Skip to main content

ಭಾಗ-41, ಆನಂದಪುರಂ ಇತಿಹಾಸ, ಕುಪ್ಪಣ್ಣ ಆನಂದಪುರಂನ ಸಜ್ಜನ ಸಂಪನ್ನ ಸ್ವಚ್ಚತಾಗಾರ ಮತ್ತು ಬದರಿನಾರಾಯಣ ಅಯ್ಯಂಗಾರ್ ಕುಟುಂಬದ ಕೃಪ ಕಟಾಕ್ಷ ಹೊಂದಿದ್ದ ಕುಟುಂಬ

#ಭಾಗ_41.
#ಆನಂದಪುರಂ_ಇತಿಹಾಸ.

#ಆನಂದಪುರಂ_1960ರಿಂದ_ನಿರಂತರ_ಸ್ವಚ್ಚತಾ_ಕೆಲಸಗಾರ_ಕುಪ್ಪಣ್ಣ .

#ಮ೦ತ್ರಿ_ಬದರಿನಾರಾಯಣಅಯ್ಯಂಗಾರ್_ಮತ್ತು_ವೆಂಕಟಾಚಲಯ್ಯಂಗಾರ್_ಕೃಪಕಟಾಕ್ಷ_ಇದ್ದ_ಕುಟುಂಬ.

#ಗ್ರಾಮಪಂಚಾಯತ್_ಗರಿಷ್ಟ_ಸಂಬಳ_ಮಾಸಿಕ_ಒಂದು_ಸಾವಿರ_ಮಾತ್ರ

#ಇವತ್ತೂ_ಆನಂದಪುರಂನಲ್ಲಿ_ಘನತೆ_ಗೌರವ_ಗಳಿಸಿಕೊಂಡ_ಕುಪ್ಪಣ್ಣ_ಕುಟುಂಬ.

