Skip to main content

ಆನಂದಪುರಂ ಇತಿಹಾಸ ಭಾಗ-72, ರಾಷ್ಟ್ರೀಯ ಹೆದ್ದಾರಿ 206 ಆಚಾಪುರ ಸಮೀಪದಲ್ಲಿ ಕ್ರಿಶ. 1042 ರಲ್ಲಿ ಸಮೀಪದ ಅಂದಾಸುರದಲ್ಲಿ ಗೋನೇಶ್ವರ ಮತ್ತು ಸೂರ್ಯಮಾರ್ತಾಂಡ ದೇವಾಲಯ ನಿಮಿ೯ಸಿದ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸ ದೇವಾಲಯ ನಿರ್ಮಿಸಿದ ಕಮ್ಮಾರ ಚಿಕ್ಕನಿಗೆ ಭೂದಾನ ನೀಡಿದ ಶಿಲಾ ಶಾಸನ

#ಆನಂದಪುರಂ_ಇತಿಹಾಸ_ಭಾಗ_72.

#ಆಚಾಪುರ_ಸಮೀಪದ_ರಾಷ್ಟ್ರೀಯ_ಹೆದ್ದಾರಿ_ಪಕ್ಕದಲ್ಲಿರುವ_ಬೃಹತ್_ಶಿಲಾ_ಶಾಸನ.

#ಕ್ರಿಸ್ತಶಕ_1042_ರಲ್ಲಿ_ಸಮೀಪದ_ಅಂದಾಸುರದಲ್ಲಿ_ದೇವಾಲಯ_ನಿರ್ಮಿಸಿದ_ವಿಶ್ವಕಮ೯ರಿಗೆ_ದಾನ_ನೀಡಿದ_ಶಾಸನ.

#ಎಂಟು_ಅಡಿ_ಎತ್ತರ_ನಾಲ್ಕು_ಅಡಿ_ಅಗಲದ_71_ಸಾಲುಗಳ_ಬೃಹತ್_ಶಿಲಾಶಾಸನ

#ಈ_ಶಾಸನದಲ್ಲಿ_ಉಲ್ಲೇಖಿಸಿರುವ_ಆ_ಕಾಲದ_ರಾಜದಾನಿ_ಅಂದಾಸುರ_ಈಗ_ಒಂದು_ಹಳ್ಳಿ

#ಶಾಸನದಲ್ಲಿರುವ_ಗೋನೇಶ್ವರ_ಮತ್ತು_ಸೂರ್ಯಮಾರ್ತಾಂಡ_ದೇವಸ್ಥಾನದ_ಕುರುಹು_ಇಲ್ಲಿಲ್ಲ.

