Skip to main content

Posts

Showing posts with the label Wonderful personality of Mr Kumar Kuntikan Matt

ಕನ್ನಡಾಭಿಮಾನಿ, ಹೋರಾಟಗಾರ ದೂರ ದೇಶ ಲಂಡನ್ ನಲ್ಲಿ ಲಂಡನ್ ಕನ್ನಡ ಸಮ್ಮೇಳನ, ಲಂಡನ್ ಯಕ್ಷಗಾನ ಸ್ಪದೆ೯ ಆಯೋಜಿಸಿದ ಸಾಹಸಿ ಈಗ ಇವರ ತಂದೆ ಬರೆದಿರುವ ರಾಮಕಥಾ ಮ೦ಜರಿ ಮತ್ತು ಕೃಷ್ಣ ಕಥಾ ಮ೦ಜರಿ ಪ್ರಕಟಿಸಿದ್ದಾರೆ, ಇದನ್ನು ಖರೀದಿಸಿ ಇವರಿಗೆ ಪ್ರೋತ್ಸಾಹಿಸುವ ಕೆಲಸ ಕನ್ನಡಿಗರು ಮಾಡ ಬೇಕಾಗಿದೆ.

#ಕುಮಾರ್_ಕುಂಠಿಕಾನ್_ಮಠ     ಅನಿವಾಸಿ ಭಾರತೀಯರು, ಕೇರಳದ ಕಾಸರಗೋಡಿನ ಕನ್ನಡಿಗರು, ಕನ್ನಡ ಬಾಷಾಭಿಮಾನಿಗಳು, ದ್ಯೆವ ಭಕ್ತರು.    ಎಲ್ಲಕ್ಕಿಂತ ಹೆಚ್ಚಾಗಿ ಇವರ ಪೂಜ್ಯ ತಂದೆ ಖ್ಯಾತ ಸಾಹಿತಿಗಳಾದ ದಿವಂಗತ ಕುಂಠಿ ಕಾನ್ ಮಠ ಬಾಲಕೃಷ್ಣ ಭಟ್ಟರು ಬರೆದಿರುವ ರಾಮಾಯಣ ಮತ್ತು ಮಹಾಭಾರತ ಪುಸ್ತಕ ಮುದ್ರಿಸುವ ಇವರ ಮಹತ್ ಕಾಯ೯ ನಡೆಸಿದ್ದು ನನಗೆ ಅತ್ಯಂತ ಇಷ್ಟ ಆಗಿದೆ.    ತಂದೆಯಂತೆಯೇ ಬಹು ಮುಖ ಪ್ರತಿಭೆಯ ಕುಮಾರ್ ಈ ಹಿಂದೆ ಲಂಡನ್ ವಿಶ್ವ ಕನ್ನಡ ಸಮ್ಮೇಳನ, ಲಂಡನ್ ಯಕ್ಷಗಾನ ಸ್ಪದೆ೯ ಯಶಸ್ವಿಯಾಗಿ ನಡೆಸಿದವರು.   ಹುಟ್ಟಿದ ಊರಿನ ಕುಂಠಿ ಕಾನ್ ಮಠದ ದೇವಸ್ಥಾನ ಸಂಕೀಣ೯ ನವೀಕರಣ ಮಾಡುತ್ತಿದ್ದಾರೆ, ಮುಂದಿನ ದಿನದಲ್ಲಿ ಇವರ ತಂದೆಯ ಸ್ಮರಣಾಥ೯ ಅಡಿಟೋರಿಯಂ, ಅತಿಥಿ ಗೃಹ ಮತ್ತು ಅನ್ನ ಛತ್ರ ಸುಮಾರು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸುವ ಗುರಿ ಹೊಂದಿದ್ದಾರೆ.   ಕಳೆದ 2018ರ ಕೊನೆಯಲ್ಲಿ ಇವರ ತಂದೆ ಬರೆದಿದ್ದ 800 ಪುಟಗಳ #ರಾಮಕಥಾ_ಮಂಜರಿ ಪ್ರಕಟಿಸಿದ್ದರು ನನಗೆ ಕಳಿಸಿದ ಪ್ರತಿ ಜನವರಿ 2019 ರಲ್ಲಿ, ಪ್ರತಿ ದಿನ ಕೆಲ ಅಧ್ಯಾಯದಂತೆ 23 ದಿನದಲ್ಲಿ ಓದಿ ವಿಮಷೆ೯ ಬರೆದಿದ್ದನ್ನ ಅವರು ತಮ್ಮ FB ಪೇಜ್ ನಲ್ಲಿ post ಮಾಡಿದ್ದರು.   ಈಗ ಮಹಾಭಾರತದ #ಕೃಷ್ಣಾಕಥಾ_ಮಂಜರಿ ಈ ತಿಂಗಳಲ್ಲಿ ಬಿಡುಗಡೆ ಇದೆ ಇದು ಕೂಡ 800 ಪುಟಗಳದ್ದು ಬೆಲೆ 1250...