Skip to main content

Posts

Showing posts from June, 2021

ಭಾಗ - 44, ಆನಂದಪುರಂ ಇತಿಹಾಸ, ಕೆಳದಿ ಅರಸ ವೀರಭದ್ರ ನಾಯಕರಿಂದ 1632 ರಲ್ಲಿ ನಿರ್ಮಾಣಗೊಂಡ ಆನಂದಪುರಂ ಜಾಮೀಯ ಮಸೀದಿ, ಟಿಪ್ಪು ಸುಲ್ತಾನರು ಪ್ರಾರ್ಥನೆ ಮಾಡಿದ ಮಸೀದಿ, ಮೈಸೂರು ಅರಸರು ಭೂದಾನ ನೀಡಿದ ದಾಖಲೆಗಳು ಇರುವ ಆನಂದಪುರಂ ಜಾಮೀಯ ಮಸೀದಿಗೆ 2032 ರಲ್ಲಿ ನಾಲ್ಕುನೂರನೇ ವಾರ್ಷಿಕೋತ್ಸವ.

#ಭಾಗ_44. #ಆನಂದಪುರಂ_ಇತಿಹಾಸ. #ಆನಂದಪುರಂ_ಜಾಮಿಯಾ_ಮಸೀದಿ_2032ಕ್ಕೆ_400_ವರ್ಷ_ಆಗಲಿದೆ. #ಕೆಳದಿ_ಅರಸರು_ನಿರ್ಮಿಸಿ_12_ವರಹ_ಭೂಮಿ_ದಾನವೂ_ನೀಡಿದ್ದರು. #ಟಿಪ್ಪೂಸುಲ್ತಾನರು_ಈ_ಮಸೀದಿಯಲ್ಲಿ_ಪ್ರಾರ್ಥನೆ_ಮಾಡಿದ್ದರು. #ಕೆಳದಿ_ಅರಸರ_ದಾರ್ಮಿಕ_ಸೌಹಾದ೯ತೆಗೆ_ಪ್ರತೀಕ_ಆನಂದಪುರಂ_ಮಸೀದಿ. #ಮೈಸೂರು_ರಾಜರು_1872ರಲ್ಲಿ_ಮಸೀದಿಗೆ_ಬೇಟಿನೀಡಿದ_ಸಂದರ್ಭದಲ್ಲಿ_2ಎಕರೆ7ಗುಂಟೆ_ತರಿಜಮೀನು_ದಾನನೀಡಿದ್ದರು.   ಆನಂದಪುರಂ ಇತಿಹಾಸ ಸುತ್ತ ಮುತ್ತಲಿನ ಬೇರಾವುದೇ ಊರಿಗಿಂತ ಹೆಚ್ಚು ಇತಿಹಾಸದ ಪುಟದಲ್ಲಿ ದಾಖಲಾಗಿದೆ, ಹೆಚ್ಚಿನ ಅಧ್ಯಯನ ಮತ್ತು ಸ೦ಶೋದನೆಯಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ದೊರೆಯುವುದು ಖಚಿತ.   ಆನಂದಪುರಂ ಜಾಮಿಯಾ ಮಸೀದಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಮೊಗ್ಗದಿಂದ ಸಾಗರ ಕಡೆ ಹೋಗುವಾಗ ಎಡ ಭಾಗದಲ್ಲಿ ಬೃಹತ್ ಜೋಡಿ ಮಿನಾರ್ ಗಳಿಂದ ನವೀಕರಣಗೊಂಡು ನಮಾಜು ನಡೆಯುತ್ತಿದೆ ಇದರ ಎದುರಿಗೇ ವಿದ್ಯಾ ಮಂತ್ರಿ ಆಗಿದ್ದ ಸ್ಥಳಿಯ ಕೊಡುಗೈ ದಾನಿ ಜಮೀನ್ದಾರರು, ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ನಿರ್ಮಿಸಿದ ದಾನಿ ರಾಮಕೃಷ್ಣ ಅಯ್ಯಂಗಾರ್ ಪುತ್ರ ಬದರಿನಾರಾಯಣ ಅಯ್ಯಂಗಾರ್ ಪ್ರಾಥಮಿಕ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆ ಇದೆ.   ಆನಂದಪುರಂ ಜಾಮಿಯಾ ಮಸೀದಿ ಉಲ್ಲೇಖ ಕೆಳದಿ ಶಾಸನದಲ್ಲಿರುವಂತೆ 1632 ರಲ್ಲಿ ಕೆಳದಿ ರಾಜ ವೀರಭದ್ರನಾಯಕರು (ಆಳ್ವಿಕೆ 16

