Skip to main content

#ಖಾಲಿ ಚೆಕ್ ಉಪಯೋಗಿಸಿ ಆಸ್ತಿ ಹೊಡೆಯುವ ಬಡ್ಡಿ ವ್ಯಾಪಾರಸ್ಥರು#

#ಖಾಲಿಚೆಕ್ ನಿಂದ ಬಡ್ಡಿ ವ್ಯವಹಾರದವರ ಅಪರಾ ತಪರಾ ವಸೂಲಿ ಸಾಲಗಾರರ ಆತ್ಮಹತ್ಯಗೆ ಪ್ರೇರಣೆ#
  ಇವತ್ತಿನ ವಿಜಯ ಕನಾ೯ಟಕದ ನಮ್ಮ ಶಿವಮೊಗ್ಗ ಪುರವಣಿಯಲ್ಲಿ ತೀಥ೯ಹಳ್ಳಿಯ ರಾಘವೇoದ್ರ ಮೇಗರವಳ್ಳಿ "ಖಾಲಿ ಚೆಕ್ ನೀಡಿ ಕಂಗಾಲಾದ ಸಾಲಗಾರ" ಎಂಬ ಅತ್ಯುತ್ತಮ ಲೇಖನ ಪ್ರಕಟಿಸಿದ್ದಾರೆ ಜೊತೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಅಭಿಪ್ರಾಯ ಬಡ್ಡಿ ವ್ಯವಹಾರಸ್ಥರು ಕಿರುಕುಳ ನೀಡಿದರೆ ಸಮೀಪ ಠಾಣೆಗೆ ದೂರು ನೀಡಿದರೆ ತಕ್ಷಣ ಕಾನೂನು ಕ್ರಮ ಜರುಗಿಸುವ ಅಭಯ ಬಾಕ್ಸ್ ವರದಿ ಆಗಿದೆ.
   ದಿನ ಬಡ್ಡಿ, ಮೀಟರ್ ಬಡ್ಡಿ ಮಾಫಿಯಾ ಎಲ್ಲಾ ಊರಲ್ಲೂ ಇದೆ ಮೊನ್ನೆ ಮೊನ್ನೆ ಗೆಳೆಯನೊಬ್ಬ ತಾನು ವಿಷ ಕುಡಿಯುವ ಸಂದಭ೯ ಬಂದಿದೆ ಅಂದಾಗ ಅವನ ಕಷ್ಟ ಪರಿಹಾರಕ್ಕೆ ಮಾಗ೯ ತೋರಿಸಿದೆವು ಆದರೆ ಅವನ ರಬ್ಬರ್ ತೋಟ ಖರೀದಿ ಅಗ್ರೀಮೆ೦ಟ್ ಮಾಡಿದ ರೀತಿ ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಜಮೀನು ಪಹಣಿಯಲ್ಲಿ ಸಾಲ ಕೊಟ್ಟವನ ಹೆಸರು ನಮೂದಾಗಿತ್ತು ನಾಕಾರು ಖಾಲಿ ಚೆಕ್ ಬೇರೆ ಬೇರೆಯವರ ಹೆಸರಲ್ಲಿ ಹತ್ತಾರು ಲಕ್ಷಕ್ಕೆ ಕೇಸ್ ಬೇರೆ ಇದಕ್ಕೆ ಬುದ್ಧಿವಂತ ಪ್ರಗತಿ ಪರ ಎನ್ನುವ ವಕೀಲರ ವಕಾಲತ್ತು.
  ನಂತರ ಅವನ ಅದ೯ ಜಮೀನು ಬೇರೆಯವರಿಗೆ ಕ್ರಯ ನೀಡಿ ಈ ಸಾಲಗಾರನ ಪಾಶದಿಂದ ಪರಿಹರಿಸಲಾಯಿತು ಸರಿಯಾದ ಸಮಯದಲ್ಲಿ ಈತನಿಗೆ ಸಲಹೆ ಸಹಾಯ ಸಿಕ್ಕಿದ್ದರಿಂದ ಜೀವ ಉಳಿಯಿತು, ಕೈತಪ್ಪಿದ್ದ ಆಸ್ತಿ ಆದ೯ ಉಳಿಯಿತು.
