Skip to main content

Posts

Showing posts with the label Today 106 Birthday celebration of Smt Indira Gandhi.46 year back Indira Gandhi car stoned in SHIVAMOGGA

Blog number 1830. ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ಅವರಿಗೆ ಕಲ್ಲು ಹೊಡೆದು ಹಲ್ಲೆ ಮಾಡಿದ ಘಟನೆ ನಡೆದು 46 ವರ್ಷವಾಯಿತು ಇವತ್ತು ಶ್ರೀಮತಿ ಇಂದಿರಾ ಗಾಂಧಿ ಅವರ 106 ನೇ ಹುಟ್ಟು ಹಬ್ಬ.

#ಶಿವಮೊಗ್ಗದಲ್ಲಿ_ಇಂದಿರಾಗಾಂಧಿ_ಅವರಿಗೆ_ಕಲ್ಲೆಸೆದವರು_ಯಾರು ? #ಈಗಿನ_ರಾಜಕಾರಣದಲ್ಲಿರುವವರಿಗೆ_ಗೊತ್ತೇ_ಇರಲಿಕ್ಕಿಲ್ಲ. #ಇವತ್ತು_ಇಂದಿರಾ_106ನೇ_ಹುಟ್ಟುಹಬ್ಬ #ಮುಚ್ಚಿಟ್ಟ_ಕಾಂಗ್ರೇಸ್_ಇತಿಹಾಸದ_ಪುಟ. #ಅಮೇರಿಕಾದ_ನ್ಯೂಯಾರ್ಕ್_ಟೈಮ್ಸ್_ಈ_ಸುದ್ದಿ_ಮೊದಲು_ಪ್ರಕಟಿಸಿದ_ಪತ್ರಿಕೆ.   #ಇಡೀ_ದೇಶದಲ್ಲೇ_ಈ_ಸುದ್ದಿ_ಸಂಚಲನ_ಉಂಟು_ಮಾಡಿತ್ತು.   ಇವತ್ತು ದೇಶದ ಉಕ್ಕಿನ ಮಹಿಳೆ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ 106ನೇ ಹುಟ್ಟುಹಬ್ಬ.   19- ನವೆಂಬರ್ -1917 ಇಂದಿರಾರ ಜನ್ಮ ದಿನ.  ಇಂದಿರಾ ಗಾಂಧಿ ಅವರ 60ನೇ ಹುಟ್ಟುಹಬ್ಬಕ್ಕೆ 20 ದಿನ ಮೊದಲು ದಿನಾಂಕ 30 ಅಕ್ಟೋಬರ್ 1977ರಂದು ಶಿವಮೊಗ್ಗದಲ್ಲಿ ಕಾಂಗ್ರೇಸ್ ಪಕ್ಷ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿತ್ತು ಈ ಸಭೆಯನ್ನು ಉದ್ದೇಶಿಸಿ ಶ್ರೀಮತಿ ಇಂದಿರಾ ಗಾಂಧಿ ಮಾತಾಡುವವರಿದ್ದರು.   ಈ ಸಭೆ ನಂತರ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಮೂಲಕ ಅವರು ಮಂಗಳೂರು ತಲುಪುವ ಕಾರ್ಯಕ್ರಮ ನಿರ್ಧಾರವಾಗಿತ್ತು.   ಆ ದಿನ ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು, ಇಂದಿರಾ ಗಾಂಧಿ ಈ ಯಶಸ್ವಿ ಸಭೆ ನಡೆಸಿ ತೀರ್ಥಹಳ್ಳಿಗೆ ನಿರ್ಗಮಿಸುವ ಮಾರ್ಗದಲ್ಲಿ ಇಂದಿರಾರ ಕಾರಿಗೆ ಕಲ್ಲು ಹೊಡೆಯುವ ಹೇಯ ಕೃತ್ಯಕ್ಕೆ ಒಂದು ಗುಂಪು ಗುಪ್ತವಾಗಿ ತಯಾರಿ ನಡೆಸಿತ್ತು....