  1960 ರಲ್ಲಿ ಬದರಿನಾರಾಯಣ ಅಯ್ಯಂಗಾರ್ ಸಹೋದರ ವೆಂಕಟಾಚಲ ಅಯ್ಯಂಗಾರರು ವಿಲೇಜ್ ಪಂಚಾಯತ್ ನಿರಂತರ ಅಧ್ಯಕ್ಷರು. ಜಮೀನ್ದಾರರು, ಕೊಡುಗೈ ದಾನಿಗಳು ಅಯ್ಯಂಗಾರ್ ಕುಟುಂಬದ ಯಜಮಾನರು ಕೂಡ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರ್ ಈ ಕ್ಷೇತ್ರದ ಶಾಸಕರು.
  ಹೀಗಿರುವಾಗ ಆನಂದಪುರಂ ಸ್ವಚ್ಚತೆಗೆ ಅವರದ್ದು ಮೊದಲ ಆಧ್ಯತೆ ಆಗ ಈ ವೃತ್ತಿ ಮಾಡುತ್ತಿದ್ದ ಚಿನ್ನಸ್ವಾಮಿ ಒಳ್ಳೆಯ ಮನುಷ್ಯನೇ ಆದರೆ ದಿನೇ ದಿನೇ ಕುಡಿತದ ಹವ್ಯಾಸ ಹೆಚ್ಚು ಮಾಡಿ ವೃತ್ತಿ ಅಸಡ್ಡೆ ಮಾಡುತ್ತಾ ಇದ್ದಿದ್ದರಿಂದ ವೆಂಕಟಾಚಲ ಅಯ್ಯಂಗಾರರಿಗೆ ಚಿಂತೆ ಆಗುತ್ತದೆ.
  ಪಕ್ಕದ ರಿಪ್ಪನ್ ಪೇಟೆ ಹೊಸನಗರ ತಾಲ್ಲೂಕಿಗೆ ಸೇರಿದ್ದರು ಸಾಗರ - ಹೊಸನಗರ- ತೀರ್ಥಹಳ್ಳಿ ತಾಲ್ಲೂಕ್ ಸೇರಿ ಒಂದು ವಿದಾನ ಸಭಾ ಕ್ಷೇತ್ರ ಆಗಿತ್ತು ಮತ್ತು ಈ ಕ್ಷೇತ್ರದ ಶಾಸಕ ಬದರಿನಾರಾಯಣ ಅಯ್ಯಂಗಾರರನ್ನು ಗೆಲ್ಲಿಸಲು ವೆಂಕಟಾಚಲ ಆಯ್ಯಂಗಾರರ ಶ್ರಮವೇ ಹೆಚ್ಚಿನದ್ದು ಹಾಗಾಗಿ ಆಗ ರಿಪ್ಪನ್ ಪೇಟೆಯ ವಿಲೇಜ್ ಪಂಚಾಯತ್ ಅಧ್ಯಕ್ಷರು ಸುಲೇಮಾನ್ ಸಾಹೇಬರು ಅಲ್ಲಿನ ವಿಲೇಜ್ ಪಂಚಾಯತ್ ಕಾರ್ಯದಶಿ೯ ಕಂ ವಿಲೇಜ್ ಅಕೌಂಟೆಂಟ್ ಆಗಿದ್ದವರು ಆನಂದಪುರಂನ ವೇದನಾರಾಯಣ ಭಟ್ಟರ ಪುತ್ರ ಸುಂದರೇಶ್ (ರಂಗನಾಥ ಭಟ್ಟರ ಸಹೋದರ ಮತ್ತು ಕಂಪ್ಯೂಟರ್ ದೀಪು ತಂದೆ) ಇವರೆಲ್ಲ ಸೇರಿ ಅವರಲ್ಲಿನ ಸ್ವಚ್ಚತಾ ಸಿಬ್ಬ೦ದಿಗೆ ಮನ ಒಲಿಸಿ ಮೈಸೂರಿನ ಕೊಳ್ಳೆಗಾಲದಿಂದ ಅವರ ಪತ್ನಿ ಅಣ್ಣನ ಕುಟುಂಬ ಆನಂದಪುರಂಗೆ ಕರೆಸುತ್ತಾರೆ.
  ಅದೇ ಕುಪ್ಪಣ್ಣ ಮತ್ತು ರಂಗಮ್ಮ ದಂಪತಿಗಳು ಮತ್ತು ಕುಪ್ಪಣ್ಣ ಸಹೋದರ ಅಮಾಸೆ ಕುಟುಂಬ ಆನಂದಪುರಂಗೆ ಬರುತ್ತಾರೆ, ಇವರಿಗೆ ವೆಂಕಟಾಚಲ ಅಯ್ಯ೦ಗಾರರ ತಂದೆ  ತಮ್ಮ ಪುತ್ರ ಜಗನ್ನಾಥರ ಸ್ಮರಣಾರ್ಥ ನಿಮಿ೯ಸಿದ್ದ ಜಗನ್ನಾಥ ಸ್ಮಾರಕ ಪಶು ವೈದ್ಯ ಶಾಲೆ ಹಿಂಭಾಗದ ತಮ್ಮ ಸ್ವಂತ ಜಾಗ ನೀಡುತ್ತಾರೆ.
   ಕುಪ್ಪಣ್ಣ ಕುಟುಂಬ ಅಯ್ಯಂಗಾರರ ನಿಷ್ಟಾವಂತ ಕಾಮಿ೯ಕರಾಗಿ ಅಯ್ಯ೦ಗಾರರ ಕುಟುಂಬದ ಕೃಪಕಟಾಕ್ಷ ಪಡೆಯುತ್ತದೆ, ಕುಪ್ಪಣ್ಣ ವಿಲೇಜ್ ಪಂಚಾಯತ್ ಸ್ವಚ್ಚತಾ ಸಿಬ್ಬಂದಿ ಆಗಿ ಅತಿ ಕನಿಷ್ಟ ಸಂಬಳದಲ್ಲಿ ಊರಿನ ಸ್ವಚ್ಚತೆಯ ಗರಿಷ್ಟ ಕೆಲಸ ನಿರಂತರವಾಗಿ ಮಾಡುತ್ತಾರೆ, ಮಂಡಲ್ ಪಂಚಾಯತ್ ನಂತರ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಆಗುವವರೆಗೆ ಕೆಲಸ ಮಾಡಿ ನಿವೃತ್ತರಾಗುವಾಗ ಇವರ ಸಂಬಳ ಒಂದು ಸಾವಿರ ಮಾತ್ರ.
