Skip to main content

Posts

Showing posts from February, 2022

ಮಹಾರಾಷ್ಟ್ರದ ರತ್ನಗಿರಿಯಿಂದ ಕೇರಳದ ಕಾಸರಗೋಡಿನ ತನಕ ಮಲೆನಾಡ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಜುಟ್ಟು ಕಾಳಿಂಗ ಸರ್ಪದ ರೋಚಕ ಕಥೆಗಳಿದೆ ಏಕೆ ? ಆದರೆ ಜುಟ್ಟು ಕಾಳಿಂಗ ಅಸ್ತಿತ್ವದಲ್ಲಿ ಮಾತ್ರ ಇಲ್ಲ !?

#ಜುಟ್ಟು_ಕಾಳಿಂಗ_ನೋಡಿದೀರಾ?! #ಮಲೆನಾಡ_ಪಶ್ಚಿಮಘಟ್ಟದ_ಜನರಲ್ಲಿರುವ_ನಂಬಿಕೆಗಳು. #ಆನಂದಪುರಂನ_ಪಾಳುಬಿದ್ದ_ಕೆಳದಿ_ಅರಸರ_ಕೋಟೆಯಲ್ಲಿ_ಜುಟ್ಟು_ಕಾಳಿಂಗದ_ಕಥೆ. #ಅರಸರ_ಕಾಲದ_ನಿದಿ_ಕಾಯುತ್ತಿದೆ_ಅಂತೆ. #ಈರೀತಿಯ_ಜುಟ್ಟು_ಕಾಳಿಂಗದ_ಕಥೆ_ಮಹಾರಾಷ್ಟ್ರದ_ರತ್ನಗಿರಿಯಿಂದ_ಕೇರಳದ_ಕಾಸರಗೋಡಿನ_ತನಕ_ಇದೆ.          ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿ

ಸಜ್ಜನ ಸಂಪನ್ನರಾದ ಸಾಗರದ ಆಹ್ಮದ್ ಆಲೀ ಖಾನ್ ಸಾಹೇಬರು 92 ವರ್ಷಗಳ ಸಂತೃಪ್ತ ಜೀವನ ನಡೆಸಿ ಇಹಲೋಕ ತ್ಯಜಿಸಿದ್ದಾರೆ (1930 ರಲ್ಲಿ ಹೊನ್ನಾಳಿಯಲ್ಲಿ ಜನಿಸಿದ್ದರು)

#ನಮ್ಮ_ಪ್ರೀತಿಯ_ಆಹ್ಮದ್_ಆಲೀ_ಖಾನ್_ಸಾಹೇಬರು #ಸಜ್ಜನ_ಸಂಪನ್ನ_ವ್ಯಕ್ತಿತ್ವದವರು. #ಪಠಾಣರಾದ_ಆಹ್ಮದ್_ಆಲೀ_ಖಾನ್_ಸಾಹೇಬರ_92_ವರ್ಷಗಳ_ಸಂತೃಪ್ತ_ಜೀವನ. https://youtu.be/aOQjyYyh23o    ಇವತ್ತು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೇ ಸಾಗರದ ಮಾಜಿ ನಗರ ಸಭಾ ಸದಸ್ಯರಾದ ದಿನೇಶ್ ಖಾನ್ ಸಾಹೇಬರು ಅಲ್ಲಾರ ಪಾದ ಸೇರಿದರು ಎಂಬ ಸುದ್ದಿ ವಾಟ್ಸಪ್ ಮಾಡಿದ್ದರು.    ಖಾನ್ ಸಾಹೇಬರ ಆತ್ಮಕ್ಕೆ ದೇವರು ಸದ್ಗತಿ - ಸ್ವರ್ಗ ಪ್ರಾಪ್ತಿ ನೀಡಲಿ ಅಂತ ಪ್ರಾಥಿ೯ಸುತ್ತಾ ಅವರಿಗೆ ಶ್ರದ್ದಾಂಜಲಿ ಆಗಿ ಬೇರೆ ಬೇರೆ ಸಂದಭ೯ದಲ್ಲಿ ಖಾನ್ ಸಾಹೇಬರ ಬಗ್ಗೆ ಬರೆದ ಲೇಖನ ಪುನಃ ಖಾನ್ ಸಾಹೇಬರ ಅಭಿಮಾನಿಗಳಿಗೆ ಪ್ರಕಟಿಸಿದ್ದೇನೆ. #ಹಿರಿಯ_ಕಾಂಗ್ರೇಸ್ಸಿಗರು_ಅಳ್ನಾವರ_ಅಡಿಕೆ_ಕಂಪನಿ_ಅಧ್ಯಕ್ಷರಾಗಿದ್ದ_ತುಂಬೆಸುಬ್ರಾಯರ_ಒಡನಾಟದಲ್ಲಿ. ಸಾಗರದಿಂದ ಎಲ್ಲಿಗೆ ಹೋಗಲೂ ಆಗ ಟ್ಯಾಕ್ಸಿ ಮಹಬಲರಾವ್ ಕಾರಿನಲ್ಲೇ ಹೋಗುತ್ತಿದ್ದರು ಅಂತ ತುಂಬೆ ಸುಬ್ರಾಯರ ಕಿರಿಯ ಮತ್ತು ಆತ್ಮೀಯ ಗೆಳೆಯರಾಗಿದ್ದ ಅಹ್ಮದ್ ಅಲೀ ಖಾನ್ ಸಾಹೇಬರು ನೆನಪು ಮಾಡಿಕೊಳ್ಳುತ್ತಾರೆ.    1952 ರಲ್ಲಿ ಹೊನ್ನಾಳಿ ಮೂಲದ ಆಹ್ಮದ್ ಅಲೀ ಖಾನ್ ಸಾಹೇಬರು ಅವರ ಬಾವ ವಾಸಿಂ ಖಾನ್ ಸಾಹೇಬರು (ಅಕ್ಕನ ಗಂಡ)ಸಾಗರದಲ್ಲಿ ಕಂಟ್ರಾಕ್ಟ್ ಆಗಿದ್ದಾಗ ಅವರ ಮುಖಾಂತರ ಸಾಗರದಲ್ಲಿ ಗುತ್ತಿಗೆದಾರರಾಗಿ ಚಿಕ್ಕ ವಯಸಲ್ಲಿಯೇ (ಹುಟ್ಟಿದ್ದು 1930) ಹೆಸರುವಾಸಿ ಆಗಿರುತ್ತಾರೆ ಹಾಗಾಗಿ ತುಂಬೆ ರಸ್ತೆ,ಮೋರಿ ಇತ

