ 2019 ರಲ್ಲಿ ಅಬಕಾರಿ ಆಧಾಯ 90 ಸಾವಿರ ಕೋಟಿ ಅಂದರೆ ಇದರ ವ್ಯವಹಾರದ ವಿಸ್ತಾರ 100 ಲಕ್ಷ ಕೋಟಿಗೂ ಹೆಚ್ಚು ಇದರಿ೦ದ ಸೃಷ್ಟಿ ಆಗುವ ನೇರ ಮತ್ತು ಪರೋಕ್ಷ ಉದ್ಯೋಗ ಇನ್ನೆಷ್ಟು ಯೋಚಿಸಿ.   ಜನತಾ ಕಪ್ಯೂ೯ ಅಂದಾಗಲೆ ಪಂಜಾಬ್ ಮತ್ತು ಉತ್ತರ ಭಾರತೀಯ ರಾಜ್ಯದಲ್ಲಿ ಪ್ರತಿ ಕುಟು೦ಬಗಳು ಒಂದು ತಿಂಗಳಿಗೆ ಬೇಕಾದ ಮಧ್ಯ  ದಿನಸಿಯ ಜೊತೆಯಲ್ಲೆ ಶ

#ಭಾರತೀಯ ಪೋಲಿಸ್ ವ್ಯವಸ್ಥೆ ಜನ ಸ್ನೇಹಿ ಆಗಬೇಕಾಗಿದೆ#

#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 3.  (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 30 - ಮಾಚ್೯ - 2020) #ಪೋಲಿಸರಶ್ರಮಜನಸ್ನೇಹಿಆಗಿದ್ದಿದ್ದರೆ #ಇದೊಂದುವಿಶ್ವದಾಖಲೆಆಗುತ್ತಿತ್ತು  ಸ್ವಾತಂತ್ರ ನಂತರದಲ್ಲಿ ಇಡೀ ದೇಶ ಇದೇ ಮೊದಲ ಬಾರಿ 21 ದಿನದ ಲಾಕ್ ಡೌನ್ ನಡೆದಿದೆ, ಇದರಿಂದ ದೇಶದ ಜನರ ಆರೋಗ್ಯಕ್ಕಾಗಿ ಕರೋನಾ ವೈರಸ್ ಸಾಮೂಹಿಕವಾಗಿ ಹರಡದಂತೆ ತಡೆಯುವ ಮಹತ್ವದ ಉದ್ದೇಶವಿದು.   ಬೃಹತ್ ದೇಶ ಮತ್ತು ಅತಿ ಹೆಚ್ಚು ಜನಸಂಖ್ಯೆಯ ದೇಶದಲ್ಲಿ ಇದು ಕಟ್ಟುನಿಟ್ಟಿನ ಆಚರಣೆಗೆ ಎಲ್ಲಾ ರಾಜ್ಯಗಳ ಪೋಲಿಸರ ಶ್ರಮ ಅಪಾರ ಆದರೆ ಇವರ ಶ್ರಮಕ್ಕೆ ಕಪ್ಪು ಚುಕ್ಕೆಯOತೆ ಕೆಲ ಪೋಲಿಸರ ಅತಿರೇಕದ ವತ೯ನೆ ಮಾತ್ರ ಪೋಲಿಸರ ಬಗ್ಗೆ ಕೆಟ್ಟ ಅಭಿಪ್ರಾಯಕ್ಕೆ ಕಾರಣವಾಯಿತು.   ಇದರಿಂದ ದೇಶದಾದ್ಯ೦ತ ಪೋಲಿಸರ ವಿರುದ್ಧ ಜನ ಆಕ್ರೋಷ ವ್ಯಕ್ತ ಪಡಿಸಿದ್ದಾರೆ ಹಾಗಾಗಿ ಲಾಕ್ ಡೌನ್ ನ 5ನೇ ದಿನದಿ೦ದ ಕತ೯ವ್ಯ ನಿವ೯ಹಿಸುವ ಪೋಲಿಸರಿಗೆ ಲಾಠಿ ಇಲ್ಲದೆ ಕಾಯ೯ ನಿವ೯ಹಿಸಲು ಆದೇಶಿಸಲಾಯಿತು.    ಲಾಠಿ ಇಲ್ಲದ ಪೋಲಿಸರಿಂದ ಲಾಕ್ ಡೌನ್ ಯಶಸ್ವಿಯಾಗಲು ಸಾಧ್ಯವೇ ಇಲ್ಲ ಅಂತ ಬಾವಿಸಲಾಗಿತ್ತು ಆದರೆ ಇವತ್ತು ಬೆಂಗಳೂರು ಪೋಲಿಸ್ ಕಮಿಷನರ್ ಭಾಸ್ಕರ್ ರಾವ್ ಲಾಠಿ ರಹಿತ ಪೋಲಿಸರ ಕತ೯ವ್ಯ ಯಶಸ್ವಿಯಾಗಿರುವುದಾಗಿ ಮತ್ತು  ಪೋಲಿಸರು ಇನ್ನೂ ಹೆಚ್ಚಿನ ಜನ ಸ್ನೇಹಿ ಆಗಿ ಕತ೯ವ್ಯ ನಿವ೯ಹಿಸಲು ತಿಳಿಸಿದ್ದಾರೆ.   ಭಾರತದ ಲಾಕ್ ಡೌನ್

#indSamachar.com ಎಲ್ಲಾ ಬಾರತೀಯ ಮತ್ತು ಇಂಗ್ಲೀಷ್ ಸುದ್ದಿಗಾಗಿ#

INDSAMACHAR.COM ಇoಗ್ಲೀಷ್ ಸೇರಿ ಭಾರತದ ಎಲ್ಲಾ ಬಾಷೆಗಳಲ್ಲಿ ಸುದ್ದಿ ಪ್ರಸಾರ ಮಾಡುತ್ತಿದೆ ನಿನ್ನೆಯಿ೦ದ ನನ್ನ ಬರಹಗಳ ಬ್ಲಾಗ್ ಲೇಖನ ಪ್ರಕಟಿಸಲು ನನ್ನ ಒಪ್ಪಿಗೆ ಪಡೆದು ಪ್ರಕಟಿಸುತ್ತಿದೆ.  ಬೆಹರೇನ್ ನಲ್ಲಿ ಕೇಂದ್ರ ಕಚೇರಿ ಇರುವ ಭಾರತದಲ್ಲಿ ಮುಂಬೈನಲ್ಲಿ ಪ್ರಾದೇಶಿಕ ಕಚೇರಿ ಹೊಂದಿದೆ.   ಕೊಲ್ಲಿ ದೇಶದಲ್ಲಿ ಹೆಚ್ಚು ಇರುವ ಮಲೆಯಾಳ ಬಾಷಿಕರಿಗೆ ಮಲೆಯಾಳ ಟಿ.ವಿ.ಚಾನಲ್ ಕೂಡ ನಡೆಸುತ್ತಿದ್ದಾರೆ.   ನೀವು ಸುದ್ದಿಗಾಗಿ Indsamachar.com ವೆಬ್ ಪೇಜ್ ಒಪನ್ ಮಾಡಿ ನಿಮಗೆ ಬೇಕಾದ ಬಾಷೆ ಆಯ್ಕೆ ಮಾಡಿ ಸುದ್ಧಿ ಪಡೆಯಬಹುದು.