ಭಾಗ - 43, ಆನಂದಪುರಂ ಇತಿಹಾಸ, ನಾರ್ಥ ಈಸ್ಟ್ ನ ಮಿಜೋರಾಂ ನಲ್ಲಿ ಹುಟ್ಟಿ ಕರ್ನಾಟಕದ ಕೇಡರ್ ಆಗಿ ಪ್ರಸಿದ್ದ ರಾಗಿದ್ದ ಹೆಚ್.ಟಿ.ಸಾಂಗ್ಲಿಯಾನರ ಆನಂದಪುರಂ ನಿಕಟ ಸಂಬಂದಗಳು

#ಭಾಗ_43. #ಆನಂದಪುರಂ_ಇತಿಹಾಸ. #ನಾಥ೯_ಈಸ್ಟ್_ಮಿಜೋರಾಂ_ರಾಜ್ಯದ_ಸಾಂಗ್ಲಿಯಾನರ_ಆನಂದಪುರಂ_ಸಂಬಂದ  #ಸಾಗರದಲ್ಲಿ_ಎಎಸ್ಪಿ_ಆಗಿ_ಸೇವೆಗೆ_ನಂತರ_ಶಿವಮೊಗ್ಗ_ಎಸ್ಪಿ. #ಆನಂದಪುರಂನ_ಎಸ್ಸಾರ್ಕೆ_ಮಾಸ್ತರ_ಗೆಳೆತನ. #ಆನಂದಪುರಂನಲ್ಲಿ_ನಡೆಯುತ್ತಿದ್ದ_ಶಾಲಾ_ಪ್ರಭಾತ್_ಪೇರಿಯಲ್ಲಿ_ಭಾಗವಹಿಸಿ_ಅವರು_ವಿದ್ಯಾರ್ಥಿಗಳಿಗೆ_ಹುರಿದುಂಬಿಸುತ್ತಿದ್ದರು.   ಹೆಚ್.ಟಿ.ಸಾಂಗ್ಲಿಯಾನ ಅಂದರೆ ಎಲ್ಲರಿಗೂ ನೆನಪಾಗುವುದು ಕನ್ನಡ ಚಲನ ಚಿತ್ರರಂಗದಲ್ಲಿ ಇವರ ಹೆಸರಲ್ಲಿ ಬಂದ ಮೂರು ಹಿಟ್ ಸಿನಿಮಾಗಳು ಆದರೆ ಆನಂದಪುರಂ ಜನತೆಗೆ ಸಾಂಗ್ಲಿಯಾನರ ಪರಿಚಯವೇ ಬೇರೆ ಕೋನದಲ್ಲಿದೆ.  1 ಜುಲ್ಯೆ 1943ರಲ್ಲಿ ಈಗಿನ ಮಿಜೋರಾಂ ರಾಜಧಾನಿ ಅಜ್ವಾಲ್ ನಲ್ಲಿ ಜನಿಸಿ ಮೇಘಾಲಯದ ಸೆಂಟ್ ಎಡ್ಮಂಡ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಐಪಿಎಸ್ ಉತ್ತೀರ್ಣರಾಗಿ 1968 ರಲ್ಲಿ ಕರ್ನಾಟಕ ಕೇಡರ್ ಆಗಿ ರಾಜ್ಯದ ಕರಾವಳಿಯ ವಿವಿದ ಠಾಣೆಗಳಲ್ಲಿ ಪ್ರೊಬೆಷನರಿ ಹುದ್ದೆ ನಿರ್ವಹಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಡಿವೈಎಸ್ಪಿ (ASP) ಪ್ರಥಮ ಹುದ್ದೆ ಸ್ವೀಕರಿಸಿದ್ದು ಇತಿಹಾಸ, ಆಗ ಸಾಗರ ಡಿವೈಎಸ್ಪಿ ವ್ಯಾಪ್ತಿ ಶಿವಮೊಗ್ಗದ ಅರ್ಧ ಜಿಲ್ಲೆ ಅಂದರೆ ಶಿಕಾರಿಪುರ, ಸೊರಬ, ಸಾಗರ, ಹೊಸನಗರ ಮತ್ತು ತೀಥ೯ಹಳ್ಳಿ ತಾಲ್ಲೂಕ್ ಸೇರಿತ್ತು.  1978ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಗೆ ಸ್ಪರ್ದಿಸಿದಾಗ ಅಲ್ಲಿನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಸ

ಭಾಗ -42, ಆನಂದಪುರಂ ಇತಿಹಾಸ, ಆನಂದಪುರ೦ನ ಒಂದು ಕಾಲದಲ್ಲಿ ಸುಮಾರು ನಾಲ್ಕು ದಶಕ ನಡೆದ ಪ್ರಖ್ಯಾತ ಪ್ರಸಿದ್ದ ಹೋಟೆಲ್ ಕೋಮಲಾ ವಿಲಾಸ್

#ಭಾಗ_42. #ಆನಂದಪುರಂ_ಇತಿಹಾಸ #ಆ_ಕಾಲದ_ಸುಪ್ರಸಿದ್ಧ_ಹೋಟೆಲ್_ಕೋಮಲವಿಲಾಸ್  #ಜಯವೀರನಾಯಕ್_ತಂದೆ_ಆನಂದನಾಯಕರಿಂದ_ಪ್ರಾರಂಭ. #ಜಯವೀರನಾಯಕ್_ಮಾವ_ರಾಮಕಿಣಿಯಿಂದ_ಉತ್ತುಂಗಕ್ಕೆ. #ಶುಚಿ_ರುಚಿಯ_ಅದುನಿಕ_ರೆಸ್ಟೋರೆಂಟ್.    ಆನಂದನಾಯಕರು ಆನಂದಪುರಂಗೆ ಬಂದು ಅಯ್ಯಂಗಾರ್ ಕುಟುಂಬದ ಬಸ್ ಸ್ಟ್ಯಾಂಡ್ ಎದುರಿನ ಜಾಗದಲ್ಲಿ ವೆಜ್ ರೆಸ್ಟೋರೆಂಟ್ ಮಾಡಲು ವೆಂಕಟಾಚಲಯ್ಯಂಗಾರರಲ್ಲಿ ವಿನಂತಿಸಿದಾಗ ಅವರು ಅಭಿವೃದ್ದಿ ಹೊಂದಲಿರುವ ಆನಂದಪುರಂಗೆ ಹೋಟೆಲ್ ಅವಶ್ಯವಿರುವುದು ಅರಿತಿರುತ್ತಾರೆ.   ಆಗಲೇ ಅವರ ತಾಯಿ ಸ್ಮರಣಾರ್ಥ ನಿರ್ಮಿಸಿದ ಕನಕಮ್ಮಾಳ್ ಆಸ್ಪತ್ರೆಗೆ ಬರುವವರಿಗಾಗಿ ಒಂದು ಸುಸಜ್ಜಿತ ರೆಸ್ಟೋರಂಟ್ ಕೊರತೆ ಇತ್ತು ಹಾಗಾಗಿ ತಮ್ಮ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರರಿಗೆ ಮನ ಒಲಿಸಿ ಆನಂದಪುರಂ ಬಸ್ ಸ್ಟಾಂಡ್ ಎದುರಿನ ಮತ್ತು ತಮ್ಮ ಮನೆಯ ಹಿಂಬಾಗದ ಕೊಟ್ಟಿಗೆಯ ಎದುರಿನ ಚಿಲುಮೆ ಎದುರಿನ ಜಾಗ ಬಾಡಿಗೆಗೆ ನೀಡುತ್ತಾರೆ.    ಅದೇ #ಕೋಮಲ_ವಿಲಾಸ್ ಆನಂದಪುರಂನ ಸುಮಾರು 40 ವರ್ಷ ಸುಪ್ರಸಿದ್ದ ಹೋಟೆಲ್ ಆಗಿ ವಿಜೃಂಬಿಸಿತು, ಕೋಮಲ ವಿಲಾಸ್ ಗೆ ಹೋಗಿ ಮಸಾಲೆ ತಿಂದು ಕಾಫಿ ಟೀ ಕುಡಿಯುವುದು ಆ ಕಾಲಕ್ಕೆ ಒ0ದು ಪ್ರತಿಷ್ಟೆಯ ವಿಚಾರ.   ಪ್ರತಿ ದಿನ ಸಂಜೆ ಆನಂದಪುರಂ ಪೋಲಿಸ್ ಠಾಣೆಯಿಂದ ವಿಲೇಜ್ ಪಂಚಾಯತ್ ಕಛೇರಿ ತನಕ ಕೋಮಲ ವಿಲಾಸ್ ನ ಮಸಾಲೆದೋಸೆ ಸುವಾಸನೆ ಇಲ್ಲಿ ಸಾಗುತ್ತಿದ್ದ ಜನರ ಮೂಗು ಅರಳಿಸುತ್ತಿತ್ತು ಮತ್