ಗಿಣ್ಣದ ಔಷದಯುಕ್ತ ಲಾಭಗಳು ಅನೇಕ, ರುಚಿಕರವಾದ ಗಿಣ್ಣದ ಹಾಲಿನ ಮೌಲ್ಯವರ್ದಿತ ಸಾವಯವ ಗಿಣ್ಣದ ಹಾಲಿನ ಪುಡಿ ಮತ್ತು ಮಾತ್ರೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

#ಗಿಣ್ಣ_ಕನ್ನಡದಲ್ಲಿ #ಜನ್ನುಪಾಲು_ತೆಲುಗಿನಲ್ಲಿ #ಕಾವಾ೯_ಮರಾಠಿ_ಮತ್ತು_ಹಿಂದಿಯಲ್ಲಿ #ಕೌವ್_ಕೊಲಸ್ಟ್ರಮ್_ಇಂಗ್ಲೀಷನಲ್ಲಿ. #ಗಿಣ್ಣದಲ್ಲಿ_ಏನೇನೆಲ್ಲ_ಇದೆ. #ಆತ್ಮಹತ್ಯೆಯೆ೦ಬ_ಹತಾಷೆ_ಮನಸ್ಸಿಂದ_ದೂರ_ಮಾಡುವ_ಶಕ್ತಿ_ಗಿಣ್ಣಕ್ಕಿದೆ. #ಆಯುರ್ವೇದದಲ್ಲಿ_ಪೀಯುಷ್_ಅಂದರೆ_ಅಮೃತ_ಎಂಬ_ಹೆಸರು_ಗಿಣ್ಣಕ್ಕೆ    ಕಿರಿಯ ಗೆಳೆಯ ಉತ್ಸಾಹಿ ಶ್ರಮ ಜೀವಿ #ಮಡವಳ್ಳಿ_ಆದರ್ಶ ನನಗಾಗಿ ಮೊನ್ನೆ ಎಮ್ಮೆ ಗಿಣ್ಣ ತಂದು ಕೊಟ್ಟಿದ್ದರು.   ಗಿಣ್ಣ ಅಂದರೆ ನನಗೆ ಅತ್ಯಂತ ಇಷ್ಟ ಇದರಲ್ಲಿ ಅನೇಕ ಬಗೆಯ ಗಿಣ್ಣ ಮಾಡುತ್ತಾರೆ.   ಭಾರತೀಯ ಆಯುರ್ವೇದದಲ್ಲಿ ಇದಕ್ಕೆ ಅಮೃತ ಎಂಬ ಸಂಸ್ಕೃತದ ಪೀಯೂಷ್ ಎಂಬ ಹೆಸರಿದೆ.   ಭಾರತೀಯರಲ್ಲಿ ಮೇಲ್ವರ್ಗದ ಕೆಲ ಜಾತಿಗಳು ಎಮ್ಮೆ ಮತ್ತು ದನದ ಗಿಣ್ಣದ ಹಾಲು ಬಳಕೆ ನಿಷೇದವಿದೆ, ಹನ್ನೊಂದು ದಿನದ ತನಕ ಆಮೆ (ಸೂತಕ ) ಎಂದು ಗಿಣ್ಣದ ಹಾಲು ಕರುಗಳಿಗೆ ಬಿಡುವ ಸಂಪ್ರದಾಯವಿದೆ, ಈ 11 ದಿನದ ಹಾಲು  ಹುಟ್ಟಿದ ಕರುಗಳಿಗೆ ತುಂಬಾ ಆರೋಗ್ಯ ವೃದ್ಧಿ ನೀಡುವ ಹಾಲು ಎಂಬುದು ಒಂದು ಕಾರಣ ಇರಬಹುದು.    ವೀರಶೈವ ಲಿಂಗಾಯಿತರಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ ಅದಕ್ಕೆ ಗಾದೆಯೂ ಇದೆ ಗಿಣ್ಣ ಮಾಡಿದರೆ ಶತ್ರು ಕೂಡ ಮಿತ್ರನಾಗಿ ಬರುತ್ತಾನೆ ಎಂಬ ಅರ್ಥವಿದೆ.   ಹೈಪ್ರೋಟೀನ್, ರೋಗ ನಿರೋದಕ ಶಕ್ತಿ, ನರ ದೌರ್ಬಲ್ಯ ಸರಿಪಡಿಸುವ, ಎಳೆಯ ಮಕ್ಕಳು ಮತ್ತು ವೃದ್ಧಪ್ಯಾದಲ್ಲಿ ದೇಹಕ್ಕೆ ಬೇಕಾದ ಶಕ್ತಿ ವೃದ್ದಿಸು

ಆನಂದಪುರಂ ಇತಿಹಾಸ ಭಾಗ-72, ರಾಷ್ಟ್ರೀಯ ಹೆದ್ದಾರಿ 206 ಆಚಾಪುರ ಸಮೀಪದಲ್ಲಿ ಕ್ರಿಶ. 1042 ರಲ್ಲಿ ಸಮೀಪದ ಅಂದಾಸುರದಲ್ಲಿ ಗೋನೇಶ್ವರ ಮತ್ತು ಸೂರ್ಯಮಾರ್ತಾಂಡ ದೇವಾಲಯ ನಿಮಿ೯ಸಿದ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸ ದೇವಾಲಯ ನಿರ್ಮಿಸಿದ ಕಮ್ಮಾರ ಚಿಕ್ಕನಿಗೆ ಭೂದಾನ ನೀಡಿದ ಶಿಲಾ ಶಾಸನ

