Skip to main content

ಭಾಗ-41, ಆನಂದಪುರಂ ಇತಿಹಾಸ, ಕುಪ್ಪಣ್ಣ ಆನಂದಪುರಂನ ಸಜ್ಜನ ಸಂಪನ್ನ ಸ್ವಚ್ಚತಾಗಾರ ಮತ್ತು ಬದರಿನಾರಾಯಣ ಅಯ್ಯಂಗಾರ್ ಕುಟುಂಬದ ಕೃಪ ಕಟಾಕ್ಷ ಹೊಂದಿದ್ದ ಕುಟುಂಬ

#ಭಾಗ_41.
#ಆನಂದಪುರಂ_ಇತಿಹಾಸ.

#ಆನಂದಪುರಂ_1960ರಿಂದ_ನಿರಂತರ_ಸ್ವಚ್ಚತಾ_ಕೆಲಸಗಾರ_ಕುಪ್ಪಣ್ಣ .

#ಮ೦ತ್ರಿ_ಬದರಿನಾರಾಯಣಅಯ್ಯಂಗಾರ್_ಮತ್ತು_ವೆಂಕಟಾಚಲಯ್ಯಂಗಾರ್_ಕೃಪಕಟಾಕ್ಷ_ಇದ್ದ_ಕುಟುಂಬ.

#ಗ್ರಾಮಪಂಚಾಯತ್_ಗರಿಷ್ಟ_ಸಂಬಳ_ಮಾಸಿಕ_ಒಂದು_ಸಾವಿರ_ಮಾತ್ರ

#ಇವತ್ತೂ_ಆನಂದಪುರಂನಲ್ಲಿ_ಘನತೆ_ಗೌರವ_ಗಳಿಸಿಕೊಂಡ_ಕುಪ್ಪಣ್ಣ_ಕುಟುಂಬ.