ಭಾಗ-41, ಆನಂದಪುರಂ ಇತಿಹಾಸ, ಕುಪ್ಪಣ್ಣ ಆನಂದಪುರಂನ ಸಜ್ಜನ ಸಂಪನ್ನ ಸ್ವಚ್ಚತಾಗಾರ ಮತ್ತು ಬದರಿನಾರಾಯಣ ಅಯ್ಯಂಗಾರ್ ಕುಟುಂಬದ ಕೃಪ ಕಟಾಕ್ಷ ಹೊಂದಿದ್ದ ಕುಟುಂಬ

#ಭಾಗ_41. #ಆನಂದಪುರಂ_ಇತಿಹಾಸ. #ಆನಂದಪುರಂ_1960ರಿಂದ_ನಿರಂತರ_ಸ್ವಚ್ಚತಾ_ಕೆಲಸಗಾರ_ಕುಪ್ಪಣ್ಣ . #ಮ೦ತ್ರಿ_ಬದರಿನಾರಾಯಣಅಯ್ಯಂಗಾರ್_ಮತ್ತು_ವೆಂಕಟಾಚಲಯ್ಯಂಗಾರ್_ಕೃಪಕಟಾಕ್ಷ_ಇದ್ದ_ಕುಟುಂಬ. #ಗ್ರಾಮಪಂಚಾಯತ್_ಗರಿಷ್ಟ_ಸಂಬಳ_ಮಾಸಿಕ_ಒಂದು_ಸಾವಿರ_ಮಾತ್ರ #ಇವತ್ತೂ_ಆನಂದಪುರಂನಲ್ಲಿ_ಘನತೆ_ಗೌರವ_ಗಳಿಸಿಕೊಂಡ_ಕುಪ್ಪಣ್ಣ_ಕುಟುಂಬ.   1960 ರಲ್ಲಿ ಬದರಿನಾರಾಯಣ ಅಯ್ಯಂಗಾರ್ ಸಹೋದರ ವೆಂಕಟಾಚಲ ಅಯ್ಯಂಗಾರರು ವಿಲೇಜ್ ಪಂಚಾಯತ್ ನಿರಂತರ ಅಧ್ಯಕ್ಷರು. ಜಮೀನ್ದಾರರು, ಕೊಡುಗೈ ದಾನಿಗಳು ಅಯ್ಯಂಗಾರ್ ಕುಟುಂಬದ ಯಜಮಾನರು ಕೂಡ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರ್ ಈ ಕ್ಷೇತ್ರದ ಶಾಸಕರು.   