#ಆನಂದಪುರಂ_ಇತಿಹಾಸ_ಭಾಗ_72. #ಆಚಾಪುರ_ಸಮೀಪದ_ರಾಷ್ಟ್ರೀಯ_ಹೆದ್ದಾರಿ_ಪಕ್ಕದಲ್ಲಿರುವ_ಬೃಹತ್_ಶಿಲಾ_ಶಾಸನ. #ಕ್ರಿಸ್ತಶಕ_1042_ರಲ್ಲಿ_ಸಮೀಪದ_ಅಂದಾಸುರದಲ್ಲಿ_ದೇವಾಲಯ_ನಿರ್ಮಿಸಿದ_ವಿಶ್ವಕಮ೯ರಿಗೆ_ದಾನ_ನೀಡಿದ_ಶಾಸನ. #ಎಂಟು_ಅಡಿ_ಎತ್ತರ_ನಾಲ್ಕು_ಅಡಿ_ಅಗಲದ_71_ಸಾಲುಗಳ_ಬೃಹತ್_ಶಿಲಾಶಾಸನ #ಈ_ಶಾಸನದಲ್ಲಿ_ಉಲ್ಲೇಖಿಸಿರುವ_ಆ_ಕಾಲದ_ರಾಜದಾನಿ_ಅಂದಾಸುರ_ಈಗ_ಒಂದು_ಹಳ್ಳಿ #ಶಾಸನದಲ್ಲಿರುವ_ಗೋನೇಶ್ವರ_ಮತ್ತು_ಸೂರ್ಯಮಾರ್ತಾಂಡ_ದೇವಸ್ಥಾನದ_ಕುರುಹು_ಇಲ್ಲಿಲ್ಲ.    ಆನಂದಪುರಂನಿಂದ ಶಿವಮೊಗ್ಗ ಮಾರ್ಗದಲ್ಲಿ ಆಚಾಪುರದಿಂದ ಒಂದು ಕಿ.ಮಿ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಸ್ತೆಯ ಎಡಬಾಗದಲ್ಲಿ  ಸುಮಾರು 980 ವಷ೯ದಿಂದ ಈ ಬೃಹತ್ ಶಿಲಾ ಶಾಸನ ಬಿಸಿಲು ಮಳೆಗೆ ಎದೆ ಒಡ್ಡಿ ನಿಂತಿದೆ.    ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಆಗಿ ಮೇಲ್ದರ್ಜೆಗೆ ಏರಿದೆ, ವಾಹನ ಸಂಚಾರ ಹೆಚ್ಚು, ರಸ್ತೆಯೂ ವಿಸ್ತಾರ ಆಗುತ್ತಿರುವುದರಿಂದ ಈ ಶಾಸನ ತುರ್ತಾಗಿ ಸಂರಕ್ಷಿಸಬೇಕಾಗಿದೆ.   1902 ರಲ್ಲಿ ರೈಸ್ ರವರು ಪ್ರಕಟಿಸಿದ ಎಪಿಗ್ರಾಫಿ ಕರ್ನಾಟಕದ ಸಂಪುಟದಲ್ಲಿ ಇದು ನಮೂದಾಗಿದೆ ಇನ್ನೊಂದು ವಿಶೇಷ ಅಂದರೆ ಸ್ವತಃ ರೈಸ್ ರವರೇ ಆನಂದಪುರಂಗೆ ಬೇಟಿ ನೀಡಿ ಇದನ್ನೆಲ್ಲ ದಾಖಲಿಸಿದ್ದಾರೆ.    ಆನಂದಪುರಂ ಸುತ್ತಮುತ್ತಲಿನ ಶಿಲಾಶಾಸನ ಮತ್ತು ತಾಮ್ರಪತ್ರಗಳ ದಾಖಲೆಯಲ್ಲಿ   4) ಎಪಿಗ್ರಾಫಿಯ ಕ್ರ.ಸಂ. 109. ಕ್ರಿಶ 1042 AD. ಆಚಾಪುರ ರಾ.ಹೆ. 206.8 ಅಡಿ ಎತ್ತ

ನಮ್ಮೂರ ಮೊದಲ ಸೈಕಲ್ ಶಾಪ್, 1960 ರಿಂದ 1990ರ ವರೆಗೆ ಸೈಕಲ್ ಯುಗದ ವಿಜೃಂಬಣೆ, ಸೈಕಲ್ ಶಾಪ್ ಮಾಲಿಕರಾಗಿ ಆನಂದಪುರಂ ಗ್ರಾಮ ಪಂಚಾಯಿತಿ ಸದಸ್ಯರೂ ಆದ ಸಿರಿಲ್ ಡಿಕಾಸ್ಟ್ ಜನ ಪ್ರೀತಿಯಿಂದ ಇವರನ್ನು ಕರೆಯುವುದು ಸಿರಿಲಣ್ಣ ಅಂತ