  1960 ರಲ್ಲಿ ಬದರಿನಾರಾಯಣ ಅಯ್ಯಂಗಾರ್ ಸಹೋದರ ವೆಂಕಟಾಚಲ ಅಯ್ಯಂಗಾರರು ವಿಲೇಜ್ ಪಂಚಾಯತ್ ನಿರಂತರ ಅಧ್ಯಕ್ಷರು. ಜಮೀನ್ದಾರರು, ಕೊಡುಗೈ ದಾನಿಗಳು ಅಯ್ಯಂಗಾರ್ ಕುಟುಂಬದ ಯಜಮಾನರು ಕೂಡ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರ್ ಈ ಕ್ಷೇತ್ರದ ಶಾಸಕರು.
  ಹೀಗಿರುವಾಗ ಆನಂದಪುರಂ ಸ್ವಚ್ಚತೆಗೆ ಅವರದ್ದು ಮೊದಲ ಆಧ್ಯತೆ ಆಗ ಈ ವೃತ್ತಿ ಮಾಡುತ್ತಿದ್ದ ಚಿನ್ನಸ್ವಾಮಿ ಒಳ್ಳೆಯ ಮನುಷ್ಯನೇ ಆದರೆ ದಿನೇ ದಿನೇ ಕುಡಿತದ ಹವ್ಯಾಸ ಹೆಚ್ಚು ಮಾಡಿ ವೃತ್ತಿ ಅಸಡ್ಡೆ ಮಾಡುತ್ತಾ ಇದ್ದಿದ್ದರಿಂದ ವೆಂಕಟಾಚಲ ಅಯ್ಯಂಗಾರರಿಗೆ ಚಿಂತೆ ಆಗುತ್ತದೆ.
  ಪಕ್ಕದ ರಿಪ್ಪನ್ ಪೇಟೆ ಹೊಸನಗರ ತಾಲ್ಲೂಕಿಗೆ ಸೇರಿದ್ದರು ಸಾಗರ - ಹೊಸನಗರ- ತೀರ್ಥಹಳ್ಳಿ ತಾಲ್ಲೂಕ್ ಸೇರಿ ಒಂದು ವಿದಾನ ಸಭಾ ಕ್ಷೇತ್ರ ಆಗಿತ್ತು ಮತ್ತು ಈ ಕ್ಷೇತ್ರದ ಶಾಸಕ ಬದರಿನಾರಾಯಣ ಅಯ್ಯಂಗಾರರನ್ನು ಗೆಲ್ಲಿಸಲು ವೆಂಕಟಾಚಲ ಆಯ್ಯಂಗಾರರ ಶ್ರಮವೇ ಹೆಚ್ಚಿನದ್ದು ಹಾಗಾಗಿ ಆಗ ರಿಪ್ಪನ್ ಪೇಟೆಯ ವಿಲೇಜ್ ಪಂಚಾಯತ್ ಅಧ್ಯಕ್ಷರು ಸುಲೇಮಾನ್ ಸಾಹೇಬರು ಅಲ್ಲಿನ ವಿಲೇಜ್ ಪಂಚಾಯತ್ ಕಾರ್ಯದಶಿ೯ ಕಂ ವಿಲೇಜ್ ಅಕೌಂಟೆಂಟ್ ಆಗಿದ್ದವರು ಆನಂದಪುರಂನ ವೇದನಾರಾಯಣ ಭಟ್ಟರ ಪುತ್ರ ಸುಂದರೇಶ್ (ರಂಗನಾಥ ಭಟ್ಟರ ಸಹೋದರ ಮತ್ತು ಕಂಪ್ಯೂಟರ್ ದೀಪು ತಂದೆ) ಇವರೆಲ್ಲ ಸೇರಿ ಅವರಲ್ಲಿನ ಸ್ವಚ್ಚತಾ ಸಿಬ್ಬ೦ದಿಗೆ ಮನ ಒಲಿಸಿ ಮೈಸೂರಿನ ಕೊಳ್ಳೆಗಾಲದಿಂದ ಅವರ ಪತ್ನಿ ಅಣ್ಣನ ಕುಟುಂಬ ಆನಂದಪುರಂಗೆ ಕರೆಸುತ್ತಾರೆ.
  ಅದೇ ಕುಪ್ಪಣ್ಣ ಮತ್ತು ರಂಗಮ್ಮ ದಂಪತಿಗಳು ಮತ್ತು ಕುಪ್ಪಣ್ಣ ಸಹೋದರ ಅಮಾಸೆ ಕುಟುಂಬ ಆನಂದಪುರಂಗೆ ಬರುತ್ತಾರೆ, ಇವರಿಗೆ ವೆಂಕಟಾಚಲ ಅಯ್ಯ೦ಗಾರರ ತಂದೆ  ತಮ್ಮ ಪುತ್ರ ಜಗನ್ನಾಥರ ಸ್ಮರಣಾರ್ಥ ನಿಮಿ೯ಸಿದ್ದ ಜಗನ್ನಾಥ ಸ್ಮಾರಕ ಪಶು ವೈದ್ಯ ಶಾಲೆ ಹಿಂಭಾಗದ ತಮ್ಮ ಸ್ವಂತ ಜಾಗ ನೀಡುತ್ತಾರೆ.
   ಕುಪ್ಪಣ್ಣ ಕುಟುಂಬ ಅಯ್ಯಂಗಾರರ ನಿಷ್ಟಾವಂತ ಕಾಮಿ೯ಕರಾಗಿ ಅಯ್ಯ೦ಗಾರರ ಕುಟುಂಬದ ಕೃಪಕಟಾಕ್ಷ ಪಡೆಯುತ್ತದೆ, ಕುಪ್ಪಣ್ಣ ವಿಲೇಜ್ ಪಂಚಾಯತ್ ಸ್ವಚ್ಚತಾ ಸಿಬ್ಬಂದಿ ಆಗಿ ಅತಿ ಕನಿಷ್ಟ ಸಂಬಳದಲ್ಲಿ ಊರಿನ ಸ್ವಚ್ಚತೆಯ ಗರಿಷ್ಟ ಕೆಲಸ ನಿರಂತರವಾಗಿ ಮಾಡುತ್ತಾರೆ, ಮಂಡಲ್ ಪಂಚಾಯತ್ ನಂತರ ಗ್ರಾಮ ಪಂಚಾಯತ್ ಆಗಿ ಪರಿವರ್ತನೆ ಆಗುವವರೆಗೆ ಕೆಲಸ ಮಾಡಿ ನಿವೃತ್ತರಾಗುವಾಗ ಇವರ ಸಂಬಳ ಒಂದು ಸಾವಿರ ಮಾತ್ರ.
   ಕಳ್ಳತನ ಸುಳ್ಳು ತನ ಮಾಡದ ಗೌರವಾನ್ವಿತ ಜೀವನ ಮಾಡಿದ ಕುಪ್ಪಣ್ಣ ಕುಟುಂಬ ಆನಂದಪುರಂನಲ್ಲಿ ಘನತೆ ಗೌರವ ಉಳಿಸಿಕೊಂಡು ಬಂದಿದೆ ಈಗಲೂ ಈ ಕುಟುಂಬದವರು ಶ್ರಮದಿಂದ ಉದ್ಯೋಗ ಮಾಡಿ ಜೀವನ ಮಾಡುತ್ತಿದೆ, ತೆಲಗು ಮತ್ತು ತಮಿಳು ಎರೆಡೂ ಬಾಷೆ ಇವರದ್ದು.
  ಕುಪ್ಪಣ್ಣ ಮತ್ತು ರಂಗಮ್ಮ ದಂಪತಿಗೆ ರತ್ನಮ್ಮ, ಗಾಯತ್ರಿ ಮತ್ತು ಮಂಜುಳ ಎಂಬ ಮೂರು ಪುತ್ರಿಯರು, ನಾಗಪ್ಪ, ಬನ್ನು ಸ್ವಾಮಿ, ಮಾರಪ್ಪ, ಚಂದ್ರ ಮತ್ತು ಸುಬ್ರಮಣ್ಯ ಎಂಬ ಐದು ಪುತ್ರರು.
  ನಾಗಪ್ಪ ಆನಂದಪುರಂನ ಶುಂಠಿ ವ್ಯಾಪಾರಿ ಪ್ರಹ್ಲಾದರ ಸಹೋದರ ನಾಗಣ್ಣನ ಮನೆ ಎದುರಿನ ಬಾವಿ ಕೆಸರು ತೆಗೆಯುವ ಕೆಲಸದ ಸಂದರ್ಭದಲ್ಲಿ ಉಸಿರುಗಟ್ಟಿ ಮೃತರಾಗಿದ್ದು ಈ ಕುಟುಂಬಕ್ಕೆ ದೊಡ್ಡ ಆಘಾತ, ಇನ್ನೊಬ್ಬ ಪುತ್ರ ಬನ್ನು ಸ್ವಾಮಿ ಕೂಡ ಈಗಿಲ್ಲ ಉಳಿದವರು ಆನಂದಪುರ೦ನ ಮೂಲ ಮನೆಯಲ್ಲಿ ಮತ್ತು ಆನಂದಪುರಂನ ಸಿದ್ದೇಶ್ವರ ಕಾಲೋನಿಯಲ್ಲಿ ನೆಲೆಸಿದ್ದಾರೆ.
  ಪುತ್ರಿ ರತ್ನಮ್ಮಳ ಮಗ ಆನಂದ ಅತ್ಯುತ್ತಮ ಕಾರ್ಪೆಂಟರ್ ಆಗಿ ಜೀವನ ಸಾಗಿಸುತ್ತಿದ್ದಾರೆ.
   ಕುಪ್ಪಣ್ಣನ ತಮ್ಮ ಅಮಾಸೆ ಮತ್ತು ದಂಪತಿಗಳಿಗೆ ಮೂವರು ಪುತ್ರರು ರಾಜು, ಮಂಜು ಮತ್ತು ಶಂಕರ ಹಾಲಿ ಗ್ರಾಮ ಪಂಚಾಯತ್ ನಲ್ಲಿ ಶಂಕರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ.
  1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಆಗಿನ  ಸಂತೆ ಮಾಕೆ೯ಟ್ ರಸ್ತೆಗೆ ಮೊದಲ ಬಾರಿಗೆ ಡಾಂಬರಿಕರಣ ಮಂಜೂರು ಮಾಡಿಸಿದಾಗ ಸದರಿ ಡಾಂಬರಿಕರಣ ಕಾಮಗಾರಿ ಗುದ್ದಲಿ ಪೂಜೆ ನಮ್ಮ ಊರಿನ ಹಿರಿಯ ಸ್ವಚ್ಚತಾ ಕಾರ್ಮಿಕ ಕುಪ್ಪಣ್ಣರಿಂದ ಮಾಡಿಸಿದ್ದು ಈ ಸಂದರ್ಭದಲ್ಲಿ ಕುಪ್ಪಣ್ಣರಿಗೆ ಶಾಲು ಹೊದೆಸಿ ಹಾರ ಹಾಕಿ ಸನ್ಮಾನಿಸಿದಾಗ ವಯೋವೃದ್ಧ ಕುಪ್ಪಣ್ಣನ ಕಣ್ಣಲ್ಲಿ ಬಂದ ಆನಂದಬಾಷ್ಪ ನನಗೆ ಇವತ್ತು ನೆನಪಿದೆ, ಕುಪ್ಪಣ್ಣ 2001 ರಲ್ಲಿ ಇಹಲೋಕ ತ್ಯಜಿಸಿದ್ದರು ಅವರ ನೆನಪು ಆನಂದಪುರಂನಲ್ಲಿ ಸದಾ ಇದೆ.
(ನಾಳೆ ಭಾಗ-42)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...