Skip to main content

Posts

Showing posts with the label 2019 Sagar taluk sahityaparishad samavesha

#2019ರ ಸಾಗರ ತಾಲ್ಲೂಕ್ ಕನ್ನಡ ಸಾಹಿತ್ಯ ಪರಿಷತ್ ನ ಸಮಾವೇಶ #

#ಸಾಗರ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಕೆ.ವಿ.ಅಕ್ಷರ ನೀನಾಸಂ ಮ್ಯಾಗ್ಸೆಸ್ಸೆ ಅವಾಡ್೯ ಪಡೆದ ಕೆ.ವಿ. ಸುಬ್ಬಣ್ಣರ ಪುತ್ರರ ಸಂದಶ೯ನ ಪ್ರಕಟಿಸಿದ ಮಲೆನಾಡು ಮಲ್ಲಿಗೆ ಸಾಗರದ ವಾರಪತ್ರಿಕೆ #   ಇವತ್ತು ಅಂಚೆಯಲ್ಲಿ ಬಂದ ಸಾಗರದ ಮಲೆನಾಡು ಮಲ್ಲಿಗೆ ಈ ವಷ೯ದ ವಿಶಿಷ್ಟ ಸಂಚಿಕೆ ಆಗಿದೆ.   ಅಕ್ಷರರ ತಂದೆ ನಾಡಿಗೆ ಪ್ರಸಿದ್ದರು ಮಗ ಅಕ್ಷರ ಹೆಚ್ಚಾಗಿ ಎಲೆ ಮರೆಯ ಕಾಯಿಯ೦ತೆ ಅವರನ್ನ ತಾಲ್ಲೂಕ ಸಾಹಿತ್ಯ ಪರಿಷತ್ ಈ ಬಾರಿಯ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಸಿದ್ದು ಶ್ಲಾಘನೀಯ.  ಬೇದೂರು ವೆಂಕಟಗಿರಿ ಸಂಪಾದಕತ್ವದ ವಾರ ಪತ್ರಿಕೆ ಸಾಹಿತ್ಯ ಸಮ್ಮೇಳನದ ವಿಶೇಷ ಸಂಚಿಕೆ ಪ್ರಕಟಿಸಿದೆ ಅದು ಸಂಗ್ರಹ ಯೋಗ್ಯ.    ಎನ್.ಎಂ.ಕುಲಕಣಿ೯ಯವರ ಹಾಟ್ ಸೀಟ್ ಸಂದಶ೯ನ, ಸಂಪಾದಕರ ಕೆ.ವಿ.ಅಕ್ಷರ ಪರಿಚಯ, ಕೆ.ವಿ.ಅಕ್ಷರರ "ಚಿತ್ರದ ಕುದುರೆ "ಕವನ, ಕೆ.ವಿ.ಅಕ್ಷರ ತಮ್ಮ ಜನ್ಮ ನೀಡಿದ ಜಾತಿ ಹವ್ಯಕದ ಬಗ್ಗೆ 2002 ರಲ್ಲಿ ಬರೆದ ಲೇಖನ, ಎರೆಡು ಸಮುದ್ರದ ನಡುವೆ, ಸಾಲ ಮನ್ನ ಕುರಿತು, ಟಿ.ಪಿ.ಅಶೋಕರ ಬೌದ್ಧಿಕ ಒಡನಾಡಿ ... ಹೀಗೆ ಸಾಗರದ ಸಾಹಿತ್ಯ ಸಮ್ಮೇಳನದ ಬಗ್ಗೆ ಅಧ್ಯಕ್ಷರಾದ ಅಕ್ಷರರ ಪರಿಚಯದ ವಿಶೇಷ ಸಂಚಿಕೆ ಮನಸೆಳೆಯುತ್ತದೆ.   ನಿಕಟಪೂವ೯ ಅಧ್ಯಕ್ಷ ಪ್ರಸನ್ನರ ಉದ್ದೇಶ ಪೂವ೯ಕ ಅನುಪಸ್ತಿತಿ ಮತ್ತು ಅಕ್ಷರರ ಪ್ರಾಥಮಿಕ ಶಿಕ್ಷಣದ ಮಾಹಿತಿ ನೀಡದಿರುವುದು ಕೊರತೆ ಅನ್ನಿಸಿತು.