Skip to main content

ಜನ ಮರೆತ ಇನಾಂದಾರರು ಮತ್ತು ಕಳೆದು ಹೋದ ಭೂದಾನದ ಶಾಲಾ ಜಮೀನು

#ತ್ಯಾಗತಿ೯ಯ ಒಂದು ಕಾಲದ ಸಮಾಜ ಸುಧಾರಕ ಕೊಡುಗೈ ದಾನಿ ಇನಾಂದಾರ್ ಗುರುಮೂತಿ೯ ರಾಯರು#
   1974-75ರಲ್ಲಿ ನಮ್ಮ ತಂದೆ ವಜಿ೯ನಿಯಾ ತಂಬಾಕು ಬೆಳೆದಿದ್ದರು ಸದರಿ ಕಂಪನಿ ಆನಂದಪುರO ಮತ್ತು ತ್ಯಾಗತಿ೯ ಭಾಗದಲ್ಲಿನ ಅನೇಕ ರೈತರೊಂದಿಗೆ ಬೆಳೆ ಖರೀದಿಸುವ ಒಪ್ಪ೦ದ ಮಾಡಿ ಬ್ಯಾಂಕಿನಿಂದ ಬೆಳೆ ಸಾಲ ಮತ್ತು ತಂಬಾಕು ಹದ ಮಾಡುವ ಮನೆ (ಬ್ಯಾರನ್) ಗೆ ರೈತರ ಜಮೀನು ಅಡಮಾನ ಮಾಡಿ ಸಾಲ ಕೊಡಿಸಿತ್ತು ಒಂದೇ ವಷ೯ದಲ್ಲಿ ಸದರಿ ಸ೦ಸ್ಥೆ ನಾಪತ್ತೆ ಆದ್ದರಿಂದ ಸಾಲ ಮಾಡಿದ ರೈತರು ಹೈರಾಣ ಆದರು ಹಾಗಾಗಿ ಸಕಾ೯ರಕ್ಕೆ ಸಾಲ ಮನ್ನಕ್ಕಾಗಿ ನಷ್ಟ ಮಾಡಿದ ಕಂಪನಿ ವಿರುದ್ಧ ಕ್ರಮಕ್ಕಾಗಿ ಸಂಘಟಿತರಾಗಿ ಹೋರಾಟ ಪ್ರಾರಂಬಿಸಿದ್ದರು ಈ ಸಂಬಂದದ ಸಭೆಗಳು ಆನಂದಪುರದ ನಮ್ಮ ಮನೇಲಿ ನಡೆಯುತ್ತಿತ್ತು.
  ಆಗ ತ್ಯಾಗತಿ೯ ಭಾಗದಿಂದ ಗುರುಮೂತಿ೯ ರಾಯರು, ಬರೂರು ಸದಾಶಿವಪ್ಪ ಗೌಡರು, ಬರೂರು ಬಂಗಾರಪ್ಪನವರು ಬರುತ್ತಿದ್ದರು ಆಗ ನಾನು 5ನೇ ತರಗತಿ ಮತ್ತು ತಂಬಾಕಿನ ಗಿಡದ ನಸ೯ರಿ ಕೆಲಸ, ತಂಬಾಕು ಹದ ಮಾಡುವುದು ಗ್ರೇಡ್ ಮಾಡುವುದರಲ್ಲಿ ಎಕ್ಸ್ಪಟ್೯ ಆಗಿದ್ದೆ.
