Skip to main content

ಭಾಗ -34, ಆನಂದಪುರಂ ಇತಿಹಾಸ, ಆನಂದಪುರಂನ ಶೈಕ್ಷಣಿಕ -ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ದಿಗೆ ಮಹತ್ತರ ಕೊಡುಗೆ ನೀಡಿದ ಡಾಕ್ಟರ್ ಸುಸೇನಾಥನ್

#ಭಾಗ_34.
#ಆನಂದಪುರಂ_ಇತಿಹಾಸ.

#ಆನಂದಪುರಂನ_ಶೈಕ್ಷಣಿಕ_ಸಾಮಾಜಿಕ_ಮತ್ತು_ಸಾಂಸ್ಕೃತಿಕ_ಕ್ಷೇತ್ರಕ್ಕೆ_ಅಪಾರ_ಕೊಡುಗೆ_ನೀಡಿದ_ಮಹಾನ್_ವ್ಯಕ್ತಿ.

#ಡಾಕ್ಟರ್_ಸುಸೇನಾಥನ್

#ಸೌಮ್ಯ_ಶಿಸ್ತು_ತಾಳ್ಮೆ_ಪ್ರತಿರೂಪದವರು

#ಆನಂದಪುರಂನ_ಅಗ್ರಹಾರದಲ್ಲಿ_ಎಲ್ಲರಿಗೂ_ಬೇಕಾದವರು.

#ಆನಂದಪುರಂನ_ಶಾಲೆಗಳಲ್ಲಿ_ಬ್ಯಾಂಡ್_ತರಬೇತಿ_ನೀಡುತ್ತಿದ್ದರು.

#ಸಂಗೀತ_ಸಾಧನ_ನುಡಿಸುವುದರಲ್ಲಿ_ಎತ್ತಿದ_ಕೈ.