ಹೀಗಿರುವಾಗ ಆನಂದಪುರಂ ಸ್ವಚ್ಚತೆಗೆ ಅವರದ್ದು ಮೊದಲ ಆಧ್ಯತೆ ಆಗ ಈ ವೃತ್ತಿ ಮಾಡುತ್ತಿದ್ದ ಚಿನ್ನಸ್ವಾಮಿ ಒಳ್ಳೆಯ ಮನುಷ್ಯನೇ ಆದರೆ ದಿನೇ ದಿನೇ ಕುಡಿತದ ಹವ್ಯಾಸ ಹೆಚ್ಚು ಮಾಡಿ ವೃತ್ತಿ ಅಸಡ್ಡೆ ಮಾಡುತ್ತಾ ಇದ್ದಿದ್ದರಿಂದ ವೆಂಕಟಾಚಲ ಅಯ್ಯಂಗಾರರಿಗೆ ಚಿಂತೆ ಆಗುತ್ತದೆ.   ಪಕ್ಕದ ರಿಪ್ಪನ್ ಪೇಟೆ ಹೊಸನಗರ ತಾಲ್ಲೂಕಿಗೆ ಸೇರಿದ್ದರು ಸಾಗರ - ಹೊಸನಗರ- ತೀರ್ಥಹಳ್ಳಿ ತಾಲ್ಲೂಕ್ ಸೇರಿ ಒಂದು ವಿದಾನ ಸಭಾ ಕ್ಷೇತ್ರ ಆಗಿತ್ತು ಮತ್ತು ಈ ಕ್ಷೇತ್ರದ ಶಾಸಕ ಬದರಿನಾರಾಯಣ ಅಯ್ಯಂಗಾರರನ್ನು ಗೆಲ್ಲಿಸಲು ವೆಂಕಟಾಚಲ ಆಯ್ಯಂಗಾರರ ಶ್ರಮವೇ ಹೆಚ್ಚಿನದ್ದು ಹಾಗಾಗಿ ಆಗ ರಿಪ್ಪನ್ ಪೇಟೆಯ ವಿಲೇಜ್ ಪಂಚಾಯತ್ ಅಧ್ಯಕ್ಷರು ಸುಲೇಮಾನ್ ಸಾಹೇಬರು ಅಲ್ಲಿನ ವಿಲ

ಭಾಗ-40, ಆನಂದಪುರಂ ಇತಿಹಾಸ, ಸ್ವಾತಂತ್ರ್ಯ ಪೂರ್ವದ ಆನಂದಪುರಂನ ಏಕೈಕ ಖಾಲಿ ದೋಸೆ ಕಾಯಿ ಚಟ್ನಿಯ ಪ್ರಖ್ಯಾತಿಯ ಕಾಮತ್ ಹೋಟೆಲ್ (ಗೋವಿಂದಣ್ಣನ ಹೋಟೆಲ್ )