#ಆನಂದಪುರಂನ_ಮೊದಲ_ಸೈಕಲ್_ಶಾಪ್. # ಭದ್ರಾವತಿಯ_ಹನುಮಯ್ಯನವರದ್ದು #ಸೈಕಲ್_ಶಾಪ್_ಪ್ರಾರಂಭ_1960ರಿಂದ #ಜಮ೯ನ್_ದೇಶದ_ಕಾರ್ಲ್_ವೋನ್_ಡ್ರೇಯಸ್_ಸೈಕಲ್_ಸಂಶೋದಿಸಿದ್ದು. #ಆನಂದಪುರಂನ_ಸಿರಿಲ್_ಡಿಕಾಸ್ಟ್_ಸೈಕಲ್_ಶಾಪ್_ಮಾಲಿಕರಲ್ಲಿ_ಪ್ರಸಿದ್ಧರು. https://youtu.be/wYh8ftFQzi0   1817ರಲ್ಲಿ ಸೈಕಲ್ ಸಂಶೋದನೆ ಆಯಿತು, ಅದು ಜರ್ಮನ್ ದೇಶದಲ್ಲಿ.    ಕಾರ್ಲ್ ವೋನ್ ಡ್ರೇಯಸ್ ಸೈಕಲ್ ಜನಕ ಆದರೆ ಸೈಕಲ್ ಗಳು ಪ್ರಸಿದ್ದಿ ಪಡೆದದ್ದು ಮತ್ತು ಬಳಕೆಗೆ ಬಂದದ್ದು 19 ನೇ ಶತಮಾನದಲ್ಲಿ.   ಭಾರತದಲ್ಲಿ ಮೊದಲ ಸೈಕಲ್ ತಯಾರಕ ಸಂಘ 1943 ರಲ್ಲಿ ಅಸ್ತಿತ್ವಕ್ಕೆ ಬಂತು.   1956ರಲ್ಲಿ ಲೂದಿಯಾನದಲ್ಲಿ ಹಿರೋ ಸೈಕಲ್ ಉತ್ಪಾದನೆ ಪ್ರಾರಂಬಿಸಿತು, 1951ರಲ್ಲಿ ಅಟ್ಲಾಸ್‌ ಮತ್ತು ಏವನ್ ಪ್ರಾರಂಭ ಆದರೆ 1949 ರಲ್ಲಿ ಹರ್ಕುಲಿಸ್ ತಯಾರಿಕೆ ಪ್ರಾರಂಭ ಆಯಿತು.   ಅದಕ್ಕೂ ಮೊದಲು ಸೈಕಲ್ ಗಳು ಇಂಗ್ಲೇಂಡ್ ದೇಶದಿಂದ ಆಮದಾಗುತ್ತಿತ್ತು.   ಆನಂದಪುರಂನಲ್ಲಿ ಮೊದಲ ಸೈಕಲ್ ಶಾಪ್ ಪ್ರಾರಂಬಿಸಿದವರು ಭದ್ರಾವತಿಯ ಹನುಮಯ್ಯನವರು, ಎರಡನೆ ಸೈಕಲ್ ಶಾಪ್ ಸಿರಿಲಣ್ಣನವರದ್ದು, ಮೂರನೆಯದು ದಾಸಕೊಪ್ಪದ ರುದ್ರಪ್ಪನವರಂತೆ ನಂತರದ ಎರಡನೆ ಸೈಕಲ್ ಶಾಪ್ ಹನುಮಯ್ಯರದ್ದು     ನಂತರ ಭಾಷಾ ಸಾಹೇಬರು ಅವರ ನಂತರ ಲಾರೆನ್ಸ್ ನಂತರ ಆರೀಪ್ ಸೈಕಲ್ ಶಾಪ್ ಪ್ರಾರಂಬಿಸಿದರು.  ಸಿರಿಲ್ ಡಿಕಾಸ್ಟ್ ರ ಸೈಕಲ್ ಶಾಪ್ ಈಗಿನ ಡಾಕ್ಟರ್ ಪ್ರಭುರವರ ಕ್ಲಿನಿಕ್ ಎದರು ಇತ್ತು

ಮಲೆನಾಡಿನ ಕೈ ಮದ್ದೆಂಬ ಗೊಸುಂಬೆಯ ವಿಷ ಪ್ರಾಷನ ಈಗಲೂ ಜನರ ನಂಬಿಕೆಯಿ೦ದ ಅಥವ ಮೂಡ ನಂಬಿಕೆಯಿಂದ ಪ್ರಚಲಿತವಾಗಿ ಮುಂದುವರಿದಿದೆ

#ಮಲೆನಾಡಿನಲ್ಲಿ_ಹೊಟ್ಟೆಗೆ_ಮದ್ದು_ಹಾಕುವರು_ಇದ್ದಾರಾ? #ಗೊಸು೦ಬೆಯಲ್ಲಿ_ಆ_ವಿಷ_ಇದಿಯಾ? #ಹೊಟ್ಟೆಯ_ಮದ್ದು_ತೆಗೆಯುವ_ಪಂಡಿತರು_ಅಸಲಿಯೇ ? #ಈ_ಮದ್ದು_ಹಾಕಲೇ_ಬೇಕೆಂಬ_ರೂಡಿ_ಇದಿಯಾ? #ಇದು_ಈಗಲೂ_ಜನ_ನಂಬುವ_ಮೂಡನಂಬಿಕೆಯಾ ? https://m.facebook.com/story.php?story_fbid=3048815318730549&id=100008063313056   ಗೋಸುಂಬೆ ಸಾಯಿಸಿ ಅದರ ಬಾಲಕ್ಕೆ ಹಗ್ಗ ಕಟ್ಟಿ ನೇತಾಡಿಸಿಡಬೇಕು ಕೆಲ ದಿನದಲ್ಲಿ ಅದು ಕೊಳೆತು ಅದರ ಬಾಯಿ೦ದ ತೊಟಕುವ ರಸಗಳು ನೇರವಾಗಿ ಕೆಳಗೆ ಬಾಳೆ ಎಲೆಯಲ್ಲಿ ಹರಡಿಟ್ಟ ಮುಷ್ಟಿಯಷ್ಟು ಅಕ್ಕಿ ಮೇಲೆ ಬೀಳುವಂತೆ ಮಾಡಬೇಕು, ಪೂಣ೯ ಪ್ರಮಾಣದ ರಸ ಸ್ರವಿಸಿದ ನಂತರ ಈ ಅಕ್ಕಿ ಒಣಗಿಸಿ ನಂತರ ಹಿಟ್ಟು ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು.    ಯಾರ ಮೇಲಾದರು ಈ ಮದ್ದು ಪ್ರಯೋಗಿಸಬೇಕಾದರೆ ಒಂದು ಹತ್ತಿಯ ದೀಪದ ಬತ್ತಿಯಲ್ಲಿ ಸಂಗ್ರಹಿಸಿದ ಹಿಟ್ಟಲ್ಲಿ ಬತ್ತಿ ಅದ್ದಿ ಅದನ್ನ ಕಾಪಿ, ಟೀಯಲ್ಲಿ ಅಥವ ಊಟ, ಉಪಹಾರದಲ್ಲಿ ಅದ್ದಿದರೆ ಆಯಿತು ಅದನ್ನ ತಿಂದವರು ಕ್ರಮೇಣ ಜೀಣ೯ ಶಕ್ತಿ ಕಳೆದು ಕೊಳ್ಳುತ್ತಾರೆ.    ಊಟ ಸೇರುವುದಿಲ್ಲ ದೇಹ ಕೃಷವಾಗುತ್ತೆ, ವೈದ್ಯರ ಹತ್ತಿರ ಹೋದರೆ ಏನೂ ಕಾಯಿಲೆ ಇಲ್ಲ ಅಂತಾರೆ,ದಿನದಿಂದ ದಿನಕ್ಕೆ ಆರೋಗ್ಯ ಬಿಗಡಾಯಿಸಿ ಸಾವು ಬರುತ್ತೆ ಇದೊಂದು ಥರ ಸ್ಲೋ ಪಾಯಿಸನ್ ಇದ್ದಂತೆ ಅಂತ ಅವರು ವಿವರಿಸುತ್ತಿದ್ದರು ಹಾಗಾದರೆ ಇದಕ್ಕೆ ಪರಿಹಾರ ಅಂದೆ? .   ಅವರ ಪ್ರಕಾರ ಹಳ್ಳಿಗಳಲ್ಲಿ ಇದ