   ಮುಂದೆ 2005ರಲ್ಲಿ ಈ ವಜಿ೯ನಿಯ ಕ೦ಪನಿಯ ಮಾಲಿಕರ ಬೇಟಿ ಮಾಡುವ ಸಂದಭ೯ ಹೈದ್ರಾಬಾದ್ ನಲ್ಲಿ ಬಂದಿತ್ತು ಆಗ ಅವರಲ್ಲಿ ನಮ್ಮ ತಂದೆ ನಿಮ್ಮ ಕಂಪನಿ ಕರಾರಿನ ಪ್ರಕಾರ ಒಂದು ವಷ೯ ತಂಬಾಕು ಬೆಳೆದಿದ್ದು ಮರುವಷ೯ ನೀವು ಕರಾರಿನ ಪ್ರಕಾರ ರೈತರಿಗೆ ಸಹಕರಿಸದಿಂದ ನಷ್ಟ ಆದ ಬಗ್ಗೆ ವಿವರಿಸಿದೆ, ಇಂದಿರಾ ಗಾಂಧಿಯವರ ನಿಕಟವತಿ೯ ಆಗಿದ್ದ ಅನೇಕ ಬಾರಿ ಸಂಸದ ಸದಸ್ಯರಾಗಿದ್ದ ಅವರು ಅದಕ್ಕೆ ಕಾರಣ ತಿಳಿಸಿದರು ಇವರು ಭಾರತದಿಂದ ರಷ್ಯಾಕ್ಕೆ ದೊಡ್ಡ ಪ್ರಮಾಣದಲ್ಲಿ ಸಿಗರೇಟು ರಪ್ತು ಮಾಡುವವರು, ರಷ್ಯಾದಲ್ಲಿ ಬಂಡುಕೋರರ ಕ್ರಾ೦ತಿ ಅದರಿ೦ದ ನಡೆದ ಆಂತರಿಕ ಯುದ್ಧದಲ್ಲಿ ಇವರ ಸಿಗರೇಟು ತುಂಬಿದ ಕಂಟೈನರ್ ಗಳು ಯಾರದೊ ಪಾಲಾಗಿ ದೊಡ್ಡ ನಷ್ಟದಿಂದ ಕನಾ೯ಟಕದಲ್ಲಿ ರೈತರ ಜೊತೆಯ ಖರೀದಿ ಒಪ್ಪ೦ದ ನಿಂತಿತ್ತು ಅಂತ ತಿಳಿಸಿದ್ದರು ಇದನ್ನ ಕೇಳಲು ನಮ್ಮ ತಂದೆ ಆಗಿ ಎಲ್ಲಾ ಹೋರಾಟಗಾರರು ಇಹಲೋಕ ತ್ಯಜಿಸಿದ್ದರು.
   ಆಗ ಈ ಹೋರಾಟಕ್ಕೆ ನನ್ನ ಸಹೋದರ ನಾಗರಾಜ್ ಅದ್ಯಕ್ಷರಾಗಿ ಕಾನೂನು ಸಲಹೆಗಾರರಾಗಿ ಸಾಗರದ ಖ್ಯಾತ ವಕೀಲರಾದ ಕೆ.ಟಿ.ಶೆಟ್ಟರು ಸಮಾವೇಶ ಇತ್ಯಾದಿ ಅಂತ ಒಡಾಡುತ್ತಿದ್ದರು ಈ ಹೋರಾಟಕ್ಕೆ ಆಗ ವಿರೋದ ಪಕ್ಷದ ನಾಯಕರಾದ ದೇವೇಗೌಡರು, ರೈತ ಮುಖಂಡರಾದ ನಂಜುಂಡ ಸ್ವಾಮಿ ಹೆಚ್ಚು ಸಹಕಾರ ನೀಡಿದ್ದರು (ದೇವೇಗೌಡರು ಆಗ Post Card ನಲ್ಲಿ ಸ್ವತಃ ಬರೆಯುತ್ತಿದ್ದ ಪತ್ರ ನಮ್ಮ ಸಂಗ್ರಹದಲ್ಲಿದೆ).
  ಇದೆಲ್ಲ ನೆನಪಾಗಿದ್ದು ತ್ಯಾಗತಿಯಲ್ಲಿ ಗುರುಮೂತಿ೯ ರಾಯರು ಶಾಲೆ ಪ್ರಾರಂಬಿಸಿ ಅದಕ್ಕೆ 20 ಎಕರೆ ದಾನ ನೀಡಿದ ಭೂಮಿ ಕಳೆದು ಹೋಗಿದೆ ಅಂತ ಹುಡುಕಿ ಕೊಡಿ ಅಂತ ಚಳವಳಿ ಪ್ರಾರಂಬಿಸಿದ್ದಾರೆ ಸ್ಥಳಿಯ ಯುವಕರು ಅಲ್ಲಿ ಗುರುಮೂತಿ೯ ರಾಯರ ಹೆಸರು ಮುನ್ನೊಲೆಗೆ ಬಂದಿದೆ.
  ನಾನು ಜಿ.ಪಂ.ಸದಸ್ಯನಾಗಿದ್ದಾಗ ಈ ಊರು ನನ್ನ ವ್ಯಾಪ್ತಿಗೆ ಬಂದಿತ್ತು ಆಗಲೂ ಈ ವಿಚಾರ ಆಗಾಗ್ಗೆ ಪ್ರಸ್ತಾಪನೆ ಆಗಿ ಹಾಗೆ ಮಲಗಿ ಬಿಡುತ್ತಿತ್ತು ಕಾರಣ ಶಾಲಾ ಸಮಿತಿ ಸಿಬ್ಬOದಿ ಮತ್ತು ಅತಿಕ್ರಮದಾರರಲ್ಲಿ ಒಳ್ಳೆ ಹೊಂದಾಣಿಕೆ ಇದ್ದಿದ್ದು.