  ಆನಂದಪುರಂನಲ್ಲಿ ಬದರಿನಾರಾಯಣ್ ಅಯ್ಯ೦ಗಾರರ ತಂದೆ ಜಮೀನ್ದಾರ್ ರಾಮಕೃಷ್ಣ ಅಯ್ಯಂಗಾರರು ಸಾರ್ವಜನಿಕರಿಗಾಗಿ ಕಟ್ಟಿಸಿದ್ದ ಸುಸಜ್ಜಿತ ಆಸ್ಪತ್ರೆ (ತಮ್ಮ ಪತ್ನಿ ಶ್ರೀಮತಿ ಕನಕಮ್ಮಾಳ್ ಸ್ಮಾರಕ) ಆ ಕಾಲದಲ್ಲೇ ಎಷ್ಟು ಸುಸಜ್ಜಿತ ಎಂದರೆ ಈ ಆಸ್ಪತ್ರೆ ಅವರಣದಲ್ಲಿ ವೈದ್ಯರು ಮತ್ತು ಮಹಿಳಾ ವೈದ್ಯರಿಗೆ ಎರೆಡು ಪ್ರತ್ಯೇಕ ಮನೆಗಳು, ರೋಗಿಗಳಿಗೆ ಆಹಾರ ತಯಾರಿಸಲು ಅಡುಗೆಮನೆ, ದಾಸ್ತಾನು ಕೊಠಡಿ, ನರ್ಸ್ ಕೌಟರ್ಸ್ಗಳು, ರೈಲ್ವೆ ಸ್ಟೇಷನ್ ಹತ್ತಿರ ಸಿಬ್ಬಂದಿಗಳಿಗಾಗಿ ಎರೆಡು ಹೆಚ್ಚುವರಿ ಮನೆಗಳು, ಶವ ಪರೀಕ್ಷೆಗಾಗಿ ಸಂತೆ ಮಾಕೆ೯ಟ್ ಮೂಲೆಯಲ್ಲಿ ಶವಾಗಾರ ಹೀಗಿದ್ದ ಆಸ್ಪತ್ರೆ ಒಳಗೆ ಸುಸಜ್ಜಿತ ಆಪರೇಷನ್ ಥಿಯೇಟರ್ ಕೂಡ ನಿರ್ಮಿಸಿದ್ದರು.
  ಉಚಿತ ಔಷದಕ್ಕಾಗಿ ಒ0ದು ಲಕ್ಷ ರೂಪಾಯಿ ನಿಶ್ಚಿತ ಠೇವಣಿ ಇಟ್ಟಿದ್ದರು (ಅದರ ಬಡ್ಡಿ ಹಣದಲ್ಲಿ ಹೆಚ್ಚುವರಿ ಔಷದಿ ಖರೀದಿಸಲಿಕ್ಕಾಗಿ), ಆನಂದಪುರಂ ಆಸ್ಪತ್ರೆಗೆ ಅತ್ಯುತ್ತಮ ಸಿಬ್ಬಂದಿಗಳನ್ನು ತಮ್ಮ ಪ್ರಭಾವದಿಂದ ವರ್ಗಾಯಿಸಿಕೊಳ್ಳುತ್ತಿದ್ದರು.
  ಹೀಗಾಗಿಯೇ ಆನಂದಪುರಂ ಆಸ್ಪತ್ರೆಗೆ ಕಂಪೌಂಡರ್ ಆಗಿ ಕೋಲಾರದ ಕೆಜಿಎಪ್ ನಲ್ಲಿ ಜನಿಸಿ ಶಿವಮೊಗ್ಗದಲ್ಲಿ ಶಿಕ್ಷಣ ಮುಗಿಸಿ ಭದ್ರಾವತಿ ಮತ್ತು ಜೋಗ ಆಸ್ಪತ್ರೆಯಲ್ಲಿ ಕಾಯ೯ನಿರ್ವಹಿಸಿ ಅಲ್ಲಿಂದ ಸುಸೇನಾಥನ್ ಬರುತ್ತಾರೆ. ಬಂದವರು ಕೆಲ ದಶಕಗಳ ಆನಂದಪುರಂ ಜನತೆಗೆ ಅತ್ಯುತ್ತಮ ಸೇವೆ ನೀಡಿ ಪ್ರಸಿದ್ಧರಾಗುತ್ತಾರೆ, ಇವರ ಶಿಸ್ತುಬದ್ದ ಜೀವನ ಎಂತವರನ್ನು ಆಕರ್ಷಿಸುತ್ತಿತ್ತು, ಇವರಿಗಿದ್ದ ತಾಳ್ಮೆ ವೈದ್ಯ ವೃತ್ತಿಗೆ ಹೇಳಿ ಮಾಡಿಸಿದ್ದು, ಬಡವ ಬಲ್ಲಿದ ಸಣ್ಣವ ದೊಡ್ಡವ ಎಂಬ ಬೇದಬಾವವಿಲ್ಲದ ಇವರ ಸ್ವಭಾವ ಇವರನ್ನು ಜನ ಸ್ನೇಹಿ ಆಗಿಸಿತ್ತು.