#ಭಾಗ_40. #ಆನಂದಪುರಂ_ಇತಿಹಾಸ #ಸ್ವಾತಂತ್ರ್ಯ_ಪೂರ್ವದಿಂದ_ಇರುವ_ಕಾಮತ್_ಹೋಟೆಲ್ #ಮೂಲ_ಮಾಲಿಕರು_ಲಕ್ಷ್ಮಣ್_ಕಮ್ತಿ #ಖಾಲಿದೋಸೆ_ಇಡ್ಲಿ_ಕಾಯಿಚಟ್ನಿ_ಇವತ್ತಿಗೂ_ಪ್ರಸಿದ್ಧ.   ಆನಂದಪುರಂನ ಹೋಟೆಲ್ ಉದ್ಯಮದಲ್ಲಿ ಅತ್ಯಂತ ಹಳಬರು ಮತ್ತು ಸ್ವಾತಂತ್ರ್ಯ ಪೂರ್ವದ ಏಕೈಕ ಹೋಟೆಲ್ ಕಾಮತ್ ಹೋಟೆಲ್, ಖಾಲಿ ದೋಸೆ ಕಾಯಿ ಚಟ್ನಿಗೆ ಆ ಕಾಲದಿಂದಲು ಇದು ಪೇಮಸ್ ಹೋಟೆಲ್.   ಜನ ಲಕ್ಷ್ಮಣ್ ಕಮ್ತಿ ಅಂತ ಕರೆಯುತ್ತಿದ್ದ ಲಕ್ಷ್ಮಣ ಕಾಮತರ ದಿನಸಿ ಅಂಗಡಿ ಜೊತೆಗಿನ ಈ ಹೋಟೆಲ್ ಉದ್ಯಮ ಮೊದಲು ಆಸ್ಪತ್ರೆ ಎದರು ಇತ್ತಂತೆ ಇವರು ಮೂಲ ಅಯನೂರಿನಿಂದ ಇಲ್ಲಿಗೆ ಬರುತ್ತಾರೆ.   ಲಕ್ಷ್ಮಣ ಕಾಮತರ ನಂತರ ಅವರ ಮಗ ಗೋವಿಂದ್ ಕಾಮತ್ ರು ಈ ಉದ್ಯಮ ಮುಂದುವರಿಸುತ್ತಾರೆ ಈ ಹೋಟೆಲ್ ಬೋರ್ಡ್ ಕಾಮತ್ ಹೋಟೆಲ್ ಆದರೂ ಅದು ಪ್ರಸಿದ್ದಿಯಾಗಿ ಜನರ ಬಾಯಲ್ಲಿ ಗೋವಿಂದಣ್ಣನ ದೋಸೆ ಹೋಟೆಲ್ ಅಂತಲೇ ಪ್ರಸಿದ್ಧವಾಗಿದೆ.   ಗೋವಿಂದ್ ಕಾಮತ್ರಿಗೆ ಏಳು ಗಂಡು ಮತ್ತು ಇಬ್ಬರು ಪುತ್ರಿಯರು ಹಿರಿಯ ಪುತ್ರಿ ರಮಾಬಾಯಿ, ರಾಮದಾಸ್ ಕಾಮತ್, ವಿಷ್ಣು ಕಾಮತ್, ಗಣಪತಿ ಕಾಮತ್, ಮಾರುತಿ ಕಾಮತ್, ಗೋಪಾಲ್ ಕಾಮತ್, ಜಗದೀಶ್ ಕಾಮತ್, ಶ್ರೀನಿವಾಸ್ ಕಾಮತ್ ಮತ್ತು ಕಿರಿಯ ಪುತ್ರಿ ಕಸ್ತೂರಿ ಕಾಮತ್.    ರಾಮದಾಸ ಕಾಮತ್ ಬಸ್ ಅಪಘಾತದಲ್ಲಿ ಮೃತರಾಗಿದ್ದು ಈ ಕುಟುಂಬಕ್ಕೆ ದೊಡ್ಡ ಆಘಾತ ಆಗಿದ್ದ ಘಟನೆ, ಗೋವಿಂದಪ್ಪರ ಮಕ್ಕಳಲ್ಲಿ ಗಣಪತಿ ಕಾಮತ್ ಮತ್ತು ಮಾರುತ

ಉತ್ತರ ಕರ್ನಾಟಕದ ಕಡಕ್ ಜೋಳದ ರೊಟ್ಟಿ 6 ರಿಂದ 9 ತಿಂಗಳು ಹಾಳಾಗುವುದಿಲ್ಲ, ಪೌಷ್ಟಿಕಾಂಶ ಉಳ್ಳ ಸಿರಿಧಾನ್ಯದ ರೊಟ್ಟಿ ಇದು.