#ಕೊರಾನಾ ವೈರಸ್ ಹರಡಿದೆ ಎಂಬ ಭ್ರಮೆ ಕಳೆಯಲು ಆಪ್ತ ಸಮಾಲೋಚನೆ ಅನಿವಾಯ೯#

#ಕೊರಾನಾ ಲಾಕ್ ಡೌನ್ ಡೈರಿ- ಲೆಟರ್ ನಂ 2.  (ಕೆ.ಅರುಣ್ ಪ್ರಸಾದ್) (25-ಮಾಚ್೯ - 2020 ರಿಂದ 30 - ಮಾಚ್೯ - 2020)  ಲಾಕ್ ಡೌನ್ 5 ದಿನ ಮುಗಿದು ಈಗ 6ನೇ ದಿನ ಪ್ರಾರಂಭ ಆಗುತ್ತಿದೆ, ಜನ ಸಂಚಾರ 90% ಕಡಿಮೆ ಆಗಿದೆ ಮುಂದೇನು ಅನ್ನುವ ಚಿಂತೆಯ ಮದ್ಯ ಕ್ರಮೇಣ ನಮಗೆ ನಮ್ಮ ದೇಹದಲ್ಲೇ ನೋವು ಬಂದ ಹಾಗಾಗಿ ಜ್ವರ ಬಂತಾ ಅಂತ ಗಾಭರಿ, ಮನೇಲಿ ಯಾರಾದರೂ ಕೆಮ್ಮಿದರೆ ಶೀನಿದರೆ ಭಯ ಇದೆಲ್ಲ ಪ್ರಾರಂಭ ಆಗಲಿದೆ.   ಇದಕ್ಕೆಲ್ಲ ಕಾರಣ ಕರೋನಾ ವೈರಸ್ ಭಯ (Fobia) ಇದನ್ನ ನಿವಾರಿಸಲು ಸರಿಯಾದ ಆಪ್ತ ಸಲಹೆ (counseling) ಅವಶ್ಯವಿದೆ.    ಈ ವೈರಸ್ ತನಗೆ ಬಂದಾಗಿದೆ ಅಂತ ಬುದ್ದಿ ಬ್ರಮಣೆ ಆದದ್ದು ಮತ್ತೊಬ್ಬರು ಆತ್ಮಹತ್ಯಮಾಡಿಕೊಂಡಿದ್ದು ಇದೇ ಬ್ರಮಣೆಯಿಂದ.   ಅದಕ್ಕಾಗಿ ಸದ್ಯದ ದೇಶದ ಪರಿಸ್ಥಿತಿಯಲ್ಲಿ ನಮಗೆ ನಾವೇ ಆಪ್ತ ಸಲಹೆ ಹಂಚಿಕೊ೦ಡು ಹೆಚ್ಚು ಜನರಿಗೆ ಜಾಗೃತಿ ಮಾಡಬೇಕಾದ ಅನಿವಾಯ೯ತೆ ಇದೆ. 1. ಒಣ ಕೆಮ್ಮು+ ಶೀನುವುದು= ಎರ್ ಪೊಲುಶನ್ನಿ೦ದ. 2. ಕೆಮ್ಮು+ಕಫ+ ಶೀನುವುದು+ ಮೂಗಿನಲ್ಲಿ ಸತತ ನೀರು ಬರುವುದು=ಸಾಮಾನ್ಯ ನೆಗಡಿಯಿ೦ದ. 3. ಕೆಮ್ಮು+ಕಫ+ ಶೀನು+ ನೀರಿಳಿಯುವ ಮೂಗು+ ದೇಹದಲ್ಲಿ ನೋವು+ನಿಶಕ್ತಿ+ ಸಣ್ಣ ಜ್ವರ= ಪ್ಲೂ ನಿಂದ. 4. ಒಣ ಕೆಮ್ಮು+ ಶೀನು+ ದೇಹದಲ್ಲಿ ನೋವು+ನಿಶಕ್ತಿ+ವಿಪರೀತ ಜ್ವರ+ ಉಸಿರಾಟದ ಕಷ್ಟ= ಕೊರಾನ ವೈರಸ್ ಪರೀಕ್ಷೆ ತಕ್ಷಣ ಮಾಡಿಸುವುದು.   ವಿಶೇಷವಾಗಿ ಗಮನಿಸಿ: ನಮ್ಮ ದೇಹದಲ್ಲಿ ರೋಗ ನಿರೋದಕ ಶಕ್ತಿ ಮತ್ತು

#ಬಾಲ್ಯದಲ್ಲಿ ಮಲೆನಾಡಿನಲ್ಲಿ ಎಲ್ಲೆಂದರಲ್ಲಿ ಸಿಗುತ್ತಿದ್ದ ಚೆರ್ರಿ ಟೋಮೊಟೊ ಈಗ ಕಳೆದು ಹೋದ ತಳಿ ಈಗ ಬೆಂಗಳೂರಿನ ಬಿಗ್ ಬಜಾರಿನಲ್ಲಿ ಪ್ರತ್ಯಕ್ಷ#

#ಚೆರ್ರಿಟೊಮೊಟೊ ಬೆಂಗಳೂರು ಬಿಗ್ ಬಜಾರಿನಲ್ಲಿ#  ಮಲೆನಾಡಿನಲ್ಲಿ ಈ ತಳಿ ನಾಪತ್ತೆ ಆಗಿದೆ, ನಾವೆಲ್ಲ ಚಿಕ್ಕವರಿರುವಾಗ ಮಳೆಗಾಲದ ನಂತರದ ದಿನದಲ್ಲಿ ಬೇಲಿ ಸಾಲಿನಲ್ಲಿ ಗೊಬ್ಬರದ ಗುOಡಿಯಲ್ಲಿ ಈ ಚಿಕ್ಕ ಗೋಲಿಗಾತ್ರದ ಟೋಮೊಟೊ ಯಥೆಚ್ಚವಾಗಿ ಸಿಗುತ್ತಿತ್ತು.    ಅಡುಗೆಯಲ್ಲಿ ಹುಣಸೆ ಹುಳಿಗಾಗಿ ಹುಳಿ ಟೊಮೊಟಾ ಬಳಕೆ ಜಾಸ್ತಿ ಆಗಿ ಈಗ ಹುಳಿ ಟೊಮೊಟಾ ಕೂಡ ಇಲ್ಲ ಆಗಿದ್ದು ಉತ್ತರ ಭಾರತೀಯ ಅಡುಗೆ ಶೈಲಿಯ ಸಿಹಿಯಾದ ಉದ್ದ ಟೊಮೊಟಾ ಮಾರುಕಟ್ಟೆ ಆತಿಕ್ರಮಿಸಿದೆ.   ಇದರ ಮದ್ಯ ಬಾಲ್ಯದಲ್ಲಿನ ಗೋಲಿಗಾತ್ರದ ನೋಡಲು ಚೆರ್ರಿ ಹಣ್ಣಿನಂತೆ ಇರುವುದರಿಂದ ಚೆರ್ರಿ ಟೋಮೊಟಾ ಮರೆತೇ ಹೊಗಿತ್ತು ಇತ್ತಿಚಿಗೆ ಮಗಳು ಬೆಂಗಳೂರಿನ ಬಿಗ್ ಬಜಾರ್ ನಲ್ಲಿ ಇದನ್ನ ಮಾರಲಿಟ್ಟಿದ್ದು ನೋಡಿ ತಂದು ಕೊಟ್ಟಿದ್ದಳು 200 ಗ್ರಾo ಗೆ 49 ರೂಪಾಯಿ ಅಂದರೆ ಕೆಜಿಗೆ ಸುಮಾರು 250 ಇರಬಹುದು!.   ಇವತ್ತು ನಮ್ಮ ಆನಂದಪುರಂ ಹೋಬಳಿಯ ಮಿ೦ಚಿನ ಪತ್ರಕತ೯(ಅವರ ಮಿಂಚಿನಂತ ತಿರುಗಾಟ ನೋಡಿ ಈ ಬಿರುದು) ಉದಯ್ ಸಾಗರ್ ಅವರ ಶುಂಠಿ ಜಮೀನಿನಲ್ಲಿ ನೀರು ಹಾಯಿಸುವಾಗ ಈ ಹಣ್ಣು ಬಿಟ್ಟ ಚೆರ್ರಿ ಟೋಮೊಟ ಚಿತ್ರ FB ಯಲ್ಲಿ Post ಮಾಡಿದ್ದು ನೋಡಿದಾಗ ಬೆಂಗಳೂರಿನ ಬಿಗ್ ಬಜಾರ್ ನ ಈ ಹಣ್ಣಿನ ಫ್ಯಾಕೆಟ್ ಪೋಟೋ ತೆಗೆದದ್ದು ನೆನಪಾಯಿತು.   ಹಳೇ ಪ್ಯಾಷನ್ ಎಷ್ಟೋ ವಷ೯ದ ಮೇಲೆ ಹೊಸದಾಗಿ ಬಂದOತೆ ನಮ್ಮ ಬಾಲ್ಯದ ಹಳೆ ತಳಿ ಹೊಸದಾಗಿ ಮಾರುಕಟ್ಟೆಗೆ ಬಂದಿದೆ.