   ಇನಾಂದಾರ್ ಗುರುಮೂತಿ೯ ರಾಯರಿಗೆ ಮೂವರು ಹೆಣ್ಣು ಮಕ್ಕಳು ಮಾತ್ರ ಈಗ ಅವರೆಲ್ಲ ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಗುರುಮೂತಿ೯ ರಾಯರು ಅತ್ಯಂತ ಹಿಂದುಳಿದ ತ್ಯಾಗತಿ೯ಯ ಬಡಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತಮ್ಮ ಮನೆಯಲ್ಲೇ ಶಾಲೆ ಪ್ರಾರಂಬಿಸುತ್ತಾರೆ ನಂತರ ತಮ್ಮ 20 ಎಕರೆ ಜಮೀನು ದಾನಪತ್ರ ಮಾಡಿ ಸಮಿತಿಗೆ ಹತ್ತಾಂತರಿಸುತ್ತಾರೆ ಇದು ಈಗ ಈ ಊರಿನ ಕೇಂದ್ರ ಸ್ಥಾನದ ಪ್ರತಿಷ್ಟಿತ ಶಾಲೆ ಆಗಿದೆ ಆದರೆ ಗುರುಮೂತಿ೯ ರಾಯರು ನೀಡಿದ 20 ಎಕರೆಯಲ್ಲಿ 10 ಎಕರೆ ಮಾತ್ರ ಶಾಲಾ ಬೌOಡರಿ ಆಗಿದೆ ಉಳಿದ 10 ಎಕರೆ ಅತಿಕ್ರಮಿಸಿ ಮಾರಾಟ ಕೂಡ ಮಾಡಿದ್ದಾರೆ ಕಣ್ಣಎದುರಲ್ಲೇ ಈ ರೀತಿ ನಡೆದರೂ ಯಾರೂ ವಿರೋದಿಸದೇ ಇರುವುದು ದುರOತ.
   ಗುರುಮೂತಿ೯ ರಾಯರು ಈ ಊರಲ್ಲಿ ಅಕ್ಕಿ ಗಿರಣಿ ಕೂಡ ಸ್ಥಾಪಿಸಿದ್ದರು, ಸ್ವಾತಂತ್ರ ಪೂವ೯ದಲ್ಲಿ ಎರಡು ವಷ೯ ಬೀಕರ ಬರಗಾಲ ಬಂದಾಗ ತಮ್ಮ ಸಂಗ್ರಹದಲ್ಲಿನ ಭತ್ತ ನೊಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಹಂಚಿದ್ದರು ಹಾಗಾಗಿ ಮೈಸೂರು ರಾಜರು ಇವರಿಗೆ ವಿಶೇಷ ಗೌರವ ನೀಡಿದ್ದರು, ಇವರು ಮೈಸೂರು ರಾಜಸ್ಥಾನಕ್ಕೆ ವಿಶೇಷ ಪ್ರತಿನಿಧಿಯೂ ಆಗಿದ್ದರು.
   ತ್ಯಾಗತಿ೯ಯ ಶಾಲಾ ಜಮೀನು ಹೊರಾಟ ಗುರುಮೂತಿ೯ ರಾಯರ ದೊಡ್ಡ ಮಗಳು ಅಳಿಯಂದಿರಿಗೆ ತಿಳಿದು ಅವರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ ಅವಶ್ಯ ಬಿದ್ದರೆ ಶಿಕ್ಷಣ ಸಚಿವರಿಗೆ ಸಂಪಕಿ೯ಸುವುದಾಗಿ ಹೇಳಿದ್ದಾರೆ.
   ಗುರುಮೂತಿ೯ ರಾಯರ ಮೊದಲ ಮಗಳಾದ ಶ್ರೀಮತಿ ಸುಧಾ ಮತ್ತು ಅವರ ಪತಿ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು ನಮ್ಮ ಆತ್ಮೀಯರು ನವೆಂಬರ್ ನಲ್ಲಿ ನಡೆದ ನನ್ನ ಮಗಳ ಮದುವೆ ಇವರ ನೇತೃತ್ವದಲ್ಲಿ ನಡೆಯಿತು.
  ದೇವೇಗೌಡರಿಗೆ ಪ್ರದಾನಿ ಆಗುವ ಜಾತಕ ಬಲ ಇದೆ ಅಂದವರು, ಅವರು ಪ್ರದಾನಿ ಆದಾಗ ಅವರೊಡನೆ ಇದ್ದವರು ನಮ್ಮ ಊರಿನ ವರಸಿದ್ಧಿವಿನಾಯಕ ದೇವಸ್ಥಾನದ ಟ್ರಸ್ಟನ ಗೌರವಾಧ್ಯಕ್ಷರು.
 ಅವರ ಸೆಲ್ ನಂಬರ್+919448018711

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...