   ಎಲ್ಲರಲ್ಲೂ ಗೌರವದಿಂದ ವರ್ತಿಸುತ್ತಿದ್ದರು ಅವರು ಸಿಟ್ಟಾಗಿದ್ದು ಅಥವ ಜಗಳಾವಾಡಿದ್ದು ಯಾರೂ ನೋಡೇ ಇಲ್ಲ.
   ಆನಂದಪುರಂನ ಅಗ್ರಹಾರದಲ್ಲಿ ಆ ಕಾಲದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಬೇರಾರು ಇರಲಿಲ್ಲ, ಅಲ್ಲಿ ಕ್ರೈಸ್ತ ಅನುಯಾಯಿ ಕುಟುಂಬ  ನೆಲೆಸಲು ಅಯ್ಯಂಗಾರರ ಕುಟುಂಬ ಮನೆ ನೀಡಬೇಕೆಂದರೆ ಸುಸೇನಾಥನ್ ಮತ್ತು ಅವರ ಪತ್ನಿ ಸರೋಜಮ್ಮ ಅಂತಹ ಸುಸ೦ಸ್ಕೃತರಿದ್ದದ್ದೇ ಕಾರಣ.
  ಸರ್ಕಾರಿ ಉದ್ಯೋಗ ತೊರೆದು, ರಿಜಿಸ್ಟರ್ಡ ಮೆಡಿಕಲ್ ಪ್ರಾಕ್ಟಿಷನರ್ ಆಗಿ ತಮ್ಮ ಮನೇನಲ್ಲೆ ಖಾಸಾಗಿ ಕ್ಲೀನಿಕ್ ತೆರೆದ ನಂತರವೂ ಇವರು ಕೆಲ ದಶಕ ಆನಂದಪುರಂನಲ್ಲಿ ಸೇವೆ ಸಲ್ಲಿಸಿದರು, ಅಯ್ಯಂಗಾರ್ ಕುಟು೦ಬಕ್ಕೂ ಚಿಕಿತ್ಸೆ ನೀಡಿದರು.
  ಇವರ ಮನೆ ಎದುರಿನಲ್ಲೇ ಇದ್ದ ರಾಮ ಮಂದಿರದಲ್ಲಿ ಭಜನಾ ಕಾರ್ಯಕ್ರಮದಲ್ಲಿ ವೇದನಾರಾಯಣ ಭಟ್ಟರು ತಬಲ, ಗಣೇಶ್ ಭಟ್ಟರ ಅಣ್ಣ ಚಂದ್ರಶೇಖರ ಭಟ್ಟರು ಹಾರ್ಮೋನಿಯಂ, ಅಣ್ಣಪ್ಪ ಎಂಬ ಅಯ್ಯಂಗಾರ್ ಕುಟುಂಬದ ಮತ್ತು ಅಗ್ರಹಾರದ ಕ್ಷೌರಿಕ ವೃತ್ತಿಯವರು ಕೊಳಲು ಇವರ ಜೊತೆಗೆ ಸುಸೇನಾಥನ್ ರವರ ಬುಲ್ ಬುಲ್ ತರಂಗದ ಜೊತೆ ಅಗ್ರಹಾರದ ಎಲ್ಲರೂ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.
  ಸುಸೇನಾಥನ್ ಕೊಳಲು, ಪಿಯಾನೊ, ಬೀಗಲ್,ಡ್ರಂ ಹೀಗೆ ಎಲ್ಲಾ ಸಂಗೀತ ಸಾಧನ ನುಡಿಸುವ ಕಲೆ ಕರತಲಾಮಲಕ ಆಗಿತ್ತು, ಇವರಿಗೆ 1962 ರಿಂದ ಜೊತೆ ಆದ ದೈಹಿಕ ಶಿಕ್ಷಕರಾದ ಎಸ್ ಆರ್.ಕೃಷ್ಣಪ್ಪ ಸೇರಿ ಆನಂದಪುರಂ ನಲ್ಲಿ ಸೇವಾದಳದ ತಂಡಗಳ ಬ್ಯಾಂಡ್ ಸೆಟ್ ತಂಡಗಳಿಗೆ ತಯಾರಿ ನೀಡಿ ರಾಷ್ಟ್ರೀಯ ಹಬ್ಬದಲ್ಲಿ ನಡೆಯುತ್ತಿದ್ದ ಪೆರೇಡ್ ಗಳು ಇಡೀ ರಾಜ್ಯದ ಗಮನ ಸೆಳೆಯುತ್ತಿತ್ತು.