ಸುವರ್ಣ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿವಮೊಗ್ಗ ಜಿಲ್ಲೆಗೆ ಬಂದ ನೂತನ ಪ್ರಾಥಮಿಕ ಶಾಲೆಯ ಸಿಂಹಪಾಲು ನನ್ನ ಆನಂದಪುರಂ ಕ್ಷೇತ್ರಕ್ಕೆ ಪಡೆದುಕೊಂಡ 25 ವರ್ಷದ ಹಿಂದಿನ ಸವಿ ನೆನಪು, ಕೆಲ ಶಾಲೆ ಮುಚ್ಚಿರುವ ಕಹಿ ನೆನಪು

#ಇವತ್ತಿನ_ದಿನಪತ್ರಿಕೆಯ_ವರದಿ_27ವಷ೯ದ_ಹಿಂದಿನ_ನೆನಪು_ತರಿಸಿತು. #ಸ್ವಾತಂತ್ತ್ಯೋತ್ಸವದ_ಸುವರ್ಣಮಹೋತ್ಸವದ_ಪ್ರಾಥಮಿಕ_ಶಾಲೆ_ಬಾಗಿಲು_ಹಾಕಿದೆ.   1997 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 50 ನೇ ಆಚರಣೆ ಆಗಿದ್ದರಿಂದ #ಸುವರ್ಣ_ಸ್ವಾತಂತ್ಯೋತ್ಸವದ ಸಡಗರವೇ ಆಗಿತ್ತು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿಶೇಷ ಕಾಯ೯ಕ್ರಮಗಳು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಗಳಿಗೂ ಪ್ರೇರಣೆ ನೀಡಿತ್ತು.   ಆಗ ಉತ್ಸಾಹಿ ಜಿಲ್ಲಾ ಪಂಚಾಯತನ ಸದಸ್ಯರಾಗಿದ್ದ ನಾವೆಲ್ಲ ಸೇರಿ ಜಿಲ್ಲಾ ಪಂಚಾಯತ್ ನಲ್ಲಿ ರಾತ್ರಿ 12ಕ್ಕೆ ವಿಶೇಷ ಸಭೆ ಆಯೋಜಿಸಿದ್ದೆವು, ಈಸೂರಿನಿಂದ ಸ್ವಾತಂತ್ರ ಜ್ಯೋತಿಯನ್ನು ತಂದಿದ್ದೆವು.   ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಸುವರ್ಣ ಸ್ವಾತಂತ್ಯೋತ್ಸವದ ಸವಿ ನೆನಪಿಗಾಗಿ ಪ್ರಾಥಮಿಕ ಶಾಲಾ ಸೌಲಭ್ಯವಿಲ್ಲದ ಹಳ್ಳಿಗೆ ಹೊಸ ಶಾಲೆ ಮತ್ತು ಅದಕ್ಕೆ ಏಕ ಕೊಠಡಿ ಕಟ್ಟಡ ಮಂಜೂರು ಮಾಡಲು ಮುಂದಾಗಿತ್ತು.   ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಅವತ್ತಿನ 27 ಸದಸ್ಯರ ಕ್ಷೇತ್ರಕ್ಕೆ ಒಂದರಂತೆ 27 ಹೊಸ ಶಾಲೆಗೆ ಪ್ರಸ್ತಾವನೆ ಕೇಳಿದ್ದರು.   ಆದರೆ ಹಳ್ಳಿಗಳಲ್ಲಿ ಶಾಲೆಗೆ ಜಾಗ ಹೊಂದಿಸುವುದು, ಖಾಸಾಗಿ ಶಾಲಾ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗೆ ಜನ ಆಸಕ್ತಿ ವಹಿಸುವುದಿಲ್ಲ ಎಂದು ಈ ಯೋಜನೆ ಟೇಕ್ ಆಫ್ ಆಗಲಿಲ್ಲ ಆದರೆ ನನ್ನ ಕ್ಷೇತ್ರದಲ್ಲಿ ಹೊಸ ಶಾಲೆ ಕಾರ್ಯಾರಂಭ ಮಾಡಿದ್ದ ಯಶಸ್ಸಿನಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿ

ಗೃಹ ಬಳಕೆಗೆ ಬೇಕಾದ ಅರಿಶಿಣದ ಹುಡಿ ನಾವೇ ತಯಾರಿಸ ಭಾರದೇಕೆ?