#ಜೋಳದ_ಕಡಕ್_ರೊಟ್ಟಿ #ಭಾರತೀಯ_ಮೂಲದ_ನೈಸರ್ಗಿಕ_ಪದಾರ್ಥದ_ಬ್ರೆಡ್ . #ಮಲೆನಾಡಿನ_ಪತ್ರೋಡೆ_ಗಸಿ_ಕಡಕ್_ಜೋಳದ_ರೊಟ್ಟಿ_ಚಟ್ನಿಪುಡಿ_ಮೊಸರು_ಇವತ್ತಿನ_ಉಪಹಾರ   ನಾನು ಹುಬ್ಬಳ್ಳಿಗೆ ಹೋದರೆ ಬಾಬು ರಾವ್ ಪೇಡಾ, ಕಡಕ್ ರೊಟ್ಟಿ ಖಾಯಂ ತರುವುದು ಪದ್ದತಿ.   ಜೋಳದಿಂದ ತಯಾರಿಸುವ ಈ ಕಡಕ್ ರೊಟ್ಟಿಗೆ 6ರಿಂದ 9 ತಿಂಗಳು ಹಾಳಾಗದೆ ಉಳಿಯುವ ಶೆಲ್ಪ್ ಲೈಪ್ ಇರುವುದರಿಂದ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಜೋಳದ ಕಡಕ್ ರೊಟ್ಟಿ ಪ್ರತಿ ಮನೆಯಲ್ಲು ಸಂಗ್ರಹಿಸಿಡುತ್ತಾರೆ.    ಸಿರಿಧಾನ್ಯ (ಮಿಲೆಟ್ ) ಬಿಳಿ ಜೋಳದಲ್ಲಿರುವ ಪೌಷ್ಟಿಕಾಂಶಗಳಿರುವ ಈ ರೊಟ್ಟಿ ಬಳಕೆಯಿಂದ ಜೀರ್ಣ ವ್ಯವಸ್ಥೆ ಸುದಾರಿಸುತ್ತದೆ, ಬ್ಲಡ್ ಶುಗರ್ ಕಡಿಮೆ ಮಾಡುತ್ತದೆ, ರಕ್ತದ ಒತ್ತಡ ನಿಯಂತ್ರಿಸುತ್ತದೆ ಮತ್ತು ತೂಕ ಇಳಿಯಲು ಸಹಕಾರಿ ಅನ್ನುತ್ತಾರೆ.   ಭಾರತೀಯ ಮೂಲದ ಈ ಜೋಳದ ಕಡಕ್ ರೊಟ್ಟಿಯೂ ಸೇರಿ ಭಾರತದಲ್ಲಿ 150 ವಿದದ ರೊಟ್ಟಿಗಳು ಆಯಾ ಪ್ರದೇಶದ ಬಳಕೆಯಲ್ಲಿದೆ.   ಬೆಳಿಗ್ಗೆ ಹೊಲಕ್ಕೆ ಹೋಗಿ ಸಂಜೆ ಬರುವವರಿಗೆ, ತಿಂಗಳಗಟ್ಟಲೆ ಪ್ರಯಾಣದಲ್ಲಿರುವವರಿಗೆ ಈ ಕಡಕ್ ರೊಟ್ಟಿ ಆರೋಗ್ಯಕರ ಆಹಾರ, ಈ ಕಡಕ್ ರೊಟ್ಟಿಗೆ ಚಟ್ನಿ ಪುಡಿ, ಮೊಸರು, ತರಕಾರಿ ಪಲ್ಯಗಳ ಜೊತೆ ಮತ್ತು ಮಾಂಸಹಾರಿಗಳಿಗೆ ಮಾಂಸದ ಖಾದ್ಯದ ಜೊತೆ ಈ ಕಡಕ್ ರೊಟ್ಟಿ ಅತ್ಯುತ್ತಮ ಕಾಂಬಿನೇಷನ್ ಆಗುತ್ತದೆ.   ಹುಬ್ಬಳ್ಳಿಯಿಂದ ಜೋಳದ ಕಡಕ್ ರೊಟ್ಟಿ ಮಾಡಿ ವಿದೇಶಕ್ಕೆ ರಪ್ತು ಮಾಡುವ ಸಂಸ್ಥೆಯಿಂದ ತಂದಿದ್ದ ಸುಮ