#ಕಾಗೇಗಳು ಏಕೆ ಮೌನ ಲಾಕ್ ಡೌನ್ ನಲ್ಲಿ #

#ಕೊರಾನಾ ಲಾಕ್ ಡೌನ್ - ಲೆಟರ್ ನಂ 1. (25-ಮಾಚ್೯ - 2020 ರಿಂದ 29 - ಮಾಚ್೯ - 2020) #ಕಾಗೆಗಳೇಕೆ ಕಾಣುತ್ತಿಲ್ಲ#    ಮೊನ್ನೆಯಿ೦ದ ಲಾಕ್ ಡೌನ್ ಆದಾ೦ಗಿ೦ದ ಶಬ್ದಮಾಲಿನ್ಯ ಕಡಿಮೆ ಆಯಿತು ಮನೆಯ ಗಡಿಯಾರದ ಮುಳ್ಳಿನ ಟಿಕ್.. ಟಿಕ್..ಶಬ್ದದ ಚಲನೆ ದಶಕದ ಮೇಲೆ ಕೇಳಿತು! ದೂರದ ಚಚಿ೯ನ ಗOಟೆ ಕೇಳುತ್ತಲೇ ಇರಲಿಲ್ಲ.    ಪರಿಸರದ ಹಕ್ಕಿಗಳ ಕಲರವ ಊರಿ೦ದ ದೂರದ ಜಮೀನಿನಲ್ಲಿ ಮಾತ್ರ ಕೇಳುವುದು ಈಗ ಮನೇಯಲ್ಲೇ ಕೇಳುವಂತಾಯಿತು.     ರಾತ್ರಿ 12 ಆದರೂ ಊರ ರಸ್ತೆ ಗಿಜಿಗಿಜಿ ಆಗಿರುತ್ತಿತ್ತು, ನಮ್ಮ ಮನೆ ನಾಲ್ಕು ರಸ್ತೆ ಸೇರುವ ಯಡೇಹಳ್ಳಿವೃತ್ತದಲ್ಲಿ ಇದೆ, NH 206 ಮತ್ತು ರಾಣಿ ಬೆನ್ನೂರು To ಬೈoದೂರು ರಾ.ಹೆದ್ದಾರಿ ಹಾಗೂ ತೀಥ೯ಹಳ್ಳಿ ಸಂಪಕ೯ ರಸ್ತೆ ರಾತ್ರಿ ಹಗಲು ಸಂಚರಿಸುವ ವಾಹನಗಳಿ೦ದ.   ಈಗ ಸೂಯ೯ ಅಸ್ತ ನಿದಾನ ಸಂಜೆ 7 ರ ನಂತರ ಊರು ರಸ್ತೆ ಬಿಕೋ ಅನ್ನುತ್ತದೆ, ರಾತ್ರಿ ಎಲ್ಲಾ ಸಂಚರಿಸುವವರನ್ನ ಅನುಮಾನದಿಂದ ಎಚ್ಚರಿಸುತ್ತಿದ್ದ ಸಾಕು ನಾಯಿ ಮತ್ತು ಬೀದಿ ನಾಯಿಗಳು ಯಾರದ್ದು ಸಂಚಾರ ಇಲ್ಲದ್ದು ನೋಡಿ ಊಳಿಡುವುದಕ್ಕೆ ವಿರಾಮ ಕೊಟ್ಟಿದೆ.   ಇದರ ಮಧ್ಯೆ ನನ್ನ ಗಮನಕ್ಕೆ ಬಂದದ್ದು ಇದ್ದಕ್ಕಿದ್ದ೦ತೆ ನಮ್ಮ ಊರಲ್ಲಿ ಸೂಯ೯ ಉದಯಿಸಲು ಕಾ ಕಾ ಅನ್ನುತ್ತಿದ್ದ ಕಾಗೆಗಳು ಈಗ ಕಾಣುತ್ತಿಲ್ಲ ಏಕೆ? ಮೊದಲೆಲ್ಲ ತಂಡ ಕಟ್ಟು ಕೊಂಡು ಹಾರಾಟ ಕೂಗಾಟ ಈಗ ಕೇಳಿ ಬರುತ್ತಿಲ್ಲ ಇವತ್ತು ಬಾನುವಾರ ಎಲ್ಲೊ ಒಂದು ಕಾಗೆ ಕೂಗು ಕೇಳಿತು.    ಜನರ ಸಂಚಾರ ಇದ