#ದಕ್ಷಿಣ_ಭಾರತೀಯರ_ನಿತ್ಯ_ಅಡುಗೆಗೆ_ಬೇಕೇ_ಬೇಕು_ಅರಿಶಿಣ  #ಅರಿಶಿಣ_ಔಷದಿಯೂ_ಹೌದು #ಮಾರುಕಟ್ಟೆಯಲ್ಲಿರುವ_ಅರಿಶಿಣಪುಡಿ_ನಂಬಲಹ೯_ಗುಣಮಟ್ಟ_ಹೊಂದಿಲ್ಲ.   ಎಷ್ಟೇ ಗುಣಮಟ್ಟದ ಅರಿಶಿಣ ಪುಡಿ ಅಂತ ಖರೀದಿಸಿ ತಂದರೂ ಅದರಲ್ಲಿ ಒಂದಲ್ಲ ಒಂದು ಕೊರತೆ ಇದ್ದಿದ್ದೇ ಆದ್ದರಿಂದ ಕಳೆದ ವರ್ಷದಿಂದ ನಾವೇ ಅರಿಶಿಣದ ಪುಡಿ ಮಾಡಿ ಕೊಂಡು ಬಳಸುವ ಅನುಕೂಲದ ದಾರಿ ಮಾಡಿಕೊಂಡಿದ್ದೇನೆ.    ಹಸಿ ಅರಿಶಿಣ ಮಣ್ಣಿಂದ ತೆಗೆದು ತೊಳೆದು ಅದರ ಬೇರು ಇತ್ಯಾದಿ ನಿವಾರಿಸಿ, ಸಣ್ಣದಾಗಿ ತುಂಡರಿಸಿ ಬಿಸಿಲಲ್ಲಿ ಒಣಗಿಸಿ ನಂತರ ಬೇಕಾದಾಗೆಲ್ಲ ಅರಿಷಿಣದ ಹುಡಿ ಮಾಡಿಕೊಳ್ಳುವುದು.  ಅರಿಶಿಣದ ಹುಡಿ ವಾಣಿಜ್ಯ ಉದ್ದೇಶಕ್ಕಾಗಿ ಮಾಡುವವರು ಅರಿಶಿಣದ ಕೊಂಬೆ ಬೇಯಿಸಿ ನಂತರ ಒಣಗಿಸಿ ಹಿಟ್ಟು ಮಾಡುತ್ತಾರೆ ಆದರೆ ಈ ಮಾದರಿಯಲ್ಲಿ ಬೇಯಿಸಿದ ನೀರಲ್ಲಿ ಅರಿಶಿಣದ ಔಷದಿ ಗುಣಗಳು ಹೊರ ಹೋಗುತ್ತದೆ ಎಂಬ ಮಾತಿದೆ.   ಅರಿಶಿಣ ಹಸಿಯಾಗಿ ತುಂಡರಿಸಿ ಒಣಗಿಸಿ ಅರಿಶಿಣದ ಪುಡಿ ಮಾಡುವ ಮಾದರಿಯೇ ಸರಿ ಅಂತ ನನ್ನ ಅನುಭವ.   ಈ ವರ್ಷಕ್ಕೆ ಸಾಕಾಗುವಷ್ಟು ಅರಿಶಿಣದ ಕೊಂಬು ಕತ್ತರಿಸಿ ಮನೆಯಾಕೆಗೆ ಕೊಟ್ಟಿದ್ದೇನೆ ನೋಡಿ.

ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಸಮೀಪದ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿ, ಹೊಸನಗರ ತಾಲ್ಲೂಕಿನ ಬಿದನೂರು ನಗರದ ಅರಮನೆಕೊಪ್ಪದಲ್ಲಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ರಾಜಾರಾಮರಿಗೆ ಕೆಳದಿ ರಾಣಿ ಚಿನ್ನಮ್ಮ ಆಶ್ರಯ ನೀಡಿದ್ದ ರಹಸ್ಯ ಅರಮನೆ, ನಗರದಲ್ಲಿ ರಾಜಾರಾಮರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ಇತಿಹಾಸ ಆಸಕ್ತರಿಗೆ ಕೈ ಬೀಸಿ ಕರೆಯುತ್ತಿದೆ.