   ಕಳ್ಳತನ ಸುಳ್ಳು ತನ ಮಾಡದ ಗೌರವಾನ್ವಿತ ಜೀವನ ಮಾಡಿದ ಕುಪ್ಪಣ್ಣ ಕುಟುಂಬ ಆನಂದಪುರಂನಲ್ಲಿ ಘನತೆ ಗೌರವ ಉಳಿಸಿಕೊಂಡು ಬಂದಿದೆ ಈಗಲೂ ಈ ಕುಟುಂಬದವರು ಶ್ರಮದಿಂದ ಉದ್ಯೋಗ ಮಾಡಿ ಜೀವನ ಮಾಡುತ್ತಿದೆ, ತೆಲಗು ಮತ್ತು ತಮಿಳು ಎರೆಡೂ ಬಾಷೆ ಇವರದ್ದು.
  ಕುಪ್ಪಣ್ಣ ಮತ್ತು ರಂಗಮ್ಮ ದಂಪತಿಗೆ ರತ್ನಮ್ಮ, ಗಾಯತ್ರಿ ಮತ್ತು ಮಂಜುಳ ಎಂಬ ಮೂರು ಪುತ್ರಿಯರು, ನಾಗಪ್ಪ, ಬನ್ನು ಸ್ವಾಮಿ, ಮಾರಪ್ಪ, ಚಂದ್ರ ಮತ್ತು ಸುಬ್ರಮಣ್ಯ ಎಂಬ ಐದು ಪುತ್ರರು.
  ನಾಗಪ್ಪ ಆನಂದಪುರಂನ ಶುಂಠಿ ವ್ಯಾಪಾರಿ ಪ್ರಹ್ಲಾದರ ಸಹೋದರ ನಾಗಣ್ಣನ ಮನೆ ಎದುರಿನ ಬಾವಿ ಕೆಸರು ತೆಗೆಯುವ ಕೆಲಸದ ಸಂದರ್ಭದಲ್ಲಿ ಉಸಿರುಗಟ್ಟಿ ಮೃತರಾಗಿದ್ದು ಈ ಕುಟುಂಬಕ್ಕೆ ದೊಡ್ಡ ಆಘಾತ, ಇನ್ನೊಬ್ಬ ಪುತ್ರ ಬನ್ನು ಸ್ವಾಮಿ ಕೂಡ ಈಗಿಲ್ಲ ಉಳಿದವರು ಆನಂದಪುರ೦ನ ಮೂಲ ಮನೆಯಲ್ಲಿ ಮತ್ತು ಆನಂದಪುರಂನ ಸಿದ್ದೇಶ್ವರ ಕಾಲೋನಿಯಲ್ಲಿ ನೆಲೆಸಿದ್ದಾರೆ.
  ಪುತ್ರಿ ರತ್ನಮ್ಮಳ ಮಗ ಆನಂದ ಅತ್ಯುತ್ತಮ ಕಾರ್ಪೆಂಟರ್ ಆಗಿ ಜೀವನ ಸಾಗಿಸುತ್ತಿದ್ದಾರೆ.
   ಕುಪ್ಪಣ್ಣನ ತಮ್ಮ ಅಮಾಸೆ ಮತ್ತು ದಂಪತಿಗಳಿಗೆ ಮೂವರು ಪುತ್ರರು ರಾಜು, ಮಂಜು ಮತ್ತು ಶಂಕರ ಹಾಲಿ ಗ್ರಾಮ ಪಂಚಾಯತ್ ನಲ್ಲಿ ಶಂಕರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ.
  1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಆಗಿನ  ಸಂತೆ ಮಾಕೆ೯ಟ್ ರಸ್ತೆಗೆ ಮೊದಲ ಬಾರಿಗೆ ಡಾಂಬರಿಕರಣ ಮಂಜೂರು ಮಾಡಿಸಿದಾಗ ಸದರಿ ಡಾಂಬರಿಕರಣ ಕಾಮಗಾರಿ ಗುದ್ದಲಿ ಪೂಜೆ ನಮ್ಮ ಊರಿನ ಹಿರಿಯ ಸ್ವಚ್ಚತಾ ಕಾರ್ಮಿಕ ಕುಪ್ಪಣ್ಣರಿಂದ ಮಾಡಿಸಿದ್ದು ಈ ಸಂದರ್ಭದಲ್ಲಿ ಕುಪ್ಪಣ್ಣರಿಗೆ ಶಾಲು ಹೊದೆಸಿ ಹಾರ ಹಾಕಿ ಸನ್ಮಾನಿಸಿದಾಗ ವಯೋವೃದ್ಧ ಕುಪ್ಪಣ್ಣನ ಕಣ್ಣಲ್ಲಿ ಬಂದ ಆನಂದಬಾಷ್ಪ ನನಗೆ ಇವತ್ತು ನೆನಪಿದೆ, ಕುಪ್ಪಣ್ಣ 2001 ರಲ್ಲಿ ಇಹಲೋಕ ತ್ಯಜಿಸಿದ್ದರು ಅವರ ನೆನಪು ಆನಂದಪುರಂನಲ್ಲಿ ಸದಾ ಇದೆ.
(ನಾಳೆ ಭಾಗ-42)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