#ಬಾರಾ ಪಂಥ, ನಾಥಪಂಥದ ಬಗ್ಗೆ ಆಸಕ್ತಿ ಇದ್ದರೆ ಈ ಪುಸ್ತಕ ತಪ್ಪದೇ ಓದಿ#

#ರಹಮತ್ತರೀಕೆರೆ ಇವರ ಸಂಶೋದನಾ ಗ್ರOಥ #ಕನಾ೯ಟಕದನಾಥಪಂಥ#    ನಾಸಿಕ್ ಕುಂಬ ಮೇಳದಿಂದ ಪ್ರತಿ 12 ವಷ೯ಕ್ಕೆ ಒಮ್ಮೆ ಮOಗಳೂರಿನ ಕದ್ರಿ ಮಠಕ್ಕೆ ನೂರಾರು ಸನ್ಯಾಸಿಗಳು ಪಶ್ಚಿಮ ಘಟ್ಟದ ಮಾಗ೯ದಲ್ಲೇ ನಡೆದು ಬರುವ ಬಾರಾ ಪಂಥಾ ಎಂಬ ಜೂOಡಿಯಾತ್ರೆ, ಇದನ್ನ ಸಾವಿರಾರು ವಷ೯ದಿಂದ ನಡೆಸಿಕೊಂಡು ಬರುವ ನಾಥಪ೦ಥದ ಬಗ್ಗೆ ಹೆಚ್ಚು ಆಸಕ್ತಿ ಇದ್ದರೂ ಅದನ್ನ ವಿವರವಾಗಿ ತಿಳಿಯಲಾಗಿರಲಿಲ್ಲ.   4 ವಷ೯ದ ಹಿಂದೆ ಬಂದ ಬಾರಾ ಪಂಥ ಯಾತ್ರೆ ಸುದ್ದಿ ಹಾಯ್ ಬೆಂಗಳೂರಲ್ಲಿ ಮಾಡಿದ್ದ ಶ್ರOಗೇಶ್ ಈ ಪುಸ್ತಕದ ಬಗ್ಗೆ ತಿಳಿಸಿದ್ದರು ಆದರೆ ಈ ಪುಸ್ತಕ ನನಗೆ ಸಿಕ್ಕಿರಲಿಲ್ಲ ಮೊನ್ನೆ ಶ್ರOಗೇಶ್ ರವರೇ ಹುಡುಕಿ ಖರೀದಿಸಿ ತಂದು ಕೊಟ್ಟಿದ್ದು ಮೊನ್ನೆ ಜನತಾ ಕಪ್ಯೂ೯ನಿಂದ ಎರಡನೇ ದಿನದ ಲಾಕ್ ಡೌನ್ ವರೆಗೆ ಓದಿ ತಿಳಿದುಕೊಳ್ಳಲು ಕಾರಣ ಆಯಿತು.    ನಾಥಪಂಥದ ಆದಿ ಚುOಚನಗಿರಿ ಬಾರಾ ಪಂಥದ ಕೈತಪ್ಪಿದ ಅಪರೂಪದ ದಾಖಲೆ ಸಹಿತ ವಿವರವಾದ ಮಾಹಿತಿ ಈ ಪುಸ್ತಕದಲ್ಲಿ ಇದೆ.    ಕೃಷಿಕರ, ಕುರುಬರ, ನೇಕಾರರ ಮತ್ತು ಮೀನುಗಾರರೆಲ್ಲರಿಗೂ ನಾಥಪಂತದ ಮಚೆ೦ದ್ರ ನಾಥರು ಗೋರಕನಾಥರು ಅಧಿಪತಿಗಳು ಆದರೆ ಅದೆಲ್ಲದರ ಮಹತ್ವ ಇತಿಹಾಸ ಆಯಾ ಜನಾ೦ಗದ ಅವರಿಗೇ ಮರೆತು ಹೋಗಿದೆ.   ಬಾರಾ ಪಂಥದ ಕೇಂದ್ರ ಉತ್ತರ ಪ್ರದೇಶದ ಗೋರಕ್ ಪುರ ಅಲ್ಲಿನ ಮಹಾಂತರೇ ಇದರ ಅಧ್ಯಕ್ಷರು ಅವರು ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರು.    12 ವಷ೯ಕ್ಕೆ ಬರುವ ಬಾರಾ ಪಂಥ ಯಾತ್ರೆ ಎಲ್ಲಿ೦ದ ಪ್ರ

#ಪೋಲಿಸರ ಲಾಕ್ ಡೌನ್ ಸಂದಭ೯ದ ಕೆಲಸ ಹೈ ರಿಸ್ಕ್ ಅವರಿಗೆ ಸಹಕರಿಸಿ #

#ಪೋಲಿಸರು ನಮ್ಮ ನಿಮ್ಮ ನಡುವಿನ ಮನುಷ್ಯರೆ, ಕೆಲವೊಂದು ಸಂದಭ೯ದ ಅತಿರೇಖದ ಕ್ಷಣಕ್ಕೆ ಕ್ಷಮೆ ಇರಲಿ#   ಇಲ್ಲಿನ ವಿಡಿಯೋ ನೋಡಿ ಸಮವಸ್ತ್ರ ಧರಿಸಿ ಬೆಲ್ಟ್ ಬಕಲ್ ಹಾಕುವಾಗ ಪೋಲಿಸರ ಕಂದಮ್ಮ ರೊಳ್ಳೆ ತೆಗೆದು ಅಳುತ್ತಿದೆ ಆದರೆ ಕತ೯ವ್ಯದ ಕರೆ ತಪ್ಪಿಸಿಕೊಳ್ಳಲಾಗದು ಕರುಳಿನ ಕುಡಿಯ ಪ್ರೀತಿಯ ಆಕ್ಷೇಪಣೆ ನಿರಾಕರಿಸುವುದು ಎಂತು?    ನಾವಾಗಿದ್ದರೆ ಮಗುವಿಗಾಗಿ ಕೆಲಸಕ್ಕೆ ಹೋಗದೇ ಇರಬಹುದು ಆದರೆ ಸಮಾಜ ಸುರಕ್ಷ ಪೋಲಿಸರು?    ಲಾಕ್ ಡೌನ್ ಆದ ಮೇಲೆ ಯಾರು ಸಂಚಾರಿಸದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪೋಲಿಸರದ್ದೇ ಹಾಗಾಗಿ ಕಾನೂನು ಭಂಗ ಮಾಡುವ ಜನರನ್ನ ನಿಯ೦ತ್ರಿಸಲು ಶ್ರಮ ಪಡುತ್ತಿದ್ದಾರೆ ಆದರೂ ಕೆಲವರು ಪೋಲಿಸರ ಮೇಲೆ ಏರಿ ಹೋಗುತ್ತಿದ್ದಾರೆ!?    ಒoದೆರೆಡು ದಿನದಲ್ಲಿ ಹೊಸ ವ್ಯವಸ್ಥೆಗೆ ಎಲ್ಲರೂ ಸರಿ ಆಗುತ್ತಾರೆ ಆದರೆ ಕೆಲವರಿಗೆ ಎಲ್ಲಿಲ್ಲದ ಅವಸರ.    ಟ್ರಾಪಿಕ್ ಪೋಲಿಸರಿಗೆ ಸಂಚಾರ ನಿಯ೦ತ್ರಣದಲ್ಲಿರುವ  ಅನುಭವ ಬೇರೆ ಪೋಲಿಸರಿಗೆ ಕಡಿಮೆ ಈ ಮದ್ಯ ಅವರಿಗೆ ಅಟಕಾಯಿಸುವ ದೂಡಾಡುವ ಕೆಟ್ಟ ಪದ ಪ್ರಯೋಗದ ಬೈಯ್ಗುಳಗಳು ಅವರ ಸಹನೆ ಪರೀಕ್ಷೆ ಆಗಿ ಅತಿರೇಖಕ್ಕೆ ಹೋಗಿರಬಹುದು.    ಕೆಲಸಂದಭ೯ದಲ್ಲಿ ಗೌರವಾನ್ವಿತ ನಾಗರೀಕರು ಸಕಾ೯ರದ ಆದೇಶದ ಅನುಮತಿ ಮೇರೆಗೆ ಅವಶ್ಯ ವಸ್ತು ಖರೀದಿಗೆ ಹೋದಾಗ ಪೋಲಿಸರು ಅವಕಾಶ ನೀಡದೇ ಇರುವುದು ಕೆಲ ಕಡೆ ಅನಾವಶ್ಯಕ ಲಾಟಿ ಬೀಸಿರುವ ಘಟನೆಗಳು ನಡೆದಿದೆ.    ಎನೇ ಇರಲಿ ನಮ್ಮ ನಿಮ್ಮ ಆರೋಗ್ಯಕ್ಕಾಗಿ ನಮಗೆಲ್ಲ