  1992ರಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿ ಆಗಿದ್ದ ವಿಜಯಕುಮಾರ್ ಗ್ರಾಮಾಂತರ ಪ್ರದೇಶದಲ್ಲಿ ಸಾವ೯ಜನಿಕರಿಗೆ ಬಸ್ ಸೇವೆ ಒದಗಿಸಲು ಗ್ರಾಮಾಂತರ ಸಾರಿಗೆ ಎಂಬ ಯೋಜನೆ ಜಾರಿ ತಂದಿದ್ದರು ಆಯಾ ತಾಲ್ಲೂಕಿನಲ್ಲಿ ಬಸ್ ಸಂಪಕ೯ ಇಲ್ಲದ ಮಾಗ೯ ಗುರುತಿಸಿ ಆಸಕ್ತರಿಗೆ ಪಮಿ೯ಟ್ ಸರಳವಾಗಿ ಮಂಜೂರು ಮಾಡುತ್ತಿದ್ದರು ಹೊಸ ನಗರ ತಾಲ್ಲೂಕಿನ ಬೆಳ್ಳೂರು - ರಿಪ್ಪನ್ ಪೇಟೆ -ಆನಂದಪುರ- ಸಾಗರ ಮಾಗ೯ದ ಪಮಿ೯ಟ್ ನಾನು ಪಡೆದಿದ್ದೆ.
  ಈ ಮಾಗ೯ದಲ್ಲಿ ಪಾಲುದಾರನೊವ೯ನ ಜೊತೆ ಮಾಡಿ ಪ್ರಶಾಂತ್ ಎಂಬ ಬಸ್ ಬಿಟ್ಟಿದ್ದೆ ಆದರೆ ಅನುಭವ ಇರುವ ಇನ್ನೊವ೯ನನ್ನ ಪಾಲುದಾರನಾಗಲು ವಿನಂತಿಸಿದೆವು ಆತಿ ಚಾಲು ಆದ ಆತ ಬಂಡವಾಳ ಇಲ್ಲದೆ ಪಾಲುದಾರನಾಗಿ ಸಹಾಯ ನೀಡಲು ಮುಂದೆ ಬಂದ ನಾವೊ ಅನನಭವಿಗಳು ಹಿಂದೂ ಮುಂದು ಯೋಚಿಸದೆ ಸೇರಿಸಿಕೊಂಡೆವು ನಂತರ ಆತನ ಸಂಬಂದಿಗಳೆ ನೌಕರರು ಹೆಚ್ಚಿನ ದಿನಂಪ್ರತಿ ಲಾಭ ಆತ ಮಾಡುತ್ತಿದ್ದ ವಾಷಿ೯ಕ ಲೆಕಾಚಾರದಲ್ಲೂ ಅವನಿಗೆ ಸರಿ ಪಾಲು ನೀಡಿದೆವು ನಂತರ ನಮಗೆ ಅವನ ಕಪಿ ಮುಷ್ಟಿಯಿ೦ದ ಹೊರಬರಲು ಬಸ್ ಮಾರಾಟ ಮಾಡಿದೆವು ಪ್ರತಿ ದಿನ ಲೈನ್ ಬಾಡಿಗೆ 3 ವಷ೯ ಆತನೆ ಪಡೆದ ನಮಗೆ ಕೊಡಲಿಲ್ಲ ನಮಗೆ ಬೇರೆ ಅಕ್ಕಿ ಗಿರಣಿ, ತಂಪು ಪಾನಿಯದ ಉದ್ದಿಮೆಯಲ್ಲಿ ಲಾಭ ಇದ್ದಿದ್ದರಿಂದ ಈ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ ಆಗಲೇ ಆತ ನಮ್ಮ ಗಮನಕ್ಕೆ ತರದೆ ನನ್ನ ಸಹೋದರನ  4 ಖಾಲಿ ಚೆಕ್ ಯಾವಾಗಲೋ ಟೈರ್ ತರಲು ಅಂತ ಪಡೆದಿದ್ದು ಅದನ್ನ 50 ಸಾವಿರ ಅಂತ ಬರೆದು ಬೌನ್ಸ್ ಮಾಡಿಸಿ ಕೇಸು ಹಾಕಿಸಿ ವಸೂಲಿಯು ಮಾಡಿಸಿಬಿಟ್ಟ, ಬಂಡವಾಳ ಇಲ್ಲದೆ ನಮ್ಮಿ೦ದ ಲಾಭವೂ ತಿ೦ದು, ಅವನ ಇಡೀ ಕುಟುಂಬ ಉದ್ಯೋಗವು ಪಡೆದು, 3 ವಷ೯ ಲೈನ್ ಬಾಡಿಗೆ ನನಗೆ ಬರಬೇಕಾದದ್ದು ಮೋಸ ಮಾಡಿ ಚೆಕ್ ಕೇಸ್ ಹಾಕಿ 50 ಸಾವಿರ ಪೀಕಿಸಿದ ಅವನ ಬುದ್ದಿವಂತಿಗೆ  ಮೋಸ ಎನ್ನುವುದಾದರೂ ಹೇಗೆ ಅವತ್ತೇ ತೀಮಾ೯ನ ಮಾಡಿದೆ ಖಾಲಿ ಚೆಕ್ ಕೊಡಬಾರದೆಂದು.
  ಆದರೆ ನನ್ನ ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ಕಟ್ಟುವ ಕಾಮಗಾರಿ ಕುಲಬಾಂದವನೊಬ್ಬನಿಗೆ ನೀಡಿದ್ದೆ ಆತ 75 ಸಾವಿರ ರೂಪಾಯಿ ಚೆಕ್ ಬೌನ್ಸ್ ಮಾಡಿ ನನ್ನ ಜೈಲಿಗೆ ಕಳಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಈತನ ಮಗಳು ಹೃದಯ ಸಂಬಂದಿ ತೊ೦ದರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸೇರಿದ್ದಾಗ ಹೋಗಿ ಹತ್ತು ಸಾವಿರ ಹಣ ಸಹಾಯ ಮಾಡಿದ್ದೆ ಅವಳು ವಕೀಲಿಕೆ ಓದಿ ನನಗೆ ತೊಂದರೆ ನೀಡಲು ಮುಂದೆ ಬಂದಿದ್ದಲು ಹೀಗೆ ನಾನೇ ಎರಡು ಬಾರಿ ಚೆಕ್ ಲೆಖ್ಖಾಚಾರದಲ್ಲಿ ಮುಗ್ಗರಿಸಿದ್ದೆ.
  ಮೊಸಗಾರರಿಗೆ ಇನ್ನೊಬ್ಬರ ಹಣ ಆಸ್ತಿ ಹೊಡೆದುಕೊಳ್ಳಲು ಚೆಕ್ ಬೌನ್ಸ್ ಕೇಸುಗಳ ದುರುಪಯೋಗವೇ ಈಗ ಹೆಚ್ಚು ಆದರೆ ಈಗೆಲ್ಲ ಇಂತಹ ತೊಂದರೆ ಆದವರಿಗೆ ಫೋಲಿಸರಿOದ ರಕ್ಷಣೆ ಸಿಗುವುದು ದೊಡ್ಡ ಉಪಕಾರ ಮತ್ತು ಪರಿಹಾರ.
  ಈ ರೀತಿ ತೊಂದರೆಗೆ ಒಳಪಡುವವರು ನಿಭ೯ಯದಿ೦ದ ಪೋಲಿಸರಿಗೆ ದೂರು ನೀಡಲು ಮುಂದಾಗಬೇಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...