  ಇಡೀ ದೇಶದಲ್ಲೇ ಮೊದಲ ಗ್ರಾಮೀಣ ಬ್ಯಾಂಕ್ ರಿಸರ್ವಬ್ಯಾಂಕಿನಿಂದ ಆನಂದಪುರಂಗೆ ಮಂಜೂರು ಮಾಡಿ ಅದರ ಉದ್ಘಾಟನೆಗೆ ಬಂದಿದ್ದ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಗೆ ಆನಂದಪುರಂ ಜನತೆ ಪರವಾಗಿ ನೀಡಿದ ಗೌರವ ಪೆರೇಡ್ ನಿಜಲಿಂಗಪ್ಪನವರಿಗೆ ತುಂಬಾ ಸಂತೋಷ ಉಂಟು ಮಾಡಿತ್ತಂತೆ.
    ಈ ಪೆರೇಡ್ ಯಶಸ್ವಿಗೆ ಎಸ್.ಆರ್.ಕೃಷ್ಣಪ್ಪ ಮತ್ತು ರಿಚಡ್೯ ಲೋಬೋರಿಗೆ ಡಾಕ್ಟರ್ ಸುಸೇನಾಥರ ಹೆಚ್ಚಿನ ಸಹಕಾರವೂ ಮುಖ್ಯವಾಗಿತ್ತು ಎಂದು ಈ ಘಟನೆಯನ್ನು ಎಸ್.ಆರ್ ಕೃಷ್ಣಪ್ಪ ಅವರ ಅಭಿನಂದನಾ ಗ್ರಂಥದಲ್ಲಿ ಬರೆದಿದ್ದಾರೆ.
  ಆರ್.ಸುಸೇನಾಥನ್ (ಆರ್ ಅಂದರೆ ಅವರ ತಂದೆ ರಾಜೇಂದ್ರನ್) ಮತ್ತು ಅರಸೀಕೆರೆ ಮೂಲದ ಅವರ ಪತ್ನಿ ಸರೋಜಮ್ಮ ದಂಪತಿಗಳಿಗೆ ಆನಂದರಾಜ್, ಜೋಸೆಪ್, ಫೀಟರ್, ಫ್ರಾನ್ಸಿಸ್, ಜಯಶೀಲನ್, ಲಾರೆನ್ಸ್ ಮತ್ತು ವಿನ್ಸೆಂಟ್ ಎಂಬ ಏಳು ಗಂಡು ಮಕ್ಕಳು.
  ಡೇಸಿ ಬಾಯಿ, ದಾರತಿ, ಆಲ್ಪಾನ್ಸ್  ಮತ್ತು ಅನಿತಾ ಎಂಬ ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ.
  ಆನಂದಪುರಂನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಡಾಕ್ಟರ್ ಸುಸೇನಾಥರ ಸೇವೆ ಒಂದು ದೊಡ್ಡ ಕೊಡುಗೆ, ಇವರು ರೋಗಿಗಳಿಗೆ ನೀಡುತ್ತಿದ್ದ ಚಿಕಿತ್ಸೆಯಿಂದ  ಪರಿಣಾಮಕಾರಿ ಆಗಿ ಗುಣಮುಖರಾಗುತ್ತಿದ್ದರಿಂದ ಇವರ ಕೈಗುಣದ ಗುಣಗಾನ ಈಗಲೂ ಆನಂದಪುರಂ ನಿವಾಸಿಗಳಲ್ಲಿದೆ.
  ಈಗ ಆನಂದಪುರಂನಲ್ಲಿ ಇವರ ಮೊದಲ ಪುತ್ರ ಡಾಕ್ಟರ್ ಆನಂದರಾಜ್ ಕುಟುಂಬ ನೆಲೆಸಿದೆ

 ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರೂ ಆಗಿದ್ದ ಡಾಕ್ಟರ್ ಸುಸೇನಾಥನ್ ಅವರ 'ಸಮಾದಿ ಶಿವಮೊಗ್ಗದ ಬಸ್ ಸ್ಟಾಂಡ್ ಎದುರಿನ ಕ್ರೈಸ್ತರ ಸ್ಮಶಾನದಲ್ಲಿದೆ.
ನಾಳೆ ಭಾಗ- 35

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