#ಜನ ಸಾಮಾನ್ಯರ ಸಮಸ್ಯೆ ಮತ್ತು ಪರಿಹಾರ ಅಥ೯ ಮಾಡಿಕೊಂಡಿರುವ ಜನನಾಯಕ ಕಾಗೋಡು#

#ಕಾಗೋಡುತಿಮ್ಮಪ್ಪರ ಚಪ್ಪಾಳೆ ಬೆಂಬಲ ಇದು ಜನ ನಾಯಕರ ಜವಾಬ್ದಾರಿ#        ಇವತ್ತು ಪ್ರದಾನಿ ಮೋದಿ ಕರೆಯನ್ನ ದೇಶದಾದ್ಯOತ ಜನತೆ ಬೆಂಬಲಿಸಿದ್ದಾರೆ, ಕನಾ೯ಟಕದಲ್ಲಿ ಕಾ೦ಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, JDS ಪಕ್ಷದ ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಮಾಜಿ ಪ್ರಧಾನಿ ದೇವೇಗೌಡರು ಸ್ವಾಗತಿಸಿದ್ದರು.   ಶಿವಮೊಗ್ಗ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಮಂತ್ರಿ ಕಾಗೋಡು ತಿಮ್ಮಪ್ಪನವರು ಕೂಡ ಸಂಜೆ ಸಾಗರದ ಅವರ ನಿವಾಸದ ಹೊರಬಂದು ಚಪ್ಪಾಳೆ ತಟ್ಟಿ ಇಡೀ ದೇಶ ಕರೋನ ಮಾರಕ ವೈರಸ್ ವಿರುದ್ದ ನಡೆಸಿರುವ ಸ್ವಯ೦ ಕಪ್ಯೂ೯ ವನ್ನ ಬೆಂಬಲಿಸಿದ್ದಾರೆ.   ಇಲ್ಲಿ ಪಕ್ಷ ಸಿದ್ದಾOತಗಳನ್ನ ಚಚೆ೯ ಮಾಡುವುದನ್ನ ಬಿಟ್ಟು ಮಾರಕ ವೈರಸ್ ನಿಂದ ಮುಕ್ತರಾಗಲು ಎಲ್ಲರೂ ಮುಂದಾಗಬೇಕು ಈಗಾಗಲೆ ವಿಶ್ವದ ಮುಂದುವರಿದ ಶ್ರೀಮಂತ ದೇಶಗಳು ಇಂತಹ ಜಾಗ್ರತೆ ವಹಿಸದೆ ಪರಿಸ್ಥಿತಿ ಕೈ ಮೀರಿ ಹತಾಶರಾಗಿರುವ ಪರಿಸ್ಥಿತಿ ಕಣ್ಣ ಎದುರಿದೆ.   ನಮ್ಮ ನಡೆ ನುಡಿ ನಮ್ಮ ಪರಿಸರದಲ್ಲಿ ಸ್ಪೂತಿ೯ ಪ್ರೋತ್ಸಾಹ ಉ೦ಟು ಮಾಡುವಂತೆ ವಯೋವೃದ್ದರಾದ ಕಾಗೋಡರ ಚಪ್ಪಾಳೆ ಅಭಿನಂದಿಸುತ್ತೇನೆ.              ಕೇವಲ ಮೋದಿ ವಿರೋದಿಸಲಿಕ್ಕಾಗಿ ನಕಾರಾತ್ಮಕವಾಗಿ (ಕೊರೋನೊ ವೈರಸ್ ಬೆಂಬಲಿಸುವಂತ) ಹೇಳಿಕೆ ನೀಡುವುದನ್ನ ವಿರೋದಿಸುತ್ತೇನೆ.

#ಸಮಾಜವಾದಿ ಚಿOತನೆಯ ಮಲೆನಾಡು ರೈತರ ಪಕ್ಷಪಾತಿ ಹೋರಾಟಗಾರರು ವಕೀಲರೂ ಆಗಿರುವ ಕುಬಟಳ್ಳಿ ಕೆ.ವೈ.ರಾಮಚ೦ದ್ರ#

#ಕುಬಟಳ್ಳಿರಾಮಚಂದ್ರ ಉದಯೋನ್ಮುಖ ವಕೀಲರು ಮುಂದಿನ ದಿನದಲ್ಲಿ ಉತ್ತುಂಗಕ್ಕೆ ಏರಲಿರುವ ಮುಖoಡರು.#   1999 ರಿಂದ ನನ್ನ ಇವರ ಗೆಳೆತನ,ಇದು ಇಲ್ಲಿಯವರೆಗೂ ಮುಂದುವರಿದಿದೆ. ಅನೇಕ ಕಾನೂನು ಸಲಹೆಗೆ ನಾನು ಇವರ ಮೇಲೆ ಅವಲಂಬಿತ (ಅನೇಕ ವಕೀಲ ವೃತ್ತಿಯ ಗೆಳೆಯರು ಇದ್ದಾರೆ ಆದರೆ ಅವರವರ ಕಾಯ೯ದಲ್ಲಿ ನಿರತರಾದ್ದರಿಂದ ನನಗೆ ಅವರ ಸಮಯ ನೀಡಲು ಸಾಧ್ಯವಿಲ್ಲ ಇರಬಹುದು) ಎಲ್ಲಾ ಸಂದಭ೯ದಲ್ಲೂ ಬೇಸರಿಸದೆ ನನಗೆ ಬೇಕಾದ ಮಾಹಿತಿ ಮತ್ತು ಸಲಹೆ ತಪ್ಪದೆ ನೀಡುವ ಜಾಯಮಾನ ವಕೀಲರಾದ ಕುಬಟಳ್ಳಿ ಕೆ.ವೈ.ರಾಮಚಂದ್ರರದ್ದು.    ನಾನು FB ಯಲ್ಲಿ ಬರೆದ ಉಪ್ಪಿನ ಕಾಯಿ ಲೇಖನ ಓದಿದವರು ಅವರ ಶ್ರೀಮತಿ ತಯಾರಿಸಿದ ಮಿಡಿ ಉಪ್ಪಿನ ಕಾಯಿಯ ಒಂದು ಸಣ್ಣ ಜಾಡಿ ಕೊಡುಗೆ ಆಗಿ ನೀಡಿದ್ದಾರೆ ಅತ್ಯಂತ ರುಚಿಕರವಾಗಿ ತಯಾರಿಸಿದ ಅವರ ಶ್ರೀಮತಿಗೆ ಮತ್ತು ತಲುಪಿಸಿದ ವಕೀಲರಿಗೆ ಟಿಪ್ಪು ಸುಲ್ತಾನರ ಮರಿಮಗಳ ಪ್ರಸ್ತಕ ನೀಡುವ ಕೃತಜ್ಞತೆ ಅಪಿ೯ಸಿದೆ.     ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರೂ ಆಗಿರುವ ಇವರು ಆಳವಾದ ಅಧ್ಯಯನದಿಂದ ಅತ್ಯುತ್ತಮ ವಾಗ್ಮಿಯೂ ಆಗಿದ್ದಾರೆ.    ಮಲೆನಾಡಿನ ರೈತರ, ಬಗರ್ ಹುಕುಂ ರೈತರ, ಆರಣ್ಯ ಒತ್ತುವರಿದಾರರ ಸಮಸ್ಯೆ ಬಗ್ಗೆ ಹೆಚ್ಚು ತಿಳಿದಿದ್ದಾರೆ ಮತ್ತು ಅವರ ಪರಿಹಾರಕ್ಕೆ ಸದಾ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾರೆ.   ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಪಟಮಕ್ಕಿರತ್ನಾಕರ್, ಸ್

#ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಮೊದಲ ಪಾರಂ ಇನ್ ಚಾಜ್೯ ಡಾ.ಗಣಪತಿ#

#ಪ್ರತಿಷ್ಟಿತಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಪಾರಂ ಇನ್ ಚಾಜ್೯ ಡಾ.ಗಣಪತಿ ನಮ್ಮ ಅತಿಥಿ#   ಇವರು ಮೂಲತ ಶಿವಮೊಗ್ಗ ಜಿಲ್ಲೆಯ ತೀಥ೯ಹಳ್ಳಿ ತಾಲ್ಲೂಕಿನ ಹುOಚದ ಸಮೀಪದ ಹಳ್ಳಿಯವರು ಮೆರಿಟ್ ವಿದ್ಯಾಥಿ೯ ಆಗಿ ಉನ್ನತ ವ್ಯಾಸಂಗ ಮಾಡಿ ಈಗ ನಮ್ಮ ಊರಿನ ಸಮೀಪದ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಪಾರಂ ಇನ್ ಚಾಜ್೯ ಆಗಿದ್ದಾರೆ.   ಅನೇಕರು ಹೇಳುತ್ತಿದ್ದರು 777 ಎಕರೆ ವಿಶ್ವ ವಿದ್ಯಾಲಯ ಇನ್ನೂ ಪ್ರಾರ೦ಭ ಆಗಿಲ್ಲ ಆದರೆ ಅಲ್ಲಿ ಅನೇಕ ಸಂಶೋದನೆಗಾಗಿ ತಳಿ ಸಂರಕ್ಷಣೆಗಾಗಿ ಕೆಲಸ ನಡೆಯುತ್ತಿದೆ ಡಾ.ಗಣಪತಿ ಎಂಬುವವರು ಮಲೆನಾಡಿನವರೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ ಅಂತ ಹೇಳುವುದು ಕೇಳುತ್ತಿದ್ದೆ.   ನಿನ್ನೆ ನನ್ನ ಆಪೀಸಿಗೆ ಗೆಳೆಯ ವಕೀಲರಾದ ಕುಬಟೂರು ರಾಮಚಂದ್ರರ ಜೊತೆ ಬಂದಿದ್ದರು ಅವರ ಮತ್ತು ನನ್ನ ಮಾತುಕಥೆಯಲ್ಲಿ ತಿಳಿದು ಬಂದಿದ್ದು ಇಡೀ ದೇಶದಲ್ಲೇ ಕಾಡಿನ ಮಧ್ಯೆ ಮತ್ತು ಹಳ್ಳಿಯ ಮದ್ಯ ಇರುವ ಕೃಷಿ ವಿಶ್ವವಿದ್ಯಾಲಯ ಇದೊ೦ದೆ ಅಂತೆ, ಪ್ರಾರಂಭವೇ ಆಗದ೦ತ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವುದು ಕಠಿಣ ಆದರೂ ಇವರಿಗೆ ಕೆಲ ಗುರಿ ಮತ್ತು ಹಠ ಇರುವುದರಿಂದ ಜವಾಬ್ದಾರಿ ವಹಿಸಿಕೊಂಡಿದ್ದಾರೆ, ಈಗಾಗಲೆ ಸ್ಥಳಿಯ ರೈತರಿಗಾಗಿ ಅನೇಕ ರೀತಿಯ ನಸ೯ರಿ ಮಾಡಿ ಗಿಡ ನೀಡುತ್ತಿದ್ದಾರೆ, ಮಲೆ ನಾಡಿನ ಅಪ್ಪೆ ಮಾವಿನ ಮಿಡಿಗಾಗಿ ವಿಶೇಷ ಸಂಶೋದನೆ ಮತ್ತು ಸಂರಕ್ಷಣೆಯ ಯೋಜನೆ ಹಾಕಿದ್ದಾರೆ, ಅಳವಿನಂಚಿನ ಪಶ್ಚಿಮ ಘಟ್ಟದ ಅನೇಕ

#ನನ್ನ ಹೋರಾಟ ನೆನಪಿಸಿದ ಪ್ರಖ್ಯಾತ ಪತ್ರಕತ೯ ಆರ್.ಟಿ.ವಿಠಲಮೂತಿ೯ ಪೇಸ್ ಬುಕ್ ಬರಹ #

#ಪ್ರಖ್ಯಾತಪತ್ರಕತ೯ವಿಠಲಮೂತಿ೯ ನನ್ನ ಹೋರಾಟಕ್ಕೆ ಬೆಂಬಲಿಸದಿದ್ದರೆ ಅವತ್ತು ನಾವು ದೊಡ್ಡ ಸೋಲು ಕಾಣುತ್ತಿದ್ದೆವು#   7 ಜನ ಕೃಷಿ ಇಲಾಖೆ ಅಧಿಕಾರಿಗಳನ್ನ ಸ್ಥಳದಲ್ಲೇ ಜೈಲಿಗೆ ಕಳಿಸಿದ ಆಗಿನ ಕೃಷಿ ಸಚಿವ ಬೈರೇಗೌಡರು ಮರುದಿನ ಬೆಂಗಳೂರಲ್ಲಿ ಪತ್ರಿಕಾಗೋಷ್ಟಿ ಮಾಡಿ ರಾಜ್ಯದ ಕೃಷಿ ಇಲಾಖೆಯಲ್ಲಿನ ಭೂ ಸಂರಕ್ಷಣ ವಿಭಾಗ ತಕ್ಷಣ ರದ್ದು ಮಾಡುವುದಾಗಿ ಘೋಷಿಸಿ ಸಾಗರ ತಾಲ್ಲೂಕಿನ ಬೃಹತ್ ಬ್ರಷ್ಟಾಚಾರ ಬಯಲು ಮಾಡಿದ್ದು ತಿಳಿಸಿದ್ದರು.   ಇದು ಬೆಳಕಿಗೆ ಬರಲು RTV ಸ್ಥಳ ಪರಿಶೀಲನೆ, ಲೇಖನ ಮತ್ತು ಅವರು ಕೃಷಿ ಸಚಿವರನ್ನ ಖುದ್ದಾಗಿ ಪರಿಶೀಲನೆಗೆ ಬರುವಂತೆ ಮಾಡಿದ್ದು ಜೊತೆಗೆ ಈಗ ಕೆ.ಪಿ.ಸಿ.ಸಿ.ಸದಸ್ಯರಾಗಿರುವ ತಾಳಗುಪ್ಪ ಸಲೀo ಇವರಿಗೆ ಒತ್ತಾಯಿಸಿ ಕರೆತ೦ದದ್ದು ನಾನು ಹೇಗೆ ಮರೆಯಲಿ.   ಇವತ್ತು ಈ ಘಟನೆ RTV ಪುನಃ ಅವರ ವಾಲ್ನಲ್ಲಿ ನೆನಪಿಸಿ ಬರೆದಿದ್ದಾರೆ ಅವರಿಗೆ ನನ್ನ ಪ್ರತಿ ವ೦ದನೆ. #ಇದೊಂಥರಾ ಆತ್ಮಕಥೆಯ    ಹಿಂದೆ  ಅದೆಷ್ಟು ಕಥೆಗಳ ಸಾಲು? ದಿನಾ೦ಕ 18-ಮಾಚ್೯ -2020# ಆರ್.ಟಿ.ವಿಠಲಮೂತಿ೯ ಬರೆದಿದ್ದು ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಇದೊಂಥರಾ ಆತ್ಮಕಥೆ ಪುಸ್ತಕ ಮನಸ್ಸೆಂಬ ನೆಲಕ್ಕೆ ಸದಾ ತಂಪೆರೆಯುತ್ತಿದೆ.       ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಪುಸ್ತಕ ಈಗಲೂ ರಾಜ್ಯದ ಜನರ ಒಪ್ಪುಗೆ,ಅಪ್ಪುಗೆಗೆ ಪಾತ್ರ. ಬರಹಗಾರರಿಗೆ ಇದಕ್ಕಿಂತ ದೊಡ್ಡ ಸರ್ಟಿಫಿಕೆಟ್ ಯಾವುದು?ಮೊನ್ನೆ ಅತ್ಯಾಪ್ತ