#ಇವತ್ತು_ಛತ್ರಪತಿ_ಶಿವಾಜಿ_ಮಹಾರಾಜರ_ಜನ್ಮ_ದಿನ. #ಶಿವಮೊಗ್ಗ_ಜಿಲ್ಲೆಗೂ_ಶಿವಾಜಿ_ವಂಶಸ್ಥರಿಗೂ_ಇದೆ_ಸಂಬಂಧ. #ಶಿವಾಜಿ_ಮಹಾರಾಜರ_ತಂದೆ_ಸಮಾದಿ_ಹೊದಿಗೆರೆಯಲ್ಲಿದೆ. #ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮರು_ಆಶ್ರಯ_ಪಡೆದ_ರಹಸ್ಯ_ಅರಮನೆ_ಬಿದನೂರಿನ_ಅರಮನೆಕೊಪ್ಪದಲ್ಲಿದೆ. #ಛತ್ರಪತಿ_ರಾಜಾರಾಮರು_ಬಿದನೂರು_ನಗರದಲ್ಲಿ_ನಿರ್ಮಿಸಿರುವ_ಪಾರ್ವತಿ_ಮತ್ತು_ಸುಬ್ರಮಣ್ಯ_ದೇವಾಲಯ   19- ಪೆಬ್ರುವರಿ-1630 ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚಾರಣೆ ದೇಶದಾದ್ಯಂತ ವಿಜೃ೦ಬಣೆಯಿಂದ ನಡೆಯುತ್ತಿದೆ.   ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಈಗ ಜಿಲ್ಲಾ ಪುನರ್ ವಿಂಗಡನೆಯಲ್ಲಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಇದೆ.   ಇದು ಈಗ ರಾಷ್ಟ್ರೀಯ ಸ್ಮಾರಕ, ಇಲ್ಲಿಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ, ಶರದ್ ಪವಾರ್ ಅಂತವರೆಲ್ಲ ಬೇಟಿ ನೀಡಿದ್ದಾರೆ, ಮರಾಠರಿಗೆ ಇದು ತುಂಬಾ ಪುಣ್ಯ ಸ್ಥಳ ಆಗಿದೆ.   ಷಹಾಜಿ ರಾಜೆ ಬೊಸಲೆ ಅವರ ಮೂಲ ಹೆಸರು ಅವರು ಇಲ್ಲಿ ಶಿಕಾರಿಗೆ ಹೋದಾಗ ಕುದುರೆಯಿಂದ ಜಾರಿ ಬಿದ್ದು ದಿನಾಂಕ 23- ಜನವರಿ -1664 ರಲ್ಲಿ ಮೃತರಾದರೆಂದು ಹೊದಿಗೆರೆಯ ಸಮಾದಿಯಲ್ಲಿ ನಿರ್ಮಿಸಿದ್ದಾರೆ, ಈ ಸಮಾದಿ ನಿರ್ವಹಣೆಗೆ ಆದಿಲ್ ಷಹಾ ಎರೆಡು ಹಳ್ಳಿಗಳನ್ನು ಉಂಬಳೆ ನೀಡಿದ ಇತಿಹಾಸ ಇದೆ.   ಸ್ಥಳಿಯ ಜನಪದದಲ್ಲಿ ಬೇರೆಯ ಕಥೆಯೂ ಇದೆ ಅವರಿಗ

21 ಜನವರಿ 2004 ರಿಂದ 31 ಜನವರಿ 2004 ಹನ್ನೊಂದು ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯಂತ ನಾನು ನಡೆಸಿದ ಸಾಗರ ತಾಲ್ಲೂಕ್ ಅಭಿವೃದ್ದಿಗಾಗಿ 360 ಕಿ ಮಿ ಜನ ಜಾಗೃತಿ ಪಾದಯಾತ್ರೆಯ 18 ನೇ ವರ್ಷದ ನೆನಪುಗಳು

#ತುಮರಿ ಸೇತುವೆ ನಿರ್ಮಾಣಕ್ಕಾಗಿ #ಶಿವಮೊಗ್ಗ ತಾಳಗುಪ್ಪ ರೈಲು ಮಾಗ೯ ಬ್ರಾಡ್ಗೇಜಿಗಾಗಿ ಹಣ ಬಿಡುಗಡೆ #ಹಂದಿಗೋಡು ಕಾಯಿಲೆ ಪೀಡಿತರಿಗೆ ಪುನರ್ವಸತಿ. #ಜೋಗ ಜಲಪಾತ ಪ್ರವಾಸಿ ತಾಣದ ಅಭಿವೃದ್ದಿಗಾಗಿ #ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ ರೈಲು ನಿಲ್ದಾಣ ಎಂದು ಪುನರ್ ನಾಮಕರಣಕ್ಕಾಗಿ ಒತ್ತಾಯಿಸಿ  2004ರಲ್ಲಿ ನಾನು ನಡೆಸಿದ ಜನ ಜಾಗೃತಿಗಾಗಿ ಪಾದಯಾತ್ರೆ.    21- ಜನವರಿ -2004ರಿಂದ 31- ಜನವರಿ -2004 ರ ವರೆಗೆ 11 ದಿನಗಳ ಕಾಲ ಸಾಗರ ತಾಲ್ಲೂಕಿನಾದ್ಯ೦ತ ಮೇಲಿನ ಬೇಡಿಕೆಗಳ ಇಟ್ಟುಕೊಂಡು ಪಾದಯಾತ್ರೆ ಮೂಲಕ ಜನಜಾಗೃತಿ ಮೂಡಿಸಿದ್ದು ಇವರೆಗೆ ಯಾರು ಮುರಿಯದ ದಾಖಲೆ ಆಗಿ ಉಳಿದಿದೆ.   ಸುಮಾರು 360 ಕಿ.ಮಿ. ಆನಂದಪುರಂನ ಮುರುಘಾ ಮಠದಿOದ (ಆಚಾಪುರ ಗ್ರಾಮ ಪಂಚಾಯತನಿಂದ)ಪ್ರಾರ೦ಬಿಸಿ ಯಡೇಹಳ್ಳಿ, ಆನಂದಪುರಂ, ಹೊಸೂರು ಗ್ರಾಮ ಪಂಚಾಯತ ನಿಂದ ಗೌತಮಪುರ ಗ್ರಾಮ ಪಂಚಾಯತ, ಅಲ್ಲಿ೦ದ ಹಿರೇಬಿಲ ಗುಂಜಿ, ತ್ಯಾಗತಿ೯, ಪಡಗೋಡು, ಕೆಳದಿ, ಮಾಸೂರು, ಹಿರೇ ನೆಲ್ಲೂರು, ಕಾಗೋಡು, ಸೈದೂರು,ಕಾನ್ಲೆ, ಶಿರವಂತೆ, ಯಡ ಜಿಗಳೆಮನೆ, ಖಂಡಿಕ, ತಾಳಗುಪ್ಪ, ತಲವಾಟ, ಕಾಗ೯ಲ್, ಜೋಗ, ಅರಲ ಗೋಡು, ಕೋಗಾರ್, ಸಂಕಣ್ಣ ಶಾನು ಬೋಗ, ಹೊಸ ಕೊಪ್ಪ, ತುಮರಿ, ಹುಲಿ ದೇವರ ಬನ, ಬೇಸೂರು, ಆವಿನಳ್ಳಿ, ಹಳೆ ಇಕ್ಕೆರಿ, ಬೀಮನ ಕೋಣೆ, ಹೆಗ್ಗೋಡು, ಉಳ್ಳುರು ಮಾಗ೯ವಾಗಿ ಸಾಗರ ತಹಸಿಲ್ದಾರ್ ಕಚೇರಿ ತಲುಪಿ ಮನವಿ ನೀಡಿದ ಕಾಯ೯ಕ್ರಮ ಇದಾಗಿತ್ತು.    ಈ ಪಾದ ಯಾತ್ರೆಗೆ ಪ್ರೇರಣ