   ಆನಂದಪುರಂನಿಂದ ಶಿವಮೊಗ್ಗ ಮಾರ್ಗದಲ್ಲಿ ಆಚಾಪುರದಿಂದ ಒಂದು ಕಿ.ಮಿ ಹಿಂದೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ರಸ್ತೆಯ ಎಡಬಾಗದಲ್ಲಿ  ಸುಮಾರು 980 ವಷ೯ದಿಂದ ಈ ಬೃಹತ್ ಶಿಲಾ ಶಾಸನ ಬಿಸಿಲು ಮಳೆಗೆ ಎದೆ ಒಡ್ಡಿ ನಿಂತಿದೆ.
   ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿ ಆಗಿ ಮೇಲ್ದರ್ಜೆಗೆ ಏರಿದೆ, ವಾಹನ ಸಂಚಾರ ಹೆಚ್ಚು, ರಸ್ತೆಯೂ ವಿಸ್ತಾರ ಆಗುತ್ತಿರುವುದರಿಂದ ಈ ಶಾಸನ ತುರ್ತಾಗಿ ಸಂರಕ್ಷಿಸಬೇಕಾಗಿದೆ.
  1902 ರಲ್ಲಿ ರೈಸ್ ರವರು ಪ್ರಕಟಿಸಿದ ಎಪಿಗ್ರಾಫಿ ಕರ್ನಾಟಕದ ಸಂಪುಟದಲ್ಲಿ ಇದು ನಮೂದಾಗಿದೆ ಇನ್ನೊಂದು ವಿಶೇಷ ಅಂದರೆ ಸ್ವತಃ ರೈಸ್ ರವರೇ ಆನಂದಪುರಂಗೆ ಬೇಟಿ ನೀಡಿ ಇದನ್ನೆಲ್ಲ ದಾಖಲಿಸಿದ್ದಾರೆ.
   ಆನಂದಪುರಂ ಸುತ್ತಮುತ್ತಲಿನ ಶಿಲಾಶಾಸನ ಮತ್ತು ತಾಮ್ರಪತ್ರಗಳ ದಾಖಲೆಯಲ್ಲಿ
  4) ಎಪಿಗ್ರಾಫಿಯ ಕ್ರ.ಸಂ. 109. ಕ್ರಿಶ 1042 AD.
ಆಚಾಪುರ ರಾ.ಹೆ. 206.8 ಅಡಿ ಎತ್ತರ X 4 ಅಡಿ ಅಗಲದ ಶಿಲಾ ಶಾಸನ.
ಆನಂದಪುರಂನಿಂದ ಶಿವಮೊಗ ಮಾರ್ಗದಲ್ಲಿ  ರಾಷ್ಟ್ರಿಯ ಹೆದ್ದಾರಿ 206 ರಲ್ಲಿ ಆಚಾಪುರಕ್ಕಿಂತ ಹಿಂದೆ ಎಡಬಾಗದಲ್ಲಿರುವ ಬೃಹತ್ ಶಿಲಾ ಶಾಸನ ಮುಂದಿನ ಪೀಳಿಗೆಗಾಗಿ ಈಗಲೇ ಸಂರಕ್ಷಿಸಿಕೊಳ್ಳಬೇಕಾಗಿದೆ ಇದು ಆನಂದಪುರಂ ಇತಿಹಾಸವನ್ನು ಕ್ರಿಸ್ತ ಶಕ 10 ನೇ ಶತಮಾನಕ್ಕೆ ಒಯ್ಯುವ ಅತ್ಯಂತ ಪುರಾತನ ದಾಖಲೆ ಕೂಡ.
  ಕ್ರಿ.ಶ. 25- ಏಪ್ರಿಲ್ -1042 ರಲ್ಲಿ ಬನವಾಸಿ ನಾಡಿನ ರಾಜ್ಯಪಾಲ ಬಿಜ್ಜಳನ ಸಾಮಂತ ಗೋರರಸನು ಅಂದಾಸುರದಲ್ಲಿ ನಿರ್ಮಿಸಿದ ಗೋನೇಶ್ವರ ಮತ್ತು ಸೂಯ೯ ಮಾತಾ೯೦ಡೇಶ್ವರ ದೇವಾಲಯ ನಿರ್ಮಾಣದಲ್ಲಿ ಇಟ್ಟಿಗೆ ಶಿಲೆಯ ಕಾಮಗಾರಿ ನಿರ್ವಹಿಸಿದ ಚಿಕ್ಕ ಎಂಬ ವಿಶ್ವಕರ್ಮಿಗೆ ಭೂದಾನ ಮಾಡಿದ ಶಾಸನ ಇದು, ಈಗ ಅಂದಾಸುರದಲ್ಲಿ ಈ ಶಾಸನದಲ್ಲಿ ತಿಳಿಸಿದ ದೇವಾಲಯಗಳು ಯಾವುದೂ ಇಲ್ಲ, ಗೋನೇಶ್ವರ ಮತ್ತು ಸೂರ್ಯಮಾರ್ತಾಂಡೇಶ್ವರ ಎಂಬ ದೇವಾಲಯಗಳು ಈ ಒಂದು ಸಾವಿರ ವಷ೯ದಲ್ಲಿ ನಶಿಸಿ ಹೋಗಿರಬೇಕು.
  ಈ ಶಾಸನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದ್ದು ವಾಹನ ಸಂಚಾರ ದಟ್ಟಣೆಯಿಂದ ಯಾವುದೇ ಅವಘಡ ಸಂಭವಿಸಿದರೆ ಈ ಪ್ರಾಚಿನ ಶಾಸನ ಕಳೆದುಕೊಳ್ಳುವ ಅಪಾಯ ಇದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