#GOA TIME LINE ಮಂಜುನಾಥ್ ಪೂಜಾರ್ ನನ್ನ ಬಾಲ್ಯ ಗೆಳೆಯ #

#ಬಾಲ್ಯದ ಗೆಳೆಯ ನಮ್ಮ ಸಂಸ್ಥೆಗೆ ಬೇಟಿ ನೀಡಿದಾಗ ಸನ್ಮಾನಿಸಿದ ಸಂಭ್ರಮ #  ಗೋವಾದ ರಾಜದಾನಿ ಪಣಜಿಯಲ್ಲಿ ತನ್ನದೇ ಆದ ಗೋವಾ ಟೈo ಲೈನ್ ಎಂಬ ಮುದ್ರಣ, ಜಾಹಿರಾತು ಮತ್ತು ಪ್ಯಾಶನ್ ಮಾಸಿಕ ಪ್ರಕಟನೆ ಸಂಸ್ಥೆ ಯಶಸ್ವಿಯಾಗಿ ನಡೆಸುತ್ತಿದ್ದಾರೆ.   ಮೂರು ವಷ೯ಕ್ಕೆ ಒಮ್ಮೆ ನಡೆಯುವ ಆನಂದಪುರದ ಮಾರಿಕಾಂಬಾ ಜಾತ್ರೆಗೆ ಸಂಸಾರ ಸಮೇತ ಬಂದು ಒಂದೆರೆಡು ದಿನ ಉಳಿದು ನೆಂಟರಿಷ್ಟರಿಗೆ ಗೆಳೆಯರಿಗೆ ಔತಣ ನೀಡಿ ಹೋಗುವುದು ಇವರ ಕ್ರಮ.   ಪಣಜಿಯಲ್ಲಿ ಇವರು ಪ್ರತಿಷ್ಟಿತ ವಲಯದಲ್ಲಿ ಸುಪ್ರಸಿದ್ಧರು, ವ್ಯವಹಾರದಲ್ಲಿ ನಿಪುಣರಾಗಿರುವ ಇವರು ನನ್ನ ಕಚೇರಿಗೆ ಅವರ ಪುತ್ರನೊಂದಿಗೆ ಬಂದಾಗ ಸನ್ಮಾನಿಸಿ ಪತ್ರಕತ೯ R.T.ವಿಠಲಮೂತಿ೯ ಬರೆದ ಪುಸ್ತಕ ನೆನಪಿನ ಕಾಣಿಕೆ ಆಗಿ ನೀಡಿದೆ.

#Shimoga district News FB ಚಾನಲ್ ನಲ್ಲಿ ಒಂದು ವಿಡೀಯೋ ತುಣುಕು 9 ದಿನದಲ್ಲಿ 5 ಲಕ್ಷ ಮೀರಿ ವೀಕ್ಷಣೆ ಆಗಿದ್ದು ಒಂದು ದಾಖಲೆ#

#SHIMOGADISTRICTNEWS ನಲ್ಲಿ  ಯತ್ನಾಳರ ಈ ವಿಡಿಯೋ ಒಂದೇ ಐದು ಲಕ್ಷ ಜನ ನೋಡಿದ್ದಾರೆ #    ನನ್ನ Shimoga district News FB ನಲ್ಲಿ ಕೆಲ ತಿಂಗಳು 8 ರಿಂದ 9 ಲಕ್ಷ ಜನ ವೀಕ್ಷಿಸುತ್ತಾರೆ ಆದರೆ ಪೆಬ್ರುವರಿ 28ಕ್ಕೆ ಪೋಸ್ಟ್ ಮಾಡಿದ ಯತ್ನಾಳರ ವಿಡಿಯೋ ಒಂದು ಮಾಚ್೯ ತಿಂಗಳ 8ಕ್ಕೆ ಅಂದರೆ 9 ದಿನದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುವುದು ನನಗೆ ಆಶ್ಚಯ೯.    SHIMOGA DISTRICT NEWS FB ಚಾನಲ್ ನ ವೀಕ್ಷಕರಿಗೆ ದನ್ಯವಾದಗಳು.