ಕೆಳದಿ ರಾಜ ವೆಂಕಟಪ್ಪ ನಾಯಕರನ್ನು ಬೇಟಿ ಮಾಡಿದ ಇಟಲಿ ಪ್ರವಾಸಿ ಡೊಲ್ಲಾವೆಲ್ಲಾರ ಬಗ್ಗೆ ಖ್ಯಾತ ಸಂಶೋದಕ ಸಾಹಿತಿ ಗಜಾನನ ಶಮ೯ರು ಬರೆದ ಅಭಿಪ್ರಾಯ, ನನ್ನ ಕಾದಂಬರಿ "ಬೆಸ್ತರರಾಣಿ ಚಂಪಕಾ" ಚರ್ಚೆ ಸಂದರ್ಭದಲ್ಲಿ

ದನ್ಯವಾದಗಳು ಗಜಾನನ ಶಮಾ೯ರಿಗೆ, ನಮ್ಮಲ್ಲಿನ ಬಹುತೇಕರು ಸಂಶೋದಕರಾಗಿ ಸಂಶೋಧನೆ ಮಾಡಿದ್ದೇವೆ ಎನ್ನುವುದು ಈ ರೀತಿ ಲಂಡನ್ ಮ್ಯೂಸಿಯಂನಲ್ಲಿ ಸಂರಕ್ಷಿಸಲ್ಪಟ್ಟ ವಿದೇಶಿ ಪ್ರವಾಸಿಗಳ ಪತ್ರಗಳ ಮತ್ತು ಚಿತ್ರಗಳನ್ನು ಆದಾರವಾಗಿಟ್ಟು ಮಾತಾಡುತ್ತಾರೆ ಬರೆಯುತ್ತಾರೆ ಆದರೆ ಕಣ್ಣೆದುರು ಇರುವ, ಕೈಗೆಟುಕುವ ದೂರದಲ್ಲಿರುವ ಸ್ಮಾರಕ ಮತ್ತು ಜನಪದದಲ್ಲಿರುವ ಕಥೆ ಹಾಡುಗಳನ್ನು ಮಾತ್ರ ಒಪ್ಪುವುದೇ ಇಲ್ಲ.   ಇದು ನಮ್ಮ ಊರಿನ ಜನರ ಮಧ್ಯದಲ್ಲಿ ಇರುವ ಸ್ಮಾರಕ, ಪ್ರಚಲಿತ ಕಥೆ, ಲಾವಣಿ ಮತ್ತು ಚಂಪಕಾಳ ವಂಶಸ್ಥರ ಸತ್ಯ ಕಥೆ ಆದರೂ ನನಗೆ ವಿದೇಶಿ ಪ್ರವಾಸಿಗಳು ಬರೆದ ಪತ್ರಗಳನ್ನು ಆದರಿಸಿ ಕುಟುಕುವ ನಮ್ಮ ಸಂಶೋದಕರಿಗೆ ಹೆದರಿ ನನ್ನ ಕಾದಂಬರಿ ಕಾಲ್ಪನಿಕ ಅಂತ ಬರೆದೆ.  ಈಗಲೂ ಸಂಶೋದನೆ ಮಾಡುವವರಿಗೆ ಕುಂಬಳೆ ಕಾಸರಗೋಡಿನ ಅನೇಕ ಮನೆಯಲ್ಲಿರುವ ತಾಮ್ರಪತ್ರಗಳು ಹೊಸ ಇತಿಹಾಸ ಹೇಳುತ್ತದೆ. ಗಜಾನನ ಶರ್ಮರು ನನ್ನ ಕಾದಂಬರಿ "ಬೆಸ್ತರ ರಾಣಿ ಚಂಪಕಾ" ಬಗ್ಗೆಯ ಚರ್ಚೆಯಲ್ಲಿ ಅವರು ಪ್ರಕಟಿಸಿರುವ ಈ ಲೇಖನ ಓದಿ. #ರಾಣಿಚೆನ್ನಭೈರಾದೇವಿ #ಕಾನೂರು #ಕೋಟೆ #ಗೇರುಸೊಪ್ಪೆ #ರೈನಾದಿಪೆಮೆಂಟಾ ರಾಣಿ ಚೆನ್ನಭೈರಾದೇವಿ, ಹಿರಿಯ ವೆಂಕಟಪ್ಪ ನಾಯಕ ಮತ್ತು ರಾಣಿ ಅಬ್ಬಕ್ಕಳ ಕುರಿತು ಅಸಂಬದ್ಧಗಳನ್ನು ಬರೆದ ಪೀಟ್ರೋ ಡೆಲ್ಲಾವಲ್ಲೆಯೆಂಬ ವಿಕ್ಷಿಪ್ತ ಮನಸ್ಸಿನ ಪ್ರವಾಸಿ...     ನನ್ನ ಸ್ನೇಹಿತರಾದ ಸಾಗರದ ಸಜ್ಜನ, ಗಂಗಾಧರ ನಾಯಕರು  ಸೃಜನಶೀಲ ಲೇಖಕ ಅರುಣ ಪ್ರಸಾದರ