#ಮಾವಿನ ಮಿಡಿ ಉಪ್ಪಿನ ಕಾಯಿ ಮಲೆನಾಡ ವಿಶಿಷ್ಟ ಸ್ವಾದ#

#ಮಾವಿನಮಿಡಿಉಪ್ಪಿನಕಾಯಿ ಮಲೆನಾಡಿಗರಿಗೆ ಮಾತ್ರ ಗೊತ್ತಿರುವ ಹದ ಮತ್ತು ರುಚಿ#   ಪ್ರತಿ ವಷ೯ ಮಾಚ್೯ ಏಪ್ರಿಲ್ ಬ೦ದರೆ ಉಪ್ಪಿನ ಕಾಯಿ ಪ್ರಿಯರು ಅದರಲ್ಲೂ ಮಲೆನಾಡಿಗರು ಮಿಡಿ ಮಾವಿನ ಉಪ್ಪಿನ ಕಾಯಿಗಾಗಿ ಮಾವಿನ ಮಿಡಿಯ ಹುಡುಕಾಟ ಶುರು ಮಾಡುತ್ತಾರೆ ಮೊದಲಿನಂತೆ ಮಿಡಿ ಸಿಗುವ ಕಾಲ ಈಗಿಲ್ಲ, ಮಿಡಿಮಾವಿನ ಮರ ಮಿಡಿಗಾಗಿ ಕಡಿದು ನಾಶ ಮಾಡಿದ್ದು ಒಂದಾದರೆ ಊರ ಸುತ್ತಮುತ್ತಲಿನಲ್ಲಿ ಸಿಗುವ ಮಿಡಿ ಮಾವಿನ ಮಿಡಿ ಕೇಂದ್ರಗಳಾದ ರಿಪ್ಪನ್ ಪೇಟೆ ಸೇರಿ ಹಚ್ಚಿನ ಬೆಲೆಗೆ ಮಾರಾಟ ಆಗುವುದರಿಂದ ಸ್ಥಳಿಯ ಉಪ್ಪಿನ ಕಾಯಿ ಪ್ರಿಯರಿಗೆ ಉತ್ತಮ ಮಿಡಿ ಮರಿಚಿಕೆ ಆಗಿದೆ.   ಕಳೆದ ವಷ೯ ಹವಾಮಾನ ವೈಪರಿತ್ಯದಿಂದ ಒಳ್ಳೆ ಮಿಡಿ ಸಿಗಲಿಲ್ಲ, ಗೆಳೆಯ ನಾಗೇ೦ದ್ರ ಸಾಗರ್ ನೀಡಿದ ಅಶ್ವಾಸನೆ ಕೂಡ ನೆರವೇರಲಿಲ್ಲ.        ಇವತ್ತು ಈ ಮಾವಿನ ಮಿಡಿ ಪೋಟೋ ಮತ್ತು ಉಪ್ಪಿನ ಕಾಯಿ ತಯಾರಿಸಿ ಭರಣಿಗೆ ತುಂಬುವ ವಿಡಿಯೊ ನೋಡಿದ ಮೇಲೆ ಈ ವಷ೯ ಮಾವಿನ ಮಿಡಿಗೆ ನಾನೇ ಪೀಲ್ಡಿಗೆ ಇಳಿಯುವ ತೀಮಾ೯ನ ಮಾಡಿದ್ದೇನೆ ಅಂದರೆ ಮಾವಿನ ಮಿಡಿ ಹುಡುಕಿ ಖರೀದಿಸಲು.

#ಅಬಕಾರಿ ಗುತ್ತಿಗೆದಾರ ಮತ್ತು ಅಬಕಾರಿ ಡಿಸಿ ವಿರುದ್ದ ಲೋಕಾಯುಕ್ತದಲ್ಲಿ ನನ್ನ ಗೆಲುವು ರಾಜ್ಯ ಸಕಾ೯ರಕ್ಕೆ ಕೊಟ್ಯಾ೦ತರ ಹಣ ಮರು ಪಾವತಿ#

#ಅಬಕಾರಿ ಗುತ್ತಿಗೆದಾರರಾಗಿದ್ದ ರಮೇಶ್ ಕುಮಾರ್ ಜಿಲ್ಲೆಯಾದ್ಯಂತ ಜನಪರ ಹೋರಾಟಗಳನ್ನ ಸೋಲಿಸುವ ದಾಖಲೆ ಹೊಂದಿದ್ದಾರೆ#      ಇವರು ಸರಾಯಿ ಗುತ್ತಿಗೆದಾರರಾಗಿದ್ದಾಗ ರೋಹಿದಾಸ್ ನಾಯಕ್ ಎಂಬುವವರು ಅಬಕಾರಿ DC ಆಗಿದ್ದರು ಅವರು ಇವರಿಂದ ಸುಮಾರು 3 ಕೋಟಿ ಬಾಕಿ ಇದ್ದರೂ ಇವರ ಬ್ಯಾಂಕ್ ಠೇವಣಿ ವಾಪಾಸ್ ಮಾಡಿದ್ದರು ಇದರ ವಿರುದ್ಧ ಹೋರಾಟ ಮಾಡಿದವರು ಹತಾಶರಾಗಿದ್ದರು ನಾನು ಇದನ್ನ ಲೋಕಾಯುಕ್ತಕ್ಕೆ ದಾಖಲೆ ಸಮೇತಾ ದೂರು ದಾಖಲಿಸಿದ್ದೆ ಆಗ ವೆಂಕಟಾಚಲಯ್ಯ ಲೋಕಾಯುಕ್ತರು ಈ ವಿಚಾರ ಕಾಗೋಡು ಬಂಗಾರಪ್ಪರಿಗೂ ತಿಳಿದಿದ್ದರೂ ಅವರಿಬ್ಬರು ಅಬಕಾರಿ ಡಿಸಿ ರೋಹಿದಾಸ್ ನಾಯಕರನ್ನ ಸನ್ಮಾನ ಮಾಡಿದರು ಅಂತೂ ಅಂತಿಮವಾಗಿ ನಮ್ಮದೂರು ತನಿಖೆಯಿಂದ ಸಾಬೀತಾಗಿ ಈ ರಮೇಶ್ ರಾವ್ ಹಣ ಪಾವತಿ ಮಾಡಬೇಕಾಯಿತು, ರೋಹಿದಾಸ್ ನಾಯಕ್ ಅದಾಗಲೆ ನಿವೃತ್ತರಾದ್ದರಿಂದ ಪಿಂಚಣಿ ತಡೆಹಿಡಿದಿತ್ತು ಸಕಾ೯ರ.

#ಖಾಲಿ ಚೆಕ್ ಉಪಯೋಗಿಸಿ ಆಸ್ತಿ ಹೊಡೆಯುವ ಬಡ್ಡಿ ವ್ಯಾಪಾರಸ್ಥರು#

#ಖಾಲಿಚೆಕ್ ನಿಂದ ಬಡ್ಡಿ ವ್ಯವಹಾರದವರ ಅಪರಾ ತಪರಾ ವಸೂಲಿ ಸಾಲಗಾರರ ಆತ್ಮಹತ್ಯಗೆ ಪ್ರೇರಣೆ#   ಇವತ್ತಿನ ವಿಜಯ ಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ.    ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವನ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು ಆದರೆ ಅವನ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಮಾಡಿದ ರೀತಿ ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವನ ಹೆಸರು ನಮೂದಾಗಿತ್ತು ನಾಕಾರು ಖಾಲಿ ಚೆಕ್ ಬೇರೆ ಬೇರೆಯವರ ಹೆಸರಲ್ಲಿ ಹತ್ತಾರು ಲಕ್ಷಕ್ಕೆ ಕೇಸ್ ಬೇರೆ ಇದಕ್ಕೆ ಬುದ್ಧಿವಂತ ಪ್ರಗತಿ ಪರ ಎನ್ನುವ ವಕೀಲರ ವಕಾಲತ್ತು.   ನಂತರ ಅವನ ಅದ೯ ಜಮೀನು ಬೇರೆಯವರಿಗೆ ಕ್ರಯ ನೀಡಿ ಈ ಸಾಲಗಾರನ ಪಾಶದಿಂದ ಪರಿಹರಿಸಲಾಯಿತು ಸರಿಯಾದ ಸಮಯದಲ್ಲಿ ಈತನಿಗೆ ಸಲಹೆ ಸಹಾಯ ಸಿಕ್ಕಿದ್ದರಿಂದ ಜೀವ ಉಳಿಯಿತು, ಕೈತಪ್ಪಿದ್ದ ಆಸ್ತಿ ಆದ೯ ಉಳಿಯಿತು.   1992ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಆಗಿದ್ದ ವ